Date : 01-12-2010 | 5 Comments. | Read More
ವೇದಾಂತಗಳೇನೋ ತುಂಬಾ ಇವೆ. ಕಾಲಾನುಕ್ರಮ ದಿಂದಲೂ ಪ್ರಮುಖ ಸಂಘರ್ಷಕ್ಕೆಲ್ಲ ಕಾರಣವಾಗಿದ್ದೇ ಇದು ಎಂಬ ದೃಷ್ಟಾಂತಗಳೂ ಪುರಾಣ ಕತೆಗಳಲ್ಲಿ, ಶ್ರದ್ಧೆಯ ಕಾವ್ಯಗಳಲ್ಲಿ ಸಾಕಷ್ಟು ಸಿಗುತ್ತವೆ. ಅವೆಲ್ಲ ಓದಿ ಸೊಗಸುವುದಕ್ಕೆ ಮಾತ್ರ ಲಾಯಕ್ಕೇನೊ ಎಂಬ ಹತಾಶೆಯೊಂದು ಆವರಿಸುತ್ತಿದೆ. ಅವನ್ನೆಲ್ಲ ನೆನಪಿಸಿಕೊಳ್ಳುತ್ತ ಹೋದರೆ ಈ ಕ್ಷಣಕ್ಕೆ ಅದು ಕೈಲಾಗದವರು ಹೇಳುವ ಕತೆಯೇನೋ ಎಂದು ಅನ್ನಿಸುವ ಎಲ್ಲ ಅಪಾಯಗಳೂ ಇವೆ.
Date : 01-12-2010 | 8 Comments. | Read More
ಬೆಂಗಳೂರಿನ ಗಿರಿನಗರದಲ್ಲಿರುವ ಸ್ನೇಹಿತರಾದ ಸತೀಶ್ ವಿಠಲ್ ತಮ್ಮ ಸ್ನೇಹಿತನ ವಿವಾಹಕ್ಕೆಂದು ಬಿಹಾರಕ್ಕೆ ಹೋಗಿದ್ದಾಗ ಸಂಭವಿಸಿದ ಘಟನೆಗಳನ್ನು ಬಹಳ ಮಜಬೂತಾಗಿ ವಿವರಿಸುತ್ತಾರೆ. ಸಾರ್, ನಮ್ ಫ್ರೆಂಡ್ ಮೊದಲೇ ಹೇಳಿದ್ದ ಯಾರ ಜತೆಗೂ ವಾದಕ್ಕಿಳಿಯಬೇಡ, ಕಾಯಿದೆ-ಕಾನೂನಿನ ಮಾತನಾಡಬೇಡ, ಸೀಟು ಕೇಳಿದ್ರೆ ಬಿಟ್ಟುಕೊಡು. ಕರ್ನಾಟಕದ ಹಾಗಲ್ಲ, ಕೊಂದೇ ಬಿಡುತ್ತಾರೆ ಹುಷಾರ್ ಎಂದಿದ್ದ. ಅಲ್ಲಿ ಬಸ್ ಸರ್ವೀಸೇ ಇಲ್ಲ ಎನ್ನಬಹುದು. ಜನ ಓಡಾಡುವುದೆಲ್ಲ ರೈಲಲ್ಲೇ. ನಾವು ವಾಪಸ್ ಬೆಂಗಳೂರಿಗೆ ಬರುವುದಕ್ಕೆ ರಿಸರ್ವೇಶನ್ ಮಾಡಿಸಿದ್ದೆವು. ರೈಲು ಎಲ್ಲೆಂದರಲ್ಲಿ ನಿಲ್ಲುತ್ತದೆ, ಜನ ಮನಸ್ಸಿಗೆ ಬಂದಂತೆ ರೈಲನ್ನೇರಿ […]
Date : 01-12-2010 | 2 Comments. | Read More
ದೀಪಾವಳಿ ಬಂದು ಹೋಯಿತು, ಆದರೆ ಪಟಾಕಿಯ ಕ್ರೂರ ಮುಖವಷ್ಟೇ ಕಾಡುತ್ತಿದೆ. ಬೆಂಗಳೂರಿನ ಮಿಂಟೋ ಆಸ್ಪತ್ರೆಯಲ್ಲಿ ದೃಷ್ಟಿಭಾಗ್ಯ ಕಳೆದುಕೊಂಡು ಮಲಗಿರುವ ಮಕ್ಕಳ ಆಕ್ರಂದನ ಮನವನ್ನೇ ಕಲಕುತ್ತಿದೆ. ಹದಿನೆಂಟು ತಿಂಗಳು ತುಂಬಿದ್ದಾಗ ದೃಷ್ಟಿ ಕಳೆದುಕೊಂಡ ಖ್ಯಾತ ದಂತಕಥೆ ಹೆಲೆನ್ ಕೆಲ್ಲರ್ಳ “Three Days to See” ಪ್ರಬಂಧ ನೆನಪಾಗುತ್ತಿದೆ. “ಇಂತಹ ಮೈನವಿರೇಳಿಸುವ ಕಥೆಗಳನ್ನು ನಾವೆಲ್ಲರೂ ಕೇಳಿಯೇ ಕೇಳಿರುತ್ತೇವೆ. ಹೀರೊ ಸಾಯುವು ದಕ್ಕೆ ಇಂತಿಷ್ಟೇ ಸಮಯ ಉಳಿದಿರುತ್ತದೆ. ಆ ಸಮಯ ಕೆಲವೊಮ್ಮೆ ಒಂದು ವರ್ಷದಷ್ಟು ದೀರ್ಘವೂ ಆಗಿರ ಬಹುದು, ಇಪ್ಪತ್ನಾಲ್ಕು ಗಂಟೆಗಳಷ್ಟು […]
Date : 31-10-2010 | 45 Comments. | Read More
ನೂರೈವತ್ತು ವರ್ಷಗಳ ಕಾಲ ಬ್ರಿಟಿಷರ ನಿಯಂತ್ರಣ ದಲ್ಲಿದ್ದ ಹಾಂಕಾಂಗ್ 1997ರಲ್ಲಿ ಚೀನಾದ ಪಾಲಾಯಿತು. 442 ವರ್ಷಗಳ ಕಾಲ ಮಕಾವು ಅನ್ನು ಆಳಿದ ಪೋರ್ಚುಗೀಸರು 1999ರಲ್ಲಿ ತುಟಿಪಿಟಿಕ್ ಅನ್ನದೆ ಚೀನಾದ ವಶಕ್ಕೆ ನೀಡಿ ಕಾಲ್ಕಿತ್ತರು. ಇನ್ನು ರಾಜಕೀಯವಾಗಿ ಪ್ರತ್ಯೇಕಗೊಂಡಿದ್ದರೂ ತೈವಾನ್ನಲ್ಲಿ ಇಂದಿಗೂ ನಡೆಯುವುದು ಚೀನಾದ್ದೇ ದರ್ಬಾರು. ಕಳೆದ 2 ಸಾವಿರ ವರ್ಷಗಳಲ್ಲಿ ಚೀನಾವನ್ನು ಆಳಿದ ಹಾನ್, ತಾಂಗ್, ಸಾಂಗ್, ಮಿಂಗ್, ಯಾನ್ ಮತ್ತು ಕಿಂಗ್ ಈ ಎಲ್ಲ ವಂಶಾಡಳಿತಗಳೂ ಪಕ್ಕದ ವಿಯೆಟ್ನಾಂ ಅನ್ನು ಕಬಳಿಸಲು ಯತ್ನಿಸಿವೆ. 1974ರಲ್ಲಿ ನಡೆದ […]
Date : 24-10-2010 | 39 Comments. | Read More
ಆ ದಿನವನ್ನು ಬಿಜೆಪಿಗೆ ಮತ ಹಾಕದವರೂ ಮರೆಯಲು ಸಾಧ್ಯವಿಲ್ಲ. 2008, ಮೇ 30 ರಂದು ವಿಧಾನಸೌಧದ ಮುಂದೆ ಸೇರಿದ್ದ ಜನಸಾಗರ ಇಂದಿಗೂ ಕಣ್ಣಮುಂದೆ ಬರುತ್ತದೆ. ಅದುವರೆಗೂ ಈ ರಾಜ್ಯ 18 ಮುಖ್ಯಮಂತ್ರಿಗಳನ್ನು ಕಂಡಿದ್ದರೂ ಬಿ.ಎಸ್. ಯಡಿಯೂರಪ್ಪನವರಿಗೆ ಕೊಟ್ಟಷ್ಟು ಪ್ರೀತಿ-ಆದರದಿಂದ ಬಹುಶಃ ಯಾರನ್ನೂ ಗದ್ದುಗೆ ಮೇಲೆ ಕೂರಿಸಿರಲಿಲ್ಲ. 1993ರಲ್ಲಿ ಡಾ. ರಾಜ್ಕುಮಾರ್ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಮಾಡುವ ಸಂದರ್ಭದಲ್ಲಿ ವಿಧಾನಸೌಧದ ಮುಂಭಾಗ ಎಷ್ಟು ಕಳೆಗಟ್ಟಿತ್ತೋ ಅದನ್ನೂ ಮೀರಿಸುವಂತಿತ್ತು ಅಂದಿನ ಸಂಭ್ರಮ. ನಾನು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ…. […]
Date : 19-10-2010 | 15 Comments. | Read More
ಆ ಪಂದ್ಯವನ್ನು ಯಾವ ಕ್ರಿಕೆಟ್ ಪ್ರೇಮಿಯೂ ಮರೆಯಲು ಸಾಧ್ಯವಿಲ್ಲ. ಅದು 1999 ಮಾರ್ಚ್ 26-30, ಬಾರ್ಬಡಾಸ್. ಅಂದು ನಡೆದಿದ್ದ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟೆಸ್ಟ್ನ ಮೊದಲ ಮೂರು ದಿನಗಳಲ್ಲೂ ಆಸ್ಟ್ರೇಲಿಯಾದ್ದೇ ಪ್ರಾಬಲ್ಯ. ನಾಯಕ ಸ್ಟೀವ್ ವಾ ಬಾರಿಸಿದ ಅಮೋಘ 199 ರನ್ಗಳ ನೆರವಿನೊಂದಿಗೆ ಆಸ್ಟ್ರೇಲಿಯಾ 490 ರನ್ಗಳನ್ನು ಹೊಡೆಯಿತು. ವೆಸ್ಟ್ ಇಂಡೀಸ್ 98 ರನ್ಗಳಿಗೆ 6 ವಿಕೆಟ್ಗಳನ್ನು ಕಳೆದುಕೊಂಡು ಹೀನಾಯ ಸ್ಥಿತಿಯಲ್ಲಿತ್ತು. ಅಂತಹ ಸ್ಥಿತಿಯಲ್ಲಿ ಶೆರ್ವಿನ್ ಕ್ಯಾಂಬೆಲ್ ಮತ್ತು ರಿಡ್ಲಿ ಜೇಕಬ್ಸ್ ನೀಡಿದ 153 ರನ್ಗಳ […]
Date : 03-10-2010 | 31 Comments. | Read More
After Nehru, Who? 1964ರ ಮೇ 27ರಂದು ಇಂಥದ್ದೊಂದು ಪ್ರಶ್ನೆ ಕಾಶ್ಮೀರ ದಿಂದ ಕನ್ಯಾಕುಮಾರಿಯವರೆಗೂ ಕಾಡಿದ್ದು ಖಂಡಿತ ನಿಜ. ಸ್ವತಂತ್ರ ಭಾರತದ ಮೊಟ್ಟ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಹೃದಯಾಘಾತದಿಂದ ನಿಧನರಾಗಿದ್ದರು. ಹಾಗಂತ ಆಳುವ ಕಾಂಗ್ರೆಸ್ ಪಕ್ಷದಲ್ಲಿ ಈ ದೇಶವನ್ನು ಮುನ್ನಡೆಸು ವಂಥ ನಾಯಕರೇ ಇಲ್ಲ ಎಂಬ ಕಾರಣಕ್ಕೆ ಆ ಪ್ರಶ್ನೆ ಮೂಡಿರಲಿಲ್ಲ. ಭಾರತಕ್ಕೆ ಸಮರ್ಥ ನಾಯಕತ್ವ ನೀಡುತ್ತಾರೆ, ಪ್ರಗತಿಯ ಪಥ ದಲ್ಲಿ ಕೊಂಡೊಯ್ಯುತ್ತಾರೆ, ಇನ್ನು ಮುಂದಾದರೂ ನಮ್ಮೆಲ್ಲರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಾರೆ, ಹಿತಾಸಕ್ತಿಯನ್ನು ಕಾಪಾಡುತ್ತಾರೆ ಎಂಬ […]
Date : 26-09-2010 | 16 Comments. | Read More
ಇದ್ದ ಒಬ್ಬ ಮಗನನ್ನೂ ಮೃತ್ಯು ಕಿತ್ತುಕೊಳ್ಳುವ ಭಯ, ಆತಂಕ ಮುಖ, ಮನಸ್ಸು ಎಲ್ಲವನ್ನೂ ಆವರಿಸಿದೆ. ಅಂತಹ ಸ್ಥಿತಿಯಲ್ಲಿ ಡಾ. ವೆಸ್ ಪೇಸ್ ಮುಂಬೈ ವಿಮಾನ ನಿಲ್ದಾಣದಲ್ಲಿ ನಿಂತಿದ್ದಾರೆ. ಅಷ್ಟರಲ್ಲಿ ಪರಿಚಿತವಲ್ಲದ ನಂಬರೊಂದ ರಿಂದ ಅವರ ಮೊಬೈಲ್ಗೆ ಮೆಸೇಜ್ ಬಂತು- “ಬಾಂಬೆ ಹಾಸ್ಪಿಟಲ್ನ ಡಾ. ಭೀಮ್ ಸಿಂಘಾಲ್ರನ್ನು ಕೂಡಲೇ ಸಂಪರ್ಕಿಸಿ”. ಆ ಸಂದೇಶವನ್ನು ಕಳುಹಿಸಿದ್ದವರು ಉದ್ಯಮಿ ಪಾರ್ಥಿವ್ ಕಿಲಾಚಂದ್. ಅವರ ಪತ್ನಿಯ ಮೆದುಳಿನಲ್ಲಿ ಗಡ್ಡೆಯೊಂದು ಬೆಳೆದಿತ್ತು. ಶಸ್ತ್ರಚಿಕಿತ್ಸೆಗಾಗಿ ನ್ಯೂಯಾರ್ಕ್ಗೆ ಹೋದರೂ ಫಲಕಾರಿಯಾಗದೆ ವಾಪಸ್ ಬಂದಿದ್ದರು. ಹೀಗೆ ಯಾವುದೇ ದಾರಿ […]
Date : 12-09-2010 | 26 Comments. | Read More
ಏಕಂ ಸತ್ ವಿಪ್ರಾಃ ಬಹುಧಾ ವದಂತಿ! ಹಾಗಂತ ಋಷಿಮುನಿ ದೀರ್ಘ ತಮಸ್ಸು ವೇದಕಾಲ ದಲ್ಲೇ ಹೇಳಿದ್ದ. ಮಹಾಭಾರತದ ಕಾಲಕ್ಕೆ ಬಂದರೆ “ಯಾರ್ಯಾರಿಗೆ ಯಾವ್ಯಾವ ರೂಪಗಳಲ್ಲಿ ಶ್ರದ್ಧೆಯಿದೆಯೋ ಅವರಿಗೆ ಆಯಾ ವಿಧಗಳಲ್ಲೇ ಸದ್ಗತಿ ಸಿಗುತ್ತದೆ” ಎಂದು ಭಗವದ್ಗೀತೆಯಲ್ಲಿ ಕೃಷ್ಣ ಹೇಳುತ್ತಾನೆ. As many are the people, so many may be the religions, ಅಂದರೆ ಯಾವ ಯಾವ ದಾರಿಯಿಂದ ಮನುಷ್ಯನಿಗೆ ತನ್ನಾತ್ಮದ ಸಾಕ್ಷಾತ್ಕಾರ ಆಗುತ್ತದೋ ಆ ದಾರಿಯೇ ಸರಿ, ಅದು ಇಂಥದ್ದೇ ದಾರಿ ಎನ್ನುವ ಹರವಿಲ್ಲ […]
Date : 06-09-2010 | 27 Comments. | Read More
ಅಫ್ಘಾನಿಸ್ತಾನದ ಪುಶ್ತೂನ್ ಬುಡಕಟ್ಟು ಜನಾಂಗದಲ್ಲಿ ಪದ್ಧತಿಯೊಂದಿದೆ. ಎರಡು ಕುಟುಂಬಗಳ ಮಧ್ಯೆ ಯಾವುದಾದರೂ ವ್ಯಾಜ್ಯಗಳಿದ್ದು, ಒಂದು ಕುಟುಂಬ ಮತ್ತೊಂದು ಕುಟುಂಬಕ್ಕೆ ಸೇರಿದವರ ಪ್ರಾಣಹಾನಿ ಮಾಡಿದ್ದರೆ ಅದಕ್ಕೆ ಪರಿಹಾರವಾಗಿ ಮಗಳನ್ನು ಕೊಡುತ್ತಾರೆ. ಅದನ್ನು Baad transactions ಎನ್ನುತ್ತಾರೆ. ಬೀಬಿ ಐಶಾಳ ಚಿಕ್ಕಪ್ಪ ಮಾಡಿದ್ದ ಕೊಲೆಗೆ ಪ್ರತಿಯಾಗಿ ಐಶಾ ಹಾಗೂ ಆಕೆಯ ಸಹೋದರಿಯನ್ನು ಕೊಲೆಯಾದವನ ಕುಟುಂಬಕ್ಕೆ ನೀಡುವುದಾಗಿ ವಾಗ್ದಾನ ಮಾಡ ಲಾಗಿತ್ತು. ಇಂಥದ್ದೊಂದು ದುರಂತ ಕಥೆ ಆರಂಭವಾದಾಗ ಐಶಾಗಿನ್ನೂ 8 ವರ್ಷ.