Date : 23-10-2015 | no Comment. | Read More
ನೆಹರು ಸಂಬಂಧಿ ಸೆಹಗಲ್ ಹಾಗೂ ಇತರ ಸೋಗಲಾಡಿಗಳು! “ಇಡೀ ದೇಶಾದ್ಯಂತ ಸರಣಿ ಹಿಂಸಾ ಘಟನೆಗಳು ನಡೆಯುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಮೌನ ತಳೆದಿದ್ದಾರೆ. ಇಂದು ದೇಶವನ್ನಾಳುತ್ತಿರುವುದು ಒಂದು ಫ್ಯಾಸಿಸ್ಟ್ ಸರ್ಕಾರ. ಇಂಥ ಫ್ಯಾಸಿಸ್ಟ್ ಸರ್ಕಾರ ಇತಿಹಾಸದಲ್ಲಿ ಎಂದೂ ದೇಶವನ್ನಾಳಿಲ್ಲ. ಇಷ್ಟಾಗಿಯೂ ಸಾಹಿತ್ಯ ಅಕಾಡೆಮಿ ಮೌನ ತಳೆದಿರುವುದು ಬಹಳ ದುಖಃಕರ ಸಂಗತಿ. ಹಾಗಾಗಿ ನಾನು ಸಾಹಿತ್ಯ ಅಕಾಡೆಮಿಯ ಪುರಸ್ಕಾರವನ್ನು ಹಿಂದಿರುಗಿಸುತ್ತಿದ್ದೇನೆ”. ವ್ಹಾರೆ ವ್ಹಾ! ಅಕ್ಟೋಬರ್ 6 ರಂದು ಇಂಥದ್ದೊಂದು ಪತ್ರಿಕಾ ಹೇಳಿಕೆಯನ್ನು ಹೊರಡಿಸಿ ರಾಷ್ಟ್ರಾದ್ಯಂತ ಸುದ್ದಿಯಾಗುವ ಮೊದಲು […]
Date : 02-10-2015 | no Comment. | Read More
17 ತಿಂಗಳು ಪ್ರಧಾನಿಯಾಗಿದ್ದ ಶಾಸ್ತ್ರೀಜಿ, 17 ವರ್ಷ ಪ್ರಧಾನಿಯಾಗಿದ್ದ ನೆಹರುರನ್ನೇ ಜನಪ್ರಿಯತೆಯಲ್ಲಿ ಮೀರಿಸಿದ್ದರು! ಹತ್ಯಾರೋಂ ಕಾ ಜವಾಬ್, ಹತ್ಯಾರೋಂ ಸೆ ದೇಂಗೆ! ಹಾಗಂತ 1965, ಆಗಸ್ಟ್ 15ರಂದು ಕೆಂಪುಕೋಟೆಯ ಮೇಲೆ ನಿಂತು ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಗುಡುಗಿದಾಗ ಅನುಮಾನಪಟ್ಟವರೇ ಹೆಚ್ಚು. ಜತೆಗೆ ದುರ್ಬಲ ಕಾಯದ ಈ ವ್ಯಕ್ತಿಯಿಂದ ಏನು ತಾನೇ ಸಾಧ್ಯ ಎಂಬ ಅಸಡ್ಡೆ. ಇದಾಗಿ ಎರಡು ವಾರಗಳಾಗಿವೆಯಷ್ಟೆ. ಅವತ್ತು 1965, ಆಗಸ್ಟ್ 31ನೇ ತಾರೀಖು. ಹೊತ್ತಿಗೆ ಮೊದಲೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಮನೆಗೆ […]
Date : 12-09-2015 | no Comment. | Read More
ಡಿ. ದೇವರಾಜ ಅರಸು. ಆ ಹೆಸರು ಕೇಳಿದಾಕ್ಷಣ ಹಲವು ಚಿತ್ರಗಳು ಕಣ್ಣಮುಂದೆ ಬಂದು ನಿಲ್ಲುತ್ತವೆ. “ಅರಸುತನ’ಕ್ಕೆ ತಕ್ಕ ಅಜಾನುಭಾಹು ಶರೀರ, ಹಿಂದುಳಿದ ವರ್ಗದ ಶ್ರೇಯೋಭಿವ್ರದ್ಧಿಯ ಹರಿಕಾರ, ದಾಢಸಿ ಗುಣದ, ಇಂದಿರಾ ಗಾಂಧಿ ಆಪ್ತ ರಾಜಕಾರಣಿಯ, ಹಲವು ದಿಟ್ಟ ನಿರ್ಧಾರಗಳನ್ನು ಕೈಗೊಂಡು ರಾಜ್ಯದಲ್ಲಿಕ್ರಾಂತಿಯನ್ನು ಮಾಡಿದ, ಪ್ರಾದೇಶಿಕ ಪಕ್ಷವನ್ನು ಕಟ್ಟಿದ, ಇಂದಿರಾರಂಥಾ ಇಂದಿರಾರಿಗೇ ಸೆಡ್ಡುಹೊಡೆದ, ರಾಜ್ಯಕ್ಕೆ ’ಕರ್ನಾಟಕ’ ಎಂಬ ನಾಮಕರಣ ಮಾಡಿದ ಮುಖ್ಯಮಂತ್ರಿಯ ಚಿತ್ರ ಕಣ್ಣಮುಂದೆ ಬರುತ್ತದೆ. ದೇವರಾಜ ಅರಸರು ಎಂದರೆ ಇಂಥ ಹಲವು ಚಿತ್ರಣಗಳ ಒಟ್ಟು ಮೊತ್ತ. ಕರ್ನಾಟಕದಲ್ಲಿ […]
Date : 09-05-2015 | no Comment. | Read More
ಕೊಡಗಿನ ಕಾಫಿ ಕುಡಿಯಿರಿ, ಒಳ್ಳೇ ಹಾಕಿ ಆಡಿರಿ ! ಬ್ರಿಟೀಷರ ಕಾಲದಲ್ಲೇ ಕೊಡಗಿಗೆ Coorg-the nursery of Indian hockey ಎಂಬ ಕಿರೀಟ ಇತ್ತು. ಕೊಡಗು ಆ ಹೇಳಿಕೆಗೆ ಕಿಂಚಿತ್ತೂ ಧಕ್ಕೆಯಾಗದಂತೆ ಭಾರತೀಯ ಹಾಕಿಗೆ ಅಮೂಲ್ಯ ರತ್ನಗಳನ್ನು ಕೊಡುತ್ತಲೂ ಬಂತು ಕೂಡ. ಮಾಳೆಯಂಡ ಮುತ್ತಪ್ಪನವರು, ಪೈಕೇರ ಕಾಳಯ್ಯನವರು, ಮಹಾ ತಡೆಗೋಡೆ ಅಂಜಪರವಂಡ ಸುಬ್ಬಯ್ಯನವರು, ಹಾಕಿ ಮಾಂತ್ರಿಕ ಭಾರತ ತಂಡದ ಯಶಸ್ವೀ ನಾಯಕ ಗೋವಿಂದನವರು, ಮಾಜಿ ಕ್ಯಾಪ್ಟನ್ ಮನೆಯಪಂಡ ಸೋಮಯ್ಯನವರು, ಮೊಳ್ಳೆಯ ಗಣೇಶ್ ರವರು, ಅರ್ಜುನ್ ಹಾಲಪ್ಪನವರು, ಒಲಂಪಿಯನ್ […]
Date : 09-03-2014 | 17 Comments. | Read More
ಆಕೆ ಮೂಲತಃ ಉಡುಪಿಯಾಕೆ. ಸಂಸ್ಕೃತ ಹಾಗೂ ವೇದಾಧ್ಯಯನ ಮಾಡುತ್ತಿದ್ದಳು. ನನ್ನ ಕಾಲಂನ ಕಾಯಂ ಓದುಗಳು. ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಲಿಯಲು ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿರುವ ಮೈಲಾಪುರಿಗೆ ಹೋಗಿದ್ದಳು. ಅದು 2006. ಅಲ್ಲಿಗೆ ಹೋದ ಹೊಸದರಲ್ಲೂ ಪ್ರತಿ ಶನಿವಾರ ನನಗೆ ಕರೆ ಮಾಡಿ, ಲೇಖನದ ಪಿಡಿಎಫ್ ತರಿಸಿಕೊಂಡು ಓದುತ್ತಿದ್ದಳು. ಹೀಗೇ ವರ್ಷ ಕಳೆಯಿತು. ಅಚಾನಕ್ ಅವಳಿಂದ ಕರೆ ಬರುವುದೇ ನಿಂತುಬಿಟ್ಟಿತು. ಎರಡೂವರೆ ವರ್ಷ ನಾಪತ್ತೆ. “ಕೂಡಲೇ ನಿನ್ನ ನಂಬರ್ ಕಳುಹಿಸು” ಎಂದು ಮತ್ತೆ ಅವಳಿಂದ ಈ-ಮೇಲ್ ಬಂದಿದ್ದು 2009ರಲ್ಲಿ. […]
Date : 04-03-2014 | 17 Comments. | Read More
ಕಬ್ಬಿಣ ಹಾಗೂ ಉಕ್ಕು ಕಂಪನಿ ಸ್ಥಾಪನೆ ಜಲವಿದ್ಯುತ್ ಉತ್ಪಾದನೆ ವಿಶ್ವದರ್ಜೆಯ ಶೈಕ್ಷಣಿಕ ಸಂಸ್ಥೆಗಳ ನಿರ್ಮಾಣ ಈ ಮೂರೂ ಕನಸುಗಳು ಅವರ ಜೀವಿತಾವಧಿಯಲ್ಲಿ ಸಾಕಾರಗೊಳ್ಳಲಿಲ್ಲ. ಆದರೆ ಅವರ ಉತ್ತರಾಧಿಕಾರಿಗಳಿಗೆ ದಿಕ್ಸೂಚಿಯಾದವು, ದೃಷ್ಟಿಕೋನ ಕೊಟ್ಟವು, ದಾರಿ ದೀಪವಾದವು, ಭಾರತ ನಿರ್ಮಾಣದಲ್ಲಿ ಬಹುಮುಖ್ಯ ಪಾತ್ರ ವಹಿಸಿದವು. ಇಂತಹ ಕನಸುಗಳನ್ನು ಕಂಡಾತ ಈ ದೇಶ ಕಂಡ ಯಾವ ನಾಯಕನೂ ಅಲ್ಲ, ಪ್ರಧಾನಿ, ಮುಖ್ಯಮಂತ್ರಿಗಳೂ ಅಲ್ಲ. ಪಾರ್ಸಿ ಸಮುದಾಯದ ಅರ್ಚಕ ಅಥವಾ ಪೂಜಾರಿಯೊಬ್ಬರ ಮಗ.
Date : 02-03-2014 | 13 Comments. | Read More
ಲೆಫ್ಟಿನೆಂಟ್ ಕಮಾಂಡರ್ ಕಪಿಶ್ ಮುವಾಲ್ ಲೆಫ್ಟಿನೆಂಟ್ ಮನೋರಂಜನ್ ಕುಮಾರ್ ನಮ್ಮ ನೌಕಾ ಪಡೆಯ ರಷ್ಯಾ ನಿರ್ಮಿತ ಜಲಾಂತರ್ಗಾಮಿ “ಸಿಂಧೂರತ್ನ”ದಲ್ಲಿ ಬುಧವಾರ ಸಂಭವಿಸಿದ ಅನಾವಶ್ಯಕ ಅವಘಡದಲ್ಲಿ ಈ ಇಬ್ಬರು ಯುವ ಅಧಿಕಾರಿಗಳು ಅನ್ಯಾಯವಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಬ್ಯಾಟರಿ ದೋಷದಿಂದ ಸಂಭವಿಸಿದ ವಿಷಪೂರಿತ ಅನಿಲ ಇವರನ್ನು ಆಹುತಿ ತೆಗೆದುಕೊಂಡಿದೆ. ಕಳೆದ ಆಗಸ್ಟ್ 14ರಂದು ಭಾರತೀಯ ನೌಕಾ ಪಡೆಯ ಮತ್ತೊಂದು ರಷ್ಯಾ ನಿರ್ಮಿತ ಜಲಾಂತರ್ಗಾಮಿ “ಸಿಂಧೂರಕ್ಷಕ” ಮುಂಬೈ ಬಂದರಿನಲ್ಲಿ ನಿಂತಿರುವಾಗಲೇ ಸ್ಫೋಟಗೊಂಡು 18 ಅಧಿಕಾರಿಗಳು ಸುಟ್ಟು ಕರಕಲಾಗಿದ್ದರು. ಜನವರಿ 17ರಂದು “ಸಿಂಧೂಘೋಷ್” […]