*/
Date : 18-03-2017 | no Comment. | Read More
ಶತ್ರು ಸ್ವತ್ತು ಕಿತ್ತುಕೊಂಡರೆ ಕಾಂಗ್ರೆಸ್ಗೇಕೆ ಆಪತ್ತು? ಸಾಮಾನ್ಯವಾಗಿ ಶುಕ್ರವಾರ ಮಧ್ಯಾಹ್ನದ ನಂತರ ಸಂಸತ್ತಿನ ಎರಡೂ ಸದನಗಳು, ಅದು ರಾಜ್ಯಸಭೆ ಇರಬಹುದು, ಲೋಕಸಭೆಯಾಗಿರಬಹುದು, ಬಿಕೋ ಎನ್ನುತ್ತಿರುತ್ತವೆ. ಶನಿವಾರ, ಭಾನುವಾರ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಆಯೋಜನೆಯಾಗಿರುವ ಸಭೆ, ಸಮಾರಂಭ, ಮೀಟಿಂಗ್ಗಳಲ್ಲಿ ಪಾಲ್ಗೊಳ್ಳುವುದಕ್ಕಾಗಿ ಹೆಚ್ಚಿನ ಸಂಸದರು ಶುಕ್ರವಾರ ಕ್ಷೇತ್ರಕ್ಕೆ ತೆರಳುವುದರ ಬಗ್ಗೆಯೇ ಹೆಚ್ಚು ಚಿಂತಿತರಾಗಿರುತ್ತಾರೆ. ರಾಜ್ಯಸಭೆ ಸದಸ್ಯರಿಗೆ ಅಂಥ ಅನಿವಾರ್ಯ, ದರ್ದು ಇಲ್ಲ. ಆದರೂ ರಾಜ್ಯಸಭೆಯೂ ಹೆಚ್ಚೂಕಡಿಮೆ ಖಾಲಿಯಾಗಿ ಬಿಡುತ್ತದೆ. ಅಲ್ಲಿ ತುಂಬಿದ ಸಭೆಯನ್ನು ನೋಡಬೇಕೆಂದರೆ ಪ್ರಧಾನಿ ನರೇಂದ್ರ ಮೋದಿಯವರ ಸರಕಾರ […]
Date : 11-03-2017 | no Comment. | Read More
ಪತ್ರಕರ್ತರಲ್ಲಿ ಅವರಿಗೇ ಅಗ್ರಪಂಕ್ತಿ, ಪ್ರಾಮಾಣಿಕತೆಗೂ ಅವರೇ ಮೇಲ್ಪಂಕ್ತಿ! ಇತ್ತೀಚೆಗೆ ಖ್ಯಾತ ಐಪಿಎಸ್ ಅಧಿಕಾರಿ ಹಾಗೂ ಪ್ರಸ್ತುತ ನಮ್ಮ ಮೈಸೂರಿನಲ್ಲಿರುವ ಕರ್ನಾಟಕ ಪೊಲೀಸ್ ಅಕಾಡೆಮಿಯ ಚುಕ್ಕಾಣಿ ಹಿಡಿದಿರುವ ಡಾ. ಮಧುಕರ್ ಶೆಟ್ಟಿಯವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತ್ತು. ಅವರನ್ನು ಭೇಟಿಯಾಗುವುದೆಂದರೆ ಒಬ್ಬ ಪ್ರಖ್ಯಾತ ಪ್ರೊಫೆಸರ್ನ ಬಳಿ ಕುಳಿತು ಜ್ಞಾನವರ್ಧನೆ ಮಾಡಿಕೊಂಡಂತೆ. ಒಂಥರಾ enriching experience ಆಗುತ್ತದೆ. ಮೊನ್ನೆ ಸಿಕ್ಕಾಗಲೂ ಅದೇ ತೆರನಾದ ಅನುಭವವಾಯಿತು. ಒಬ್ಬ ರಾಜಕಾರಣಿ, ಆತ ಎಂಎಲ್ಎಯೋ, ಎಂಪಿಯೋ ಅಥವಾ ಸಚಿವರೋ, ಯಾರೇ ಆಗಿದ್ದರೂ ಪ್ರಾಮಾಣಿಕರಾಗಿದ್ದರೆ ಅಧಿಕಾರಿಗಳೂ ಮಾತು […]
Date : 04-03-2017 | no Comment. | Read More
ವಯಸ್ಸಿಗೆ ಬಂದ ಒಬ್ಬನೇ ಮಗನನ್ನು ದೇಶಕ್ಕೆ ಬಲಿಕೊಟ್ಟು ಜೀವಂತ ಶವದಂತೆ ಬದುಕುತ್ತಿರುವ ತಂದೆಯರೂ ಇದ್ದಾರೆ, ಗುರ್ ಮೆಹರ್! ‘ಕಿಸಿಕೋ ರಿಸರ್ವೇಶನ್ ಚಾಹಿಯೇ ತೋ ಕಿಸಿಕೋ ಆಝಾದಿ! ಹಮೇ ಕುಚ್ ನಹೀ ಚಾಹಿಯೇ ಭಾಯಿ, ಬಸ್ ಅಪ್ನಿ ರೆಜಾಯಿ!’ ಕೆಲವರಿಗೆ ಮೀಸಲು ಬೇಕಾದರೆ ಇನ್ನು ಕೆಲವರಿಗೆ ಸ್ವಾತಂತ್ರ್ಯ ಬೇಕಂತೆ. ಅಣ್ಣಾ, ನನಗೆ ಏನೂ ಬೇಡ ಹೊದ್ದುಕೊಳ್ಳಲು ಒಂದು ಕಂಬಳಿ ಬಿಟ್ಟು! ಹಾಗಂತ ಹೇಳಿದ್ದು ಯಾರು ಅಂತ ನೆನಪಾಯಿತಾ?! 2016, ಫೆಬ್ರವರಿ 21. ಅಂದರೆ ಸರಿಯಾಗಿ ಒಂದು ವರ್ಷದ ಹಿಂದೆ […]
Date : 25-02-2017 | no Comment. | Read More
ಈ ಸ್ಫುರದ್ರೂಪಿಯನ್ನು ಕಾಲೇಜಿನ ಕಾಮನೆಗಿಂತ ಕೇಶವ ಬಲರಾಮನೇ ಹೆಚ್ಚು ಆಕರ್ಷಿಸಿದ ! ಮಂಗಳವಾರ ಸಂಜೆಯವರೆಗೂ ಮೈಸೂರಿನಲ್ಲಿದ್ದು, ಅಂತ್ಯಸಂಸ್ಕಾರ ಮುಗಿಸಿ ಬೆಂಗಳೂರಿಗೆ ತೆರಳಿದ ಆರೆಸ್ಸೆಸ್ನ ಅಖಿಲ ಭಾರತ ಸಹ ಬೌದ್ಧಿಕ್ ಪ್ರಮುಖ್ ಮುಕುಂದರಿಂದ ರಾತ್ರಿ ಕರೆಬಂತು. ನನಗೆ ಸಮಾಧಾನದ ಒಂದೆರಡು ಮಾತನಾಡಲು ಕರೆ ಮಾಡಿದ್ದ ಅವರ ಧ್ವನಿಯಲ್ಲೇ ನೋವು, ಸಂಕಟ, ಒಂಥರಾ ಅನಾಥ ಪ್ರಜ್ಞೆ ವ್ಯಕ್ತವಾಗುತ್ತಿತ್ತು. ಜಯದೇವರು 45 ದಿನಗಳ ಹಿಂದೆ ಆಸ್ಪತ್ರೆ ಸೇರಿದಾಗಲೇ ಮುಕುಂದರಿಗೆ ಸಂಕಟ ಶುರುವಾಗಿತ್ತು. ಅಂದಮಾತ್ರಕ್ಕೆ ಜಯದೇವರು ಅಕಾಲಿಕವಾಗಿ ದೂರವಾದರು ಎಂದಲ್ಲ. ಎಂಬತ್ಮೂರು ವರ್ಷದ […]
Date : 23-02-2017 | no Comment. | Read More
ದಿನೇಶ್ ಗುಂಡೂರಾವ್ ಅವರೇ, ಸಿಕ್ಕ ಸಿಕ್ಕವರನ್ನೆಲ್ಲಾ ಜೈಲಿಗೆ ಹಾಕಿದ್ದು ನಿಮ್ಮ ಇಂದಿರಾ ಗಾಂಧಿ! ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪ, ಅಭಿಪ್ರಾಯಭೇದ, ಟೀಕೆ-ಟಿಪ್ಪಣಿಗಳು ಸಹಜ ಹಾಗೂ ಸಹ್ಯ ಕೂಡ ಹೌದು. ಆದರೆ ಮಾತುಗಳು ಅಥವಾ ಟೀಕೆ ಎಲ್ಲೆ ಮೀರಿದಾಗ ಅಸಹ್ಯವೆನಿಸಿಬಿಡುತ್ತದೆ. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಮಾಜಿ ಸಚಿವ ದಿನೇಶ್ ಗುಂಡೂರಾವ್ ಅವರು, ತಮ್ಮ ಮುಖ್ಯಮಂತ್ರಿಯನ್ನು ಸಮರ್ಥಿಸಿಕೊಳ್ಳಲೇಬೇಕು. ಸಾರ್ವಜನಿಕ ಜೀವನದಲ್ಲಿ ಇವೆಲ್ಲ ಮಾಮೂಲು. ಆದರೆ ತಮ್ಮ ನಾಯಕ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಅವರ ಬಾಯಿಂದ […]
Date : 18-02-2017 | no Comment. | Read More
ಖರ್ಗೆ ಸಾಹೇಬ್ರೇ, 1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಂಗ್ರೆಸ್ನ ಎಷ್ಟು ನಾಯಿಗಳು ಸತ್ತಿದ್ದವು? ದಯವಿಟ್ಟು ಕ್ಷಮಿಸಿ, ಸಭ್ಯತೆಯ ಗೆರೆ ಮೀರಿ ಹೀಗೆ ಪ್ರಶ್ನಿಸುತ್ತಿರುವುದಕ್ಕೆ. ಮನಸ್ಸು ಒಲ್ಲೆ ಎನ್ನುತ್ತಿದ್ದರೂ ಏಕೆ ಹೀಗೆ ಕೇಳಬೇಕಾಗಿದೆಯೆಂದರೆ ನಮ್ಮ ಮಹಾನ್ ನೇತಾರ ಮಲ್ಲಿಕಾರ್ಜುನ ಖರ್ಗೆ ಹಾಗೂ ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ ಆರೆಸ್ಸೆಸ್ ಬ್ರಿಟಿಷರ ಜತೆ ಕೈಜೋಡಿಸಿತ್ತು ಎಂಬ ಅವಿವೇಕದ ಹೇಳಿಕೆಯನ್ನು ಆಗಾಗ್ಗೆ ಕೊಡುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಅರ್ಥವಾಗುವುದು ಇದೇ ಭಾಷೆ! ಸಾಮಾನ್ಯವಾಗಿ ಮಲ್ಲಿಕಾರ್ಜುನ ಖರ್ಗೆಯವರು ಮಾತಿಗೆ ನಿಂತರೆ ಅದು ಲೋಕಸಭೆ […]
Date : 11-02-2017 | no Comment. | Read More
ಸಾವಿನ ವ್ಯಾಪಾರಿ ಅನ್ನುವಾಗ, ಬಂದು ಟೀ ಮಾರು ಎಂದು ಹೀಗಳೆಯುವಾಗ, ಫತ್ವಾ ಹೊರಡಿಸಿದಾಗ ಎಲ್ಲಿ ಸತ್ತು ಬಿದ್ದಿತ್ತು ಈ ಘನತೆ, ಸಭ್ಯತೆಯ ಮಾತು? ಕಳೆದ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಆರಂಭವಾದ ಪ್ರಧಾನಿ ಮೋದಿಯವರ ಉತ್ತರ ಸುದೀರ್ಘ 2 ಗಂಟೆಗಳ ಕಾಲ ನಡೆದು ಮೂರು ಗಂಟೆಗೆ ಮುಕ್ತಾಯವಾದಾಗ ಲೋಕಸಭೆಯಲ್ಲಿ ಕಾಂಗ್ರೆಸ್ಗೆ ನಿರ್ಜೀವ ಭಾವ ಮೂಡಿತ್ತು, ಸಾಮಾನ್ಯವಾಗಿ ಸದಾ ಸಭ್ಯತೆಯ ಗೆರೆ ದಾಟಿಯೇ ಮಾತನಾಡುವ ಮಲ್ಲಿಕಾರ್ಜುನ ಖರ್ಗೆಯವರು ಪೆಚ್ಚುಮುಖ ಹಾಕಿಕೊಳ್ಳುವಷ್ಟು ದಾಳಿ ಮಾಡಿದ್ದರು ಮೋದಿ. ಮರುದಿನ ಸಂಜೆ ರಾಜ್ಯಸಭೆಯಲ್ಲಿ […]
Date : 04-02-2017 | no Comment. | Read More
ಜ್ಞಾನ ವರದ ಮೋಹನ ರಾಗ! ಮೊದಲನೆಯವನು ಸ್ಯಾಮ್, ಎರಡನೆಯವನು ಜಾನ್ ಹಾಗೂ ಮೂರನೆಯವನು ಎರಿಕ್. ಈ ಮೂವರೂ ರಾಲ್ಫ್ ಎಂಬ ರಾಜನ ಮಕ್ಕಳು. ಇತ್ತ ರಾಲ್ಫ್ಗೆ ಮುಪ್ಪು ಆವರಿಸಿದೆ. ಕೈಕಾಲುಗಳು ತ್ರಾಣ ಕಳೆದುಕೊಂಡಿವೆ. ಹಾಸಿಗೆ ಹಿಡಿದಿದ್ದಾನೆ. ಇನ್ನು ಕೆಲವೇ ದಿನಗಳಲ್ಲಿ ಸಾಯಲಿದ್ದಾನೆ. ಆ ಬಗ್ಗೆ ರಾಲ್ಫ್ಗೆ ಯಾವ ಅಳುಕೂ ಇಲ್ಲ, ಪಶ್ಚಾತಾಪವಂತೂ ಇಲ್ಲವೇ ಇಲ್ಲ. ಆದರೂ ಆತನ ಮುಖದಲ್ಲಿ ಚಿಂತೆ ಎದ್ದು ಕಾಣುತ್ತಿರುತ್ತದೆ. ಉತ್ತರಾಧಿಕಾರಿಯನ್ನಾಗಿ ಯಾರನ್ನು ನೇಮಕ ಮಾಡಬೇಕೆಂಬ ಪ್ರಶ್ನೆ ಆತನನ್ನು ಕಾಡುತ್ತಿರುತ್ತದೆ. ತನ್ನ ಮೂವರೂ ಮಕ್ಕಳನ್ನು […]
Date : 28-01-2017 | no Comment. | Read More
ಈ ಸುದಿನ ಕಾರ್ಯಪ್ಪನವರ ಜನ್ಮದಿನ! ಅದು 1965ರ ಭಾರತ-ಪಾಕಿಸ್ತಾನದ ನಡುವಿನ ಯುದ್ಧ! ಆಗ ಫ್ಲೈಟ್ ಲೆಫ್ಟಿನೆಂಟ್ ಆಗಿದ್ದ ಕಾರ್ಯಪ್ಪನವರ ಪುತ್ರ ಕೆ.ಸಿ. ನಂದ ಕಾರ್ಯಪ್ಪನವರಿದ್ದ ಹಂಟರ್ ವಿಮಾನವನ್ನು ಪಾಕ್ ಕೆಳಗುರುಳಿಸಿತು. ನಂದ ಅವರು ಕಾರ್ಯಪ್ಪನವರ ಪುತ್ರ ಎಂದು ತಿಳಿದ ಕೂಡಲೇ ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಅಯೂಬ್ ಖಾನ್ ಜನರಲ್ ಕಾರ್ಯಪ್ಪನವರಿಗೆ ಕರೆ ಮಾಡಿ, ಮಗನನ್ನು ಬಿಡುಗಡೆಗೊಳಿಸುವ ಪ್ರಸ್ತಾಪವನ್ನಿಟ್ಟರು. ಏಕೆಂದರೆ ಅವಿಭಜಿತ ಭಾರತವಿದ್ದಾಗ ಅಯೂಬ್ ಖಾನ್ ಬ್ರಿಟಿಷ್ ಸೇನೆಯಲ್ಲಿ ನಮ್ಮ ಜನರಲ್ ಕಾರ್ಯಪ್ಪನವರ ಕೆಳಗೆ ಸೇವೆ ಸಲ್ಲಿಸುತ್ತಿದ್ದರು. ಹೀಗಾಗಿ […]
Date : 21-01-2017 | no Comment. | Read More
ಹೊಸ ಸಿಇಒ ಬಗ್ಗೆ ಬರೆಯುವ ನೆಪ, ಮತ್ತೆ ಟಾಟಾ ಕೊಡುಗೆಯ ಜಪ! ಕಬ್ಬಿಣ ಹಾಗೂ ಉಕ್ಕು ಕಂಪನಿ ಸ್ಥಾಪನೆ ಜಲವಿದ್ಯುತ್ ಉತ್ಪಾದನೆ ವಿಶ್ವದರ್ಜೆಯ ಶೈಕ್ಷಣಿಕ ಸಂಸ್ಥೆಗಳ ನಿರ್ಮಾಣ ಈ ಮೂರೂ ಕನಸುಗಳು ಅವರ ಜೀವಿತಾವಧಿಯಲ್ಲಿ ಸಾಕಾರ ಗೊಳ್ಳಲಿಲ್ಲ. ಆದರೆ ಅವರ ಉತ್ತರಾಧಿಕಾರಿಗಳಿಗೆ ದಿಕ್ಸೂಚಿಯಾದವು, ದೃಷ್ಟಿಕೋನ ಕೊಟ್ಟವು, ದಾರಿ ದೀಪವಾದವು, ಭಾರತ ನಿರ್ಮಾಣದಲ್ಲಿ ಬಹುಮುಖ್ಯ ಪಾತ್ರವಹಿಸಿದವು. ಇಂತಹ ಕನಸುಗಳನ್ನು ಕಂಡಾತ ಈ ದೇಶ ಕಂಡ ಯಾವ ನಾಯಕನೂ ಅಲ್ಲ, ಪ್ರಧಾನಿ, ಮುಖ್ಯಮಂತ್ರಿಗಳೂ ಅಲ್ಲ. ಪಾರ್ಸಿ ಸಮುದಾಯದ ಅರ್ಚಕ ಅಥವಾ […]