Date : 28-02-2014 | 25 Comments. | Read More
ಅದು 1975, ಜೂನ್ 12. ಅಂದು ಅಲಹಾಬಾದ್ ಹೈಕೋರ್ಟ್ 1971ರಲ್ಲಿ ಇಂದಿರಾ ಗಾಂಧಿಯವರು ಲೋಕಸಭೆಗೆ ಆಯ್ಕೆಯಾಗಿದ್ದನ್ನು ಅನೂರ್ಜಿತಗೊಳಿಸಿ ಐತಿಹಾಸಿಕ ತೀರ್ಪು ನೀಡಿತು. ಅದನ್ನು ಗೌರವಯುತವಾಗಿ ಒಪ್ಪಿಕೊಳ್ಳುವ ಬದಲು ರಾಷ್ಟ್ರದಲ್ಲಿ ಆಂತರಿಕ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂಬ ನೆಪವೊಡ್ಡಿದ ಇಂದಿರಾ ಗಾಂಧಿಯವರು ಜೂನ್ 25ರಂದು ದೇಶದ ಮೇಲೆ ತುರ್ತುಪರಿಸ್ಥಿತಿಯನ್ನು ಹೇರಿದರು. ಆ ಸಂದರ್ಭದಲ್ಲಿ ಕಾಂಗ್ರೆಸ್ಸೇತರ ಪಕ್ಷಗಳೆಲ್ಲ ಒಗ್ಗೂಡಿ ಮರಳಿ ಸ್ವಾತಂತ್ರ್ಯ ಗಳಿಸಿಕೊಳ್ಳುವ ಹೋರಾಟಕ್ಕೆ ಧುಮುಕಿದವು. ತುರ್ತುಪರಿಸ್ಥಿತಿ ಹೇರಿದ ಬೆನ್ನಲ್ಲೇ ನಮ್ಮ ರಾಜಧಾನಿ ದಿಲ್ಲಿಯಲ್ಲಿ ಕಾಮನ್ವೆಲ್ತ್ ರಾಷ್ಟ್ರಗಳ ಸಂಸತ್ ಪ್ರತಿನಿಧಿಗಳ ಅಂತಾರಾಷ್ಟ್ರೀಯ […]
Date : 25-02-2014 | 11 Comments. | Read More
ಸಂತ ಬಂತ ಜೋಕ್ಸ್ ಸರ್ದಾರ್ಜಿ ಜೋಕ್ಸ್ ಮಿಲೇನಿಯಮ್ ಜೋಕ್ಸ್ ಜಾರ್ಜ್ ಬುಷ್ ಜೋಕ್ಸ್ ಜತೆಗೆ ಹಳೆಯ… ಮಲ್ಲು ಜೋಕ್ಸ್ ಲೇಡಿಸ್ ಜೋಕ್ಸ್ ಅಡಲ್ಟ್ ಜೋಕ್ಸ್ ಫನ್ನಿ ಜೋಕ್ಸ್ ಬೀChiಯುವರ ತಿಂಮನ ಜೋಕ್ಸ್ ದಕ್ಷಿಣ ಕನ್ನಡದ ರಾಂಪಣ್ಣ ಜೋಕ್ಸ್ ರಜನೀಕಾಂತ್ ಜೋಕ್ಸ್…. ಇವೆಲ್ಲಕ್ಕಿಂತಲೂ ಅತಿ ಹೆಚ್ಚು ಮಜಾ ಕೊಟ್ಟಿದ್ದು, ತುಂಬಾ ಕ್ರಿಯೇಟಿವ್ ಎನಿಸಿದ್ದು ಇತ್ತೀಚಿನ ಕೇಜ್ರೀವಾಲ್ ಜೋಕ್ಸ್! ಎಲ್ಲರೂ ಭ್ರಷ್ಟರು, ತಾನೊಬ್ಬನೇ ಸುಭಗ, ಸಾಚಾ ಎಂದು ಬಿಂಬಿಸಿಕೊಂಡ ಸಾರ್ವಜನಿಕ ವ್ಯಕ್ತಿಯೊಬ್ಬನ ಮಾತು ಹಾಗೂ ನಡತೆ ನಡುವೆ ವ್ಯತ್ಯಾಸವುಂಟಾದರೆ ಜನ […]
Date : 21-02-2014 | 8 Comments. | Read More
“ಜೀವಾವಧಿ ಶಿಕ್ಷೆಗೆ ಒಳಗಾಗಿರುವ ನಳಿನಿ, ರಾಬರ್ಟ್ ಪ್ಯಾಸ್, ಜಯಕುಮಾರ್ ಹಾಗೂ ರವಿಚಂದ್ರನ್ ಮುಂತಾದ ನಾಲ್ವರ ಜತೆಗೆ ಮುರುಗನ್, ಪೆರಾರಿವಾಲನ್ ಹಾಗೂ ಸಂತನ್ರನ್ನೂ ಬಿಡುಗಡೆ ಮಾಡಲು ಕ್ಯಾಬಿನೆಟ್ ನಿರ್ಧಾರ ತೆಗೆದುಕೊಂಡಿದೆ. ಮುಂದಿನ ಕ್ರಮಕ್ಕಾಗಿ ಈ ನಿರ್ಧಾರವನ್ನು ಕೇಂದ್ರ ಸರ್ಕಾರಕ್ಕೆ ತಿಳಿಸಲಾಗುವುದು. ಒಂದು ವೇಳೆ, 3 ದಿನಗಳೊಳಗಾಗಿ ಕೇಂದ್ರದಿಂದ ಯಾವುದೇ ಪ್ರತಿಕ್ರಿಯೆ ಬರದಿದ್ದರೆ, ಭಾರತೀಯ ಸಂವಿಧಾನ ರಾಜ್ಯಕ್ಕೆ ನೀಡಿರುವ ಹಕ್ಕಿನಡಿ ಎಲ್ಲ 7 ಅಪರಾಧಿಗಳನ್ನೂ ಬಿಡುಗಡೆ ಮಾಡಲಾಗುವುದು”!
Date : 16-02-2014 | 6 Comments. | Read More
ಮೊನ್ನೆ ಮಂಗಳವಾರ ರಾಜಧಾನಿ ದಿಲ್ಲಿಯಲ್ಲಿ “Border and Naxal Management” (ಗಡಿ ಹಾಗೂ ನಕ್ಸಲ್ ನಿರ್ವಹಣೆ) ಎಂಬ ವಿಷಯದ ಮೇಲೆ ವಿಚಾರ ಸಂಕಿರಣವೊಂದು ಏರ್ಪಾಡಾಗಿತ್ತು. ರಕ್ಷಣಾ ವಿಷಯಗಳಿಗೆ ಸಂಬಂಧಿಸಿದ ಚಿಂತಕರ ಚಾವಡಿಯೊಂದು ಅದನ್ನು ಆಯೋಜನೆ ಮಾಡಿತ್ತು. ಅದನ್ನು ಉದ್ದೇಶಿಸಿ ಮಾತನಾಡಿದ ವ್ಯಕ್ತಿ ಯಾವುದೋ ಕೋಮುವಾದಿ ಪಕ್ಷದ ನಾಯಕನೂ ಆಗಿರಲಿಲ್ಲ, ವಕ್ತಾರನೂ ಅಲ್ಲ ಅಥವಾ ಬಲಪಂಥೀಯನಂತೂ ಅಲ್ಲವೇ ಅಲ್ಲ. ಈ ದೇಶದ ಸೇನೆಯ ಮುಖ್ಯಸ್ಥ ಜನರಲ್ ವಿಕ್ರಮ್ ಸಿಂಗ್! ಗಡಿ ವಿಷಯ ಪ್ರಸ್ತಾಪಿಸಿದ ಅವರು “ಬಾಂಗ್ಲಾದೇಶದಿಂದ ಆಗಮಿಸುತ್ತಿರುವ ಅಕ್ರಮ […]
Date : 09-02-2014 | 33 Comments. | Read More
ಕಳೆದ ಮಂಗಳವಾರ ಖ್ಯಾತ ವಿಜ್ಞಾನಿ ಸಿಎನ್ಆರ್ ರಾವ್ ಹಾಗೂ ಕ್ರಿಕೆಟ್ನ ದಂತಕಥೆ ಸಚಿನ್ ತೆಂಡೂಲ್ಕರ್ ಈ ದೇಶದ ಮೇರು ಪುರಸ್ಕಾರವಾದ ಭಾರತ ರತ್ನವನ್ನು ಅತ್ಯಂತ ಧನ್ಯತೆಯಿಂದ ಸ್ವೀಕರಿಸಿದರು. 2013 ನವೆಂಬರ್ 16ರಂದು ಈ ಪುರಸ್ಕಾರಕ್ಕೆ ತಮ್ಮನ್ನು ಆಯ್ಕೆ ಮಾಡಿದಾಗಲೂ ರಾವ್ ಹಾಗೂ ಸಚಿನ್ ಸರ್ಕಾರಕ್ಕೆ ಧನ್ಯತೆಯನ್ನು ವ್ಯಕ್ತಪಡಿಸಿದ್ದರು. ಅದರಲ್ಲಿ ತಪ್ಪೇನೂ ಇಲ್ಲ ಬಿಡಿ. ಆದರೆ ಭಾರತ ರತ್ನಕ್ಕೆ ತಮ್ಮನ್ನು ಆಯ್ಕೆ ಮಾಡಿದಾಗ ಪ್ರಧಾನಿಗೇ ಎಚ್ಚರಿಕೆ ಕೊಟ್ಟ ಮಹಾನುಭಾವರೊಬ್ಬರಿದ್ದಾರೆ ಎಂದರೆ ನಂಬುತ್ತೀರಾ?!
Date : 02-02-2014 | 28 Comments. | Read More
ಏಕೆ ಇಂಥ ಪ್ರಶ್ನೆ ಕೇಳಬೇಕಾಗಿದೆಯೆಂದರೆ… 1. ಕೊಡಗು: ಕದನ ಕಲಿಗಳ ನಾಡು 2. 18ನೇ ಶತಮಾನದಲ್ಲಿ ಮೈಸೂರು ದಸರಾ ವೈಭವ 3. ಸಾವಿರ ಕಂಬದ ಬಸದಿ ಇಂಥ ಮೂರು ವಿಷಯಗಳು ಕರ್ನಾಟಕ ಸರ್ಕಾರದ ಮುಂದಿದ್ದವು. ಗಣರಾಜ್ಯೋತ್ಸವದ ಪರೇಡ್ಗೆ ಇವುಗಳಲ್ಲಿ ಒಂದನ್ನು ಆಯ್ಕೆ ಮಾಡಬಹುದಿತ್ತು. ಆದರೆ… ಕರ್ನಾಟಕದ ವೀರಪುತ್ರರಾದ ಕೊಡವರ ಸೇವೆಯನ್ನು ಸಾರುವ, ನಮ್ಮ ಪರಂಪರೆಯ ಭಾಗವಾಗಿರುವ ದಸರಾದ ವೈಭವವನ್ನು ಪರಿಚಯಿಸುವ, ಸೌಮ್ಯ ಸ್ವಭಾವದ ಜೈನರು ನಮ್ಮ ರಾಜ್ಯಕ್ಕೆ ಕೊಟ್ಟಿರುವ ಕೊಡುಗೆಗೆ ಮನ್ನಣೆ ಕೊಡುವ ಇಂಥ ಅಂಶಗಳನ್ನು ಬಿಟ್ಟು […]
Date : 27-01-2014 | 28 Comments. | Read More
‘ಯಾರಿಗಾಗಿ ಗಣರಾಜ್ಯೋತ್ಸವ? ಇದು ಕೇವಲ ವಿಐಪಿಗಳ ಮನರಂಜನೆಗಾಗಿ ಮಾಡುತ್ತಿರುವ ಕಾರ್ಯಕ್ರಮ. ಇದರಿಂದ ಯಾರಿಗೂ ಉಪಯೋಗವಿಲ್ಲ. ನಾವು ಗಣರಾಜ್ಯೋತ್ಸವಕ್ಕೆ ಅಡ್ಡಿ ಮಾಡುತ್ತೇವೆ’! – ಅರವಿಂದ ಕೇಜ್ರೀವಾಲ್ If you want to test a man’s character, give him power.. ಅಂದರೆ ಒಬ್ಬ ವ್ಯಕ್ತಿಯ ನಿಜವಾದ ಗುಣವನ್ನು ಅರಿಯಬೇಕಾದರೆ ಆತನಿಗೆ ಅಧಿಕಾರ ಕೊಟ್ಟು ನೋಡಬೇಕು ಎಂದು ಅಮೆರಿಕದ ಖ್ಯಾತ ಅಧ್ಯಕ್ಷ ಅಬ್ರಹಾಂ ಲಿಂಕನ್ ಹೇಳಿದ್ದರು. ಆದರೆ ಅರವಿಂದ ಕೇಜ್ರೀವಾಲ್ ಇಷ್ಟು ಬೇಗ ತಮ್ಮ ಬಣ್ಣ ಬಿಡುತ್ತಾರೆ ಎಂದು […]
Date : 19-01-2014 | 22 Comments. | Read More
ಹೆಸರು: ಸರ್ವಾನಂದ ಕೌಲ್ ಸ್ಥಳ: ಶಾಲಿ, ಅನಂತ್ನಾಗ್ ಜಿಲ್ಲೆಯ ಒಂದು ಗ್ರಾಮ ವೃತ್ತಿ: ನಿವೃತ್ತ ಶಿಕ್ಷಕ ಹಾಗೂ ಕಾಶ್ಮೀರಿ ಕವಿ ಸರ್ವಾನಂದ್ ಕೌಲ್ ಅವರು “ಪ್ರೇಮಿ”ಯೆಂದೇ ಪ್ರಚಲಿತರಾಗಿದ್ದರು. ಜಮ್ಮು-ಕಾಶ್ಮೀರ ಶಿಕ್ಷಣ ಇಲಾಖೆಯಲ್ಲಿ 23 ವರ್ಷ ಸೇವೆ ಸಲ್ಲಿಸಿದ್ದ ಅವರದ್ದು ಕಾಶ್ಮೀರಿ ಸಾಹಿತ್ಯದಲ್ಲಿ ದೊಡ್ಡ ಹೆಸರು. ಕವಯತ್ರಿ ರೂಪಾ ಭವಾನಿಯವರ ಜೀವನಗಾಥೆ ಬರೆದಿದ್ದರು, ಸಂತ ಮಿರ್ಜಾ ಕಕ್ರ ಅವರ ಜೀವನಚರಿತ್ರೆ ರಚಿಸಿದ್ದರು. ಶ್ರೀಮದ್ ಭಗವದ್ಗೀತೆಯನ್ನು ಕಾಶ್ಮೀರಿಗೆ ಹಾಗೂ ಉರ್ದುಗೆ ಭಾಷಾಂತರ ಮಾಡಿದ ಹೆಗ್ಗಳಿಕೆ ಹೊಂದಿದ್ದರು. 1924ರಲ್ಲಿ ಜನಿಸಿದ್ದ ಅವರು […]
Date : 12-01-2014 | 11 Comments. | Read More
ಲೇಖಕ ಚಿಂತಕ ಸಾಮಾಜಿಕ ಕಾರ್ಯಕರ್ತ ಗೂಗಲ್ಗೆ ಹೋಗಿ ‘ಕೋಣನ ಚೆನ್ನಬಸಪ್ಪ'(ಕೋ.ಚೆ) ಎಂದು ಟೈಪ್ ಮಾಡಿದರೆ ಈ ಮೇಲಿನ ವಿಶೇಷಣಗಳು, ಗೌರವಸೂಚಕಗಳು ಬರುತ್ತವೆ. ಆದರೆ ಈ ವ್ಯಕ್ತಿ ಹಿಂದೊಮ್ಮೆ ಬರೆದಿರುವ ‘ಹಿಂದು ರಕ್ಷಕ ಟೀಪೂ ಸುಲ್ತಾನ್’ ಹಾಗೂ ಇತ್ತೀಚೆಗಷ್ಟೇ ಹೊರತಂದಿರುವ “ಅಪ್ರತಿಮ ದೇಶಭಕ್ತ ಟೀಪೂ ಸುಲ್ತಾನ್” ಎಂಬ ಹೊತ್ತಗೆಗಳನ್ನು ಓದಿದರೆ ಏನೋ ಬರೆದಿದ್ದಾರೆ ಎಂಬ ಕಾರಣಕ್ಕೆ, ಅವು ಕಳಪೆಯಾಗಿದ್ದರೂ ಲೇಖಕ ಎಂಬುದನ್ನು ಒಪ್ಪಿಕೊಳ್ಳಬಹುದೇ ಹೊರತು, ಅವುಗಳಲ್ಲಿ ಪ್ರತಿಪಾದಿಸಿರುವ ವಿಚಾರಗಳನ್ನು ನೋಡಿದರೆ ಚಿಂತಕ ಎನ್ನುವ ಬದಲು ಅವರ ಮಾನಸಿಕ ಸ್ಥಿತಿ […]
Date : 12-01-2014 | 2 Comments. | Read More
1994, ಏಪ್ರಿಲ್ 29, ಮಧ್ಯಾಹ್ನ 1 ಗಂಟೆಗೆ ಐಮೋಲಾದಲ್ಲಿ ಮೊದಲ ಅರ್ಹತಾ ಸುತ್ತು ಆರಂಭವಾಯಿತು. ಹಾಗೆ ಆರಂಭವಾಗಿ 14 ನಿಮಿಷಗಳಾಗಿವೆ. ಅತ್ಯಂತ ವೇಗದ ಸುತ್ತು ಹಾಕಿದ ಸೆನ್ನಾ ಪಿಟ್ಗೆ ಮರಳುತ್ತಿದ್ದರೆ ಆತನ ಕಣ್ಣ ಮುಂದೆಯೇ, 140 ಮೈಲು ವೇಗದಲ್ಲಿದ್ದ ರೂಬೆನ್ ಬ್ಯಾರಿಕೆಲೋ ಕಾರು ಸಿಮೆಂಟ್ ಗೋಡೆಗೆ ಬಡಿದು ಛಿದ್ರವಾಯಿತು. ಸೆನ್ನಾ ನಡುಗಿ ಹೋದ. ತನ್ನ ಕಾರನ್ನು ನಿಲ್ಲಿಸಿದವನೇ ಆಸ್ಪತ್ರೆಗೆ ಓಡಿಹೋದ. ಅಷ್ಟಕ್ಕೂ ಬ್ಯಾರಿಕೆಲೋ ಸೆನ್ನಾನ ಪಟ್ಟ ಶಿಷ್ಯ, ಜತೆಗೆ ಸಹ ಬ್ರೆಝಿಲಿಯನ್. ಬ್ಯಾರಿಕೆಲೋಗೆ ಪ್ರಜ್ಞೆ ಬಂದು ಕಣ್ಣುತೆರೆದರೆ […]