Date : 07-10-2008, Tuesday | 27 Comments
“ಒಬ್ಬ ಸೈನಿಕನ ಎದೆಗಾರಿಕೆ ಹಾಗೂ ಗಟ್ಟಿತನ ೧೯೪೭ರಲ್ಲಿ ಕಾಶ್ಮೀರದ ಇತಿಹಾಸವನ್ನೇ ಬರೆ ಯಿತು. ಒಂದು ವೇಳೆ, ಆತ ಪ್ರಾಣದ ಹಂಗು ತೊರೆದು ಹೋರಾಡದಿದ್ದರೆ, ಶ್ರೀನಗರ ವಿಮಾನ ನಿಲ್ದಾಣವನ್ನು ರಕ್ಷಣೆ ಮಾಡದೇ ಹೋಗಿದ್ದಿದ್ದರೆ ಕಾಶ್ಮೀರದ ಇತಿಹಾಸವೇ ಬದಲಾಗುತ್ತಿತ್ತು, ಪಾಕಿಸ್ತಾನದ ಕೈವಶವಾಗುತ್ತಿತ್ತು” .
೨೦೦೬, ಆಗಸ್ಟ್ ೨೨ರಂದು “ಬದ್ಗಾಂ ವಾರ್ ಮೆಮೋರಿ ಯಲ್” ಅನ್ನು ಉದ್ಘಾಟನೆ ಮಾಡಿದ ಲೆಫ್ಟಿನೆಂಟ್ ಜನರಲ್ ಎಸ್.ಕೆ. ಸಿನ್ಹಾ ಭಾವುಕರಾಗಿ ಮಾತನಾಡುತ್ತಿದ್ದರು.
ಈ ಶ್ರೀನಿವಾಸ್ ಕುಮಾರ್ ಸಿನ್ಹಾ ಯಾರೆಂದು ನೆನಪಾಯಿತೆ? ಕಳೆದ ಮೇನಲ್ಲಿ ಅಮರನಾಥ ಶ್ರೈನ್ ಬೋರ್ಡ್ಗೆ ೪೦ ಹೆಕ್ಟೇರ್ ಭೂಮಿ ವರ್ಗಾವಣೆ ಮಾಡುವ ಆದೇಶ ಹೊರಡಿಸಿ, ಪದಚ್ಯುತಗೊಂಡ ಜಮ್ಮು-ಕಾಶ್ಮೀರದ ಮಾಜಿ ರಾಜ್ಯಪಾಲರು. ಅಂದು ಎಸ್.ಕೆ. ಸಿನ್ಹಾ ಶ್ಲಾಘಿಸುತ್ತಿದ್ದ ಸೈನಿಕ ಮತ್ತಾರೂ ಅಲ್ಲ, ಇಪ್ಪತ್ತನಾಲ್ಕು ವರ್ಷಕ್ಕೇ ಮರೆಯಾದ ಮೇಜರ್ ಸೋಮನಾಥ ಶರ್ಮಾ! ಸಿನ್ಹಾ ಮತ್ತು ಶರ್ಮಾ ಹೆಚ್ಚೂಕಡಿಮೆ ಒಂದೇ ವಯಸ್ಸಿನವರು, ಒಂದೇ ಸೇನೆಯಲ್ಲಿ ಹೋರಾಡಿದವರು. ಜತೆಗೆ ಆಪ್ತ ಸ್ನೇಹಿತರೂ ಹೌದು.
ಅದು ಮನೆಯವರಿರಲಿ, ಸ್ನೇಹಿತರಿರಲಿ ಎಲ್ಲರೂ ಆತನನ್ನು ಪ್ರೀತಿಯಿಂದ ಪುಟ್ಟದಾಗಿ ‘ಸೋಮ್’ ಎಂದೇ ಕರೆಯುತ್ತಿದ್ದರು. ಸೋಮನಾಥನಿಗೆ ಅಚ್ಚುಮೆಚ್ಚಿನ ವಿಷಯವೆಂದರೆ ಅಜ್ಜ ಪಂಡಿತ್ ದೌಲತ್ ರಾಮ್ ಅವರು ಹೇಳುತ್ತಿದ್ದ ಭಗವದ್ಗೀತೆಯ ಕಥೆಗಳು. ದ್ವಾಪರದಲ್ಲಿ ಶ್ರೀಕೃಷ್ಣ ರಣರಂಗದಲ್ಲಿ ಅರ್ಜುನನಿಗೆ ಬೋಧಿಸಿದ ಭಗವದ್ಗೀತೆ ಕಲಿಯುಗದ ಸೋಮನಾಥನ ಮೇಲೆ ಎಷ್ಟು ಪ್ರಭಾವ ಬೀರಿತ್ತೆಂದರೆ ೧೯೪೭ರಲ್ಲಿ ಬದ್ಗಾಂನಲ್ಲಿ ಹೆಣವಾಗಿ ಬಿದ್ದಿದ್ದ ವಿರೂಪಗೊಂಡ ದೇಹ ಸೋಮನಾಥನದ್ದೇ ಎಂದು ಗುರುತಿಸಲು ಕಾರಣವಾಗಿದ್ದು ಆತನ ಎದೆಯ ಕಿಸೆಯಲ್ಲಿದ್ದ ಭಗವದ್ಗೀತೆಯ ಪುಟಗಳೇ!
೧೯೨೩, ಜನವರಿ ೩೧ರಂದು ಜನಿಸಿದ ಸೋಮನಾಥ ಶರ್ಮಾ ಅವರದ್ದು ಸೇನಾ ಹಿನ್ನೆಲೆ ಹೊಂದಿದ್ದ ಕುಟುಂಬ. ಅಪ್ಪ ಮೇಜರ್ ಜನರಲ್ ಅಮರ್ನಾಥ್ ಶರ್ಮಾ ಮಿಲಿಟರಿಯಲ್ಲಿ ವೈದ್ಯಕೀಯ ಸೇವೆಯ ಮುಖ್ಯಸ್ಥರಾಗಿ ದ್ದವರು. ಒಬ್ಬ ಸಹೋದರ ಲೆಫ್ಟಿನೆಂಟ್ ಜನರಲ್ ಸುರೀಂದರ್ನಾಥ್ ಶರ್ಮಾ ಸೇನೆಯಲ್ಲೇ ಮುಖ್ಯ ಎಂಜಿನಿಯರ್ ಆಗಿದ್ದರು. ಇನ್ನೊಬ್ಬ ವಿಶ್ವನಾಥ್ ಶರ್ಮಾ ೧೯೮೮ರಲ್ಲಿ ಸೇನಾಪಡೆಯ ಮುಖ್ಯಸ್ಥರಾಗಿ ನಿವೃತ್ತರಾ ದವರು. ಸಹೋದರಿ ಮೇಜರ್ ಕಮಲಾ ತಿವಾರಿ ಸೇನೆಯಲ್ಲೇ ವೈದ್ಯೆಯಾಗಿದ್ದರು. ಆದರೆ ಸೋಮನಾಥನ ಮೇಲೆ ಬಹುವಾಗಿ ಪ್ರಭಾವ ಬೀರಿದ್ದು ಜಪಾನಿ ಸೇನೆಯ ಜತೆ ನಡೆದ ಕಾಳಗದಲ್ಲಿ ಪ್ರಾಣಾರ್ಪಣೆ ಮಾಡಿದ ಚಿಕ್ಕಪ್ಪ ಕ್ಯಾಪ್ಟನ್ ಕೃಷ್ಣದತ್ ವಾಸುದೇವ್. ಚಿಕ್ಕಪ್ಪನಂತೆ ತಾನೂ ರಣರಂಗದಲ್ಲಿ ಹೋರಾಡಬೇಕೆಂಬ ತುಡಿತವನ್ನಿಟ್ಟುಕೊಂಡಿದ್ದ ಸೋಮನಾಥ, ೧೧ನೇ ವರ್ಷಕ್ಕೆ ಅಂದರೆ ೧೯೩೪ರಲ್ಲಿ ರಾಯಲ್ ಇಂಡಿಯನ್ ಮಿಲಿಟರಿ ಅಕಾಡೆಮಿ ಸೇರಿಕೊಂಡ. ಏಳು ವರ್ಷಗಳ ಕಾಲ ಪರಿಶ್ರಮಪಟ್ಟು ಓದಿ ತೇರ್ಗಡೆಯಾದ ಸೋಮನಾಥನನ್ನು ೧೯೪೨, ಫೆಬ್ರವರಿ ೨೨ರಂದು ಬ್ರಿಟಿಷ್ ಸೇನೆಯ ‘ಹೈದರಾಬಾದ್ ರೆಜಿಮೆಂಟ್’ ಗೆ ಸೇರ್ಪಡೆ ಮಾಡಲಾಯಿತು. ಅದರ ಬೆನ್ನಲ್ಲೇ ಮೊದಲ ಸತ್ವಪರೀಕ್ಷೆಯೂ ಎದುರಾಯಿತು. ಅದಾಗಲೇ ಎರಡನೇ ಮಹಾಯುದ್ಧ ಆರಂಭವಾಗಿ ಮೂರು ವರ್ಷಗಳಾಗಿದ್ದವು. ಭಾರತವನ್ನಾಳುತ್ತಿದ್ದ ಬ್ರಿಟಿಷ ರನ್ನು ಜಪಾನಿ ಸೇನೆ ನಿದ್ದೆಗೆಡಿಸಿತ್ತು. ಬರ್ಮಾ ಮೂಲಕ ಭಾರತದ ಮೇಲೆ ಆಕ್ರಮಣ ಮಾಡಲು ಯತ್ನಿಸುತ್ತಿದ್ದ ಜಪಾನಿ ಸೇನೆಯನ್ನು ಅರಕ್ಕಾನ್ನಲ್ಲಿ ಎದುರಿಸಲಾಯಿತು. ಆ ಕಾರ್ಯಾಚರಣೆಯಲ್ಲಿ ಬ್ರಿಟಿಷ್ ಸೇನೆಯನ್ನು ಮುನ್ನಡೆಸು ತ್ತಿದ್ದವರು ನಮ್ಮ ಜನರಲ್ ಕೆ.ಎಸ್. ತಿಮ್ಮಯ್ಯ. ಅಂತಹ ವೀರಸೇನಾನಿಯ ಕೆಳಗೆ ಯುವ ಲೆಫ್ಟಿನೆಂಟ್ ಸೋಮನಾಥ ಶರ್ಮಾ ಮೊದಲ ಯುದ್ಧಪಾಠ ಕಲಿಯಲಾರಂಭಿಸಿದರು. ೧೯೪೫, ಸೆಪ್ಟೆಂಬರ್ನಲ್ಲಿ ಜಪಾನ್ ಶರಣಾಗುವುದರೊಂದಿಗೆ ಸೋಮನಾಥ ಶರ್ಮಾ ದೇಶಕ್ಕೆ ವಾಪಸ್ಸಾದರು. ಇದಾಗಿ ಎರಡು ವರ್ಷಗಳಲ್ಲಿ ಭಾರತಕ್ಕೂ ಸ್ವಾತಂತ್ರ್ಯ ಬಂತು. ಅದರ ಬೆನ್ನಲ್ಲೇ ಪಂಜಾಬ್ನಲ್ಲಿ ಕೋಮುದಳ್ಳುರಿ ಆರಂಭವಾಯಿತು. ಅದನ್ನು ನಂದಿಸುವ ಕೆಲಸಕ್ಕಾಗಿ ಹೈದರಾಬಾದ್ ರೆಜಿಮೆಂಟನ್ನು ನಿಯೋಜಿಸಲಾಯಿತು. ಹೀಗೆ ಪಂಜಾಬ್ಗೆ ತೆರಳಿದ ಸೋಮನಾಥ್ ಶರ್ಮಾ ಕೋಮು ಹಿಂಸಾಚಾರವನ್ನು ನಂದಿಸಿ ದಿಲ್ಲಿಗೆ ವಾಪಸ್ಸಾಗುವ ವೇಳೆಗೆ ಕೈ ಮುರಿದುಕೊಂಡಿದ್ದರು, ಪಟ್ಟಿಕಟ್ಟಿಕೊಂಡು ಓಡುತ್ತಿದ್ದರು. ಗುಣಮುಖರಾಗುವವರೆಗೂ ಯಾವ ಮಿಲಿಟರಿ ಕಾರ್ಯಾ ಚರಣೆಯಲ್ಲೂ ಪಾಲ್ಗೊಳ್ಳುವಂತಿರಲಿಲ್ಲ.
ಅದೇ ಸಂದರ್ಭದಲ್ಲಿ ಕಾಶ್ಮೀರದಲ್ಲಿ ಆಘಾತವುಂಟಾಗುವ ಲಕ್ಷಣಗಳು ಗೋಚರಿಸಲಾರಂಭಿಸಿದವು.
೧೯೪೭, ಅಕ್ಟೋಬರ್ ತಿಂಗಳ ಮೊದಲ ಭಾಗದಲ್ಲಿ ಡೇರಾದ ಕಮೀಷನರ್ ಇಸ್ಮಾಯಿಲ್ ಖಾನ್ ಅವರಿಂದ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ಸಂದೇಶವೊಂದು ಬಂತು. ಪಾಕಿಸ್ತಾನ ಕಾಶ್ಮೀರದ ಗಡಿಯತ್ತ ತನ್ನ ಶಸ್ತ್ರಸಜ್ಜಿತ ಪಡೆಯನ್ನು ನಿಯೋಜಿಸುತ್ತಿರುವ ಸುದ್ದಿ ಅದಾಗಿತ್ತು. ಆ ಅಧಿಕಾರಿ ಪಾಕಿಸ್ತಾನದ ದೂರ್ತ ಉದ್ದೇಶದ ಬಗ್ಗೆ ಎಚ್ಚರಿಕೆಯ ಸಂದೇಶವನ್ನೇನೋ ಮುಟ್ಟಿಸಿದ. ಆದರೆ ಕ್ರಮ ಕೈಗೊಳ್ಳಲು ಜಮ್ಮು-ಕಾಶ್ಮೀರ ಭಾರತದ ಭಾಗವಾಗಿರಲಿಲ್ಲ. ಒಂದೆಡೆ ಮಹಾರಾಜ ಹರಿಸಿಂಗ್ ಕಾಶ್ಮೀರವನ್ನು ಭಾರತದೊಂದಿಗೇ ವಿಲೀನಗೊಳಿಸಲು ನಿರಾಕರಿಸಿದರೆ, ಪಾಕ್ ವಿರುದ್ಧ ಆಯಾಚಿತವಾಗಿ ಕ್ರಮಕೈಗೊಳ್ಳಲು ಪ್ರಧಾನಿ ನೆಹರು ಒಪ್ಪದಾದರು. ಆದರೆ ಕೇವಲ ಎರಡೇ ವಾರಗಳಲ್ಲಿ ಪರಿಸ್ಥಿತಿ ಸಂಪೂರ್ಣ ಬದಲಾಯಿತು. ೧೯೪೭, ಅಕ್ಟೋಬರ್ ೨೨ರಂದು ವೇಷ ಬದಲಾಯಿಸಿಕೊಂಡಿದ್ದ ಪಾಕಿಸ್ತಾನಿ ಸೈನಿಕರು ಜಮ್ಮು-ಕಾಶ್ಮೀರಕ್ಕೆ ಸೇರಿದ್ದ ಮುಜಫರಾಬಾದ್ ಮೇಲೆ ಆಕ್ರಮಣ ಮಾಡಿ, ಆಸ್ತಿ-ಪಾಸ್ತಿಗೆ ಬೆಂಕಿ ಹಚ್ಚಿದರು. ಉರಿ, ಮಹುರಾಗಳನ್ನೂ ವಶಪಡಿಸಿಕೊಂಡರು. ಕೇವಲ ೫೦ ಮೈಲು ದೂರದಲ್ಲಿದ್ದ ಶ್ರೀನಗರದ ವಿದ್ಯುತ್ ಸಂಪರ್ಕವನ್ನೇ ಕಡಿದು ಕತ್ತಲಲ್ಲಿ ಮುಳುಗಿಸಿದರು. ಹೀಗೆ ನಾಟಕೀಯ ತಿರುವು ಪಡೆದುಕೊಂಡ ಪರಿಸ್ಥಿತಿಯ ಮೇಲೆ ನಿಗಾಯಿಟ್ಟಿದ್ದ ಆಗಿನ ಗೃಹ ಸಚಿವ ಸರ್ದಾರ್ ಪಟೇಲರು ತಮ್ಮ ಆಪ್ತ ಸಹಚರ ವಿ.ಪಿ. ಮೆನನ್ ಅವರನ್ನು ಜಮ್ಮು-ಕಾಶ್ಮೀರಕ್ಕೆ ಕಳುಹಿಸಿ ಭಾರತದೊಂದಿಗೆ ವಿಲೀನಗೊಳ್ಳುವ ಪ್ರಸ್ತಾ ವಕ್ಕೆ ಸಹಿಹಾಕಲು ಮಹಾರಾಜ ಹರಿಸಿಂಗ್ ಅವರ ಮನವೊಲಿಸಿದರು. ಅಲ್ಲದೆ ವಿಲೀನ ಪತ್ರಕ್ಕೆ ಸಹಿಯನ್ನೂ ಹಾಕಿಸಿಕೊಂಡರು. ಮುಂದೇನು ಮಾಡಬೇಕು ಎಂಬುದನ್ನು ನಿರ್ಧರಿಸಲು ದಿಲ್ಲಿಯಲ್ಲಿ ಆಗಿನ ಭಾರತದ ಗವರ್ನರ್ ಜನರಲ್ ಲಾರ್ಡ್ ಮೌಂಟ್ ಬ್ಯಾಟನ್ ಅವರ ಕಚೇರಿಯಲ್ಲಿ ಐತಿಹಾಸಿಕ ಸಭೆ ಏರ್ಪಾಡಾಯಿತು. ಆದರೆ ಅಂತಹ ಗಂಭೀರ ಸನ್ನಿವೇಶದಲ್ಲೂ ‘ವಿಶ್ವಸಂಸ್ಥೆ, ರಷ್ಯಾ, ಆಫ್ರಿಕಾ, ದೇವರು-ದಿಂಡಿರು’ ಅಂತ ನೆಹರು ಹುಂಬತನದಿಂದ ಮಾತನಾಡುತ್ತಿದ್ದರು. ಆದರೆ ತಾಳ್ಮೆ ಕಳೆದುಕೊಂಡ ಸರ್ದಾರ್ ಪಟೇಲ್, “ಜವಾಹರ್, ನಿನಗೆ ಕಾಶ್ಮೀರ ಬೇಕೋ ಅಥವಾ ಕಾಶ್ಮೀರವನ್ನು ಧಾರೆ ಎರೆಯುತ್ತೀಯೋ?” ಎಂದು ಏರು ಧ್ವನಿಯಲ್ಲಿ ಕೇಳಿದರು. ಸರ್ದಾರ್ ಮಾತಿಗೆ ಹೆದರಿದ ನೆಹರು “ಖಂಡಿತ, ನನಗೆ ಕಾಶ್ಮೀರ ಬೇಕು” ಎಂದರು. ಹಾಗಾದರೆ “ಅನುಮತಿ ಕೊಡು” ಎಂದು ಮತ್ತೆ ಗದರಿಸಿದರು. ನೆಹರು ಅನುಮತಿಯೂ ದೊರೆಯಿತು. ಎಲ್ಲವೂ ತ್ವರಿತವಾಗಿ ಸಂಭವಿಸಲಾರಂಭಿಸಿದವು. ಮರುದಿನ ಬೆಳಗ್ಗೆ ದಿಲ್ಲಿಯ ಪಾಲಂ ಏರ್ಪೋರ್ಟ್ ನಿಂದ ಶ್ರೀನಗರಕ್ಕೆ ಸೇನೆ ಹಾಗೂ ಯುದ್ಧ ಸಾಮಗ್ರಿಗಳನ್ನು ಕಳುಹಿಸಿಕೊಡಲಾಯಿತು. ಹಾಗೆ ಶ್ರೀನಗರಕ್ಕೆ ಆಗಮಿಸಿದ ಯುವ ಸೇನಾಧಿಕಾರಿಯೇ ಮೇಜರ್ ಎಸ್.ಕೆ. ಸಿನ್ಹಾ. “ಭಾರತೀಯ ಸೈನಿಕರ ಮುಖದಲ್ಲಿ ಅಂಥದ್ದೊಂದು ಉತ್ಸಾಹ, ಏನಾದರೂ ಮಾಡಬೇಕೆಂಬ ಛಲವನ್ನು ಹಿಂದೆಂದೂ ಕಂಡಿರಲಿಲ್ಲ. ಭಾರತೀಯರೆಲ್ಲರ ದೃಷ್ಟಿ ನಾವು ತೋರುವ ಶೌರ್ಯದ ಮೇಲೆಯೇ ನೆಟ್ಟಿದೆ ಎಂದು ಸೈನಿಕರಿಗೂ ಗೊತ್ತಿತ್ತು” ಎಂದು ಅಂದಿನ ಪರಿಸ್ಥಿತಿಯನ್ನು ನೆನಪಿಸಿಕೊಳ್ಳುತ್ತಾರೆ ಸಿನ್ಹಾ.
ಶ್ರೀನಗರ ಏರ್ಪೋರ್ಟ್ನಲ್ಲಿ ಸ್ನೇಹಿತ ಮೇಜರ್ ಸೋಮನಾಥ ಶರ್ಮಾ ಕೈಗೆ ಪಟ್ಟಿಕಟ್ಟಿಕೊಂಡು ನಿಂತಿರುವುದು ಕಂಡಿತು. ಯುದ್ಧಕ್ಕೆ ತೆರಳುವಂತೆ ಹೈದರಾಬಾದ್ ರೆಜಿಮೆಂಟ್ಗೆ ಸೂಚಿಸಿದ್ದ ಕಾರಣ ಸಿನ್ಹಾ ಅವರಿಗಿಂತ ಒಂದು ದಿನ ಮೊದಲೇ ಶರ್ಮಾ ಶ್ರೀನಗರಕ್ಕೆ ಆಗಮಿಸಿದ್ದರು. ಆದರೆ ಎಲ್ಲರೂ ಉತ್ಸಾಹಿತರಾಗಿದ್ದರೆ, ಶರ್ಮಾ ಮಾತ್ರ ಹ್ಯಾಪುಮೋರೆ ಹಾಕಿಕೊಂಡಿದ್ದರು. ಕೈ ಮುರಿದುಕೊಂಡಿದ್ದ ಅವರಿಗೆ ಯಾವ ಜವಾಬ್ದಾರಿಯನ್ನೂ ನೀಡಿರಲಿಲ್ಲ. ಆದರೆ ಅವರ ಹೈದರಾಬಾದ್ ರೆಜಿಮೆಂಟನ್ನು ಯುದ್ಧಕ್ಕೆ ನಿಯೋಜಿಸಿದ್ದ ಕಾರಣ ಸೇನಾ ತುಕಡಿಯೊಂದಿಗೆ ಶ್ರೀನಗರಕ್ಕೆ ಬಂದಿದ್ದರು. ಅವರ ಅಸಹಾಯಕತೆಯನ್ನು ಅರ್ಥಮಾಡಿಕೊಂಡ ಸಿನ್ಹಾ, ಶ್ರೀನಗರ ವಿಮಾನ ನಿಲ್ದಾಣವನ್ನು ರಕ್ಷಣೆ ಮಾಡಿಕೊಳ್ಳಬೇಕಾದ ಅಗತ್ಯತೆ ಹಾಗೂ ವಿವಿಧ ಸೇನಾ ತುಕಡಿಗಳ ನಡುವಿನ ಸಂಚಾಲನೆಯ ಪ್ರಾಮುಖ್ಯತೆಯ ಬಗ್ಗೆ ಶರ್ಮಾ ಜತೆ ಚರ್ಚಿಸಿದರು. ಆದರೆ ಸೋಮನಾಥ ಶರ್ಮಾ ಮನಸ್ಸು ರಣರಂಗದಲ್ಲಿ ಶತ್ರುವಿಗೆ ಸವಾಲೆಸೆಯಲು ಹಾತೊರೆಯುತ್ತಿತ್ತು. ಸುಮಾರು ಒಂದು ಗಂಟೆ ಕಾಲ ಚರ್ಚೆ ನಡೆಸಿದ ಸಿನ್ಹಾ ದಿಲ್ಲಿಗೆ ವಾಪಸ್ಸಾದರು. ಆದರೆ ಮುಂದಿನ ೪೮ ಗಂಟೆಗಳಲ್ಲಿ ಹೀರೊವೊಬ್ಬ ಹೊರಹೊಮ್ಮಿ ವೀರ ಮರಣವನ್ನಪ್ಪುತ್ತಾನೆ ಎಂದು ಅವರು ಎಣಿಸಿರಲಿಲ್ಲ.
ಅಂದು ೧೯೪೭, ನವೆಂಬರ್ ೩.
ಪಾಕಿಸ್ತಾನಿ ಸೈನಿಕರು ಶ್ರೀನಗರಕ್ಕೆ ತೀರಾ ಸಮೀಪ ದಲ್ಲಿರುವ ಬದ್ಗಾಂವರೆಗೂ ಆಗಮಿಸಿದರು. ಒಂದು ವೇಳೆ, ಶ್ರೀನಗರ ವಿಮಾನ ನಿಲ್ದಾಣವೇನಾದರೂ ಪಾಕಿಸ್ತಾನಿ ಸೈನಿಕರ ಕೈವಶವಾದರೆ ಅಲ್ಲಿಗೆ ಕಾಶ್ಮೀರ ಶಾಶ್ವತವಾಗಿ ಭಾರತದ ಕೈತಪ್ಪಿಹೋದಂತೆಯೇ. ಅಷ್ಟಕ್ಕೂ ವಿಮಾನ ನಿಲ್ದಾಣ ಕೈತಪ್ಪಿದರೆ ಕಾದಾಡುತ್ತಿದ್ದ ನಮ್ಮ ಸೇನೆಗೆ ಯುದ್ಧಸಾಮಗ್ರಿಗಳನ್ನು ಪೂರೈಸುವುದಕ್ಕೇ ಕುತ್ತು ಎದುರಾಗುತ್ತಿತ್ತು. ಸೋಲು ಖಚಿತವಾಗುತ್ತಿತ್ತು. ಶ್ರೀನಗರಕ್ಕೆ ಕಾಲಿಡುವವರೆಗೂ ಕೈಕಟ್ಟಿಕೊಂಡು ಕುಳಿತರೆ ಅಪಾಯ ಖಂಡಿತ ಎಂದರಿತ ಸೋಮನಾಥ ಶರ್ಮಾ, ಕೈ ಮುರಿದಿರುವುದನ್ನೂ ಲೆಕ್ಕಿಸದೇ ಸೇನಾ ತುಕಡಿಯನ್ನು ಕೊಂಡೊಯ್ದು ಬದ್ಗಾಂನಲ್ಲೇ ಶತ್ರುವಿಗೆ ಸವಾಲೆಸೆದರು. ಆದರೆ ಬೃಹತ್ ಸಂಖ್ಯೆಯಲ್ಲಿದ್ದ ಪಾಕಿಸ್ತಾನಿ ಸೈನಿಕರು ನಮ್ಮ ಒಬ್ಬ ಸೈನಿಕನಿಗೆ ಪ್ರತಿಯಾಗಿ ೭ ಜನರಿದ್ದರು! ಆದರೂ ತುರ್ತು ಪಡೆ ಆಗಮಿಸುವವರೆಗೂ ಹೋರಾಡಬೇಕಾಗಿತ್ತು. ಶತ್ರು ಒಂದು ಇಂಚೂ ಮುಂದೆ ಬಾರದಂತೆ ತಡೆಯಬೇಕಿತ್ತು. ಮಧ್ಯಾಹ್ಮ ೨.೩೦ಕ್ಕೆ ಕಾದಾಟ ಆರಂಭವಾಯಿತು. “ಶತ್ರುಗಳು ನಮ್ಮಿಂದ ಕೇವಲ ೫೦ ಯಾರ್ಡ್ ದೂರದಲ್ಲಿದ್ದಾರೆ, ಭಾರೀ ಸಂಖ್ಯೆಯಲ್ಲೂ ಇದ್ದಾರೆ. ಆದರೇನಂತೆ ಕೊನೆಯ ಶತ್ರುವನ್ನು ಕೆಳಗೆ ಕೆಡವುವವರೆಗೂ, ಕಡೆಯ ಸುತ್ತಿನ ಗುಂಡು ಮುಗಿಯುವವರೆಗೂ ಹೋರಾಡುವೆ” ಎಂಬ ವೈರ್ಲೆಸ್ ಸಂದೇಶ ಕಳುಹಿಸಿದ ಸೋಮನಾಥ ಶರ್ಮಾ ಮುರಿದ ಕೈಯಲ್ಲೇ ಬಂದೂಕು ಹಿಡಿದು ಶತ್ರುವಿನ ಮೇಲೆ ಮುಗಿಬಿದ್ದರು. ಅದೇ ಅವರ ಕೊನೆಯ ಸಂದೇಶವೂ ಆಗಿತ್ತು! ಕಾದಾಟದಲ್ಲಿ ಹೈದರಾಬಾದ್ ರೆಜಿಮೆಂಟ್ನ ಅರ್ಧಕ್ಕರ್ಧ ಸೈನಿಕರು ಹತರಾದರು. ಆದರೇನಂತೆ ೨೦೦ಕ್ಕೂ ಹೆಚ್ಚು ಪಾಕಿಸ್ತಾನಿ ಸೈನಿಕರನ್ನೂ ಕೊಂದುಹಾಕಿದ ಭಾರತೀಯ ಯೋಧರು, ಶತ್ರುಗಳು ಮುಂದೆ ಹೆಜ್ಜೆ ಹಾಕಲು ಬಿಡಲಿಲ್ಲ. ಅಷ್ಟರಲ್ಲಿ ಸಾಯಂಕಾಲವಾಯಿತು, ತುರ್ತುಪಡೆಯೂ ಆಗಮಿಸಿತು. ಪಾಕಿಸ್ತಾನವನ್ನು ಮಟ್ಟಹಾಕಲಾಯಿತು.
ಆದರೆ ಶತ್ರುಗಳನ್ನು ತಡೆದು ನಿಲ್ಲಿಸಿದ ಮೇಜರ್ ಸೋಮನಾಥ್ ಶರ್ಮಾ ಹೆಣವಾಗಿದ್ದರು.
ಮೂರು ದಿನಗಳ ನಂತರ ಅವರ ದೇಹ ಪತ್ತೆಯಾಯಿತು. ತೀವ್ರ ಗುಂಡೇಟುಗಳಿಂದಾಗಿ ವಿರೂಪಗೊಂಡಿದ್ದ ದೇಹ ಅವರದ್ದೇ ಎಂದು ಸಾರಿ ಹೇಳಿದ್ದು ಎದೆಯ ಕಿಸೆಯಲ್ಲಿದ್ದ ಭಗವದ್ಗೀತೆಯ ಹಾಳೆಗಳು! ಅದುವರೆಗೂ ಯುದ್ಧ ಕಾಲದಲ್ಲಿ ತೋರುವ ಶೌರ್ಯಕ್ಕಾಗಿ ನೀಡುತ್ತಿದ್ದ ಅತಿದೊಡ್ಡ ಗೌರವವೆಂದರೆ ‘ವಿಕ್ಟೋರಿಯಾ ಕ್ರಾಸ್’ ಆಗಿತ್ತು. ಆದರೆ ಸ್ವಾತಂತ್ರ್ಯಾ ನಂತರ ದಾಸ್ಯದ ಸಂಕೇತವಾಗಿದ್ದ ವಿಕ್ಟೋರಿಯಾ ಕ್ರಾಸ್ ಬದಲು ‘ಪರಮವೀರ ಚಕ್ರ’ವನ್ನು ರೂಪಿಸಲಾಯಿತು. ಪರಮವೀರ ಚಕ್ರವನ್ನು ವಿನ್ಯಾಸ ಮಾಡಿದ್ದು ಸೇನಾಧಿಕಾರಿ ವಿಕ್ರಮ್ ಕಾನೋಲ್ಕರ್ ಅವರ ಹಂಗರಿ ಮೂಲದ ಪತ್ನಿ ಸಾವಿತ್ರಿ ಕಾನೋಲ್ಕರ್(ಇವಾ ಲಿಂಡಾ). ಕುತೂಹಲದ ಸಂಗತಿಯೆಂದರೆ ಆಕೆ ವಿನ್ಯಾಸ ಮಾಡಿದ ಮೊದಲ ಪರಮವೀರ ಚಕ್ರ ಆಕೆಯ ಹಿರಿಯ ಮಗಳ ಮೈದುನ ಮೇಜರ್ ಸೋಮನಾಥ ಶರ್ಮಾ ಅವರಿಗೇ ನೀಡಲಾಯಿತು. ಮೊದಲ ಪರಮ ವೀರ ಚಕ್ರ ಪುರಸ್ಕೃತ ಸೋಮನಾಥ ಶರ್ಮಾ ಹಾಗೂ ೧೯೯೯ರಲ್ಲಿ ಮರಣೋತ್ತರವಾಗಿ ಪರಮವೀರ ಚಕ್ರ ಪಡೆದ ಕಾರ್ಗಿಲ್ ಕಲಿ ವಿಕ್ರಂ ಬಾತ್ರಾ ಇಬ್ಬರೂ ಒಂದೇ ಊರಿನವರು. ಹಿಮಾಚಲ ಪ್ರದೇಶದ ಪಾಲಂಪುರದವರು.
ಇವತ್ತು ಸೋಮನಾಥ ಶರ್ಮಾ ನಮ್ಮೊಂದಿಗಿಲ್ಲ.
ಮಡಿದು ೬೦ ವರ್ಷಗಳಾದವು. ಅಂದು ಒಬ್ಬ ಆರ್ಮಿ ಮ್ಯಾನ್ ಆಗಿದ್ದ ಅವರು ತೋರಿದ ಶೌರ್ಯದಿಂದಾಗಿ ಶ್ರೀನಗರ ವಿಮಾನ ನಿಲ್ದಾಣ ಶತ್ರುಗಳ ಪಾಲಾಗಿ ಏರ್ಫೋರ್ಸ್ಗೆ ಹಿನ್ನಡೆಯುಂಟಾಗುವುದು ತಪ್ಪಿತು. ನಾಡಿದ್ದು ಅಕ್ಟೋಬರ್ ೮ರಂದು ‘ಏರ್ಫೋರ್ಸ್ ಡೇ’. ಹಾಗಾಗಿ ಶರ್ಮಾ ಅವರನ್ನು ನೆನಪಿಸಿಕೊಳ್ಳಬೇಕೆನಿಸಿತು. “ಒಬ್ಬ ಅಪ್ಪನಾದವನ ಜೀವಮಾನದ ಅತ್ಯಂತ ದುಖಃಕರ ಕ್ಷಣವೆಂದರೆ ಮಗನ ಹೆಣಕ್ಕೆ ಹೆಗಲು ಕೊಡುವ ದಿನ” ಎಂದಿದ್ದರು ದಿವಂಗತ ಪ್ರಮೋದ್ ಮಹಾಜನ್. ಅಮರ್ನಾಥ್ ಶರ್ಮಾ, ಜಿ.ಎಲ್. ಬಾತ್ರಾ ಅವರಂತಹ ತಂದೆಯರು ದೇಶ ರಕ್ಷಣೆಗಾಗಿ ಮಕ್ಕಳನ್ನೇ ಬಲಿಕೊಟ್ಟಿದ್ದಾರೆ. ಇಂತಹ ಮಹಾನ್ ತ್ಯಾಗಿಗಳ ನಡುವೆ “ಔಟ್ಲುಕ್ ಮ್ಯಾಗಝಿನ್ಗೆ ಮಾರುದ್ದದ ಆರ್ಟಿಕಲ್ ಬರೆದು ಮುಸಲ್ಮಾನರ ಇಚ್ಛೆಯಂತೆ ಕಾಶ್ಮೀರವನ್ನು ಅವರಿಗೇ ಬಿಟ್ಟುಕೊಡಬೇಕು ಎಂದು ವಾದಿಸುವ ಅರುಂಧತಿ ರಾಯ್ ಅವರಂತಹ ಕ್ಷುಲ್ಲಕ ಮನಸ್ಸುಗಳೂ ಇವೆ. ಆದರೇನಂತೆ ಕೈಮುರಿದುಕೊಂಡಿದ್ದರೂ ಕಾಶ್ಮೀರವನ್ನು ಬಿಟ್ಟುಕೊಡಲು ಒಪ್ಪದ ಸೋಮನಾಥ ಶರ್ಮಾ ಅವರನ್ನು ನಾವಾದರೂ ನೆನಪಿಸಿಕೊಳ್ಳೋಣ.
i am just Speach less …………. Really Heart touching ……..
ಮತà³à²¹à³Šà²‚ದೠಉತà³à²¤à²® ಅಂಕಣ ನಿಮà³à²®à²¿à²‚ದ ಪà³à²°à²¤à²¾à²ªà³ ರವರೆ. ಧನà³à²¯à²µà²¾à²¦à²—ಳೠನಿಮಗೆ.
EXcellent article,
I never miss your saturday article. Its really very informative.
India is weak because of the persons like Arundhati Roy, Many people are like this who is against to our country only.. We dont have unity in ourselves itself.
ಪà³à²°à²¤à²¾à²ªà³ ಅವರೆ,
ಮೇಜರೠಸೋಮನಾಥೠಶರà³à²®à²¾ ಅವರ ವೀರಗಾಥೆ ತಿಳಿಸಿದà³à²¦à²•à³à²•ೆ ಬಹಳ ಧನà³à²¯à²µà²¾à²¦à²—ಳà³.
ಆಟà³à²³à³à²•ೠಪತà³à²°à²¿à²•ೆ, ಅರà³à²‚ದತಿ ರಾಯà³, ಸಬಾ ನಕà³à²µà²¿ ಅಂತಹವರೠಬೊಗಳà³à²¤à³à²¤à²¾ ಇರà³à²¤à³à²¤à²¾à²°à³† ಬಿಡಿ.
ಶà³à²°à³€à²¨à²¿à²§à²¿.
Its good for all
Hi, Pratap Sir,
Thank you for another mind blowing article. Again you awakened the partriotism.
ಉತà³à²¤à²®à²µà²¾à²¦ ರಾಷà³à²Ÿà³à²° ಪà³à²°à³‡à²® ಹೆಚà³à²šà²¿à²¸à³à²µ ಲೇಖನ. ಆದರೆ ಈ ಬಾರಿ ಬಹಳ ಚà³à²Ÿà³à²•ಾಗಿ ಮà³à²—ಿಸಿದà³à²¦à³€à²°.
ಆದಾಗà³à²¯à³‚ ಇಂಥಾ ಉತà³à²•ೃಷà³à²Ÿ ಬರಹಕà³à²•ಾಗಿ ಧನà³à²¯à²µà²¾à²¦à²—ಳà³.
‘ ಅರà³à²‚ಧತಿ ರಾಯೠ‘ ಇವಳನà³à²¨à³ ಬಹಳಜನ ಬೆಂಗಾಲಿ ಹಿಂದೂ ಎಂದೠಅಪಾರà³à²¥ ಮಾಡಿ ಕೊಳà³à²³à³à²¤à³à²¤à²¾à²°à³†.
ಇವಳೠಮಲೆಯಾಳಿ / ಬೆಂಗಾಲಿ ಕà³à²°à²¿à²¶à³à²šà²¿à²¯à²¨à³. ಪೂರà³à²£ ಹೆಸರೠ‘ಸà³à²œà²¾à²¨ ಅರà³à²‚ಧತಿ ರಾಯ೒. NDTV ಯ
ಪà³à²°à²£à²¯à³ ರಾಯà³, ಇವಳ ಹತà³à²¤à²¿à²°à²¦ ಸಂà²à²‚ಧಿ.
ಸà³à²¨à³‡à²¹à²¿à²¤à²°à³‡, ಇವತà³à²¤à³ ನಮà³à²® ಧರà³à²®, ದೇಶ ಒಂದೠಕಡೆಯಿಂದ ಅರà³à²‚ಧತಿ ರಾಯà³, ಪà³à²°à²£à²¯à³ ರಾಯà³, ಕರà³à²£à²¾à²¨à²¿à²§à²¿, ರಾಜಶೇಖರ ರೆಡà³à²¡à²¿, ಸೋನಿಯಾ ಗಾಂಧಿ, ಅಂಬಿಕಾ ಸೋನಿ ಮà³à²‚ತಾದ ಅನೇಕ ಹಿಂದೂ ಹೆಸರà³à²—ಳಿ೦ದ ಮೋಸ ಹೋಗà³à²¤à³à²¤à²¿à²¦à³†. ಮತಾಂತರಿ/ಕà³à²°à²¿à²¶à³à²šà²¿à²¯à²¨à³ ವಿಷ ವರà³à²¤à³à²²à²¦à²¿à³¦à²¦ ಅವರಿಸಲà³à²ªà²Ÿà³à²Ÿà²¿à²¦à³à²¦à³‡à²µà³†.
ಮತà³à²¤à³Šà²‚ದೠಕಡೆಯಿಂದ ಆತಂಕಕಾರಿ ಮà³à²¸à³à²²à²¿à²®à²°à³ ನಮà³à²® ಎದೆ ಸೀಳà³à²¤à³à²¤à²¿à²¦à³à²¦à²¾à²°à³†.
ಇದೆಲà³à²²à²•à³à²•ಿಂತ ಹೆಚà³à²šà²¾à²—ಿ ನಮà³à²® ಹಿಂದೂ ಗಳೇ (ಬà³à²¦à³à²§à²¿ ಜೀವಿಗಳೠಅಂತ ಕರೆದà³à²•ೊಳà³à²³à³à²µà²°à³ ಮತà³à²¤à³ ರಾಜಕಾರಣಿಗಳà³) ಹಿಂದಿನಿಂದ ಚೂರಿ ಹಾಕà³à²¤à³à²¤à²¿à²¦à³à²¦à²¾à²°à³†.
ನಾನೠಶà³à²°à³€ VK ಶಶಿಕà³à²®à²¾à²° ರವರ ‘ಟೆಹೆಲà³à²•ಾ’ ಲೇಖನ ಓದಿದೆ. ನಿಜಕà³à²•ೂ à²à²¯à²µà²¾à²—à³à²¤à³à²¤à²¦à³†. ಪರಿಸà³à²¥à²¿à²¤à²¿ ಬಹಳ ಗಂà²à³€à²°à²µà²¾à²—ಿದೆ. ನಮà³à²® ೮೦% ಗಿಂತ ಹೆಚà³à²šà²¿à²¨à²µà²°à²¿à²—ೆ ಈ ವà³à²¯à²µà²¸à³à²¥à²¿à²¤ ಮತಾಂತರದ ಬಗà³à²—ೆ ಲವ- ಲೇಶವೂ ಗೊತà³à²¤à²¿à²²à³à²².
ಒಟà³à²Ÿà²¿à²¨à²²à³à²²à²¿ ನಾವೠಅತà³à²¯à²‚ತ ಅಪಾಯದ ಸà³à²¥à²¿à²¤à²¿à²¯à²²à³à²²à²¿à²¦à³à²¦à³‡à²µà³†. ನಾವೠಈಗಲಾದರೂ ನಿದà³à²¦à³†à²¯à²¿à²‚ದ ಎದà³à²¦à³ ಸೆಟೆದೠನಿಲà³à²² ಬೇಕà³. ಶà³à²°à³€ ಪà³à²°à²¤à²¾à²ª ಸಿಂಹರಂಥ ಸಮರà³à²¥à²°à²¿à²—ೆ ಹೆಗಲೠಕೊಟà³à²Ÿà³ ನಿಂತೠಹೋರಾಡಬೇಕà³.
ಹಿಂದೂ ಗಳೠಹಿಂದಿನ ಎಲà³à²² ಅಪಾಯದ ಸà³à²¥à²¿à²¤à²¿à²¯à²²à³à²²à³‚ ಒಟà³à²Ÿà²¾à²—ಿ ಹೊರಾದಿದà³à²¦à³‡à²µà³†, ಇವತà³à²¤à³‚ ಒಗà³à²—ಟà³à²Ÿà²¿à²‚ದ ಹೋರಾಡೋಣ.
ಜೈ ಹಿಂದೂ…
I like the fire in your articles. So many times I am reminded of Swami Vivekananda when I read your articles. You touch the heart and the head and hit where it is required just like Swamy Vivekananda. We need pure, uncorrupted, ferocious journalist thinkers like you. Otherwise majority of us get swayed by what is written or shown in media which make us mediocre. Your articles reflect the good preparation that you do before writing such articles. I wait for saturdays to read your article. I am proud of you. Keep it up!
Sir
You are really great. Such information no one will write in Kannada. I am your fan. I eagerly await for saturday to come. Please write more of such articles.
Too good article…hats up to Somanath Sharma…..We salute you for ur success….
Monne Arundathi Roy avrna beti aagi avra mane, kaarugalanna nanna iccheyanthe nanage baredu kodi antha kelde… Thaksanave avanna nange kottubitru… Nimagu enadru bekidre please contact her at: 420420.. Arundathi Roy ge Jai !!
– DR
You are really great pratap…… Thanks for giving such a igniting article.
Dear Pratap,
Excellent Article.
Endina brashta rajakaiya dindagi Enta mahanubhavara hesaru mule gumpagirodu nijakku kheada.
“Hats up to SOMANATH SHARMA..”
Pratap avare tamagoo dhanyavadagalu.
-Raghavendra Shet
ಮತà³à²¤à³Šà²‚ದೊ ಒಳà³à²³à³†à²¯ ಲೇಖನಕà³à²•ೆ ಧನà³à²¯à²µà²¾à²¦à²—ಳೠಪà³à²°à²¤à²¾à²ªà³.
ಪà³à²°à²¤à²¾à²ªà³,
ಈ ಲೇಖನ ಓದà³à²¤à³à²¤ ನನಗೆ ಗೊತà³à²¤à²¿à²²à³à²²à²¦à²‚ತೆ ಕಣà³à²£à²¾à²²à²¿à²—ಳೠತೇವವಾಯà³à²¤à³. ಅದೆಲà³à²²à²¿à²‚ದಲೋ ಇಂತ ವಿಷಯಗಳನà³à²¨à³‚ ತಂದೠನಮà³à²® ಮà³à²‚ದೆ ಇಡà³à²¤à³à²¤à²¿à²¯à²²à³à²² ಅದೇ ನಿನà³à²¨ speciality.
‘ಸೋಮನಾಥ ಶರà³à²®’ ಅಂತಹ ಮಹಾನೠಯೋಧರಿಂದಾಗಿಯೇ ಕಾಶà³à²®à³€à²° ಇನà³à²¨à³ à²à²¾à²°à²¤à²¦ ಅಂಗವಾಗಿ ಉಳಿದಿದೆ, ಆದರೆ ನೆಹರೠಅವರ ಹೊಣೆಗೇಡಿ ನಿರà³à²§à²¾à²°à²¦à²¿à²‚ದಾಗಿ ಕಾಶà³à²®à³€à²°à²¦ ಒಂದೠà²à²¾à²— ಇನà³à²¨à³ ಅವರ ಬಳಿಯೇ ಉಳಿದೠಬಿಟà³à²Ÿà²¿à²¦à³†.
Really Heart touching………………………..
ಆತà³à²®à³€à²¯ ಪà³à²°à²¤à²¾à²ªà³,
ನಿಜವಾಗಿಯೂ ‘ಸೋಮನಾಥ ಶರà³à²®â€™ ಅವರಂತಹ ನಿಸà³à²µà²¾à²°à³à²¥ ಯೋಧರಿಂದಾಗಿಯೇ ನಾವೠಇಂದೠಬಾಳà³à²¤à²¿à²¦à³à²¦à³€à²µà²¿. ಹೆಮà³à²®à³† ಅನಿಸà³à²¤à²¿à²¦à³†. ಉತà³à²¤à²®à²µà²¾à²¦ ಲೇಖನ. ಪà³à²°à²¤à²¿à²¯à³Šà²¬à³à²¬à²¨ ರಕà³à²¤à²¦à²²à³à²²à³‚ ರಾಷà³à²Ÿà³à²° ಪà³à²°à³‡à²® ಹರಿಯà³à²¤à²¿à²°à²¬à³‡à²•à³.
Hats off to Major Somnath Sharma!!!We salute you.
really wonderful.
i don how many Sharmas laid their life to protect our country……….Its India …Here we do hav People lik Arundhati Rai ji…..Let them leave lik the way they want……… But we should not forget our soldiers and their sacrifice…..!!!
thanks Pratap ji for ur words…………
I cant tell any thing …my eyes are wetting …thank u so…much pratap
ಪà³à²°à²¤à²¾à²ªà³ ಅವರೆ, ನೀವೠನಮà³à²® ವೀರ ಸೈನಿಕರ ತà³à²¯à²¾à²—, ದೇಶಪà³à²°à³‡à²®à²¦ ಬಗà³à²—ೆ ಬರೆಯà³à²µ ಲೇಖನಗಳೠತà³à²‚ಬಾ ಹೃದಯಸà³à²ªà²°à³à²¶à²¿à²¯à²¾à²—ಿರà³à²¤à³à²¤à²µà³†…ಓದಿದ ಮೇಲೆ ರೋಮಾಂಚನದೊಂದಿಗೆ ಎದೆಯೂ à²à²¾à²°à²µà²¾à²—à³à²¤à³à²¤à²¦à³†. ನಿಮಗೆ ತಿಳಿಯಬಯಸà³à²µà³à²¦à³‡à²¨à³†à²‚ದರೆ à²à²¾à²°à²¤ ಸರಕಾರ ೨೦೦೩ರಲà³à²²à²¿ ಮೇಜರೠಸೋಮನಾಥೠಶರà³à²®à²¾ ಅವರ ಹೆಸರಿನಲà³à²²à²¿ ಅಂಚೆ ಚೀಟಿಯನà³à²¨à³ ಬಿಡà³à²—ಡೆ ಮಾಡಿದೆ. ಅದೠಇಷà³à²Ÿà³ ಸಮಯದಿಂದ ನನà³à²¨à²²à³à²²à²¿à²¦à³à²¦à²°à³‚ ಅವರ ಬಗà³à²—ೆ ಸರಿಯಾದ ಮಾಹಿತಿ ಇರಲಿಲà³à²² . ತಿಳಿಸಿಕೊಟà³à²Ÿà²¦à³à²¦à²•à³à²•ಾಗಿ ನಿಮಗೆ ತà³à²‚ಬಾ ಧನà³à²¯à²µà²¾à²¦à²—ಳ೅
what can i say..??? realy tuching article.. hats of to u somanath sharma.. we r proud about u…
simha avare v v menan kashmirakke raja harising ge oppisalu hogiddara atava gurooji hogiddara? dayavittu tilisi
Pratapji Thank You for good article
you are simply great!!!!!! i love your narration and courage… i am ur great fan to be honest.. may i get ur phone number??? plz plz.. every article makes me more proud to be an indian…..by this i am awaring of many truths and facts… hats off to your narration…..
hi, Prathap avattu nimma lekanakke kelavu cristion naayigalu eno bogalidvu ivattu elli Amadi tinnoke hogive