Date : 13-11-2015 | no Comment. | Read More
ನಿಮ್ಮ ಮನೆಯ ಸೈಟೂ ಕೆಂಪೇಗೌಡನ ಕೆರೆಯಾಗಿತ್ತು ಕಾರ್ನಾಡರೇ! ಅದು 1893. ” Brothers and Sisters of America ” ಎಂಬ ಮೊದಲ ಉದ್ಗಾರದಲ್ಲೇ ಸ್ವಾಮಿ ವಿವೇಕಾನಂದರು ಜಗತ್ತನ್ನು ಗೆದ್ದ ಆ ಕ್ಷಣವದು. ಒಂದೇ ದಿನದಲ್ಲಿ ಅಮೆರಿಕದ ಮನೆಮಾತಾಗಿಬಿಟ್ಟರು. ಅಲ್ಲಿಂದ ಬ್ರಿಟನ್ಗೆ ಬಂದರು. ಹತ್ತಾರು ಭಾಷಣ, ಚರ್ಚಾಕೂಟ, ಸಂವಾದಗಳಿಗೆ ಬರುವಂತೆ ಬ್ರಿಟನ್ನಿನಿಂದ ಆಹ್ವಾನ ಬಂದಿತ್ತು. ಅಂಥದ್ದೊಂದು ಸಂವಾದದಲ್ಲಿತೊಡಗಿರುವಾಗ ವಿವೇಕಾನಂದರು ಗೌತಮ ಬುದ್ಧನ ಬಗ್ಗೆ ಮಾತನಾಡುತ್ತಿದ್ದರು. ವಿವೇಕಾನಂದರಿಗೆ ಬುದ್ಧನೆಂದರೆ ಅಚ್ಚುಮೆಚ್ಚು. ಬಹುವಾಗಿ ಬುದ್ಧನನ್ನು ಹೊಗಳುತ್ತಿದ್ದರು. ಮಧ್ಯದಲ್ಲೇಎದ್ದುನಿಂತ ಬ್ರಿಟಿಷನೊಬ್ಬ, “ನಿಮ್ಮ […]
Date : 08-11-2015 | no Comment. | Read More
‘ಬನ್ನಿ ಭಾರತದ ಮೇಲೆ ದಾಳಿ ಮಾಡಿ’ ಎಂದನಲ್ಲ, ಇದೆಂಥಾ ರಾಷ್ಟ್ರಪ್ರೇಮ?! ಕೊಡಗಿನ ಇತಿಹಾಸವನ್ನು ತಡಕಾಡಿದರೆ ಈಗಲೂ ಟಿಪ್ಪು ಕಾಲದಲ್ಲಿ ಮತಾಂತರವಾದ ಒಂದು ಕಾಲದ ಕೊಡವರು ಕಾಣಸಿಗುತ್ತಾರೆ. ಇಂದಿಗೂ ಕೊಡವ ಮಾಪಿಳ್ಳೆಗಳೆಂದು ಕರೆಸಿಕೊಳ್ಳುತ್ತಿದ್ದಾರೆ. ತೀರಾ ಇತ್ತೀಚಿನ ವರ್ಷಗಳವರೆಗೂ ಕೊಡವ ಹಬ್ಬ ಹರಿದಿನಗಳನ್ನು ಆಚರಿಸುತ್ತಿದ್ದ ಕೊಡವ ಮಾಪಿಳ್ಳೆಗಳು, ಕೊಡವರಂಥ ಐನ್ ಮನೆಗಳು, ಕೊಡವ ಆಯುಧಗಳು, ಕೊಡವ ಆಭರಣಗಳನ್ನು ಹೊಂದಿರುವ ಇವರಿಗೆ ಇವತ್ತಿಗೂ ಕೊಡವ ಕುಟುಂಬಗಳಿಗೆ ಇರುವಂತೆ ಮನೆಹೆಸರುಗಳಿವೆ. ವೀರಾಜಪೇಟೆ ತಾಲೂಕಿನಲ್ಲಿ ಆಲೀರ, ಚೀರಂಡ, ಚಿಮ್ಮಚೀರ (ಈ ಹೆಸರಿನ ಕೊಡವ ಕುಟುಂಬಗಳೂ […]
Date : 07-11-2015 | no Comment. | Read More
ಇಷ್ಟಕ್ಕೂ ಟಿಪ್ಪು ಮಾಡಿದ ಘನ ಕಾರ್ಯಗಳಾದರೂ ಏನು? ಮಂಗಳೂರು, ಕೊಡಗು ಮತ್ತು ಮಲಬಾರ್ ಪ್ರದೇಶಗಳಲ್ಲಿ ಆತ ಎಸಗಿದ ದೌರ್ಜನ್ಯಗಳು ಅಮಾನವೀಯವಾಗಿದ್ದವು. ತಾನು ದಾಳಿ ನಡೆಸಿ ವಶಪಡಿಸಿಕೊಂಡ ಪ್ರದೇಶಗಳ ನಾಗರಿಕರನ್ನು ಆತ ಮತ್ತು ಆತನ ಸೈನಿಕರು ನಡೆಸಿಕೊಳ್ಳುತ್ತಿದ್ದ ರೀತಿ ಭಯಾನಕ. ಟಿಪ್ಪು ಸುಲ್ತಾನನನ್ನು ಮಹಾನ್ ಹೀರೋ, ಪರಾಕ್ರಮಶಾಲಿ, ಮೈಸೂರಿನ ಹುಲಿ, ಸ್ವಾತಂತ್ರ್ಯ ಹೋರಾಟಗಾರ ಎಂದು ಚಿತ್ರಿಸುವ ಪ್ರಯತ್ನ ಹಲವು ದಶಕಗಳಿಂದಲೂ ನಡೆಯುತ್ತಲೇ ಬಂದಿದೆ. ಭಗವಾನ್ ಎಸ್. ಗಿದ್ವಾನಿ ಬರೆದಿದ್ದ ‘ದಿ ಸೋರ್ಡ್ ಆಫ್ ಟಿಪ್ಪು ಸುಲ್ತಾನ್’ ಎಂಬ ಅತಿರಂಜಕ […]
Date : 23-10-2015 | no Comment. | Read More
ನೆಹರು ಸಂಬಂಧಿ ಸೆಹಗಲ್ ಹಾಗೂ ಇತರ ಸೋಗಲಾಡಿಗಳು! “ಇಡೀ ದೇಶಾದ್ಯಂತ ಸರಣಿ ಹಿಂಸಾ ಘಟನೆಗಳು ನಡೆಯುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಮೌನ ತಳೆದಿದ್ದಾರೆ. ಇಂದು ದೇಶವನ್ನಾಳುತ್ತಿರುವುದು ಒಂದು ಫ್ಯಾಸಿಸ್ಟ್ ಸರ್ಕಾರ. ಇಂಥ ಫ್ಯಾಸಿಸ್ಟ್ ಸರ್ಕಾರ ಇತಿಹಾಸದಲ್ಲಿ ಎಂದೂ ದೇಶವನ್ನಾಳಿಲ್ಲ. ಇಷ್ಟಾಗಿಯೂ ಸಾಹಿತ್ಯ ಅಕಾಡೆಮಿ ಮೌನ ತಳೆದಿರುವುದು ಬಹಳ ದುಖಃಕರ ಸಂಗತಿ. ಹಾಗಾಗಿ ನಾನು ಸಾಹಿತ್ಯ ಅಕಾಡೆಮಿಯ ಪುರಸ್ಕಾರವನ್ನು ಹಿಂದಿರುಗಿಸುತ್ತಿದ್ದೇನೆ”. ವ್ಹಾರೆ ವ್ಹಾ! ಅಕ್ಟೋಬರ್ 6 ರಂದು ಇಂಥದ್ದೊಂದು ಪತ್ರಿಕಾ ಹೇಳಿಕೆಯನ್ನು ಹೊರಡಿಸಿ ರಾಷ್ಟ್ರಾದ್ಯಂತ ಸುದ್ದಿಯಾಗುವ ಮೊದಲು […]
Date : 02-10-2015 | no Comment. | Read More
17 ತಿಂಗಳು ಪ್ರಧಾನಿಯಾಗಿದ್ದ ಶಾಸ್ತ್ರೀಜಿ, 17 ವರ್ಷ ಪ್ರಧಾನಿಯಾಗಿದ್ದ ನೆಹರುರನ್ನೇ ಜನಪ್ರಿಯತೆಯಲ್ಲಿ ಮೀರಿಸಿದ್ದರು! ಹತ್ಯಾರೋಂ ಕಾ ಜವಾಬ್, ಹತ್ಯಾರೋಂ ಸೆ ದೇಂಗೆ! ಹಾಗಂತ 1965, ಆಗಸ್ಟ್ 15ರಂದು ಕೆಂಪುಕೋಟೆಯ ಮೇಲೆ ನಿಂತು ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಗುಡುಗಿದಾಗ ಅನುಮಾನಪಟ್ಟವರೇ ಹೆಚ್ಚು. ಜತೆಗೆ ದುರ್ಬಲ ಕಾಯದ ಈ ವ್ಯಕ್ತಿಯಿಂದ ಏನು ತಾನೇ ಸಾಧ್ಯ ಎಂಬ ಅಸಡ್ಡೆ. ಇದಾಗಿ ಎರಡು ವಾರಗಳಾಗಿವೆಯಷ್ಟೆ. ಅವತ್ತು 1965, ಆಗಸ್ಟ್ 31ನೇ ತಾರೀಖು. ಹೊತ್ತಿಗೆ ಮೊದಲೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಮನೆಗೆ […]
Date : 12-09-2015 | no Comment. | Read More
ಡಿ. ದೇವರಾಜ ಅರಸು. ಆ ಹೆಸರು ಕೇಳಿದಾಕ್ಷಣ ಹಲವು ಚಿತ್ರಗಳು ಕಣ್ಣಮುಂದೆ ಬಂದು ನಿಲ್ಲುತ್ತವೆ. “ಅರಸುತನ’ಕ್ಕೆ ತಕ್ಕ ಅಜಾನುಭಾಹು ಶರೀರ, ಹಿಂದುಳಿದ ವರ್ಗದ ಶ್ರೇಯೋಭಿವ್ರದ್ಧಿಯ ಹರಿಕಾರ, ದಾಢಸಿ ಗುಣದ, ಇಂದಿರಾ ಗಾಂಧಿ ಆಪ್ತ ರಾಜಕಾರಣಿಯ, ಹಲವು ದಿಟ್ಟ ನಿರ್ಧಾರಗಳನ್ನು ಕೈಗೊಂಡು ರಾಜ್ಯದಲ್ಲಿಕ್ರಾಂತಿಯನ್ನು ಮಾಡಿದ, ಪ್ರಾದೇಶಿಕ ಪಕ್ಷವನ್ನು ಕಟ್ಟಿದ, ಇಂದಿರಾರಂಥಾ ಇಂದಿರಾರಿಗೇ ಸೆಡ್ಡುಹೊಡೆದ, ರಾಜ್ಯಕ್ಕೆ ’ಕರ್ನಾಟಕ’ ಎಂಬ ನಾಮಕರಣ ಮಾಡಿದ ಮುಖ್ಯಮಂತ್ರಿಯ ಚಿತ್ರ ಕಣ್ಣಮುಂದೆ ಬರುತ್ತದೆ. ದೇವರಾಜ ಅರಸರು ಎಂದರೆ ಇಂಥ ಹಲವು ಚಿತ್ರಣಗಳ ಒಟ್ಟು ಮೊತ್ತ. ಕರ್ನಾಟಕದಲ್ಲಿ […]
Date : 21-03-2015 | no Comment. | Read More
ಮುಖ್ಯಮಂತ್ರಿಯವರೇ, ಸದನದಲ್ಲಿ ತೋಳು ತಟ್ಟುವಾಗ, ಬಳ್ಳಾರಿ ಪಾದಯಾತ್ರೆ ಕೈಗೊಂಡಾಗ ನಿಮ್ಮಲ್ಲಿದ್ದ ಪೌರುಷ, ಪ್ರಾಮಾಣಿಕತೆ ಈಗ ಎಲ್ಲಿ ಹೋಯಿತು ? ನೀವು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ವಿರುದ್ಧ ಸದನದಲ್ಲಿ ತೋಳು ತಟ್ಟಿದ್ದನ್ನು ನಾವು ನೋಡಿದ್ದೇವೆ. ಬಳ್ಳಾರಿಯನ್ನು ಕೊಳ್ಳೆ ಹೊಡೆಯುತ್ತಿದ್ದ ರೆಡ್ಡಿ ಬದ್ರರ್ಸ್ ವಿರುದ್ಧ ಪಾದಯಾತ್ರೆ ಮಾಡಿದ್ದನ್ನೂ ಕಂಡು ಮೆಚ್ಚಿದ್ದೇವೆ. ಆ ನಿಮ್ಮ ಪೌರುಷ, ಪ್ರಾಮಾಣಿಕತೆ, ಭ್ರಷ್ಟಾಚಾರ ವಿರುದ್ದದ ಆಕ್ರೋಶ ಈಗ ಎಲ್ಲಿ ಹೋಗಿದೆ ಸ್ವಾಮಿ? ಇವತ್ತು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಐಎಎಸ್ ಅಧಿಕಾರಿ ಡಿ.ಕೆ. ರವಿ ಮಾಡಿದ್ದೂ ಕೂಡ […]
Date : 21-03-2015 | no Comment. | Read More
ಸುಗ್ರೀವಾಜ್ಞೆ ಎಂದರೆ ಇಂದಿರಾ ಗಾಂಧಿಯವರ ತುರ್ತುಪರಿಸ್ಥಿತಿಯಂಥ ಸನ್ನಿವೇಶದ ಸೃಷ್ಟಿಯೇ? ನೀವು ಜಾರ್ಜ್ ಕ್ಯಾರ್ಲಿನ್ ಬಗ್ಗೆ ಕೇಳಿರಬಹುದು. ಆತ ಅಮೆರಿಕದ ಖ್ಯಾತ ಹಾಸ್ಯ ಅಥವಾ ವಿಡಂಬನೆಕಾರ. ಜತೆಗೆ ಒಳ್ಳೆಯ ಸಾಮಾಜಿಕ ಚಿಂತಕ, ಟೀಕಾಕಾರ. ಅತನ ಮಾತುಗಳೆಂದರೆ ಅದ್ಭುತ. ಏನೋ ಒಂಥರಾ ಸೆಳೆತ ಅವುಗಳಲ್ಲಿರುತ್ತಿತ್ತು. ನಮ್ಮ ಕಾಲದ ವೈರುಧ್ಯವೇನೆಂದರೆ ನಾವು ಆಗಸದೆತ್ತರದ ಮನೆ ಕಟ್ಟುತ್ತೇವೆ, ಆದರೆ ನಮ್ಮ ಮನಸ್ಸು ಮಾತ್ರ ಕುಬ್ಜ. ಅಗಲವಾದ ರಸ್ತೆ ನಿರ್ಮಾಣ ಮಾಡುತ್ತೇವೆ, ಆದರೆ ನಮ್ಮ ಯೋಚನೆಗಳು ಕಿರಿದು. ಹೆಚ್ಚು ಖರೀದಿಸುತ್ತೇವೆ, ಕಡಿಮೆ ಅನುಭವಿಸುತ್ತೇವೆ . […]
Date : 28-02-2015 | 1 Comment. | Read More
(ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಚಲಿಸುವುದು ಯಾವುದು ಗೊತ್ತಾ, ಕಾಂಗ್ರೆಸ್-ಕಮ್ಯುನಿಸ್ಟರ ಸುಳ್ಳು! ) ನಾವು ಶಾಲೆಯಲ್ಲಿರುವಾಗ ರಸ ಪ್ರಶ್ನೆ ಸ್ಪರ್ಧೆ ಆಗಾಗ್ಗೆ ನಡೆಯುತ್ತಿತ್ತು. ಒಮ್ಮೆ ಒಂದೇ ಕ್ಲಾಸಿನೊಳಗೆ, ಮಗದೊಮ್ಮೆ ಭಿನ್ನ ಭಿನ್ನ ಕ್ಲಾಸ್ಗಳ ನಡುವೆ, ಕಡೆಗೆ ಶಾಲೆ ಶಾಲೆಗಳ ನಡುವೆ. ನಮ್ಮ ಆಗಿನ ಬುದ್ಧಿಮತ್ತೆಗೆ ತಕ್ಕುದಾದ ಪ್ರಶ್ನೆಗಳಿರುತ್ತಿದ್ದವು. ಅತ್ಯಂತ ವೇಗವಾಗಿ ಭೂಮಿಯ ಮೇಲೆ ಚಲಿಸುವ ಪ್ರಾಣಿ ಯಾವುದು? ಉತ್ತರ: ಚಿರತೆ. ಬೆಳಕು ಹಾಗೂ ಶಬ್ದ, ಇವುಗಳಲ್ಲಿ ವೇಗವಾಗಿ ಚಲಿಸುವುದು ಯಾವುದು? ಉತ್ತರ: ಬೆಳಕು. ಒಂದು ವೇಳೆ ಚಿರತೆ, […]