Date : 21-10-2008, Tuesday | 134 Comments
ಅಕ್ಟೋಬರ್ 16ರಂದು ‘ವಿಜಯ ಕರ್ನಾಟಕ’ ಪತ್ರಿಕೆಯ ಮುಖಪುಟದಲ್ಲಿ “ಇಂಥ ಘಟನೆ ಬೇರೆ ಯಾವ ದೇಶದಲ್ಲಿ ನಡೆದೀತು?” ಎಂಬ ಶೀರ್ಷಿಕೆಯಡಿ ಖ್ಯಾತ ಸಾಹಿತಿ ಎಸ್.ಎಲ್. ಭೈರಪ್ಪನವರು ಬರೆದ ವಿಚಾರಪೂರ್ಣ ಲೇಖನವನ್ನು ಖಂಡಿತ ನೀವು ಓದಿರುತ್ತೀರಿ. ಅವರ ಲೇಖನಕ್ಕೆ ಪ್ರತಿಕ್ರಿಯಿಸಿ ಜನಪ್ರಿಯ ಪತ್ರಕರ್ತ ರವಿ ಬೆಳಗೆರೆಯವರು ಅಕ್ಟೋಬರ್ 19ರಂದು “ಭೈರಪ್ಪ ಇತಿಹಾಸಕಾರ, ಬರಹಗಾರ: ಸದ್ಯ ಮುತ್ಸದ್ದಿಯಲ್ಲ?” ಎಂಬ ಲೇಖನ ಬರೆದು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡರು. ಅಕ್ಟೋಬರ್ 20ರಂದು ಉತ್ತರ ಪಡೆದುಕೊಳ್ಳುವ ಸರದಿ ರವಿ ಬೆಳಗೆರೆಯವರದ್ದಾಗಿತ್ತು. ಮಂಗಳೂರಿನ ರಾಮಚಂದ್ರ ಶೆಣೈ (None, but Myself!!) ನೀಡಿದ ಉತ್ತರ ಹಾಗೂ ರವಿ ಬೆಳಗೆರೆಯವರ ಲೇಖನಗಳರಡೂ ಇಲ್ಲಿವೆ-ಸಮಯವಿದ್ದಾಗ ಓದಿಕೊಳ್ಳಿ.
ಭೈರಪ್ಪ ಇತಿಹಾಸಕಾರ, ಬರಹಗಾರ: ಸದ್ಯ ಮುತ್ಸದ್ದಿಯಲ್ಲ?
ಅಕ್ಟೋಬರ್ 16, 2008ರ ವಿಜಯ ಕರ್ನಾಟಕ ಕೈಗೆತ್ತಿಕೊಳ್ಳುತ್ತಿ ದ್ದಂತೆಯೇ ಕಣ್ಣಿಗೆ ಬಿದ್ದುದು ಎಸ್.ಎಲ್. ಭೈರಪ್ಪನವರ ಸುದೀರ್ಘ ಲೇಖನ, ‘ಆವರಣ’ ಕಾದಂಬರಿ ಬರೆದು ಮುಗಿಸಿದ ಮೇಲೆ ಒಮ್ಮೆ ಅವರು ವಾಡಿಯಾ ರಸ್ತೆಯ ವರ್ಲ್ಡ್ ಕಲ್ಚರ್ ಕಟ್ಟಡದ ಅಂಗಳದಲ್ಲಿ ಸಿಕ್ಕಿದ್ದರು. ‘ಆವ ರಣ’ದ ಬಗ್ಗೆ ಪದೇಪದೆ ಪ್ರಶ್ನೆಗಳನ್ನು ಅಲ್ಲಿದ್ದವರು ಕೇಳಿದಾಗ,
‘ನನ್ನನ್ನು ಆವರಣದಿಂದ ಹೊರಕ್ಕೆ ಬರಲು ಬಿಡಿ. ಅದನ್ನು ಬರೆದಾಯಿತಲ್ಲ?’ ಅಂದಿದ್ದರು ಭೈರಪ್ಪ, ಕ್ರಿಯಾಶೀಲ ಲೇಖಕನೊಬ್ಬನ ಪ್ರಾಮಾಣಿಕ, ಸಾತ್ವಿಕ ಸಿಡುಕು ಆ ದನಿಯಲ್ಲಿತ್ತು. ನನಗೆ ಮತ್ತೇನನ್ನೋ ಬರೆಯ ಬೇಕಾಗಿದೆ. ಧೇನಿಸಬೇಕಾಗಿದೆ: ನನ್ನ ಪಾಡಿಗೆ ಬಿಡಿ ಎಂಬ ಸಿಡುಕು ಅದು ಅಂತ ನಾನು ಅರ್ಥಮಾಡಿಕೊಂಡಿದ್ದೆ. ಆದರೆ ವಿಜಯ ಕರ್ನಾಟಕದಲ್ಲಿ ಅವರ ಲೇಖನ ಓದಿದ ಮೇಲೆ, ಅವರು ‘ಆವರಣ’ದಿಂದ ಹೊರಬರು ವುದು ಹಾಗಿರಲಿ, ಪೂರ್ತಿ ಪೂರ್ತಿ ಗುಹಾಂತರಾಳವನ್ನೇ ಹೊಕ್ಕಂತೆ ಕಾಣುತ್ತಿದೆ. ಭೈರಪ್ಪ ವಿಪರೀತ paranoid ಆಗಿದ್ದಾರೆ. ತುಂಬ ಚೆಲುವಾಗಿ, ಮುದ ನೀಡಿ, ಯೋಚನೆಗೆ ಹಚ್ಚಿ, ಭಾವೋತ್ಕರ್ಷಕ್ಕೆ ಕೊಂಡೊಯ್ದು ಓದುಗನಿಗೊಂದು ಮಧುರಾನುಭೂತಿ ನೀಡುತ್ತಿದ್ದ ಭೈರಪ್ಪ ಇದೇಕೆ ಹೀಗೆ ’ ಎಲ್ಲ ಬಗೆಯ ಕರ್ಮಠ’ರಂತೆ ಬರೆಯತೊಡಗಿದ್ದಾರೆ?
‘ಎಲ್ಲ ಬಗೆಯ ಕರ್ಮಠರು’ ಎಂಬುದನ್ನು ನಾನು ಬಳಸಿದ್ದು ಹಿಂದೂ ಕರ್ಮಠರು, ಕರ್ಮಠ ಬ್ರಾಹ್ಮಣರು, ಕರ್ಮಠ ವೀರಶೈವರು, ಕರ್ಮಠ ಭಜರಂಗಿಗಳು, ಕರ್ಮಠ ಕಮ್ಯುನಿಸ್ಟರು, ಕರ್ಮಠ ನಕ್ಸಲರು ಎಂಬ ಅರ್ಥದಲ್ಲಿ. ಭೈರಪ್ಪನವರೂ ಸೇರಿದಂತೆ ನೀವು ಕೂಡ ಈ ಮಾತನ್ನು ಹೀಗೇ ಅರ್ಥಮಾಡಿಕೊಳ್ಳಬೇಕಾಗಿ ವಿನಂತಿ.
ನೀವು ಮತ್ತೇನೂ ಮಾಡಬೇಕಿಲ್ಲ. ಅಕ್ಟೋಬರ್ ೧೬ನೇ ತಾರೀಕಿನ ವಿಜಯ ಕರ್ನಾಟಕ ತೆರೆದು ಅದರಲ್ಲಿನ ಭೈರಪ್ಪನವರ ಲೇಖನವನ್ನು ಒಬ್ಬರೇ ಕುಳಿತು ದೊಡ್ಡ ದನಿಯಲ್ಲಿ ಓದಿಕೊಳ್ಳಿ. ಸ್ವಲ್ಪ ಹೊತ್ತಿಗೆ ನೀವು ಯಾರಿಗೋ ಲೆಕ್ಚರು ಕೊಡುತ್ತಿದ್ದೀರಿ ಎಂಬಂತೆ ಭಾಸವಾಗುತ್ತದೆ, ನಿಮಗೂ ಒಬ್ಬ ಕ್ರೈಸ್ತರ ಮತ ಬೋಧಕನಿಗೂ ವ್ಯತ್ಯಾಸವಿಲ್ಲ ಅನಿಸುತ್ತದೆ. ಹದಿನೈದು ಜನರನ್ನು ಕೂರಿಸಿಕೊಂಡು ಓದಿ ಬಿಡಿ: ನೀವು ಮುಸ್ಲಿಂ ಧರ್ಮ ಬೋಧಕನಂತೆ ಧ್ವನಿಸತೊಡಗುತ್ತೀರಿ. ಇದನ್ನೇ ನಾನು ಒಂದು ಬರಹದಲ್ಲಿ ನ ಕರ್ಮಠ ಗುಣ ಅನ್ನುವುದು. It starts Preaching. Writer starts barking. ಯಾವಾಗ ನಮ್ಮ ಬರವಣಿಗೆಗೆ ‘ಪ್ರವಾದೀ ಗುಣ’ ಬಂದು ಬಿಡುತ್ತದೋ, ಆವಾಗ ನಮ್ಮೊಳಗಿನ ಸೃಜನಶೀಲ ಬರಹಗಾರ ಸತ್ತು ಹೋಗಿ ಬಿಡುತ್ತಾನೆ. sorry, ಭೈರಪ್ಪ.
‘ಇಂಥ ಘಟನೆ ಯಾವ ದೇಶದಲ್ಲಿ ನಡೆದೀತು?’ ಎಂಬ ತಲೆಬರಹದೊಂದಿಗೆ ಸವಿಸ್ತಾರ ಲೇಖನ ಆರಂಭಿಸುವ ಭೈರಪ್ಪ ಉದ್ದಕ್ಕೂ ಕ್ರೈಸ್ತ ಮಿಷನರಿಗಳ ಮೇಲೆ ಹರಿಹಾಯು ತ್ತಾರೆ. ಅವರು ಎತ್ತುವ ಒಂದು ಪ್ರಶ್ನೆಗೆ ಮಾತ್ರ ನನ್ನ ಸಹಮತವಿದೆ. ‘ಸೆಪ್ಟೆಂಬರ್ ೧೧ರ ನಂತರ ಅಮೆರಿಕದಲ್ಲಿ ಒಂದೇ ಒಂದು ಮುಸ್ಲಿಂ ವಿಧ್ವಂಸಕ ಕೃತ್ಯ ನಡೆಯಲಿಲ್ಲ. ಭಾರತದಲ್ಲಿ ದಿನಕ್ಕೆ ಐದಾರು ಜನರನ್ನು ಕೊಲ್ಲುತ್ತಿದ್ದಾರೆ. ಹೀಗೇಕೆ?’ ಅಂತ ಭೈರಪ್ಪ ಕೇಳುವುದರಲ್ಲಿ Sence ಇದೆ. ಆದರೆ ಇನ್ನೊಂಚೂರು ಸಹನೆಯಿಟ್ಟುಕೊಂಡಿದ್ದಿದ್ದರೆ ಭೈರಪ್ಪನವರ ಪ್ರಶ್ನೆಗೂ ಉತ್ತರ ಸಿಗುತ್ತಿತ್ತು.
ಅಮೆರಿಕದಲ್ಲಿ ನಡೆಯದ ಮುಸ್ಲಿಂ ವಿಧ್ವಂಸಕ ಕೃತ್ಯಗಳು ಲಂಡನ್ನಲ್ಲಿ ನಡೆದವು. ಇಸ್ರೇಲ್ ಇವತ್ತಿಗೂ ಅದರ ತವರು. ಪಾಕಿಸ್ತಾನದಲ್ಲೇ ಜಿಹಾದಿಗಳು ಬೆನಜೀರ್ರನ್ನು ಕೊಂದರು. ಚೀನದಂತಹ ಕರ್ಮಠ ಕಮ್ಯುನಿಸ್ಟ್ ಖಬರ ಸ್ತಾನದಲ್ಲಿ ಮುಸ್ಲಿಮರು ತಿರುಗಿಬಿದ್ದರು. ಅಮೆರಿಕಕ್ಕೆ ತನ್ನ ದೇಶದ ಮಟ್ಟಿಗೆ ಮುಸ್ಲಿಂ ಭಯೋತ್ಪಾದನೆಯನ್ನು ಬಗ್ಗು ಬಡಿಯುವ ತಾಕತ್ತು (ಹಣವಿರುವುದರಿಂದಾಗಿ) ಇದೆಯೇ ಹೊರತು, ಅಫಘನಿಸ್ತಾನದಂತಹ ದೇಶದಲ್ಲಿ ಮುಸ್ಲಿಂ ಉಗ್ರರು ಅಮೆರಿಕಕ್ಕೆ ಇವತ್ತಿಗೂ ನೆಗ್ಗಲು ಮುಳ್ಳುಗಳೇ. Pan Islamism ಎಂಬುದು ರಾಕ್ಷಸ ಸ್ವರೂಪ ಪಡೆದು ಬಿಟ್ಟಿದೆಯೆಂಬುದು ನಿಜ. ಅದು ಆರಂಭಿಸಿರುವ ಜಾಗತಿಕ ಮಟ್ಟದ ಹಿಂಸೆಯನ್ನು ಯಾವ ರಾಜಕೀಯ ಮುತ್ಸದ್ದಿಯ ಇಚ್ಛಾಶಕ್ತಿಯೂ ತಮಣಿ ಮಾಡಲಾರದು. ಮುಸ್ಲಿಂ ಸಮುದಾಯದಲ್ಲೇ ಇವತ್ತು ಭಯೋತ್ಪಾದನೆಯ ವಿರುದ್ಧ ಜಾಗೃತಿ ಮೂಡಬೇಕು. ಅವರಿಂದಲೇ ಅವರ ಉಗ್ರವಾದ ಅಂತ್ಯವಾಗಬೇಕು. ಈಗಾಗಲೇ ಪಾಕಿಸ್ತಾನಿಗಳು ‘ಪಾನ್ ಇಸ್ಲಾಮಿಕ್ ಜಿಹಾದಿ’ಗಳ ವಿರುದ್ಧ ದನಿಯೆತ್ತ ತೊಡಗಿದ್ದಾರೆ.
ಆದರೆ ಭೈರಪ್ಪನವರ ತಕರಾರು ಈಗ ಮುಸಲರ ವಿರುದ್ಧ ಅಲ್ಲ. ಅದು ಕ್ರೈಸ್ತರ ವಿರುದ್ಧ. ಅವರ ಪ್ರಕಾರ ಏಸುವನ್ನು ಶಿಲುಬೆಗೆ ಏರಿಸಿದ್ದು ಯಹೂದಿಗಳಲ್ಲ. (ಹಾಗಾದರೆ ಮತ್ಯಾರೋ?) ಈಗ ಭಾರತದಲ್ಲಿ ಮತಾಂತರ ಎಷ್ಟು ಬಿರುಸಾಗಿ ನಡೆಯುತ್ತಿದೆ ಅಂದರೆ, ಆಂಧ್ರದ ಮುಖ್ಯಮಂತ್ರಿ (ಸ್ಯಾಮುಯೆಲ್) ರಾಜಶೇಖರ ರೆಡ್ಡಿ ಕೂಡ ಭೈರಪ್ಪನವರ ಪ್ರಕಾರ ಭಾರತದ ಐವರು ಕ್ರೈಸ್ತ ಮುಖ್ಯಮಂತ್ರಿಗಳಲ್ಲಿ ಒಬ್ಬರು ! ಅಂದರೆ, ಕ್ರಿಶ್ಚಿಯನ್ನರ ಸಂಖ್ಯೆ ಆ ಪರಿ ಹೆಚ್ಚಿದೆ ಎಂಬುದು ಭೈರಪ್ಪನವರ ಭಯ. ಅದು ಅವರದೇ ವಿನೂತನ ‘ವಾದ’ ಎಂಬಂತೆ ಲೇಖನ ದಲ್ಲಿ ಸಾದರಪಡಿಸುತ್ತಾರಾದರೂ, ಈ ಬಗ್ಗೆ ಒಂದು ವರ್ಷದ ಹಿಂದೆಯೇ ಲೇಖನಗಳು ದೇಶದ ನಾನಾ ಪತ್ರಿಕೆಗಳೂ ಸೇರಿದಂತೆ, ಇಂಟರ್ನೆಟ್ ತುಂಬ ಸರಿದಾಡಿವೆ. ಇಲ್ಲಿ ಭೈರಪ್ಪನವರಿಗೆ ಒಂದೆರಡು ಅಂಶಗಳನ್ನು ಸ್ಪಷ್ಟಪಡಿಸಲು ಯತ್ನಿಸುತ್ತೇನೆ. ನೀವು ಆಂಧ್ರದ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಅವರನ್ನು ಕ್ರೈಸ್ತರು ಅಂತ ಭಾವಿಸಿದ್ದರೆ ಅದಕ್ಕಿಂತ ಅಪದ್ಧ ಮತ್ತೊಂದಿಲ್ಲ. ಅವರ ಪೂರ್ವಜರ್ಯಾರೋ ಕ್ರೈಸ್ತರಾಗಿದ್ದಿರಬಹುದು. ಆದರೆ ಬೀಗತನಗಳಿಂದ ಹಿಡಿದು ರಾಜಕಾರಣದ ತನಕ ರಾಜಶೇಖರ ರೆಡ್ಡಿಯವರು ಶುದ್ಧಾನು ಶುದ್ಧ ರೆಡ್ಡಿಯೇ. ಆಂಧ್ರದಲ್ಲಿ ರೆಡ್ಡಿ-ಕಮ್ಮ-ಕಾಪು ಕದನ ತಲಾಂತರಗಳಿಂದ ನಡೆದುಬಂದಿದೆ. ಅದರ ಚುಕ್ಕಾಣಿ ಹಿಡಿದು ‘ರೆಡ್ಡಿ ರಾಜತ್ವ’ ಸ್ಥಾಪಿಸಿರುವುದೇ ರಾಜಶೇಖರ ರೆಡ್ಡಿ.
ಇನ್ನು ‘ಮಣಿಪುರ, ನಾಗಾಲ್ಯಾಂಡ್’ಗಳ ಜನರೆಲ್ಲ ಕ್ರೈಸ್ತ ರಾಗಿದ್ದಾರೆ’ ಎಂಬುದನ್ನು ಹೊಸ (ಸ್ವಂತ) ಕೂಗೇನೋ ಎಂಬಂತೆ ಎಬ್ಬಿಸುತ್ತಿದ್ದಾರೆ ಭೈರಪ್ಪ. ಅದು ಕೂಡ ಹಳೇ ಸಂಗತಿಯೇ. ಭಾರತದ ಒಟ್ಟಾರೆ ಹಿಂದೂ ಜನಸಂಖ್ಯೆಗೆ ಹೋಲಿಸಿಕೊಂಡರೆ, ಮಣಿಪುರ-ನಾಗಾಲ್ಯಾಂಡ್ಗಳ ಸಮಸ್ಯೆ ತುಂಬಾ ಬೃಹತ್ತಾಗಿ ಕಾಣುವುದಿಲ್ಲ. ಹಿಂದೂ ಜನಸಂಖ್ಯೆಯೂ ವಾಕರಿಕೆ ಬರುವಷ್ಟು ಬೆಳೆದಿದೆ. ಆದರೆ ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಮಣಿಪುರ- ನಾಗಾಲ್ಯಾಂಡ್ ಇತ್ಯಾದಿಗಳಲ್ಲಿ ಕ್ರೈಸ್ತರಾಗಿ ಮತಾಂತರ ಹೊಂದಿರುವವರು ಮೊದಲು ಹಿಂದೂಗಳಾಗಿದ್ದವರಲ್ಲ. ಅವರಲ್ಲಿ ಹೆಚ್ಚಿನವರು ಬುಡಕಟ್ಟುಗಳವರು. ತಪ್ಪಿದರೆ ಬೌದ್ಧರು. ಆದರೆ ಅಲ್ಲಿ ಸಾಮೂಹಿಕ ಕ್ರೈಸ್ತ ಮತಾಂತರ ಗಳಾಗಿರುವುದು ಮಾತ್ರ ನಿಜ. ಇಂಥ ಮತಾಂತರಗಳು ಉಗಾಂಡಾ, ಕೀನ್ಯಾ, ಝೈರೆ, ತಾಂಜೀನಿಯಾದಂತಹ ದೇಶಗಳಲ್ಲೂ ಆದವು. ಏಕೆಂದರೆ, ಅಲ್ಲಿ ಕ್ರೈಸ್ತ ಮಿಷನರಿಗಳು ಕಾಲಿಡುವುದಕ್ಕೆ ಮುಂಚೆ ಯಾವುದೇ ಒಂದು ಧರ್ಮ ಪ್ರಬಲವಾಗಿರಲಿಲ್ಲ. ಎರಡನೆಯದಾಗಿ, ಕ್ರೈಸ್ತ ಮಿಷನರಿಗಳು ಒಂದು ಕೈಲಿ ಆಸ್ಪತ್ರೆ, ಇನ್ನೊಂದು ಕೈಲಿ ಸ್ಕೂಲು, ಕಿಸೆಯಲ್ಲಿ ಕಾಸು, ಕೊರಳಿಗೆ ಏಸು- ಹೊತ್ತುಕೊಂಡೇ ಉಗಾಂಡಾದಂಥ ಬುಡಕಟ್ಟು ಹಾಗೂ Virgin landಗಳಿಗೆ ಹೋದರು. ಮುಸ್ಲಿಮರು ಒದ್ದು ಮತಾಂತರಗೊಳಿಸಿದರೆ ಕ್ರೈಸ್ತರು ಕಾಸು ಕೊಟ್ಟು, ಬೇರೆಯದೇ ತೆರೆನಾದ ಭೀತಿ ಹುಟ್ಟಿಸಿ ಪ್ರಬಲ ಧರ್ಮದ ಮುಂದಾಳತ್ವವಿಲ್ಲದ ಬುಡಕಟ್ಟು, ಬಡವ ಮತ್ತು ಧಾರ್ಮಿಕ ಅಮಾಯಕರನ್ನು ಮತಾಂತರಗೊಳಿಸುತ್ತಾರೆ.
ಇದನ್ನೆಲ್ಲ ಭೈರಪ್ಪನವರೂ ಸರಿಯಾಗಿಯೇ ಅರ್ಥ ಮಾಡಿಕೊಳ್ಳುತ್ತಾರೆ. ಆದರೆ ಇದ್ದಕ್ಕಿದ್ದಂತೆ ಅವರು fanatic (ಮತಭ್ರಾಂತ) ಹಿಂದೂ ಆಗಿಬಿಡುತ್ತಾರೆ. ಅಲ್ಲಾಹುನನ್ನು ನಂಬದಿರುವವರನ್ನು ಕೊಲ್ಲಿರಿ ಎಂದು ಕುರ್-ಆನ್ ಹೇಳಿದಂತೆಯೇ (ಆವರಣದ ಅವರ ವಾದ ಇದು) ಆತನನ್ನು ಶಿಲುಬೆಗೇರಿಸಿದ್ದೇ ಕಟ್ಟು ಕತೆ ಅಂತ ವಿತಂಡ ವಾದ ಮಂಡಿಸ ಹೊರಡುತ್ತಾರೆ. ಭೈರಪ್ಪನವರು ತಿಳಿದುಕೊಳ್ಳಬೇಕಾದ ಐತಿಹಾಸಿಕ ಸತ್ಯವೊಂದಿದೆ: ಅದೇನೆಂದರೆ, ಪ್ರತಿ ಪ್ರವಾದಿಯೂ ದೇವರಿಗೆ mediator ಆಗಿ ಹುಟ್ಟಿದವನೇ. ಪ್ರತಿ ಧರ್ಮವೂ ಮೂಲದಲ್ಲಿ ಶ್ರೇಷ್ಠವಾಗಿದ್ದುಕೊಂಡು ಕಾಲಾಂತರದಲ್ಲಿ fanatic ಸ್ವರೂಪ ಪಡೆದಂತಹುದೇ. ಶಂಕರಾಚಾರ್ಯರು ಕೂಡ ಅಗ್ರೆಸಿವ್ ಸ್ವರೂಪ ತಾಳಿದವರೇ. ಬುದ್ಧನ ಶಿಷ್ಯರೂ ಕೊಡಲಿ ಕೈಗೆತ್ತಿಕೊಂಡವರೇ. ಅಂಥದರಲ್ಲಿ ಪೋರ್ಚು ಗೀಸರು ಹೊರಡಿಸಿದ ಫರ್ಮಾನುಗಳನ್ನೂ, ಇಂಗ್ಲಿಷರು ಕಾಫಿ ತೋಟ ಕಿತ್ತುಕೊಂಡ ಬಗೆಯನ್ನೂ, ಮದರ್ ಥೆರೇಸಾ ಮಾಡಿದ ಮಾನವ ಸೇವೆಯನ್ನೂ ಒಂದೇ ತಕ್ಕಡಿ ಯಲ್ಲಿಟ್ಟು ತೂಗುವುದು at least, ಭೈರಪ್ಪನವರಿಗೆ ತರವಲ್ಲ. ಕುಷ್ಠರನ್ನ, ಕೊಳೆತು ಹೋದವರನ್ನ, ಸಾಯಲನುವಾದವರನ್ನ ಮತಾಂತರಗೊಳಿಸಿ ಥೆರೇಸಾಗೆ ಆಗಬೇಕಾದ್ದಾದರೂ ಏನಿತ್ತು? ಆಯ್ತು, ಆಕೆ ಅನಾಥ ಮಕ್ಕಳಿಗೆಲ್ಲ ಶಿಲುಬೆ ಹಾಕಿದಳು: ಆದರೆ ಸಿದ್ದಗಂಗೆಯ ಶ್ರೀಗಳು ಯಾವ ಬಡವನಿಗೂ ಲಿಂಗ ಕಟ್ಟಲಿಲ್ಲ ಎಂಬ ಭೈರಪ್ಪನವರ ವಾದವನ್ನೇ ಒಪ್ಪಿಕೊಳ್ಳೋಣ. ಆದರೆ ಭೈರಪ್ಪ ಯಾವ extremityಗೆ ಹೋಗುತ್ತಾರೆಂದರೆ, ‘ಥೆರೇಸಾಗೆ ಸಿಕ್ಕ ಗೌರವ ಸಿದ್ದಗಂಗೆ ಶ್ರೀಗಳಿಗೆ ಯಾಕೆ ಸಿಗಲಿಲ್ಲ’ ಅಂತ ವಾದಿಸುತ್ತಾರೆ. (ಥೆರೇಸಾಗೆ ಸಿಕ್ಕ ಗೌರವ ಲಿಂಗಾಯತರ ಮಾತೆ ಮಹಾದೇವಿಗೆ ಸಿಕ್ಕಿದ್ದಿದ್ದರೆ ಭೈರಪ್ಪ ಸಿಟ್ಟಾಗ ಬೇಕಿತ್ತು! ಹ್ಹ)
ಇತಿಹಾಸಕ್ಕೆ ಸಂಬಂಧಿಸಿದಂತೆ ಒಂದು ಸರಿಯಾದ ಪರಿಕಲ್ಪನೆ ಇಲ್ಲದೆ ಹೋದರೆ ಹೀಗಾಗುತ್ತದೆ. Basically, ಸಿದ್ದಗಂಗೆಯ ಶ್ರೀಗಳನ್ನು ತಾಯಿ ಥೆರೇಸಾಗೆ ಹೋಲಿಸುವುದೇ ತಪ್ಪು. ಅವರ ಕೆಲಸ, ವ್ಯಾಪ್ತಿ, ಉದ್ದೇಶ ಮತ್ತು reach ಎಲ್ಲವೂ ಬೇರೆಬೇರೆ. ಸಿದ್ದಗಂಗೆ ಶ್ರೀಗಳು ಪಾಠ ಹೇಳಿದರು, ಮಠದಲ್ಲಿ ಮಕ್ಕಳನ್ನಿಟ್ಟುಕೊಂಡರು. ಮಠದ ಕೀರ್ತಿ ಹೆಚ್ಚಿಸಿದರು. (ಕೊಂಚ ತಿರುಗಿಬಿದ್ದ ಕಿರಿಯ ಶ್ರೀಗಳನ್ನು ಎಡಗಾಲಲ್ಲಿ ತುಳಿದು ಸರ್ವನಾಶ ಮಾಡುತ್ತಿದ್ದರೆ ಸಣ್ಣ ಆಕ್ಷೇಪವೂ ಎತ್ತದೆ ಸುಮ್ಮನಿದ್ದರು. ಆ ಮಾತು ಬೇರೆ.) ಆದರೆ ಶ್ರೀಗಳು ಯಾವತ್ತಿಗೂ ಕುಷ್ಠರನ್ನು, ಕೊಳೆತವರನ್ನು ಮುಟ್ಟಲಿಲ್ಲ. ಚರಂಡಿಯಲ್ಲಿ ಹುಳು ಹಿಡಿದು ಮಲಗಿದ ನಿರ್ಗತಿಕನನ್ನು ಅವಚಿ ಎದೆಗಪ್ಪಿಕೊಳ್ಳಲಿಲ್ಲ. ಅವರು ಆಯ್ದುಕೊಂಡ ರಂಗವೇ ಬೇರೆಯಾಗಿದ್ದರಿಂದ, ಅವರ ಕೀರ್ತಿ ಕರ್ನಾಟಕದ ಆಸುಪಾಸು ಬಿಟ್ಟು ಆಚೆಗೆ ಹೋಗಲಿಲ್ಲ. ಇನ್ನು ಮಾಧ್ಯಮಗಳು, ಅದರಲ್ಲೂ ಇಂಗ್ಲಿಷ್ ಮಾಧ್ಯಮಗಳು ಥೆರೇಸಾಗೆ ಅನವಶ್ಯಕ ಪ್ರಚಾರ ಕೊಟ್ಟವು ಎನ್ನುತ್ತಾರೆ ಭೈರಪ್ಪ. Once again,ಸಿದ್ದಗಂಗಾ ಶ್ರೀಗಳು ಕರ್ನಾಟಕಕ್ಕೆ ಸಂಬಂಧಪಟ್ಟವರು. ಅವರು, ಅವರ ಶಿಕ್ಷಣ ಕ್ಷೇತ್ರ, ಅವರ ಮಠ ಇಲ್ಲಿಗೆ ಸೀಮಿತವಾದುದು. ಅದರಾಚೆಗಿನ ಮನುಷ್ಯ, he is not interested. ಅಷ್ಟೇಕೆ, ಗುಜರಾತಿಗೆ ಹೋಗಿ ನೀವು ಸತತ ಹದಿನೈದು ದಿನ ರಾಘವೇಂದ್ರ ಸ್ವಾಮಿಗಳ ಭಜನೆ ಮಾಡಿ. ಅದು ಪರಿಣಾಮ ಬೀರುವುದಿಲ್ಲ. ಏಕೆಂದರೆ issue ಅಲ್ಲಿಗೆ ಸಂಬಂಧಪಟ್ಟುದಾಗಿರುವುದಿಲ್ಲ. ಥೆರೇಸಾ ಅಥವಾ ಬಾಬಾ ಆಮ್ಟೆ ಈ ಪರಿಧಿಯನ್ನು ದಾಟಿದವರು. ಅವರು ಸಿದ್ದಗಂಗಾ ಶ್ರೀಗಳಿಗಿಂತ ಉತ್ತಮರು ಅಂತ ನಾನು ವಾದಿಸುತ್ತಿಲ್ಲ. ಅವರು ಆರಿಸಿಕೊಂಡ ಕ್ಷೇತ್ರ ಶ್ರೀಗಳ ಕ್ಷೇತ್ರಕ್ಕಿಂತ ವಿಸ್ತಾರವಾದದ್ದು. ಇಡೀ ದೇಶಕ್ಕೆ, ಪ್ರಪಂಚಕ್ಕೆ, ಮನುಕುಲಕ್ಕೆ ಸಂಬಂಧಿಸಿದ್ದು.
ಇಷ್ಟಾಗಿ ಥೆರೇಸಾ ತುಂಬಾ subtle ಆಗಿ ಅನಾಥ ಹಿಂದೂ(?) ಕಂದಮ್ಮಗಳನ್ನು ಸದ್ದಿಲ್ಲದೆ ಮತಾಂತರ ಗೊಳಿಸಿದ ರಾಕ್ಷಸಿ ಅಂತಲೇ ಇಟ್ಟುಕೊಳ್ಳೋಣ. ಅವೇ ಅನಾಥ ಹಿಂದೂ ಕಂದಮ್ಮಗಳನ್ನು ಎದೆಗವಚಿಕೊಂಡು ‘ನಾನು ಸಾಕುತ್ತೇನೆ’ ಅಂದಂಥ ಒಬ್ಬ ಹಿಂದೂ ಮಾತೃದೇವತೆ ಹುಟ್ಟಲಿಲ್ಲವಲ್ಲ ಸ್ವಾಮಿ? ಅದೂ ಇಷ್ಟು ದೊಡ್ಡ ಭಾರತದಲ್ಲಿ!
ನೋಡಿ, ಮನಸ್ಸು ಜಡಗೊಂಡರೆ ವಿವೇಕ ಸತ್ತು ಹೋಗುತ್ತದೆ. ವಾದ ವಿತಂಡವೂ, ಬರಹ ವಾಚಾಮವೂ ಆಗುತ್ತದೆ. ಭೈರಪ್ಪನವರ ವಿಷಯದಲ್ಲಿ ಅದೇ ಆಗತೊಡಗಿದೆ. ಇಂಗ್ಲಿಷರ ವಿರುದ್ಧ ಬಂಡೆದ್ದ ಬಾಪೂ ಸ್ವದೇಶಿ ಕಾಲೇಜು, ಬಟ್ಟೆ, ಬ್ಯಾಂಕು-ಹೀಗೆ ಪ್ರತಿ ಯೊಂದಕ್ಕೂ ಸ್ವದೇಶಿ ಪರ್ಯಾಯವನ್ನು ಹುಡುಕಿ ಚಳವಳಿಯನ್ನು ಮುನ್ನಡೆಸಿದರು. ಭೈರಪ್ಪನವರಲ್ಲಿ ಅಂಥ ಯಾವ ಲಕ್ಷಣವೂ ಕಾಣುತ್ತಿಲ್ಲ. ಅವರು ಮತಾಂತರಕ್ಕೆ ಯಾವ ಪರಿಹಾರವನ್ನೂ ಸೂಚಿಸುತ್ತಿಲ್ಲ. ಪೊಲೀಸರನ್ನಿಟ್ಟು ಮಿಷನರಿಗಳನ್ನು ಒದ್ದೋಡಿಸಿ ಎಂಬ ಧಾಟಿಯಲ್ಲಿ ಮಾತಾಡುತ್ತಾರೆ. ಇವರಿಗೂ ಪೋರ್ಚುಗೀಸರಿಗೂ ಯಾವ ವ್ಯತ್ಯಾಸ ಉಳಿಯಿತು? ಭೈರಪ್ಪನವರು ಯಾವ ತಲೆಮಾರನ್ನು ಲೀಡ್ ಮಾಡಲು ಹೊರಟಿದ್ದಾರೆ? (‘ನಂಗೆ ಆ ಉದ್ದೇಶವೇ ಇಲ್ಲ’ ಅಂತ ಪ್ರತಿಕ್ರಿಯಿಸಿ ಮುಟ್ಟಾಗುವುದು ಬೇಡ. Please)
ಇವತ್ತು ಭೈರಪ್ಪ ನೆನಪು ಮಾಡಿಕೊಳ್ಳಬೇಕಾದುದು ಪ್ರೊ. ನಂಜುಂಡಸ್ವಾಮಿಯಂತಹ ಚಿಂತಕರನ್ನ. ಕರ್ನಾ ಟಕಕ್ಕೆ after all, ಒಂದು ಕೋಳಿ ಮಾಂಸ ಮಾರುವ ಅಂಗಡಿ ಬರುತ್ತದೆ ಅಂದದ್ದಕ್ಕೆ ಭೂಮಿ ಆಕಾಶ ಒಂದು ಮಾಡಿ ಕೂಗಾಡಿದ್ದರು ಪ್ರೊಫೆಸರ್. ಏಕೆಂದರೆ, ಅವರಿಗೆ ಗೊತ್ತಿತ್ತು: ಒಬ್ಬ ಮಿಷನರಿ ಬರುವುದಕ್ಕಿಂತ ಒಬ್ಬ ವ್ಯಾಪಾರಿ ಬರುವುದು ದೇಶಕ್ಕೆ ಗಂಡಾಂತರಕಾರಿ ! ಅವರ ಮಾತು ಯಾರೂ ಕಿವಿಗೆ ಹಾಕಿಕೊಳ್ಳಲಿಲ್ಲ. ಅಕ್ಕಿ ಬೆಳೆಯುತ್ತಿದ್ದ ನೆಲದಲ್ಲಿ ಕಂಪ್ಯೂಟರ್ ಬೆಳೆ ಬೆಳೆಯಿತು. ಕೋಟ್ಯಂತರ ರೂಪಾಯಿ ಬಂದೇ ಬಿಟ್ಟಿತೇನೋ ಎಂಬಂತೆ ಭಾಸವಾಯಿತು. ದೊಡ್ಡದೊಂದು ಐಟಿ-ಬಿಟಿ ಗುಳ್ಳೆ ಎದ್ದು ನಿಂತಿತು. ಅದಕ್ಕೀಗ ಸೂಜಿ ಚುಚ್ಚಲಾಗಿದೆ. ಅಮೆರಿಕದಲ್ಲಿ ಬಡವರಿಗೆ (I mean, ಆದಾಯವಿಲ್ಲದ high risk group peopleಗೆ) ಮನೆ ಸಾಲ ಕೊಡುವುದರಲ್ಲಿ ಆದ ಚಿಕ್ಕದೊಂದು ಯಡವಟ್ಟು ಇಡೀ ಜಗತ್ತಿನ ಎಕಾನಮಿಗೆ ಹೊಡೆತ ಕೊಡುತ್ತಿದೆ. ಷೇರು ಮಾರ್ಕೆಟ್ ಮಣ್ಣು ಮುಕ್ಕಿದೆ. ರಿಯಲ್ ಎಸ್ಟೇಟ್ ಬೋರಲು ಬಿದ್ದಿದೆ. ಲಕ್ಷಾಂತರ ಸಂಬಳ ತರುತ್ತೇವೆಂದು ಇಲ್ಲಿಂದ ಹೋದವರು ಕ್ರಮೇಣ ಹಿಂತಿರುಗುತ್ತಿದ್ದಾರೆ. ಎಲ್ಲ ವೈಭವ ಕಳಚಿ ಬೀಳುತ್ತಿದೆ. ಇನ್ನು ಸರದಿಯಿಟ್ಟು ಭಾರತಕ್ಕೆ ಎಲ್ಲರೂ ಹಿಂತಿರುಗುತ್ತಾರೆ. ಬೋಧಿಸಲಿ ಅವರಿಗೆ ಹಿಂದೂ ಧರ್ಮವನ್ನು ಭೈರಪ್ಪ.
ಪ್ರಯಾರಿಟಿಗಳನ್ನು ಇತಿಹಾಸಕಾರ ಮುತ್ಸದ್ದಿ ಮತ್ತು ಬರಹಗಾರ ಯಾವತ್ತಿಗೂ ಮರೆಯಬಾರದು. ಭೈರಪ್ಪನವರು ಇತಿಹಾಸಕಾರರೂ ಹೌದು, ಬರಹಗಾರರೂ ಹೌದು. ಸದ್ಯ, ಮುತ್ಸದ್ದಿಯಲ್ಲ.
-ರವಿ ಬೆಳಗೆರೆ
ಭೈರಪ್ಪ ‘ಮುತ್ಸದ್ದಿ’ಯಲ್ಲ ಅಂತ ಸರ್ಟಿಫಿಕೆಟ್ ಕೊಡಲು ಇವರ್ಯಾರು?
ನಿಮಗೆ ಸಮಯವಿದ್ದರೆ, ಈ ದೇಶದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು ಎಂಬ ಇಚ್ಛೆ ನಿಮ್ಮಲ್ಲಿದ್ದರೆ ಕೊನ್ರಾಡ್ ಎಲ್ಟ್ಸ್ ಬರೆದಿರುವ “Negationism in India” ಎಂಬ ಪುಸ್ತಕವನ್ನು ಒಮ್ಮೆ ಓದಿ.
ಭಾರತದಲ್ಲಿ ಮುಸ್ಲಿಮ್ ಆಕ್ರಮಣಕಾರರು, ಆಡಳಿತಗಾರರು ನಡೆಸಿದ ದೌರ್ಜನ್ಯವನ್ನು ಹೇಗೆ ಮರೆಮಾಚಲಾಗುತ್ತಿದೆ ಎಂಬುದನ್ನು ಬಯಲು ಮಾಡಲು ಯತ್ನಿಸಿರುವ ಎಲ್ಟ್ಸ್, ಮೊದಲಿಗೆ ಯುರೋಪ್ನಲ್ಲಿ ನಡೆದ ಇಂತಹದ್ದೇ ಪ್ರಯತ್ನಗಳ ಬಗ್ಗೆ ಬೆಳಕು ಚೆಲ್ಲುತ್ತಾರೆ. “ಇಲ್ಲ, ಇಲ್ಲ.. ಹಿಟ್ಲರ್ ಯಹೂದಿಗಳ ಮಾರಣಹೋಮವನ್ನೇ ಮಾಡಲಿಲ್ಲ. ಅಲ್ಲೊಂದು ಇಲ್ಲೊಂದು ದೌರ್ಜನ್ಯಗಳು ನಡೆದವಷ್ಟೇ. ಜರ್ಮನಿ ಹಾಗೂ ರಷ್ಯಾದಲ್ಲಿ ಹೋಲೋಕಾಸ್ಟ್ ನಡೆಯಲೇ ಇಲ್ಲ” ಎಂದು ವಾಸ್ತವ ಸತ್ಯವನ್ನೇ ಮರೆಮಾಚುವ ಪ್ರಯತ್ನ ಯುರೋಪ್ನಲ್ಲಿ ನಡೆದಿತ್ತು. ಹಾಗಂತ ಉದಾಹರಣೆ ಸಮೇತವಾಗಿ ಭಾರತದ ಮೇಲೆ ಬೆಳಕು ಚೆಲ್ಲುವ ಎಲ್ಟ್ಸ್, ಒಂದು ಸಾವಿರ ವರ್ಷಗಳ ಕಾಲ ಮುಸ್ಲಿಮರು ನಡೆಸಿದ ದೌರ್ಜನ್ಯಗಳನ್ನು ನಮ್ಮ ಇತಿಹಾಸಕಾರರು ಹೇಗೆ ಮುಚ್ಚಿಹಾಕುತ್ತಾ ಬಂದಿದ್ದಾರೆ, ಹೇಗೆ ದೌರ್ಜನ್ಯವೇ ನಡೆದಿಲ್ಲ ಎಂದು ನಿರಾಕರಿ ಸುತ್ತಾರೆ ಎಂಬುದನ್ನು ವಿವರಿಸುತ್ತಾರೆ.
ಅಯೋಧ್ಯೆ ವಿಷಯದಲ್ಲೂ ಹೀಗೇ ಆಯಿತು.
ಮೊದಲಿಗೆ, ಅಲ್ಲಿ ರಾಮನ ದೇವಸ್ಥಾನವೇ ಇರಲಿಲ್ಲ ಎಂದು ನಿರಾಕರಿಸಿದರು. ಇತ್ತು ಎಂದು ಗಟ್ಟಿಯಾಗಿ ವಾದಿಸಿದ ಕೂಡಲೇ, ‘ಹಾಗಾದರೆ ರಾಮ ಅಲ್ಲೇ ಜನಿಸಿದ ಎಂಬುದಕ್ಕೆ ಸಾಕ್ಷ್ಯಾಧಾರ ಗಳನ್ನು ಕೊಡಿ’ ಎಂದು ಕೇಳಿದರು. ಸಾಕ್ಷ್ಯಾಧಾರಗಳನ್ನು ಕೊಟ್ಟ ಕೂಡಲೇ, “ಇಲ್ಲ, ಇಲ್ಲ, ಇಷ್ಟು ಸಾಕಾಗುವುದಿಲ್ಲ. ಇನ್ನೂ ಗಟ್ಟಿಯಾದ, ನಂಬುವಂತಹ ಸಾಕ್ಷ್ಯ ನೀಡಿ” ಎಂದು ಒತ್ತಾಯಿಸಿ ದರು. ಅಂತಹ ಪ್ರಭಲವಾದ ಸಾಕ್ಷ್ಯವೂ ಇದೆ ಎಂದು ಗೊತ್ತಾದರೆ ಏನು ಮಾಡುತ್ತಾರೆ ಗೊತ್ತೆ? ಎರಡು ತಂತ್ರಗಳನ್ನು ಒಡ್ಡುತ್ತಾರೆ. ಎಂದೋ ನಡೆದ ಘಟನೆಯ ಬಗ್ಗೆ ಇಂದಿಗೂ ಚರ್ಚೆ ನಡೆಸುವುದು ಎಷ್ಟು ಸರಿ? ಹಳೆಯದ್ದನ್ನೆಲ್ಲಾ ನಾವು ಮರೆತು ಹೊಸ ಸಮಾಜವನ್ನು ಕಟ್ಟಬೇಕು. ಇಂದು ನಮ್ಮ ಮುಂದಿರುವ ಸಮಸ್ಯೆ ಎಂದರೆ ಉತ್ತಮ ರಸ್ತೆಗಳು ಬೇಕು, ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು, ಫೋನು, ವಿದ್ಯುತ್ ನಮಗೆ ಬೇಕು. ಹಳೆಯದ್ದನ್ನೆಲ್ಲ ಕೆದಕಿ ತೆಗೆಯಬಾರದು ಎಂದು ನಿಮ್ಮ ತಲೆಸವರಲು ಯತ್ನಿಸುತ್ತಾರೆ. ಒಂದು ವೇಳೆ ನೀವೇನಾದರೂ ಅಂತಹ ಮಾತುಗಳಿಗೆ ಸೊಪ್ಪುಹಾಕದಿದ್ದರೆ, “ಮುಸ್ಲಿಮರು ಭಾರತಕ್ಕೆ ಆಗಮಿಸಲು ನಮ್ಮಲ್ಲಿನ ಜಾತಿ ಪದ್ಧತಿಯೇ ಕಾರಣ. ದಲಿತರನ್ನು ದೂರವಿಟ್ಟಿದ್ದ ಸಾಮಾಜಿಕ ಅಸಮಾನತೆಯೇ ಮುಖ್ಯ ಕಾರಣ. ನಾವು ದಲಿತರನ್ನು ಸಮಾನವಾಗಿ ಕಂಡಿದ್ದರೆ, ನಡೆಸಿಕೊಂಡಿದ್ದರೆ ಜಾತಿ ಹೆಸರಿನಲ್ಲಿ ಸಮಾಜವನ್ನು ಒಡೆಯದಿದ್ದರೆ ಪರಕೀಯರು ನಮ್ಮ ಮೇಲೆ ಆಕ್ರಮಣ ಮಾಡಲು ಸಾಧ್ಯವಾಗುತ್ತಿತ್ತೇ?” ಎಂದು ವಿಷಯಾಂತರ ಮಾಡಲು ಯತ್ನಿಸುತ್ತಾರೆ.
ಹೀಗೆ ಒಂದು ಗಂಭೀರ ಸಮಸ್ಯೆ, ಐತಿಹಾಸಿಕ ದೌರ್ಜನ್ಯದ ಬಗೆಗಿನ ಚರ್ಚೆಯನ್ನು ದಾರಿತಪ್ಪಿಸಿ ಸಾಮಾಜಿಕ ಅಸಮಾನತೆಯ ಹೆಸರಿನಲ್ಲಿ ಜಾತಿ ಜಾತಿಗಳ ನಡುವೆಯೇ ಕಲಹವನ್ನು ತಂದಿಡು ತ್ತಾರೆ.
ಕಮ್ಯುನಿಸ್ಟರು ಮಾಡಿಕೊಂಡು ಬಂದಿರುವುದು ಇದನ್ನೇ. ಒಂದು ವೇಳೆ, ನಿಮ್ಮನ್ನು ಮನವೊಲಿಸಬಹುದಾಗಿದ್ದರೆ ತಮ್ಮ ಪ್ರತಿಭೆ, ವಾಕ್ಚಾತುರ್ಯವನ್ನು ಬಳಸಿ ನಿಮ್ಮನ್ನು ಮಂಗನನ್ನಾಗಿ ಮಾಡುತ್ತಾರೆ. ವಾದದಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಗೊತ್ತಾದ ಕೂಡಲೇ ನಿಮ್ಮನ್ನು confuse ಮಾಡಲು, ಕೊನೆಗೆ Discredit ಮಾಡಲು ಯತ್ನಿಸುತ್ತಾರೆ. ತರ್ಕದಲ್ಲಿ ಸೋಲಿಸಲಾಗದಿದ್ದರೆ ವ್ಯಕ್ತಿ ನಿಂದನೆಗೆ ಇಳಿದು ಬಿಡುತ್ತಾರೆ. ನಿಮ್ಮ ಬಟ್ಟೆಗೆ ಕೊಚ್ಚೆ ಎರಚಿ ಬಿಡುತ್ತಾರೆ, ತೊಳೆದುಕೊಳ್ಳುವ ಕೆಲಸ ನಿಮ್ಮದಾಗುತ್ತದೆ.
“ವಿಚಾರ ನಪುಂಸಕತೆ” ಇರುವವರು ಇನ್ನೇನನ್ನು ಮಾಡಲು ಸಾಧ್ಯ?
ಖ್ಯಾತ ಸಾಹಿತಿ ಎಸ್. ಎಲ್. ಭೈರಪ್ಪನವರು ಮತಾಂತರದ ಬಗ್ಗೆ ಸ್ಥಳೀಯವಾಗಿಯೇ ಜಾಗತಿಕ ಮಟ್ಟದ ಒಂದು ಚರ್ಚೆ ಯನ್ನು ಆರಂಭಿಸಿದ್ದಾರೆ. ಕ್ರಿಶ್ಚಿಯಾನಿಟಿಯ ನಿಜವಾದ ಮುಖ ವನ್ನು ಜಾಗತಿಕ ಸ್ಥರದಲ್ಲಿ ಅನಾವರಣ ಮಾಡಿದ್ದಾರೆ. ಹಾಗೆ ಭೈರಪ್ಪನವರು ಆಧಾರ ಸಮೇತ ಎತ್ತಿರುವ ಪ್ರಶ್ನೆಗಳಿಗೆ ತಾರ್ಕಿಕ ಹಾಗೂ ಆಧಾರ ಸಮೇತವಾಗಿಯೇ ಉತ್ತರ ಕೊಡಬೇಕಾದುದು ಸಹಜ ಆಶಯ.
ಆದರೆ “ವಿಜಯ ಕರ್ನಾಟಕದಲ್ಲಿ ಅವರ ಲೇಖನ ಓದಿದ ಮೇಲೆ, ಅವರು ‘ಆವರಣ’ದಿಂದ ಹೊರಬರುವುದು ಹಾಗಿರಲಿ, ಪೂರ್ತಿಗುಹಾಂತರಾಳವನ್ನೇ ಹೊಕ್ಕಂತೆ ಕಾಣುತ್ತಿದೆ. ಭೈರಪ್ಪ ವಿಪರೀತ Paranoid ಆಗಿದ್ದಾರೆ. ತುಂಬ ಚೆಲುವಾಗಿ, ಮುದ ನೀಡಿ, ಯೋಚನೆಗೆ ಹಚ್ಚಿ, ಭಾವೋತ್ಕರ್ಷಕ್ಕೆ ಕೊಂಡೊಯ್ದು ಓದುಗನಿಗೊಂದು ಮಧುರಾನುಭೂತಿ ನೀಡುತ್ತಿದ್ದ ಭೈರಪ್ಪ ಇದೇಕೆ ಹೀಗೆ’ ಎಲ್ಲ ಬಗೆಯ ಕರ್ಮಠ’ರಂತೆ ಬರೆಯತೊಡಗಿ ದ್ದಾರೆ”.
“ಅಕ್ಟೋಬರ್ 16ನೇ ತಾರೀಕಿನ ವಿಜಯ ಕರ್ನಾಟಕ ತೆರೆದು ಅದರಲ್ಲಿನ ಭೈರಪ್ಪನವರ ಲೇಖನವನ್ನು ಒಬ್ಬರೇ ಕುಳಿತು ದೊಡ್ಡ ದನಿಯಲ್ಲಿ ಓದಿಕೊಳ್ಳಿ. ಸ್ವಲ್ಪ ಹೊತ್ತಿಗೆ ನೀವು ಯಾರಿಗೋ ಲೆಕ್ಚರು ಕೊಡುತ್ತಿದ್ದೀರಿ ಎಂಬಂತೆ ಭಾಸವಾಗುತ್ತದೆ, ನಿಮಗೂ ಒಬ್ಬ ಕ್ರೈಸ್ತರ ಮತ ಬೋಧಕನಿಗೂ ವ್ಯತ್ಯಾಸವಿಲ್ಲ ಅನಿಸುತ್ತದೆ. ಹದಿನೈದು ಜನರನ್ನು ಕೂರಿಸಿಕೊಂಡು ಓದಿ ಬಿಡಿ: ನೀವು ಮುಸ್ಲಿಂ ಧರ್ಮ ಬೋಧಕನಂತೆ ಧ್ವನಿಸತೊಡಗುತ್ತೀರಿ. ಇದನ್ನೇ ನಾನು ಒಂದು ಬರಹದಲ್ಲಿ ನ ಕರ್ಮಠ ಗುಣ ಅನ್ನುವುದು. It starts Preaching. Writer starts barking. ಯಾವಾಗ ನಮ್ಮ ಬರವಣಿಗೆಗೆ ‘ಪ್ರವಾದೀ ಗುಣ’ ಬಂದು ಬಿಡುತ್ತದೋ, ಆವಾಗ ನಮ್ಮೊಳಗಿನ ಸೃಜನಶೀಲ ಬರಹಗಾರ ಸತ್ತು ಹೋಗಿ ಬಿಡುತ್ತಾನೆ. sorry, ಭೈರಪ್ಪ.”
ಹೀಗೆ ಸಾಗುವ ರವಿ ಬೆಳಗೆರೆಯವರ ಲೇಖನ(ಅಕ್ಟೋಬರ್ ೧೯)ವನ್ನು ಓದುತ್ತಿದ್ದರೆ ಇದೇನು “ಚರ್ಚೆಯೋ ಅಥವಾ ಚಾರಿತ್ರ್ಯವಧೆಯೋ”, “ತರ್ಕವೋ ಅಥವಾ ತರ್ಲೆಯೋ” ಎಂಬ ಅನುಮಾನ ಕಾಡಲಾರಂಭಿಸಿತು!
‘ಮಧುರಾನುಭೂತಿ’, ‘ಭಾವೋತ್ಕರ್ಷ’, ‘ಕರ್ಮಠ’ ಮುಂತಾದ ಪದಗಳನ್ನು ಬೆಳಗೆರೆ ವಿನಾಕಾರಣ ಎಳೆದುಕೊಂಡು ಬಂದುಬಿಡುತ್ತಾರೆ. ಅದನ್ನು ನೋಡಿದಾಗ ಈ “ಪ್ರೀಚಿಂಗು, ಬಾರ್ಕಿಂಗು” ಮಾಡುತ್ತಿರುವುದು ಭೈರಪ್ಪನವರೋ ಅಥವಾ ರವಿ ಬೆಳಗೆರೆಯವರೋ ಎಂಬ ಗೊಂದಲವುಂಟಾಗಿ ಬಿಡುತ್ತದೆ. ಅಲ್ಲಾ ಸ್ವಾಮಿ, ಮಧುರಾನುಭೂತಿ ಬೇಕೆಂದರೆ ‘ಗೃಹಭಂಗ’ ಓದಿ, ಅದು ಬೇಡವೆಂದರೆ ‘ಗ್ರಹಣ’ ಓದಿ, ಒಳ್ಳೇ ಸಾಥ್ ಬೇಕೆಂದರೆ ‘ಸಾರ್ಥ’ವನ್ನು ಕೈಗೆತ್ತಿಕೊಳ್ಳಿ.
ಆದರೆ ಸಾಹಿತಿಯೇ ಆಗಿದ್ದರೂ ಭೈರಪ್ಪನವರು ‘ವಿಜಯ ಕರ್ನಾಟಕ’ದಲ್ಲಿ ಅವರು ಬರೆದಿರು ವುದು ಕಾದಂಬರಿಯಲ್ಲ, ಲೇಖನ. ಸಾಹಿತ್ಯ ನವಿರಾಗಿರಬೇಕು ನಿಜ. ಆದರೆ ಲೇಖನ ವಸ್ತುನಿಷ್ಠವಾಗಿರ ಬೇಕು. ಸಾಹಿತ್ಯಕ್ಕೆ ಸತ್ಯನಿಷ್ಠೆಯ ಅಗತ್ಯವಿಲ್ಲ. ನಿಮಗೆ ಬೇಕಾದ ರೀತಿಯಲ್ಲಿ ಕಾಲ್ಪನಿಕ ಪ್ರಸಂಗಗಳನ್ನು ಹೆಣೆದುಕೊಂಡು ಹೋಗಬಹುದು. ಮಿಗಿಲಾಗಿ ಭೈರಪ್ಪನವರ ಕಾದಂಬರಿಗಳಲ್ಲಿ ನವಿರಾದ ಭಾಷೆ ಇದ್ದರೂ, ಅವುಗಳನ್ನು ಓದಿದಾಗ ಮಧುರ ಅನುಭವ ಸಿಗುವುದೇ ಆಗಿದ್ದರೂ ಅರುಣ್ ಶೌರಿಯವ ರಂತೆ ಅವರೊಬ್ಬ Serious Writer. ಶೌರಿ ನಿಮ್ಮ ಮಿದುಳಿಗೆ ತ್ರಾಸ ಕೊಟ್ಟು ನಿಮ್ಮನ್ನು ಚಿಂತನೆಗೆ ಹಚ್ಚುತ್ತಾರೆ. ಖುಷವಂತ್ಸಿಂಗ್ ನಿಮ್ಮ ಮನಸ್ಸಿಗೆ ಕಚಗುಳಿ ಇಕ್ಕುತ್ತಾರೆ. ನಿಮಗೆ ಕಚಗುಳಿಯಲ್ಲಿ ಮಾತ್ರ ಮಧುರಾನುಭೂತಿ ಸಿಗುತ್ತದೆ ಎಂಬ ಕಾರಣಕ್ಕೆ ಒಬ್ಬ ಗಂಭೀರ ಲೇಖಕನಿಂದಲೂ ಕಚಗುಳಿಯನ್ನು ನಿರೀಕ್ಷಿಸುವುದು ಎಷ್ಟು ಸರಿ? “ಟೈಂಪಾಸ್” ಅಥವಾ “ಕಂಪನಿ ಆಫ್ ವಿಮೆನ್”ನಲ್ಲಿ ಸಿಕ್ಕಿದ್ದೇ “ಆವರಣ” ದಲ್ಲೂ ಸಿಗಬೇಕು ಎಂದರೆ ಹೇಗಾದೀತು ಸ್ವಾಮಿ!
ನಿಮಗೆ ಬೇಕಾದದ್ದು ‘ಆವರಣ’ದಲ್ಲಿ ಸಿಗಲಿಲ್ಲ ಎಂಬ ಕಾರಣಕ್ಕೆ ಭೈರಪ್ಪನವರು ‘ಜಡ್ಡುಗಟ್ಟಿದ್ದಾರೆ’ ಎಂದು ತೀರ್ಪು ನೀಡುವು ದನ್ನು ಹೇಗೆತಾನೇ ಒಪ್ಪಿಕೊಳ್ಳಲು ಸಾಧ್ಯ?
ಇನ್ನು ನೀವು ಒಂದಿಷ್ಟು ದಿನ ಇತಿಹಾಸ ಬೋಧಕರಾಗಿದ್ದಿರಬಹುದು. ಆದರೆ ಪ್ಯಾನ್ ಇಸ್ಲಾಮಿಸಂ, ವರ್ಜಿನ್ ಲ್ಯಾಂಡ್ ಅಂತ ಗೋಜಲು ಗೋಜಲಾಗಿ ಯಾವ ಆಧಾರಗಳನ್ನೂ ಕೊಡದೆ ಬರೀ ನಿಂದನೆಗೆ ಪೂರಕವಾಗಿ ಕೆಲವು ಪದಗುಚ್ಛಗಳನ್ನು ಉಲ್ಲೇಖ ಮಾಡಿದ್ದೀರಿ. ಹಾಗಾಗಿ ನಿಮ್ಮ ಲೇಖನ eನವನ್ನೂ ಹೆಚ್ಚಿಸುವುದಿಲ್ಲ, ಬೆಳಕನ್ನೂ ಚೆಲ್ಲುವುದಿಲ್ಲ!! ಕಾರ್ಖಾನೆಯೊಂದರ ಸೈಕಲ್ ಸ್ಟಾಂಡ್ನಲ್ಲಿ ನಿಂತುಕೊಂಡು ಕಮ್ಯುನಿಸ್ಟ್ ನೇತಾರನೊಬ್ಬ ಭಾಷಣ ಕೊಡುತ್ತಿರುವಂತೆ ಭಾಸವಾಗುತ್ತದೆ!
ರವಿ ಬೆಳಗೆರೆಯವರೇ, ಭೈರಪ್ಪನವರು ಹೇಳಲು ಹೊರಟಿರುವುದೇನು ಎಂಬುದನ್ನು ಅರ್ಥಮಾಡಿಕೊಳ್ಳಬೇಕೆಂದಾದರೆ “ಒಬ್ಬರೇ ಕುಳಿತು ದೊಡ್ಡ ಧ್ವನಿಯಲ್ಲಿ ಓದಿಕೊಳ್ಳಬೇಡಿ”. ಒಮ್ಮೆ ನಿಮ್ಮಷ್ಟಕ್ಕೆ ಓದಿಕೊಂಡು, ಒಂದಿಷ್ಟೊತ್ತು ಶಾಂತಚಿತ್ತರಾಗಿ ಕುಳಿತುಕೊಂಡು ಭೈರಪ್ಪ ಎತ್ತಿರುವ ಪ್ರಶ್ನೆಗಳು ಹಾಗೂ ಆಧಾರಸಮೇತ ಬೆಳಕು ಚೆಲ್ಲಿರುವ ಅಂಶಗಳ ಬಗ್ಗೆ ಚಿಂತನೆ ಮಾಡಿ, ಸಾಕು.
ವಿಶ್ವದ ಅತ್ಯಂತ ಪುರಾತನ ನಾಗರೀಕತೆಗಳೆಂದರೆ ರೋಮನ್, ಗ್ರೀಕ್ ಹಾಗೂ ನಮ್ಮ ಸಿಂಧೂನದಿ ನಾಗರೀಕತೆ. ರೋಮನ್ ಸಾಮ್ರಾಜ್ಯದಲ್ಲಿ ರಾಜನನ್ನೇ ದೇವರು ಎಂದು ಭಾವಿಸಲಾಗುತ್ತಿತ್ತು, ಪೂಜಿಸಲಾಗುತ್ತಿತ್ತು. ಆದರೆ ಜೀಸಸ್ “ನಾನೇ ದೇವರ ಪುತ್ರ. ಜನರ ಉದ್ಧಾರಕ ನಾನೇ” ಎಂದು ಹೇಳಿಕೊಳ್ಳಲಾರಂಭಿಸಿದ. ಹಾಗಾಗಿ ಸಹಜವಾಗಿಯೇ ರೋಮನ್ ರಾಜನ ಕೋಪಕ್ಕೆ ತುತ್ತಾದ. ರಾಜ ತನ್ನ ಪ್ರತಿನಿಧಿಯನ್ನು ಕಳುಹಿಸಿ ಜೀಸಸ್ಗೆ ಎಚ್ಚರಿಕೆಯನ್ನೂ ನೀಡಿದ. ಆದರೆ ಜೀಸಸ್ ತನ್ನ ಪ್ರತಿಪಾದನೆ ಯನ್ನು ಮಾತ್ರ ನಿಲ್ಲಿಸಲಿಲ್ಲ. ಒಂದು ವೇಳೆ, ಜನ ಜೀಸಸ್ನನ್ನೇ ದೇವರ ಪುತ್ರ ಎಂದು ಒಪ್ಪಿಕೊಂಡರೆ, ಆತನನ್ನು ಆರಾಧಿಸಲು ಆರಂಭಿಸಿದರೆ ತನ್ನ ಮಹತ್ವವೇ ಕಳೆದುಹೋಗುತ್ತದೆ ಎಂಬುದನ್ನು ಅರಿತ ರೋಮನ್ ರಾಜ ಜೀಸಸ್ಗೆ ಮರಣ ದಂಡನೆಯನ್ನು ವಿಧಿಸಿದ. ನಮ್ಮಲ್ಲಿ ಹೇಗೆ ಮರಣ ದಂಡನೆಯೆಂದರೆ ನೇಣಿಗೇರಿ ಸುತ್ತಾರೋ ಹಾಗೆಯೇ ರೋಮನ್ ಸಾಮ್ರಾಜ್ಯದಲ್ಲಿ ಮರಣ ದಂಡನೆಗೆ ಗುರಿಯಾಗುವವರನ್ನು ಶಿಲುಬೆಗೇರಿಸುತ್ತಿದ್ದರು. ಕ್ರೈಸ್ತರು ‘ಹೋಲಿ ಕ್ರಾಸ್’ ಎಂದು ಹೇಳುವ ಶಿಲುಬೆ ರೋಮನ್ ಸಾಮ್ರಾಜ್ಯದಲ್ಲಿ ನಮ್ಮ ಕುಣಿಕೆಗೆ ಸಮನಾಗಿತ್ತು. ಜೀಸಸ್ಗೆ ಮರಣದಂಡನೆ ವಿಧಿಸಿದ್ದು ಯಹೂದಿಗಳಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಿ ಸ್ವಾಮಿ.
ಇನ್ನು ನೀವೇ ಹೇಳಿದಂತೆ ಭೈರಪ್ಪನವರು ಖಂಡಿತ ಹಿಸ್ಟಾರಿ ಯನ್. ಎರಡು ಭಾರಿ ಇಸ್ರೇಲ್ಗೆ ಭೇಟಿ ಕೊಟ್ಟು, ಸತತ ೧೫ ದಿನಗಳ ಕಾಲ ಜೀಸಸ್ ಜನಿಸಿದ, ಓಡಾಡಿದ, ಆತನನ್ನು ಶಿಲುಬೆ ಗೇರಿಸಿದ ಸ್ಥಳಗಳಲ್ಲೆಲ್ಲ ಓಡಾಡಿ ತಿಳಿದುಕೊಂಡು ಬಂದು ಬರೆದಿದ್ದಾರೆ. ಜಗತ್ತಿನ ೫೦ಕ್ಕೂ ಹೆಚ್ಚು ದೇಶಗಳನ್ನು ಸಂದರ್ಶಿಸಿರುವ ಅವರು ಸತ್ಯನಿಷ್ಠರು ಹಾಗೂ ಸತ್ಯ ಯಾವತ್ತೂ ನಿಷ್ಠುರವಾಗಿ ರುತ್ತದೆಯೇ ಹೊರತು ನವಿರಾಗಿರುವುದಿಲ್ಲ.
ಮತ್ತೆ ಇತಿಹಾಸಕ್ಕೆ ಬರೋಣ.
ಕ್ರಿಶ್ಚಿಯಾನಿಟಿ ಪ್ರಾಮುಖ್ಯತೆಗೆ ಬಂದಿದ್ದೇ ಜೀಸಸ್ ಮರಣದ ನಂತರ. ಒಂದೆಡೆ ಸಾಮಾಜಿಕ ಕಲಹದಿಂದಾಗಿ ರೋಮನ್ ಸಾಮ್ರಾಜ್ಯ ದುರ್ಬಲವಾಗತೊಡಗಿತು. ಇನ್ನೊಂದೆಡೆ ಜೀಸಸ್ ಸಂದೇಶ ಸಾರಲು ಹೊರಟ್ಟಿದ್ದವರ ಧ್ವನಿ ಬಲಗೊಳ್ಳುತ್ತಾ ಹೋಯಿತು. Infact, Roman Empire was wiped out by Christians. ನಮ್ಮ ನಳಂದ ವಿಶ್ವವಿದ್ಯಾಲಯವನ್ನು ಹೇಗೆ ಮುಸ್ಲಿಮರು ಸುಟ್ಟು ಹಾಕಿದರೋ ಹಾಗೆಯೇ ಅಲೆಗ್ಸಾಂಡ್ರಿಯಾದ ಬೃಹತ್ ಗ್ರಂಥಾಲಯವನ್ನು ನಾಶಪಡಿಸಿದ್ದು ಕ್ರಿಶ್ಚಿಯನ್ನರೇ.ಎಡ್ವರ್ಡ್ ಗಿಬ್ಬನ್ನ “Decline and Fall of the Roman Empire” ಎಂಬ ಪುಸ್ತಕನ್ನೊಮ್ಮೆ ಓದಿ.
ಅಷ್ಟೇ ಅಲ್ಲ, ಪ್ಲೇಟೋ, ಅರಿಸ್ಟಾಟಲ್ಗೆ ಜನ್ಮ ನೀಡಿದ ವಿಶ್ವದ ಅತ್ಯಂತ ಪುರಾತನ ಹಾಗೂ ಶ್ರೇಷ್ಠ ನಾಗರೀಕತೆಗಳಾದ ಗ್ರೀಕ್ ಹಾಗೂ ರೋಮನ್ ಸಿವಿಲೈಜೇಶನ್ಗಳನ್ನು ಬಲಿತೆಗೆದುಕೊಂಡಿದ್ದೇ ಕ್ರೈಸ್ತರು. ಅಂತಹ Christian Evangelist ಗಳ ಮುಂದಿನ ಗುರಿ ಏಷ್ಯಾ. ಅದರಲ್ಲೂ ಭಾರತ. ಹಾಗಂತ ದಿವಂಗತ ಪೋಪ್ ಜಾನ್ ಪಾಲ್ ಅವರೇ ಹೇಳಿದ್ದಾರೆ.
ಇಂದು ವಿಶ್ವದ ಅತ್ಯಂತ ಹಳೆಯ ಹಾಗೂ surviving civilisation ಅಂದರೆ ನಮ್ಮ ಭಾರತದ ನಾಗರೀಕತೆಯೊಂದೇ. ಅದೂ ಕೂಡ ರೋಮನ್ ಹಾಗೂ ಗ್ರೀಕ್ ನಾಗರೀಕತೆಗಳಂತೆ ಇತಿಹಾಸದ ಪುಟ ಸೇರಿ ಪಳೆಯುಳಿಕೆಯಾಗಿರುವ ಡೈನೋಸಾರ್ನಂತಾಗಬೇಕೆ? ಅಂತಹ ಅಪಾಯದ ಬಗ್ಗೆ ಎಚ್ಚರಿಸಲು ಹೊರಟರೆ ‘ಜಡ್ಡುಗಟ್ಟಿ’ದವರಾಗಿ ಬಿಡುತ್ತಾರೆಯೇ? ನೀವು ಅಣಕವಾಗಿ ಹೇಳಿರುವಂತೆ ಭೈರಪ್ಪನವರು ಹೊಸವಿಚಾರವನ್ನೇನೂ ಎತ್ತಿಲ್ಲ. ಆದರೆ ಇತಿ ಹಾಸದ ಪುಟಗಳಲ್ಲಿ ದಾಖಲಾಗಿರುವ ಹಳೆಯ ವಿಚಾರಗಳನ್ನು ಜನರಿಗೆ ಮನವರಿಕೆ ಮಾಡಿಕೊಟ್ಟು ಹೊಸ ಅನಾಹುತಗಳಾಗದಂತೆ ತಡೆಯಬೇಕೆಂಬ ಉದ್ದೇಶ ಖಂಡಿತ ಅವರಿಗಿದೆ. ಅವರ ಕಾಳಜಿಯನ್ನು ಅರ್ಥಮಾಡಿಕೊಳ್ಳುವಷ್ಟು ಮತಿ ಇಲ್ಲದವರಿಗೆ ಭೈರಪ್ಪ ‘ಮತಭ್ರಾಂತ’ರಂತೆ ಕಾಣುತ್ತಾರೆ ಅಷ್ಟೇ.
ಇನ್ನು ನಗುತರುವ ವಿಚಾರವೆಂದರೆ “ನೀವು ಆಂಧ್ರದ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಅವರನ್ನು ಕ್ರೈಸ್ತರು ಅಂತ ಭಾವಿಸಿದ್ದರೆ ಅದಕ್ಕಿಂತ ಅಪದ್ಧ ಮತ್ತೊಂದಿಲ್ಲ. ಅವರ ಪೂರ್ವಜರ್ಯಾರೋ ಕ್ರೈಸ್ತರಾಗಿದ್ದಿರಬಹುದು. ಆದರೆ ಬೀಗತನ ಗಳಿಂದ ಹಿಡಿದು ರಾಜಕಾರಣದ ತನಕ ರಾಜಶೇಖರ ರೆಡ್ಡಿಯ ವರು ಶುದ್ಧಾನು ಶುದ್ಧ ರೆಡ್ಡಿಯೇ” ಎನ್ನುವ ಬೆಳಗೆರೆಯವರದು ತರ್ಕವಿಲ್ಲದ ಪ್ರತಿಪಾದನೆ. ದೇಶದ ತುಂಬ ಇರುವವರೆಲ್ಲ ಪೂರ್ವಜರು ಹಿಂದೂಗಳಾಗಿದ್ದು ಈಗ ಕ್ರೈಸ್ತರಾಗಿರುವವರೇ. “ಪೂರ್ವಜರ್ಯಾರೋ ಕ್ರೈಸ್ತರಾಗಿದ್ದಿರಬಹುದು” ಎಂದು ಹೊಸ ವಾದ ಹುಟ್ಟುಹಾಕುತ್ತಿದ್ದೀರಲ್ಲಾ, ರಾಜಶೇಖರ ರೆಡ್ಡಿಯವರು ಮತ್ತೆ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂಬುದಕ್ಕೆ ನಿಮ್ಮ ಬಳಿ ದಾಖಲೆ ಇದ್ದರೆ ಜನರ ಮುಂದಿಡಿ. ಆತನಲ್ಲಿ ರೆಡ್ಡಿ ಗುಣಗಳಿವೆ ಎಂಬ ಕಾರಣಕ್ಕೆ, ರೆಡ್ಡಿಗಳೊಂದಿಗೇ ಸಂಬಂಧ ಬೆಳೆಸಿದ್ದಾರೆ ಎಂಬ ಕಾರಣಕ್ಕೆ ಹಿಂದುವಾಗಿ ಬಿಡಲ್ಲ. ಆತ ಹಿಂದೂವಾಗಿದ್ದರೆ ಆತನ ಹೆಸರು ‘ಯೇಸುಪದ ಸಾಮ್ಯುಯೆಲ್ ರಾಜಶೇಖರ ರೆಡ್ಡಿ’ ಏಕಾಗುತ್ತಿತ್ತು? ತಿರುಪತಿಯಲ್ಲಿ ಮತಾಂತರ ನಡೆದಿದ್ದು ಯಾರ ಕುರ್ಚಿಯ ಕೆಳಗೆ? ಆಂಧ್ರದಲ್ಲಿ ನಾಯಿ ಕೊಡೆಗಳಂತೆ ಚರ್ಚ್ಗಳು ತಲೆಯೆತ್ತುತ್ತಿರುವುದು ಯಾರ ಆಡಳಿತದಲ್ಲಿ?
ಸ್ವಾಮಿ, ಮನಸ್ಸು ಜಡಗೊಂಡರೆ ವಿವೇಕಕ್ಕೆ ಮಂಕೂ ಕವಿಯು ತ್ತದೆ, ತರ್ಕರಹಿತ ವಾದಕ್ಕಿಳಿದರೆ ವಿವೇಕ ಸತ್ತೂ ಹೋಗುತ್ತದೆ. “ಥೆರೇಸಾಗೆ ಸಿಕ್ಕ ಗೌರವ ಲಿಂಗಾಯತರ ಮಾತೆ ಮಹಾದೇವಿಗೆ ಸಿಕ್ಕಿದ್ದಿದ್ದರೆ ಭೈರಪ್ಪ ಸಿಟ್ಟಾಗ ಬೇಕಿತ್ತು! ಹ್ಹ”, “ನಂಗೆ ಆ ಉದ್ದೇಶವೇ ಇಲ್ಲ’ ಅಂತ ಪ್ರತಿಕ್ರಿಯಿಸಿ ಮುಟ್ಟಾಗುವುದು ಬೇಡ. Please” ಎಂದು ನಾಡೇ ಮೆಚ್ಚಿಕೊಂಡಿರುವ ಹಿರಿಯ ಸಾಹಿತಿಯ ಬಗ್ಗೆ ಉಡಾಫೆಯ ಮಾತುಗಳನ್ನಾಡಿ ಅದನ್ನು ‘Demonstrate‘ ಮಾಡುವ ಅಗತ್ಯವಿಲ್ಲ.
ಇನ್ನು ಮದರ್ ತೆರೆಸಾ ಅವರ ವಿಷಯಕ್ಕೆ ಬರೋಣ. ನೀವು ಹೇಳುವಷ್ಟು ಆಕೆ ಒಳ್ಳೆಯವರಾಗಿದ್ದರೆ, ಆಕೆಗೆ ಮತಾಂತರ ಮಾಡುವ ಉದ್ದೇಶ ಇಲ್ಲದೇ ಹೋಗಿದ್ದಿದ್ದರೆ ನಾವೆಲ್ಲರೂ ಖುಷಿಪಡಬಹುದಿತ್ತು. ಆದರೆ ಕ್ರಿಷ್ಟೋಫರ್ ಹಿಚೆನ್ಸ್ ಹಾಗೂ ತಾರಿಕ್ ಅಲಿ ಅವರು ಬ್ರಿಟನ್ ಚಾನೆಲ್ಗಾಗಿ ರೂಪಿಸಿದ “Hell’s Angel” ಎಂಬ ಡಾಕ್ಯೂಮೆಂಟರಿಯನ್ನು ವೀಕ್ಷಿಸಿದ್ದೀರಾ? ಹೇಗೋ ನಿಮಗೆ ಇಂಟರ್ನೆಟ್ ಬಗ್ಗೆ ಚೆನ್ನಾಗಿ ಗೊತ್ತಲ್ಲ, “ಯು ಟ್ಯೂಬ್”ನಲ್ಲಿ ತಡಕಾಡಿ ನೋಡಿ. ಇಲ್ಲವೆ ಡಾಕ್ಯುಮೆಂಟ ರಿಯ ಪುಸ್ತಕ ರೂಪವಾದ “The Missionary Position” ಓದಿ, ಸತ್ಯದ ಅರಿವಾಗುತ್ತದೆ.
ಮದರ್ ತೆರೆಸಾ ಅವರ ಮಿಡಿಯುವ ಹೃದಯ, ಅದರೊಳಗಿರುವ ಅನುಕಂಪದ ಬಗ್ಗೆ ಸಾಕಷ್ಟು ಕೇಳಿದ್ದೇವೆ. ಆಕೆ ಜನಿಸಿದ್ದು ಅವಿಭಜಿತ ಯುಗೋಸ್ಲಾವಿಯಾದಲ್ಲಿ. ಅದೇ ಯುಗೋಸ್ಲಾವಿಯಾದಲ್ಲಿ ಅಧ್ಯಕ್ಷ ಸ್ಲೊಬಡಾನ್ ಮಿಲೋಸೆವಿಚ್ ಅವರ ಆಡಳಿತಾವಧಿಯಲ್ಲಿ ಮುಸ್ಲಿಮರ ಮಾರಣಹೋಮ ನಡೆದಿದ್ದನ್ನು ನೆನಪಿಸಿಕೊಳ್ಳಿ. ಕೊನೆಗೆ ‘ನೇಟೋ’ ಪಡೆಗಳು ಯುಗೋಸ್ಲಾವಿಯಾದ ಮೇಲೆ ದಾಳಿ ಮಾಡಿ, ಮಿಲೋಸೆವಿಚ್ ಅವರನ್ನು ಬಂಧಿಸಿ ಜೈಲಿಗೆ ತಳ್ಳಬೇಕಾಗಿ ಬಂತು. ಅಂದು ತನ್ನ ಹುಟ್ಟೂರಲ್ಲಿ ಅಲ್ಪಸಂಖ್ಯಾತ ಮುಸ್ಲಿಮರ ಮೇಲೆ ಘೋರ ದೌರ್ಜನ್ಯ ನಡೆಯುತ್ತಿದ್ದಾಗ ಮದರ್ ತೆರೆಸಾ ಅವರ ಮನವೇಕೆ ಮಿಡಿಯಲಿಲ್ಲ? ಕಲ್ಕತ್ತಾದ ಕೊಳೆಗೇರಿಗಳ ಬಗ್ಗೆ ಅನುಕಂಪ ಹೊಂದಿದ್ದ ತೆರೆಸಾ ಅವರು ತಮ್ಮ ಧರ್ಮೀಯನೇ ಆಗಿದ್ದ ಮಿಲೋಸೆವಿಚ್ಗೆ ಏಕೆ ಬುದ್ಧಿವಾದ ಹೇಳಲಿಲ್ಲ? ಇಂದಿಗೂ ಮುಸ್ಲಿಮ್ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಇಸ್ಲಾಮ್ ಮತಾನುಯಾಯಿಗಳನ್ನು ಕೊಲ್ಲುತ್ತಿರುವುದು ಕ್ರೈಸ್ತ ರಾಷ್ಟ್ರಗಳೇ.
ಅದಿರಲಿ, ನೀವೇ ಮೆಚ್ಚಿಕೊಳ್ಳುವ ಓಶೋ ಅವರು ಮದರ್ ತೆರೆಸಾ ಬಗ್ಗೆ ಏನು ಹೇಳಿದ್ದಾರೆ ಎಂಬುದನ್ನು ಓದಿದ್ದೀರಾ? ಚರಂಡಿಯಲ್ಲಿ ಮಲಗುವ ನಿರ್ಗತಿಕ ಮಕ್ಕಳನ್ನು ಎದೆಗವುಚಿ ಕೊಳ್ಳಲು ಮದರ್ ತೆರೆಸಾ ಅವರೇ ಆಗಬೇಕಿಲ್ಲ.
ಪೋಸು ಯಾರು ಬೇಕಾದರೂ ಕೊಡಬಹುದು. ಐಶ್ವರ್ಯಾ ರೈ ಕೂಡ ಅನಾಥ ಮಕ್ಕಳನ್ನು ಅಪ್ಪಿಕೊಂಡು ಫೋಟೋಕ್ಕೆ ಪೋಸು ಕೊಡುತ್ತಾಳೆ. ಪ್ರತಿ ವರ್ಷ ಮಿಸ್ ವರ್ಲ್ಡ್, ಮಿಸ್ ಯುನಿವರ್ಸ್ ಆದವರೆಲ್ಲ ಅಂತಹ ಪೋಸು ಕೊಟ್ಟೇ ಕೊಡು ತ್ತಾರೆ. “ಅನಾಥ ಹಿಂದೂ ಕಂದಮ್ಮಗಳನ್ನು ಎದೆಗವಚಿಕೊಂಡು ‘ನಾನು ಸಾಕುತ್ತೇನೆ’ ಅಂದಂಥ ಒಬ್ಬ ಹಿಂದೂ ಮಾತೃದೇವತೆ ಹುಟ್ಟಲಿಲ್ಲವಲ್ಲ ಸ್ವಾಮಿ?” ಎಂದು ಪ್ರಶ್ನಿಸಿದ್ದೀರಲ್ಲಾ, ಒಂದು ವೇಳೆ ನೀವೆಂದಾದರೂ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದಿದ್ದರೆ ಆ ಪ್ರಶ್ನೆಯನ್ನು ಕೇಳುತ್ತಿರಲಿಲ್ಲ. ನಿಮ್ಮ ಪ್ರಶ್ನೆಗೆ ಉತ್ತರ ಕಣ್ಣ ಎದುರೇ ಕಾಣುತ್ತಿತ್ತು. ೧೦ ಸಾವಿರ ಅನಾಥ ಮತ್ತು ನಿರ್ಲಕ್ಷಿತ ಮಕ್ಕಳಿಗೆ ನಿತ್ಯವೂ ಅನ್ನ ಹಾಗೂ ಅಕ್ಷರ ದಾಸೋಹಗಳೆರಡೂ ಸಿದ್ಧಗಂಗಾ ಮಠದಲ್ಲಿ ನಡೆಯುತ್ತಿದೆ. ಮದರ್ ತೆರೆಸಾ ಅವರಿಗಿದ್ದ “ಮಾರ್ಕೆಟಿಂಗ್ ಬ್ಯೂರೋ” ಸಿದ್ಧಗಂಗಾ ಶ್ರೀಗಳಿಗೂ ಇದ್ದಿದ್ದರೆ ಹಾಗೂ ಅವರು ಕ್ರೈಸ್ತ ಪಾದ್ರಿಯಾಗಿದ್ದಿದ್ದರೆ ಖಂಡಿತ ಜಾಗತಿಕ ಮಟ್ಟದಲ್ಲಿ ಖ್ಯಾತಿ ಪಡೆದಿರುತ್ತಿದ್ದರು, ಭಾರತರತ್ನವೂ ಸಿಕ್ಕಿರುತ್ತಿತ್ತು. ನಮ್ಮ ರಾಜ್ಯದಲ್ಲೇ ಇರುವ ವಿವಿಧ ಲಿಂಗಾಯತ ಮಠಗಳು ಹಾಗೂ ಆದಿ ಚುಂಚನಗಿರಿ ಮಠವೂ ಅನಾಥ ಮಕ್ಕಳಿಗೆ ಅನ್ನ ಹಾಕುತ್ತಿವೆ. ಕಣ್ತೆರೆದು ನೋಡಬೇಕಷ್ಟೇ. ಶಿವಕುಮಾರ ಸ್ವಾಮೀಜಿ ಒಂದು ರಾಜ್ಯ, ಒಂದು ಭಾಗಕ್ಕೆ ಸಂಬಂಧಪಟ್ಟವರೇ ಆಗಿರ ಬಹುದು. ಆದರೆ ಕಾಳಜಿಗೆ ರಾಜ್ಯ, ಭಾಗ ಎಂಬ ಚೌಕಟ್ಟು ಹಾಕಲು ಸಾಧ್ಯವೆ? ಅಷ್ಟಕ್ಕೂ ಮದರ್ ತೆರೆಸಾ ಅವರೇನು ದೇಶದುದ್ದಗಲಕ್ಕೂ, ಜಗತ್ತಿನ ಮೂಲೆ ಮೂಲೆಗೂ ಹೋಗಿ ನಿರ್ಗತಿಕ, ಕ್ಷಯ ರೋಗಿಗಳ ಉದ್ಧಾರ ಮಾಡಲಿಲ್ಲ. ಆಕೆಯ ಕಾರ್ಯಕ್ಷೇತ್ರವೂ ಕಲ್ಕತ್ತಾ ಕೊಳಗೇರಿಗೆ ಸೀಮಿತವಾಗಿತ್ತು. ಆದರೆ ತೆರೆಸಾ ಅವರಿಗೆ ಜಾಗತಿಕ ಮಟ್ಟದಲ್ಲಿ ಪ್ರಚಾರ ಸಿಕ್ಕಿತು ಅಷ್ಟೇ.
ಒಂದು ಘಟನೆ ನೆನಪಾಗುತ್ತಿದೆ. ಖ್ಯಾತ ಐರಿಷ್ ನಾಟಕ ರಚನೆಕಾರ ಜಾರ್ಜ್ ಬರ್ನಾರ್ಡ್ ಶಾ ಮಾತುಗಳೆಂದರೆ ಅವರು ಹೇಳುತ್ತಿದ್ದ ಪ್ರತಿ ವಾಕ್ಯಗಳೂ “Quotable Quotes” ನಂತಿರುತ್ತಿದ್ದವು. ಈ ಬರ್ನಾರ್ಡ್ ಶಾ ಹಾಗೂ ಬ್ರಿಟನ್ನ ಆಗಿನ ಪ್ರಧಾನಿ ವಿನ್ಸ್ಟನ್ ಚರ್ಚಿಲ್ ಕೆಲವೊಮ್ಮೆ ಪರಸ್ಪರ ಕಾಲೆಳೆದುಕೊಳ್ಳುತ್ತಿದ್ದರು. ತತ್ತ್ವeನಿಯಂತೆ ಮಾತನಾಡುತ್ತಿದ್ದ ಬರ್ನಾರ್ಡ್ ಶಾ ಅವರನ್ನು ಉಲ್ಲೇಖಿಸಿ “ಭಾರೀ ಭಾರೀ ಮಾತನಾಡುವವರು ಅವುಗಳಲ್ಲಿ ಬಹಳ ಕಡಿಮೆ ಅಂಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುತ್ತಾರೆ. ಆದರೆ None less than George Bernard Shaw” ಎಂದು ಛೇಡಿಸಿದ್ದರು ಚರ್ಚಿಲ್.
ಖಂಡಿತ ರವಿ ಬೆಳೆಗೆರೆಯವರನ್ನು ಬರ್ನಾಡ್ ಶಾ ಮಟ್ಟಕ್ಕೇರಿಸಿ ಹೋಲಿಸುತ್ತಿಲ್ಲ. ಆದರೆ ಭಾನುವಾರದ ಅವರ ಲೇಖನವನ್ನು ಓದಿದಾಗ ಚರ್ಚಿಲ್ ಮಾತು ನೆನಪಾಯಿತು!!
ಒಂದು ವಾಕ್ಯದಲ್ಲಿ ಬೆನ್ನು ಸವರುವುದು, ಆನಂತರ ಚಿವುಟುತ್ತಾ ಹೋಗುವುದು, ನಡುನಡುವೆ ಉಡಾಫೆ, ಅವಹೇಳನ, ಚಾರಿತ್ರ್ಯವಧೆ. ಆದರೆ ಇಂತಹ ನಿಂದನೆ, ಅಗೌರವ ಗಳು ಚರ್ಚೆಯ ಪರಿಧಿಯೊಳಕ್ಕೆ ನುಸುಳಬಾರದು. ಒಂದು ಗಂಭೀರ ಸಮಸ್ಯೆಯನ್ನು ತೆಗೆದುಕೊಂಡು, ಆಧಾರ ಸಮೇತ ಓದುಗರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿರುವ ಭೈರಪ್ಪ ನವರನ್ನು ಹೊಗಳಬೇಕೆಂದಿಲ್ಲ. ಸಾಧ್ಯವಾದರೆ ತಾರ್ಕಿಕವಾಗಿ ಉತ್ತರ ಕೊಡಲಿ. ನಿಂದನೆ ಮಾಡಿದರೆ ಬೆತ್ತಲಾಗುವುದು ತಾವೇ ಎಂಬುದು ನೆನಪಿರಲಿ.
Come on, ಸಂವಾದ ಮುಂದುವರಿಯಲಿ ಬಿಡಿ.
ರಾಮಚಂದ್ರ ಶೆಣೈ, ಮಂಗಳೂರು
(Pratap Simha!)
really fantastic..answer…
Brain of ravi is emptied pratap simha is realy a simha simha simha
I must congratulate Mr. Ramachandra Shanai for his brilliant reply.
Was there a reply from the illiterate Ravi Belegere after this tight slap for his ridiculous, absurd and mostly lame attempted argument ? or did he chicken out like all the other “Buddhijeevi’s” ala Anantamurthy ?
e level comment Mr dealing master ge artha agalla
belegere level ge thumba dodda book odhake heledare.
raghu
Yuva manassugala akarshanegalannu grahisi bareyuva vyapari manobhavada sahitya krishi(?)yannu Bhairappanavaranthaha sahithigala munde thorisuva munna Belegereyavru bahalashtu yochisbekagittu
sir
i am your die hard fan…….. please i’d like to speak to you………. my mail id is naveen.lg1987@gmail.com… plz contact me soon………..
Dear Ravi Sir
Nanu istu dina nimma fan agidde, but nimma baraha odida mele nimma mele
nan ittiruva gaurava hogibittitu anista ide.
Sorry Ravi belagere
wov… reaaly superb… fantastic answer….
All the three best writers are being analysed here. unfortunately my favorite Ravi Belegere become dull this time. He is a quick learner, i guess. He has taken too many things in his mind and has not done much homework…..
Dear Ravi its a lesson for you. We are not Voters. We are Readers, readers from all segments of society- Rich, poor, Literate, Educate….. Time is changing… people are becoming more and more smarter…. We dont want your thoughts to be biased like ‘Agni’ ‘Lankesh(new)’….. FACT IS FACT……People are not FOOLS
I might have written the comment long long back, But I am lazy to write to your postal address. There is no email id of yours either….. Cant you have a email id for ‘Hai Bangalore’ editor??
sir neevu saturday bareda LOVE JEHAD artical odide tumba channge bandide sir nimmantha yuva lekakara agAthya ondu patrikege kanditha ide sir nimma artical yava saturdya miss madade odthene sir nemma HINDHU para kalajige ,HATSOFF SIR
realy good one,hats up to mr.ramachandra ….. bad ravi
Firstly my big Thanks to Ramachandra Sir…. his answer is brilliant…
Being a popular journalist he should not publically give nonsense comments like this.. he should understand this not “Bengalurina boogatha Jagatthu” or “yaddi’s political new” .. he writers are talking large issue then these with futuristic thinking….
Ravi… I liked your articals initially when Hai Bangalore started… but readers have evolved and hope you as well….
Ravi’s artical littraly feels like he is barking…. He think he lost his thinking cap now days….
and last but not least… thanks to Simha (realy one) for bring this online…
Firstly my big Thanks to Ramachandra Sir…. his answer is brilliant…
Being a popular journalist he should not publically give nonsense comments like this.. he should understand this not “Bengalurina boogatha Jagatthu” or “yaddi’s political news” .. he writers are talking large issue then these with futuristic thinking….
Ravi… I liked your articals initially when Hai Bangalore started… but readers have evolved and hope you as well….
Ravi’s artical littraly feels like he is barking…. He think he lost his thinking cap now days….
and last but not least… thanks to Simha (realy one) for bring this online…
This is really very sad to see that two of popular eminent writers fighting with each other…
Ravi is really a Great achiever for his genre.. and undoubted that pratap also have caliber,, but stop fighting for your personal ethics….
Ravi Belagere has a mask of great thinker,but actually he is a opportunitist and a commercial minded so called journalist.
Belagere thinks that by criticising Hindu swamiji’s people may accept him as a great thinker.But actually he is blind on other issues and he can not see the other side of coin.
Hi,
This is Jayarama Chari. I M a fan of SL Byrappa.. I Hav plan to play a drama from Avarana.. I Need ur Suggestion ,… pls reply me.. Hav a wonderful life
RAVI BELEGAREYANTHA VYAKTHIGALU KOODA HADI TAPPI NADEDAGA NUDIDAAGA INTHAHA UTTARAGALU OVARANNU SARI DAARIGE TANDITENOO ANNUVA ASHAYA NANNADU TOOTALLY FANTASTIC ANSWER
HI sir,
I am rajshekar,Hard fan of you sir,,,,m reading all your articals weekly sir,,,,,,,This is a fantastic answer
hats off to Mr. Ramachandra Shenoy….this should be enough for half learned, commercial journalist like Ravi Belagere…..
R U Get any suggestions…..
Excellent article. Hat’s of to you Sir…
These many days i was thinking something different abut Ravi Belegere but when he commented like this on Shri S L Bairappa. My way of viewing is changed towords Belegere, Thanks for giving him proper answer with facts, bcoz any one can write articles but writing truth is real article.
ಈ ಲೇಖನಗಳನà³à²¨ ನಾನೠವಿಕದಲà³à²²à³‡ ಓದಿದà³à²¦à³†. ಬೆಳಗೆರೆಗೆ ಸರಿಯಾಗಿ ಜಾಡಿಸಿದà³à²¦à²¾à²°à³† ಅಂತ ಬಹಳಾ ಜನರಿಗೆ ತೋರಿಸಿದà³à²¦à³† ಕೂಡಾ.
Hey Pratap….
thnx for posting thse articles online… I am not a regualr reader of VK, but i buy saturdays’ papaer only for ur article… Keep d gud work goin…
N thnx for Mr.Shenoy for such an article…
I had read all the articles, including Bairappa’s initial article on the subject, in Vijaya Karnataka.
Also, I have bought the book the Vijaya Karnataka published later.
Ravi Belagere is not alone in giving this kind of response.
Even U.R.Anantha Murthy and Girish Karnad have given similar comments.
The sad part is that, in Karnataka we have given the title of “Intellectuals” to these people!
After reading their replies to Bairappa’s articles, I don’t see any reason to call these people as intellectuals.
They might be good Kannada Writers or Play Writes.
But, when it comes to the field of Intellectual debates, their mind becomes completely blank.
This debate has thrown away all the colorful dresses (read as “Intellectuals”, “Secularists”, “Progressive”, etc) they were wearing!! Now they stand naked infront of the readers and writers of Karnataka.
Hope they have atleast learnt the lesson and will be careful in the future.
Many Many thanks to VK for bringing out such a healthy debate and also for opening the eyes of Kannadigas.
Thanks to Pratap Simha for posting the link here.
It refreshed my memories and I can send this to all of my Kannada friends.
-Narendra
ya fentastic and real good brave reply.I think now Ravi can unerstand.
Hi Pratap Simha, Thanks a ton for giving access to this article and this conversation.I had been searching everywhere for this article since all this came about.If possible, plz give also the complete conversation that had happened in VK.
ಪà³à²°à²¤à²¾à²ªà³ ಸಿಂಹರವರ ಪà³à²°à²¤à²¿à²•à³à²°à²¿à²¯à³† ಬಹಳ ಕೆಟà³à²Ÿà²¦à²¾à²—ಿದೆ. à²à²•ೆಂದರೆ ಇತಿಹಾಸದ ಕಾಲಘಟà³à²Ÿà²¦à²²à³à²²à²¿ ಮà³à²¸à³à²²à²¿à²‚ರೠದಾಳಿಯನà³à²¨à³‡ ಮಾಡಿರಬಹà³à²¦à³ ಅಥವಾ ಎಲà³à²²à²µà²¨à³à²¨à³‚ ನಾಶಮಾಡಿರಬಹà³à²¦à³, ಆದರೆ ಅದನà³à²¨à³ ಕೆದಕà³à²µà³à²¦à²°à²¿à²‚ದ à²à²£à³ ಲಾಠಎಂದೠಬೆಳೆಗೆರೆಯವರೠಕೇಳಿರà³à²µ ಪà³à²°à²¶à³à²¨à³† ಸರಿಯಾಗಿಯೇ ಇದೆ. ಒಂದೊಮà³à²®à³† ಇತಿಹಾಸವೠಸತà³à²¯à²µà²¨à³à²¨à³‡ ಹೇಳಿ ಅದರಿಂದ ಇಂದಿನ ಸಮಾಜದ ಸಾಮರಸà³à²¯ ಕಡಿಮೆಯಾಗà³à²¤à³à²¤à²¦à³† ಅಥವಾ ಹದಗೆಡà³à²¤à³à²¤à²¦à³† ಎಂದರೆ ಅಂತಹ ಇತಿಹಾಸದ ಅವಶà³à²¯à²•ತೆಯೇ ಇಲà³à²². ಒಳà³à²³à³†à²¯à²¦à²¨à³à²¨à²·à³à²Ÿà³‡ ನೆನಪಿಟà³à²Ÿà³à²•ೊಂಡೠಕೆಟà³à²Ÿà²¦à³à²¦à²¨à³à²¨à³ ಮರೆಯಲೠಇತಿಹಾಸದ ಅಧà³à²¯à²¯à²¯à²¨à²¦à²¿à²‚ದ ಸಾಧà³à²¯à²µà²¿à²°à²¦à²¿à²¦à³à²¦à²°à³† ಅಂತಹ ಇತಿಹಾಸದಿಂದ à²à²¨à³ ಪà³à²°à²¯à³‹à²œà²¨?
ಇವರಿಗೆ ಬà³à²¦à³à²¦à²¿ ಹೆಳಬೇಕಾ ಅಥವ ನಾವೠಬà³à²¦à³à²¦à²¿ ಇಲà³à²²à²¦à²µà²°,
ಒಬà³à²¬ ಸಾಮಾನà³à²¯ ಮನà³à²·à³à²¯ ಒಳà³à²³à³†à²¯à²µà²¨à²¾ ?
ಸ೦ಜೆ ಕà³à²¡à²¿à²¦à³ ಹಾಡೠಹೆಳà³à²¤à³à²¤à²¾à²¨à²²à³à²²à²¾ ಅವನ ಮನಸà³à²¸à³ ಮತà³à²¤à³
ಥಿಯೆಟರಿನಲà³à²²à²¿ ಸಿನೆಮ ನೋಡà³à²¤à³à²¤à²¾ ಅದà³à²°à²²à³à²²à³† ಮà³à²³à³à²—à³à²µ ವà³à²¯à²•à³à²¤à²¿ ?
Sorry to say RaviBelegere till now I had good opinion about you but I lost respect towards you after reading the above article. Don’t ever comment any thing about Hinduism nor about sidganga swamiji. I feel you can join congress and become a successful politicisation.
hi Santosh Navule,
Your response to this article seems like an opportunist one. You are asking us to forget what muslims have done to us. If tommorrow assume India is taken over by Pakisthan or China. Will you die fighting or will you go join your hands with them ?
Dear Mahesh
Do you think that is going to happen? See, that is your guess not a fact. And actually we not in a position to subjugate ourselves to others. So, just guessing the future does not make sense. Ok, can give an arguement how Pakistan or China will take over India?
See i am not opposing Simha or Belegere. Even am not interested in that, because, RSS arguments are really baseless. They just learnt from Golvalkar and Hegdevar and they learnt their arguments simply from colonials. So, neither interested in Simha nor Belegere…..
Tell me why i look like oopurtunis? what the hell is that?????????
Dear Santhosh just leave them alone Can’t you see they are brain washed just like those Jehadis.Don’t expect any rational answer from either Pratap or His Followers.
bad ravi
Dear Santhosh Navule,
can give an arguement how Pakistan or China will take over India?
Answer for your question:
1.2000-2008ವರೆಗೂ à²à²¾à²°à²¤à²¦ ಮೇಲೆ ಸತತ à²à²¯à³‹à²¤à³à²ªà²¾à²¦à²• ದಾಳಿ.
2.ಈಚೆಗೆ ಜಮà³à²®à³-ಕಾಶà³à²®à³€à²°, ಅರà³à²£à²¾à²šà²² ಪà³à²°à²¦à³‡à²¶à²—ಳಲà³à²²à²¿ ಚೀನಾದ ಅತಿಕà³à²°à²®à²£.
3. à²à²¾à²°à²¤à²¦ ಪಾಸà³â€Œà²ªà³‹à²°à³à²Ÿà³ ಹೊಂದಿರà³à²µ ಜಮà³à²®à³-ಕಾಶà³à²®à³€à²°à²¿ ನಾಗರಿಕರಿಗೆ ಪà³à²°à²¤à³à²¯à³‡à²• ವೀಸಾ ನೀಡಿರà³à²µà³à²¦à³ ಬೆಳಕಿಗೆ ಬಂದಿದೆ.
4. ಈಗಾಗಲೇ ಅರà³à²£à²¾à²šà²² ಪà³à²°à²¦à³‡à²¶à²¦ ನಾಗರಿಕರಿಗೆ ಪà³à²°à²¤à³à²¯à³‡à²• ವೀಸಾ ವಿತರಣೆ ಮಾಡಿರà³à²µ ಚೀನಾ, ಆ ಮೂಲಕ ಅರà³à²£à²¾ ಚಲದ ಮೇಲೆ ತನà³à²¨ ಹಕà³à²•ೠಪà³à²°à²¤à²¿à²ªà²¾à²¦à²¨à³† ಮಾಡಿದೆ.
5.ನಾಗರಿಕ ಅಣೠಸಹಕಾರ ಒಪà³à²ªà²‚ದದ ಅಂಗವಾದ ಅಣೠಇಂಧನ ಪೂರೈಕೆ ವಿಚಾರ ೨೦೦೮, ಸೆಪà³à²Ÿà³†à²‚ಬರà³â€Œà²¨à²²à³à²²à²¿ ಅಂತಾರಾಷà³à²Ÿà³à²°à³€à²¯ ಅಣà³à²¶à²•à³à²¤à²¿ à²à²œà³†à²¨à³à²¸à²¿à²¯à²²à³à²²à²¿ (à²à²…ಉಅ) ಚರà³à²šà³†à²—ೆ ಬಂದಾಗ ಅದನà³à²¨à³ ತಡೆಯಲೠಚೀನಾ ಸಕಲ ಪà³à²°à²¯à²¤à³à²¨à²µà²¨à³à²¨à³‚ ಮಾಡಿತà³.
6.2.9 ಶತಕೋಟಿ ಡಾಲರà³â€Œà²¨à²²à³à²²à²¿ 60 ದಶಲಕà³à²· ಡಾಲರೠಹಣವನà³à²¨à³ ಅರà³à²£à²¾à²šà²² ಪà³à²°à²¦à³‡à²¶à²¦ ಅà²à²¿à²µà³ƒà²¦à³à²§à²¿à²—ೆ ವಿನಿಯೋಗಿಸà³à²µà³à²¦à²¾à²—ಿ à²à²¾à²°à²¤ ಉಲà³à²²à³‡à²–ಿಸಿತà³à²¤à³.ಆಶà³à²šà²°à³à²¯à²µà³†à²‚ದರೆ ಚೀನಾ ಅದಕà³à²•ೆ ವಿರೋಧ ವà³à²¯à²•à³à²¤à²ªà²¡à²¿à²¸à²¿à²¤à³.
7.“ಟಿಬೆಟೠಅಂಗೈಯಾದರೆ ಲದà³à²¦à²¾à²•à³, ಸಿಕà³à²•ಿಂ, à²à³‚ತಾನà³, ನೇಪಾಳ ಮತà³à²¤à³ (à²à²¾à²°à²¤à²¦) ಈಶಾನà³à²¯ à²à²¾à²— à²à²¦à³ ಬೆರಳೠಗಳಿದà³à²¦à²‚ತೆ. ಅವೠಚೀನಾದ à²à³‚ಪà³à²°à²¦à³‡à²¶à²—ಳà³, ಅವà³à²—ಳನà³à²¨à³ ಸà³à²µà²¤à²‚ತà³à²°à²—ೊಳಿಸಬೇಕà³â€ ಎಂದೠಚೀನಿ ನಾಯಕ ಮಾವೋ à²à³†à²¡à²¾à²‚ಗೠಹೇಳಿ ಹಲವೠದಶಕಗಳೇ ಕಳೆದವà³.
8.ಬà³à²¦à³à²§à²¿à²—ೇಡಿ ಪಾಕಿಸà³à²¤à²¾à²¨à²•à³à²•ೆ ಕà³à²·à²¿à²ªà²£à²¿, ಅಣà³à²µà²¸à³à²¤à³à²°à²—ಳನà³à²¨à³ ಕೊಟà³à²Ÿà³ à²à²¾à²°à²¤à²µà²¨à³à²¨à³ ಆಂತರಿಕವಾಗಿ ಅಸà³à²¥à²¿à²°à²—ೊಳಿಸಲೠಆರಂà²à²¿à²¸à²¿à²¦à³†.
9.ಕಮà³à²¯à³à²¨à²¿à²¸à³à²Ÿà³ ನೇತಾರ ಪà³à²°à²šà²‚ಡ ಹಾಗೂ ಮಾವೋವಾದಿಗಳ ಮೂಲಕ ನೇಪಾಳವನà³à²¨à³‚ ಹೆಚà³à²šà³‚ಕಡಿಮೆ ತನà³à²¨ ಹಿಡಿತಕà³à²•ೆ ತೆಗೆದà³à²•ೊಂಡಿದೆ.
10.ಬಂದರೠಅà²à²¿à²µà³ƒà²¦à³à²§à²¿, ರಸà³à²¤à³† ನಿರà³à²®à²¾à²£, ಅà²à²¿à²µà³ƒà²¦à³à²§à²¿ ಕಾರà³à²¯à²—ಳಿಗೆ ದೀರà³à²˜à²•ಾಲಿಕ ಸಾಲ ಮà³à²‚ತಾದ ನೆಪಗಳನà³à²¨à²¿à²Ÿà³à²Ÿà³à²•ೊಂಡೠಮà³à²¯à²¾à²¨à³à²®à²¾à²°à³ ಹಾಗೂ ಬಾಂಗà³à²²à²¾à²¦à³‡à²¶à²—ಳಿಗೂ ಆಗಮಿಸಿದೆ.
11.ಕಳೆದ ಮೇ.ವರೆಗೂ ನಡೆದ ಎಲà³â€Œà²Ÿà²¿à²Ÿà²¿à²‡ ವಿರà³à²¦à³à²§à²¦ ಕಾರà³à²¯à²¾à²šà²°à²£à³†à²—ೆ ಬೇಕಾದ ಶಸà³à²¤à³à²°à²¾à²¸à³à²¤à³à²°à²—ಳನà³à²¨à³ ಪೂರೈಸà³à²µ ಮೂಲಕ ಶà³à²°à³€à²²à²‚ಕಾದ ಮೇಲೂ ತನà³à²¨ ಪà³à²°à²à²¾à²µ ಇಟà³à²Ÿà³à²•ೊಳà³à²³à²²à³ ಚೀನಾ ಪà³à²°à²¯à²¤à³à²¨à²¿à²¸à²¿à²¦à³†.
12.à²à²¾à²°à²¤à²¦ ನಕà³à²¸à²²à²° ಕೈಯಲà³à²²à²¿à²°à³à²µà³à²¦à³‚ ಚೀನಾ ತಯಾರಿಸà³à²¤à³à²¤à²¿à²°à³à²µ ಎಕೆ-47ರೈಫಲà³â€Œà²—ಳೇ. ಅದೠಪೂರೈಕೆಯಾಗà³à²¤à³à²¤à²¿à²°à³à²µà³à²¦à³ ನೇಪಾಳದ ಮೂಲಕ.
13.ಪಾಕೠಆಕà³à²°à²®à²¿à²¤ ಕಾಶà³à²®à³€à²°à²¦à²²à³à²²à²¿ 7 ಸಾವಿರ ಮೆಗಾವà³à²¯à²¾à²Ÿà³ ಸಾಮರà³à²¥à³à²¯à²¦ ಬà³à²‚ಜಿ ಡà³à²¯à²¾à²‚ ನಿರà³à²®à²¾à²£ ಮಾಡಿಕೊಡà³à²µà³à²¦à²¾à²—ಿ ವಾಗà³à²¦à²¾à²¨ ಮಾಡಿದೆ. ಆದರೆ ಅಣೆಕಟà³à²Ÿà³ ನಿರà³à²®à²¾à²£à²µà²¾à²—ಬೇಕಿರà³à²µ ಸà³à²¥à²³ ತನà³à²¨à²¦à³†à²‚ದೠà²à²¾à²°à²¤ 1948ರಿಂದಲೂ ಪà³à²°à²¤à²¿à²ªà²¾à²¦à²¿à²¸à³à²¤à³à²¤à²¾ ಬಂದಿದೆ.
14.ನೇಪಾಳ ಮಾರà³à²—ವಾಗಿ ನಕಲಿ ನೋಟà³à²—ಳನà³à²¨à³ ಹರಿಬಿಡà³à²µ ಮೂಲಕ à²à²¾à²°à²¤à²¦ ಅರà³à²¥à²µà³à²¯à²µà²¸à³à²¥à³†à²¯à²¨à³à²¨à³ ಹಾಳà³à²—ೆಡವà³à²µ ಕಾರà³à²¯à²µà²¨à³à²¨à³‚ ಪಾಕೠಮತà³à²¤à³ ಚೀನಾಗಳೠನಿರಾತಂಕವಾಗಿ ಮಾಡà³à²¤à³à²¤à²²à³‡ ಇವೆ.
ಚೀನಾದ ಸಾಮà³à²°à²¾à²œà³à²¯à²¶à²¾à²¹à²¿à²¤à³à²µ ಹಾಗೂ ವಿಸà³à²¤à²°à²£à²¾à²µà²¾à²¦ ಎಂದೋ ಆರಂà²à²µà²¾à²—ಿದೆ. ತೈವಾನà³, ಟಿಬೆಟà³, ಹೈನನೠದà³à²µà³€à²ªà²—ಳೠಒಂದೠಕಾಲದಲà³à²²à²¿ ಚೀನಾಕà³à²•ೆ ಸೇರಿದà³à²¦à²µà³. ಅವà³à²—ಳನà³à²¨à³ ಮರಳಿ ಗಳಿಸಿಕೊಳà³à²³à²²à²¾à²—à³à²¤à³à²¤à²¦à³† ಎಂದೠ೧೯೫೦ರ ನಂತರ ಮಾವೋ à²à³†à²¡à²¾à²‚ಗೠಆಗಾಗà³à²—ೆ ಹೇಳಿಕೆ ನೀಡಿದà³à²¦à²°à³. ಮಕಾವà³, ಹಾಂಕಾಂಗà³, ಟಿಬೆಟೠಈಗಾಗಲೇ ಚೀನಾದ ಕೈವಶವಾಗಿವೆ. à²à²¯à³‹à²¤à³à²ªà²¾à²¦à²•ರà³, ಪಾಕà³, ಚೀನಿಯರೆದà³à²°à³ ಅಹಿಂಸೆ, à²à²¾à²¯à²¿ à²à²¾à²¯à²¿ ಎಂದರೆ ಬಾಯಿಗೇ ವಿಷಹಾಕà³à²¤à³à²¤à²¾à²°à³†…
Hi Ramachandra Sir,
Your reply was too good, infact well beyond Belegeres reach…. problem with these people is they just come out and make a counter argument without knowing anything in detail. I pity belegere that he does not even have a commonsense when it comes to addressing great people like SL Bhiarappa…he is just brainwashed and fit for only those stupid crime stories….Belgere thinks he is a great writer. Its a very well known fact that from which background he comes from.
Now is the time people should become little aware of whats happening in India… They should come out and stage a bold protest against outfits which are either directly or indirectly involved in conversions.
I would highly appreciate if belegere can come out and give a reply to Sir Ramachandra (if he has guts).
Thanks,
Hindu Kannada Abhimani.
really pratap good article…………….
thanks to you and Mr. Shenoy…
live more than 100 years.. you are the valuable asset
Dear All Learned People
1)The self centered Intellectuals ( the way they them self claim )like Ravi Biligere& other are very harm ful for us & society..They are as dangerous as the corrupt politicians & Govt officres.We should oppose all these cateory of people when ever they appear.
2)Let Mr Belegere under stands the subject in right perspective ( not his ) & write
VITTHAL
Thanks for this article Mr.Pratap……..
The article and its replies r really enlightening…. But to understand them clearly it wld b good to read the books stated in the above articles. For eg. “Avarana”.
Hope i’ll read it soon.. for a better understanding….
Smiles
Anu
yes this article bring great discussions let the people know the Real history not real history.this people we teach reel history if we keep quite now.
yes this article bring great discussions let the people know the Real history not reel history.This people we teach reel history if we keep quite now.
plz reorder the headings. it has come in between the article and making paras confusing.
Ravi Belagere is a greatest unethical journalist, lair, opportunist on this earth. He is a chameleon only interested in amassing wealth unfairly.
ರವಿ ಬೆಳಗೆರೆಯವರೇ,
ನಾನೠಲೇಖನವನà³à²¨à³ ತà³à²‚ಬ ತಡವಾಗಿ ಓದಿರಬಹà³à²¦à³. ಆದರೆ ಒಬà³à²¬ à²à²¾à²°à²¤à³€à²¯à²¨à²¾à²¦ ನನಗೆ ಮನೆಯೊಳಗೇ ಇರà³à²µ ಇನà³à²¨à³Šà²¬à³à²¬ ಸದಸà³à²¯ ಮನೆಗೆ ಬೆಂಕಿ ಹಚà³à²šà³à²¤à³à²¤à²¿à²°à³à²µà³à²¦à²¨à³à²¨à³ ನೋಡಿ ತಡೆಯಲಾರದೇ ಈ ಪà³à²°à²¤à²¿à²•à³à²°à²¿à²¯à³† ನೀಡà³à²¤à³à²¤à²¿à²¦à³à²¦à³‡à²¨à³†.
ಶೆಣೈಯವರೠಬರೆದಂತೆ ನಿಜವಾಗಲೂ ತಮà³à²® ಲೇಖನ ತರà³à²•ಬದà³à²§à²µà²¾à²—ಿಲà³à²². ನಿಮಗೆ ನಿಜವಾಗಲೂ à²à³ˆà²°à²ªà³à²ªà²¨à²µà²° ಲೇಖನದ ಬಗà³à²—ೆ ವಿರೋಧವಿದà³à²¦à²²à³à²²à²¿ ಅದನà³à²¨à³ ಉಚಿತವಾದ (ಪà³à²•à³à²•ಟೆಯೆಂದರà³à²¥à²µà²²à³à²²-ತಾವೠಅನà³à²¯à²¥à²¾ ಅರà³à²¥ ಮಾಡಿಕೊಳà³à²³à³à²µà³à²¦à³ ಸà³à²µà²²à³à²ª ಜಾಸà³à²¤à²¿.) ವೇದಿಕೆಯ ಮೇಲೆ ತಾರà³à²•ಿಕವಾಗಿ ಪರಾಮರà³à²¶à²¿à²¸à²¿ ಪà³à²°à²¤à²¿à²•à³à²°à²¿à²¯à²¿à²¸à²¬à³‡à²•ಿತà³à²¤à³‡ ಹೊರತೠಇಂತಹ ಹೀನಾಯವಾದ, ಅಸಂಬದà³à²§à²µà²¾à²¦ ಲೇಖನದಿಂದಲà³à²². ಕà³à²‚ಬಾರನಿಗೆ ವರà³à²· ದೊಣà³à²£à³†à²—ೆ ನಿಮಿಷ ಎಂಬ ಉಕà³à²¤à²¿à²¯à²‚ತೆ ಈ ಲೇಖನದಿಂದ ತಾವೠಪಾತಾಳಕà³à²•ಿಳಿದà³à²¬à²¿à²Ÿà³à²Ÿà²¿à²¦à³à²¦à³€à²°à²¿. ಬಾವಿಯಲà³à²²à²¿à²°à³à²µ ಕಪà³à²ªà³† ತಾನಿರà³à²µ ಬಾವಿಗಿಂತ ದೊಡà³à²¡ ಜಗತà³à²¤à³‡ ಇಲà³à²² ಎಂಬ ಕà³à²°à³à²¡à³ ಕಲà³à²ªà²¨à³† ಹೊಂದಿರà³à²µà²‚ತೆ ನಿಮà³à²® ಅಂತಶà³à²šà²•à³à²·à³à²µà²¿à²¨ ತೇಜಸà³à²¸à³ (ಇರಲೇ ಇಲà³à²² ಬಿಡಿ) ಸತà³à²¤à³ ಹೋಗಿದೆ.
ಶೆಣೈಯವರೠಹೇಳà³à²µà²‚ತೆ ನೀವೠನಿಮà³à²® ಶಬà³à²¦à²šà²¾à²¤à³à²°à³à²¯à²µà²¨à³à²¨à³ ತೋರಿಸಲೠಹೋಗಿ ಎಡವಟà³à²Ÿà²¾à²—ಿ ಬರೆದಿದà³à²¦à³€à²°à²¿. ತಾವೠತಮà³à²® ಲೇಖನವನà³à²¨à³ ಹತà³à²¤à³ ಬಾರಿಯಲà³à²², ಒಮà³à²®à³† ಓದಿ ಸಾಕà³, ನಿಮà³à²® ಶಬà³à²¦ ಚಾತà³à²°à³à²¯ ಇಲà³à²²à²¿ ಕà³à²²à²¿à²•ೠಆಗಿಲà³à²² ಎಂಬà³à²¦à³ ಮನವರಿಕೆಯಾಗà³à²¤à³à²¤à³†. ಹೋಗಲಿ, ತಮà³à²® ಮತà³à²¤à³ à²à³ˆà²°à²ªà³à²ªà²¨à²µà²° ಲೇಖನಗಳನà³à²¨à³ ಕೂಲಂಕಶವಾಗಿ ಅಧà³à²¯à²¯à²¨ ಮಾಡಿ ಪà³à²°à²¤à²¿à²•à³à²°à²¿à²¯à²¿à²¸à²¿à²¦ ಶೆಣೈಯವರ ಲೇಖನದ ಪà³à²°à²¬à³à²¦à³à²§à²¤à³†à²¯ ಹತà³à²¤à³ ಶೇಕಡಾ ಕೂಡ ತಮà³à²® ಲೇಖನವಿಲà³à²². ಇಷà³à²Ÿà³Šà²‚ದೠಒಳà³à²³à³†à²¯ ಪತà³à²°à²•ರà³à²¤ ಎನಿಸಿಕೊಂಡ ತಮಗೆ ಈ ಒಂದೠಲೇಖನದಿಂದ ಪಾತಾಳಕà³à²•ಿಳಿಯà³à²µ ಅವಕಾಶ ಸೃಷà³à²Ÿà²¿à²¸à²¿à²•ೊಳà³à²³à²¬à³‡à²•ಿತà³à²¤à³‡? ತಾವà³à²¯à²¾à²•ೆ ಬà³à²¦à³à²§à²¿ ಜೀವಿಗಳ ಥರ ವರà³à²¤à²¿à²¸à³à²¤à³à²¤à³€à²°à²¿?
ಜಗತà³à²¤à²¿à²¨à²²à³à²²à²¿à²°à³à²µ ಯà³à²µà²• ಯà³à²µà²¤à²¿à²¯à²°à²¨à³à²¨à³†à²²à³à²²à²¾ “ಮಗಳೇ, ತಮà³à²®à²¾” ಎಂದೆಲà³à²² ಸಂಬೋಧಿಸà³à²µ ತಮಗೆ ತಮಗಿಂತ ಹಿರಿಯರಾದ, ಪà³à²°à²¬à³à²¦à³à²§à²°à²¾à²¦, à²à²¾à²·à²¾à²ªà³à²°à²¾à²µà³€à²£à³à²¯à²µà²¨à³à²¨à³ ಹೊಂದಿರà³à²µ, ತಮà³à²®à²‚ತೆ ಕಳಂಕಿತರಲà³à²²à²¦ ಸಮà³à²¦à³à²°à²¦ ಕಪà³à²ªà³†à²—ೆ (ಎಸà³. ಎಲà³. à²à³ˆà²°à²ªà³à²ªà²¨à²µà²°à²¿à²—ೆ) “ತಂದೆ” ಅಥವಾ “ಅಪà³à²ªà²¾” ಎಂದೠಕರೆಯಲೠಮà³à²œà³à²—ರವೇ? ಅವರೆಂದಾದರೂ ನಿಮà³à²® ಲೇಖನಗಳ ಬಗà³à²—ೆ ಕೇವಲವಾಗಿ ಎಲà³à²²à²¾à²¦à²°à³‚ ಉಲà³à²²à³‡à²–ಿಸಿದ ನಿದರà³à²¶à²¨à²µà²¾à²¦à²°à³‚ ಇದೆಯೇ? ಎಂದೂ ತà³à²‚ಬಿದ ಕೊಡ ತà³à²³à³à²•à³à²µà³à²¦à²¿à²²à³à²²à²µà³†à²‚ಬ ಸತà³à²¯ ತಮಗೆಲà³à²²à²¿ ಅರà³à²¥à²µà²¾à²¦à³€à²¤à³? ಅಷà³à²Ÿà²•à³à²•ೂ ಅವರà³à²¯à²¾à²•ೆ ನಿಮà³à²® ಲೇಖನಗಳ ಬಗà³à²—ೆ ಯೋಚಿಸà³à²¤à³à²¤à²¾à²°à³†? ಅವರೇನಿದà³à²¦à²°à³‚ ಅವರಿಗೆ ಸಮಾನ ಅಥವಾ ಅವರಿಗಿಂತ ಯೋಗà³à²¯à²° ಜೊತೆ ಮಾತà³à²° ಸಂಪರà³à²• ಹೊಂದà³à²¤à³à²¤à²¾à²°à³†. ಸಗಣಿಯವನೊಡನೆ ಜಗಳಕà³à²•ಿಂತ ಗಂಧದವನೊಡನೆ ಗà³à²¦à³à²¦à²¾à²Ÿ ಲೇಸೠಎಂಬ ಸತà³à²¯ ಅವರಿಗೆ ಗೊತà³à²¤à²¿à²¦à³†.
ಹಿಂದೂ ಕರà³à²®à² ರà³, ಕರà³à²®à² ಬà³à²°à²¾à²¹à³à²®à²£à²°à³, ಕರà³à²®à² ವೀರಶೈವರà³, ಕರà³à²®à² à²à²œà²°à²‚ಗಿಗಳà³, ಕರà³à²®à² ಕಮà³à²¯à³à²¨à²¿à²¸à³à²Ÿà²°à³, ಕರà³à²®à² ನಕà³à²¸à²²à²°à³ ಇತà³à²¯à²¾à²¦à²¿à²¯à²¾à²—ಿ ಬರೆದಿದà³à²¦à³€à²°à²²à³à²²à²¾! ತಮಗೆ “ಕರà³à²®à² ” ಎಂಬ ಪದದ ಅರà³à²¥ ಗೊತà³à²¤à³‡? ತನà³à²¨ ಕರà³à²®à²¦à²²à³à²²à²¿ (ಕರà³à²¤à²µà³à²¯à²¦à²²à³à²²à²¿) ಅತà³à²¯à²‚ತ ನಿಷà³à² ೆಯನà³à²¨à³ ಹೊಂದಿದವ ಕರà³à²®à² ನಾಗà³à²µà²¨à³‡ ಹೊರತೠತನà³à²¨ ಧರà³à²®à²µà³‡(ಜಾತಿಯೇ) ದೊಡà³à²¡à²¦à³ ಎಂದೠಹಲà³à²¬à³à²µà²µà²°à²²à³à²². ತಾವೠಬà³à²°à²¾à²¹à³à²®à²£ ಅಥವಾ ವೀರಶೈವನಿಗೆ ಕರà³à²®à² ಎಂದೠಹೇಳಿದರೆ ಇಲà³à²²à²¿ ಯಾವ ಕರà³à²¤à²µà³à²¯à²¨à²¿à²·à³à² ಬà³à²°à²¾à²¹à³à²®à²£, ವೀರಶೈವನೂ ಬೇಸರಿಸà³à²µà³à²¦à²¿à²²à³à²². ಯಾಕೆಂದರೆ ಅವರಿಗೆ ತಾವೠಮಾಡà³à²µ ಆಚರಣೆಯಲà³à²²à²¿ ಶà³à²°à²¦à³à²§à³†à²¯à²¿à²¦à³† ಎಂದೠನೀವೠಮತà³à²¤à²·à³à²Ÿà³ ಎತà³à²¤à²¿ ಹೇಳಿದ ಹಾಗಾಯಿತà³, ಅಷà³à²Ÿà³†. ಆದರೆ ಅರà³à²¥ ಗೊತà³à²¤à²¿à²²à³à²²à²¦à³‡ ಈ ಶಬà³à²¦à²µà²¨à³à²¨à³ ಕಮà³à²¯à³à²¨à²¿à²¸à³à²Ÿà²°à²¿à²—ೋ, ನಕà³à²¸à²²à²°à²¿à²—ೋ ಬಳಸಬೇಡಿ. ತಾವೊಬà³à²¬ ಕರà³à²®à² ಪತà³à²°à²•ರà³à²¤à²°à²¾à²—ಿದà³à²¦à²°à³† ಈ ರೀತಿ ಬರೆಯà³à²¤à³à²¤à²¿à²°à²²à²¿à²²à³à²². ಕರà³à²®à² ನೆಂದರೆ ಧರà³à²®à²¾à²‚ಧನೆಂದರà³à²¥à²µà²²à³à²². ಕರà³à²®à² ಎಂಬ ಪದವನà³à²¨à³ ಧರà³à²®à²¾à²‚ಧ ಎನà³à²¨à³à²µ ಅರà³à²¥à²¦à²²à³à²²à²¿ ಬಳಸಿದ ತಾವೠಎಲà³à²²à²¿à²¯à³‚, ಅಪà³à²ªà²¿ ತಪà³à²ªà²¿à²¯à³‚ ಮà³à²¸à³à²²à²¿à²®à²°à²¿à²—ಾಗಲಿ, ಅಥವಾ ಕà³à²°à²¿à²¶à³à²šà²¿à²¯à²¨à³à²¨à²°à²¿à²—ಾಗಲಿ ಕರà³à²®à² ಎಂಬ ಪದವನà³à²¨à³ ಬಳಸಿಲà³à²². ಯಾಕೆ? ಆ ಧೈರà³à²¯ ಬರಲಿಲà³à²²à²µà³‡? ಎತà³à²¤à²¿à²—ೆ ಜà³à²µà²° ಬಂದರೆ ಎಮà³à²®à³†à²—ೆ ಬರೆ ಹಾಕà³à²µ ಗೀಳೇ ತಮಗೆ? ಧರà³à²®à²•à³à²•ೆ ಜಾತಿ, ಮತಗಳ ಸೀಮೆಯಿಲà³à²². ನೀತಿಯà³à²•à³à²¤à²µà²¾à²¦ ಕರà³à²¤à²µà³à²¯à²µà²¨à³à²¨à³ ಮà³à²¸à³à²²à²¿à²‚ ಬಳಸಲಿ ಅಥವಾ ಕà³à²°à²¿à²¶à³à²šà²¿à²¯à²¨à³ ಬಳಸಲಿ ಅದೠಧರà³à²® ಎಂದೆನಿಸಿಕೊಳà³à²³à³à²¤à³à²¤à²¦à³†. ರಾಜಧರà³à²® ಎಂದರೆ ರಾಜನ ಜಾತಿ ಎಂದರà³à²¥à²µà²²à³à²².
ಇನà³à²¨à³ ಇತಿಹಾಸದ ಬಗà³à²—ೆ ಮಾತನಾಡೊಣ. ತಾವೠಇತಿಹಾಸದ ಬಗà³à²—ೆ ಇಷà³à²Ÿà³†à²²à³à²²à²¾ ಗೊತà³à²¤à²¿à²°à³à²µà²µà²°à²‚ತೆ ಮಾತಾಡà³à²¤à³à²¤à²¿à²¦à³à²¦à³€à²°à²²à³à²²à²¾! ಹಿಂದೂ ಎನà³à²¨à³à²µà³à²¦à³ ಒಂದೠಧರà³à²®à²µà²²à³à²², ಜೀವನ ಪದà³à²§à²¤à²¿ ಎಂದೠಓದಿದ ನೆನಪೂ ನಿಮಗಿಲà³à²²à²µà³‡? ಧರà³à²® ಎಂದರೆ ತಮà³à²®à²°à³à²¥à²¦à²²à³à²²à²¿ ಜಾತಿ ಎಂದೇ? ಧರà³à²® ಎಂದರೆ ಜೀವನ ವಿಧಾನ, ಕರà³à²¤à²µà³à²¯à²µà³†à²‚ದೆ ಹೊರತೠಒಂದೠಸಮೂಹ ಒಂದೠಪà³à²°à²µà²¾à²¦à²¿ ಹೇಳಿದನೆಂದೠಅನà³à²¸à²°à²¿à²¸à²¿ ಕಟà³à²Ÿà²¿à²¦ ಗà³à²‚ಪಲà³à²². ಇಲà³à²²à²¿ ಹಿಂದೂ ಧರà³à²®à²•à³à²•ೆ ಮತಾಂತರಗೊಳà³à²³à²¿ ಎಂದೠಯಾರೂ ಯಾರನà³à²¨à³‚ ಪೀಡಿಸಲಿಲà³à²². ಇದೠಈ ಜಗತà³à²¤à²¿à²¨à²²à³à²²à²¿ ತಮà³à²® ಹà³à²Ÿà³à²Ÿà²¿à²¨à²‚ತೆ ಜನರಿಂದ ಅನà³à²¸à²°à²¿à²¸à²²à³à²ªà²Ÿà³à²Ÿ ಸಹಜ ಜೀವನ ರೀತಿ ಎಂದೠಒಮà³à²®à³†à²¯à²¾à²¦à²°à³‚ ಯೋಚಿಸಿದà³à²¦à³€à²°à²¾? ಇಂಥ ಶà³à²°à³‡à²·à³à² ವಾದ ಜೀವನ ಪದà³à²§à²¤à²¿à²¯à²²à³à²²à²¿ ಜನà³à²® ತಾಳಿದ ತಮಗೆ ಇಂದೠಮೂಗೠಮà³à²šà³à²šà²¿à²•ೊಳà³à²³à³à²µà²·à³à²Ÿà³ ಅಸಹà³à²¯à²µà³‡? ಹಾಗಾದರೆ ತಾವà³à²¯à²¾à²•ೆ ಮà³à²¸à³à²²à²¿à²‚ ಅಥವಾ ಕà³à²°à²¿à²¶à³à²šà²¿à²¯à²¨à³à²¨à²¾à²—ಿ ಮತಾಂತರವಾಗಬಾರದà³? ಮಾದರಿ ಪತà³à²°à²•ರà³à²¤à²°à²¾à²¦ ತಾವೠಈ ವಿಷಯದಲà³à²²à³‚ ಮಾದರಿಯಾಗಬಹà³à²¦à²²à³à²²! ಯಾವಾಗಲೂ ತನà³à²¨à²¤à²¨à²¦ ಬಗà³à²—ೆ ಸà³à²µà²¾à²à²¿à²®à²¾à²¨à²µà²¿à²°à²¬à³‡à²•à³. ಅದೠಇನà³à²¨à³Šà²¬à³à²¬à²°à³ ಕಲಿಸಿ ಬರà³à²µà²‚ತಹà³à²¦à³à²¦à²²à³à²². ಈ ನೆಲ ನಿಮಗೆ ಅನà³à²¨ ಹಾಕಿದೆ. ಈ ನೆಲ, ಜಲ, ಜನರ ಬಗà³à²—ೆ ನಿಮಗೆ ಸà³à²µà²¾à²à²¿à²®à²¾à²¨à²µà²¿à²²à³à²²à²¦à²¿à²¦à³à²¦à²°à³‚ ನಮಗೆ ಚಿಂತೆಯಿಲà³à²² ಬಿಡಿ, ಆದರೆ ಕನà³à²¨ ಹಾಕà³à²µ ಕೆಲಸ ಮಾಡಬೇಡಿ. ಯಾವಾಗಲೂ ಹಸà³à²µà²¿à²—ೆ ಆಚೆ ದಡದಲà³à²²à²¿à²°à³à²µ ಹà³à²²à³à²²à³‡ ಹà³à²²à³à²¸à²¾à²—ಿ ಕಾಣà³à²µà³à²¦à²‚ತೆ.
ನಮà³à²® ಸನಾತನ ಧರà³à²® ವೇದಗಳನà³à²¨à³ ಕಂಠಪಾಠಮಾಡಲೠಮಾತà³à²°à²µà²²à³à²², ನà³à²¯à²¾à²¯, ತರà³à²•, ವà³à²¯à²¾à²•ರಣ, ಆಯà³à²°à³à²µà³‡à²¦, ಇತà³à²¯à²¾à²¦à²¿à²—ಳನà³à²¨à³ ಕಲಿಸಿ ಒಬà³à²¬à²¨à²¨à³à²¨à³ ತà³à²‚ಬಿದ ಕೊಡವನà³à²¨à²¾à²—ಿಸà³à²¤à³à²¤à²¿à²¤à³à²¤à³. ಸà³à²µà²¤à²‚ತà³à²°à²ªà³‚ರà³à²µ à²à²¾à²°à²¤à²¦à²²à³à²²à²¿ ಒಬà³à²¬à²¨à³‡ ಒಬà³à²¬ ಹಸಿವಿನಿಂದ ನರಳಿದ ದಾಖಲೆಯಿದà³à²¦à²°à³† ತೋರಿಸಿ ಬೆಳಗೆರೆಯವರೇ. ನೆಮà³à²®à²¦à²¿à²¯ ಬದà³à²•ೠಕಟà³à²Ÿà²¿à²•ೊಂಡà³, ಇತರರಿಗೂ ಹಂಚಿ ತಾವೂ ತಿಂದà³à²‚ಡೠಬಾಳà³à²¤à³à²¤à²¿à²¦à³à²¦à²°à³. ತಾವೠಕಾಡೠಕಡಿದೠಎಸà³à²Ÿà³‡à²Ÿà³ ಗಳನà³à²¨à²¾à²—ಿ ಪರಿವರà³à²¤à²¿à²¸à²¿à²¦à³à²¦à²²à³à²²à²¦à³‡ ಆರà³à²¯à²°à³ ಹೊರಗಿನಿಂದ ಬಂದೠಕಾಡೠಕಡಿದೠಕೃಷಿà²à³‚ಮಿಯನà³à²¨à²¾à²—ಿ ಪರಿವರà³à²¤à²¿à²¸à²¿à²¦à²°à³†à²‚ದೠಎಲà³à²²à²° ಕಣà³à²£à³ ಕಟà³à²Ÿà³à²µà²‚ತೆ ಬà³à²°à²¿à²Ÿà²¿à²·à²°à³ ನಂಬಿಸಿದರà³, ಇವರೠಹಣದ ಆಸೆಗಾಗಿ ನಂಬಿದರà³. “ಇಷà³à²Ÿà²¾à²—ಿ ಥೆರೇಸಾ ತà³à²‚ಬಾ subtle ಆಗಿ ಅನಾಥ ಹಿಂದೂ(?) ಕಂದಮà³à²®à²—ಳನà³à²¨à³ ಸದà³à²¦à²¿à²²à³à²²à²¦à³† ಮತಾಂತರ ಗೊಳಿಸಿದ ರಾಕà³à²·à²¸à²¿ ಅಂತಲೇ ಇಟà³à²Ÿà³à²•ೊಳà³à²³à³‹à²£. ಅವೇ ಅನಾಥ ಹಿಂದೂ ಕಂದಮà³à²®à²—ಳನà³à²¨à³ ಎದೆಗವಚಿಕೊಂಡೠ“ನಾನೠಸಾಕà³à²¤à³à²¤à³‡à²¨à³†” ಅಂದಂಥ ಒಬà³à²¬ ಹಿಂದೂ ಮಾತೃದೇವತೆ ಹà³à²Ÿà³à²Ÿà²²à²¿à²²à³à²²à²µà²²à³à²² ಸà³à²µà²¾à²®à²¿? ಅದೂ ಇಷà³à²Ÿà³ ದೊಡà³à²¡ à²à²¾à²°à²¤à²¦à²²à³à²²à²¿!” ಎಂದೠಬರೆದಿದà³à²¦à³€à²°à²²à³à²²à²¾, ಈ ಕೆಲಸವನà³à²¨à³ ತಾವà³à²¯à²¾à²•ೆ ಮಾಡಬಾರದà³? ಇಷà³à²Ÿà³ ದೊಡà³à²¡ à²à²¾à²°à²¤ ದೇಶದಲà³à²²à²¿ ತಮಗೆ ತಮà³à²®à²¨à³à²¨à³ ಕಂಡà³à²•ೊಳà³à²³à³à²µà³à²¦à³‡ ಅಷà³à²Ÿà³Šà²‚ದೠಕಷà³à²Ÿà²µà²¾à²¯à²¿à²¤à³‡? ತಮà³à²®à²¦à³‡ ಆದ ಪà³à²°à²¾à²°à³à²¥à²¨à²¾ ಸà³à²•ೂಲೠನಲà³à²²à²¿ ಒಂದೠಪೈಸಾ ಶà³à²²à³à²• ಕೂಡ ಇಲà³à²²à²¦à³‡ ಶಿಕà³à²·à²£à²µà²¨à³à²¨à³ ಕೊಡà³à²µà²‚ತಹ ತà³à²¯à²¾à²—ವನà³à²¨à³‡à²¨à³‚ ತಾವೠಮಾಡಿಲà³à²². ಅಂಥಾದà³à²¦à²°à²²à³à²²à²¿ ಸಾವಿರಾರೠಮಕà³à²•ಳಿಗೆ ಪà³à²•à³à²•ಟೆ ಅನà³à²¨ ವಸà³à²¤à³à²° ಮತà³à²¤à³ ಸೂರೠನೀಡಿ ಶಿಕà³à²·à²£à²µà²¨à³à²¨à³Šà²¦à²—ಿಸà³à²µ ಸಿದà³à²¦à²—ಂಗಾ ಮಠದ ಸà³à²µà²¾à²®à²¿à²¯à²µà²° ಬಗà³à²—ೆ ಅಸಡà³à²¡à³†à²¯à²¿à²‚ದ ಮಾತಾಡಲೠತಮಗೆ ಸಂಕೋಚವಾಗà³à²µà³à²¦à²¿à²²à³à²²à²µà³‡? ಇದೇ ಕೆಲಸವನà³à²¨à³ ಒಂದೠಕà³à²°à²¿à²¶à³à²šà²¿à²¯à²¨à³ ಮಿಶನರಿ ಮಾಡಿದà³à²¦à²°à³† ಅದೠಮಾಧà³à²¯à²®à²—ಳಲà³à²²à²¿ ರಾರಾಜಿಸà³à²¤à³à²¤à²¿à²¤à³à²¤à²²à³à²²à²µà³‡ ರವಿಯವರೇ. ನಮà³à²® ಧರà³à²® ಬಿಸಿನೆಸೠಮೈಂಡೠಹೊಂದಿಲà³à²², ಬದಲಾಗಿ ಧರà³à²®à²µà²¨à³à²¨à²¨à³à²¸à²°à²¿à²¸à³à²¤à³à²¤à²¿à²¦à³†. ಧರà³à²®à²¾à²‚ಧತೆಯನà³à²¨à²²à³à²². ನಾವೠನಮà³à²® ತಾಯಿಯನà³à²¨à³ ಮಾತà³à²° “ಅಮà³à²®à²¾!” ಎಂದೠಸಂಬೋಧಿಸà³à²¤à³à²¤à³‡à²µà³†à²¯à³‡ ಹೊರತೠಇನà³à²¨à³Šà²¬à³à²¬à²°à²¨à³à²¨à²²à³à²². ಹಾಗೆಯೇ ನಮà³à²®à²¤à²¨, ನೆಲ, ಜಲ ಕೂಡ.
ಬೆಳಗೆರೆಯವರೇ, ಕೊನೆಯದಾಗಿ ಒಂದೠಸಲಹೆ- ನಮà³à²® ನೆಲದ ಸಂಸà³à²•ೃತಿ, ವೇದ, ವೇದಾಂಗಗಳà³, ವà³à²¯à²¾à²•ರಣಾದಿಗಳೠಉಳಿಯಬೇಕಾದರೆ ನೀವೇನೂ ದೊಡà³à²¡ ತà³à²¯à²¾à²— ಮಾಡಬೇಕಿಲà³à²². ಯಾರ ಮೇಲೂ, ಗನà³à²¨à³ ಬಾಂಬà³à²—ಳನà³à²¨à³ ತೋರಿಸಿ à²à²¯à³‹à²¤à³à²ªà²¾à²¦à²¨à³† ಸೃಷà³à²Ÿà²¿ ಮಾಡà³à²µ ಚಾಳಿಯಿಲà³à²²à²¦ ಸನಾತನ ಧರà³à²®à³€à²¯à²° ಬಗà³à²—ೆ ತà³à²šà³à²›à²µà²¾à²—ಿ ಮಾತಾಡಿ, ಬರೆದೠಮಾಡಬೇಡಿ. ನಾವೆಲà³à²² ನಿಮà³à²® ಪತà³à²°à²¿à²•ೆಯನà³à²¨à³ ಕೊಂಡೠಓದà³à²µà³à²¦à²°à²¿à²‚ದಲೇ ನೀವಿವತà³à²¤à³ ಇಷà³à²Ÿà³ ಮೇಲೆ ಬಂದಿರà³à²µà³à²¦à³†à²‚ದೠನೆನಪಿರಲಿ. ಎಂದೂ ಮರೆಯದ ಹಾಡà³à²—ಳಂತಹ ಕಾರà³à²¯à²•à³à²°à²®à²—ಳನà³à²¨à³ ನೀವೠನಡೆಸಿಕೊಟà³à²Ÿà²¾à²— “ನಮà³à²® ರವಿ ಬೆಳಗೆರೆ” ಎಂದೠನಿಮà³à²®à²¨à³à²¨à³ ಕೊಂಡಾಡಿದವರೠತಮà³à²®à²‚ತೆ ಸಾಂಸà³à²•ೃತಿಕ ಕಂಪನà³à²¨à³ ಸವಿಯà³à²µ ಸಮಾನ ಮನಸà³à²•ರಾದ ನಮà³à²® ನೆಲದ ಜನ ಎಂಬà³à²¦à²¨à³à²¨à³ ಎಂದೂ ಮರೆಯದಿರಿ. ನಿಮà³à²® ಲೇಖನಗಳಲà³à²²à²¿ ವೈಚಾರಿಕ ಪà³à²°à²œà³à²žà³†à²¯à²¿à²¦à³à²¦à²°à³† ನಾವà³à²¯à²¾à²°à³‚ ಅಲà³à²²à²—ಳೆಯà³à²µà³à²¦à²¿à²²à³à²². ಅಸಂಬದà³à²§à²¤à³† ಬೇಡ ಅಷà³à²Ÿà³†.
ಇತಿ
ಓದà³à²—
Very meaningful response..
As a follower of hinduism(no need to be an hindu) think whats happeneing in the real world and where exactly its effecting????
we are all with you simha you are in the right way keep going
this will what happen if someone try to act too smart!!!!!! u deserved it MR.belegere!!!!
I was great Fan of Ravi, but by reading his article and comments of others I really hate myself being the fan all these day.
Sorry for my misunderstanding on great Belgere
Hi Pratap
I’ve been a big fan of yours since the time you wrote under “Vishva Vihara” tag.
For many weeks I’ve been searching for the CONCLUDING ARTICLE BY BHYRAPPA with which the conversion debate ended in VK. In that I suppose he has answered all the objections (if i remember correctly the title is about our ancestors’ social reforms). I searched Internet but couldn’t find its e-copy, can you PLEASE UPLOAD IT?