ಇಂಗ್ಲೆಂಡ್್ನಲ್ಲಿ ‘ಜಂಟಲ್್ಮನ್ಸ್್’, ಭಾರತದಲ್ಲಿ ‘ಬ್ಯುಸಿನೆಸ್್ಮನ್ಸ್್’ ಗೇಮ್!

Saturday, February 4th, 2012
ಇಂಗ್ಲೆಂಡ್್ನಲ್ಲಿ ‘ಜಂಟಲ್್ಮನ್ಸ್್’, ಭಾರತದಲ್ಲಿ ‘ಬ್ಯುಸಿನೆಸ್್ಮನ್ಸ್್’ ಗೇಮ್!

ಕಳೆದ ನವೆಂಬರ್್ನಲ್ಲಿ ಹೊಸದಿಲ್ಲಿಗೆ ಹೋಗಿದ್ದಾಗ ಖ್ಯಾತ ಇಂಗ್ಲಿಷ್ ವಾರಪತ್ರಿಕೆ ಔಟ್್ಲುಕ್್ನ ಪ್ರಧಾನ ಸಂಪಾದಕರಾಗಿರುವ ಹೆಮ್ಮೆಯ ಕನ್ನಡಿಗ ಕೃಷ್ಣಪ್ರಸಾದ್ ಅವರನ್ನು ಭೇಟಿಯಾಗುವ ಅವಕಾಶ ದೊರೆಯಿತು. ಮಾತಿನ ಮಧ್ಯೆ  ಕೃಷ್ಣಪ್ರಸಾದ್ ಕೇಳಿದರು, ‘ನಿನಗೆ ಹೊಸ ಜೋಕು ಗೊತ್ತಾ, ಸಚಿನ್ ತೆಂಡೂಲ್ಕರ್, ಲಾಲ್್ಕೃಷ್ಣ ಆಡ್ವಾಣಿ ಹಾಗೂ ಪೆಟ್ರೋಲ್ ನಡುವೆ ಯಾರು ಮೊದಲು ಸೆಂಚುರಿ ಹೊಡೆಯುತ್ತಾರೆ?!’ -ಪೆಟ್ರೋಲ್! ಅಂಥದ್ದೊಂದು ಜೋಕು ಹುಟ್ಟುವುದಕ್ಕೆ ಕಾರಣವಾದರೂ ಏನಿತ್ತು? ಒಂದೆಡೆ ಇಂಗ್ಲೆಂಡ್್ನಲ್ಲಿ ಆಡಿದ ನಾಲ್ಕೂ ಟೆಸ್ಟ್ ಹಾಗೂ ಏಕದಿನ ಪಂದ್ಯಗಳಲ್ಲಿ ಭಾರತ ಹೀನಾಯವಾಗಿ ಸೋತಿದ್ದು ಮಾತ್ರವಲ್ಲ, ಸಚಿನ್ [...]

ಅಂಥದ್ದೊಂದು ದುರ್ಘಟನೆಯೇ ಸಂಭವಿಸಲಿಲ್ಲವೆಂದಾದರೆ ಅವರು ಏನಾದರು?

Wednesday, February 1st, 2012
ಅಂಥದ್ದೊಂದು ದುರ್ಘಟನೆಯೇ ಸಂಭವಿಸಲಿಲ್ಲವೆಂದಾದರೆ ಅವರು ಏನಾದರು?

1945, ಆಗಸ್ಟ್ 18ರಂದು ತೈವಾನ್್ನ ತೈಹೋಕು ಬಳಿ ನಡೆದ ವಿಮಾನ ದುರ್ಘಟನೆಯಲ್ಲಿ ಸುಭಾಶ್ಚಂದ್ರ ಬೋಸ್ ನಿಜಕ್ಕೂ ತೀರಿಕೊಂಡರೆ? ಮೊನ್ನೆ ಜನವರಿ 23ರಂದು ನಡೆದ 115ನೇ ಜನ್ಮದಿನದ ನೆನಪಿಗಾಗಿ ಬರೆದ ಲೇಖನವನ್ನೋದಿದ ಬಹಳಷ್ಟು ಜನರು ನೇತಾಜಿ ಅಂತ್ಯ ಹೇಗಾಯಿತು ಎಂದು ತಿಳಿಯಬಯಸಿ ಪತ್ರ ಬರೆದಿದ್ದಾರೆ. ಅಂಥದ್ದೊಂದು ಪ್ರಶ್ನೆ, ಅದರ ಸುತ್ತ ಹೆಣೆದುಕೊಂಡಿರುವ ಅನುಮಾನಗಳು ಕಳೆದ ಆರೂವರೆ ದಶಕಗಳಿಂದಲೂ ಒಂದು ದೊಡ್ಡ ಮಿಸ್ಟರಿ, ಭೇದಿಸಲಾಗದ ರಹಸ್ಯವಾಗಿ ಭಾರತೀಯರನ್ನು ಕಾಡುತ್ತಿದೆ. ವಿಮಾನ ದುರ್ಘಟನೆಯಲ್ಲಿ ನೇತಾಜಿ ಮಡಿದರು ಎಂಬ ಥಿಯರಿಯನ್ನು ಒಪ್ಪಲು ಈ [...]

ನೇತಾಗಳು ಬಹಳಷ್ಟಿದ್ದರು, ನೇತಾಜಿ ಮಾತ್ರ ಅವರೊಬ್ಬರೇ ಆಗಿದ್ದರು!

Monday, January 23rd, 2012
ನೇತಾಗಳು ಬಹಳಷ್ಟಿದ್ದರು, ನೇತಾಜಿ ಮಾತ್ರ ಅವರೊಬ್ಬರೇ ಆಗಿದ್ದರು!

Give me Blood, I promise you Freedom! ನೀವು ನನಗೆ ರಕ್ತವನ್ನು ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ ಎನ್ನುತ್ತಿದ್ದ ಸುಭಾಶ್ಚಂದ್ರ ಬೋಸ್ ಹಾಗೂ ಮಹಾತ್ಮ ಗಾಂಧೀಜಿ ಇಬ್ಬರ ಆಲೋಚನೆ, ಆಶಯ, ಮಾರ್ಗಗಳು ಸಂಪೂರ್ಣ ಭಿನ್ನವಾಗಿದ್ದವು. ಸ್ವಾತಂತ್ರ್ಯ ಪಡೆಯಲು ಗಾಂಧೀಜಿ ಅನುಸರಿಸಲು ಹೊರಟಿದ್ದ ಮಾರ್ಗದ ಬಗ್ಗೆ ಸುಭಾಷ್ ಮಾತ್ರವಲ್ಲ ಬಾಲಗಂಗಾಧರ ತಿಲಕ್ ಹಾಗೂ ಅರವಿಂದ ಘೋಷ್್ಗೂ ಅಸಮ್ಮತಿಯಿತ್ತು. ರಕ್ತ ಚೆಲ್ಲಿ ಸ್ವಾತಂತ್ರ್ಯ ಪಡೆಯಬೇಕೇ ಹೊರತು, ಗಾಂಧೀ ಪ್ರತಿಪಾದನೆಯ ಗೋಗರೆಯುವ ಮಾರ್ಗದಿಂದ ಯಾವ ಲಾಭವೂ ಇಲ್ಲ ಎಂದು [...]

ಇರಾನ್ ಮೇಲೆ ಇಸ್ರೇಲ್ ದಾಳಿ ಮಾಡೀತೆ?

Sunday, January 22nd, 2012
ಇರಾನ್ ಮೇಲೆ ಇಸ್ರೇಲ್ ದಾಳಿ ಮಾಡೀತೆ?

ಅಂಥದ್ದೊಂದು ಸಾಧ್ಯತೆ ದಿನಕಳೆದಂತೆ ದಟ್ಟವಾಗುತ್ತಲೇ ಇದೆ. ಇಷ್ಟಕ್ಕೂ ಇಸ್ರೇಲ್ ಮುಂದೆ ಇರುವ ಮಾರ್ಗಗಳಾದರೂ ಯಾವುವು? ಲೆಬೆನಾನ್, ಜೋರ್ಡಾನ್, ಪ್ಯಾಲೆಸ್ತೀನ್, ಸಿರಿಯಾ, ಈಜಿಪ್ಟ್ ಮುಂತಾದ ಮುಸ್ಲಿಂ ರಾಷ್ಟ್ರಗಳೇ ಅದನ್ನು ಸುತ್ತುವರಿದಿರುವುದು ಮಾತ್ರವಲ್ಲ, ತುಸು ದೂರವಿರುವ ಇರಾನ್್ನ ಅಧ್ಯಕ್ಷ ಮೊಹಮದ್ ಅಹ್ಮದಿನೆಜಾದ್ ಅವರಂತೂ ಇಸ್ರೇಲನ್ನು ಜಗತ್ತಿನ ಭೂಪಟದಿಂದ ಅಳಿಸಿ ಹಾಕುವುದೇ ನಮ್ಮ ಗುರಿ ಎನ್ನುತ್ತಿದ್ದಾರೆ! ಆ ಉದ್ದೇಶಕ್ಕಾಗಿ ಅಣ್ವಸ್ತ್ರ ತಯಾರಿಕೆಯಲ್ಲೂ ತೊಡಗಿದ್ದಾರೆ. ವಿಶ್ವಸಂಸ್ಥೆ ಕೆಲ ದಿಗ್ಬಂಧನೆಗಳನ್ನು ಹೇರಿದ್ದರೂ, ಇನ್ನೂ ಹೆಚ್ಚಿನ ದಿಗ್ಬಂಧನೆಗಳನ್ನು ಹೇರುವುದಾಗಿ ಎಚ್ಚರಿಕೆ ಕೊಟ್ಟಿದ್ದರೂ ಇರಾನ್ ಕ್ಯಾರೇ ಎನ್ನುತ್ತಿಲ್ಲ. [...]

ಪ್ರತಿ ಭಾರತೀಯ ಹೆಮ್ಮೆಪಡುವಂತೆ ಮಾಡಿದ ಭುಟಿಯಾ!

Monday, January 16th, 2012
ಪ್ರತಿ ಭಾರತೀಯ ಹೆಮ್ಮೆಪಡುವಂತೆ ಮಾಡಿದ ಭುಟಿಯಾ!

God’s gift to Indian football!! ಹಾಗಂತ ಮೂರು ಬಾರಿ ವರ್ಷದ ಭಾರತೀಯ ಫುಟ್ಬಾಲ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಐ.ಎಂ. ವಿಜಯನ್ ಅವರೇ ಹೇಳಿದ್ದರು. ಭಾರತೀಯ ಫುಟ್ಬಾಲ್ ಕ್ಷೇತ್ರದಲ್ಲಿ ಬೈಚುಂಗ್ ಭುಟಿಯಾ ಸ್ಥಾನವೆಂಥದ್ದು ಎಂಬುದನ್ನು ವಿಜಯನ್ ಮಾತುಗಳಿಂತ ಚೆನ್ನಾಗಿ ಹಿಡಿದಿಡಲು ಸಾಧ್ಯವೇ ಇಲ್ಲ. ಇವತ್ತಿಗೂ ಫುಟ್ಬಾಲ್ ಬಗ್ಗೆ ನಮ್ಮಲ್ಲಿ ಕೆಲವೊಂದು ಮಿಥ್ಯೆಗಳಿವೆ. ಬಹಳ ದೈತ್ಯ, ದೃಢಕಾಯದವರು ಮಾತ್ರ ಆಡಬಹುದಾದ ಆಟವದು, ನಮ್ಮ ಭಾರತೀಯರ ಕೈಯಿಂದಾಗದು, ನಮ್ಮವರು ಬಹುಬೇಗ ಬಳಲುತ್ತಾರೆ, ಕಾಲಿಗೆ ಫೆವಿಕಾಲ್ ಅಂಟಿಸಿಕೊಂಡೂ (ಫುಟ್್ವರ್ಕ್ ಇಲ್ಲದೆಯೂ) [...]

ಅವರು ರಾಷ್ಟ್ರಪಿತನಾದರೆ, ಇವರು ಗ್ರಾಂಡ್್ಫಾದರ್ ಆಫ್ ದಿ ನೇಶನ್!

Friday, January 6th, 2012
ಅವರು ರಾಷ್ಟ್ರಪಿತನಾದರೆ, ಇವರು ಗ್ರಾಂಡ್್ಫಾದರ್ ಆಫ್ ದಿ ನೇಶನ್!

ಅವರನ್ನು ನೆನಪಿಸಿಕೊಂಡರೆ ಸಾಕು ಮನಸು ಪುಳಕಿತಗೊಳ್ಳುತ್ತದೆ, ಅವರ ಮಾತುಗಳನ್ನು ಕೇಳಿದರೆ ನರನಾಡಿಗಳಲ್ಲಿ ವಿದ್ಯುತ್ ಸಂಚಾರವಾಗುತ್ತದೆ, ಬದುಕಿಗೆ ಹೊಸ ಪ್ರೇರಣೆ ದೊರೆಯುತ್ತದೆ. ಇಷ್ಟಕ್ಕೂ ಆ ಶಕ್ತಿ ಯಾವುದು? Look down at your feet! The road that is under your feet is the road you have passed over and is the same road that you see before. It will be soon under your feet, March [...]

ಚೀನಾದ ವಿರುದ್ಧ ಇವರ ಪೌರುಷ ಸತ್ತು ಬಿದ್ದಿದೆ ಏಕೆ?

Saturday, December 31st, 2011
ಚೀನಾದ ವಿರುದ್ಧ ಇವರ ಪೌರುಷ ಸತ್ತು ಬಿದ್ದಿದೆ ಏಕೆ?

ಅವರು ಏಕಾಗಿ ಅಂಥದ್ದೊಂದು ಕರೆಕೊಟ್ಟಿದ್ದಾರೆ ಅಂದುಕೊಂಡಿರಿ?! ‘ನಮ್ಮ ಜಮ್ಮು-ಕಾಶ್ಮೀರವನ್ನು “ವಿವಾದಿತ ಪ್ರದೇಶ’ ಎಂದು ಕರೆಯಲು ಈ ಚೀನಾಕ್ಕೇನು ಅಂಜಿಕೆ ಇಲ್ಲ. ಆದರೆ ನಾವು ಮಾತ್ರ ತೈವಾನ್ ಬಗ್ಗೆಯಾಗಲಿ, ಟಿಬೆಟ್್ನ ಅಕ್ರಮ ವಶವನ್ನಾಗಲಿ ಪ್ರಶ್ನಿಸದೇ “ಮಹಾ ಚೀನಾ’ ನೀತಿಯನ್ನು ಒಪ್ಪಿಕೊಳ್ಳಬೇಕಂತೆ. ಕಾಶ್ಮೀರ, ಅರುಣಾಚಲಪ್ರದೇಶ ಭಾರತದ ಭಾಗಗಳೆಂದು ಒಪ್ಪಿಕೊಳ್ಳಲು ಒಪ್ಪದ ಚೀನಾ ನಮ್ಮಿಂದ ಮಾತ್ರ ಸಮಗ್ರ ಚೀನಾ ನೀತಿಯನ್ನು ಒಪ್ಪಿಕೊಳ್ಳುವಂತೆ ನಿರೀಕ್ಷಿಸುತ್ತಿರುವುದೇಕೆ? ಅವರು ನಮ್ಮ ದೇಶದ ಸಾರ್ವಭೌಮತೆಯನ್ನು ಪ್ರಶ್ನಿಸುವುದೇ ಆದರೆ, ನಾವೂ ಕೂಡ ಟಿಬೆಟ್ಟನ್ನು ನುಂಗಿರುವ, ತೈವಾನನ್ನು ನುಂಗಲು ಪ್ರಯತ್ನಿಸುತ್ತಿರುವ [...]

ಈ ಅನರ್ಘ್ಯರತ್ನಕ್ಕೇಕೆ ನೀಡಿಲ್ಲ ಭಾರತರತ್ನ?

Saturday, December 24th, 2011
ಈ ಅನರ್ಘ್ಯರತ್ನಕ್ಕೇಕೆ ನೀಡಿಲ್ಲ ಭಾರತರತ್ನ?

ಈ ಅನರ್ಘ್ಯರತ್ನಕ್ಕೇಕೆ ನೀಡಿಲ್ಲ ಭಾರತರತ್ನ? ಮೊನ್ನೆ ಡಿಸೆಂಬರ್ 19ರಂದು ಭಾರತೀಯ ವಿಜ್ಞಾನ ಮಂದಿರದಲ್ಲಿ (ಐಐಎಸ್್ಸಿ) ನಡೆದ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿಯವರ ವೈಜ್ಞಾನಿಕ ಸಲಹಾ ಮಂಡಳಿಯ ಮುಖ್ಯಸ್ಥ ಹಾಗೂ ಖ್ಯಾತ ವಿಜ್ಞಾನಿ ಸಿ.ಎನ್.ಆರ್. ರಾವ್, “ಭಾರತರತ್ನ ಕೊಡುವುದಾದರೆ ಹೋಮಿ ಜಹಾಂಗೀರ್ ಭಾಭಾ ಅವರಿಗೆ ಮೊದಲು ಕೊಡಬೇಕು. ನಮ್ಮ ದೇಶದಲ್ಲಿ ವಿಜ್ಞಾನಕ್ಕಿಂತ ಕ್ರಿಕೆಟ್್ಗೇ ಹೆಚ್ಚು ಪ್ರಾಮುಖ್ಯತೆ ದೊರೆಯುತ್ತಿದೆ. ಸಚಿನ್ ತೆಂಡೂಲ್ಕರ್್ಗೆ ಈಗಾಗಲೇ ಪದ್ಮಶ್ರೀ, ಪದ್ಮವಿಭೂಷಣ ನೀಡುವ ಮೂಲಕ ಆತನ ಸಾಧನೆಗೆ ಮನ್ನಣೆ ನೀಡಲಾಗಿದೆ. ಹಾಗಂತ ಅವರಿಗೆ ಭಾರತರತ್ನ ಕೊಡುವುದು ಬೇಡವೆಂದಲ್ಲ. [...]

ಎಂಥಾ ನಿರ್ವೀರ್ಯರ ಕೈಲಿ ವೀರ, ಪರಮವೀರಚಕ್ರ ಪಡೆಯಬೇಕಾಗಿದೆ ನೋಡಿ?!

Sunday, December 18th, 2011
ಎಂಥಾ ನಿರ್ವೀರ್ಯರ ಕೈಲಿ ವೀರ, ಪರಮವೀರಚಕ್ರ ಪಡೆಯಬೇಕಾಗಿದೆ ನೋಡಿ?!

ಈ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ನಿಜಕ್ಕೂ ನಾಚಿಕೆಯೇನಾದರೂ ಇದೆಯೇ? ಇನ್ನೆಷ್ಟು ವರ್ಷ ಇದೇ ರೀತಿ ಸುಳ್ಳು ಹೇಳಿಕೊಂಡು, ಜನರನ್ನು ದಾರಿ ತಪ್ಪಿಸಿಕೊಂಡು ದೇಶವಾಳುತ್ತಾರೆ? ಹೇಗೆ ಬೇಕಾದರೂ ಹೊರಳುವ ಇವರ ನಾಲಗೆಯನ್ನು ನೆಚ್ಚಿಕೊಂಡು ಎಷ್ಟು ದಿನ ಅಂತ ಜನರೂ ಕುಳಿತುಕೊಳ್ಳಬೇಕು? ಮೊನ್ನೆ ಡಿಸೆಂಬರ್ 13ರಂದು ಸಂಸತ್ ಭವನದ ಮೇಲೆ ನಡೆದ ದಾಳಿಗೆ 10 ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ ನಡೆದ ಹುತಾತ್ಮರ ಸ್ಮರಣೆ ಸಮಾರಂಭದಲ್ಲಿ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ಆಡಿರುವ ಮಾತುಗಳಾದರೂ ಎಂಥವು?”ಅಫ್ಜಲ್ ಗುರುವಿನದ್ದೂ ಸೇರಿದಂತೆ 20 [...]

ಸೋನಿಯಾರನ್ನು ಟೀಕಿಸಿದರೆ ಮಾತ್ರ ಚಾರಿತ್ರ್ಯವಧೆಯಾಗುತ್ತದೆಯೇ?

Saturday, December 10th, 2011
ಸೋನಿಯಾರನ್ನು ಟೀಕಿಸಿದರೆ ಮಾತ್ರ ಚಾರಿತ್ರ್ಯವಧೆಯಾಗುತ್ತದೆಯೇ?

ಇದು ಸ್ವೀಕಾರಾರ್ಹವಲ್ಲ, ಸಲ್ಲ!! ಆರು ವಾರಗಳ ಹಿಂದೆ ಫೇಸ್್ಬುಕ್, ಗೂಗಲ್, ಯಾಹೂ ಮತ್ತು ಮೈಕ್ರೋಸಾಫ್ಟ್ ಮುಂತಾದ ಪ್ರಮುಖ ಇಂಟರ್್ನೆಟ್ ಸೇವಾ ಪೂರೈಕೆದಾರ ಆರು ವಾರಗಳ ಹಿಂದೆ ಫೇಸ್್ಬುಕ್, ಗೂಗಲ್, ಯಾಹೂ ಮತ್ತು ಮೈಕ್ರೋಸಾಫ್ಟ್ ಮುಂತಾದ ಪ್ರಮುಖ ಇಂಟರ್್ನೆಟ್ ಸೇವಾ ಪೂರೈಕೆದಾರ ಕಂಪನಿಗಳ ಕಾನೂನು ಸಲಹೆಗಾರರನ್ನು ಹೊಸದಿಲ್ಲಿಯಲ್ಲಿರುವ ತಮ್ಮ ಕಚೇರಿಗೆ ಕರೆಸಿಕೊಂಡಿದ್ದ ಕೇಂದ್ರ ಸಂಪರ್ಕ ಖಾತೆ ಸಚಿವ ಕಪಿಲ್ ಸಿಬಲ್, ಫೇಸ್್ಬುಕ್ ಪ್ರತಿನಿಧಿಯನ್ನು ಬಳಿಗೆ ಕರೆದು ಚಿತ್ರವೊಂದನ್ನು ಮುಂದೆ ಹಿಡಿದು “This is unacceptable’ ಎಂದು ಗುಡುಗಿದ್ದರು. ಕಳೆದ [...]

download movies
buy soma
buy imitrex buy amoxicillin
buy lumigan online >
buy retin a >
buy ultram online >
buy imitrex online >