ಅಫ್ಘಾನಿಸ್ತಾನದ ಪುಶ್ತೂನ್ ಬುಡಕಟ್ಟು ಜನಾಂಗದಲ್ಲಿ ಪದ್ಧತಿಯೊಂದಿದೆ. ಎರಡು ಕುಟುಂಬಗಳ ಮಧ್ಯೆ ಯಾವುದಾದರೂ ವ್ಯಾಜ್ಯಗಳಿದ್ದು, ಒಂದು ಕುಟುಂಬ ಮತ್ತೊಂದು ಕುಟುಂಬಕ್ಕೆ ಸೇರಿದವರ ಪ್ರಾಣಹಾನಿ ಮಾಡಿದ್ದರೆ ಅದಕ್ಕೆ ಪರಿಹಾರವಾಗಿ ಮಗಳನ್ನು ಕೊಡುತ್ತಾರೆ. ಅದನ್ನು Baad transactions ಎನ್ನುತ್ತಾರೆ. ಬೀಬಿ ಐಶಾಳ ಚಿಕ್ಕಪ್ಪ ಮಾಡಿದ್ದ ಕೊಲೆಗೆ ಪ್ರತಿಯಾಗಿ ಐಶಾ ಹಾಗೂ ಆಕೆಯ ಸಹೋದರಿಯನ್ನು ಕೊಲೆಯಾದವನ ಕುಟುಂಬಕ್ಕೆ ನೀಡುವುದಾಗಿ ವಾಗ್ದಾನ ಮಾಡ ಲಾಗಿತ್ತು.
ಇಂಥದ್ದೊಂದು ದುರಂತ ಕಥೆ ಆರಂಭವಾದಾಗ ಐಶಾಗಿನ್ನೂ 8 ವರ್ಷ.
I want my country back!
ಹಾಗಂತ ಈ ದೇಶದ ಹೆಮ್ಮೆಯ ಪುತ್ರನೇ ಹೇಳಬೇಕಾದ ಪರಿಸ್ಥಿತಿ ನಿರ್ಮಾಣವಾಯಿತೆ? ಈ ದೇಶಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ತಂದುಕೊಟ್ಟ ಚೆಸ್ ತಾರೆ, ತಾನು ಯಾವ ದೇಶದ ಪ್ರಜೆ ಎಂದು ಸಾಬೀತುಪಡಿಸಬೇಕಾದ ಸನ್ನಿವೇಶ ಸೃಷ್ಟಿಯಾಯಿತೆ? ಏನಾಗಿದೆ ಕಾಂಗ್ರೆಸ್ ನೇತೃತ್ವದ ಈ ಕೇಂದ್ರ ಸರಕಾರಕ್ಕೆ? ಒಂದು ಕಡೆ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭ್ರಷ್ಟಾಚಾರವೆಸಗುವ ಮೂಲಕ, ಕಳಪೆ ಕಾಮಗಾರಿಯ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಕಳಂಕ ತರುತ್ತಿದೆ. ಇನ್ನೊಂದೆಡೆ ಭಾರತಕ್ಕೆ ವಿಶ್ವಮನ್ನಣೆ ಗಳಿಸಿಕೊಟ್ಟಿರುವ ಕ್ರೀಡಾತಾರೆಯಾದ ವಿಶ್ವನಾಥನ್ ಆನಂದ್ [...]
Yellow Journalism. ಹಾಗೆಂದು ಕೂಡಲೇ ತಟ್ಟನೆ ನೆನಪಾಗುವುದು ವಿಲಿಯಂ ರ್ಯಾಂಡಾಲ್ಫ್ ಹರ್ಸ್ಟ್. ‘ದಿ ಸ್ಯಾನ್ ಫ್ರಾನ್ಸಿಸ್ಕೋ ಎಕ್ಷಾಮಿನರ್’ ಎಂಬ ಪತ್ರಿಕೆಯನ್ನು ಅಪ್ಪನಿಂದ ಪಡೆದುಕೊಂಡ ಹರ್ಸ್ಟ್, 1897ರಲ್ಲಿ ಅಧಿಕೃತವಾಗಿ ಮುದ್ರಣ ಕ್ಷೇತ್ರಕ್ಕೆ ಕಾಲಿಟ್ಟ. ಅದರ ಬೆನ್ನಲ್ಲೇ ‘ದಿ ನ್ಯೂಯಾರ್ಕ್ ಜರ್ನಲ್’ ಎಂಬ ಮತ್ತೊಂದು ಪತ್ರಿಕೆಯನ್ನು ಖರೀದಿ ಮಾಡಿದ. ಈ ‘ದಿ ನ್ಯೂಯಾರ್ಕ್ ಜರ್ನಲ್’ಗೂ ಹಾಗೂ ಜೋಸೆಫ್ ಪುಲಿಟ್ಝರ್ನ ‘ನ್ಯೂಯಾರ್ಕ್ ವರ್ಲ್ಡ್’ ಪತ್ರಿಕೆಗೂ ತೀವ್ರ ಸೆಣಸಾಟ ಆರಂಭವಾಯಿತು. ಪ್ರಸಾರ ಸಂಖ್ಯೆಯಲ್ಲಿ ಮೇಲುಗೈ ಸಾಧಿಸುವ ಸಲುವಾಗಿ ಪತ್ರಿಕೋದ್ಯಮದ ಮೂಲತತ್ತ್ವಗಳನ್ನೇ ಗಾಳಿಗೆ ತೂರಲಾ [...]
ಲಾ ಇಲಾಹ ಇಲ್ಲಲ್ಲಾಹು ಮುಹಮ್ಮದುರ್ ರಸೂಲುಲ್ಲ್ಲಾಹ್…
ಅವನ ತುಟಿಗಳು ಕಂಪಿಸಿದ್ದು ಅದೇ ಕಡೇ ಸಲ. ಅಲ್ಲಾಹುವಿಗೆ ಕೊನೆಯ ಪ್ರಾರ್ಥನೆಯನ್ನು ಸಲ್ಲಿಸಿ, ಕಣ್ಣು ತೆರೆದ. ಅಷ್ಟರೊಳಗೆ ಮುಖದ ಸುತ್ತ ಕಪ್ಪು ಚೀಲ ಆವರಿಸಿತ್ತು. ಕುಣಿಕೆ ಶಿರವನ್ನು ಸುತ್ತಿತ್ತು. ಕಾಲ ಕೆಳಗಿನ ಹಲಗೆ ಸರಿಯಿತು. ಶರೀರ ಬಾವಿಯೊಳಕ್ಕೆ ಧುಮುಕಿತು. ಹಗ್ಗ ಬಿಗಿಯಿತು, ಉಸಿರು ನಿಂತಿತು. ಅಲ್ಲಿಗೆ ಆಶ್ಫಾಕುಲ್ಲಾ ಖಾನ್ ಎಂಬ ಕ್ರಾಂತಿಕಾರಿಯ ವಿರೋಚಿತ ಹೋರಾಟ ಅಂತ್ಯವಾಯಿತು. ಎಲ್ಲರೂ ಒಂದಲ್ಲ ಒಂದು ದಿನ ಈ ಬುವಿಯನ್ನು ಬಿಟ್ಟುಹೋಗಲೇ ಬೇಕು. ಸಾವು ಅನಿವಾರ್ಯ. ಆದರೆ [...]
2008ರ ಒಲಿಂಪಿಕ್ಸ್ ನಡೆದಿದ್ದು ಚೀನಾದ ಬೀಜಿಂಗ್ನಲ್ಲಿ. 2012ರ ಒಲಿಂಪಿಕ್ಸ್ ನಡೆಯುವುದು ಇಂಗ್ಲೆಂಡ್ನ ಲಂಡನ್ನಲ್ಲಿ. 2016ರ ಒಲಿಂಪಿಕ್ಸ್ ಬ್ರೆಝಿಲ್ನ ರಯೋ ಡಿ ಜನೈರೋದಲ್ಲಿ ನಡೆಯಲಿದೆ. 2020ರ ಒಲಿಂಪಿಕ್ಸ್ ಎಲ್ಲಿ ನಡೆಯಲಿದೆ ಎಂಬುದು ಲಂಡನ್ ಒಲಿಂಪಿಕ್ಸ್ ವೇಳೆಗೆ ಅಖೈರಾಗಲಿದೆ. 2024 ಹಾಗೂ 2028ರ ಒಲಿಂಪಿಕ್ಸ್ ಅನ್ನು ಆಯೋಜಿಸಲು ಜಗತ್ತಿನ ಹತ್ತಾರು ದೇಶಗಳು ನಾ ಮುಂದು, ತಾ ಮುಂದು ಎಂಬಂತೆ ಧಾವಿಸುತ್ತಿವೆ. ಅದಕ್ಕಾಗಿ ಬಿಡ್ಡಿಂಗ್ ಕೂಡ ಆರಂಭವಾಗಿದೆ. ಅಧಿಕೃತವಾಗಿ ಘೋಷಣೆ ಮಾಡುವುದು 8 ವರ್ಷ ಮೊದಲಾದರೂ ಅಂತಾರಾಷ್ಟ್ರೀಯ ಕ್ರೀಡಾಕೂಟಗಳು ಕನಿಷ್ಠ 12 [...]
Alas!
1931ರಲ್ಲಿ ಭಗತ್ ಸಿಂಗ್ನನ್ನು ನೇಣಿಗೆ ಹಾಕಿದಾಗಲೂ, 1945ರಲ್ಲಿ ಸುಭಾಷ್ಚಂದ್ರ ಬೋಸ್ ಅನುಮಾ ನಾಸ್ಪದವಾಗಿ ಸಾವಿಗೀಡಾದಾಗಲೂ, 1948ರಲ್ಲಿ ಗಾಂಧೀಜಿ ಹತ್ಯೆಯಾದಾಗಲೂ, 1975ರಲ್ಲಿ ತುರ್ತುಪರಿಸ್ಥಿತಿಯನ್ನು ಹೇರಿದಾ ಗಲೂ ನಮ್ಮ ಮಾಧ್ಯಮಗಳು ಈ ಪರಿ ಬೊಬ್ಬೆಹಾಕಿರಲಿಲ್ಲ! ಇತ್ತ ದಿಲ್ಲಿಯ ಬೀದಿ ಬೀದಿಗಳಲ್ಲಿ ೩ ಸಾವಿರ ಸಿಖ್ಖರನ್ನು ಹತ್ಯೆ ಮಾಡಿದ, ಅದನ್ನು ಒಂದು ದೊಡ್ಡಮರ ಉರುಳಿದಾಗ ಭೂಮಿ ಅಲು ಗುವುದು ಸಹಜ ಎಂದು ಲಜ್ಜೆಯಿಲ್ಲದೆ ಸಮರ್ಥಿಸಿಕೊಂಡಿದ್ದ ರಾಜೀವ್ ಗಾಂಧಿಯವರ ಕಾಂಗ್ರೆಸ್ ಪಕ್ಷ, ಒಬ್ಬ ಸೊಹ್ರಾಬುದ್ದೀನ್ಹತ್ಯೆಗೆ ಈಗ ಪ್ರತಿಕ್ರಿಯಿಸುತ್ತಿರುವ ರೀತಿಯಾದರೂ ಹೇಗಿದೆ? ಮೂರು ಸಾವಿರ [...]
Death… ಕ್ಯಾನ್ಸರ್ನಿಂದ ಬಳಲುತ್ತಿದ್ದ ಆಪಲ್ ಕಂಪನಿಯ ಸ್ಥಾಪಕ, ಮಾಲೀಕ ಸ್ಟೀವ್ ಜಾಬ್ಸ್ ಅವರು ಯಮನ ಮನೆಯ ಕದತಟ್ಟಿ ವಾಪಸ್ ಬಂದ ಮೇಲೆ ಸಾವನ್ನು “Life’s change agent” ಎಂದು ವರ್ಣಿಸಿದ್ದರು. ಒಬ್ಬ ಸೈನಿಕನ ಪಾಲಿಗೆ ಸಾವೇ ಪ್ರಾರಬ್ಧ-Death is destiny.
ಎಷ್ಟು ನಿಜ ಅಲ್ವಾ?
ಹಾಗಂತ ಸಾವು ಇಂಥದ್ದೇ ದಿನ, ಕ್ಷಣ, ಸಂದರ್ಭದಲ್ಲಿ ಬರುತ್ತದೆ ಎಂದು ಊಹಿಸುವುದಕ್ಕಾಗುತ್ತಾ? ಬರುವ ಮುನ್ನ ಅದೇನಾದರೂ ಮುನ್ಸೂಚನೆ ಕೊಡುತ್ತದಾ? ಈ ಕೆಳಗಿನ ಪತ್ರವನ್ನೊಮ್ಮೆ ಓದಿ…
Hindus never act, they only react. ಈ ಮಾತು ಸುಳ್ಳು ಎನ್ನುವುದಾದರೆ ಹಿಂದೂಗಳು ತಾವಾಗಿಯೇ ಯಾರ ಮೇಲಾದರೂ ಎರಗಿದ, ಮೂಲತಃ ಹಿಂದೂಗಳು ಆರಂಭಿಸಿದ ಕೋಮು ಹಿಂಸಾಚಾರ, ಅನ್ಯಧರ್ಮೀಯರ ಮೇಲೆ ಮಾಡಿದ ಆಕ್ರಮಣದ ಒಂದೇ ಒಂದು ಉದಾಹರಣೆ ಕೊಡಿ ನೋಡೋಣ? ಸ್ವಾತಂತ್ರ್ಯಾನಂತರದ 63 ವರ್ಷಗಳನ್ನು ಮಾತ್ರ ದೃಷ್ಟಿಯಲ್ಲಿಟ್ಟುಕೊಂಡು ಈ ಮಾತು ಹೇಳುತ್ತಿಲ್ಲ, ಕಳೆದ 5 ಸಾವಿರ ವರ್ಷಗಳ ಇತಿಹಾಸದಲ್ಲಿ ಹಿಂದೂಗಳು ಅನ್ಯಧರ್ಮೀಯರ ಮೇಲೆ ದಾಳಿ ಮಾಡಿದ, ಅವರ ಪ್ರಾರ್ಥನಾ ಸ್ಥಳಗಳನ್ನು ಧ್ವಂಸ ಮಾಡಿದ, ಮತಾಂತರ ಮಾಡಲು ಯತ್ನಿಸಿದ [...]