ಬಿ.ಎಸ್. ಯಡಿಯೂರಪ್ಪ, ಕೆ.ಎಸ್. ಈಶ್ವರಪ್ಪ, ಜಗದೀಶ್ ಶೆಟ್ಟರ್, ಅನಂತ್ ಕುಮಾರ್, ಸುಷ್ಮಾ ಸ್ವರಾಜ್, ಲಾಲಕೃಷ್ಣ ಆಡ್ವಾಣಿ, ನಿತಿನ್ ಗಡ್ಕರಿ ಇವರಲ್ಲಿ ಯಾರನ್ನು ದೂರಬೇಕು? ಯಾರ ಮೇಲೆ ದೋಷಾರೋಪಣೆ ಮಾಡಬೇಕು? ಒಬ್ಬ ವ್ಯಕ್ತಿಯಿಂದಾಗಿ ರಾಜ್ಯ ಬಿಜೆಪಿಗೆ ಈ ಗತಿ ಬಂತೇ? ಅಥವಾ ದಕ್ಷಿಣ ಭಾರತದಲ್ಲಿನ ಮೊದಲ ಬಿಜೆಪಿ ಸರ್ಕಾರ ಐದು ವರ್ಷಕ್ಕೇ ಅಂತ್ಯಗೊಳ್ಳಲು ಇವರೆಲ್ಲರ ಸಾಂಘಿಕ ಹೊಣೆಗಾರಿಕೆ ಇದೆಯೇ? ನೀವು Bay of Pigs ದಾಳಿ ಬಗ್ಗೆ ಕೇಳಿರಬಹುದು. ಅಮೆರಿಕದ ಗುಪ್ತಚರ ಸಂಸ್ಥೆ CIA, ನೆರೆಯ ಕ್ಯೂಬಾದ ಫೀಡೆಲ್ ಕ್ಯಾಸ್ಟ್ರೋ ಸರ್ಕಾರವನ್ನು ಪದಚ್ಯುತಗೊಳಿಸಲು ಅಲ್ಲಿನ ಬಂಡುಕೋರರನ್ನು ಶಸ್ತ್ರಸಜ್ಜಿತಗೊಳಿಸಿ 1961, ಏಪ್ರಿಲ್ 17 ರಂದು ನಡೆಸಿದ ಆಕ್ರಮಣವೇ Bay of Pigs Invasion. ಆದರೆ ಈ ಆಕ್ರಮಣವನ್ನು ಕ್ಯಾಸ್ಟ್ರೋ ಕೇವಲ ಮೂರು ದಿನಗಳಲ್ಲಿ ಹತ್ತಿಕ್ಕಿದರು. ಇತ್ತ ಆ ದಾಳಿಗೆ ಒಪ್ಪಿಗೆ ನೀಡಿದ್ದ ಅಮೆರಿಕದ ಅಧ್ಯಕ್ಷ ಜಾನ್ ಎಫ್. ಕೆನಡಿಯವರ ಮೇಲೆ ಎಲ್ಲರೂ ಸೋಲಿನ ಗೂಬೆ ಕೂರಿಸಿದರು. ಆಗ ಕೆನಡಿಯವರು, Victory has a thousand fathers; defeat is an orphan, ಅಂದರೆ ‘ಗೆಲುವಿಗೆ ಸಾವಿರ ಸರದಾರರು, ಆದರೆ ಸೋಲು ಅನಾಥ’ ಎಂದಿದ್ದರು.
Mr. Subhas Chandra Bose is dead! ಇಂಥದ್ದೊಂದು ಆಘಾತಕಾರೀ ಸುದ್ದಿ ಮೊದಲು ಹೊರಬಿದ್ದದ್ದು 1945ರ ಆಗಸ್ಟ್ 23ನೇ ತಾರೀಕು. ಸುದ್ದಿ ಬಿತ್ತರಿಸಿದ್ದು ಜಪಾನಿನ ‘ರೇಡಿಯೋ ಟೋಕಿಯೋ’. ಇಡೀ ಜಗತ್ತು ಇವತ್ತಿಗೂ ಅನುಮಾನದಿಂದಲೇ ನೋಡುವ ಅತ್ಯಂತ ದೊಡ್ಡ ಐತಿಹಾಸಿಕ ಸುಳ್ಳೊಂದು ಸದ್ದಿಲ್ಲದೆ ಹೀಗೆ ಹುಟ್ಟಿಕೊಂಡಿತು. ರೇಡಿಯೋ ಟೋಕಿಯೋದ ನ್ಯೂಸ್ ರೀಡರ್ ಹೇಳಿದ್ದಿಷ್ಟು “ವಿಮಾನ ಅಪಘಾತವೊಂದರಲ್ಲಿ ತೀವ್ರವಾಗಿ ಗಾಯಗೊಂಡ ಮಿಸ್ಟರ್ ಸುಭಾಶ್ಚಂದ್ರ ಬೋಸ್ ಜಪಾನಿನ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದರು. ಭಾರತದ ‘ಆಜಾದ್ ಹಿಂದ್’ ಪ್ರಾಂತೀಯ ಸರ್ಕಾರದ ಮುಖ್ಯಸ್ಥರಾಗಿದ್ದ ಮಿ. ಬೋಸ್ [...]
“ಮುಂಬೈ ಸಾಹಿತ್ಯ ಹಬ್ಬ ಶುಕ್ರವಾರ ಒಂದು ‘ದೊಡ್ಡ ನಾಟಕ’ಕ್ಕೆ ಸಾಕ್ಷಿಯಾಯಿತು. ಹಿರಿಯ ನಟ ಹಾಗೂ ರಂಗಭೂಮಿ ಕಲಾವಿದ ಗಿರೀಶ್ ಕಾರ್ನಾಡ್, ನೊಬೆಲ್ ಪುರಸ್ಕೃತ ಸಾಹಿತಿ ವಿ.ಎಸ್. ನೈಪಾಲ್ ಅವರ ಮೇಲೆ ಟೀಕಾ ಪ್ರಹಾರ ಮಾಡಿ ಅವರೊಬ್ಬ ಮುಸ್ಲಿಂ ವಿರೋಧಿ ಎಂದರು. ರಂಗಭೂಮಿಯ ಬಗ್ಗೆ ತರಗತಿಯೊಂದನ್ನು ತೆಗೆದುಕೊಳ್ಳಲು ಅಲ್ಲಿ ಉಪಸ್ಥಿತರಿದ್ದ ಕಾರ್ನಾಡ್ ನೈಪಾಲ್ ಬಗ್ಗೆಯೇ ಉದ್ದುದ್ದ ಮಾತನಾಡಿದರು”! ಸಿಎನ್್ಎನ್-ಐಬಿಎನ್ ಚಾನೆಲ್ ವೆಬ್್ಸೈಟ್್ನಲ್ಲಿ ಪ್ರಕಟಗೊಂಡ ವರದಿಯ ಈ ಮೊದಲನೇ ಪ್ಯಾರಾವೇ ಗಿರೀಶ್ ಕಾರ್ನಾಡ್್ರು ‘ದೊಡ್ಡ ನಾಟಕ’ ಮಾಡಿದರು ಹಾಗೂ ಅವರು [...]
ಸತ್ಯಸಂಧ ಪತ್ರಕರ್ತರಾದ ರವಿ ಬೆಳಗೆರೆಯವರು ಕದ್ದುಮುಚ್ಚಿ 2ನೇ ವಿವಾಹವಾಗಿರುವ ವಿಷಯದ ಬಗ್ಗೆ ಟಿವಿ9ನ ಲಕ್ಷಣ್ ಹೂಗಾರ್ ಅವರು ಪ್ರಶ್ನಿಸಿದಾಗ, “ಯಾರೂ ಕೇಳಲಿಲ್ಲ, ನಾನು ಹೇಳಲಿಲ್ಲ” ಎಂದು ಬೆಳಗೆರೆ ಉತ್ತರಿಸಿದ್ದರು. ಯಾರೂ ಕೇಳದೇ ಅತ್ಮರತಿ ಮಾಡಿಕೊಳ್ಳುವುದು, ಬಡಾಯಿ ಕೊಚ್ಚಿಕೊಳ್ಳುವುದು, ಖಯಾಲಿ…ಗಳ ಬಗ್ಗೆ ಬರೆದುಕೊಳ್ಳುವುದು, ಪುಸ್ತಕ ಹಾಗೂ ಪತ್ರಿಕೆಯಲ್ಲಿ ಅಫಿಡವಿಟ್ ನೀಡುವುದು ಅವರಿಗೆ ಅಭ್ಯಾಸ. 2010ರಲ್ಲಿ ನೀಡಿದ ಅಫಿಡವಿಟ್ ಹಾಗೂ 2012ರ ಏಪ್ರಿಲ್ನಲ್ಲಿ(ಹೂಗಾರ್ ನಡೆಸಿದ ಸಂದರ್ಶನದ ನಂತರ) ಮರುಮುದ್ರಣಗೊಂಡ “ಭೀಮಾ ತೀರದ ಹಂತಕರು” ಪುಸ್ತಕದ ಅಫಿಡವಿಟ್ಟನ್ನು(ಅಂಡರ್ಲೈನ್ ಮಾಡಲಾಗಿದೆ) ಗಮನಿಸಿ. ಎರಡನೇ [...]