Date : 06-10-2013 | 73 Comments. | Read More
ಹತ್ಯಾರೋಂ ಕಾ ಜವಾಬ್, ಹತ್ಯಾರೋಂ ಸೆ ದೇಂಗೆ! ಹಾಗಂತ 1965, ಆಗಸ್ಟ್ 15ರಂದು ಕೆಂಪುಕೋಟೆಯ ಮೇಲೆ ನಿಂತು ಪ್ರಧಾನಿ ಲಾಲ್ಬಹಾದ್ದೂರ್ ಶಾಸ್ತ್ರಿಯವರು ಗುಡುಗಿದಾಗ ಅನುಮಾನಪಟ್ಟವರೇ ಹೆಚ್ಚು. ಜತೆಗೆ ದುರ್ಬಲ ಕಾಯದ ಈ ವ್ಯಕ್ತಿಯಿಂದ ಏನು ತಾನೇ ಸಾಧ್ಯ ಎಂಬ ಅಸಡ್ಡೆ. ಇದಾಗಿ ಎರಡು ವಾರಗಳಾಗಿವೆಯಷ್ಟೆ. ಅವತ್ತು 1965, ಆಗಸ್ಟ್ 31ನೇ ತಾರೀಖು. ಹೊತ್ತಿಗೆ ಮೊದಲೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಮನೆಗೆ ಬಂದಿದ್ದರು. ಇನ್ನೇನು ಊಟಕ್ಕೆ ಕುಳಿತುಕೊಳ್ಳಬೇಕು. ಹತ್ತಿರಕ್ಕೆ ಬಂದ ಆಪ್ತ ಕಾರ್ಯದರ್ಶಿಯೊಬ್ಬರು ಕಿವಿಯಲ್ಲೇನೋ ಪಿಸುಗುಟ್ಟಿದರು. ಹಸಿವನ್ನೇ […]
Date : 30-09-2013 | 63 Comments. | Read More
ಜಗದೀಶ್ ಶೆಟ್ಟರ್ ಸದಾನಂದ ಗೌಡ ಕೆ.ಎಸ್. ಈಶ್ವರಪ್ಪ ಆರ್. ಅಶೋಕ ಪ್ರಹ್ಲಾದ ಜೋಶಿ ಅನಂತ ಕುಮಾರ್
Date : 22-09-2013 | 87 Comments. | Read More
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು 2014ರ ಲೋಕಸಭೆ ಚುನಾವಣೆಯ ಪ್ರಚಾರಾಂದೋಲನ ಸಮಿತಿಯ ಮುಖ್ಯಸ್ಥರನ್ನಾಗಿ ಬಿಜೆಪಿ ನೇಮಕ ಮಾಡಿದ್ದು ಗೋವಾದಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ಹಾಗೂ ಜೂನ್ 9ರಂದು. ಇಂಥದ್ದೊಂದು ಮಹತ್ವದ ತೀರ್ಮಾನದ ನಂತರ ಸುದ್ದಿಸಂಸ್ಥೆ ರಾಯಿಟರ್ಸ್ನ ವರದಿಗಾರರಾದ ರಾಸ್ ಗಾಲ್ವಿನ್ ಹಾಗೂ ಶೃತಿ ಗೊಟ್ಟಿಪಟಿ ನರೇಂದ್ರ ಮೋದಿಯವರ ಸಂದರ್ಶನಕ್ಕೆ ಕಾಲಾವಕಾಶ ಕೇಳಿದರು. ಕಳೆದ ಜುಲೈ 12ರಂದು ಸಂದರ್ಶನವನ್ನೂ ನಡೆಸಿದರು. ಅವರ ಸಹಜವಾಗಿಯೇ 2002ರ ಗುಜರಾತ್ ಹಿಂಸಾಚಾರವನ್ನು ಪ್ರಸ್ತಾಪಿಸಿದರು.
Date : 22-09-2013 | 57 Comments. | Read More
“2013, ಆಗಸ್ಟ್ 27ರಂದು ಮುಝಫರ್ನಗರ ಹಾಗೂ ಶಾಮ್ಲಿಯಲ್ಲಿ ಹಿಂದು ಹಾಗೂ ಮುಸಲ್ಮಾನರ ನಡುವೆ ಘರ್ಷಣೆ ಆರಂಭವಾಯಿತು. ಮುಝಫರ್ ನಗರದ ಕವಲ್ ಗ್ರಾಮದ ಹಿಂದು ಜಾಟ್ ಸಮುದಾಯಕ್ಕೆ ಸೇರಿದ ಯುವತಿ ಶಾಲೆಗೆ ತೆರಳುವಾಗ ಮುಸ್ಲಿಂ ಯುವಕನೊಬ್ಬ ನಿತ್ಯವೂ ಉಪದ್ರವ ಕೊಡುತ್ತಿದ್ದ, ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದ. ಕೊನೆಗೆ ಯುವತಿಯ ಸಹೋದರರಾದ ಸಚಿನ್ ಸಿಂಗ್ ಹಾಗೂ ಗೌರವ್ ಸಿಂಗ್ ಇಬ್ಬರಲ್ಲಿ ಒಬ್ಬರು ನಿತ್ಯವೂ ಆಕೆಯನ್ನು ಬಸ್ಸಿನವರೆಗೂ ಕಳುಹಿಸಿ ಬರುತ್ತಿದ್ದರು. ಆದರೂ ಮುಸ್ಲಿಂ ಯುವಕ ಶಾನವಾಜ್ ಖುರೇಶಿಯ ಕಾಟ ತಪ್ಪಲಿಲ್ಲ. ಒಂದು ದಿನ […]
Date : 15-09-2013 | 19 Comments. | Read More
ಪ್ರತಿ ವರ್ಷ ಸೆಪ್ಟೆಂಬರ್ 15 ಸಮೀಪಿಸುತ್ತಿದೆಯೆಂದರೆ ಎಷ್ಟೇ ಗಂಭೀರ ವಿಚಾರಗಳಿದ್ದರೂ ವಿಶ್ವೇಶ್ವರಯ್ಯನವರ ಬಗ್ಗೆಯೇ ಬರೆಯುವಂತೆ ಕೈ ಜಗ್ಗುತ್ತದೆ. ಹಾಗೆ ವರ್ಷ ವರ್ಷವೂ ಬರೆಯುವುದರಿಂದ ಹೊಸದಾಗಿ ಹೇಳುವುದಕ್ಕೆ ಏನೂ ಉಳಿದಿಲ್ಲದಿದ್ದರೂ ಹಳೆಯದ್ದನ್ನೇ ಮೆಲುಕು ಹಾಕುವುದರಲ್ಲೂ ಒಂಥರಾ ಧನ್ಯತಾ ಭಾವ ಸಿಗುತ್ತದೆ. ಇಷ್ಟಕ್ಕೂ ಸರ್. ಎಂ. ವಿಶ್ವೇಶ್ವರಯ್ಯ ಎಂಬ ಚೇತನದ ಮಹಿಮೆಯೇ ಅಂಥದ್ದು.
Date : 04-09-2013 | 17 Comments. | Read More
ಯಾಸಿನ್ ಭಟ್ಕಳ್ ರಿಯಾಝ್ ಭಟ್ಕಳ್ ಇಕ್ಬಾಲ್ ಭಟ್ಕಳ್ ಬಿಹಾರದ ಬಳಿಯ ನೇಪಾಳದ ಗಡಿಯಲ್ಲಿ ‘ಇಂಡಿಯನ್ ಮುಜಾಹಿದ್ದೀನ್’ ಎಂಬ ಭಯೋತ್ಪಾದಕ ಸಂಘಟನೆಯ ಸಹಸಂಸ್ಥಾಪಕ ಯಾಸಿನ್ ಭಟ್ಕಳನನ್ನು ಬಂಧಿಸಿರುವ ವಿಷಯ ಗುರುವಾರ ಬೆಳಗ್ಗೆ ಹೊರಬಿದ್ದ ನಂತರ ಸತತವಾಗಿ ಈ ಹೆಸರುಗಳು ನಮ್ಮ ರಾಷ್ಟ್ರೀಯ ಮಾಧ್ಯಮಗಳಲ್ಲಿ ಪದೇ ಪದೆ ಪ್ರಸ್ತಾಪವಾಗುತ್ತಿವೆ. ಯಾಸಿನ್ ಭಟ್ಕಳ್ ಎಂತಹ ಖತರ್ನಾಕ್ ಮನುಷ್ಯ ಎಂಬುದನ್ನು ವಿವರಿಸಲಾಗುತ್ತಿದೆ. ಆತನ ಬಂಧನ ದೇಶದ ಆಂತರಿಕ ಭದ್ರತೆ ವಿಷಯದಲ್ಲಿ ಎಷ್ಟು ದೊಡ್ಡ ಯಶಸ್ಸು ಎಂಬುದನ್ನು ಬಿಡಿಸಿ ಹೇಳಲಾಗುತ್ತಿದೆ. ‘ರಾ’, ‘ಐಬಿ’, ‘ಸಿಬಿಐ’ನ […]
Date : 26-08-2013 | 18 Comments. | Read More
2013, ಜುಲೈ 3ರಂದು ಈಜಿಪ್ಟ್ ಅಧ್ಯಕ್ಷ ಮೊಹಮದ್ ಮೋರ್ಸಿಯವರನ್ನು ಕಿತ್ತೊಗೆದ ನಂತರ ಮೋರ್ಸಿಯವರ ಬೆಂಬಲಕ್ಕೆ ನಿಂತಿರುವ ‘ಮುಸ್ಲಿಂ ಬ್ರದರ್ಹುಡ್’ ಹಾಗೂ ಪ್ರತಿಪಕ್ಷಗಳು-ಉದಾರವಾದಿಗಳ ನಡುವೆ ಆರಂಭವಾದ ಸಂಘರ್ಷಕ್ಕೆ ಇದುವರೆಗೂ 850ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ! ಮತ್ತೊಂದು ಅರಬ್ ರಾಷ್ಟ್ರವಾದ ಸಿರಿಯಾದಲ್ಲಿ ಅಧ್ಯಕ್ಷ ಬಷರ್ ಅಲ್ ಅಸ್ಸಾದ್ ಸೇನೆ ಮುಸ್ಲಿಂ ಬಂಡುಕೋರರ ನಿಯಂತ್ರಣದಲ್ಲಿರುವ ಪ್ರದೇಶಗಳ ಮೇಲೆ ಮೊನ್ನೆ ಬುಧವಾರ ನಡೆಸಿದ ವಿಷಾನಿಲ ದಾಳಿಯಲ್ಲಿ ಮಹಿಳೆಯರು, ಮಕ್ಕಳೆನ್ನದೇ 1300 ಸ್ವಧರ್ಮೀಯರು ಇದ್ದಲ್ಲೇ ಹೆಣವಾಗಿದ್ದಾರೆ!!
Date : 18-08-2013 | 30 Comments. | Read More
2012, ಫೆಬ್ರವರಿ-ಮಾರ್ಚ್. ಉತ್ತರ ಪ್ರದೇಶದ 403 ವಿಧಾನಸಭೆ ಸ್ಥಾನಗಳಿಗೆ ಚುನಾವಣೆ ಏರ್ಪಾಡಾಗಿತ್ತು. ಅದಕ್ಕೂ ಮುನ್ನ 2009ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಅನಿರೀಕ್ಷಿತವಾಗಿ 21 ಸ್ಥಾನಗಳು ದೊರೆತಿದ್ದವು. ಸಾಮಾನ್ಯವಾಗಿ ಕಾಂಗ್ರೆಸ್ನಲ್ಲಿ ಗೆಲುವನ್ನು ನೆಹರು ಕುಟುಂಬದ ತಲೆಗೂ, ಸೋಲನ್ನು ಯಾವುದಾದರೂ ರಾಜ್ಯ ನಾಯಕರು ಅಥವಾ ಪಕ್ಷದ ತಲೆಗೆ ಕಟ್ಟುವುದು ಮೊದಲಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಅಂತೆಯೇ 2009ರ ಗೆಲುವನ್ನು ಕಾಂಗ್ರೆಸ್ಸಿಗರು ರಾಹುಲ್ಗಾಂಧಿಯವರಿಗೆ ಸಮರ್ಪಿಸಿದರು. ಪಾಪ, ಚುನಾವಣೆ ಸಂದರ್ಭದಲ್ಲಿ ಮಾತ್ರ ಕಾಣಿಸಿಕೊಳ್ಳುವ ರಾಹುಲ್ಗಾಂಧಿಯವರೂ ತಮ್ಮ ಸಾಮರ್ಥ್ಯದ ಬಗ್ಗೆ, ನೆಹರು-ಗಾಂಧಿ ಕುಟುಂಬದ ವರ್ಚಸ್ಸಿನ […]
Date : 11-08-2013 | 62 Comments. | Read More
ಈ ದೇಶಕ್ಕೆ ಪ್ರಧಾನಿ ಅನ್ನೋ ಒಬ್ಬ ವ್ಯಕ್ತಿ ನಿಜಕ್ಕೂ ಇದ್ದಾರಾ? ಅಂಥದ್ದೊಂದು ಅನುಮಾನ ನಿಮ್ಮನ್ನು ಕಾಡುತ್ತಿಲ್ಲವೆ? ಒಂದು ವೇಳೆ, ಪ್ರಧಾನಿ ಅನ್ನೋ ವ್ಯಕ್ತಿ ಇದ್ದಿದ್ದರೆ ನಮ್ಮ ಐವರು ಸೈನಿಕರನ್ನು ಪಾಕಿಸ್ತಾನ ಬರ್ಬರವಾಗಿ ಕೊಂದಿದ್ದರೂ ಮಾತನಾಡದೇ ಇರುತ್ತಿದ್ದರೇ? ಪಾಕಿಸ್ತಾನದ ಮುಖಕ್ಕೆ ಹೊಡೆದಂತೆ ಹೇಳದೆ, ಎಚ್ಚರಿಕೆ ಕೊಡದೆ, ಧಮಕಿ ಹಾಕದೆ ಸುಖಾಸುಮ್ಮನೆ ಕುಳಿತುಕೊಳ್ಳುತ್ತಿದ್ದರೇ? ಇಷ್ಟಕ್ಕೂ, ಘಟನೆ ನಡೆದು ನಾಲ್ಕು ದಿನ ಕಳೆದರೂ ಪ್ರಧಾನಿಯೇಕೆ ಬಾಯ್ಬಿಡುತ್ತಿಲ್ಲ? 2013 ಜನವರಿ 8ರಂದು ಜಮ್ಮು-ಕಾಶ್ಮೀರದ ಗಡಿಯಲ್ಲಿ ನಮ್ಮ ಒಬ್ಬ ಸೈನಿಕನ ಕುತ್ತಿಗೆ ಕಡಿದು ಬರೀ […]
Date : 09-08-2013 | 22 Comments. | Read More
ಹಾಗಂತ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಹಾಲಿ ಸರ್ಕಾರವನ್ನು ಹಾಗೂ ಈ ಹಿಂದಿನ ವಾಜಪೇಯಿ ಸರ್ಕಾರವನ್ನೂ ಕೇಳಲೇಬೇಕಾಗಿದೆ. ಇಷ್ಟಕ್ಕೂ ಒಬ್ಬ ತಂದೆಯಾದವನು, ತಾಯಿಯಾದವಳು ಏಕಾಗಿ ತನ್ನ ಕರುಳ ಕುಡಿಯನ್ನು ದೇಶ ಕಾಯಿ ಎಂದು ಕಳುಹಿಸಬೇಕು? ಏಕಾಗಿ ತನ್ನ ಮಗನ ಪ್ರಾಣ ಯಾವ ಕ್ಷಣದಲ್ಲೂ ಬಲಿಯಾಗುವಂಥ ಕಾರ್ಯಕ್ಕೆ ಕಳುಹಿಸಬೇಕು? “ಯಾವ ಸೈನಿಕನೂ ಭಾರತಕ್ಕಾಗಿ ತನ್ನ ಪ್ರಾಣ ತ್ಯಾಗ ಮಾಡಬಾರದು” ಎಂದು ಡಾ. ಎನ್.ಕೆ. ಕಾಲಿಯಾ 2012, ಡಿಸೆಂಬರ್ನಲ್ಲಿ ಏಕಾಗಿ ಹೇಳಿಕೆ ನೀಡಿದ್ದರು? ಅಂಥದ್ದೊಂದು ಹೇಳಿಕೆಯನ್ನು ಕೊಡುವ ಮಟ್ಟಕ್ಕೆ ಕೊಂಡೊಯ್ದ ಅವರ […]