Date : 16-01-2012 | 13 Comments. | Read More
God’s gift to Indian football!! ಹಾಗಂತ ಮೂರು ಬಾರಿ ವರ್ಷದ ಭಾರತೀಯ ಫುಟ್ಬಾಲ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಐ.ಎಂ. ವಿಜಯನ್ ಅವರೇ ಹೇಳಿದ್ದರು. ಭಾರತೀಯ ಫುಟ್ಬಾಲ್ ಕ್ಷೇತ್ರದಲ್ಲಿ ಬೈಚುಂಗ್ ಭುಟಿಯಾ ಸ್ಥಾನವೆಂಥದ್ದು ಎಂಬುದನ್ನು ವಿಜಯನ್ ಮಾತುಗಳಿಂತ ಚೆನ್ನಾಗಿ ಹಿಡಿದಿಡಲು ಸಾಧ್ಯವೇ ಇಲ್ಲ. ಇವತ್ತಿಗೂ ಫುಟ್ಬಾಲ್ ಬಗ್ಗೆ ನಮ್ಮಲ್ಲಿ ಕೆಲವೊಂದು ಮಿಥ್ಯೆಗಳಿವೆ. ಬಹಳ ದೈತ್ಯ, ದೃಢಕಾಯದವರು ಮಾತ್ರ ಆಡಬಹುದಾದ ಆಟವದು, ನಮ್ಮ ಭಾರತೀಯರ ಕೈಯಿಂದಾಗದು, ನಮ್ಮವರು ಬಹುಬೇಗ ಬಳಲುತ್ತಾರೆ, ಕಾಲಿಗೆ ಫೆವಿಕಾಲ್ ಅಂಟಿಸಿಕೊಂಡೂ (ಫುಟ್್ವರ್ಕ್ ಇಲ್ಲದೆಯೂ) […]
Date : 06-01-2012 | 106 Comments. | Read More
ಅವರನ್ನು ನೆನಪಿಸಿಕೊಂಡರೆ ಸಾಕು ಮನಸು ಪುಳಕಿತಗೊಳ್ಳುತ್ತದೆ, ಅವರ ಮಾತುಗಳನ್ನು ಕೇಳಿದರೆ ನರನಾಡಿಗಳಲ್ಲಿ ವಿದ್ಯುತ್ ಸಂಚಾರವಾಗುತ್ತದೆ, ಬದುಕಿಗೆ ಹೊಸ ಪ್ರೇರಣೆ ದೊರೆಯುತ್ತದೆ. ಇಷ್ಟಕ್ಕೂ ಆ ಶಕ್ತಿ ಯಾವುದು? Look down at your feet! The road that is under your feet is the road you have passed over and is the same road that you see before. It will be soon under your feet, March […]
Date : 31-12-2011 | 43 Comments. | Read More
ಅವರು ಏಕಾಗಿ ಅಂಥದ್ದೊಂದು ಕರೆಕೊಟ್ಟಿದ್ದಾರೆ ಅಂದುಕೊಂಡಿರಿ?! ‘ನಮ್ಮ ಜಮ್ಮು-ಕಾಶ್ಮೀರವನ್ನು “ವಿವಾದಿತ ಪ್ರದೇಶ’ ಎಂದು ಕರೆಯಲು ಈ ಚೀನಾಕ್ಕೇನು ಅಂಜಿಕೆ ಇಲ್ಲ. ಆದರೆ ನಾವು ಮಾತ್ರ ತೈವಾನ್ ಬಗ್ಗೆಯಾಗಲಿ, ಟಿಬೆಟ್್ನ ಅಕ್ರಮ ವಶವನ್ನಾಗಲಿ ಪ್ರಶ್ನಿಸದೇ “ಮಹಾ ಚೀನಾ’ ನೀತಿಯನ್ನು ಒಪ್ಪಿಕೊಳ್ಳಬೇಕಂತೆ. ಕಾಶ್ಮೀರ, ಅರುಣಾಚಲಪ್ರದೇಶ ಭಾರತದ ಭಾಗಗಳೆಂದು ಒಪ್ಪಿಕೊಳ್ಳಲು ಒಪ್ಪದ ಚೀನಾ ನಮ್ಮಿಂದ ಮಾತ್ರ ಸಮಗ್ರ ಚೀನಾ ನೀತಿಯನ್ನು ಒಪ್ಪಿಕೊಳ್ಳುವಂತೆ ನಿರೀಕ್ಷಿಸುತ್ತಿರುವುದೇಕೆ? ಅವರು ನಮ್ಮ ದೇಶದ ಸಾರ್ವಭೌಮತೆಯನ್ನು ಪ್ರಶ್ನಿಸುವುದೇ ಆದರೆ, ನಾವೂ ಕೂಡ ಟಿಬೆಟ್ಟನ್ನು ನುಂಗಿರುವ, ತೈವಾನನ್ನು ನುಂಗಲು ಪ್ರಯತ್ನಿಸುತ್ತಿರುವ […]
Date : 24-12-2011 | 29 Comments. | Read More
ಈ ಅನರ್ಘ್ಯರತ್ನಕ್ಕೇಕೆ ನೀಡಿಲ್ಲ ಭಾರತರತ್ನ? ಮೊನ್ನೆ ಡಿಸೆಂಬರ್ 19ರಂದು ಭಾರತೀಯ ವಿಜ್ಞಾನ ಮಂದಿರದಲ್ಲಿ (ಐಐಎಸ್್ಸಿ) ನಡೆದ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿಯವರ ವೈಜ್ಞಾನಿಕ ಸಲಹಾ ಮಂಡಳಿಯ ಮುಖ್ಯಸ್ಥ ಹಾಗೂ ಖ್ಯಾತ ವಿಜ್ಞಾನಿ ಸಿ.ಎನ್.ಆರ್. ರಾವ್, “ಭಾರತರತ್ನ ಕೊಡುವುದಾದರೆ ಹೋಮಿ ಜಹಾಂಗೀರ್ ಭಾಭಾ ಅವರಿಗೆ ಮೊದಲು ಕೊಡಬೇಕು. ನಮ್ಮ ದೇಶದಲ್ಲಿ ವಿಜ್ಞಾನಕ್ಕಿಂತ ಕ್ರಿಕೆಟ್್ಗೇ ಹೆಚ್ಚು ಪ್ರಾಮುಖ್ಯತೆ ದೊರೆಯುತ್ತಿದೆ. ಸಚಿನ್ ತೆಂಡೂಲ್ಕರ್್ಗೆ ಈಗಾಗಲೇ ಪದ್ಮಶ್ರೀ, ಪದ್ಮವಿಭೂಷಣ ನೀಡುವ ಮೂಲಕ ಆತನ ಸಾಧನೆಗೆ ಮನ್ನಣೆ ನೀಡಲಾಗಿದೆ. ಹಾಗಂತ ಅವರಿಗೆ ಭಾರತರತ್ನ ಕೊಡುವುದು ಬೇಡವೆಂದಲ್ಲ. […]
Date : 18-12-2011 | 62 Comments. | Read More
ಈ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ನಿಜಕ್ಕೂ ನಾಚಿಕೆಯೇನಾದರೂ ಇದೆಯೇ? ಇನ್ನೆಷ್ಟು ವರ್ಷ ಇದೇ ರೀತಿ ಸುಳ್ಳು ಹೇಳಿಕೊಂಡು, ಜನರನ್ನು ದಾರಿ ತಪ್ಪಿಸಿಕೊಂಡು ದೇಶವಾಳುತ್ತಾರೆ? ಹೇಗೆ ಬೇಕಾದರೂ ಹೊರಳುವ ಇವರ ನಾಲಗೆಯನ್ನು ನೆಚ್ಚಿಕೊಂಡು ಎಷ್ಟು ದಿನ ಅಂತ ಜನರೂ ಕುಳಿತುಕೊಳ್ಳಬೇಕು? ಮೊನ್ನೆ ಡಿಸೆಂಬರ್ 13ರಂದು ಸಂಸತ್ ಭವನದ ಮೇಲೆ ನಡೆದ ದಾಳಿಗೆ 10 ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ ನಡೆದ ಹುತಾತ್ಮರ ಸ್ಮರಣೆ ಸಮಾರಂಭದಲ್ಲಿ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ಆಡಿರುವ ಮಾತುಗಳಾದರೂ ಎಂಥವು?”ಅಫ್ಜಲ್ ಗುರುವಿನದ್ದೂ ಸೇರಿದಂತೆ 20 […]
Date : 10-12-2011 | 69 Comments. | Read More
ಇದು ಸ್ವೀಕಾರಾರ್ಹವಲ್ಲ, ಸಲ್ಲ!! ಆರು ವಾರಗಳ ಹಿಂದೆ ಫೇಸ್್ಬುಕ್, ಗೂಗಲ್, ಯಾಹೂ ಮತ್ತು ಮೈಕ್ರೋಸಾಫ್ಟ್ ಮುಂತಾದ ಪ್ರಮುಖ ಇಂಟರ್್ನೆಟ್ ಸೇವಾ ಪೂರೈಕೆದಾರ ಆರು ವಾರಗಳ ಹಿಂದೆ ಫೇಸ್್ಬುಕ್, ಗೂಗಲ್, ಯಾಹೂ ಮತ್ತು ಮೈಕ್ರೋಸಾಫ್ಟ್ ಮುಂತಾದ ಪ್ರಮುಖ ಇಂಟರ್್ನೆಟ್ ಸೇವಾ ಪೂರೈಕೆದಾರ ಕಂಪನಿಗಳ ಕಾನೂನು ಸಲಹೆಗಾರರನ್ನು ಹೊಸದಿಲ್ಲಿಯಲ್ಲಿರುವ ತಮ್ಮ ಕಚೇರಿಗೆ ಕರೆಸಿಕೊಂಡಿದ್ದ ಕೇಂದ್ರ ಸಂಪರ್ಕ ಖಾತೆ ಸಚಿವ ಕಪಿಲ್ ಸಿಬಲ್, ಫೇಸ್್ಬುಕ್ ಪ್ರತಿನಿಧಿಯನ್ನು ಬಳಿಗೆ ಕರೆದು ಚಿತ್ರವೊಂದನ್ನು ಮುಂದೆ ಹಿಡಿದು “This is unacceptable’ ಎಂದು ಗುಡುಗಿದ್ದರು. ಕಳೆದ […]
Date : 03-12-2011 | 33 Comments. | Read More
ಯಾವುದೇ ಕಂಪನಿಗಳು ಬಂದರೂ ಉತ್ಪನ್ನಗಳನ್ನು ಸ್ಥಳೀಯವಾಗಿಯೇ ಸಂಗ್ರಹಣೆ ಮಾಡಬೇಕು, ನಮ್ಮ ರೈತರಿಂದಲೇ ಪಡೆದುಕೊಳ್ಳಬೇಕು, ಹೊರಗಿನಿಂದ ಆಮದು ಮಾಡಿಕೊಳ್ಳಬಾರದು, ನಮ್ಮ ನಿಯಂತ್ರಣದಲ್ಲಿರಬೇಕು ಎಂಬ ಷರತ್ತುಗಳನ್ನು ಹಾಕಲು ಸರ್ಕಾರಕ್ಕೇನು ದಾಡಿ? ಹಾಗಾದಾಗ ಯಾರು ತಾನೇ ಎಫ್್ಡಿಐಗೆ ವಿರೋಧ ವ್ಯಕ್ತಪಡಿಸುತ್ತಾರೆ? 1. ವಾಲ್್ಮಾರ್ಟ್ 2. ಕ್ಯಾರ್್ಫೋರ್ 3. ಮೆಟ್ರೋ 4. ಟೆಸ್ಕೋ 5. ಲಿಡ್ಲ್ ಸ್ಟಿಫುಂಗ್ ಆ್ಯಂಡ್ ಕಂಪನಿ 6. ದಿ ಕ್ರೋಗರ್ ಕಂಪನಿ 7. ಕಾಸ್ಟ್್ಕೋ 8. ಅಲ್್ಡಿ(Albrecht Discout) 9. ಹೋಮ್ ಡಿಪೋ 10. ಟಾರ್ಗೆಟ್ ಕಾರ್ಪೋರೇಷನ್ ಅಮೆರಿಕ, […]
Date : 26-11-2011 | 32 Comments. | Read More
ಇದೇನಿದು ಸ್ವಾಮಿ? ಇದೆಂಥಾ ಜಾಡ್ಯ? ಅಲ್ಲಾ, ಪುರಸ್ಕಾರ ಬಂದ ಕೂಡಲೇ ಒಬ್ಬ ವ್ಯಕ್ತಿ ಆ್ಯಕ್ಟಿವಿಸ್ಟ್ ಅಥವಾ ಚಳವಳಿಕಾರನಾಗಿ ಪರಿವರ್ತನೆಯಾಗಬೇಕು ಎಂಬ ನಿಯಮವೇನಾದರೂ ಇದೆಯೇ? ಅಥವಾ ಪುರಸ್ಕಾರವೆಂಬುದು ತಮಗೆ ಸಂಬಂಧಪಡಲಿ, ಬಿಡಲಿ ಎಲ್ಲ ವಿಷಯಗಳ ಬಗ್ಗೆಯೂ ಮಾತನಾಡುವ ಅರ್ಹತೆ ತಂದುಕೊಡುವ ಸ್ಥಾನಮಾನವೇ? ಅಥವಾ ಬಾಯಿಗೆ ಬಂದಂತೆ ಮಾತನಾಡುವ, ಅನ್ಯರ ಬಗ್ಗೆ ಹಗುರವಾಗಿ ಹೇಳಿಕೆ ಕೊಡುವ ಅಧಿಕಾರವೇ? ನೃಪತುಂಗ ಸಾಹಿತ್ಯ ಪ್ರಶಸ್ತಿ ವಿಜೇತರಾದ ಡಾ. ಎಂ.ಎಂ. ಕಲಬುರ್ಗಿಯವರನ್ನು ನೋಡಿದರೆ ಹಾಗನಿಸುತ್ತಿಲ್ಲವೇ? “ನೃಪತುಂಗ ಸಾಹಿತ್ಯ ಪ್ರಶಸ್ತಿ’ಗೆ ಆಯ್ಕೆಯಾದ ನಂತರ ನೀಡಿದ ಸಂದರ್ಶನದಲ್ಲಿ […]
Date : 21-11-2011 | 26 Comments. | Read More
ಮಹಾದೇವ ಗೋವಿಂದ ರಾನಡೆ! ಒಮ್ಮೆ ಅವರು ರೈಲಿನಲ್ಲಿ ಹೊರಟಿದ್ದರು. ಮೊದಲ ದರ್ಜೆ ಬೋಗಿಯಲ್ಲಿ ಪ್ರಯಾಣ ಮಾಡುತ್ತಿದ್ದರು. ಅದೇ ಬೋಗಿಯಲ್ಲಿ ಆಸೀನನಾಗಿದ್ದ ಬಿಳಿತೊಗಲಿನ ಬ್ರಿಟಿಷ್ ಅಧಿಕಾರಿಗೆ ರಾನಡೆಯವರನ್ನು ಕಂಡು ಕಸಿವಿಸಿಯಾಯಿತು. ಭಾರತೀಯರನ್ನು ಗುಲಾಮರಂತೆ ಕಾಣುತ್ತಿದ್ದ, ನಡೆಸಿಕೊಳ್ಳುತ್ತಿದ್ದ ಕಾಲವದು. ಹಾಗಾಗಿಯೇ ಭಾರತೀಯನೊಬ್ಬ ತನ್ನಂತೆಯೇ ಮೊದಲ ದರ್ಜೆ ಬೋಗಿಯಲ್ಲಿ ಪ್ರಯಾಣ ಮಾಡುತ್ತಿರುವುದನ್ನು ಕಂಡು ಆತನ ಕೋಪ ನೆತ್ತಿಗೇರಿತು. ‘ಏ ಗುಲಾಮ, ನಿನ್ನನ್ನು ಒಳಕ್ಕೆ ಬಿಟ್ಟವರ್ಯಾರು?’ ಎಂದು ಅಬ್ಬರಿಸಿದ. ಆದರೆ ರಾನಡೆಯವರು ಮರುಮಾತನಾಡಲಿಲ್ಲ. ಕೊನೆಗೂ ಇಳಿಯುವ ಸ್ಥಳ ಬಂತು. ಹೊರಗೆ ಜನಸಾಗರವೇ ನೆರೆದಿದೆ. […]
Date : 13-11-2011 | 13 Comments. | Read More
The Fight of the Century! ಇಲ್ಲಾ ಇಲ್ಲಾ, ಇದಕ್ಕಿಂತ Thrilla in Manila’ವೇ ಅತ್ಯಂತ ಸಂಘರ್ಷದಿಂದ ಕೂಡಿತ್ತು, ಅದೇ ಅತ್ಯುತ್ತಮ ಸೆಣಸಾಟ ಎನ್ನುವವರು ಸಾಕಷ್ಟಿದ್ದಾರೆ, ಪರಿಣತರಲ್ಲೂ ಏಕಮತವಿಲ್ಲ, ಇಂದಿಗೂ ಆ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಸರಿಸುಮಾರು ನಾಲ್ಕು ದಶಕಗಳ ಹಿಂದೆ ನಡೆದ ಆ ಎರಡು ಸಂಘರ್ಷಗಳನ್ನು ಇವತ್ತು ನೀವು ನೋಡಿದರೂ ಮನಿಲಾದಲ್ಲಿ ನಡೆದ ಜಿದ್ದಾಜಿದ್ದಿಯೇ ವಿಶ್ವ ಹೆವಿವೆಯ್ಟ್ ಬಾಕ್ಸಿಂಗ್ ಇತಿಹಾಸದಲ್ಲಿ ದಾಖಲಾದ ಅತ್ಯಂತ ರೋಚಕ ಹೋರಾಟವೆಂದು ನಿಮ್ಮ ಮನಸ್ಸಿಗನಿಸುತ್ತದೆ. ಅಂದು ಬಾಕ್ಸಿಂಗ್ ರಿಂಗ್್ನೊಳಗೆ ಪರಸ್ಪರರ ರಕ್ತಹೀರುವಂತೆ ಕಾದಾಡಿದ […]