*/
Date : 12-11-2016 | no Comment. | Read More
ಇದು ಕೇವಲ ಎರಡು ನೋಟುಗಳ ಕಥೆಯಲ್ಲ, ದೂರವಾಗಲಿದೆ ದೇಶದ ವ್ಯಥೆ! —————————————————————- ಆ ಅಲರ್ಟ್ ಬಂದಾಗ ನವಂಬರ್ 8, ಸಂಜೆ ಏಳೂಮುಕ್ಕಾಲು! ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂಬ ತುರ್ತು ಸೂಚನೆ ಅದಾಗಿತ್ತು. ಅದಕ್ಕೂ ಮುನ್ನ ನೌಕಾಪಡೆ, ಭೂಸೇನೆ ಹಾಗೂ ವಾಯುಸೇನೆಯ ಮುಖ್ಯಸ್ಥರ ಜತೆ ನರೇಂದ್ರ ಮೋದಿಯವರು ದೀರ್ಘ ಸಮಾಲೋಚನೆ ನಡೆಸಿದ್ದರು. ಅದರ ಬೆನ್ನಲ್ಲೇ ಕ್ಯಾಬಿನೆಟ್ ಮೀಟಿಂಗ್. ಬಳಿಕ ದೇಶವನ್ನುದ್ದೇಶಿಸಿ ಭಾಷಣ, ಮರುಕ್ಷಣವೇ ಸೇನಾಪಡೆಗಳ ಸರ್ವೋಚ್ಛ ದಂಡನಾಯಕರಾದ ರಾಷ್ಟ್ರಪತಿಗಳ ಭೇಟಿ. ಯುದ್ಧ ಘೋಷಣೆ ಖಂಡಿತ ಎಂದೇ […]
Date : 05-11-2016 | no Comment. | Read More
ಕನ್ನಡ ಸಂಸ್ಕೃತಿ ಇಲಾಖೆ ಟಿಪ್ಪು ಜಯಂತಿ ಆಚರಿಸುವುದೂ ಒಂದೇ, ಅರಣ್ಯ ಇಲಾಖೆ ವೀರಪ್ಪನ್ ಜಯಂತಿ ಆಚರಿಸುವುದೂ ಒಂದೇ! ================= 2006, ಸೆಪ್ಟಂಬರ್. ಶಿಕ್ಷಣ ಬಚಾವೋ- ಶಿಕ್ಷಣವನ್ನು ರಕ್ಷಿಸಿ ಎಂಬ ಶೀರ್ಷಿಕೆ ಹೊಂದಿದ ವಿಚಾರ ಸಂಕಿರಣವೊಂದು ಬೆಂಗಳೂರಿನಲ್ಲಿ ಆಯೋಜನೆಯಾಗಿತ್ತು. ಅದನ್ನು ಉದ್ಘಾಟನೆ ಮಾಡಿದ ಆಗಿನ ಉನ್ನತ ಶಿಕ್ಷಣ ಖಾತೆ ಸಚಿವ ಡಿ.ಎಚ್. ಶಂಕರಮೂರ್ತಿಯವರು, ಟಿಪ್ಪು ಸುಲ್ತಾನ್ ಒಬ್ಬ ಕನ್ನಡ ದ್ರೋಹಿ, ಮೈಸೂರು ಸಂಸ್ಥಾನದಲ್ಲಿ ರಾಜಭಾಷೆಯಾಗಿದ್ದ ಕನ್ನಡವನ್ನು ಕಡೆಗಣಿಸಿ ಪರ್ಷಿಯನ್ ಅನ್ನು ಆಡಳಿತ ಭಾಷೆಯಾಗಿ ಹೇರಿದ ಟಿಪ್ಪು ಕನ್ನಡ ವಿರೋಧಿ. […]
Date : 29-10-2016 | no Comment. | Read More
ಬೆಳಕಿನ ಹಬ್ಬದಲ್ಲಿ ಆರದಿರಲಿ ದೃಷ್ಟಿದೀಪ ! ಪ್ರತಿವರ್ಷ ಬೆಳಕಿನ ಹಬ್ಬವಾದ ದೀಪಾವಳಿ ಬಂತೆಂದರೆ ಸಂಭ್ರಮದ ಬಗಲಲ್ಲೇ ಆತಂಕ ಸುಳಿದಾಡತೊಡಗುತ್ತದೆ. ಈ ಹಬ್ಬದ ಬೆನ್ನಲ್ಲೇ ಬೆಂಗಳೂರಿನ ಮಿಂಟೋ ಆಸ್ಪತ್ರೆಯಲ್ಲಿ ವರ್ಷ ವರ್ಷವೂ ದೃಷ್ಟಿಭಾಗ್ಯ ಕಳೆದುಕೊಂಡು ಬದುಕಿಗೆ ಕತ್ತಲೆಯನ್ನು ಆಹ್ವಾನಿಸಿಕೊಂಡು ಮಲಗುವ ಮಕ್ಕಳ ಚಿತ್ರಣ ಕಣ್ಣಮುಂದೆ ಬರುತ್ತದೆ. ಹುಟ್ಟಿ ಹದಿನೆಂಟು ತಿಂಗಳು ತುಂಬುವಷ್ಟರಲ್ಲೇ ದೃಷ್ಟಿ ಕಳೆದುಕೊಂಡ ದಂತಕತೆ ಹೆಲೆನ್ ಕೆಲ್ಲರ್, 1933, ಜನವರಿಯಲ್ಲಿ “ದಿ ಅಟ್ಲಾಂಟಿಕ್ ಮಂತ್ಲಿ” ಎನ್ನುವ ನಿಯತಕಾಲಿಕೆಗೆ ಬರೆದ “Three Days to See” ಪ್ರಬಂಧ ನೆನಪಾಗುತ್ತದೆ. […]
Date : 22-10-2016 | no Comment. | Read More
ಇನ್ನೂ ಟಿಪ್ಪು ಜಯಂತಿ ಬೇಕೆ? ದುರ್ಗದ ಮದಕರಿ ನಾಯಕ ನಮಗೆಲ್ಲರಿಗೂ ಆತ ಪರಿಚಯವಾಗಿದ್ದು ತರಾಸು ಅವರ ದುರ್ಗಾಸ್ತಮಾನದಿಂದ. ಆದರೆ ಅದಕ್ಕೂ ಮೊದಲು ವೀರ ಮದಕರಿಯ ಹೋರಾಟ ಕರ್ನಾಟಕದ ಇತಿಹಾಸದ ರೋಚಕ ಘಟ್ಟ. ನಾಡು ಕಂಡ ಅತಿದೊಡ್ಡ ಕುಟಿಲತೆಗೆ, ಕ್ರೌರ್ಯಕ್ಕೆ ಮತ್ತು ಕೃತಘ್ನತೆಗೆ ದೊಡ್ಡ ಪುರಾವೆ. ಮೈಸೂರು ಒಡೆಯರ ಸೇನೆಯಲ್ಲಿ ಒಬ್ಬ ಸಾಮಾನ್ಯ ಕುದುರೆ ಲಾಯ ತೊಳೆಯುವ ಆಳಾಗಿದ್ದ ಮನುಷ್ಯ ತನ್ನ ಧಣಿಗೇ ದ್ರೋಹ ಬಗೆದು ರಾಜ್ಯ ಲಪಟಾಯಿಸಿದ ಟಿಪ್ಪುವಿನ ಅಪ್ಪ ಹೈದರಾಲಿಯ ಇತಿಹಾಸದ ದೊಡ್ಡ ಕುರುಹಿಗೆ ಸಾಕ್ಷಿ […]
Date : 15-10-2016 | no Comment. | Read More
ವಡಿಕ್ಕಲ್ ರಾಮಕೃಷ್ಣನ್, ಕಣ್ಣೂರಿನ ವಿಜಯನ್, ಪಾಲಕ್ಕಾಡಿನ ಕೃಷ್ಣನ್, ಎರಡೂ ಕಾಲು ಕಳೆದುಕೊಂಡ ಸದಾನಂದನ್, ಯಾರ್ಯಾರ ಕಥೆ ಹೇಳಲಿ?! ಮೂವತ್ತು ವರ್ಷ ವಯಸ್ಸಿನ ಸುಂದರ ಯುವಕ ವಡಿಕ್ಕಲ್ ರಾಮಕೃಷ್ಣನ್. ತಲಶೇರಿಯಲ್ಲಿ ಟೈಲರಿಂಗ್ ಮಾಡಿಕೊಂಡಿದ್ದರು. ಬಿಡುವಿನ ವೇಳೆಯಲ್ಲಿ ಆರೆಸ್ಸೆಸ್ ಶಾಖೆ ನಡೆಸುತ್ತಿದ್ದದ್ದು ಬಿಟ್ಟರೆ ತಾನಾಯಿತು ತನ್ನ ಪಾಡಾಯಿತು ಎಂದು ಇರುತ್ತಿದ್ದರು ವಡಿಕ್ಕಲ್ ರಾಮಕೃಷ್ಣನ್. ಒಂದು ದಿನ ಎಂದಿನಂತೆ ರಾಮಕೃಷ್ಣನ್ ರಾತ್ರಿ ಟೈಲರಿಂಗ್ ಅಂಗಡಿಯನ್ನು ಮುಚ್ಚಿ, ಸಂಪಾದನೆಯ ಪುಡಿ ಹಣವನ್ನು ಎಣಿಸಿ ಜೇಬಿಗೆ ಹಾಕಿ ಅಕ್ಕಿಯೋ ಬೇಳೆಯೋ ಖರೀದಿಸಬೇಕೆಂದು ಅಂದಾಜಿಸುತ್ತಾ ಮನೆಗೆ […]
Date : 08-10-2016 | no Comment. | Read More
ರಾಘವೇಶ್ವರರಿಗೆ ಹಣದಾಸೆಯಿದ್ದರೆ ಗೋವಿನ ಬದಲು ಕಾಲೇಜೆಂಬ ಕಾಮಧೇನು ಕಟ್ಟುತ್ತಿದ್ದರು ! ಅತ್ರತಿಷ್ಠ ಯತಿಶ್ರೇಷ್ಠ ಗೋಕರ್ಣೇ ಮುನಿಸೇವಿತೇ ಮಹಾಬಲಸ್ಯ ಲಿಂಗಂ ಚ ನಿತ್ಯಂ ವಿಧಿವದರ್ಚನಂ ಗೋಕರ್ಣ ಮಂಡಲೇ ವ್ಯಕ್ತಂ ತವ ಶಿಷ್ಯ ಪರಂಪರೈಃ ಆಚಾರ್ಯತ್ವಂಚ ಕುರುತಾಂ ವಿದ್ಯಾನಂದ ಮಹಾಮತೇ ಅಂದರೆ, ‘ಯತಿಶ್ರೇಷ್ಠನಾದ ವಿದ್ಯಾನಂದನೇ, ಗೋಕರ್ಣ ದಲ್ಲಿ ನಿಲ್ಲು. ನಿತ್ಯವೂ ಮಹಾಬಲನ ಲಿಂಗವನ್ನು ವಿಧಿವತ್ತಾಗಿ ಅರ್ಚಿಸು. ನಿನ್ನ ಶಿಷ್ಯ ಪರಂಪರೆಯಿಂದ ಒಡಗೂಡಿ ಆಚಾರ್ಯತ್ವವನ್ನು ಮಾಡುತ್ತಾ ಮಹಾಮತಿಯಾದ ನೀನು ಇಲ್ಲಿರು’ ಎಂದು ನುಡಿದ ಆದಿ ಶಂಕರಾಚಾರ್ಯರೇ ಗೋಕರ್ಣದಲ್ಲಿ ಮಠವೊಂದನ್ನು ಸ್ಥಾಪಿಸಿದರು. ವರದ […]
Date : 01-10-2016 | no Comment. | Read More
ನಮಗೆ ಸರ್ಜಿಕಲ್ ಆಪರೇಷನ್ ಏಕೆ ಮುಖ್ಯವಾಗುತ್ತದೆ? ಕಳೆದೊಂದು ವಾರದಿಂದ ಎಲ್ಲರ ಮನಸ್ಸಲ್ಲೂ ಮೂಡುತ್ತಿದ್ದ ಪ್ರಶ್ನೆ ಒಂದೇ. ಉರಿ ದಾಳಿಗೆ ಪ್ರತಿಕಾರವೆಲ್ಲಿ? ನಮ್ಮ ಸೈನಿಕರ ಬಲಿದಾನಕ್ಕೆ ಗೌರವವೆಲ್ಲಿ? ಮೋದಿ ಏನು ಮಾಡುತ್ತಿದ್ದಾರೆ? ಆಗ ಮನಮೋಹನ ಸಿಂಗರನ್ನು ಟೀಕಿಸಿದವರೆಲ್ಲರೂ ಈಗ ಏನು ಹೇಳುತ್ತಾರೆ? ಭಯೋತ್ಪಾದಕ ದಾಳಿಗಳಿಗೆ ಪೂರ್ಣ ವಿರಾಮ ಬೀಳುವುದೆಂದು? ಪಾಕ್ ಸಮವಸ್ತ್ರ ಧಾರಿಗಳೆದುರು ಮಾತ್ರ ನಮ್ಮ ಸೈನ್ಯದ ತಾಕತ್ತೇ? ಸದ್ಯಕ್ಕೆ ಮುಗಿಯುವಂತೆ ಕಾಣದ ಕಾಶ್ಮೀರ ಸಮಸ್ಯೆ ಇರುವವರೆಗೂ ಭಾರತದ ಸ್ಥಿತಿ ಹೀಗೆಯೇ ಮುಂದುವರಿಯುವುದೇ? ಇಂಥ ಮಾತುಗಳನ್ನು ದೇಶವಾಸಿಗಳು ಸಹಜವಾಗಿ […]
Date : 24-09-2016 | no Comment. | Read More
ಕಳೆದಿದೆ 108 ವರ್ಷ, ಆದರೂ ಅವನೆಂದರೆ ಏನೋ ಹರುಷ! ಒಂದು ದಿನ ಸಾಯಂಕಾಲ ವೀರಕಲಿಗಳ ಕತೆ ಹೇಳುತ್ತಿದ್ದ ಅಪ್ಪ ಮುಂದೆ ಮುಂದೆ ಸಾಗುತ್ತಿದ್ದರೆ, ಮೂರು ವರ್ಷದ ಮಗ ಹಿಂದೆ ಹಿಂದೆ ಹೆಜ್ಜೆ ಹಾಕುತ್ತಿದ್ದ. ಅಪ್ಪನ ಕತೆ ಮುಂದು ವರಿದಿತ್ತು. ಗದ್ದೆ ದಾಟಿ ಆಚೆ ಬದಿಗೆ ಬಂದು ಸೇರಿದ್ದೂ ಆಯಿತು. ಆದರೆ ಬರಬರುತ್ತಾ ಹೆಜ್ಜೆ ಸಪ್ಪಳವೇ ನಿಂತುಹೋಗಿತ್ತು. ಹಿಂದಿರುಗಿ ನೋಡಿದರೆ ಮಗನೇ ಇಲ್ಲ. ನಡೆದು ಬಂದ ದಾರಿಯಲ್ಲೇ ವಾಪಸ್ ಬಂದರೆ ಆ ಮೂರು ವರ್ಷದ ಬಾಲಕ ಗದ್ದೆಯಲ್ಲಿ ಗುಂಡಿ […]
Date : 17-09-2016 | no Comment. | Read More
ಪಾಕ್ ಪಾಲಿಗೆ ಮತ್ತೊಂದು ಬಾಂಗ್ಲಾವಾಗಲಿದೆಯೇ ಬಲೂಚಿಸ್ತಾನ? “You do one more Mumbai, you lose Balochistan”, ಮತ್ತೊಂದು ಮುಂಬೈನಂಥ ದಾಳಿ, ಬಲೂಚಿಸ್ತಾನವನ್ನು ಮರೆತುಬಿಡಿ! ಹಾಗೆಂದಿದ್ದರು ನಮ್ಮ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಕುಮಾರ್ ದೋವಲ್ 2015ರಲ್ಲಿ!! ಈಗ್ಗೆ ಒಂದು ತಿಂಗಳ ಹಿಂದೆ ನಡೆದ ಸ್ವಾತಂತ್ರ್ಯ ದಿನಾಚರಣೆಯ ದಿನ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಲೂಚಿಸ್ತಾನ್ ಬಗೆಗಿನ ಸ್ಪಷ್ಟ ಪ್ರಸ್ತಾಪದ ಬಗ್ಗೆ ದೇಶ ವಿದೇಶಗಳಲ್ಲಿ ಗಂಭೀರ ಚರ್ಚೆಗಳು ನಡೆದವು. ಆಂಗ್ಲ ವೆಬ್ಸೈಟೊಂದು ಅದನ್ನು ಹೀಗೆ ವಿಶ್ಲೇಷಣೆ ಮಾಡಿತ್ತು. […]
Date : 10-09-2016 | no Comment. | Read More
ಅವರು ಎರಡೂವರೆ ಕೋಟಿಯಲ್ಲಿ ಕಟ್ಟೆ ಕಟ್ಟಿದರು, ಇವರು 25 ಕೋಟಿ ಸುರಿದೂ ನೀರು ಉಳಿಸಿಕೊಳ್ಳಲಿಲ್ಲ! ಅದು 1909ರ ಜೂನ್. ಮುಖ್ಯ ಎಂಜಿನಿಯರ್ ಆಗಿದ್ದ ಮೆಕ್ ಹಚಿನ್ ಸೇವೆಯಿಂದ ನಿವೃತ್ತಿ ಹೊಂದುವವರಿದ್ದರು. ಅವರ ಸ್ಥಾನಕ್ಕೆ ಒಬ್ಬ ದಕ್ಷ ಎಂಜಿನಿಯರ್ನ ಹುಡುಕಾಟ ಮ್ಯೆಸೂರು ಸಂಸ್ಥಾನದಲ್ಲಿ ನಡೆಯುತ್ತಿತ್ತು. ಅದೇ ಹೊತ್ತಿಗೆ ಸಂಸ್ಥಾನದ ದಿವಾನರಾಗಿದ್ದ ವಿ.ಪಿ ಮಾಧವರಾಯರೂ ನಿವೃತ್ತರಾಗಿ ಅವರ ಸ್ಥಾನಕ್ಕೆ ಟಿ. ಆನಂದರಾಯರು ಬಂದಿದ್ದರು. ಸದಾ ಸಂಸ್ಥಾನದ ಧ್ಯಾನದಲ್ಲೇ ಇರುತ್ತಿದ್ದ ಮಹಾಪ್ರಭು ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಒಂದೇ ಹೊತ್ತಲ್ಲಿ ಸಾಮ್ರಾಜ್ಯದ ಎರಡು […]