Date : 31-03-2012, Saturday | 52 Comments
ನಮ್ಮ ಮಾಧ್ಯಮಗಳೇಕೆ ಈ ಪರಿ ನಕಾರಾತ್ಮಕವಾಗಿಬಿಟ್ಟಿವೆ? ಭಾರತೀಯರಾದ ನಾವು ನಮ್ಮ ಶಕ್ತಿ ಸಾಮರ್ಥ್ಯ ಮತ್ತು ಸಾಧನೆಗೇ ಮನ್ನಣೆಕೊಡಲು ಏಕೆ ಹಿಂದೇಟು ಹಾಕುತ್ತೇವೆ? ನಮ್ಮದು ಎಂತಹ ಮಹಾನ್ ದೇಶ, ಅತ್ಯದ್ಭುತ ಸಾಹಸಗಾಥೆಗಳು ನಮ್ಮಲ್ಲಿವೆ. ಆದರೂ ಅವುಗಳನ್ನು ಗುರುತಿಸಲು, ಒಪ್ಪಿಕೊಳ್ಳಲು ನಾವೇಕೆ ಸಿದ್ಧರಿಲ್ಲ? ಹಾಲಿನ ಉತ್ಪಾದನೆಯಲ್ಲಿ ನಾವು ಜಗತ್ತಿನಲ್ಲಿಯೇ ಮುಂದು. ರಿಮೋಟ್ ಸೆನ್ಸಿಂಗ್ ಉಪಗ್ರಹಗಳ ವಿಚಾರದಲ್ಲೂ ನಾವು ಜಗತ್ತಿನಲ್ಲಿಯೇ ನಂಬರ್ 1. ಗೋಧಿ ಉತ್ಪಾದನೆಯಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದ್ದೇವೆ. ಅಕ್ಕಿ ಉತ್ಪಾದನೆಯಲ್ಲೂ ಜಗತ್ತಿನ ಎರಡನೇ ಅತಿ ದೊಡ್ಡ ರಾಷ್ಟ್ರ. ಡಾ. ಎಚ್. ಸುದರ್ಶನ್ ಅವರನ್ನು ನೋಡಿ, ಬುಡಕಟ್ಟು ಜನಾಂಗದವರ ಗ್ರಾಮವನ್ನು ಒಂದು ಸ್ವಾವಲಂಬಿ ನಾಡಾಗಿಸಿದ್ದಾರೆ. ಇಂಥ ಕೋಟ್ಯಂತರ ಯಶೋಗಾಥೆಗಳಿವೆ. ಆದರೂ ನಮ್ಮ ಮಾಧ್ಯಮಗಳು ಮಾತ್ರ ಕೆಟ್ಟ ಸುದ್ದಿ, ಕೆಟ್ಟ ವೈಫಲ್ಯ, ಅವಘಡಗಳ ಬಗ್ಗೆ ಆಸಕ್ತಿ, ಗೀಳು ಬೆಳೆಸಿಕೊಂಡಿವೆ. ನಾನೊಮ್ಮೆ ಇಸ್ರೇಲ್ ರಾಜಧಾನಿ ಟೆಲ್ ಅವಿವ್್ಗೆ ಹೋಗಿದ್ದೆ. ಅದೇ ದಿನ ಇಸ್ರೇಲ್್ನಾದ್ಯಂತ ಹಲವಾರು ಬಾಂಬ್ ದಾಳಿಗಳು, ದುರ್ಘಟನೆಗಳು ಸಂಭವಿಸಿದ್ದವು. ಸಾಕಷ್ಟು ಜನರ ಸಾವುನೋವುಗಳಾಗಿದ್ದವು. ಹಮಾಸ್ ಸಂಘಟನೆಯ ಭಯೋತ್ಪಾದಕರು ದಾಳಿಗೈದಿದ್ದರು. ಆಶ್ಚರ್ಯವೆಂದರೆ ಮರುದಿನ ಇಸ್ರೇಲಿ ಪತ್ರಿಕೆಯನ್ನು ಕೈಗೆತ್ತಿಕೊಂಡರೆ ಮೊದಲ ಪುಟದಲ್ಲಿ ಐದು ವರ್ಷಗಳಲ್ಲಿ ಮರುಭೂಮಿಯೊಂದನ್ನು ಹೂದೋಟವಾಗಿಸಿದ್ದ ಯಹೂದಿಯೊಬ್ಬನ ಫೋಟೋವಿತ್ತು. ಬೆಳಗ್ಗೆ ಎದ್ದ ಕೂಡಲೇ ಎಂಥವರಿಗೂ ಪ್ರೇರಣೆ ಕೊಡುವ ಫೋಟೋ ಅದಾಗಿತ್ತು. ಬಾಂಬ್ ಸ್ಫೋಟದ, ಸತ್ತವರ ಚಿತ್ರ ಮತ್ತು ಸುದ್ದಿಗಳು ಒಳಪುಟಗಳಲ್ಲಿ ಇತರೆ ವರದಿಗಳ ಮಧ್ಯೆ ಸೇರಿಹೋಗಿದ್ದವು. ನಮ್ಮ ಭಾರತದಲ್ಲಿ ಸಾವು, ಸಂಕಷ್ಟ, ರೋಗರುಜಿನ, ಆಕ್ರಮಣ, ದಾಳಿಗಳ ಸುದ್ದಿಗಳನ್ನೇ ಮುಖಪುಟದಲ್ಲಿ ಕಾಣುತ್ತೇವೆ.
ನಾವೇಕೆ ಇಷ್ಟೊಂದು ಋಣಾತ್ಮಕ?
ಮತ್ತೊಂದು ಪ್ರಶ್ನೆ: ನಾವು ಒಂದು ರಾಷ್ಟ್ರವಾಗಿ ಏಕೆ ವಿದೇಶಿ ವಸ್ತುಗಳ ಬಗ್ಗೆ ಮೋಹ ಬೆಳೆಸಿಕೊಂಡಿದ್ದೇವೆ? ನಮಗೆ ವಿದೇಶಿ ಟಿವಿ, ವಿದೇಶಿ ಶರ್ಟ್್ಗಳೇ ಬೇಕು. ಏಕೆ ವಿದೇಶಿ ತಂತ್ರಜ್ಞಾನವೇ ಆಗಬೇಕು? ಎಲ್ಲವೂ ಆಮದು ವಸ್ತುಗಳೇ ಆಗಿರಬೇಕೆಂಬ ಗೀಳೇಕೆ? ಸ್ವಾವಲಂಬನೆಯಿಂದ ಸ್ವಾಭಿಮಾನ ಬರುತ್ತದೆ ಎಂಬುದು ನಮಗೆ ಅರ್ಥವೇ ಆಗುವುದಿಲ್ಲವೆ? ನಾನು ಹೈದರಾಬಾದ್್ನಲ್ಲಿ ಉಪನ್ಯಾಸವೊಂದನ್ನು ಕೊಡುತ್ತಿದ್ದಾಗ, 14 ವರ್ಷದ ಬಾಲಕಿಯೊಬ್ಬಳು ಬಂದು ನನ್ನ ಹಸ್ತಾಕ್ಷರ ಕೇಳಿದಳು. ನಿನ್ನ ಜೀವನದ ಗುರಿಯೇನು ಎಂದು ನಾನವಳನ್ನು ಕೇಳಿದಾಗ, ‘ನಾನು ಅಭಿವೃದ್ಧಿ ಹೊಂದಿದ ಭಾರತದಲ್ಲಿ ಬದುಕ ಬಯಸುತ್ತೇನೆ’ ಎಂದಳು. ಅವಳಿಗಾಗಿ ನಾನು ಮತ್ತು ನೀವು ಬಲಿಷ್ಠ ಭಾರತವನ್ನು ಕಟ್ಟಬೇಕು. ಭಾರತ ಹಿಂದುಳಿದ ರಾಷ್ಟ್ರವಲ್ಲ, ಅದೂ ಅತ್ಯಂತ ಮುಂದುವರಿದ ರಾಷ್ಟ್ರ ಎಂದು ನೀವು ಘೋಷಿಸಬೇಕು. ನಿಮ್ಮ ಬಳಿ 10 ನಿಮಿಷ ಕಾಲಾವಕಾಶವಿದೆಯೇ? ಈ ದೇಶಕ್ಕಾಗಿ ನಿಮ್ಮಲ್ಲಿ 10 ನಿಮಿಷ ಸಮಯವಿದೆಯೇ?
ಹಾಗಿದ್ದರೆ ಮಾತ್ರ ಕೇಳಿ, ಇಲ್ಲವಾದರೆ ನಿಮ್ಮಿಷ್ಟ…
ನೀವು ಹೇಳುತ್ತೀರಿ, ನಮ್ಮದು ಅದಕ್ಷ ಸರ್ಕಾರ. ನೀವು ಹೇಳುತ್ತೀರಿ, ನಮ್ಮ ಕಾನೂನುಗಳು ಒಬೀರಾಯನ ಕಾಲದವು. ನೀವು ಹೇಳುತ್ತೀರಿ, ನಮ್ಮ ನಗರಪಾಲಿಕೆಯವರು ಕಸವನ್ನೇ ವಿಲೇವಾರಿ ಮಾಡುವುದಿಲ್ಲ. ನೀವು ಹೇಳುತ್ತೀರಿ, ನಿಮ್ಮ ಮನೆಯ ಫೋನ್ ಹಾಳಾಗಿದೆ, ಮಿಂಚಂಚೆಗಳು ತಲುಪುವುದಿಲ್ಲ. ನೀವು ಹೇಳುತ್ತೀರಿ, ನಮ್ಮ ದೇಶ ನಾಯಿಪಾಲಾಗಿ, ಕೊಚ್ಚೆ ಗುಂಡಿಯಾಗಿದೆ. ನೀವು ಹೇಳುತ್ತೀರಿ, ಹೇಳುತ್ತಲೇ ಇರುತ್ತೀರಿ. ಆದರೆ ಅದನ್ನು ಸರಿಪಡಿಸಲು ನೀವೇನು ಮಾಡುತ್ತಿದ್ದೀರಿ?
ಇಂಥ ಭಾಷಣ ಕೇಳಿ 5 ವರ್ಷಗಳೇ ಕಳೆದವು ಅಲ್ವಾ?
2007, ಜುಲೈ 24ರಂದು ಎಪಿಜೆ ಅಬ್ದುಲ್ ಕಲಾಂ ರಾಷ್ಟ್ರಪತಿ ಭವನವನ್ನು ತೊರೆದ ನಂತರ ಒಂದು ಪ್ರೇರಕ ಶಕ್ತಿಯೇ ಹೊರಟು ಹೋದಂತಾಯಿತು. ಹೊಸ ಸರ್ಕಾರಗಳು ರಚನೆಯಾಗುವಾಗ, ಹಾಲಿ ಸರ್ಕಾರ ಸಂಕಷ್ಟಕ್ಕೆ ಸಿಕ್ಕಾಗ, ಬಿದ್ದುಹೋಗುವಾಗ ಮಾತ್ರ ಸುದ್ದಿಯಾಗುತ್ತಿದ್ದ, ಉಳಿದಂತೆ ಭೂತಬಂಗಲೆಯಂತಿರುತ್ತಿದ್ದ ರಾಷ್ಟ್ರಪತಿ ಭವನವನ್ನೂ ಚಟುವಟಿಕೆಯ ಕೇಂದ್ರವಾಗಿಸಿದ, ದೇಶವಾಸಿಗಳು ತಮ್ಮ ನೋವನ್ನು ಆಲಿಸುವ ದೈವವೊಂದಿದೆ ಎಂಬಂತೆ ರಾಷ್ಟ್ರಪತಿ ಭವನದತ್ತ ಮುಖಮಾಡುವಂತೆ ಮಾಡಿದ ವ್ಯಕ್ತಿ ಕಲಾಂ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಎಸ್. ರಾಧಾಕೃಷ್ಣನ್ ಹೊರತುಪಡಿಸಿ ರಾಷ್ಟ್ರಪತಿಯೊಬ್ಬರ ಹೆಸರು ರಾಷ್ಟ್ರವಾಸಿಗಳ ನಾಲಗೆ ತುದಿಯಲ್ಲಿ ಹರಿದಾಡಿದ್ದರೆ ಅದು ಕಲಾಂ ಬಿಟ್ಟರೆ ಬೇರಾರದ್ದು ಹೇಳಿ ನೋಡೋಣ? ಈ ದೇಶದ ಉದ್ದಗಲವನ್ನು ಕಲಾಂ ಕ್ರಮಿಸಿದಷ್ಟು ಯಾರು ತಿರುಗಿದ್ದಾರೆ? ರಾಷ್ಟ್ರಪತಿಗಳನ್ನು ಬಿಡಿ, ಪ್ರಧಾನಿ ಮನಮೋಹನ್ ಸಿಂಗ್ ಕಳೆದ 8 ವರ್ಷಗಳಲ್ಲಿ ಕಲಾಂರಷ್ಟು ದೇಶ ಪರಿಕ್ರಮಣ ಮಾಡಿದ್ದಾರೆಯೇ? ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಮುಂತಾದ ಪದ್ಮಾ ಅವಾರ್ಡ್್ಗಳ ಪ್ರಧಾನ ಸಮಾರಂಭ, ಆರ್ಜುನ್, ದ್ರೋಣಾಚಾರ್ಯ, ರಾಜೀವ್ ಖೇಲ್್ರತ್ನ ಮುಂತಾದ ಪ್ರಶಸ್ತಿಗಳನ್ನು ಕೊಡಮಾಡುವಾಗ, ಗಣರಾಜ್ಯೋತ್ಸವದ ದಿನ, ಸಂಸತ್ ಅಧಿವೇಶನದ ಆರಂಭ ದಿನ ಮಾತ್ರ ಈ ನಮ್ಮ ಸೋಕಾಲ್ಡ್ ರಾಷ್ಟ್ರಪತಿಗಳು ದೇಶವಾಸಿಗಳಿಗೆ ತಮ್ಮ ಮುಖದರ್ಶನ ಮಾಡಿಸುತ್ತಾರೆ. ಆದರೆ ಕಲಾಂ ರಾಷ್ಟ್ರಪತಿ ಭವನ ತೊರೆದು 5 ವರ್ಷಗಳಾಗುತ್ತಾ ಬಂದಿದ್ದರೂ ಹಾಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗಿಂತಲೂ ಹೆಚ್ಚು ಸುದ್ದಿಯಲ್ಲಿದ್ದಾರೆ, ಹೆಚ್ಚು ಕ್ರಿಯಾಶೀಲರಾಗಿದ್ದಾರೆ, ಆ ಕಾರಣಕ್ಕೆ ಹಾಲಿ ರಾಷ್ಟ್ರಪತಿ, ಪ್ರಧಾನಿಗಿಂತಲೂ ಅತಿ ಹೆಚ್ಚು ಕಾರ್ಯಕ್ರಮಗಳಿಗೆ ಆಹ್ವಾನಿತರಾಗುತ್ತಾರೆ. ಇದು ಏನನ್ನು ಸೂಚಿಸುತ್ತದೆ? ಒಬ್ಬ ರಾಷ್ಟ್ರಪತಿಯಾದವರು ಹೇಗಿರಬೇಕು ಹಾಗು ಪ್ರತಿಭಾ ಪಾಟೀಲ್ ಹೇಗಿದ್ದರು? ಸ್ವಂತ ಮಗ ಹಾಗು ಸಂಬಂಧಿಕರೇ ವಿವಾದಗಳಲ್ಲಿ ಸಿಕ್ಕಿಹಾಕಿಕೊಂಡಾಗ ನೈತಿಕ ಸ್ಥೈರ್ಯ ಎಲ್ಲಿಂದ ತಾನೇ ಬಂದೀತು? ಹಾಗಾಗಿಯೇ ಕೇಂದ್ರದಲ್ಲಿ ಹಗರಣಗಳ ನಂತರ ಹಗರಣಗಳು ಸಂಭವಿಸುತ್ತಿದ್ದರೂ, ದೇಶದ ಮರ್ಯಾದೆ ಹರಾಜಾಗುತ್ತಿದ್ದರೂ ರೋಮ್ ಹೊತ್ತಿ ಉರಿಯುದ್ದರೆ ರಾಜ ನೀರೋ ಪೀಟಿಲು ಕುಯ್ಯುತ್ತಿದ್ದ ಎಂಬಂತೆಯೇ ಪ್ರತಿಭಾ ಪಾಟೀಲರಿದ್ದರು. ದೇಶದ ಬೊಕ್ಕಸಕ್ಕೆ 205ಕೋಟಿ ನಷ್ಟ ಉಂಟುಮಾಡಿದ ಪಾಟೀಲರ ಪ್ರತಿಭೆಗೂ ಕಲಾಂಗೂ ಅದೆಷ್ಟು ಅಂತರ ಅಲ್ಲವೇ?
ಕಳೆದ ಐದು ವರ್ಷಗಳಲ್ಲಿ ರಾಷ್ಟ್ರಪತಿ ಎಂಬವರೊಬ್ಬರಿದ್ದಾರೆ ಎಂದು ನಿಮಗನಿಸಿತ್ತೇ ಹೇಳಿ?
ಇತ್ತೀಚೆಗೆ ಸಂಸತ್್ನ ಬಜೆಟ್ ಅಧಿವೇಶನ ಆರಂಭವಾದ ದಿನ ಬೆಳಗ್ಗೆ ಪತ್ರಿಕೆಗಳನ್ನು ತೆರೆದಾಗ ‘ರಾಷ್ಟ್ರಪತಿ ಪ್ರತಿಭಾ ಪಾಟೀಲರಿಂದ ಇಂದು ಕಡೇ ಭಾಷಣ’ ಎಂಬ ಸುದ್ದಿಯೊಂದಿತ್ತು. ಮುಂಬರುವ ಜುಲೈ 24ರಂದು ಪ್ರತಿಭಾ ಪಾಟೀಲ್ ಅವರ ಕಾರ್ಯಾವಧಿ ಪೂರ್ಣಗೊಳ್ಳಲಿದ್ದು, ಜುಲೈ 25ಕ್ಕೆ ಹೊಸ ರಾಷ್ಟ್ರಪತಿ ಪದಗ್ರಹಣ ಮಾಡಲಿದ್ದಾರೆ. ಗ್ಝಿಝಿ ಜ್ಡಜ ್ಠಜಡಠಜ್ಛಡಿ ಡ್ಟಿ ಪ್ರತಿಭಾ ಪಾಟೀಲ್, ಆ ಸುದ್ದಿ ಕೊಂಚ ನಿರಾಳ, ಹೊಸ ಆಶಾಭಾವನೆಯನ್ನು ಖಂಡಿತ ಹುಟ್ಟುಹಾಕಿದೆ. ಅದಕ್ಕೆ ಪೂರ್ವಭಾವಿಯಾಗಿ ಉತ್ತರಪ್ರದೇಶ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಅಧಿಕಾರಕ್ಕೇರಿದ್ದು ಇಂಥದ್ದೊಂದು ಆಶಾಭಾವನೆಯ ಉಗಮಕ್ಕೆ ಕಾರಣವಾಗಿದೆ.
ಏಕೆ ಗೊತ್ತಾ?
ಉತ್ತರ ಪ್ರದೇಶ ಚುನಾವಣಾ ಫಲಿತಾಂಶದ ಮೇಲೆ ಕಾಂಗ್ರೆಸ್ ಬಹಳ ಭರವಸೆ ಇಟ್ಟುಕೊಂಡಿತ್ತು. ಮುಸ್ಲಿಮರಿಗೆ ವಿಶೇಷ ಮೀಸಲಾತಿ ನೀಡುವ ಭರವಸೆ ನೀಡಿದ ಕಾಂಗ್ರೆಸ್, ಶೇ.18ರಷ್ಟಿರುವ ಮುಸ್ಲಿಂ ಮತಗಳು ತನಗೆ ಸಾರಾಸಗಟಾಗಿ ದೊರೆತರೆ ಎಸ್ಪಿ, ಬಿಎಸ್ಪಿ, ಬಿಜೆಪಿ ಸೇರಿದ ಚತುಷ್ಕೋನ ಸ್ಪರ್ಧೆಯಲ್ಲಿ ತಾನೇ ಅಧಿಕಾರ ಹಿಡಿಯಬಹುದು ಎಂದು ಅದು ಭಾವಿಸಿತ್ತು. ಒಂದು ವೇಳೆ, ಲೆಕ್ಕಾಚಾರಗಳು ತಲೆಕೆಳಗಾಗಿ ಸಮಾಜವಾದಿ ಪಕ್ಷ 125ರಿಂದ 150 ಸ್ಥಾನಗಳನ್ನು ಗಳಿಸಬಹುದು, ತಾನು 100ರ ಗಡಿದಾಟಿ ಕನಿಷ್ಠ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತೇನೆ ಹಾಗೂ ಎಸ್ಪಿ ಸರ್ಕಾರ ರಚನೆಗೆ ತನ್ನ ಬೆಂಬಲದ ಅಗತ್ಯ ಎದುರಾಗಿಯೇ ಆಗುತ್ತದೆ ಎಂಬ ವಿಶ್ವಾಸವನ್ನು ಕಾಂಗ್ರೆಸ್ ಇಟ್ಟುಕೊಂಡಿತ್ತು. ಅದರ ಜತೆಗೆ ತಾನು 100ರ ಗಡಿ ದಾಟಿ, ಬಿಎಸ್ಪಿಯೂ 100ರ ಆಸುಪಾಸಿಗೆ ಬಂದರೂ ಅದರ ಬೆಂಬಲ ಪಡೆದು ತಾನು ಸರ್ಕಾರ ರಚಿಸಬಹುದು. ಅದು ವ್ಯತ್ಯಾಸವಾದರೂ ಎಸ್ಪಿ, ಬಿಎಸ್ಪಿ ಯಾವುದೇ ಪಕ್ಷಗಳು ಸರ್ಕಾರ ರಚಿಸಬೇಕಾದರೂ ತನ್ನ ಬೆಂಬಲ ಬೇಕೇ ಬೇಕಾಗುತ್ತದೆ ಎಂದುಕೊಂಡಿತ್ತು. ಆಗ ಉಪದ್ರವ ಕೊಡುತ್ತಿರುವ ತೃಣಮೂಲ ಕಾಂಗ್ರೆಸ್್ನ ಮಮತಾ ಬ್ಯಾನರ್ಜಿಯವರಿಗೆ ಸಡ್ಡು ಹೊಡೆಯಬಹುದು. ಅವರು ಬೆಂಬಲ ಹಿಂತೆಗೆದುಕೊಂಡರೂ ಎಸ್ಪಿ, ಬಿಎಸ್ಪಿಗಳು ಅನಿವಾರ್ಯವಾಗಿ ಬೆಂಬಲ ಕೊಟ್ಟೇ ಕೊಡುತ್ತವೆ ಎಂಬ ಲೆಕ್ಕಾಚಾರ ಹಾಕಿಕೊಂಡಿತ್ತು. ಆದರೆ ಮತದಾರನ ಯೋಚನೆಯೇ ಬೇರೆಯಾಗಿತ್ತು. ಎಸ್ಪಿಗೆ ಸ್ವಂತ ಬಲದಿಂದ ಸರ್ಕಾರ ರಚಿಸಲು ಬೇಕಾದ ಬಹುಮತ ದೊರೆತಿದ್ದಲ್ಲದೆ, ಕಾಂಗ್ರೆಸ್ ಸಾಧನೆ ಕಳೆದ ಚುನಾವಣೆಗಿಂತಲೂ ಕಳಪೆಯಾಯಿತು. ಆದಕಾರಣ ಮಮತಾ ಬ್ಯಾನರ್ಜಿಯವರ ಕಾಲು ಹಿಡಿಯಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಆದರೆ, ಮಮತಾ ಮಾತ್ರ ಯುಪಿಎಯಿಂದ ಕಾಲು ತೆಗೆಯಲು ತವಕಿಸುತ್ತಲೇ ಇದ್ದಾರೆ. ಇತ್ತ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಅಭೂತಪೂರ್ವ ಗೆಲುವು ಕೇಂದ್ರ ರಾಜಕೀಯದಲ್ಲಿ ಹೊಸ ಹೊಂದಾಣಿಕೆಗಳಿಗೆ ದಾರಿಮಾಡಿಕೊಡುವ ಎಲ್ಲ ಲಕ್ಷಣ ತೋರುತ್ತಿದೆ. ಅದರಲ್ಲೂ ಮಾರ್ಚ್ 6ರ ಫಲಿತಾಂಶ ಯಾರಿಗಾದರೂ ಅಪಾಯ ತಂದೊಡ್ಡಿದ್ದರೆ ಅದು ಯುಪಿಎ ಸರ್ಕಾರಕ್ಕೆ. ಈ ಮಧ್ಯೆ, ಕೇಂದ್ರ ರೇಲ್ವೆ ಬಜೆಟ್ ಹಾಗೂ ಪ್ರಯಾಣ ದರ ಹೆಚ್ಚಳದ ಬಗ್ಗೆ ಮಮತಾ ಬ್ಯಾನರ್ಜಿ ಸುಖಾಸುಮ್ಮನೆ ಅಪಸ್ವರ ಎತ್ತಿರುವುದರ ಹಿಂದೆಯೂ ಬೇರೆಯದ್ದೇ ಲೆಕ್ಕಾಚಾರಗಳಿವೆ. ಕಳೆದ ಫೆಬ್ರವರಿಯಲ್ಲಿ ಹೊರಬಿದ್ದ ‘ಇಂಡಿಯಾ ಟುಡೆ’ ಸಮೀಕ್ಷೆ ಕೂಡ, ಒಂದು ವೇಳೆ ಈಗಲೇ ಸಾರ್ವತ್ರಿಕ ಚುನಾವಣೆಗಳು ನಡೆದರೆ ಕಾಂಗ್ರೆಸ್ ಹಾಗೂ ಬಿಜೆಪಿಯೇತರ ಪಕ್ಷಗಳು ಅತಿ ಹೆಚ್ಚು ಸ್ಥಾನ ಗಳಿಸುತ್ತವೆ ಎಂದಿದೆ. ಅದರ ಬೆನ್ನಲ್ಲೇ ರಾಷ್ಟ್ರೀಯ ಉಗ್ರ ನಿಗ್ರಹ ಕೇಂದ್ರ (ಃಈಖಿಈ) ಸ್ಥಾಪನೆಗೆ ವಿರೋಧ ವ್ಯಕ್ತಪಡಿಸುವ ನೆಪದಲ್ಲಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ತೃತೀಯ ರಂಗ ರಚನೆಯ ಅಗತ್ಯದ ಬಗ್ಗೆ ಮಾತನಾಡಿದ್ದಾರೆ. ಃಈಖಿಈಗೆ ವಿರೋಧ ವ್ಯಕ್ತಪಡಿಸುವ ಮೂಲಕ ತೃಣಮೂಲ ಕಾಂಗ್ರೆಸ್ ಕೂಡ ವಿರೋಧಿ ಪಾಳಯವನ್ನು ಸೇರಿದೆ. ಅಖಿಲೇಶ್ ಯಾದವ್ ಕೂಡ ತೃತೀಯ ರಂಗ ರಚನೆಯ ಬಗ್ಗೆ ಆಸಕ್ತಿ ತೋರಿದ್ದಾರೆ. ಲಂಕಾ ಯುದ್ಧ ದೌರ್ಜನ್ಯಗಳನ್ನು ಕೈಗೆತ್ತಿಕೊಂಡು ಜಯಲಲಿತಾ ಕೂಡ ಕೇಂದ್ರದ ಮೇಲಿನ ಒತ್ತಡವನ್ನು ಹೆಚ್ಚಿಸುತ್ತಿದ್ದಾರೆ. ಒಟ್ಟಾರೆಯಾಗಿ ನೋಡಿದರೆ ಮುಲಾಯಂ, ಮಮತಾ, ಜಯಲಲಿತಾ, ಚಂದ್ರಬಾಬು ನಾಯ್ಡು, ನವೀನ್ ಪಟ್ನಾಯಕ್ ಮುಂತಾದ ಬಲಿಷ್ಠ ವ್ಯಕ್ತಿಗಳು ಒಟ್ಟು ಸೇರಿ ತೃತೀಯ ರಂಗ ರಚನೆಗೆ ಮುಂದಾಗುವ ಎಲ್ಲ ಸಾಧ್ಯತೆಗಳೂ ಇವೆ. ಇದರ ಮೊದಲ ಸಂಕೇತ ಹೊರಬೀಳುವುದು ಮುಂಬರುವ ರಾಷ್ಟ್ರಪತಿ ಚುನಾವಣೆಯಲ್ಲಿ. ಹೊಸ ರಾಷ್ಟ್ರಪತಿ ಯಾರಾಗಬೇಕೆಂಬ ವಿಷಯದಲ್ಲಿ ಕಾಂಗ್ರೆಸ್್ನ ಯುಪಿಎ ಆಗಲಿ, ಬಿಜೆಪಿಯ ಎನ್್ಡಿಎ ಆಗಲಿ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುವುದಕ್ಕಾಗಲಿ, ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಕ್ಕಾಗಲಿ ಸಾಧ್ಯವಿಲ್ಲ. ಮಮತಾ ದೂರ ಸರಿದರೆ ಸಂಸತ್ತಿನ ಎರಡೂ ಸದನಗಳಲ್ಲಿ ಕಾಂಗ್ರೆಸ್್ನ ಬಹುಮತವಿರುವುದಿಲ್ಲ. ಇಂಥ ಪರಿಸ್ಥಿತಿಯಲ್ಲಿ ತೃತೀಯ ರಂಗ ತನ್ನದೇ ಅಭ್ಯರ್ಥಿಯನ್ನು ಕಣಕ್ಕಿಳಿಸಲೂಬಹುದು, ಗೆಲುವನ್ನೂ ಸಾಧಿಸಬಹುದು. ಆ ಕಾರಣಕ್ಕಾಗಿಯೇ ಹೊಸ ಭರವಸೆ ಮೂಡಿದೆ.
ಒಂದು ವೇಳೆ, ತೃತೀಯ ರಂಗ ತನ್ನದೇ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾದರೆ ಅವರು ಯಾರಾಗಬಹುದು?
2002ರಲ್ಲಿ ಎನ್್ಡಿಎ ಅಬ್ದುಲ್ ಕಲಾಂ ಅವರನ್ನು ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದರೂ ಕಲಾಂ ಹೆಸರನ್ನು ಮೊದಲು ತೇಲಿಬಿಟ್ಟಿದ್ದೇ ಮುಲಾಯಂ ಸಿಂಗ್ ಯಾದವ್! ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕೂಡ ಖುಷಿಯಿಂದಲೇ ಕಲಾಂ ಅವರನ್ನು ಒಪ್ಪಿಕೊಂಡರು. ಐಟಿಜಿಛ್ಛಡಿ, 1998ರಲ್ಲಿ ನಡೆದ ಪೋಖ್ರಾನ್ ಅಣುಪರೀಕ್ಷೆಯ ನೇತೃತ್ವವನ್ನು ಕಲಾಂಗೆ ವಹಿಸಿದ್ದೇ ವಾಜಪೇಯಿ. ಎರಡನೇ ಬಾರಿಗೆ ಮತ್ತೆ ರಾಷ್ಟ್ರಪತಿಯಾಗಬೇಕೆಂದು ಸಾರ್ವಜನಿಕವಾಗಿ ಇಚ್ಛೆ ಹೊರಹಾಕಿದ್ದ ಕೆ.ಆರ್. ನಾರಾಯಣನ್, ಕಣಕ್ಕಿಳಿಯದೇ ಇರುವ ನಿರ್ಧಾರ ತೆಗೆದುಕೊಂಡಿದ್ದೇ ಮುಲಾಯಂ ಕಲಾಂಗೆ ಬೆಂಬಲ ವ್ಯಕ್ತಪಡಿಸಿದ ನಂತರ. ಈಗ ಸಮಾಜವಾದಿ ಪಕ್ಷ ಮತ್ತೆ ಅಧಿಕಾರಕ್ಕೇರುವುದರೊಂದಿಗೆ ಮುಲಾಯಂ ಕೈ ಬಲಗೊಂಡಿದೆ. ಮಮತಾ, ಸಮಾಜವಾದಿ ಪಕ್ಷ, ತೆಲುಗುದೇಶಂನ ಚಂದ್ರಬಾಬು ನಾಯ್ಡು ಎಲ್ಲರಿಗೂ ಮುಸ್ಲಿಂ ಮತಗಳು ಬೇಕು. ಹಾಗಾಗಿ ಅವರು ಮುಸ್ಲಿಂ ಅಭ್ಯರ್ಥಿಯನ್ನೇ ಕಣಕ್ಕಿಳಿಸುವ ಮೂಲಕ ಮುಸಲ್ಮಾನರನ್ನು ಮೆಚ್ಚಿಸಲು ಮುಂದಾಗುತ್ತಾರೆ. ಅಂಥ ಸಂದರ್ಭದಲ್ಲಿ ರಾಷ್ಟ್ರಪತಿ ಸ್ಥಾನಕ್ಕೆ ಯೋಗ್ಯ ವ್ಯಕ್ತಿ ಕಲಾಂಗಿಂತ ಬೇರಿನ್ನಾರಿದ್ದಾರೆ? ಕಳೆದ ಭಾರಿ ಬಿಜೆಪಿ ಭೈರೋನ್ ಸಿಂಗ್ ಶೇಖಾವತ್ ಅವರನ್ನು ಕಣಕ್ಕಿಳಿಸುವ ಮೂರ್ಖತನ ತೋರದೆ ಕಲಾಂ ಅವರನ್ನೇ ಮುಂದುಮಾಡಿದ್ದರೆ ಆಗಲೇ ಎರಡನೇ ಸಲಕ್ಕೆ ರಾಷ್ಟ್ರಪತಿಯಾಗಿರುತ್ತಿದ್ದರು. ಇದೇನೇ ಇರಲಿ, ಒಂದು ವೇಳೆ ಕಲಾಂರನ್ನು ತೃತೀಯ ರಂಗ ಕಣಕ್ಕಿಳಿಸಲು ಮುಂದಾದರೆ ಕಾಂಗ್ರೆಸ್ ಉಪರಾಷ್ಟ್ರಪತಿ ಹಮೀದ್ ಅನ್ಸಾರಿಯವರನ್ನು ಮುಂದುಮಾಡಬಹುದು. ಹಮೀದ್ ಅನ್ಸಾರಿ ಕೂಡ ಯೋಗ್ಯ ವ್ಯಕ್ತಿಯೇ. ಆದರೆ ಕಳೆದ 5 ವರ್ಷಗಳಲ್ಲಿ ರಾಷ್ಟ್ರಪತಿ ಭವನದಲ್ಲಿ ಕಲಾಂ ಅನುಪಸ್ಥಿತಿ ಕಾಡಿದಷ್ಟು ಯಾರೂ ನಮ್ಮನ್ನು ಕಾಡಿಲ್ಲ. ಕಲಾಂ ಈ ದೇಶದ ರಾಷ್ಟ್ರಪತಿ ಎಂದು ಹೇಳಿಕೊಳ್ಳುವುದಕ್ಕೇ ಹೆಮ್ಮೆಯೆನಿಸುತ್ತದೆ. ಮುಲಾಯಂ, ಮಮತಾ, ಜಯಲಲಿತಾ, ಚಂದ್ರಬಾಬು ನಾಯ್ಡು, ನವೀನ್ ಪಟ್ನಾಯಕ್ ಕಲಾಂ ಅವರನ್ನು ತಮ್ಮ ಅಭ್ಯರ್ಥಿಯಾಗಿ ಕಣಕ್ಕಿಳಿಸುವಂತಾಗಲಿ, ಆಗ ಬಿಜೆಪಿ ಬೆಂಬಲವೂ ದೊರಕುತ್ತದೆ, ದೇಶದ ಪ್ರೇರಕ ಶಕ್ತಿ ಮತ್ತೆ ರಾಷ್ಟ್ರಪತಿ ಭವನ ಸೇರುತ್ತದೆ.
Bring Back Kalam!
Hi Pratap, Great article… This article shows that you are not anti Muslim.. You support true Indians who do the great work towards our country… People should think like this for better future… We support all religion people who work towards better future of the country and same time we should be criticizing all community people who are anti Indians…
ಪà³à²°à²¤à²¿à²¯à³Šà²‚ದೠವಿಷಯದಲà³à²²à²¿ ಈ ರಾಜಕಾರಣಿಗಳೠಹಿಂದೂಗಳನà³à²¨ ಬಿಟà³à²Ÿà³ ಎಲà³à²²à²°à²¨à³à²¨à³ ಒಲೈಕೆ ಮಾಡà³à²¤à³à²¤à²¿à²°à³à²µà²°à³. ನಮà³à²® ದೇಶದಲà³à²²à²¿ ನಾವೇ ಪರಕಿಯರಾಗಿದà³à²¦à³†à²µà³‡à²¨à³‹ ಅಂತ ಅನà³à²¨à²¿à²¸à³à²¤à³à²¤à²¿à²¦à³†.ಆದರೂ ಶà³à²°à³€ ಕಲಾಂ ರವರೠರಾಷà³à²Ÿà³à²°à²ªà²¤à²¿ ಆಗà³à²µà²¦à³ ಈ ದೇಶಕà³à²•à³† ಒಳà³à²³à³†à²¯à²¦à³.
dts ri8..kalam..v miss him..he taught us dt b4 pointin @ smoder1’s mistake,v shud correct ourselves..he wz nt only a gud ruler,bt also a great personality…
Nice article sir…..
yes really we missing KALAAM……….
Your thoughts come true Sir
-Thank you
Super article sir. We want Kalam sir Back :-).
Last 5 years we have seen RUBBER STAMP president 🙁
Super article sir. We want to see Abdul kalam became President of India
yes sir you r right we support to bring back kalamji . and also why medias behave like this always they are negative in india.
“We need creative mind to guide and lead our nation”
kalam is also a best first citizen of HINDUSTAN, he attended many college and school programs, cultural activities college students are very much inspired by KALAM chacha in Hubli BVB college his answers were very simple and have lot of meanings which are asked by students. Thank you for realize the feelings of KALAM, KALAMPURA should come to existance in INDIAN consttution……. through Dr.A.P.J.ABDUL KALAM………..
ಲೇಖನ ಚೆನà³à²¨à²¾à²—ಿ ಮೂಡಿ ಬಂದಿದೆ.
Its correct…
Superb article Pratap….
Bring back kalam!
Bring back wings of fire!
nice article boss 🙂
nice article
Yeh, Kalamji must our next President for the second term and if possible for one more term too.
SIR ABDUL KALAMji once again ll be our next president .
hi Pratapji……
nice article… want to see Dr.Kalam as next President of India… lets hope 4 d best 🙂
ಪà³à²°à²¤à²¿à²¯à³Šà²‚ದೠವಿಷಯದಲà³à²²à²¿ ಈ ರಾಜಕಾರಣಿಗಳೠಹಿಂದೂಗಳನà³à²¨ ಬಿಟà³à²Ÿà³ ಎಲà³à²²à²°à²¨à³à²¨à³ ಒಲೈಕೆ ಮಾಡà³à²¤à³à²¤à²¿à²°à³à²µà²°à³. ನಮà³à²® ದೇಶದಲà³à²²à²¿ ನಾವೇ ಪರಕಿಯರಾಗಿದà³à²¦à³†à²µà³‡à²¨à³‹ ಅಂತ ಅನà³à²¨à²¿à²¸à³à²¤à³à²¤à²¿à²¦à³†.ಆದರೂ ಶà³à²°à³€ ಕಲಾಂ ರವರೠಮತà³à²¤à³Šà²®à³à²®à³† ರಾಷà³à²Ÿà³à²°à²ªà²¤à²¿ ಆಗà³à²µà²¦à³ ಈ ದೇಶಕà³à²•à³† ಒಳà³à²³à³†à²¯à²¦à³.
Happy to say that I had met Mr Kalam when he was president. Great person great feeling B-)
article ge hesaru innu punching aagi kodabahuditteno pratap sir… lekhana tumbaa chennagide. aadre title innu effective bekeno anta annistu
yes sir you are write….
WE NEED KALAM AS A PRESIDENT……
nice article sir
ನಿಮà³à²® ಈ ಲೈನà³à²—ಳೠನನಗೆ ಇಷà³à²Ÿ ಆಯà³à²¤à³, ನೀವೠಹೇಳೋದೠಸರಿಯೇ ಆಧà³à²°à³† ಪà³à²°à²¤à²¾à²ªà³ ಜೀ. ”ಮಮತಾ, ಸಮಾಜವಾದಿ ಪಕà³à²·, ತೆಲà³à²—à³à²¦à³‡à²¶à²‚ನ ಚಂದà³à²°à²¬à²¾à²¬à³ ನಾಯà³à²¡à³ ಎಲà³à²²à²°à²¿à²—ೂ ಮà³à²¸à³à²²à²¿à²‚ ಮತಗಳೠಬೇಕà³. ಹಾಗಾಗಿ ಅವರೠಮà³à²¸à³à²²à²¿à²‚ ಅà²à³à²¯à²°à³à²¥à²¿à²¯à²¨à³à²¨à³‡ ಕಣಕà³à²•à²¿à²³à²¿à²¸à³à²µ ಮೂಲಕ ಮà³à²¸à²²à³à²®à²¾à²¨à²°à²¨à³à²¨à³ ಮೆಚà³à²šà²¿à²¸à²²à³ ಮà³à²‚ದಾಗà³à²¤à³à²¤à²¾à²°à³†. ಅಂಥ ಸಂದರà³à²à²¦à²²à³à²²à²¿ ರಾಷà³à²Ÿà³à²°à²ªà²¤à²¿ ಸà³à²¥à²¾à²¨à²•à³à²•à³† ಯೋಗà³à²¯ ವà³à²¯à²•à³à²¤à²¿ ಕಲಾಂಗಿಂತ ಬೇರಿನà³à²¨à²¾à²°à²¿à²¦à³à²¦à²¾à²°à³†? ಕಳೆದ à²à²¾à²°à²¿ ಬಿಜೆಪಿ à²à³ˆà²°à³‹à²¨à³ ಸಿಂಗೠಶೇಖಾವತೠಅವರನà³à²¨à³ ಕಣಕà³à²•à²¿à²³à²¿à²¸à³à²µ ಮೂರà³à²–ತನ ತೋರದೆ ಕಲಾಂ ಅವರನà³à²¨à³‡ ಮà³à²‚ದà³à²®à²¾à²¡à²¿à²¦à³à²¦à²°à³† ಆಗಲೇ ಎರಡನೇ ಸಲಕà³à²•à³† ರಾಷà³à²Ÿà³à²°à²ªà²¤à²¿à²¯à²¾à²—ಿರà³à²¤à³à²¤à²¿à²¦à³à²¦à²°à³. ಇದೇನೇ ಇರಲಿ, ಒಂದೠವೇಳೆ ಕಲಾಂರನà³à²¨à³ ತೃತೀಯ ರಂಗ ಕಣಕà³à²•à²¿à²³à²¿à²¸à²²à³ ಮà³à²‚ದಾದರೆ ಕಾಂಗà³à²°à³†à²¸à³ ಉಪರಾಷà³à²Ÿà³à²°à²ªà²¤à²¿ ಹಮೀದೠಅನà³à²¸à²¾à²°à²¿à²¯à²µà²°à²¨à³à²¨à³ ಮà³à²‚ದà³à²®à²¾à²¡à²¬à²¹à³à²¦à³. ಹಮೀದೠಅನà³à²¸à²¾à²°à²¿ ಕೂಡ ಯೋಗà³à²¯ ವà³à²¯à²•à³à²¤à²¿à²¯à³‡. ಆದರೆ ಕಳೆದ 5 ವರà³à²·à²—ಳಲà³à²²à²¿ ರಾಷà³à²Ÿà³à²°à²ªà²¤à²¿ à²à²µà²¨à²¦à²²à³à²²à²¿ ಕಲಾಂ ಅನà³à²ªà²¸à³à²¥à²¿à²¤à²¿ ಕಾಡಿದಷà³à²Ÿà³ ಯಾರೂ ನಮà³à²®à²¨à³à²¨à³ ಕಾಡಿಲà³à²². ಕಲಾಂ ಈ ದೇಶದ ರಾಷà³à²Ÿà³à²°à²ªà²¤à²¿ ಎಂದೠಹೇಳಿಕೊಳà³à²³à³à²µà³à²¦à²•à³à²•à³‡ ಹೆಮà³à²®à³†à²¯à³†à²¨à²¿à²¸à³à²¤à³à²¤à²¦à³†. ಮà³à²²à²¾à²¯à²‚, ಮಮತಾ, ಜಯಲಲಿತಾ, ಚಂದà³à²°à²¬à²¾à²¬à³ ನಾಯà³à²¡à³, ನವೀನೠಪಟà³à²¨à²¾à²¯à²•à³ ಕಲಾಂ ಅವರನà³à²¨à³ ತಮà³à²® ಅà²à³à²¯à²°à³à²¥à²¿à²¯à²¾à²—ಿ ಕಣಕà³à²•à²¿à²³à²¿à²¸à³à²µà²‚ತಾಗಲಿ, ಆಗ ಬಿಜೆಪಿ ಬೆಂಬಲವೂ ದೊರಕà³à²¤à³à²¤à²¦à³†, ದೇಶದ ಪà³à²°à³‡à²°à²• ಶಕà³à²¤à²¿ ಮತà³à²¤à³† ರಾಷà³à²Ÿà³à²°à²ªà²¤à²¿ à²à²µà²¨ ಸೇರà³à²¤à³à²¤à²¦à³†.” ಇದೆಲà³à²²à²¾ ನಿಜ ಆದà³à²°à³† ಎಲà³à²²à²¾ ರೀತಿಯಲà³à²²à³‚ ತಮà³à²® ಬà³à²¡à²•à³à²•à³† ಕೊಡಲಿ ಬಿದà³à²¦à²¿à²¦à³† ಅಂತಾ ಗೊತà³à²¤à²¿à²¦à³† ಅನà³à²¨à³‹ ದೊಡà³à²¡ ಸತà³à²¯à²µà²¨à³à²¨ ಅರà³à²¤à²¿à²°à³‹ ಯà³à²ªà²¿à²Ž ಮತà³à²¤à³ ನಮà³à²® à²à²µà²¿à²·à³à²Ÿà²¦ ಪà³à²°à²§à²¾à²¨à²¿( ನನà³à²¨ ಅà²à²¿à²ªà³à²°à²¾à²¯ ಅಲà³à²²,ಜನ ಹೇಳೋದà³) à²à²¨à²¾à²¦à³à²°à³ ಗಿಮಿಕೠಮಾಡೋ ಕೆಲà³à²¸ ನಡೆಯತà³à²¤à²¾. ಅಥವಾ ಯಾರಿಗà³à²¹à³‡à²³à³‹à²£ ನಮà³à²® ಪà³à²°à²¾à²¬à³à²²à²®à³à²®à³ ಅಂತಾ ಹಮೀದೠಅನà³à²¸à²¾à²°à²¿ ಅಥವಾ ಇನà³à²¨à³ ಕೆಲವೠಮಹಾನೠನಾಯಕರನà³à²¨ ಹೊಂದಿರೋ ಪಕà³à²· à²à²¨à²¾à²¦à³à²°à³ ಹೊಸ ಪà³à²°à²¯à³‹à²—ಕà³à²•à³† ಒಳಗಾಗತà³à²¤à²¾ ಅನà³à²¨à³‹à²¦à³† ಈಗ ನಮà³à²® ಮà³à²‚ದಿರೋ ಪà³à²°à²¶à³à²¨à³† ಅಲà³à²µà³†…… ಅಬà³à²¦à³à²²à³ ಕಲಾಂ ಒಬà³à²¬ ಮà³à²¸à³à²²à²¿à²‚ ಅನà³à²¨à³‹à²¦à²•à³à²•à²¿à²‚ತ ಅವà³à²°à³ ನಿಜವಾದ ಜನ ಸà³à²¨à³‡à²¹à²¿ ನಾಯಕ, ಮà³à²¤à³à²¸à²¦à³à²¦à²¿, ಸà³à²§à²¾à²°à²£à²¾ ಚತà³à²°, ಯಾವತà³à²¤à³‚ ಕೈ ಕಟà³à²Ÿà²¿ ನಮà³à²® ಪà³à²°à²¤à²¿à²à²¾ ಪಾಟೀಲರಂತೆ ವಿಮಾನ ಪà³à²°à²¤à²¿à²à³†à²¯à²¨à³à²¨à³ ತೋರಿಸಿದವರಲà³à²².
ಜನರ ಕà³à²·à³‡à²® ಮತà³à²¤à³ ರಾಷà³à²Ÿà³à²°à²¦ ಚà³à²•à³à²•à²¾à²£à²¿ ಹಿಡಿಯà³à²µ ನಾಯಕನ ನಮಗೆ ಬೇಕೆಂದೇ ಆದà³à²°à³† ಆ ಸà³à²¥à²¾à²¨à²•à³à²•à³† ಸೂಕà³à²¤à²µà²¾à²¦ ವà³à²¯à²•à³à²¤à²¿ ಕಲಾಂ ತಾತರನà³à²¨à³ ಬಿಟà³à²°à³† ಇನà³à²¨à³Šà²¬à³à²°à²¿à²²à³à²². ಯà³à²‡à²ªà²¿à²Ž ಸರà³à²µà²¾à²§à²¿à²•à²¾à²°à²¿ ಅಂದà³à²•à³Šà²‚ಡಿದà³à²¦ ಊರಿನಲà³à²²à²¿à²¯à³‡ ಮಣà³à²£à³ ಮà³à²•à³à²•à²¿à²¸à²¿à²¦à³à²¦à³, ತಲೆ ಕೆರೆದà³à²•à³Šà²‚ಡೠರಾಹà³à²²à³ ಓಡಾಡà³à²µà²‚ತೆ ಮಾಡಿದà³à²¦à³, ಬಿಎಸೠಪಿಯ ಆನೆಯನà³à²¨ ಇಲಿ ಮಾಡಿದà³à²¦à³ ಇದೇ ಎಸೠಪಿ ತಾನೆ, ಸà³à²µà²²à³à²ª ಮಟà³à²Ÿà²¿à²—ೆ ಕರà³à²¨à²¾à²Ÿà²•à²¦ ನಂಟಿರೋ ಅಖಿಲೇಶೠಮಾಡಿದ ಮೊಡಿಗೆ ತತà³à²¤à²°à²¿à²¸à²¿à²¹à³‹à²¦ ಯà³à²ªà²¿à²Žà²¯ ಮà³à²‚ದಿರೋದೠರಾಷà³à²Ÿà³à²°à²ªà²¤à²¿ ಸà³à²¥à²¾à²¨à²µà²·à³à²Ÿà³‡ ಹೇಗಾದà³à²°à³ ಮಾಡಿ ಮತà³à²¤à³† ಎದà³à²¦à³ ನಿಲà³à²²à²¬à³‡à²•à²‚ದà³à²•à³Šà²‚ಡಿರೋ ಇವà³à²°à²¿à²—ೆ ಕಾಪಾಡೋದಕà³à²•à³† ಮà³à²²à²¾à²¯à²‚ ಸಿಂಗà³, ಮಮತಾ ಮೇಡಂ ಮಮತೆ ಮತà³à²¤à³ ಕೃಪೆ ಇವà³à²°à²¿à²—ೆ ಅಗತà³à²¯à²µà²¾à²—ಿ ಬೇಕಾಗತà³à²¤à³†. ಒಟà³à²Ÿà²¿à²¨à²²à³à²²à²¿ ಕಲಾಂ ಆದà³à²°à³† ಕಮಾಲೠಆಗೋದೠನಿಜ, ಬೇರೆ ಯಾರಾದà³à²°à³ ಪಾಷà³à²Ÿà³à²°à²ªà²¤à²¿ ಆದà³à²°à³† ವಿಮಾನಗಳನà³à²¨ ರೆಡಿ ಇಡೋದೠನಿಜ . ರಿಸಲà³à²Ÿà³ ಇನà³à²¨à³ ಕೆಲವೇ ಬಾಲಗಗಳಲà³à²²à²¿ ಸಿಗತà³à²¤à³† ಸೋ ವಾಚೠದ ಮà³à²¯à²¾à²šà³ ………….
Hai
prathap sir …….
Good article …I dream to see Dr.A.P.J Kalam as next president of India….
He is the real youth icon….
soo nice article.whole india will missing kalama sir.
Very excellent thought you have shown sir. Actually we had missed the nation builder Kalamji. We need to bring back him to president post. You have shown that you are not a anti muslim and you will also support the nation builders. I am requesting you to write about the banning of boorka system and urgent implimentation of one child police in india. Pls write this one urgent sir. You are the right person to tell this one to people. And pls publish your email id in the website sir.
NIJA ABDHUL KALAM MATTE RASHTRAPATHI ADARE ADU DESHADASOUBHAGYA BHOOTA BHANGALE YANTIRUVA RAASHTRAPAHI BHAVANAKKE RAAJA KALE BHANDANTAAGUTTADE. VIMMANAHAARATAKKE 205 KOTI KARCHU MADIRUVA PRATHIBHA PATIL GINTA BHAVYA BHARATHADA NIRMANADHALLI TAMMADE ADA AMULYA SEVE NIDIRUVA KALAM LAKSHPATTU AVASHYAKA
YA WE ARE ALSO WANT TO ABDUL KALAM BECAME A PRESIDENT ONCE MORE
hopeless pratibha, we want kalam once more…..
Nanage nimma lekhanadinda baruva akshragalu thumba vibhinnavagiruthave hagu nimma barahavu vaykthi vikasana honduvudaralli sandehavilla
Sri Abdul Kalamravaru mathe rashtrapathi adali avaru kanda kanasu hagu avaru makkala melina abhiyana shikshna innu utthamavaguvudaralli samshyavilla
thank you prathap simhaji
Dear Prathap,
You are 100% right. We are all miss DR. ABDUL KALAM JI…….
Dear Prathap,
You are 100% right. We are all miss DR. ABDUL KALAM JI…….
And one more Pratap, In the day of 07.04.2012, ur vioce in Suvarna News channel about Ravi Bele(Kole)gere is very very true….
I like ur speech and keep it up pratap, We are all with uuuuu….,
Tumba chennagide,
Desha suttalu 208 koti rupayigalannu kharchu madiruva ivaru deshakke hesaru taruva athava yuvajanatege prerepane needuva yavude ondu kelasavannu saha madilla.
Namma Abdul Kalam rashatrapati adalli obba deshapremi haagu deshada bagge dooradrushti iruva vyakti a gowravanvita jagadalli kulita haage agutte.
Hi Pratap,
I heard your your comments on Ravi belagere’s allegation. I am fully convenced by your explanations, really apprecie that. He said in TV9 that he interviewed Koli Phayaz, Muttappa rai etc.. Does he mean that if anyone want to interview them today has to take his blady permission?? he is such a fool.. He thinks he is the only journalist(?) on this earth….
I was searching in google about him,, found below link which highlighted his other dark face..
http://ravibelagere2ndhaf.wordpress.com/2010/02/06/ravi-belagere-2nd-half-real-face-of-ravi-belagere/
Hello, Prathap Sir
Its a wonderful article
Dear Pratap,
What it means..you need Dr. A.P.J. Abdul Kalam, as president of India again, or person of that statesmanship…. i am bid confused, whether president of India can criticized only because HE OR SHE is not as good as A.P.J Abdul Kalam antha..or nobody should become president of India except Kalamji….
Youngsters on the rampage about President of India’s post…Kindly convey proper guidelines and explain what is president means..
i am not great as you but i have expressed my reservations and doubts..kindly
we want kalamji as our next presiedent
we want good human being person to next president Dr kalam also good person
Hi,
For the second time i am reading about Mr. Kalam in your website. Again it (article) has come in a good/positive way.
My Personal view. No doubt in Kalam sir’s energy and his 2020 prediction. Hats of to him. Also, there is no doubt that Pratibha has done nothing to this nation apart from enjoying Bhavan and the facilities.
But there should not be comparision between two person. No one can be like other person. Each and every human is unique from his heart and mind.
Warm Welcome to Mr. Kalam again as first citizen. Also, I am ready to accept any one who has vision about INDIA. Along with that he/she should be clean handed, energetic, dynamic and proactive.
We want back that Visionary of 2020 back. Definitely no one can match Mr. Kalam. Indeed a Great Man.
THE MISSILE MAN 🙂 🙂
Dear Pratap,
It is good you have taken an initiative to garner public opinion on the selection of Presidetn.
I suggest that for common man, you have to highlight in simple TEN POINTS why we should be concern about the election of President of India, what is the expectation, what type of calibre & credentials is expected of a President and spell out greatness & achievement of Dr Kalam and his India Vision 2020 programme. Also we may search for 3 or 4 alternate possible names and suggest/or invite view from citizens.
I also suggest you may write an open letter to all MPs, MLAs, MLCs & others who constitute the electorate for selection of President to keep in mind the public perception of the next possible candidate for President of India.
Best wishes & keep motivating the common man to participate in national issues of public importance.
Hello Prathap Brother
Its a wonderful article and we all pray and vote for to bring back KALAM Sir as the president for our great Nation. And also we hope our leaders (chief or cheap) wont do poly tics in this matter.
He is the only person who deserve that place, and its all indians desire to see him back to that place!! u r rite pratp sir, unfortunately v belong to the country which is rich in resources but still poor!!!
ಪà³à²°à²¦à²¾à²¨ ಮ೦ತà³à²°à²¿ ಆದà³à²°à³† ಚೆನà³à²¨à²¾à²—ಿರà³à²¤à³à²¤à²²à³à²µà²¾ ?ಅಲà³à²²à²¿ ಅಧಿಕಾರ ಇರà³à²¤à³à²¤à³† ಬರಿ ಬಾಷಣ ಮಡೊದಲà³à²²à²¾,ಬಾಷಣ ಸಾಕೠಅಧಿಕಾರಕà³à²•à³† ಬರಲೠಸಪೊರà³à²Ÿà³ ಮಾಡಿ.
GOOD NEWS , Mr.ABDUL KALAMJI SHOULD BE BACK AS OUR PRESIDENT OF INDIA.
ONE MORE GOOD NEWS & GREAT BIG, SURPRISE IS THAT IN THIS CASE ATLEAST PRATAP IS NOT BIASED ??????? DONT ABOUT HIS HIDDEN AJENDA
I M NOT SURE IF HE HAS GOT NARAYANMURTHY AS HIS PERSONAL CHOICE IN HIS MIND AND ACTING IN FRONT OF PUBLIC IN FAVOUR OF KALAMJI.
BIG DISSAPOINTMENT IS THAT HE HAS STARTED SAYING & SELF PRAISING THAT HE HAD ALREADY PREDICTED THIS???HOW STUPIDITY IS THIS , ,,, NOT ONLY HIM EVAN I HAD PRDICTED, LOT OF OTHERS NATIONAL MEDIA HAD PREDICTED 3 MONTHS BACK?????????
PLEASE CORRECT YOUR ATTITUDE ,,, EGO ,,, HIDDEN AGENDA OF YOUR CASTEISM……….
WE MISS U KALAM………..
nice article to read and think about …… hats off to KALAM sir …