ಆತ್ಮೀಯ ಸಚಿನ್, ನನಗೆ ನಿಜಕ್ಕೂ ಬೇಸರವಾಗುತ್ತಿದೆ. ಇಪ್ಪತ್ತೆರಡು ವರ್ಷಗಳ ಕಾಲ ದೇಶಕ್ಕೋಸ್ಕರ ಆಡಿದರೂ ಏಕಾಂಗಿಯಾಗಿ ನೀನು ಪಂದ್ಯ ಗೆಲ್ಲಿಸಬೇಕು ಎಂದು ಜನ ಇಂದಿಗೂ ನಿರೀಕ್ಷಿಸುತ್ತಾರೆ. ಭಾರತೀಯ ಕ್ರಿಕೆಟ್ ತಂಡದಲ್ಲಿ ನೀನಲ್ಲದೆ ಇನ್ನೂ 10 ಆಟಗಾರರಿದ್ದಾರೆ ಎಂಬುದನ್ನೇ ನಾವು ಮರೆಯುತ್ತೇವೆ. ಕಳೆದ 5 ವಿಶ್ವಕಪ್ ಗಳಿಂದಲೂ ನೀನು ರನ್ ಮಷೀನ್ ನಂತೆ 60ರ ಸರಾಸರಿಯಲ್ಲಿ ಸ್ಕೋರ್ ಮಾಡಿದ್ದೀಯ. ಮೊನ್ನೆ ಕೂಡ ಉಳಿದವರೆಲ್ಲ ಪಂದ್ಯವನ್ನು ಲಘುವಾಗಿ ತೆಗೆದುಕೊಂಡರೆ, ಬೇಜವಾಬ್ದಾರಿತನ ತೋರಿದರೆ ನೀನು ಮಾತ್ರ 111 ರನ್ ಹೊಡೆಯುವ ಮೂಲಕ ನಿನ್ನ [...]
ಇಪ್ಪತ್ತೈದು ವರ್ಷಗಳಷ್ಟು ಸುದೀರ್ಘ ಕಾಲದ ನಂತರ ‘ವಿಶ್ವ ಕನ್ನಡ ಸಮ್ಮೇಳನ’ವನ್ನು ಆಯೋಜಿಸಿದ್ದಾದರೂ ಏಕೆ? ಸಾಮಾನ್ಯವಾಗಿ ಇಂಥದ್ದೊಂದು ಸಮ್ಮೇಳನವನ್ನು ಏಕಾಗಿ ಆಯೋಜಿಸುತ್ತಾರೆ? ಅದರ ಆಶಯವಾದರೂ ಏನು ಹಾಗೂ ಏನಿರಬೇಕು? ಏತಕ್ಕಾಗಿ ಇಷ್ಟು ವರ್ಷಗಳ ಅಂತರದ ನಂತರ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ? ಇಷ್ಟೊಂದು ಪ್ರಮಾಣದಲ್ಲಿ ಹಣ ವ್ಯಯ ಮಾಡಿ ಸಮ್ಮೇಳನವನ್ನು ನಡೆಸುವ ಜರೂರತ್ತಾದರೂ ಏನಿತ್ತು? ಜನರ ನಿರೀಕ್ಷೆಗಳು ಏನಿವೆ? ಇಂತಹ ಸಮ್ಮೇಳನಗಳು ಯಾವಾಗ ಸಾರ್ಥಕತೆ ಕಾಣುತ್ತವೆ?
My beloved readers, the wait is over! Read “Kannada Prabha” front page 2mrw. I have written a “counter point” abt an ongoing controversy. But that is not my usual column. For Bettale Jagattu, u must wait for few more days. I will b expecting ur feedback 2mrw, u can certainly disagree with my point of [...]