Date : 04-08-2012 | 42 Comments. | Read More
ಇಂಥದ್ದೊಂದು ಸಾಧ್ಯತೆಯ ಸೂಚನೆ ಗುರುವಾರವೇ ಹೊರಬಿದ್ದಿತ್ತು.ವಿವಿಧ ಟಿವಿ ಚಾನೆಲ್್ಗಳಲ್ಲಿ ಕಾಣಿಸಿಕೊಡ ಅಣ್ಣಾ ತಂಡದ ಸದಸ್ಯರಾದ ಪ್ರಶಾಂತ್ ಭೂಷಣ್, ಅಣ್ಣಾ ಅವರ ಕಟ್ಟಾ ಬೆಂಬಲಿಗರಾಗಿ ಹೊರಹೊಮ್ಮಿರುವ ನಟ ಅನುಪಮ್ ಖೇರ್ ಅದೇ ಸಂಕೇತಗಳನ್ನು ನೀಡಿದರು. ಒತ್ತಡ ತಂತ್ರದಿಂದ ಸಾಧ್ಯವಾಗಲಿಲ್ಲ ಎಂದ ಮೇಲೆ ನೇರವಾಗಿ ರಾಜಕೀಯ ಪ್ರವೇಶ ಮಾಡುವುದನ್ನು ಬಿಟ್ಟರೆ ಬೇರಾವ ಮಾರ್ಗಗಳಿವೆ ಎಂದು ಪ್ರಶಾಂತ್ ಭೂಷಣ್ ಕೇಳಿದರೆ, ಜವಾಹರಲಾಲ್ ನೆಹರು, ಮೌಲಾನಾ ಅಝಾದ್, ಸರ್ದಾರ್ ಪಟೇಲ್ ಕೂಡ ರಾಜಕಾರಣಿಗಳಾಗುವ ಮೊದಲು ನಮ್ಮಂತೆಯೇ ಚಳವಳಿಕಾರರಾಗಿದ್ದರು ಎಂದು ಅಣ್ಣಾ ತಂಡದ ರಾಜಕೀಯ […]
Date : 28-07-2012 | 51 Comments. | Read More
ಆತ್ಮೀಯ ಆದರಣೀಯ ರಾಷ್ಟ್ರಪತಿಯವರೇ, ನಮ್ಮ ನೆರೆಯ ಪೂರ್ವ ಪಾಕಿಸ್ತಾನ/ ಬಾಂಗ್ಲಾದೇಶದಿಂದ ಕಳೆದ 3 ದಶಕಗಳಿಂದ ಆಗಮಿಸುತ್ತಿರುವ ಆಗಾಧ ಪ್ರಮಾಣದ ಅತಿಕ್ರಮಣಕಾರರು ಅಸ್ಸಾಮ್್ನ ಜನಾಂಗೀಯ ವ್ಯವಸ್ಥೆಯ ಸ್ವರೂಪವನ್ನೇ ಬುಡಮೇಲು ಮಾಡುತ್ತಿದ್ದಾರೆ. ಇದು ಅಸ್ಸಾಮ್ ಜನರ ಐಡೆಂಟಿಟಿಗೆ ಮಾತ್ರವಲ್ಲ, ಭಾರತದ ಭದ್ರತೆಗೆ ಗಂಭೀರ ಅಪಾಯವನ್ನು ತಂದೊಡ್ಡಿದೆ. ರಾಜ್ಯ ಹಾಗೂ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಯಾವೊಂದು ಸರ್ಕಾರಗಳೂ ಈ ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸಿಲ್ಲ.
Date : 21-07-2012 | 83 Comments. | Read More
You may write me down in history With your bitter, twisted lies, You may trod me in the very dirt But still, like dust, I’ll rise.
Date : 14-07-2012 | 56 Comments. | Read More
ಇನ್ನು ಐವತ್ತು ವರ್ಷಗಳ ನಂತರ ಇತಿಹಾಸಕಾರರು ಆಧುನಿಕ ಭಾರತದ ನಿರ್ಮಾತೃಗಳಾರು ಎಂಬ ಪ್ರಶ್ನೆಯನ್ನಿಟ್ಟುಕೊಂಡು ತುಲನೆ ಮಾಡಿದರೆ ನಮ್ಮ ಕಾಲದ ಇಬ್ಬರು ವ್ಯಕ್ತಿಗಳು ಬಹಳ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಾರೆ. ಒಂದು ಪಿ.ವಿ. ನರಸಿಂಹರಾವ್ ಹಾಗೂ ಮತ್ತೊಬ್ಬರು ಅಟಲ್ ಬಿಹಾರಿ ವಾಜಪೇಯಿ. ಒಂದು ವೇಳೆ ನ್ಯಾಯ ಸಂದಿದ್ದೇ ಆದರೆ ಆ ವೇಳೆಗೆ ಇವರಿಬ್ಬರಿಗೂ ‘ಭಾರತರತ್ನ’ ನೀಡಿ ಈ ದೇಶ ಸಮ್ಮಾನಿಸಿರುತ್ತದೆ. ಹಾಗೆಂದು ಬರೆಯಲಾಗಿದೆ, ಕಳೆದ ವಾರ ಇದೇ ಅಂಕಣದಲ್ಲಿ ಉಲ್ಲೇಖಿಸಲಾಗಿದ್ದ “A forgotten Revolutionary’ ಲೇಖನದಲ್ಲಿ! ಈ ಮಾತು ನಿಮಗೆ ಅತಿಶಯೋಕ್ತಿ […]
Date : 10-07-2012 | 13 Comments. | Read More
ನಮ್ಮ ಅರ್ಥವ್ಯವಸ್ಥೆ ಕುಂಟುತ್ತಿದೆ, ಆರ್ಥಿಕ ಅಭಿವೃದ್ಧಿ ದರ ಕುಸಿಯುತ್ತಿದೆ. ರುಪಾಯಿಯ ಮೌಲ್ಯ ಕಳೆದ ನವೆಂಬರ್್ನಿಂದ ಗಣನೀಯವಾಗಿ ಕುಸಿಯುತ್ತಲೇ ಇದೆ. ಕಚ್ಛಾ ತೈಲದ ಬೆಲೆ ಏರದಿದ್ದರೂ ಪೆಟ್ರೋಲ್ ಬೆಲೆ ಮಾತ್ರ ಗಗನಕ್ಕೇರುತ್ತಿದೆ, ಬೆಲೆ ಏರಿಕೆಯ ಬಿಸಿ ಎಲ್ಲ ವರ್ಗವನ್ನೂ ತಟ್ಟುತ್ತಿದೆ. 1991ರಲ್ಲಿ ನಿರ್ಮಾಣವಾಗಿದ್ದ ಪರಿಸ್ಥಿತಿ ಮತ್ತೆ ಮರುಕಳಿಸುತ್ತಿದೆಯೇನೋ ಎಂಬ ಆತಂಕ ಉದ್ಯಮ, ಮಾಧ್ಯಮ ಎಲ್ಲ ವಲಯಗಳಲ್ಲೂ ವ್ಯಕ್ತವಾಗುತ್ತಿದೆ. ಈ ದೇಶದಲ್ಲಿ ಏನೇ ಸಕಾರಾತ್ಮಕ ಬೆಳವಣಿಗೆಗಳಾದರೂ, ಅಭಿವೃದ್ಧಿಯಾದರೂ ಅದಕ್ಕೆಲ್ಲ ಸೋನಿಯಾ ಗಾಂಧಿಯವರೇ ಕಾರಣ, ಆದರೆ ಕೆಡುಕಿಗೆಲ್ಲ ಅನ್ಯರು ಕಾರಣವೆಂಬಂತೆ ಬಿಂಬಿಸುವ […]
Date : 01-07-2012 | 15 Comments. | Read More
ಅವರ ಹೆಸರು ಅರುಣ್ ಕುಮಾರ್. ಅಪ್ಪಟ ಕನ್ನಡಿಗರು. ಮೂಲತಃ ಮೈಸೂರಿನವರು. ದಾವಣಗೆರೆಯ ಬಾಪೂಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದಿದವರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್್ನಲ್ಲಿ ಪದವಿ ಪಡೆದವರು. ಓದಿದ್ದು ಮೆಕ್ಯಾನಿಕಲ್ ಇಂಜಿನಿಯರಿಂಗ್ ಆದರೂ ಅದರಲ್ಲಿ ಒಂದು ಕಂಪ್ಯೂಟರ್ ವಿಷಯಇರುತ್ತಿತ್ತು. ಅರುಣ್ ಕುಮಾರ್್ ಗೆ ಮೆಕ್ಯಾನಿಕಲ್ಗಿಂತ ಕಂಪ್ಯೂಟರ್ನಲ್ಲಿ ಹೆಚ್ಚು ಆಸಕ್ತಿಯಿತ್ತು. ಪದವಿ ಮುಗಿದ ನಂತರ ಕಂಪ್ಯೂಟರ್ ಬಗೆಗಿನ ಗೀಳಿನ ಹಿಂದೆಯೇ ಹೊರಟರು. ಅದು 1980ರ ದಶಕದ ಕೊನೆಯ ಭಾಗ. ಪ್ರತಿಭಾ ಪಲಾಯನದ ಕೂಗು ಮೊಳಗುತ್ತಿದ್ದ ಕಾಲ. ಆದರೂ ಭವ್ಯ ಬದುಕಿನ […]
Date : 25-06-2012 | 48 Comments. | Read More
ಈ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್್ಗೇನಾಗಿದೆ? ಅವರ ಚೇಲಾಗಳು ಯಾಕಾಗಿ ಅಟಲ್ ಬಿಹಾರಿ ವಾಜಪೇಯಿಯವರನ್ನು ಎಳೆದು ತರುತ್ತಿದ್ದಾರೆ? ಯಾವ ಉದ್ದೇಶ ಸಾಧನೆಗಾಗಿ ರಾಜಧರ್ಮವನ್ನು ಪಾಲಿಸಿ ಎಂಬ ವಾಜಪೇಯಿಯವರ ಕಿವಿಮಾತನ್ನು ಈಗ ಉಲ್ಲೇಖಿಸುತ್ತಿದ್ದಾರೆ? ನಿತೀಶ್ ಕುಮಾರ್ ಮಾತನಾಡುತ್ತಿರುವ ಜಾತ್ಯತೀತತೆಯಾದರೂ ಯಾವುದು? ಇಷ್ಟಕ್ಕೂ ಜಾತ್ಯತೀತತೆ ಎಂದರೇನು? ಒಂದು ವೇಳೆ ಹಿಂದೂಗಳು ಬಹುಸಂಖ್ಯಾತರಾಗಿಲ್ಲದೇ ಹೋಗಿದ್ದರೆ ಈ ದೇಶ ಜಾತ್ಯತೀತವಾಗಿರುವುದಕ್ಕಾದರೂ ಸಾಧ್ಯವಿತ್ತೆ? ಯಾವ ಕಾರಣಕ್ಕಾಗಿ ಇವರೆಲ್ಲ ನರೇಂದ್ರ ದಾಮೋದರ ದಾಸ್ ಮೋದಿಯವರನ್ನು ಕೋಮುವಾದಿ ಎಂದು ಜರಿಯುತ್ತಿದ್ದಾರೆ? 2002, ಫೆಬ್ರವರಿ 27 ಹಾಗೂ ತದನಂತರ […]
Date : 03-06-2012 | 79 Comments. | Read More
ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಾಮಾನ್ಯವಾಗಿ ಮುಕ್ತಾಯವಾಗುವುದೇ ಸಾರ್ವಜನಿಕ ರ್ಯಾಲಿಯೊಂದಿಗೆ. ಅದರಲ್ಲಿ ಪಕ್ಷದ ಬಹುತೇಕ ಎಲ್ಲ ಗಣ್ಯಾತಿಗಣ್ಯ ನಾಯಕರೂ ಭಾಗವಹಿಸುತ್ತಾರೆ. ಒಂದು ರೀತಿಯಲ್ಲಿ ಅದು ಶಕ್ತಿ ಹಾಗೂ ನಾಯಕರ ನಡುವಿನ ಸಾಮರಸ್ಯ ಪ್ರದರ್ಶನವೂ ಆಗಿರುತ್ತದೆ. ಆದರೆ ಕಳೆದ ವಾರ (ಮೇ-25) ಮುಂಬೈನಲ್ಲಿ ನಡೆದ ರ್ಯಾಲಿ ಮಾತ್ರ ಇದಕ್ಕೆ ತದ್ವಿರುದ್ಧವಾಗಿತ್ತು. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯ ಹೆಚ್ಚಿನ ಸದಸ್ಯರು ಹಾಗೂ ರಾಷ್ಟ್ರೀಯ ನಾಯಕರು ಕಾಣೆಯಾಗಿದ್ದರು. ಅಧ್ಯಕ್ಷ ನಿತಿನ್ ಗಡ್ಕರಿ, ಅರುಣ್ ಜೇಟ್ಲಿ ಬಿಟ್ಟರೆ ಹೇಳಿಕೊಳ್ಳುವಂಥ ಯಾವ ನಾಯಕರೂ ಇರಲಿಲ್ಲ. […]
Date : 28-05-2012 | 45 Comments. | Read More
ಶ್ರೀ ನಾರಾಯಣ ಗುರುಗಳು ಯಾರಿಗೆ ತಾನೇ ಗೊತ್ತಿಲ್ಲ? ಒಮ್ಮೆ ಗುರುಗಳು ರೈಲಿನಲ್ಲಿ ಸಂಚರಿಸುತ್ತಿರುತ್ತಾರೆ. ಅವರ ಸಹಪ್ರಯಾಣಿಕನಾಗಿದ್ದ ನಂಬೂದರಿಯೊಬ್ಬ,”ನಿಮ್ಮ ಹೆಸರೇನು?’ ಎಂದು ಪ್ರಶ್ನಿಸುತ್ತಾನೆ. ಗುರುಗಳು: ನಾರಾಯಣ ನಂಬೂದರಿ: ನಿಮ್ಮ ಜಾತಿ? ಗುರುಗಳು: ನೋಡಿದರೆ ಗೊತ್ತಾಗುವುದಿಲ್ಲವೆ? ನಂಬೂದರಿ: ಉಹೂಂ ಗುರುಗಳು: ನೋಡಿದರೆ ಗೊತ್ತಾಗದಿದ್ದಾಗ ಹೇಳಿದರೆ ಹೇಗೆ ಗೊತ್ತಾಗುತ್ತದೆ?! ಎಂದು ಕೇಳಿದಾಗ ನಂಬೂದರಿ ತಬ್ಬಿಬ್ಬಾಗುತ್ತಾನೆ.
Date : 22-05-2012 | 64 Comments. | Read More
ಇಂಗ್ಲೆಂಡ್ ಕ್ರಿಕೆಟ್ ಅಭಿಮಾನಿಗಳ Barmy Army, ಅದಕ್ಕೆ ಪ್ರತಿಯಾಗಿ ಬ್ರಿಟನ್್ನಲ್ಲಿ ನೆಲಸಿರುವ ಭಾರತ ಸಂಜಾತರು ಆರಂಭಿಸಿದ – Bharath Armyಗಳನ್ನು ಕೇಳಿದ್ದೇವೆ, ಆದರೆ ಇದ್ಯಾವುದೀ ಹೊಸ ಆರ್ಮಿ ಎನ್ನುತ್ತೀರಾ? ಹಲವಾರು ರಾಜಕೀಯ ವಿಪ್ಲವಗಳನ್ನು ಕಂಡ 1990ರ ದಶಕಕ್ಕೆ ಸಾಕ್ಷೀಭೂತರಾದ ಯಾರೊಬ್ಬರನ್ನು ಕೇಳಿದರೂ ಆ ವ್ಯಕ್ತಿ ಯಾರು ಎಂದು ತಟ್ಟನೆ ಉತ್ತರಿಸಿ ಬಿಡುತ್ತಾರೆ. ಖಂಡಿತ ಅವರನ್ನು ಪರಿಚಯ ಮಾಡಿಕೊಡಬೇಕಾದ ಅವಶ್ಯಕತೆಯೇ ಇಲ್ಲ. ಗೋವಿಂದ ರಾವ್ ಖೈರ್ನಾರ್!