ಪ್ರತಿ ಶನಿವಾರ ನಾನು ಆಫೀಸಿಗೆ ಬರುವುದಿಲ್ಲ. ನನಗದು ವಾರದ ರಜಾ ದಿನ. ಮತ್ತೆ ವಾರದ ಕೆಲಸ ಆರಂಭವಾಗುವುದು ಭಾನುವಾರದಿಂದ. ಕಳೆದ ಭಾನುವಾರ ಎಂದಿನಂತೆ ಕಚೇರಿಗೆ ಕಾಲಿಡುತ್ತಲೇ ನಮ್ಮ ಸೆಕ್ಯುರಿಟಿ ಯವರು ಮಾತು ಆರಂಭಿಸಿದರು. “ಸಾರ್, ನಿನ್ನೆ ನೀವು ರಜೆ ಇದ್ರಲ್ಲಾ, ತುಂಬಾ ಫೋನ್ಗಳು ಬಂದಿದ್ದವು. ಅಶ್ವಿನಿ ಪ್ರೇಮ ಪ್ರಕರಣದ ಬಗ್ಗೆ ನೀವು ಬರೆದಿದ್ದ ಲೇಖನ ಓದಿ ಸುಮಾರು ಜನ ಕಾಲ್ ಮಾಡಿದ್ದರು. ನಿಮ್ಮ ಜತೆ ಮಾತನಾಡಬೇಕು ಎಂದು ಕೇಳಿದರು. ನಾಳೆ ಹನ್ನೆರಡೂವರೆ ಗಂಟೆ ನಂತರ ಕಾಲ್ ಮಾಡಿ, ಕನೆಕ್ಟ್ ಮಾಡುತ್ತೇನೆ ಎಂದು ಹೇಳಿದ್ದೇನೆ”.
ಹಾಗೆಂದರು.
Dear Friends,
My new book on Mining Mafia along with BJ 9 and 10 are getting released on Feb 6th by Lokayukta Santosh Hegde at “Indian Institute of world Culture”, BP Wadia Road, Basavanagudi, Bangalore.
Time: 10.30 am.
YOU are all INVITED.
Please come…
ಅಕ್ಟೋಬರ್ ೧೬ರಂದು ಮತಾಂತರದ ಬಗ್ಗೆ ಖ್ಯಾತ ಸಾಹಿತಿ ಎಸ್.ಎಲ್. ಭೈರಪ್ಪನವರು “ವಿಜಯ ಕರ್ನಾಟಕ”ದಲ್ಲಿ ಬರೆದಿದ್ದ ಲೇಖನವನ್ನು ಓದಲು “ಈ ಪೇಪರ್”ನ ತಾಂತ್ರಿಕ ದೋಷದಿಂದಾಗಿ ಹಲವರಿಗೆ ಸಾಧ್ಯವಾಗಿಲ್ಲ. ಅಂತಹ ಓದುಗರ ಮನವಿ ಮೇರೆಗೆ ಭೈರಪ್ಪನವರ ಲೇಖನವನ್ನು ಇಲ್ಲಿ ನೀಡಲಾಗಿದೆ.
ಅಕ್ಟೋಬರ್ 16ರಂದು ‘ವಿಜಯ ಕರ್ನಾಟಕ’ ಪತ್ರಿಕೆಯ ಮುಖಪುಟದಲ್ಲಿ “ಇಂಥ ಘಟನೆ ಬೇರೆ ಯಾವ ದೇಶದಲ್ಲಿ ನಡೆದೀತು?” ಎಂಬ ಶೀರ್ಷಿಕೆಯಡಿ ಖ್ಯಾತ ಸಾಹಿತಿ ಎಸ್.ಎಲ್. ಭೈರಪ್ಪನವರು ಬರೆದ ವಿಚಾರಪೂರ್ಣ ಲೇಖನವನ್ನು ಖಂಡಿತ ನೀವು ಓದಿರುತ್ತೀರಿ. ಅವರ ಲೇಖನಕ್ಕೆ ಪ್ರತಿಕ್ರಿಯಿಸಿ ಜನಪ್ರಿಯ ಪತ್ರಕರ್ತ ರವಿ ಬೆಳಗೆರೆಯವರು ಅಕ್ಟೋಬರ್ 19ರಂದು “ಭೈರಪ್ಪ ಇತಿಹಾಸಕಾರ, ಬರಹಗಾರ: ಸದ್ಯ ಮುತ್ಸದ್ದಿಯಲ್ಲ?” ಎಂಬ ಲೇಖನ ಬರೆದು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡರು. ಅಕ್ಟೋಬರ್ 20ರಂದು ಉತ್ತರ ಪಡೆದುಕೊಳ್ಳುವ ಸರದಿ ರವಿ ಬೆಳಗೆರೆಯವರದ್ದಾಗಿತ್ತು. ಮಂಗಳೂರಿನ ರಾಮಚಂದ್ರ ಶೆಣೈ (None, [...]