Date : 28-07-2013 | 20 Comments. | Read More
ಕ್ಯಾಪ್ಟನ್ ವಿಕ್ರಂ ಬಾತ್ರಾ ಕ್ಯಾಪ್ಟನ್ ಹನೀಫುದ್ದೀನ್ ಲೆಫ್ಟಿನೆಂಟ್ ಸೌರಭ್ ಕಾಲಿಯಾ ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ ಮೇಜರ್ ಮರಿಯಪ್ಪನ್ ಸರವಣನ್ ಗ್ರನೇಡಿಯರ್ ಯೋಗೇಂದ್ರ ಸಿಂಗ್ ಯಾದವ್ ಲೆಫ್ಟಿನೆಂಟ್ ಕೀಸಿಂಗ್ ಕ್ಲಿಫೋರ್ಡ್ ನೊಂಗ್ರುಮ್ ರೈಫಲ್ಮನ್ ಮೊಹಮದ್ ಅಸ್ಲಾಂ
Date : 22-07-2013 | 18 Comments. | Read More
ನಮ್ಮ ದೇಶದ ಪರಿಸ್ಥಿತಿ ಹೇಗಿದೆಯೆಂದರೆ ಹತ್ತು ಮಕ್ಕಳಿಗಾಗುವಷ್ಟು ವಿಟಮಿನ್ಯುಕ್ತ ಆಹಾರವನ್ನು ತಟ್ಟೆತುಂಬಾ ತುಂಬಿಕೊಂಡು ಅಯ್ಯೋ ನನ್ನ ಮಗ ತಿನ್ನಲ್ಲ, ಅಯ್ಯೋ ನನ್ನ ಮಗಳು ಬಾಯಿಗೇ ಹಾಕಿಸಿಕೊಳ್ಳುವುದಿಲ್ಲ ಎಂದು ಹಳಹಳಿಸುವ, ಕೊನೆಗೆ ಬಿಸಾಡುವ ತಾಯಂದಿರು ಒಂದು ಕಡೆ, ಇನ್ನೊಂದು ಕಡೆ ಊಟಕ್ಕೂ ಗತಿಯಿಲ್ಲದೆ ತಮ್ಮ ಮಕ್ಕಳಿಗಾದರೂ ಒಂದು ಹೊತ್ತಿನ ಊಟ ಸಿಗಲಿ ಎಂದು ಹಪಾಹಪಿಸುವ ಬಡ ತಾಯಂದಿರು. ಹಾಗೆಯೇ, ಶಾಲೆಗೆ ಕಟ್ಟಿಕೊಟ್ಟ ಡಬ್ಬ ಹಾಗೇ ವಾಪಸ್ ಬಂದೀತು ಎಂಬ ಚಿಂತೆಯಿಂದ, ಚೆನ್ನಾಗಿ ತಿನ್ನಲಿ ಎಂಬ ಬಯಕೆಯಿಂದ ಬಗೆ ಬಗೆಯ […]
Date : 14-07-2013 | 49 Comments. | Read More
Brother, can you spare a dime? ಇಡೀ ಅಮೆರಿಕವನ್ನೇ ತಲ್ಲಣಗೊಳಿಸಿದ ಈ ಹಾಡನ್ನು “Buddy, Can You Spare a Dime?’ ಎಂದೂ ಹಾಡಲಾಗುತ್ತದೆ. ಅದು 1929, ಆಕ್ಟೋಬರ್. ಅಮೆರಿಕದ ಶೇರು ಮಾರುಕಟ್ಟೆ ಕುಸಿದು ಬಿದ್ದಿತ್ತು, ಶೇರುಗಳ ಬೆಲೆ ಒಂದೇ ಕ್ಷಣದಲ್ಲಿ 40 ಪರ್ಸೆಂಟ್ ಮೌಲ್ಯ ಕಳೆದುಕೊಂಡಿದ್ದವು. ಇದಾದ ಬಳಿಕವೂ ರಾಜಕಾರಣಿಗಳು, ಕೈಗಾರಿಕೋದ್ಯಮಿಗಳು ಚೇತರಿಕೆಯ ಭರವಸೆಯನ್ನು ನೀಡುತ್ತಲೇ ಇದ್ದರು. ಆದರೇನಂತೆ ದೇಶದ ಅರ್ಥವ್ಯವಸ್ಥೆ ಮಾತ್ರ ಪಾತಾಳ ಸೇರಲಾರಂಭಿಸಿತು, ಭರವಸೆಯ ಹನಿಗಳು ಆವಿಯಾಗಿ ಹೋದವು, ಬಹಳಷ್ಟು ಜನ […]
Date : 07-07-2013 | 6 Comments. | Read More
2013ನೇ ಸಾಲಿನ ವಿಂಬಲ್ಡನ್ ಚಾಂಪಿಯನ್ಶಿಪ್ ಜೂನ್ 24ರಂದು ಆರಂಭವಾದಾಗ ಭಾರೀ ಜಿದ್ದಾಜಿದ್ದಿನ ಹೋರಾಟವನ್ನು ನಿರೀಕ್ಷೆ ಮಾಡಲಾಗಿತ್ತು. ಗಾಯದ ಸಮಸ್ಯೆಯಿಂದ ಹೊರಬಂದು ಫ್ರೆಂಚ್ ಓಪನ್ ಗೆದ್ದ ರಾಫೆಲ್ ನಡಾಲ್ ಈ ಬಾರಿ ಪ್ರಬಲ ಪೈಪೋಟಿ ನೀಡುತ್ತಾರೆ ಎಂದೇ ಭಾವಿಸಲಾಗಿತ್ತು. ಕಳೆದ ಎರಡು-ಮೂರು ವರ್ಷಗಳಲ್ಲಿ ತೀವ್ರ ಇಳಿಮುಖ ಕಂಡಿರುವ ರೋಜರ್ ಫೆಡರರ್ ವಿಂಬಲ್ಡನ್ ಗೆದ್ದು ಹಳೆಯ ಸ್ಪರ್ಶವನ್ನು ಮತ್ತೆ ತೋರಲು ಪ್ರಾಣವನ್ನೇ ಪಣಕ್ಕಿಟ್ಟಂತೆ ಹೋರಾಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಇನ್ನು ಕಳೆದ ವರ್ಷದ ವಿಂಬಲ್ಡನ್ ಫೈನಲ್ನಲ್ಲಿ ಫೆಡರರ್ ಎದುರು ಸೋತರೂ ವರ್ಷದ […]
Date : 01-07-2013 | 11 Comments. | Read More
ಅದೊಂದು ಮಧ್ಯರಾತ್ರಿ! ಅಂದು ನಾನು ಎಚ್ಚರವಾಗಿಯೇ ಇದ್ದೆ. ಮೇಲ್ಛಾವಣಿಯನ್ನು ದಿಟ್ಟಿಸುತ್ತಿದ್ದೆ. ತಲೆಯೊಳಗೆ ನಮ್ಮ ವಿಚಾರಣೆಯ ಚಿತ್ರಣಗಳು ಗಿರಕಿ ಹೊಡೆಯುತ್ತಿದ್ದವು. ನನ್ನನ್ನು ಕೊಠಡಿಯೊಂದರೊಳಗೆ ಕೂಡಿಹಾಕಲಾಗಿತ್ತು ಎಲ್ಲರಿಂದ ದೂರದಲ್ಲಿ. ಅದೇ ವೇಳೆಗೆ ಯಾರೋ ಹಾಲ್ ಕಡೆ ಹೆಜ್ಜೆ ಹಾಕುತ್ತಿರುವ ಸಪ್ಪಳ ಕೇಳಿಸಿತು. ಅಷ್ಟರಲ್ಲಿ ಕದ ತಟ್ಟಿದ ಶಬ್ದವಾಯಿತು. ಕಬ್ಬಿಣದ ಸರಳುಗಳ ಮಧ್ಯೆ ಕರ್ನಲ್ ಆಕ್ಯಾಂಪ್ ಅವರ ಮುಖ ಕಂಡಿತು. ‘ಮಂಡೇಲಾ, ಎಚ್ಚರವಿರುವೆಯಾ?’ ಎಂದರು ಪಿಸುಧ್ವನಿಯಲ್ಲಿ.
Date : 22-06-2013 | 40 Comments. | Read More
ಟೋಪಿ ಔರ್ ತಿಲಕ್! ಕಳೆದ ಏಪ್ರಿಲ್ನಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ದಾಮೋದರದಾಸ್ ಮೋದಿಯವರನ್ನು ಪರೋಕ್ಷವಾಗಿ ಕುಟುಕುತ್ತಾ, “ಕಭಿ ಟೋಪಿ ಭಿ ಪಹನ್ನಾ ಪಡ್ತಾ ಹೈ, ಕಭಿ ಟಿಕಾ ಭಿ ಲಗಾನಾ ಪಡ್ತಾ ಹೈ”, ಅಂದರೆ ಕೆಲವೊಮ್ಮೆ ಟೋಪಿಯನ್ನೂ(ಮುಸಲ್ಮಾನರ) ಹಾಕಬೇಕಾಗುತ್ತದೆ, ತಿಲಕವನ್ನೂ(ಹಿಂದುಗಳ) ಇಟ್ಟುಕೊಳ್ಳಬೇಕಾಗುತ್ತದೆ ಎಂದಾಗಲೇ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರರ ನಿಜ ಬಣ್ಣ, ಉದ್ದೇಶ ಬಯಲಾಗಿತ್ತು. ಮುಂದುವರೆದು, “ಕೇವಲ್ ಹವಾ ಬನಾನೆ ಸೆ ಕುಛ್ ನಹೀ ಹೋಗಾ” ಎಂದಾಗಲಂತೂ ಅವರು ನರೇಂದ್ರ ಮೋದಿಯವರ ಬಗ್ಗೆ ಮತ್ಸರ ಹೊಂದಿದ್ದಾರೆ ಮಾತ್ರವಲ್ಲ, […]
Date : 17-06-2013 | 14 Comments. | Read More
ಇದ್ದ ಒಬ್ಬ ಮಗನನ್ನೂ ಮೃತ್ಯು ಕಿತ್ತುಕೊಳ್ಳುವ ಭಯ, ಆತಂಕ ಮುಖ, ಮನಸ್ಸು ಎಲ್ಲವನ್ನೂ ಆವರಿಸಿದೆ. ಅಂತಹ ಸ್ಥಿತಿಯಲ್ಲಿ ಡಾ. ವೆಸ್ ಪೇಸ್ ಮುಂಬೈ ವಿಮಾನ ನಿಲ್ದಾಣದಲ್ಲಿ ನಿಂತಿದ್ದಾರೆ. ಅಷ್ಟರಲ್ಲಿ ಪರಿಚಿತವಲ್ಲದ ನಂಬರೊಂದರಿಂದ ಅವರ ಮೊಬೈಲ್ಗೆ ಮೆಸೇಜ್ ಬಂತು- “ಬಾಂಬೆ ಹಾಸ್ಪಿಟಲ್ನ ಡಾ. ಭೀಮ್ಸಿಂಘಾಲ್ರನ್ನು ಕೂಡಲೇ ಸಂಪರ್ಕಿಸಿ”. ಆ ಸಂದೇಶವನ್ನು ಕಳುಹಿಸಿದ್ದವರು ಉದ್ಯಮಿ ಪಾರ್ಥಿವ್ ಕಿಲಾಚಂದ್. ಅವರ ಪತ್ನಿಯ ಮೆದುಳಿನಲ್ಲಿ ಗಡ್ಡೆಯೊಂದು ಬೆಳೆದಿತ್ತು. ಶಸ್ತ್ರಚಿಕಿತ್ಸೆಗಾಗಿ ನ್ಯೂಯಾರ್ಕ್ಗೆ ಹೋದರೂ ಫಲಕಾರಿಯಾಗದೆ ವಾಪಸ್ ಬಂದಿದ್ದರು. ಹೀಗೆ ಯಾವುದೇ ದಾರಿ ಕಾಣದೆ ಕೈಚೆಲ್ಲಿ […]
Date : 02-06-2013 | 20 Comments. | Read More
ಇದನ್ನು ಸಮರ್ಥಿಸಿಕೊಳ್ಳಲು ಸಾಧ್ಯವೇ ಇಲ್ಲ. ಒಂದು ಕಣದಷ್ಟಾದರೂ ವಿಶ್ವಾಸಾರ್ಹತೆ ಉಳಿದಿದೆಯೇ? ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಕೂಡಲೇ ರಾಜಿನಾಮೆ ನೀಡಬೇಕು! -ಕಮಲ್ನಾಥ್, ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಒಂದು ವೇಳೆ ನಿಮ್ಮ ಕುಟುಂಬ ಸದಸ್ಯನೊಬ್ಬನ ಮೇಲೆ ಅವ್ಯವಹಾರದ ಆರೋಪ ಬಂದರೆ ಋಜುವರ್ತನೆ, ನಡವಳಿಕೆಯ ಪ್ರಕಾರ ಯಜಮಾನ ರಾಜಿನಾಮೆ ನೀಡಲೇಬೇಕು. ಶ್ರೀನಿವಾಸನ್ ಜಾಗದಲ್ಲಿ ನಾನಿದ್ದರೆ ನಾನೂ ಅದನ್ನೇ ಮಾಡುತ್ತಿದ್ದೆ. -ಜ್ಯೋತಿರಾದಿತ್ಯ ಸಿಂಧಿಯಾ, ಕೇಂದ್ರ ವಾಣಿಜ್ಯ,ಕೈಗಾರಿಕಾ ಖಾತೆ ರಾಜ್ಯ ಸಚಿವ ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಅವರು ನೈತಿಕ […]
Date : 26-05-2013 | 11 Comments. | Read More
“ಆ ಕರಾಳ ರಾತ್ರಿ ಕಳೆದು ಮೂವತ್ತೈದು ವರ್ಷಗಳೇ ಆದವು. ಕಾಲ ಉರುಳೇ ಬಿಟ್ಟಿತು ಎಂಬಂತೆ ಭಾಸವಾಗುತ್ತಿದೆ. ಆದರೆ ಹಸಿ ನೆನಪುಗಳು ಇನ್ನೂ ದಿಟ್ಟಿಸಿ, ದುರುಗುಟ್ಟಿ ನೋಡುತ್ತಿವೆ. ನನ್ನ ಮಟ್ಟಿಗೆ ನೌಕಾಪಡೆಯೆಂಬುದು ಮನೆಯಾಚೆಗಿನ ಮನೆ. ಯಾವತ್ತೂ ನೆರವಿಗೆ ಬಂದಿದೆ. ಸಹೋದರತ್ವ, ಕೌಟುಂಬಿಕ ಬೆಸುಗೆ ಮತ್ತು ರಾಷ್ಟ ರೂಪಿಸುವುದು- ಇವುಗಳಿಗೆ ಅತ್ಯುತ್ತಮ ಉದಾಹರಣೆಯೆಂದರೆ ಸೇನಾ ಪಡೆ. ಇಂತಹ ಮಹಾನ್ ಸೇನಾ ಕುಟುಂಬದ ಭಾಗವಾಗಿ ನನ್ನನ್ನು ಸ್ವೀಕರಿಸಿದ್ದಕ್ಕಾಗಿ ಧನ್ಯವಾದಗಳು”.
Date : 05-05-2013 | 19 Comments. | Read More
ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಯಾವ ಮುಖವಿಟ್ಟುಕೊಂಡು ಬಂದು ಪ್ರಚಾರ ಮಾಡುತ್ತಾರೆ? ಇಂಥದ್ದೊಂದು ಭ್ರಷ್ಟ ಆಡಳಿತವನ್ನು ಕೊಟ್ಟ ಸರ್ಕಾರಕ್ಕೆ ಮತ್ತೆ ಮತ ಕೊಡಿ, ಪುನರಾಯ್ಕೆ ಮಾಡಿ ಎಂದು ಹೇಗೆ ತಾನೇ ಕೇಳಿಯಾರು? ಮತ ಕೊಡಿ ಎಂದು ಕೇಳುವಾಗ ಕೊಡಲು ಕಾರಣಗಳಾದರೂ ಯಾವಿವೆ ಹೇಳಿ? ಹಾಗಂತ ಕೆಲವರು ಕುಹಕವಾಡುತ್ತಿದ್ದರು.