Date : 23-02-2013 | 26 Comments. | Read More
ಮೊನ್ನೆ ಫೆಬ್ರವರಿ 6ರಂದು ಹೊಸದಿಲ್ಲಿಯ ಪ್ರತಿಷ್ಠಿತ ಶ್ರೀರಾಮ್ ಕಾಲೇಜ್ ಆಫ್ ಕಾಮರ್ಸ್ನಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮಾತಿಗೆ ನಿಲ್ಲುವವರಿದ್ದರು. ಒಂದರ ಹಿಂದೆ ಒಂದರಂತೆ ಹೊರಬರುತ್ತಿರುವ ಚುನಾವಣಾ ಸಮೀಕ್ಷೆಗಳು, ಮೋದಿಯೇ ಮುಂದಿನ ಪ್ರಧಾನಿಯಾಗಬೇಕೆಂಬುದು ಬಹುಜನರ ಅಪೇಕ್ಷೆಯಾಗಿದೆ ಎಂಬ ಜನಾಭಿಪ್ರಾಯಗಳು, ಅದಕ್ಕೂ ಪೂರ್ವದಲ್ಲಿ ನಡೆದ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಸಾಧಿಸಿದ ಸತತ ಮೂರನೇ ವಿಜಯ, ಮೋದಿಯೇ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಬೇಕೆಂಬ ಕಾರ್ಯಕರ್ತರು ಹಾಗೂ ಕೆಲ ದೊಡ್ಡ ನೇತಾರರ ಕರೆಗಳ ಹಿನ್ನೆಲೆಯಲ್ಲಿ ಮೋದಿಯವರ ಶ್ರೀರಾಮ್ ಕಾಲೇಜಿನ ಭಾಷಣಕ್ಕೆ ಇನ್ನಿಲ್ಲದ ಮಹತ್ವ […]
Date : 15-02-2013 | 8 Comments. | Read More
Netaji Subhash Chandra Bose and Germany! ಈ ಹೆಸರಿನ ಪುಸ್ತಕವೊಂದು ಮೊನ್ನೆ ಬುಧವಾರ ರಾಷ್ಟ್ರಪತಿ ಭವನದಲ್ಲಿ ಬಿಡುಗಡೆಯಾಯಿತು. ಅದನ್ನು ಬರೆದವರು ಮತ್ತಾರೂ ಅಲ್ಲ ನೇತಾಜಿ ಸುಭಾಶ್ಚಂದ್ರ ಬೋಸರ ಏಕಮಾತ್ರ ಪುತ್ರಿ ಪ್ರೊ.ಅನಿತಾ ಬೋಸ್ ಫಾಫ್! ಪುಸ್ತಕವನ್ನು ಬಿಡುಗಡೆ ಮಾಡಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ‘ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನೇತಾಜಿ ಪಾತ್ರ ತುಂಬಾ ವಿಶಿಷ್ಟವಾದುದು. ‘ಇಂದಿಗೂ’ ನೇತಾಜಿ ಭಾರತೀಯರೆಲ್ಲರಿಗೂ ಪ್ರೇರಕರಾಗಿದ್ದಾರೆ’ ಎಂದರು.
Date : 05-02-2013 | 7 Comments. | Read More
2009, ಫೆಬ್ರವರಿ 16ರಂದೂ ಹೀಗೆಯೇ ಆಗಿತ್ತು. ಕೆಎಸ್ಆರ್ಪಿ ಕಾನ್ಸ್ಟೆಬಲ್ ಶಿವಕುಮಾರ್ ರಜೆ ಮೇಲೆ ತೆರಳಿದ್ದರು. ಆದರೆ ಕಮಾಂಡೆಂಟ್ ರಜೆ ದಯಪಾಲಿಸಿದ್ದರೂ ಅವರ ಕೆಳಗಿನ ಇನ್ಸ್ಪೆಕ್ಟರ್ ನಾಗೇಗೌಡರಿಗೆ ಸಹಿಸಲಾಗಲಿಲ್ಲ. ಆ ರಜೆಯನ್ನು ಕಡಿತ ಮಾಡಿ, ವಾಪಸ್ ಬಾ ಎಂದರು. ಶಿವಕುಮಾರ್ಗೂ ಹತಾಶೆಯ ಕಟ್ಟೆಯೊಡೆಯಿತು, ಬಂದೂಕನ್ನೆತ್ತಿ ಇನ್ಸ್ಪೆಕ್ಟರ್ ನಾಗೇಗೌಡರ ಎದೆ ಸೀಳಿ, ಕೆಳಕ್ಕುರುಳಿಸಿದ. ಅಷ್ಟು ಮಾತ್ರವಲ್ಲ, ತಾನೂ ಆತ್ಮಹತ್ಯೆ ಮಾಡಿಕೊಂಡ. ಕಳೆದ ಭಾನುವಾರ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲೂ ರಕ್ತ ಹರಿಯಿತು. ಗೌರಿಬಿದನೂರಿನಲ್ಲಿ ಕಟ್ಟಿಸಿರುವ ಹೊಸಮನೆಯ ಗೃಹಪ್ರವೇಶಕ್ಕೆ ಕಾನ್ಸ್ಟೆಬಲ್ ಆನಂದ್ ಕುಮಾರ್ […]
Date : 30-01-2013 | 18 Comments. | Read More
ಘಟನೆ-1 ಬುಧವಾರ ರಾತ್ರಿ ತಮಿಳುನಾಡು ಸರ್ಕಾರ ಏಕಾಏಕಿ ಕಮಲ್ ಹಾಸನ್ ಅವರ ‘ವಿಶ್ವರೂಪಂ’ ಚಿತ್ರದ ಬಿಡುಗಡೆಗೆ ಎರಡು ವಾರಗಳ ನಿರ್ಬಂಧ ಹಾಕಿಬಿಟ್ಟಿದೆ! ಈ ಚಿತ್ರ ಮುಸಲ್ಮಾನರು ಹಾಗೂ ಅವರ ನಂಬಿಕೆಗಳಿಗೆ ಘಾಸಿಯುಂಟುಮಾಡುತ್ತದೆ. ಒಂದು ವೇಳೆ, ಚಿತ್ರವನ್ನು ಬಿಡುಗಡೆ ಮಾಡಿದ್ದೇ ಆದರೆ ಸಾಮಾಜಿಕ ಸೌಹಾರ್ದ ಕದಡಲಿದೆ, ಹಾಗಾಗಿ ಬಿಡುಗಡೆ ಮಾಡಕೂಡದು ಎಂದು ತಮಿಳುನಾಡು ಮುಸ್ಲಿಂ ಮುನ್ನೇತ್ರ ಕಳಗಂ (ಖಿಂಂಓ) ಹಾಗೂ ಅದರ ಶಾಸಕ ಜವಾಹಿರುಲ್ಲಾ ಎಚ್ಚರಿಕೆ ನೀಡಿದ್ದಾರೆ. ಕೆಲವು ದೃಶ್ಯಗಳನ್ನು ಕಿತ್ತು ಹಾಕಿದರೂ ಮುಸಲ್ಮಾನ ಸಮುದಾಯ ಒಪ್ಪುವುದಿಲ್ಲ ಎಂದು […]
Date : 22-01-2013 | 5 Comments. | Read More
Is Muhammad Tahir-ul Qadri replicating the “Arab Spring” in Pakistan? Cleric brings whiff of “Arab Spring” to Pakistan Is Pakistan in for an “Arab Spring”?
Date : 15-01-2013 | 34 Comments. | Read More
ಮಹಾಭಾರತವೆಂದರೆ ಬರೀ ಕೌರವ, ಪಾಂಡವ, ಭೀಷ್ಮರಲ್ಲ. ಅದರ ಉಪಾಖ್ಯಾನದಲ್ಲಿ ಸಾಕಷ್ಟು ಸಾಹಸಗಾಥೆಗಳು, ಶೌರ್ಯ ಕಥೆಗಳು ಬರುತ್ತವೆ. ಅಂಥವುಗಳಲ್ಲಿ ಸಂಜಯ ಎಂಬ ರಾಜನೂ ಒಬ್ಬ. ಆತ ಶತ್ರುಗಳನ್ನು ಹಿಮ್ಮೆಟ್ಟಿಸಲಾಗದೆ ತನ್ನ ರಾಜ್ಯವನ್ನು ಕಳೆದುಕೊಂಡು, ಹೇಡಿಯಾಗಿ ಕುಳಿತಿರುತ್ತಾನೆ. ಇನ್ನು ತನ್ನಿಂದೇನಾಗದು, ರಾಜ್ಯವನ್ನು ಮರಳಿ ಗಳಿಸಲು ಸಾಧ್ಯವಾಗದು ಎಂದು ಕಣ್ಣೀರು ಸುರಿಸುತ್ತಿರುತ್ತಾನೆ. ಅದನ್ನು ಕಂಡ ಆತನ ತಾಯಿ ರಾಣಿ ವಿದುಲಾಳಿಗೆ ಅಸಾಧ್ಯ ಕೋಪವುಂಟಾಗುತ್ತದೆ. ಇವನು ತನ್ನ ಮಗನೇ ಅಲ್ಲ, ನನ್ನ ಗಂಡನಿಗೂ ಹುಟ್ಟಿದವನಲ್ಲ ಎನ್ನುತ್ತಾ, ಮಗನನ್ನು ಉದ್ದೇಶಿಸಿ- ಮುಹೂರ್ತಂ ಜ್ವಲಿತಂ ಶ್ರೇಯೋ […]
Date : 09-01-2013 | 19 Comments. | Read More
ಇಂತಹ ಪ್ರಶ್ನೆಯೊಂದನ್ನು ಕೇಳಲೇಬೇಕಾಗಿದೆ. ಇಷ್ಟಕ್ಕೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಆಡಿರುವ ಮಾತುಗಳಾದರೂ ಎಂಥವು? ಮಾಡಿರುವ ಆರೋಪವಾದರೂ ಎಂಥದ್ದು? ಡಿಸೆಂಬರ್ 20ರಂದು ಗುಜರಾತ್ ಚುನಾವಣಾ ಫಲಿತಾಂಶ ಪ್ರಕಟವಾಗಿ ನರೇಂದ್ರ ದಾಮೋದರದಾಸ್ ಮೋದಿ ಹ್ರಾಟ್ರಿಕ್ ಜಯ ಗಳಿಸಿದಾಗ ಜನಾದೇಶವನ್ನು ಗೌರವಿಸುವ ಬದಲು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಾಡಿದ್ದೇನು? ಡಿಸೆಂಬರ್ 23ರಂದು ‘ಹೆಡ್್ಲೈನ್ಸ್ ಟುಡೆ’ ಚಾನೆಲ್್ಗೆ ನೀಡಿದ ಸಂದರ್ಶನದಲ್ಲಿ ಅವರು ಮುಸ್ಲಿಮರ ವಿರುದ್ಧ ಮಾಡಿದ ಅವಮಾನಕಾರಿ ಆರೋಪವೇನೆಂದುಕೊಂಡಿರಿ?
Date : 02-01-2013 | 18 Comments. | Read More
ಸಂಜಯ್ ಚೋಪ್ರಾ ಗೀತಾ ಚೋಪ್ರಾ ಇವರಿಬ್ಬರೂ ದಕ್ಷಿಣ ದೆಹಲಿಯಲ್ಲಿದ್ದ ಸೇನಾ ಅಧಿಕಾರಿಯೊಬ್ಬರ ಅಪ್ರಾಪ್ತ ವಯಸ್ಸಿನ ಮಕ್ಕಳು. 1978, ಅಗಸ್ಟ್ 16ರಂದು ಇದ್ದಕ್ಕಿದ್ದಂತೆಯೇ ಕಾಣೆಯಾದರು. ಎಲ್ಲಿಗೆ ಹೋದರು ಅಂತ ಯಾರಿಗೂ ತಿಳಿಯದಾಯಿತು. ವಾಸ್ತವದಲ್ಲಿ ಅವರು ಅಪಹರಣಕ್ಕೊಳಗಾಗಿದ್ದರು. ಹಣ ವಸೂಲಿ ಮಾಡುವ ಯೋಜನೆ ಹಾಕಿಕೊಂಡಿದ್ದ ರಂಗ ಖುಷ್ ಅಲಿಯಾಸ್ ಖುಲ್ಜಿತ್ ಸಿಂಗ್ ಹಾಗೂ ಜಸ್ಬೀರ್ ಸಿಂಗ್ (ಬಿಲ್ಲ) ಅವರನ್ನು ಅಪಹರಿಸಿದ್ದರು. ಆದರೆ ಅವರು ಸಾಗುತ್ತಿದ್ದ ಕಾರು ಸಾರ್ವಜನಿಕ ಬಸ್್ಗೆ ಡಿಕ್ಕಿ ಹೊಡೆದ ಕಾರಣ ಇಡೀ ಪ್ಲಾನ್ ಉಲ್ಟಾ ಹೊಡೆಯಿತು. ಹಾಗಂತ […]
Date : 23-12-2012 | 6 Comments. | Read More
Trickeries ಅಂತಾರಲ್ಲ, ಬ್ರೆಝಿಲ್್ನ ರೊನಾಲ್ಡೀನೋ ಥರ ನಿಂತಲ್ಲೇ ಕಾಲನ್ನು ಅಲುಗಿಸುತ್ತಾ ಎದುರಾಳಿ ತಂಡದ ರಕ್ಷಣಾ ಆಟಗಾರರನ್ನು ಮಂಗ ಮಾಡುವುದು, ದಾರಿ, ದಿಕ್ಕು ತಪ್ಪಿಸಿ”ಡಿ’ನೊಳಕ್ಕೆ ನುಗ್ಗುವುದು, ಗೋಲು ಹೊಡೆಯುವುದು ಇವು ಆತನ ಆಟದಲ್ಲಿ ಕಾಣುವುದಿಲ್ಲ. ಒಬ್ಬ ಆಕ್ರಮಣಕಾರಿ ಫುಟ್ಬಾಲ್ ಸ್ಟ್ರೈಕರ್್ಗೆ ಅತ್ಯಗತ್ಯವಾದ Dribbling, Pass, Shootಗಳಲ್ಲಿ ಆತ ವಿಶ್ವದ ಅಗ್ರಮಾನ್ಯ ಆಟಗಾರರಲ್ಲಿ ಒಬ್ಬನೂ ಅಲ್ಲ. ಇಬ್ರಹ್ಮೋವಿಚ್, ಎಟೋ ಥರ ಅತ್ಯಂತ ಮಾರಕ ಗೋಲು ಹೊಡೆಯುವವನೂ ಆತನಲ್ಲ. ಬ್ರೆಜಿಲ್್ನ ದಂತಕಥೆ ಲೂಯಿಸ್ ರೊನಾಲ್ಡೋ ಥರ ಫಿನಿಶಿಂಗ್ ಕೂಡ ಇಲ್ಲ. ಹಾಗಿದ್ದರೂ”ಲೂಯಿಸ್ […]
Date : 23-12-2012 | 24 Comments. | Read More
ಸ್ವಾತಂತ್ರ್ಯ ಬಂದು 66 ವರ್ಷಗಳಾದರೂ ಇಂದಿಗೂ ಅವರನ್ನು ಮಾತ್ರ Man of steel‘ ಅಥವಾ “ಉಕ್ಕಿನ ಮನುಷ್ಯ’ ಎಂದು ಕರೆಯುತ್ತೇವೆ. ಅಂತಹ ಒಬ್ಬ ನಾಯಕ ಮತ್ತೆ ಜನಿಸಲೇ ಇಲ್ಲ. ಈ ಉಕ್ಕಿನ ಮನುಷ್ಯ ಬಾಲಕನಾಗಿದ್ದಾಗ ಕಂಕುಳದ ಕೆಳಗೆ ಕಜ್ಜಿಯಂಥ ಬೊಬ್ಬೆಯೊಂದು ಮೂಡಿತ್ತು. ಈ ರೀತಿಯ ಬೊಬ್ಬೆಗಳಿಗೆ ಆ ಕಾಲದಲ್ಲಿ ಕಾದ ಕಬ್ಬಿಣದ ಸಲಾಕೆಯಿಂದ ಸುಡುವ ಪದ್ಧತಿ ರೂಢಿಯಲ್ಲಿತ್ತು. ಆ ಕೆಲಸ ಮಾಡುತ್ತಿದ್ದ ಅದೇ ಗ್ರಾಮದ ವ್ಯಕ್ತಿಯ ಬಳಿಗೆ ಬಾಲಕನನ್ನು ಕರೆದುಕೊಂಡು ಹೋದರು. ಆತ ಕಬ್ಬಿಣ ಕೆಂಪಾಗುವವರೆಗೂ ಕಾಯಿಸಿದರೂ […]