Date : 21-03-2015 | no Comment. | Read More
ಮುಖ್ಯಮಂತ್ರಿಯವರೇ, ಸದನದಲ್ಲಿ ತೋಳು ತಟ್ಟುವಾಗ, ಬಳ್ಳಾರಿ ಪಾದಯಾತ್ರೆ ಕೈಗೊಂಡಾಗ ನಿಮ್ಮಲ್ಲಿದ್ದ ಪೌರುಷ, ಪ್ರಾಮಾಣಿಕತೆ ಈಗ ಎಲ್ಲಿ ಹೋಯಿತು ? ನೀವು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ವಿರುದ್ಧ ಸದನದಲ್ಲಿ ತೋಳು ತಟ್ಟಿದ್ದನ್ನು ನಾವು ನೋಡಿದ್ದೇವೆ. ಬಳ್ಳಾರಿಯನ್ನು ಕೊಳ್ಳೆ ಹೊಡೆಯುತ್ತಿದ್ದ ರೆಡ್ಡಿ ಬದ್ರರ್ಸ್ ವಿರುದ್ಧ ಪಾದಯಾತ್ರೆ ಮಾಡಿದ್ದನ್ನೂ ಕಂಡು ಮೆಚ್ಚಿದ್ದೇವೆ. ಆ ನಿಮ್ಮ ಪೌರುಷ, ಪ್ರಾಮಾಣಿಕತೆ, ಭ್ರಷ್ಟಾಚಾರ ವಿರುದ್ದದ ಆಕ್ರೋಶ ಈಗ ಎಲ್ಲಿ ಹೋಗಿದೆ ಸ್ವಾಮಿ? ಇವತ್ತು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಐಎಎಸ್ ಅಧಿಕಾರಿ ಡಿ.ಕೆ. ರವಿ ಮಾಡಿದ್ದೂ ಕೂಡ […]
Date : 21-03-2015 | no Comment. | Read More
ಸುಗ್ರೀವಾಜ್ಞೆ ಎಂದರೆ ಇಂದಿರಾ ಗಾಂಧಿಯವರ ತುರ್ತುಪರಿಸ್ಥಿತಿಯಂಥ ಸನ್ನಿವೇಶದ ಸೃಷ್ಟಿಯೇ? ನೀವು ಜಾರ್ಜ್ ಕ್ಯಾರ್ಲಿನ್ ಬಗ್ಗೆ ಕೇಳಿರಬಹುದು. ಆತ ಅಮೆರಿಕದ ಖ್ಯಾತ ಹಾಸ್ಯ ಅಥವಾ ವಿಡಂಬನೆಕಾರ. ಜತೆಗೆ ಒಳ್ಳೆಯ ಸಾಮಾಜಿಕ ಚಿಂತಕ, ಟೀಕಾಕಾರ. ಅತನ ಮಾತುಗಳೆಂದರೆ ಅದ್ಭುತ. ಏನೋ ಒಂಥರಾ ಸೆಳೆತ ಅವುಗಳಲ್ಲಿರುತ್ತಿತ್ತು. ನಮ್ಮ ಕಾಲದ ವೈರುಧ್ಯವೇನೆಂದರೆ ನಾವು ಆಗಸದೆತ್ತರದ ಮನೆ ಕಟ್ಟುತ್ತೇವೆ, ಆದರೆ ನಮ್ಮ ಮನಸ್ಸು ಮಾತ್ರ ಕುಬ್ಜ. ಅಗಲವಾದ ರಸ್ತೆ ನಿರ್ಮಾಣ ಮಾಡುತ್ತೇವೆ, ಆದರೆ ನಮ್ಮ ಯೋಚನೆಗಳು ಕಿರಿದು. ಹೆಚ್ಚು ಖರೀದಿಸುತ್ತೇವೆ, ಕಡಿಮೆ ಅನುಭವಿಸುತ್ತೇವೆ . […]
Date : 28-02-2015 | 1 Comment. | Read More
(ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಚಲಿಸುವುದು ಯಾವುದು ಗೊತ್ತಾ, ಕಾಂಗ್ರೆಸ್-ಕಮ್ಯುನಿಸ್ಟರ ಸುಳ್ಳು! ) ನಾವು ಶಾಲೆಯಲ್ಲಿರುವಾಗ ರಸ ಪ್ರಶ್ನೆ ಸ್ಪರ್ಧೆ ಆಗಾಗ್ಗೆ ನಡೆಯುತ್ತಿತ್ತು. ಒಮ್ಮೆ ಒಂದೇ ಕ್ಲಾಸಿನೊಳಗೆ, ಮಗದೊಮ್ಮೆ ಭಿನ್ನ ಭಿನ್ನ ಕ್ಲಾಸ್ಗಳ ನಡುವೆ, ಕಡೆಗೆ ಶಾಲೆ ಶಾಲೆಗಳ ನಡುವೆ. ನಮ್ಮ ಆಗಿನ ಬುದ್ಧಿಮತ್ತೆಗೆ ತಕ್ಕುದಾದ ಪ್ರಶ್ನೆಗಳಿರುತ್ತಿದ್ದವು. ಅತ್ಯಂತ ವೇಗವಾಗಿ ಭೂಮಿಯ ಮೇಲೆ ಚಲಿಸುವ ಪ್ರಾಣಿ ಯಾವುದು? ಉತ್ತರ: ಚಿರತೆ. ಬೆಳಕು ಹಾಗೂ ಶಬ್ದ, ಇವುಗಳಲ್ಲಿ ವೇಗವಾಗಿ ಚಲಿಸುವುದು ಯಾವುದು? ಉತ್ತರ: ಬೆಳಕು. ಒಂದು ವೇಳೆ ಚಿರತೆ, […]