Date : 31-03-2012 | 52 Comments. | Read More
ನಮ್ಮ ಮಾಧ್ಯಮಗಳೇಕೆ ಈ ಪರಿ ನಕಾರಾತ್ಮಕವಾಗಿಬಿಟ್ಟಿವೆ? ಭಾರತೀಯರಾದ ನಾವು ನಮ್ಮ ಶಕ್ತಿ ಸಾಮರ್ಥ್ಯ ಮತ್ತು ಸಾಧನೆಗೇ ಮನ್ನಣೆಕೊಡಲು ಏಕೆ ಹಿಂದೇಟು ಹಾಕುತ್ತೇವೆ? ನಮ್ಮದು ಎಂತಹ ಮಹಾನ್ ದೇಶ, ಅತ್ಯದ್ಭುತ ಸಾಹಸಗಾಥೆಗಳು ನಮ್ಮಲ್ಲಿವೆ. ಆದರೂ ಅವುಗಳನ್ನು ಗುರುತಿಸಲು, ಒಪ್ಪಿಕೊಳ್ಳಲು ನಾವೇಕೆ ಸಿದ್ಧರಿಲ್ಲ? ಹಾಲಿನ ಉತ್ಪಾದನೆಯಲ್ಲಿ ನಾವು ಜಗತ್ತಿನಲ್ಲಿಯೇ ಮುಂದು. ರಿಮೋಟ್ ಸೆನ್ಸಿಂಗ್ ಉಪಗ್ರಹಗಳ ವಿಚಾರದಲ್ಲೂ ನಾವು ಜಗತ್ತಿನಲ್ಲಿಯೇ ನಂಬರ್ 1. ಗೋಧಿ ಉತ್ಪಾದನೆಯಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದ್ದೇವೆ. ಅಕ್ಕಿ ಉತ್ಪಾದನೆಯಲ್ಲೂ ಜಗತ್ತಿನ ಎರಡನೇ ಅತಿ ದೊಡ್ಡ ರಾಷ್ಟ್ರ. […]
Date : 19-03-2012 | 38 Comments. | Read More
ಮೈಕೆಲ್ ಜಾಕ್ಸನ್ ಫ್ರೆಡ್ಡಿ ಮರ್ಕುರಿ ಬ್ರೂಸ್ ಲೀ ಆರ್ನಾಲ್ಡ್ ಸ್ವಾಝನೆಗರ್ ಸಿಲ್ವೆಸ್ಟರ್ ಸ್ಟ್ಯಾಲನ್ ಜಾನ್ ಮೆಕೆನ್ರೋ ಕಾರ್ಲ್ ಲೂಯಿಸ್ ಮಹಮ್ಮದ್ ಅಲಿ ಮೈಕ್ ಟೈಸನ್ ಮಿಖಾಯಿಲ್ ಗೋರ್ಬಚೇವ್ ಈ ಮೇಲಿನ ಒಂದೊಂದು ಹೆಸರೂ ನಮ್ಮೊಳಗೆ ತಲ್ಲಣವುಂಟುಮಾಡಿದಂಥವು. ಇವರೆಲ್ಲರೂ ಆಯಾ ಕಾಲಘಟ್ಟಗಳಲ್ಲಿ ಜಗತ್ತಿನ ಜನರ ಮುಕುಟಮಣಿಗಳಾಗಿದ್ದವರು. ಇಷ್ಟೂ ಜನರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅತಿಮಾನವ ಸಾಧನೆಯ ಮೂಲಕ ನಮ್ಮನ್ನು ದಿಗ್ಭ್ರಮೆಗೊಳಿಸಿದ್ದೂ ಉಂಟು, ಪ್ರೇರಕಶಕ್ತಿಗಳಾಗಿದ್ದೂ ಇದೆ. ಇವತ್ತು ಉಸೈನ್ ಬೋಲ್ಟ್ ಓಟ ಆ ಕ್ಷಣಕ್ಕೆ ನಮ್ಮನ್ನು ಆಶ್ಚರ್ಯಚಕಿತರನ್ನಾಗಿಸಬಹುದು, ಆದರೆ […]
Date : 13-03-2012 | 44 Comments. | Read More
ಅಮೇಥಿ ಜಿಲ್ಲೆಯಲ್ಲಿ ಐದು ವಿಧಾನಸಭೆ ಕ್ಷೇತ್ರಗಳಿವೆ. 1. ತಿಲೋಯಿ 2. ಸಲೋನ್ 3. ಜಗ್್ದೀಶ್್ಪುರ್ 4. ಗೌರಿಗಂಜ್ 5. ಅಮೇಥಿ ರಾಯ್್ಬರೇಲಿ ಜಿಲ್ಲೆಯಲ್ಲೂ ಐದು ಅಸೆಂಬ್ಲಿ ಸ್ಥಾನಗಳಿವೆ. 1. ಬಛ್ರಾವಾನ್ 2. ಹರ್್ಚಂದ್್ಪುರ್ 3. ರಾಯ್್ಬರೇಲಿ 4. ಸರೇನಿ 5. ಉಂಚಾಹರ್ ಅಮೇಥಿಯಲ್ಲಂತೂ ಗಾಂಧಿ ಕುಟುಂಬದ ಸದಸ್ಯರ ವಿರುದ್ಧ ನಿಂತು ಗೆದ್ದವರೇ ಇಲ್ಲ. ಸಂಜಯ್ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಈ ಕ್ಷೇತ್ರದಿಂದ ಗೆದ್ದುಬಂದಿದ್ದು ಕಳೆದೆರಡು ಚುನಾವಣೆಗಳಿಂದ ರಾಹುಲ್ ಗಾಂಧಿ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ರಾಯ್್ಬರೇಲಿಯಲ್ಲಿ […]
Date : 28-02-2012 | 25 Comments. | Read More
Yuvi, I want you to know that the entire LIVESTRONG team is here for you. We say it all the time, and truly believe in it: Knowledge is Power, Unity is Strength, and Attitude is Everything. Please know that we are here to help you and your family in any way possible. Go Yuvi!! Livestrong! […]
Date : 18-02-2012 | 21 Comments. | Read More
ಅಣುಬಾಂಬ್ ತಯಾರಿಸಲು ಅತ್ಯಗತ್ಯವಾದ ಯುರೇನಿಯಂ ಸಂಸ್ಕರಣೆಯ ತಂತ್ರಜ್ಞಾನವನ್ನು ತಾನು ಅಭಿವೃದ್ಧಿಪಡಿಸಿ, ಕಾರ್ಯಾರಂಭಗೊಳಿಸಿದ್ದೇನೆ ಎಂದು ಬುಧವಾರ ಇರಾನ್ ಘೂಷಣೆ ಮಾಡುವುದರೊಂದಿಗೆ ಇಂಥದ್ದೊಂದು ಆತಂಕ ಜಗತ್ತನ್ನು ಆವರಿಸಲಾರಂಭಿಸಿದೆ. ಒಂದು ರೀತಿಯ ಭಯ, ಯುದ್ಧದಿಂದಾಗಬಹುದಾದ ದುಷ್ಪರಿಣಾಮಗಳು ಜಗತ್ತನ್ನು ಕಾಡಹತ್ತಿವೆ. ಅಗ್ಗದ ತೈಲಕ್ಕಾಗಿ ಯಾರ ಜತೆಯೂ ಮಲಗಲು ಸಿದ್ಧವಾಗಿರುವ ಚೀನಾ ಇರಾನ್ ಪರ ನಿಲ್ಲುವ ಮೂಲಕ ಯುದ್ಧದ ಭಯವನ್ನು ಇನ್ನಷ್ಟು ಹೆಚ್ಚಿಸಿದೆ. ಈ ಮಧ್ಯೆ, ಅಣುಚಾಲಿತ ಯುದ್ಧನೌಕೆ ಯುಎಸ್್ಎಸ್ ಅಬ್ರಹಾಂ ಲಿಂಕನ್ ಅನ್ನು ಹಾರ್ಮುಝ್ ಕೊಲ್ಲಿಗೆ ಕಳುಹಿಸಿದ ಅಮೆರಿಕ ಇರಾನ್್ನ ಬಾಗಿಲ ಬಳಿಗೆ […]
Date : 11-02-2012 | 48 Comments. | Read More
ಅಂಥದ್ದೊಂದು ಅನನ್ಯ ಸ್ನೇಹವನ್ನು ನಮ್ಮ ಭಾರತೀಯ ರಾಜಕಾರಣದಲ್ಲಿ ಹಿಂದೆಂದೂ ಕಂಡಿರಲಿಲ್ಲ. ಒಮ್ಮೊಮ್ಮೆ ಅಟಲ್ ಬಿಹಾರಿ ವಾಜಪೇಯಿ ಹಾಗೂ ಲಾಲ್್ಕೃಷ್ಣ ಆಡ್ವಾಣಿಯವರ 50 ವರ್ಷಗಳ ಸುದೀರ್ಘ ಸಂಬಂಧದಲ್ಲೂ ಬಿರುಕುಗಳಿವೆ ಎಂಬಂತೆ ಗೋಚರಿಸಿದ್ದುಂಟು. ಆದರೆ, ತಮಿಳುನಾಡು ಮುಖ್ಯಮಂತ್ರಿ ಕುಮಾರಿ ಜಯಲಿತಾ ಹಾಗೂ ಶಶಿಕಲಾ ಹೇಗಿದ್ದರೆಂದರೆ ಕಲಿಯುಗದ ರಾಮ-ಲಕ್ಷ್ಮಣರಂತೆ. ಒಡಹುಟ್ಟಿದವರ ನಡುವೆಯೂ ಆ ಪರಿಯ ಸ್ನೇಹ-ವಿಶ್ವಾಸವಿರಲು ಸಾಧ್ಯವಿಲ್ಲ ಎಂಬಂತಿತ್ತು. ಒಟ್ಟಿನಲ್ಲಿ ಆ ಸ್ನೇಹಕ್ಕೆ ಸಾಟಿಯೇ ಇಲ್ಲವಾಗಿತ್ತು. ತನಗೆ ವಿವಾಹವಾಗದಿದ್ದರೇನಂತೆ, ಮಕ್ಕಳಿಲ್ಲದಿದ್ದರೇನಂತೆ ಶಶಿಕಲಾಳ ಮಗ ಸುಧಾಕರನನ್ನೇ ತನ್ನ ಮಗನೆಂದು ಭಾವಿಸಿ ಅದ್ಧೂರಿಯಾಗಿ ವಿವಾಹ […]
Date : 04-02-2012 | 34 Comments. | Read More
ಕಳೆದ ನವೆಂಬರ್್ನಲ್ಲಿ ಹೊಸದಿಲ್ಲಿಗೆ ಹೋಗಿದ್ದಾಗ ಖ್ಯಾತ ಇಂಗ್ಲಿಷ್ ವಾರಪತ್ರಿಕೆ ಔಟ್್ಲುಕ್್ನ ಪ್ರಧಾನ ಸಂಪಾದಕರಾಗಿರುವ ಹೆಮ್ಮೆಯ ಕನ್ನಡಿಗ ಕೃಷ್ಣಪ್ರಸಾದ್ ಅವರನ್ನು ಭೇಟಿಯಾಗುವ ಅವಕಾಶ ದೊರೆಯಿತು. ಮಾತಿನ ಮಧ್ಯೆ ಕೃಷ್ಣಪ್ರಸಾದ್ ಕೇಳಿದರು, ‘ನಿನಗೆ ಹೊಸ ಜೋಕು ಗೊತ್ತಾ, ಸಚಿನ್ ತೆಂಡೂಲ್ಕರ್, ಲಾಲ್್ಕೃಷ್ಣ ಆಡ್ವಾಣಿ ಹಾಗೂ ಪೆಟ್ರೋಲ್ ನಡುವೆ ಯಾರು ಮೊದಲು ಸೆಂಚುರಿ ಹೊಡೆಯುತ್ತಾರೆ?!’ -ಪೆಟ್ರೋಲ್! ಅಂಥದ್ದೊಂದು ಜೋಕು ಹುಟ್ಟುವುದಕ್ಕೆ ಕಾರಣವಾದರೂ ಏನಿತ್ತು? ಒಂದೆಡೆ ಇಂಗ್ಲೆಂಡ್್ನಲ್ಲಿ ಆಡಿದ ನಾಲ್ಕೂ ಟೆಸ್ಟ್ ಹಾಗೂ ಏಕದಿನ ಪಂದ್ಯಗಳಲ್ಲಿ ಭಾರತ ಹೀನಾಯವಾಗಿ ಸೋತಿದ್ದು ಮಾತ್ರವಲ್ಲ, ಸಚಿನ್ […]
Date : 01-02-2012 | 30 Comments. | Read More
1945, ಆಗಸ್ಟ್ 18ರಂದು ತೈವಾನ್್ನ ತೈಹೋಕು ಬಳಿ ನಡೆದ ವಿಮಾನ ದುರ್ಘಟನೆಯಲ್ಲಿ ಸುಭಾಶ್ಚಂದ್ರ ಬೋಸ್ ನಿಜಕ್ಕೂ ತೀರಿಕೊಂಡರೆ? ಮೊನ್ನೆ ಜನವರಿ 23ರಂದು ನಡೆದ 115ನೇ ಜನ್ಮದಿನದ ನೆನಪಿಗಾಗಿ ಬರೆದ ಲೇಖನವನ್ನೋದಿದ ಬಹಳಷ್ಟು ಜನರು ನೇತಾಜಿ ಅಂತ್ಯ ಹೇಗಾಯಿತು ಎಂದು ತಿಳಿಯಬಯಸಿ ಪತ್ರ ಬರೆದಿದ್ದಾರೆ. ಅಂಥದ್ದೊಂದು ಪ್ರಶ್ನೆ, ಅದರ ಸುತ್ತ ಹೆಣೆದುಕೊಂಡಿರುವ ಅನುಮಾನಗಳು ಕಳೆದ ಆರೂವರೆ ದಶಕಗಳಿಂದಲೂ ಒಂದು ದೊಡ್ಡ ಮಿಸ್ಟರಿ, ಭೇದಿಸಲಾಗದ ರಹಸ್ಯವಾಗಿ ಭಾರತೀಯರನ್ನು ಕಾಡುತ್ತಿದೆ. ವಿಮಾನ ದುರ್ಘಟನೆಯಲ್ಲಿ ನೇತಾಜಿ ಮಡಿದರು ಎಂಬ ಥಿಯರಿಯನ್ನು ಒಪ್ಪಲು ಈ […]
Date : 23-01-2012 | 66 Comments. | Read More
Give me Blood, I promise you Freedom! ನೀವು ನನಗೆ ರಕ್ತವನ್ನು ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ ಎನ್ನುತ್ತಿದ್ದ ಸುಭಾಶ್ಚಂದ್ರ ಬೋಸ್ ಹಾಗೂ ಮಹಾತ್ಮ ಗಾಂಧೀಜಿ ಇಬ್ಬರ ಆಲೋಚನೆ, ಆಶಯ, ಮಾರ್ಗಗಳು ಸಂಪೂರ್ಣ ಭಿನ್ನವಾಗಿದ್ದವು. ಸ್ವಾತಂತ್ರ್ಯ ಪಡೆಯಲು ಗಾಂಧೀಜಿ ಅನುಸರಿಸಲು ಹೊರಟಿದ್ದ ಮಾರ್ಗದ ಬಗ್ಗೆ ಸುಭಾಷ್ ಮಾತ್ರವಲ್ಲ ಬಾಲಗಂಗಾಧರ ತಿಲಕ್ ಹಾಗೂ ಅರವಿಂದ ಘೋಷ್್ಗೂ ಅಸಮ್ಮತಿಯಿತ್ತು. ರಕ್ತ ಚೆಲ್ಲಿ ಸ್ವಾತಂತ್ರ್ಯ ಪಡೆಯಬೇಕೇ ಹೊರತು, ಗಾಂಧೀ ಪ್ರತಿಪಾದನೆಯ ಗೋಗರೆಯುವ ಮಾರ್ಗದಿಂದ ಯಾವ ಲಾಭವೂ ಇಲ್ಲ ಎಂದು […]
Date : 22-01-2012 | 50 Comments. | Read More
ಅಂಥದ್ದೊಂದು ಸಾಧ್ಯತೆ ದಿನಕಳೆದಂತೆ ದಟ್ಟವಾಗುತ್ತಲೇ ಇದೆ. ಇಷ್ಟಕ್ಕೂ ಇಸ್ರೇಲ್ ಮುಂದೆ ಇರುವ ಮಾರ್ಗಗಳಾದರೂ ಯಾವುವು? ಲೆಬೆನಾನ್, ಜೋರ್ಡಾನ್, ಪ್ಯಾಲೆಸ್ತೀನ್, ಸಿರಿಯಾ, ಈಜಿಪ್ಟ್ ಮುಂತಾದ ಮುಸ್ಲಿಂ ರಾಷ್ಟ್ರಗಳೇ ಅದನ್ನು ಸುತ್ತುವರಿದಿರುವುದು ಮಾತ್ರವಲ್ಲ, ತುಸು ದೂರವಿರುವ ಇರಾನ್್ನ ಅಧ್ಯಕ್ಷ ಮೊಹಮದ್ ಅಹ್ಮದಿನೆಜಾದ್ ಅವರಂತೂ ಇಸ್ರೇಲನ್ನು ಜಗತ್ತಿನ ಭೂಪಟದಿಂದ ಅಳಿಸಿ ಹಾಕುವುದೇ ನಮ್ಮ ಗುರಿ ಎನ್ನುತ್ತಿದ್ದಾರೆ! ಆ ಉದ್ದೇಶಕ್ಕಾಗಿ ಅಣ್ವಸ್ತ್ರ ತಯಾರಿಕೆಯಲ್ಲೂ ತೊಡಗಿದ್ದಾರೆ. ವಿಶ್ವಸಂಸ್ಥೆ ಕೆಲ ದಿಗ್ಬಂಧನೆಗಳನ್ನು ಹೇರಿದ್ದರೂ, ಇನ್ನೂ ಹೆಚ್ಚಿನ ದಿಗ್ಬಂಧನೆಗಳನ್ನು ಹೇರುವುದಾಗಿ ಎಚ್ಚರಿಕೆ ಕೊಟ್ಟಿದ್ದರೂ ಇರಾನ್ ಕ್ಯಾರೇ ಎನ್ನುತ್ತಿಲ್ಲ. […]