Date : 14-05-2012 | 16 Comments. | Read More
ಕುಂಬಾರ ವೀರಭದ್ರಪ್ಪ ಆಲಿಯಾಸ್ ಕುಂ. ವೀರಭದ್ರಪ್ಪ ಅಲಿಯಾಸ್ ಕುಂವೀ! ಇವರ ‘ಬೇಟೆ’ ಕೃತಿ ‘ಮನಮೆಚ್ಚಿದ ಹುಡುಗಿ’ಯಾಗಿ ಶಿವರಾಜ್್ಕುಮಾರ್್ಗೆ ಹ್ಯಾಟ್ರಿಕ್ ಹೀರೊ ಪಟ್ಟ ತಂದುಕೊಟ್ಟಿದೆ, ‘ಬೇಲಿಯ ಹೂಗಳು’ ‘ದೊರೆ’ಯಾಗಿದೆ, ‘ಕೆಂಡದ ಮಳೆ ಗೆರೆವಲ್ಲಿ ಉದಕವಾಗಿದ್ದವರ ಕಥೆ’ ‘ಕೆಂಡದ ಮಳೆ’ಯಾಗಿದೆ, ‘ಕೊಟ್ರ ಹೈಸ್ಕೂಲಿಗೆ ಸೇರಿದ್ದು’ ‘ಕೊಟ್ರೇಶಿಯ ಕನಸು’ ಆಗಿ ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರವೆಂಬ ರಾಷ್ಟ್ರೀಯ ಹೆಗ್ಗಳಿಕೆಗೆ ಭಾಜನವಾಗಿದೆ, ‘ಕೂರ್ಮಾವತಾರ’ವೂ ಚಲನಚಿತ್ರವಾಗಿ ಈ ವರ್ಷದ ಕೇಂದ್ರ ರಜತ ಕಮಲ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಅಷ್ಟೇ ಅಲ್ಲ, ಅವರ ‘ಅರಮನೆ’ ಕಾದಂಬರಿಗೆ 2007ರಲ್ಲಿ ಕೇಂದ್ರ […]
Date : 06-05-2012 | 31 Comments. | Read More
ಸರ್ ಮೊಹಮದ್ ಇಕ್ಬಾಲ್ ಎಂದರೆ ಸಾಮಾನ್ಯ ವ್ಯಕ್ತಿಯೇ? ನಮ್ಮೆಲ್ಲರಲ್ಲೂ ರಾಷ್ಟ್ರಪ್ರೇಮವನ್ನು ಬಡಿದೆಬ್ಬಿಸುವ ‘ಸಾರೆ ಜಹಾಂಸೆ ಅಚ್ಛಾ’ ಬರೆದ ಕವಿ ಅವರು. ಭಾರತದ ಬಗ್ಗೆ ಅಪಾರ ಗೌರವ ಹೊಂದಿದವರು. ಇಂತಹ ಅಭಿಪ್ರಾಯವನ್ನು ಇಂದಿಗೂ ಇಟ್ಟುಕೊಂಡಿರುವವರು ಸಾಕಷ್ಟು ಜನರಿದ್ದಾರೆ. ಆದರೂ ನಮ್ಮ ಪತ್ರಿಕೆಯ ‘ಹಿರಿಯರ ಹಾದಿ’ ಅಂಕಣದಲ್ಲಿ ಪ್ರಕಟವಾಗಿದ್ದ ‘ಮೊಹಮದ್ ಇಕ್ಬಾಲರ ದೇಶಪ್ರೇಮ’ ಲೇಖನಕ್ಕೆ ಬಹಳಷ್ಟು ಓದುಗರು ತಗಾದೆ ಎತ್ತಿದರು. ಮೊಹಮದ್ ಇಕ್ಬಾಲ್ ರಾಷ್ಟ್ರಪ್ರೇಮಿಯಾಗಿರಲಿಲ್ಲ, ಆತನೂ ಒಬ್ಬ ಮತಾಂಧನಾಗಿದ್ದ ಎಂದು ಕೆಲವರು ವಾದಿಸಿದರೆ ಉಮರ್ ಫಾರೂಕ್ ಎಂಬ ಓದುಗರು ಇಕ್ಬಾಲರನ್ನು […]
Date : 04-05-2012 | 32 Comments. | Read More
ಭಾರತ ಎಂಬುದೇ ಒಂದು ಬೆರಗು. ಈ ದೇಶದ ಉದ್ದಗಲಕ್ಕೂ ಬೆರಗಿನ ನೂರಾರು ಉದಾಹರಣೆಗಳು ಕಾಣಸಿಗುತ್ತವೆ. ಮನಸ್ಸಿದ್ದರೆ ಏನೆಲ್ಲ ಸಾಧನೆಗಳನ್ನು ಮಾಡಲು ಸಾಧ್ಯ. ಯಾವುದೂ ಅಸಾಧ್ಯವಲ್ಲ ಎಂಬುದಕ್ಕೆ ಹೆಜ್ಜೆಗೊಂದು ಉದಾಹರಣೆ ಸಿಗುತ್ತದೆ. ಅತಿ ಸಾಮಾನ್ಯರು ಅಸಾಮಾನ್ಯ ಸಂಶೋಧನೆಗಳನ್ನು ಮಾಡಿದ್ದಾರೆ. ಈ ಸಾಮಾನ್ಯರು ಸುಶಿಕ್ಷಿತ ಪಂಡಿತರಲ್ಲ. ನುರಿತ ಉದ್ಯಮಿಗಳಲ್ಲ. ಆದರೂ ತಮ್ಮ ವಿವೇಚನೆಯ ಇತಿಮಿತಿಯಲ್ಲೇ ರಿಸ್ಕ್ ತೆಗೆದುಕೊಂಡಿದ್ದಾರೆ. ತಮ್ಮ ಸುತ್ತಲ ಪರಿಸರದ ಬಾಳು ಹಸನಾಗಿಸುವ ಪ್ರಯತ್ನ ಮಾಡಿ ಗೆದ್ದಿದ್ದಾರೆ. ಅಂಥವರ ಪೈಕಿ ತಮಿಳುನಾಡಿನ ಅರುಣಾಚಲಂ ಮುರುಘನಾಥಂ ಕೂಡ ಒಬ್ಬರು. ಶಾಲೆಯನ್ನು […]
Date : 22-04-2012 | 83 Comments. | Read More
ನಮ್ಮ ಅಭ್ಯಂತರವೇನೂ ಇಲ್ಲ! ಇದನ್ನು ಕೆಸರೆರಚಾಟ ಅನ್ನಿ, ವೈಯಕ್ತಿಕ ಆಕ್ರಮಣ ಅನ್ನಿ, ಮಾಧ್ಯಮದ ದುರ್ಬಳಕೆ ಅನ್ನಿ. ಹಾಗೆ ಅಂದುಕೊಳ್ಳುವ ಮುನ್ನ ಕೆಲ ಮೂಲಭೂತ ಪ್ರಶ್ನೆಗಳ ಬಗ್ಗೆಯೂ ಯೋಚಿಸಿ… 1. ಒಂದು ವೇಳೆ ನಿಮ್ಮ ಅಕ್ಕ, ತಂಗಿಯ ಬಗ್ಗೆ ಪತ್ರಿಕೆಗಳಲ್ಲಿ ಚಾರಿತ್ರ್ಯಹರಣ ಮಾಡಿದರೆ… 2. ನಿಮ್ಮ ತಾಯಿಯನ್ನು ನೀತಿಗೆಟ್ಟವಳು ಎಂದು ಬರೆದರೆ… 3. ನೀವೊಬ್ಬ ಯುವಕ/ಯುವತಿಯಾಗಿದ್ದರೆ ನಿಮ್ಮ ಜೀವನದಲ್ಲೂ ಅಫೇರ್ಗಳು, ಗೆಳೆಯ/ಗೆಳತಿಯರು ಇರುತ್ತಾರೆ. ಅವರ ಜತೆ ನೀವು ವಿಹರಿಸುತ್ತಿರುವುದು ಅಥವಾ ಇಂಟಿಮೇಟ್ ಆಗಿರುವುದು ಟ್ಯಾಬ್ಲಾಯ್ಡ್ಗಳಲ್ಲಿ ವರದಿಯಾಗಿ, ನಿಮ್ಮ […]
Date : 21-04-2012 | 11 Comments. | Read More
ಮೇಜರ್ ಬಾರ್ಬರಾ! ಇದು ವಿಶ್ವವಿಖ್ಯಾತ ಲೇಖಕ, ವಿಮರ್ಶಕ, ನೊಬೆಲ್ ಪುರಸ್ಕೃತ ಜಾರ್ಜ್ ಬರ್ನಾರ್ಡ್ ಷಾ ಅವರ ನಾಟಕ. ಈ ಬರ್ನಾರ್ಡ್ ಷಾಗೂ ಬ್ರಿಟನ್್ನ ಲೆಜೆಂಡರಿ ಪ್ರಧಾನಿ ವಿನ್್ಸ್ಟನ್ ಚರ್ಚಿಲ್್ಗೂ ಆಗಾಗ್ಗೆ ಜಟಾಪಟಿ ನಡೆಯುತ್ತಿರುತ್ತಿತ್ತು. ಅದು ಬಹಳಷ್ಟು ಸಲ ಅವಹೇಳನಕಾರಿಯಾಗಿರುತ್ತಿದ್ದರೂ ಆ ನಿಂದನೆಯಲ್ಲೂ ಒಂದು Class, ಶ್ರೇಷ್ಠತೆ ಇರುತ್ತಿತ್ತು. ಒಮ್ಮೆ ‘ಮೇಜರ್ ಬಾರ್ಬರಾ’ ನಾಟಕ ಏರ್ಪಡಾಯಿತು. ಸಾಮಾನ್ಯವಾಗಿ ನಾಟಕಗಳು ರಾತ್ರಿ ವೇಳೆ ನಡೆಯುತ್ತವೆ. ವಿನ್್ಸ್ಟನ್ ಚರ್ಚಿಲ್್ಗೆ ಟೆಲಿಗ್ರಾಂ ಮಾಡಿದ ಬರ್ನಾರ್ಡ್ ಷಾ, “ಫಸ್ಟ್ ನೈಟ್್”ಗೆ (ಮೊದಲ ಪ್ರದರ್ಶನಕ್ಕೆ) ನಿಮಗಾಗಿ […]
Date : 17-04-2012 | 120 Comments. | Read More
ರವಿ ಬೆಳಗೆರೆಯವರೇ, ಬಂಗಾರಪ್ಪನವರಿಗೆ “ಬಂ”, ಗುಂಡೂರಪ್ಪನವರಿಗೆ “ಗುಮ್”, ತೆಳ್ಳಗಿನ ನಟಿ ವಿಮಲಾ ನಾಯ್ಡುಗೆ “ಹಂಚಿಕಡ್ಡಿ”, ಆರೆಸ್ಸೆಸ್ಸಿಗರಿಗೆ “ಚೆಡ್ಡಿ”… ಹೀಗೆ ತೀರಾ ಕೀಳು ಅರ್ಥ ಬರುವ, ಹೆಸರನ್ನು ತಿರುಚುವ ಪರಂಪರೆಯನ್ನು ಕನ್ನಡದಲ್ಲಿ ಮೊದಲು ಆರಂಭಿಸಿದ್ದು ಪಿ. ಲಂಕೇಶ್. ಆ ಕೆಟ್ಟ ಪರಂಪರೆಯನ್ನು ಮೇಲ್ಪಂಕ್ತಿಯಾಗಿ ಇಟ್ಟುಕೊಂಡು ಚಾರಿತ್ರ್ಯಕ್ಕೇ ಕಳಂಕ ಅಂಟಿಸುವಂಥ ಅಡ್ಡ ಹೆಸರುಗಳನ್ನು ಇಡಲು ಆರಂಭಿಸಿದ ಅಪಕೀತರ್ಿ ನಿಮಗೆ ಸಲ್ಲಬೇಕು. ನೀವು ಶೋಭಾ ಕರಂದ್ಲಾಜೆ ಮತ್ತು ಮಾಜಿ ಸಂಸದೆ ತೇಜಸ್ವಿನಿಯವರನ್ನು ಯಾವ ಹೆಸರಿನಿಂದ ಸಂಭೋದಿಸುತ್ತೀರಿ ಎಂಬುದನ್ನು ಒಮ್ಮೆ ನೆನಪುಮಾಡಿಕೊಳ್ಳಿ. ಇನ್ನು […]
Date : 15-04-2012 | 27 Comments. | Read More
ಕಾರ್ಯೇಷು ಮಂತ್ರಿ ಕರಣೇಷು ದಾಸಿ ಭುಕ್ತೌತು ಮಾತಾ ಶಯನೇಷು ವೇಶ್ಯಾ ಧರ್ಮೇಷು ಧರ್ಮಿ ಕ್ಷಮಯಾ ಧರಿತ್ರಿ ಷಟ್ಕರ್ಮ ಯುಕ್ತ ಕುಲಂ ಉದ್ಧರಿತ್ರಿ!
Date : 11-04-2012 | 23 Comments. | Read More
Part-1 www.youtube.com/watch?v=1apfXXG1KUo Part-2
Date : 09-04-2012 | 52 Comments. | Read More
ಅಂದು ಪ್ರಧಾನಿ ಪಿ.ವಿ. ನರಸಿಂಹರಾವ್ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸಿದ್ದರು. ಸ್ವಂತ ಪಕ್ಷದ ನಾಯಕರು, ಮಂತ್ರಿವರ್ಯರಿಗಿಂತ ವಿರೋಧ ಪಕ್ಷದ ನಾಯಕ ಅಟಲ್ ಬಿಹಾರಿ ವಾಜಪೇಯಿಯವರ ಮೇಲೆಯೇ ಹೆಚ್ಚು ವಿಶ್ವಾಸ, ನಂಬುಗೆ ತೋರಿಸಿಬಿಟ್ಟರು. ಅದು 1994. ವಿಶ್ವಸಂಸ್ಥೆಯ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಭಾರತ ವಿರೋಧಿ ಗೊತ್ತುವಳಿಯೊಂದನ್ನು ಹೊರಡಿಸಲು ಭೂಮಿಕೆ ಸಿದ್ಧಗೊಳ್ಳುತ್ತಿತ್ತು. ಕಾಶ್ಮೀರದಲ್ಲಿ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಿ ಜಿನೀವಾದಲ್ಲಿ ನಡೆಯಲಿದ್ದ ವಿಶ್ವಸಂಸ್ಥೆಯ ಶೃಂಗದಲ್ಲಿ ಭಾರತವನ್ನು ಖಂಡಿಸಿ ಗೊತ್ತುವಳಿಯೊಂದನ್ನು ಮಂಡಿಸಲು ನಮ್ಮ ಬದ್ಧ ವಿರೋಧಿ ಪಾಕಿಸ್ತಾನ ಮುಂದಾಗಿತ್ತು. ಅದಕ್ಕೆ ಮುಖ್ಯವಾಗಿ ಮುಸ್ಲಿಂ […]
Date : 02-04-2012 | 53 Comments. | Read More
ಗೃಹ ಸಚಿವ ಪಿ. ಚಿದಂಬರಂ ಅವರಿಗೇ ದಿಗ್ಭ್ರಮೆಯುಂಟಾಗಿದೆ! ಪ್ರತಿಕ್ರಿಯೆ ಕೇಳಿದರೆ, ‘ನ್ಯಾಯಾಲಯದ ತೀರ್ಪಿನಲ್ಲಿ ಉಲ್ಲೇಖಗೊಂಡಿರುವ ವಿಚಾರದ ಬಗ್ಗೆ ಹೇಗೆ ತಾನೇ ಪ್ರತಿಕ್ರಿಯಿಸಲಿ? ಆದರೆ… ಹೈಕೋರ್ಟ್್ನಂಥ ನ್ಯಾಯದಂಗಳದ ತೀರ್ಪಿನಲ್ಲಿ ಈ ರೀತಿಯ ಹೋಲಿಕೆ ಮಾಡಿರುವುದು ದುರದೃಷ್ಟಕರ’ ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ನಮ್ಮ ತಕರಾರೂ ಅದೇ. ಈ ಕ್ಷಣಕ್ಕೆ ಕರ್ನಾಟಕದ ಒಬ್ಬ ಸಾಮಾನ್ಯ ಮನುಷ್ಯನ ಮನವನ್ನೂ ಕಾಡುತ್ತಿರುವುದೂ ಇದೇ ವಿಷಯ. ಹಾಗಂತ ಯಾರೂ ತೀರ್ಪಿನ ಬಗ್ಗೆ ಅಸಮಾಧಾನವನ್ನಾಗಲಿ, ಅಪಸ್ವರವನ್ನಾಗಲಿ ಎತ್ತುತ್ತಿಲ್ಲ. ಆದರೆ ತೀರ್ಪು ನೀಡುವಾಗ ಬಳಸಿರುವ ಭಾಷೆ, ಮಾಡಿರುವ […]