Date : 01-12-2010, Wednesday | 18 Comments
1. ಅವರು ಬಂಡವಾಳವನ್ನು ತರುತ್ತಾರೆ.
2. ಉದ್ಯೋಗವನ್ನು ಸೃಷ್ಟಿಸುತ್ತಾರೆ.
3. ಅದರಿಂದ ದೇಶದ ರಫ್ತು ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತದೆ.
4. ಅಷ್ಟೇ ಅಲ್ಲ, ನಮ್ಮ ದೇಶಕ್ಕೆ ಅತ್ಯಾಧುನಿಕ ತಂತ್ರeನವನ್ನೂ ತರುತ್ತಾರೆ.
ನಮ್ಮ ದೇಶದಲ್ಲಿ ಬಂಡವಾಳ ತೊಡಗಿಸುವಂತೆ ಬಹುರಾಷ್ಟ್ರೀಯ ಕಂಪನಿಗಳನ್ನು ಆಹ್ವಾನಿಸುತ್ತಿರುವ ಸರಕಾರ ಈ ರೀತಿಯ ಕಾರಣ, ನೆಪಗಳನ್ನು ಕೊಟ್ಟು ನಿಮ್ಮನ್ನು ಸಮಾಧಾನಪಡಿಸುತ್ತಿದೆ. ಆದರೆ ವಾಸ್ತವದಲ್ಲಿ ವಿದೇಶಿ ಕಂಪನಿಗಳ ಆಗಮನದಿಂದಾಗಿ ನಮ್ಮ ದೇಶದ ಸಂಪತ್ತು ಹೊರಕ್ಕೆ ಹರಿದುಹೋಗುತ್ತಿದೆ, ಲೂಟಿಯಾಗುತ್ತಿದೆ. ಬಹುರಾಷ್ಟ್ರೀಯ ಕಂಪನಿಗಳ ಆಗಮನದಿಂದ ಉದ್ಯೋಗ ಸೃಷ್ಟಿಯಾಗುತ್ತದೆ ಎಂಬ ಮಾತೂ ಶುದ್ಧ ಸುಳ್ಳು. ಖಾಸಗಿ ಕಂಪನಿಗಳಿಂದಾಗಿ ಸ್ಥಳೀಯ ಸಣ್ಣ ಉದ್ದಿಮೆಗಳು ನಾಶಗೊಂಡು ಭಾರೀ ಪ್ರಮಾಣದ ನಿರುದ್ಯೋಗ ಸೃಷ್ಟಿಯಾಗುತ್ತದೆ ಹಾಗೂ ಆರ್ಥಿಕ ಅಸಮಾನತೆಯುಂಟಾಗುತ್ತದೆ. ರಫ್ತು ಪ್ರಮಾಣ ಹೆಚ್ಚಾಗುತ್ತದೆ ಎಂಬ ಮಾತೂ ಕೂಡ ಸತ್ಯಕ್ಕೆ ದೂರವಾದುದು. ವಾಸ್ತವದಲ್ಲಿ ವಿದೇಶಿ ಕಂಪನಿಗಳಿಂದಾಗಿ ಆಮದು ಪ್ರಮಾಣ ಹೆಚ್ಚಾಗುತ್ತಿದೆ. ಅವು ತಮ್ಮ ದೇಶದ ಸರಕುಗಳನ್ನು ಭಾರತಕ್ಕೆ ತಂದು ಮಾರಾಟ ಮಾಡುತ್ತಿವೆಯಷ್ಟೇ. ಅಂದರೆ ತಮ್ಮ ದೇಶದ ಕಚ್ಚಾವಸ್ತು ಗಳನ್ನು ಇಲ್ಲಿಗೆ ತಂದು, ಸರಕನ್ನಾಗಿ ಪರಿವರ್ತಿಸಿ ಭಾರೀ ಲಾಭವನ್ನಿಟ್ಟು ಮಾರಾಟ ಮಾಡುತ್ತಿವೆಯಷ್ಟೇ. ನಮ್ಮ ದೇಶದ ಸಂಪತ್ತೇ ಕೊಳ್ಳೆಯಾಗುತ್ತಿದೆ. ಬಹುರಾಷ್ಟ್ರೀಯ ಕಂಪನಿಗಳು ತಂತ್ರeನವನ್ನು ತರುತ್ತವೆ ಎಂಬ ವಾದವೂ ಒಂದು ದೊಡ್ಡ ಸುಳ್ಳು. ಸಮೀಕ್ಷೆಗಳು ಹೇಳುವಂತೆ ವಿದೇಶಿ ಕಂಪನಿಗಳು ಯಾವುದೇ ಉತ್ಪಾದನಾ ತಂತ್ರeನವನ್ನು ನಮ್ಮ ದೇಶಕ್ಕೆ ತರುತ್ತಿಲ್ಲ, ಜತೆಗೆ ಯಾವುದೇ ಸಂಶೋಧನಾ ಕೇಂದ್ರಗಳನ್ನೂ ನಮ್ಮಲ್ಲಿ ಸ್ಥಾಪಿಸುತ್ತಿಲ್ಲ. ತಮ್ಮ ತಮ್ಮ ದೇಶಗಳಿಂದ ಬಿಡಿ ಭಾಗಗಳನ್ನು ತರಿಸಿ, ಇಲ್ಲಿ ಜೋಡಿಸಿ ಮಾರಾಟ ಮಾಡುವ ಕೆಲಸವನ್ನಷ್ಟೇ ಮಾಡುತ್ತಿವೆ. ಈ ದೇಶದಲ್ಲಿ ಅತ್ಯಾಧುನಿಕ ತಂತ್ರeನ ಹೊಂದಿರುವ ಕಂಪನಿಗಳೆಂದರೆ ISRO ಮತ್ತು DRDO ಮಾತ್ರ. ಅವು ದೇಶೀಯವಾಗಿ ಸುಧಾರಿತ ತಂತ್ರeನವನ್ನು ಅಭಿವೃದ್ಧಿಪಡಿಸಿವೆ. ಹೀಗೆ ನಾವು ನಮ್ಮ ದೇಶದಲ್ಲೇ ಆಧುನಿಕ ತಂತ್ರeನವನ್ನು ಅಭಿವೃದ್ಧಿಪಡಿಸಲು ಶಕ್ತವಿರುವಾಗ ವಿದೇಶಿ ಕಂಪನಿಗಳನ್ನೇಕೆ ಕೆಂಪು ಕಂಬಳಿಹಾಕಿ ಆಹ್ವಾನಿಸಬೇಕು? ಈ ದೇಶದ ಸಂಪತ್ತನ್ನೇಕೆ ಲೂಟಿ ಮಾಡಿಕೊಂಡು ಹೋಗಲು ಬಿಡಬೇಕು?
ಈಸ್ಟ್ ಇಂಡಿಯಾ ಕಂಪನಿ!
ಆ ಹೆಸರಿನ ಒಂದೇ ಕಂಪನಿ ನಮ್ಮ ದೇಶವನ್ನು ಎಷ್ಟು ಲೂಟಿ ಮಾಡಿತು ಎಂಬುದು ನಿಮಗೆಲ್ಲ ಗೊತ್ತೇ ಇದೆ. ಆ ಒಂದು ಕಂಪನಿಯನ್ನು ಓಡಿಸಲು ನಮಗೆ 200 ವರ್ಷ ಬೇಕಾದವು! ಈಗ ಭಾರತದಲ್ಲಿ ಸುಮಾರು 5 ಸಾವಿರ ವಿದೇಶಿ ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ!! ಹಾಳೂ-ಮೂಳೂ ಸರಕುಗಳನ್ನು ಮಾರಿ, ದೇಶದ ಸಂಪತ್ತನ್ನು ದೋಚುತ್ತಿವೆ. ಒಂದು ವೇಳೆ ನಮ್ಮ ದೇಶ ಒಂದು ಸುಭದ್ರ ಹಾಗೂ ಬಲಿಷ್ಠ ರಾಷ್ಟ್ರವಾಗಬೇಕಾದರೆ ಈ ಕಂಪನಿಗಳನ್ನು ಆದಷ್ಟು ಬೇಗ ದೇಶದಿಂದ ಹೊರಹಾಕಿ ಸ್ವದೇಶಿ ತಂತ್ರeನದ ಅಭಿವೃದ್ಧಿಗೆ ಪ್ರೋತ್ಸಾಹ ನೀಡಬೇಕು……”
ರಾಜೀವ್ ದೀಕ್ಷಿತ್ ಅವರ ಭಾಷಣವನ್ನು ಕೇಳುವುದೆಂದರೆ ಪ್ರವಾಹಕ್ಕೆ ಬೆನ್ನುಕೊಟ್ಟು ಕುಳಿತುಕೊಂಡಂತೆ, ಕೊಚ್ಚಿಹೋಗದೆ ಬೇರೆ ದಾರಿಯೇ ಇರುತ್ತಿರಲಿಲ್ಲ!
“ತೆರಿಗೆ ಮೂಲಕ ಸಂಗ್ರಹವಾಗುವ ಸಂಪತ್ತನ್ನು ಹಂಚಿದರೆ ಈ ದೇಶದ ಜನರ ತಲಾ ಆದಾಯ ವರ್ಷಕ್ಕೆ 6 ಸಾವಿರ ರೂಪಾಯಿ ಗಳಾಗುತ್ತವೆ. ಸರಕಾರ ಪ್ರತಿ ವ್ಯಕ್ತಿಗೂ ಮಾಡುವ ವೆಚ್ಚ ಕೇವಲ 600 ರೂಪಾಯಿ! ಉಳಿದ ಹಣ ಎಲ್ಲಿಗೆ ಹೋಗುತ್ತದೆ? ಕೇವಲ 20 ಪರ್ಸೆಂಟ್ ಹಣವಷ್ಟೇ ಅಭಿವೃದ್ಧಿ ಕಾರ್ಯಕ್ಕೆ ವಿನಿಯೋಗವಾಗುತ್ತದೆ. ಸರಕಾರಿ ಉದ್ಯೋಗಿಗಳು, ಶಾಸಕ-ಸಂಸದರ ಸಂಬಳ, ಸವಲತ್ತಿಗೆ 80 ಪರ್ಸೆಂಟ್ ವೆಚ್ಚವಾಗುತ್ತಿದೆ. ಹಾಗಿರುವಾಗ ದೇಶದ ಅಭಿವೃದ್ಧಿ ಹೇಗೆ ಸಾಧ್ಯ?”
ಹೀಗೆ ರಾಜೀವ್ ದೀಕ್ಷಿತ್ ಅವರು ಭಾಷಣದ ಮೂಲಕ ತಮ್ಮ ವಾದ ಮಂಡಿಸುತ್ತಿದ್ದರೆ ಅಹುದಹುದೆಂದು ತಲೆಯಾಡಿಸದೇ, ಅಚ್ಚರಿಗೊಳ್ಳದೆ, ಮರುಕ್ಷಣವೇ ಹತಾಶೆಗೊಳ್ಳದೆ ಇರಲಾಗುತ್ತಿರಲಿಲ್ಲ. ನಿಜ ಹೇಳಬೇಕೆಂದರೆ ರಾಜಕೀಯೇತರ ಕ್ಷೇತ್ರಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಂಡುಬಂದ ಅತ್ಯುತ್ತಮ ವಾಗ್ಮಿಗಳಲ್ಲಿ ರಾಜೀವ್ ಒಬ್ಬರು. ಅವರು ಕೊಡುತ್ತಿದ್ದ ಅಂಕಿ-ಅಂಶಗಳಲ್ಲಿ ಎಷ್ಟರಮಟ್ಟಿನ ಹುರುಳಿತ್ತು ಎಂಬುದು ವಾದಮಾಡುವಂತಹ ವಿಷಯವಾಗಿದ್ದರೂ ಅವರ ಭಾಷಣ ಮಾತ್ರ ತರ್ಕಬದ್ಧವಾಗಿರುತ್ತಿತ್ತು. ಮಾತುಗಳು ಅತ್ಯಂತ ಸ್ಫುಟ. ಅಸ್ಖಲಿತ ಹಿಂದಿ. ಅಂದಮಾತ್ರಕ್ಕೆ ಅವರು ಬರೀ ಭಾಷಣಕಾರರಾಗಿರಲಿಲ್ಲ. ಎಂ.ಟೆಕ್ ಓದಿದ್ದರು. ಸಿಎಸ್ಐಆರ್ ಜತೆ ಕೆಲಸ ಮಾಡಿದ್ದ ಅನುಭವ ಹೊಂದಿದ್ದರು.
ಸುಮಾರು ೮ ವರ್ಷಗಳ ಹಿಂದಿನ ಮಾತು.
ಬೆಂಗಳೂರಿನ ಚಿಕ್ಕಪೇಟೆಯಲ್ಲಿರುವ ‘ಆಜಾದಿ ಬಚಾವೋ ಆಂದೋಲನ’ದ ಕಚೇರಿಗೆ ಸ್ನೇಹಿತ ಚಕ್ರವರ್ತಿ ಸೂಲಿಬೆಲೆ ಕರೆದುಕೊಂಡು ಹೋಗಿದ್ದರು. ಅಲ್ಲಿ ರಾಜೀವ್ ದೀಕ್ಷಿತ್ ಉಪನ್ಯಾಸವಿತ್ತು. ಅವರನ್ನು ನೋಡಿದ್ದು ಅದೇ ಮೊದಲು. ಇಸ್ತ್ರಿಯನ್ನೇ ಕಾಣದ ಕುರ್ತಾ, ಪೈಜಾಮ ಹಾಕಿದ್ದ ವ್ಯಕ್ತಿಯೇ ರಾಜೀವ್ ದೀಕ್ಷಿತ್ ಅವರಾ ಎಂದು ಆಶ್ಚರ್ಯವುಂಟಾಗಿತ್ತು. ಆ ವೇಳೆಗಾಗಲೇ ರಾಜೀವ್ ದೀಕ್ಷಿತ್ ಎಂದರೆ ಸ್ವದೇಶಿ ಚಳವಳಿಯಲ್ಲಿ ದೇಶದಲ್ಲೇ ದೊಡ್ಡ ಹೆಸರು. ಅವರ ಭಾಷಣದ ತೀವ್ರತೆ ದಂತಕಥೆಯಂತಾಗಿತ್ತು. ಆದರೆ ಅವರ ಜೀವನ ಶೈಲಿಯಲ್ಲಿ ಮಾತ್ರ ಯಾವುದೇ ಬದಲಾವಣೆಗಳಾಗಿರಲಿಲ್ಲ. ಖ್ಯಾತ ಗಾಂಧೀವಾದಿ ಧರ್ಮಪಾಲ್ ಅವರ ಅನುಯಾಯಿಯಾಗಿದ್ದ ರಾಜೀವ್ ದೀಕ್ಷಿತ್, ತಮ್ಮ ಜೀವನದಲ್ಲೂ ಗಾಂಧೀಜಿಯಂತೆ ಖಾದಿ ಹಾಗೂ ಸರಳ ಜೀವನ ಅಳವಡಿಸಿಕೊಂಡಿದ್ದರು. ಬಹಳ ಆಶ್ಚರ್ಯದ ಸಂಗತಿಯೆಂದರೆ ಗಾಂಧೀಜಿಯವರನ್ನು ಬಹುವಾಗಿ ಮೆಚ್ಚಿಕೊಂಡಿದ್ದ ರಾಜೀವ್ ದೀಕ್ಷಿತ್ ಅವರು ಚಂದ್ರಶೇಖರ್ ಆಜಾದ್, ಭಗತ್ ಸಿಂಗ್, ಸುಭಾಷ್ಚಂದ್ರ ಬೋಸ್ ಮುಂತಾದ ಕ್ರಾಂತಿಕಾರಿಗಳನ್ನೂ ಅಷ್ಟೇ ತೀವ್ರತೆಯೊಂದಿಗೆ ಆರಾಧಿಸುತ್ತಿದ್ದರು. ಹಾಗಾಗಿ ಸ್ವದೇಶಿ ಬಗ್ಗೆ ಮಾತನಾಡುವಾಗಲೂ ಅವರ ಭಾಷಣದಲ್ಲಿ ಒಂದು ಶಕ್ತಿ ಎದ್ದು ಕಾಣುತ್ತಿತ್ತು.
ಹಾಗಂತ ರಾಜೀವ್ ದೀಕ್ಷಿತ್ ಹೇಳಿದ್ದನ್ನೆಲ್ಲಾ ಒಪ್ಪಿಕೊಳ್ಳಬೇಕು ಅಥವಾ ಒಪ್ಪಿಕೊಳ್ಳುವಂತಿರುತ್ತಿತ್ತು ಎಂದಲ್ಲ.
ಉದಾಹರಣೆಗೆ 1948ರಲ್ಲಿ ಸಂಭವಿಸಿದ ಭೋಪಾಲ್ ಅನಿಲ ದುರಂತದ ಬಗ್ಗೆ ರಾಜೀವ್ ದೀಕ್ಷಿತ್ ತಮ್ಮದೇ ಆದ ವ್ಯಾಖ್ಯಾನ ಕೊಡುತ್ತಿದ್ದರು. ಅದು ಅನಿಲ ದುರಂತವಲ್ಲ, ಅಮೆರಿಕ ಉದ್ದೇಶ ಪೂರ್ವಕವಾಗಿ ಎಸಗಿದ ಕೃತ್ಯ, ನೂತನ ಮಾದರಿ ಬಾಂಬೊಂದನ್ನು ಅದು ಪರೀಕ್ಷೆ ಮಾಡಿದೆ ಎಂದೆಲ್ಲ ಹೇಳುತ್ತಿದ್ದರು. 2001, ಸೆಪ್ಟೆಂಬರ್ 11ರಂದು ವಿಶ್ವ ವ್ಯಾಪಾರ ಸಂಸ್ಥೆಯ ಮೇಲೆ ನಡೆದ ಭಯೋತ್ಪಾದಕ ದಾಳಿಯ ಬಗ್ಗೆಯೂ ಕಥೆ ಹೇಳುತ್ತಿದ್ದರು. ಅದು ಅಮೆರಿಕವೇ ಎಸಗಿದ ಕೃತ್ಯ ಎಂದೆಲ್ಲ ಆಧಾರರಹಿತ Conspiracy theory ಗಳನ್ನು ಹೇಳಿ ಏನೂ ಅರಿಯದವರನ್ನು ನಂಬಿಸಿದ್ದೂ ಇದೇ. ಅವು ಕೇಳುವುದಕ್ಕಷ್ಟೇ ಹಿತವಾಗಿರುತ್ತಿದ್ದವು. ಅವರ ಬಹುದೊಡ್ಡ ಸಾಮರ್ಥ್ಯವೆಂದರೆ ಅವರು ಏನನ್ನೇ ಹೇಳಿದರೂ ಅದನ್ನು ನಂಬುವಂತೆ ಹೇಳುತ್ತಿದ್ದರು. ಆಗಿನ ಕಾಲ ಕೂಡ ಅವರಿಗೆ ಹೇಳಿ ಸೃಷ್ಟಿಸಿದಂತಿತ್ತು. 1991ರಲ್ಲಿ ಪ್ರಧಾನಿ ನರಸಿಂಹರಾವ್ ಆರ್ಥಿಕ ಉದಾರೀಕರಣ ನೀತಿಗಳನ್ನು ಜಾರಿಗೆ ತಂದ ನಂತರ ಬಹುರಾಷ್ಟ್ರೀಯ ಕಂಪನಿಗಳ ಬಗ್ಗೆ ದೇಶಾದ್ಯಂತ ಒಂದು ರೀತಿಯ ಆತಂಕ, ಭಯ ಸೃಷ್ಟಿಯಾಗಿತ್ತು. ಇಂತಹ ಒಂದು ಸರಿಯಾದ ಸಂದರ್ಭದಲ್ಲಿ ರಾಜೀವ್ ದೀಕ್ಷಿತ್ ಅವರ ಪ್ರವೇಶವಾಯಿತು. 1995-2005 ಅವಧಿಯಲ್ಲಿ ಅವರು ಇಡೀ ದೇಶದ ಉದ್ದಗಲಕ್ಕೂ ತಿರುಗಿ, ಊರೂರು ಸುತ್ತಿ ಭಾಷಣ ಮಾಡಿದರು. ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿದರು. ಒಂದು ದೊಡ್ಡ ಯುವಪಡೆ ಅವರ ಹಿಂದೆ ಟೊಂಕಕಟ್ಟಿ ನಿಂತಿತು.
ಆದರೆ…
ರಾಜೀವ್ ದೀಕ್ಷಿತ್ ಒಬ್ಬ ಒಳ್ಳೆಯ ಮಾತುಗಾರರಾಗಿದ್ದರೇ ಹೊರತು, ಒಳ್ಳೆಯ ಸಂಘಟಕರಾಗಿರಲಿಲ್ಲ, ದೂರದೃಷ್ಟಿಯ ಕೊರ ತೆಯೂ ಸಾಕಷ್ಟಿತ್ತು. ಭಾಷಣದಾಚೆ ಅವರಲ್ಲಿ ಯಾವ ಐಡಿಯಾ ಗಳೂ ಇರಲಿಲ್ಲ. ಈ ಬಾರಿ ಬಂದಾಗಲೂ ಭಾಷಣ, ಮುಂದಿನ ಬಾರಿಯೂ ಭಾಷಣವೇ. ಅದನ್ನು ಕೃತಿಗಿಳಿಸಲು ಪ್ರಯತ್ನಿಸಲಿಲ್ಲ. ಹಾಗಾಗಿ ಆಜಾದಿ ಬಚಾವೋ ಆಂದೋಲನ ಒಂದು ಫಲದಾಯಕ ಚಳವಳಿಯಾಗಲಿಲ್ಲ, ಒಂದು ದೊಡ್ಡ ಸಂಘಟನೆಯಾಗಿ ಬೆಳೆಯ ಲಿಲ್ಲ. ಆದರೂ ಅವರು ದೇಶದ ಬಗ್ಗೆ ಇಟ್ಟುಕೊಂಡಿದ್ದ ಕಾಳಜಿ, ಪ್ರೀತಿ ಮಾತ್ರ ಅಪಾರ. ಕಳೆದ ಕೆಲ ವರ್ಷಗಳಿಂದ ಕೇವಲ ಉತ್ತರ ಭಾರತದ ಕೆಲವು ರಾಜ್ಯಗಳಿಗಷ್ಟೇ ತಮ್ಮನ್ನು ಸೀಮಿತ ಮಾಡಿಕೊಂಡ ರಾಜೀವ್ ದೀಕ್ಷಿತ್, ಬಾಬಾ ರಾಮ್ದೇವ್ ಜತೆ ಸೇರಿ ‘ಭಾರತ್ ಸ್ವಾಭಿಮಾನ್’ ಎಂಬ ರಾಜಕೀಯ ವೇದಿಕೆ ಪ್ರಾರಂಭಿಸಿದ್ದರು. ಅದು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಗುರಿಯನ್ನೂ ಹೊಂದಿತ್ತು. ಆದರೆ ಕನಸು ಸಾಕಾರಗೊಳ್ಳುವ ಮೊದಲೇ ವಿಧಿ ಅವರನ್ನು ಕಿತ್ತುಕೊಂಡಿದೆ. ನವೆಂಬರ್ 30ರಂದು ಬೆಳಗಿನ ಜಾವ ರಾಜೀವ್ ದೀಕ್ಷಿತ್ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಸುಮಾರು 15 ವರ್ಷಗಳ ಕಾಲ ಜನರಲ್ಲಿ ಜಾಗೃತಿ ಮೂಡಿಸಲು ಅವಿರತವಾಗಿ, ಪ್ರಾಮಾಣಿಕವಾಗಿ ಪ್ರಯತ್ನಿಸಿದ, ಲಕ್ಷಾಂತರ ಯುವಕರಿಗೆ ಪ್ರೇರಣೆ ನೀಡಿದ ರಾಜೀವ್ ದೀಕ್ಷಿತ್ರನ್ನು 44ನೇ ವರ್ಷಕ್ಕೆ ವಿಧಿ ಕಿತ್ತುಕೊಂಡಿದ್ದು ಮಾತ್ರ ಈ ದೇಶದ ದುರಂತ. ಹೀಗೆ ದುಃಖದ ಮಡುವಿಗೆ ಬಿದ್ದಿರುವಾಗ ಏಳುವ ಪ್ರಶ್ನೆಯೇನೆಂದರೆ, ಈ ಸಾವೇಕೆ ಸಾಧಕರನ್ನು ಸಣ್ಣಪ್ರಾಯದಲ್ಲೇ ಕಿತ್ತುಕೊಂಡುಬಿಡುತ್ತದೆ?
ಛೇ.
Dear Sir,
today article is very Inspiring us, thank u so much sir, we miss great rashriya
swadeshi harikar sri Rajeev dixit sir.
sir it is really a great loss to our country.. but what he believed in was completely baseless.. I don’t know how globalization was bad n i still don’t see how he did not see the benefit of it.. common we are growing @ 9% and every other country respects us because of it.. if it was not for globalization would you be publishing your article here.. would i be living as comfortable as i am living now.. just cos some looser cannot keep up to it.. we should not oppose it
Maanya Pratap Simhare, OM!
Idu ondu Swargiya Shri RAJIV DIXITar bagge bareda chikka,chokka,sundara,samagra lekhana.
Tumbaa ishtavaayitu. Dhanyavaadagalu.
Avara vyakhyaanagalige prabhaavitanagi naanu nanna maneyalli kaleda ondu varshadinda ‘swadeshi’ vasthugalanne upayogisuttene.
Devaru avara aatmakee shanti needali. Avarantha nooraaru mahapurusharannu srushtisali
OM.
ದೀಕà³à²·à²¿à²¤à³ ಸಾವೠಸಹಜವೇ? ರಾಷà³à²Ÿà³à²°à³€à²¯ ಮಾಧà³à²¯à²®à²—ಳಲà³à²²à²¿ ಸà³à²¦à³à²¦à²¿à²¯à²¾à²—ದಷà³à²Ÿà³ ಚಿಲà³à²²à²°à³† ವà³à²¯à²•à³à²¤à²¿à²¯ ಸಾವೇ ಇದà³?
Good one.. a small correction.. “ಉದಾಹರಣೆಗೆ 1948ರಲà³à²²à²¿ ಸಂà²à²µà²¿à²¸à²¿à²¦ à²à³‹à²ªà²¾à²²à³ ಅನಿಲ ದà³à²°à²‚ತದ ”
pls change it to “1984”
Thanks
Sunil
pls write about inspiring speeches of rajive sir
hello sir,
rajeev dixit was the first person who inspired me a lot …. i used to read his articles in kannada regional newspaper of shimoga – ‘navika’ which was translated to kannada by chakravarti sulibele. wen i read the title of this article i couldnt believe… the person who inspired me so much in my teen age is no more… i had tears in my eyes reading this article…. he had grt ideologies.its tragedy dat he couldnt do much in this life..
i wish he wil come back again to tel the indians abt being swadeshi.
Rajiv Dixiti’s demise was a very sad and a shocking news.But what was even more shocking was the media’s reaction especially electronic and the english media.
except few newspapers, no other media contained this news.Is Rajiv Dixit so unimportant?
ಹೆಚà³à²šà²¿à²¨ ಯಾವ ಪತà³à²°à²¿à²•ೆಗಳೂ ಪà³à²°à²•ಟಿಸದ ಶೃದà³à²§à²¾à³¦à²œà²²à²¿ ಲೇಖನ ಪà³à²°à²•ಟಿಸಿದà³à²¦à²•à³à²•ೆ ಧನà³à²¯à²µà²¾à²¦à²—ಳà³.
ಅವರೠಹೇಳಿದà³à²¦à³†à²²à³à²² ಒಪà³à²ªà²¿à²•ೊಳà³à²³à²¬à³‡à²•ಿಲà³à²²à²¦à²¿à²¦à³à²¦à²°à³‚ ಅವರೠಒಳà³à²³à³†à²¯ ಸಂಘಟಕರಾಗಿರಲಿಲà³à²², ದೂರದೃಷà³à²Ÿà²¿à²¯ ಕೊರ ತೆಯೂ ಸಾಕಷà³à²Ÿà²¿à²¤à³à²¤à³. à²à²¾à²·à²£à²¦à²¾à²šà³† ಅವರಲà³à²²à²¿ ಯಾವ à²à²¡à²¿à²¯à²¾ ಗಳೂ ಇರಲಿಲà³à²² ಎ೦ಬ ಮಾತà³à²—ಳೠಸರಿಯಲà³à²². ಛತà³à²¤à³€à²¸à²˜à²¡à²¦à²²à³à²²à²¿ ಆಜಾದೀ ಬಚಾವೋ ಸಮಿತಿ ದೊಡà³à²¡à²¦à³Šà³¦à²¦à³ ಪà³à²°à²¯à³‹à²—ಾಲಯವನà³à²¨à³ ಹೊ೦ದಿದೆ. ಗೋಬರೠಮತà³à²¤à³ ಬಯೋ ಗà³à²¯à²¾à²¸à³ ಅನà³à²¨à³ ಉಪಯೋಗಿಸಿ ವಾಹನ ಚಲಾಯಿಸà³à²µ ತ೦ತà³à²°à²œà³à²žà²¾à²¨à²µà²¨à³à²¨à³ ಈಗಾಗಲೇ ಅà²à²¿à²µà³ƒà²¦à³à²§à²¿à²ªà²¡à²¿à²¸à²²à²¾à²—ಿದೆ. à²à²¾à²°à²¤à²¦à²²à³à²²à²¿ ಒ೦ದೠಸಮೀಕà³à²·à³†à²¯ ಪà³à²°à²•ಾರ ಇ೦ದಿಗೂ ೬೦% ಸ೦ಚಾರ ಹಾಗೂ ಸಾಗಾಣಿಕೆ ಎತà³à²¤à²¿à²¨ ಗಾಡಿಗಳನà³à²¨à²¾à²§à²°à²¿à²¸à²¿à²¦à³†. ಅದಾಕà³à²•ಾಗಿಯೇ ಗಾಡಿಯ ಚಕà³à²°à²—ಳಲà³à²²à²¿ ಬೇರಿ೦ಗೠಅಳವಡಿಸà³à²µà²¤à³à²¤à²²à³‚ ಪà³à²°à²¯à³‹à²—ಗಳೠನಡೆಯà³à²¤à³à²¤à²¿à²µà³†. ಇ೦ದೠಖಾದಿಯನà³à²¨à³ ಉಪಯೋಗಿಸà³à²µà²µà²° ಸ೦ಖà³à²¯à³† ಶೇ.à³§ ಕà³à²•ಿ೦ತ ಕಡಿಮೆಯಾದರೂ ಅದೠ೨೦ ಲಕà³à²· ಜನರಿಗೆ ಉದà³à²¯à³‹à²—ವನà³à²¨à³Šà²¦à²—ಿಸಿದೆ. ಈ ಸ೦ಖà³à²¯à³†à²¯à²¨à³à²¨à³ ಕನಿಷà³à²Ÿ ಶೇ.೧೦ ಕà³à²•ೇರಿಸಿದರೂ ಅದೠ೨ ಕೋಟಿ ಜನರ ಉದà³à²¯à³‹à²—ಕà³à²•ೆ ಹಾದಿಯಾಗಬಹà³à²¦à³. ಇ೦ಥ ದೂರದೃಶà³à²Ÿà²¿à²¯ ಯೋಚನೆಯನà³à²¨à²¿à²Ÿà³à²Ÿà³à²•à³à²•ೊ೦ಡೠಕಳೆದ ೨೦ ವರà³à²·à²—ಳಿ೦ದ ಖಾದಿಯನà³à²¨à³ ಪà³à²°à³‹à²¤à³à²¸à²¾à²¹à²¿à²¸à³à²¤à³à²¤à²¿à²°à³à²µà²µà²°à²²à³à²²à²¿ ರಾಜೀವೠಮೊದಲಿಗರà³.
ಇನà³à²¨à³ à²à³‹à²ªà²¾à²²à³ à²à³‹à²ªà²¾à²²à³ ಅನಿಲ ದà³à²°à²‚ತ, ವಿಶà³à²µ ವà³à²¯à²¾à²ªà²¾à²° ಸಂಸà³à²¥à³†à²¯ ಮೇಲೆ ನಡೆದ à²à²¯à³‹à²¤à³à²ªà²¾à²¦à²• ದಾಳಿಯ ಕà³à²°à²¿à²¤ ಅವರ ಅà²à²¿à²ªà³à²°à²¾à²¯à²—ಳೠಅವರ ಲೇಖನಗಳಲà³à²²à²¿ ಸà³à²ªà²¶à³à²Ÿà²µà²¾à²—ಿವೆ. ಆದರೆ ಕೊನೇ ಕà³à²·à²£à²¦à²²à³à²²à²¿ ಸಾವೠಎದà³à²°à³ ನಿ೦ತಾಗಲೂ ವಿದೇಶಿ ಔಷಧಿ ತೆಗೆದà³à²•ೊಳà³à²³à²²à³ ಒಪà³à²ªà²¦ ಅವರ ದೇಶà²à²•à³à²¤à²¿à²—ೆ ನಿಜಕà³à²•ೂ hats off…..
RIP-Rajeev Dixit sir.
I’m shocked…
Thank god you wrote about it, otherwise we wouldnt have known about his demise
Not been covered in the media, big shame on the part of media!!
He really was a good speaker, he even came to my town..inspired lot of youth.
Maybe some of his thoughts are debatable, still we rarely see people with such impeccable integrity..in this modern ‘secular’ ‘fair’ political INDIA
Namaskar Pratap simha avarige
Sep 11, 2001 ra bagge Rajeev sir heliddu nija sir …Nanna hatra adar video ide sir.. adaralli tumba reasons heliddare.Rajeev avar matalli hurulittu sir.Innu investigation agta ide sir..
Thanks sir
ಪà³à²°à²¤à²¾à²ªà³ ಅವà³à²°à³†….ರಾಜೀವೠದಿಕà³à²·à³€à²¤à³ ಅವರ ಅಕಾಲಿಕ ಸಾವೠಒಂದೠದà³à²°à²‚ತ…ಅವರ ಮೊದಲ à²à²¾à²·à²£ ಕೇಳಿದà³à²¦à³ ಸà³à²®à²¾à²°à³ ೧೨ ವರà³à²·à²¦ ಹಿಂದೆ..ಅವರೠಹೇಳಿದ ಸà³à²µà²¦à³‡à²¶à³€ ವಿಚಾರ ಇಂದಿಗೂ ನಮà³à²®à²²à³à²²à²¿ ಉಳಿದಿದೆ…”ರಾಜೀವೠಅವರೠಈ ಬಾರಿ ಬಂದಾಗಲೂ à²à²¾à²·à²£, ಮà³à²‚ದಿನ ಬಾರಿಯೂ à²à²¾à²·à²£à²µà³‡. ಅದನà³à²¨à³ ಕೃತಿಗಿಳಿಸಲೠಪà³à²°à²¯à²¤à³à²¨à²¿à²¸à²²à²¿à²²à³à²²”…ಇದೠಅಕà³à²·à²° ಸಹ ತಪà³à²ªà²¾à²¦ ವಿಚಾರ à²à²•ಂದರೆ ..ಅವರೠತಮà³à²® ಎರಡನೆ ಸಂದರà³à²¶à²¨à²¦à²²à³à²²à²¿ ವರà³à²•ೠಶಾಪೠಅನà³à²¨à³ ನಡೆಸà³à²¤à³à²¤ ಇದà³à²¦à²°à³..ದೂರ ದೃಷà³à²Ÿà²¿à²¯ ಕೊರತೆ ಇದà³à²¦à²¦à³ ಅವರಿಗೆ ಅಲà³à²² …ಕೊರತೆ ಇದà³à²¦à²¿à²¦à³ ನಮà³à²® ಜನರಿಗೆ …ನೀವೇನೠR & D ಬಗà³à²—ೆ ಈಗ ಬರೀತಿರ ಅಲà³à²µ…ಅದನà³à²¨ ಅವà³à²°à³ ೧೦ ವರà³à²·à²¦ ಹಿಂದೇನೆ ಹೇಳಿದà³à²°à³….ಪà³à²²à³€à²¸à³ ಇಂತವರ ಬಗà³à²—ೆ ಲೇಖನ ಬರೆಯà³à²µ ಮà³à²‚ಚೆ ಸà³à²µà²²à³à²ª ಯೋಚಿಸಿ ಹಾಗೠವಿಮರà³à²¶à³† ಮಾಡಿ ಬರೆಯಿರಿ..
Hallo pratap sir!
I am regular reader of articles
It’s an good article keep it up pratap sir
Thanks
I remember Mr.Rajiv Dixit.He had come to my college in the year 2008.He spoke continuously for 3 hours….what a great orator he is!!End of the day the whole crowd was impressed by his speech….that was probably the first speech i heard with full attention from beginning to the end….He was so simple in his appearance…He spoke about India,Indian culture.He spoke about ayurveda and about the diseases which can be cured using medicinal plants available at our homes.His speech was really inspiring.It was really a shock when i heard that he passed away……but people like him remain in the hearts of people whom he inspired.
Long back i had asked u are u inspired by Rajiv dixit and u had told me ” No i do not endorse to any of his views ” remember ?
Look Pratap he was a good orator and activist why do u except more from him why should we after all it is up to the people to follow swadesi…..I personally know many people who started using our goods and continued doing so after listening to Rajiv dixit !
Like u create awareness as a journo he did his job ….Not to forget he Worked with A.B.Vajapayee during NDA government …………
Regards
Darshan J
India has lost it’s proud son . .
his ideas were very clear … avara ankanagalu 2000 -2003 vijayakarnatakadalli prakatavaguttiddavu..i salute him
obba rajakarene satre e chanels dodda sudde madtave but entha vakte satre ondu head line kuda hakalla shame for our chanels