Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಇಷ್ಟಕ್ಕೂ ಇವರ್ಯಾರು, ಇವರ ಕೊಡುಗೆ, ಸಾಧನೆ ಏನು?

ಇಷ್ಟಕ್ಕೂ ಇವರ್ಯಾರು, ಇವರ ಕೊಡುಗೆ, ಸಾಧನೆ ಏನು?

ರಾಹುಲ್ ಗಾಂಧಿ!

ಇಷ್ಟಕ್ಕೂ ಈತ ಯಾರು? ಬ್ರಿಟಿಷರ ವಿರುದ್ಧ ಟೊಂಕಕಟ್ಟಿ ನಿಂತ ಬಾಲ ಗಂಗಾಧರ ತಿಲಕ್, ಲಾಲಾ ಲಜಪತ್ ರಾಯ್್ನೋ? ಅಹಿಂಸಾ ಚಳವಳಿ ಆರಂಭಿಸಿದ ಮಹಾತ್ಮ ಗಾಂಧಿಯೋ? ಭಾರತ ರಾಷ್ಟ್ರೀಯ ಸೇನೆಯನ್ನು ಕಟ್ಟಿದ ಸುಭಾಶ್್ಚಂದ್ರ ಬೋಸ್ ಅವರೋ? ಕುಣಿಕೆಗೆ ತಲೆಕೊಟ್ಟ ಭಗತ್ ಸಿಂಗ್್ನೋ? ಈ ದೇಶದ ಸಂವಿಧಾನ ರೂಪಿಸಿದ ಅಂಬೇಡ್ಕರ್ರೋ? ಅಣುಶಕ್ತಿಯ ಮೂಲ ಪ್ರತಿಪಾದಕ ಹೋಮಿ ಜಹಾಂಗೀರ್ ಭಾಭಾನೋ? ಶ್ರೀನಗರದ ವಾಯುನೆಲೆಯನ್ನು ಉಳಿಸಿದ ಸೋಮನಾಥ ಶರ್ಮನೋ? ಕಾರ್ಗಿಲ್್ನಲ್ಲಿ ಜೀವಕೊಟ್ಟ ವಿಕ್ರಂ ಭಾತ್ರಾ, ಸೌರಭ್ ಕಾಲಿಯಾನೋ?

ಯಾರೀತ?

ರಾಜಕೀಯ ಲಾಭದ ಉದ್ದೇಶ ಇಟ್ಟುಕೊಂಡು ಉತ್ತರ ಪ್ರದೇಶದ ಭಟ್ಟಾ ಪರ್ಸೂಲ್್ಗೆ ಈತ ಪಾದಯಾತ್ರೆ ಹೊರಟ ಕೂಡಲೇ ಮಾಧ್ಯಮಗಳೇಕೆ ಹುಚ್ಚೆದ್ದು ಕುಣಿಯತೊಡಗಿವೆ? ಯಾವ ಕಾರಣಕ್ಕಾಗಿ ಈತನ ಯಾತ್ರೆ “Media event’  ಆಗಿಬಿಟ್ಟಿದೆ? ಕಳೆದ ಮೇನಲ್ಲಿ ಭಟ್ಟಾ ಪರ್ಸೂಲ್್ಗೆ ಆಗಮಿಸಿ 8 ರೈತರನ್ನು ಪ್ರಧಾನಿ ಬಳಿಗೆ ಕೊಂಡೊಯ್ದು ಎರಡು ಗ್ರಾಮಗಳ ಒಟ್ಟು 70 ಜನರನ್ನು ಕಗ್ಗೊಲೆಗೈಯ್ಯಲಾಗಿದೆ, ಅವರನ್ನು ಚಿತೆಗೇರಿಸಿದ ಚಿತ್ರವಿದು ಎಂದು ಸುಳ್ಳೇ ಸುಳ್ಳು ಹೇಳಿ ಸಿಕ್ಕಿಹಾಕಿಕೊಂಡಿದ್ದ ವ್ಯಕ್ತಿ ಮತ್ತೆ ಭಟ್ಟಾ ಪರ್ಸೂಲ್್ಗೆ ಹೊರಟ ಕೂಡಲೇ ಮಾಧ್ಯಮಗಳೇಕೆ ಬುದ್ಧಿಗೇಡಿಗಳಂತೆ ವರ್ತಿಸುತ್ತಿವೆ? ಯಾರ ಬಗ್ಗೆಯೂ ಇರದ, ರಾಹುಲ್ ವಿಷಯದಲ್ಲಿ ಮಾತ್ರ ಕಾಣುವ ಇಂಥದ್ದೊಂದು ಮೋಹವೇಕೆ? ಆತ ಭಾರತವನ್ನು ಉದ್ಧಾರ ಮಾಡುವುದಕ್ಕಾಗಿ ಜನ್ಮತಳೆದಿರುವ ಅವತಾರ ಪುರುಷನೇನು? ಬಡವರ ಮೇಲೆ, ಬಡವರ ಮೇಲಾಗುವ ದೌರ್ಜನ್ಯಗಳ ಬಗ್ಗೆ, ಅತ್ಯಾಚಾರಗಳ, ಭ್ರಷ್ಟಾಚಾರದ ಬಗ್ಗೆ ಆತನಿಗೆ ನಿಜಕ್ಕೂ ಕಾಳಜಿಯಿದೆ ಎನ್ನುವುದಾದರೆ ದೌರ್ಜನ್ಯ, ಅತ್ಯಾಚಾರಗಳು ಸಂಭವಿಸುತ್ತಿರುವುದು ಬರೀ ಉತ್ತರ ಪ್ರದೇಶದಲ್ಲಿ ಮಾತ್ರವೆ? ರಾಹುಲ್ ಗಾಂಧಿಯವರ ಕಾಂಗ್ರೆಸ್ ಪಕ್ಷ ಆಳ್ವಿಕೆ ನಡೆಸುತ್ತಿರುವ, ಅವರ ಅಮ್ಮ ಸೋನಿಯಾ ಗಾಂಧಿಯವರು ನಿಯುಕ್ತಿ ಮಾಡಿರುವ ಕಿರಣ್ ರೆಡ್ಡಿ ಮುಖ್ಯಮಂತ್ರಿಯಾಗಿರುವ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ನಾದೆಂಡ್ಲ ಗ್ರಾಮದ ಎನ್. ಮೌನಿಕಾ ಎಂಬ 16 ವರ್ಷದ ಯುವತಿ ಕೊಲೆಯಾಗಿ ಹೋಗಿದ್ದಾಳೆ. ಆಂಧ್ರ ಇವ್ಯಾಂಜೆಲಿಕಲ್ ಲುಥೆರನ್ ಚರ್ಚ್್ನ ಪಾದ್ರಿ ದಾಸಿ ಅಜಯ್ ಬಾಬು ಆಕೆಯ ಮೇಲೆ ಅತ್ಯಾಚಾರವೆಸಗಿ, ಸೀಮೆ ಎಣ್ಣೆ ಸುರಿದು ಸುಟ್ಟಿದ್ದಾನೆ. ಆಕೆಯ ಚೀರಾಟವನ್ನು ಕೇಳಿ ಧಾವಿಸಿದ ನೆರೆಯವರು ಗುಂಟೂರು ಜಿಲ್ಲಾ ಆಸ್ಪತ್ರೆಗೆ ಸೇರಿಸಿದ ಕ್ಷಣದಲ್ಲೂ ಸ್ಥಳಕ್ಕೆ ಆಗಮಿಸಿದ ಪಾದ್ರಿಯ ಚಿಕ್ಕಪ್ಪ ಸ್ಟೀವನ್, ಅಡುಗೆ ಮಾಡುತ್ತಿದ್ದಾಗ ಬೆಂಕಿ ಆಕಸ್ಮಿಕ ಸಂಭವಿಸಿ ಸುಟ್ಟುಕೊಂಡೆ ಎಂದು ಹೇಳಿಕೆ ಕೊಡುವಂತೆ ಒತ್ತಡ ಹೇರಿ ಸಿಕ್ಕಿಹಾಕಿಕೊಂಡಿದ್ದಾನೆ. ಕಳೆದ ಮಾರ್ಚ್್ನಲ್ಲಿ ಆಂಧ್ರದ ಚಿರಾಲಾದಲ್ಲಿ ಕಾಲೇಜು ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಯಿತು. ಏಪ್ರಿಲ್್ನಲ್ಲಿ ಹೈದರಾಬಾದ್ ಬಳಿಯ ನಾರಾಯಣಗುಡ ಬ್ಯಾಪ್ಟಿಸ್ಟ್ ಚರ್ಚ್್ನಲ್ಲಿ ಪ್ರಾರ್ಥನೆ ಮುಗಿಸಿ ಹೋಗುತ್ತಿದ್ದ 18 ವರ್ಷದ ಯುವತಿಯನ್ನು ಕಾರಿನಲ್ಲಿ ತುಂಬಿಕೊಂಡು ಹೋಗಿ ರೇಪ್ ಮಾಡಲಾಯಿತು.

ಇವ್ಯಾವುವೂ ರಾಹುಲ್ ಗಾಂಧಿಯವರ ಕಣ್ಣಿಗೆ ಕಾಣಲಿಲ್ಲವೆ?

ಇವು ಅತ್ಯಾಚಾರ, ಅನಾಚಾರಗಳಲ್ಲವಾ? ಅಥವಾ ಆಂಧ್ರದಲ್ಲಿ ಅಧಿಕಾರದಲ್ಲಿರುವುದು ಕಾಂಗ್ರೆಸ್ ಸರಕಾರವಾಗಿದ್ದರಿಂದ ಆತನ ಬಾಯಿಂದ ಮಾತು ಹೊರಡುತ್ತಿಲ್ಲವೋ? ಜಗತ್ತಿನ ಪ್ರಮುಖ ರಾಷ್ಟ್ರಗಳ ರಾಯಭಾರ ಕಚೇರಿಯನ್ನು ಹೊಂದಿರುವ ದೇಶದ ರಾಜಧಾನಿ ದೆಹಲಿಯನ್ನು “ರೇಪ್ ಕ್ಯಾಪಿಟಲ್್’ ಮಾಡಿರುವವರು ಯಾರು? ಆಗಿಂದಾಗ್ಗೆ ಚಲಿಸುವ ಕಾರುಗಳಲ್ಲಿ ಎಳೆದೊಯ್ದು ಅತ್ಯಾಚಾರವೆಸಗುವ ಪ್ರಕರಣಗಳು ಸಂಭವಿಸುತ್ತಿದ್ದರೂ ರಾಹುಲ್ ಎಂದಾದರೂ ಬಾಯಿ ತೆರೆದಿದ್ದಾರೆಯೇ? ದೆಹಲಿಯಲ್ಲಿರುವುದೂ ಕಾಂಗ್ರೆಸ್ ಸರಕಾರವೇ ಹಾಗೂ ದೆಹಲಿ ಪೋಲಿಸ್ ಪಡೆಯನ್ನು ನಿಯಂತ್ರಿಸುವುದೂ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರವೇ. ಈ ಪ್ರಕರಣಗಳಿಗೆ ಯಾರನ್ನು ದೂರುತ್ತಾರೆ? ಈ ರಾಹುಲ್ ಗಾಂಧಿ ಯಾವ ಯುವ ಕಾಂಗ್ರೆಸ್್ನ ಚುಕ್ಕಾಣಿ ಹಿಡಿದಿದ್ದಾರೋ ಅದಕ್ಕೆ ಎಂತಹ ಇತಿಹಾಸವಿದೆ ಗೊತ್ತಾ? ಇಡೀ ದೇಶವನ್ನೇ ದಿಗ್ಬ್ರಮೆಗೊಳಿಸಿದ 1995ರ ತಂದೂರ್ ಕೊಲೆ ಪ್ರಕರಣವನ್ನು ನೆನಪಿಸಿಕೊಳ್ಳಿ. ಪತ್ನಿ ನೈನಾ ಸಾಹ್ನಿಯನ್ನು ಕೊಂದು ಸುಟ್ಟುಹಾಕಿದ ಸುಶೀಲ್ ಶರ್ಮಾ ಕೂಡಾ ಯುವ ಕಾಂಗ್ರೆಸ್ ನೇತಾರನಾಗಿದ್ದ. 1999ರಲ್ಲಿ ಜೆಸ್ಸಿಕಾ ಲಾಲ್್ನನ್ನು ಕೊಂದವನೂ ಕೂಡ ಮನು ಶರ್ಮಾ ಎಂಬ ಯೂತ್ ಕಾಂಗ್ರೆಸ್ ನಾಯಕ!

ಈ ಮಧ್ಯೆ ಭಟ್ಟಾ ಪರ್ಸೂಲ್ ಪಾದಯಾತ್ರೆ ಸಂದರ್ಭದಲ್ಲಿ “ಉತ್ತರ ಪ್ರದೇಶವನ್ನು ದಲ್ಲಾಳಿಗಳು, ಮಧ್ಯವರ್ತಿಗಳು ಆಳುತ್ತಿದ್ದಾರೆ’ ಎಂದು ರಾಹುಲ್ ಹೇಳಿಕೆ ಕೊಟ್ಟಿದ್ದಾರೆ. ಉತ್ತರ ಪ್ರದೇಶವನ್ನು ದಲ್ಲಾಳಿ ಆಳುತ್ತಿದ್ದಾರೆಂದರೆ ಕೇಂದ್ರವನ್ನು ಆಳುತ್ತಿರುವವರು ಯಾರು? 2ಜಿ ಹಗರಣ, ಕಾಮನ್ವೆಲ್ತ್ ಹಗರಣ, ಆದರ್ಶ್ ಹೌಸಿಂಗ್ ಹಗರಣ ಇಂಥ ದೇಶದ ಇತಿಹಾಸದಲ್ಲೇ ಅತಿದೊಡ್ಡ ಹಗರಣಗಳನ್ನು ಸೃಷ್ಟಿಸಿರುವ ಕಾಂಗ್ರೆಸ್ ಪಕ್ಷದ ನೇತಾರರಾದ ಅಮ್ಮ-ಮಕ್ಕಳ ಇಬ್ಬಂದಿ ಧೋರಣೆ ಮಾಧ್ಯಮಗಳಿಗೆ ಗೊತ್ತಿಲ್ಲವೇನು? ಇವರು, ಇವರ ಕುಟುಂಬದ್ದು ಎಂತಹ “ಶುದ್ಧಹಸ್ತ’ ಎಂಬುದು ಈ ದೇಶದ ಜನರಿಗೆ ಗೊತ್ತಿಲ್ಲವೆಂದು ಭಾವಿಸಿದ್ದಾರೇನು? ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಮೊದಲ ಹಗರಣವಾದ ಜೀಪ್ ಹಗರಣ ನಡೆದಿದ್ದು ನೆಹರು ಪ್ರಧಾನಿಯಾಗಿದ್ದಾಗ. ತುರ್ತು ಪರಿಸ್ಥಿತಿ ಹೇರಿದ ಇಂದಿರಾ ಗಾಂಧಿಯವರಂತೂ ಪ್ರಜಾಪ್ರಭುತ್ವದ ಕೊಲೆಗಾತಿ. ಇನ್ನು ಗಲೀ ಗಲೀ ಮೇ ಶೋರ್ ಹೇ, ರಾಜೀವ್ ಗಾಂಧೀ ಚೋರ್ ಹೇ… ಎಂಬ ಹಾಡು ದೇಶದ ಮೂಲೆ ಮೂಲೆಗಳಲ್ಲೂ ಮೊಳಗಲು ಕಾರಣರಾದವರು ಹಾಗೂ ಭ್ರಷ್ಟಾಚಾರವನ್ನು ಸಾರ್ವತ್ರೀಕರಣ ಮಾಡಿದ್ದೇ ರಾಹುಲ್ ತಂದೆ ರಾಜೀವ್ ಗಾಂಧಿ. ಬೋಫೋರ್ಸ್ ಹಗರಣ ಬಯಲಾದಾಗ “ಅಯ್ಯೋ, ಪ್ರಧಾನಿಯೇ ಲಂಚ ತೆಗೆದುಕೊಳ್ಳುತ್ತಾನೆ, ನಮ್ಮದೇನು ಮಹಾ..’ ಎಂಬ ಮಾತು ಕೇಳಿ ಬಂತು. ಆ ಹಗರಣದಿಂದ ಒಬ್ಬ ಸಾಮಾನ್ಯ ಸರಕಾರಿ ನೌಕರನಿಗೂ ಲಂಚ ತೆಗೆದುಕೊಳ್ಳಲು ಪ್ರೇರಣೆ, ಆತ್ಮಸ್ಥೈರ್ಯ ದೊರೆಯಿತು. ಇಂತಹ ಹಿನ್ನೆಲೆಯಿಂದ ಬಂದಿರುವ ರಾಹುಲ್ ಗಾಂಧಿ ಅದ್ಯಾವ ಮುಖ ಇಟ್ಟುಕೊಂಡು ಈ ರೀತಿಯ ಹೇಳಿಕೆ ನೀಡಿದ್ದಾರೆ? ಅವರ “10 ಜನಪಥ್್’ ನಿವಾಸದಿಂದ ಜಂತರ್ ಮಂಥರ್್ಗಿರುವ ಅಂತರ ಕೇವಲ 2 ಕಿ.ಮೀ. ಇತ್ತ ದೆಹಲಿಯಿಂದ ಭಟ್ಟಾ ಪರ್ಸೂಲ್್ಗೆ 100 ಕಿ.ಮೀ. ಒಂದು ವೇಳೆ ರಾಹುಲ್ ಗಾಂಧಿಗೆ ಭ್ರಷ್ಟಾಚಾರದ ಬಗ್ಗೆ ನಿಜಕ್ಕೂ ಕಾಳಜಿಯಿದ್ದಿದ್ದರೆ ಅಣ್ಣಾ ಹಜಾರೆ ಜಂತರ್ ಮಂಥರ್್ನಲ್ಲಿ ಉಪವಾಸ ಕುಳಿತಿದ್ದಾಗ ಏಕೆ ಹೋಗಲಿಲ್ಲ? 100 ಕಿ.ಮೀ. ದೂರಕ್ಕೆ ಹೋಗಲು ಸಮಯವಿದೆ, 2 ಕಿಲೋ ಮೀಟರ್ ಹತ್ತಿರದಲ್ಲಿರುವ ಜಂತರ್ ಮಂಥರ್ ದೂರವಾಗಿ ಬಿಡುತ್ತದೆಯೇ?

ಇವರೆಂತಹ ವ್ಯಕ್ತಿಯೆಂದರೆ ಉತ್ತರ ಪ್ರದೇಶದಲ್ಲಿ ಸಂಭವಿಸುತ್ತಿರುವ ಘಟನೆಗಳನ್ನು ಉಲ್ಲೇಖಿಸಿ,“I feel ashamed to call myself an INDIAN after seeing what has happened here in UP’ ಎನ್ನುತ್ತಾರೆ. ಈ ದೇಶದ ಇತಿಹಾಸದಲ್ಲೇ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದ ವಿದರ್ಭಗಳಲ್ಲಿ. ಈ ಎರಡೂ ರಾಜ್ಯಗಳಲ್ಲೂ ಕಾಂಗ್ರೆಸ್ ಆಡಳಿತವಿದೆ. ರೈತರ ಕೃಷಿ ಭೂಮಿ ಸ್ವಾಧೀನದ ಬಗ್ಗೆ ದೊಡ್ಡ ಹುಯಿಲೆದ್ದಿರುವುದೇ ಹರ್ಯಾಣದಲ್ಲಿ. ಅಲ್ಲೂ ಕಾಂಗ್ರೆಸ್ ಆಡಳಿತವಿದೆ. ಆಗ ಭಾರತೀಯನೆಂದು ಹೇಳಿಕೊಳ್ಳಲು ರಾಹುಲ್್ಗೆ ಅವಮಾನವೆನಿಸಲಿಲ್ಲವೆ? ರೈತರ ಕೃಷಿ ಭೂಮಿಯನ್ನು ಯದ್ವಾತದ್ವಾ ಸ್ವಾಧೀನಪಡಿಸಿಕೊಳ್ಳುವ ವಿಚಾರಕ್ಕೆ ಬರುವುದಾದರೂ ಓಬಿರಾಯನ ಕಾಲದ ಕಾಯಿದೆಗೆ ತಿದ್ದುಪಡಿ ತರಬೇಕಾಗಿರುವುದಾದರೂ ಯಾರು? ರೈತರ ಭೂಮಿಯನ್ನು ಮನಸೋಇಚ್ಛೆ ಸ್ವಾಧೀನಪಡಿಸಿಕೊಳ್ಳುವುದನ್ನು ತಪ್ಪಿಸುವ ಸಲುವಾಗಿ ಕಾಯಿದೆಗೆ ತಿದ್ದುಪಡಿ ತರುವ ವಿಧೇಯಕ 2007ರಿಂದಲೂ ಸಂಸತ್ತಿನ ಮುಂದಿದ್ದರೂ ಅದಕ್ಕೆ ಅಂಗೀಕಾರ ಪಡೆದುಕೊಳ್ಳಲು ಕಾಂಗ್ರೆಸ್ ಏಕೆ ಮನಸ್ಸು ಮಾಡುತ್ತಿಲ್ಲ? ಇಷ್ಟೆಲ್ಲಾ ಗೋಮುಖವ್ಯಾಘ್ರ ಧೋರಣೆ ಅನುಸರಿಸುತ್ತಿದ್ದರೂ, ಸ್ವತಂತ್ರವಾಗಿ ಒಂದು ಒಳ್ಳೆಯ ಭಾಷಣ ಮಾಡುವ ತಾಕತ್ತಿಲ್ಲದಿದ್ದರೂ, ವಿದ್ಯಾರ್ಥಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವ ಸಾಮರ್ಥ್ಯವಿಲ್ಲದಿದ್ದರೂ ಮಾಧ್ಯಮಗಳು ಮಾತ್ರ ಈತನನ್ನು “ಯುತ್ ಐಕಾನ್್’ (ಯುವಜನತೆಯ ಮುಕುಟಮಣಿ) ಎಂದು ಹಾಡಿ ಹೊಗಳುತ್ತವೆ. ಕಾಂಗ್ರೆಸ್ ಪಕ್ಷದಲ್ಲೇ ಮಿಲಿಂದ್ ದಿಯೋರಾ ಇದ್ದಾರೆ, ಸಚಿನ್ ಪೈಲಟ್, ಜಿತೇನ್ ಪ್ರಸಾದ್, ಜ್ಯೋತಿರಾಧಿತ್ಯ ಸಿಂಧಿಯಾ, ಸಂದೀಪ್ ದೀಕ್ಷಿತ್ ಇದ್ದಾರೆ. ಇವರ್ಯಾರು ಮಾಧ್ಯಮಗಳಿಗೆ “ಯುತ್ ಐಕಾನ್್’ ಎನಿಸುವುದಿಲ್ಲ. ಅಣಕವೆಂದರೆ, ನಮ್ಮ ಇಂಗ್ಲಿಷ್ ಮಾಧ್ಯಮಗಳಿಗೆ ನಲವತ್ತೊಂದು ವರ್ಷ ಕಳೆದು ನಲವತ್ತೆರಡಕ್ಕೆ ಕಾಲಿಟ್ಟಿರುವ ಈತ ಯುವಜನತೆಯ ಮುಕುಟಮಣಿಯಾಗಿ ಕಾಣುವ ಜತೆಗೆ “ಮೋಸ್ಟ್ ಎಲಿಜಿಬಲ್ ಬ್ಯಾಚುಲರ್್’ ಆಗಿಯೂ ತೋರುತ್ತಾರೆ! ಬ್ರಿಟನ್, ಅಮೆರಿಕದಲ್ಲಿ ಈತನ ವಯಸ್ಸಿಗೆ ಬರುವಷ್ಟರಲ್ಲಿ ದೇಶದ ಪ್ರಧಾನಿ, ಅಧ್ಯಕ್ಷರಾಗಿರುತ್ತಾರೆ. ಅಷ್ಟೇಕೆ ಈತನ ತಂದೆ ರಾಜೀವ್ ಗಾಂಧಿಯೇ ಪ್ರಧಾನಿಯಾಗಿದ್ದರು. ಒಂದು ವೇಳೆ, ರಾಹುಲ್ ಅವಿವಾಹಿತರಾಗಿಯೇ ಉಳಿದರೆ ಅವರಿಗೆ 60, 70 ವರ್ಷಗಳಾದಾಗಲೂ ಈ ಮಾಧ್ಯಮಗಳು “ಮೋಸ್ಟ್ ಎಲಿಜಿಬಲ್ ಬ್ಯಾಚುಲರ್್’ ಎನ್ನುತ್ತವೇನೋ?!

ಆದರೆ ಕಾಂಗ್ರೆಸ್ ಪಕ್ಷದ ಬಗ್ಗೆ ಅಡಿಯಾಳು ಮನಃಸ್ಥಿತಿಯನ್ನು ಹೊಂದಿರುವ ಮಾಧ್ಯಮಗಳು ಯಾರನ್ನು ಮುಕುಟಮಣಿ ಎನ್ನುತ್ತವೆಯೋ ಆತನ ಬಗ್ಗೆ ಹಾಗೂ ಮಾಧ್ಯಮಗಳ ಗುಲಾಮಗಿರಿಯ ಬಗ್ಗೆ ಯುವಜನತೆಯ ಆನ್್ಲೈನ್ ತಾಣಗಳಾದ ಫೇಸ್್ಬುಕ್ ಹಾಗೂ ಟ್ವಿಟ್ಟರ್್ಗಳಲ್ಲಿ ಎಂತಹ ಮೆಸೇಜ್್ಗಳು ಕಾಣಸಿಗುತ್ತವೆ ಎಂಬುದನ್ನು ನೋಡಿ…

1. ರಾಹುಲ್್ಗಾಂಧಿ ಉತ್ತರ ಪ್ರದೇಶದಲ್ಲಿ ಯಾಕೆ ಪಾದಯಾತ್ರೆ ಕೈಗೊಂಡಿದ್ದಾರೆಂದು ಗೊತ್ತಾ? ವಾಹನಗಳು ಓಡಾಡುವಂಥ ರಸ್ತೆಗಳನ್ನು ನಿರ್ಮಿಸಬೇಕೆಂದು 50 ವರ್ಷ ದೇಶವಾಳಿದ ಆತನ ಪಕ್ಷಕ್ಕೆ ಅನಿಸಲೇ ಇಲ್ಲ  -ಅಮಿತ್ ಮಾಳವೀಯ

2. ಹರಿಯಾಣದ ಕಾಂಗ್ರೆಸ್ ಸರಕಾರ ಭೂಸ್ವಾಧೀನ ಮಾಡಿಕೊಳ್ಳುತ್ತಿರುವುದರ ವಿರುದ್ಧ ಅಂಬಾಲದ 6 ಗ್ರಾಮಗಳ ಜನ ಧರಣಿ ನಡೆಸುತ್ತಿದ್ದಾರೆ. ರಾಹುಲ್ ಈ ಗ್ರಾಮಗಳಿಗೇಕೆ ಬರುವುದಿಲ್ಲ?  -ಮೃತ್ಯುಂಜಯ ಕುಮಾರ್ ಝಾ

3. ರಾಹುಲ್ ಗಾಂಧಿ ರೋಟಿ ತಿಂದರು ಎನ್ನುತ್ತಿವೆ ಸುದ್ದಿ ಚಾನೆಲ್್ಗಳು!  -ಪ್ರಶಾಂತ್

4. ಕೆಲವು ಇಂಗ್ಲಿಷ್ ಚಾನೆಲ್್ಗಳು ರಾಹುಲ್್ಗಾಂಧಿ ಎಲ್ಲಿ ಸ್ನಾನ ಮಾಡಿದರು, ಎಷ್ಟು ರೋಟಿ ತಿಂದರು, ಎಷ್ಟು ಕಿಲೋ ಮೀಟರ್ ನಡೆದರು ಎಂಬ ಹುಚ್ಚುಚ್ಚು ಸುದ್ದಿ ಪ್ರಸಾರ ಮಾಡುತ್ತಿವೆ. -ರಿತುಪರ್ಣ ಘೋಷ್

5. ನಿಮ್ಮಲ್ಲಿ ಯಾರಾದರೂ ರಾಮಲೀಲಾ ಮೈದಾನದಲ್ಲಿ ನಡೆದ ದೌರ್ಜನ್ಯದ ಬಗ್ಗೆ ರಾಹುಲ್್ಗಾಂಧಿ ಮಾತನಾಡಿದ್ದನ್ನು ನೋಡಿದಿರಾ? ಆಂಧ್ರಪ್ರದೇಶದ ರೈತರ ಬವಣೆ ಬಗ್ಗೆ ಧ್ವನಿಯೆತ್ತಿದ್ದನ್ನು ಕೇಳಿದ್ದೀರಾ? ಇವು Paid TV channels’.  -ನಿತೀಶ್ ಕುಮಾರ್

6. ಈ ರಾಹುಲ್ ಗಾಂಧಿಗೆ ಬಿಜೆಪಿ/ಬಿಎಸ್ಪಿ ಆಡಳಿತವಿರುವ ರಾಜ್ಯಗಳೇ ಏಕೆ ಕಾಣುತ್ತವೆ? ಜೈತಾಪುರ್, ಲವಾಸಾ ಹಾಗೂ ಕೊಂಕಣ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಭೂಹಗರಣಗಳೇಕೆ ಕಾಣುವುದಿಲ್ಲ?  -ಅಶೋಕ್ ಕುಮಾರ್.

ಟ್ವಿಟ್ಟರ್್ನಲ್ಲಿ ‘“rahulfacts’‘ ಎಂಬ ಶೀರ್ಷಿಕೆಯಡಿ ಆತನ ಇಬ್ಬಂದಿ ನಿಲುವನ್ನು ತೊಳೆಯುವ ಕೆಲಸ ನಿತ್ಯವೂ ನಡೆಯುತ್ತಿದೆ. ಒಬ್ಬ ಯುತ್ ಐಕಾನ್ ಆದವರಿಗೆ ಫೇಸ್್ಬುಕ್, ಟ್ವಿಟ್ಟರ್್ಗಳು ಬಹಳ ಮುಖ್ಯ. ಇವರೆಡರಲ್ಲೂ ರಾಹುಲ್ ಹಾಗೂ ಮೋದಿ ಬಗ್ಗೆ ವ್ಯಕ್ತವಾಗುವ ಅಭಿಪ್ರಾಯಗಳನ್ನು ಗಮನಿಸಿ, ಅಭಿಮಾನಿಗಳ ಸಂಖ್ಯೆಯನ್ನೂ ತಾಳೆ ಹಾಕಿದರೆ ಯಾರು ಯುವಜನತೆಯ ಮುಕುಟಮಣಿ ಎಂಬುದು ಗೊತ್ತಾಗುತ್ತದೆ. ಉತ್ತರ ಪ್ರದೇಶವನ್ನು ದಲ್ಲಾಳಿ ಆಳುತ್ತಿದ್ದಾರೆ ಎಂಬ ರಾಹುಲ್ ಹೇಳಿಕೆಯನ್ನು ಚಾನೆಲ್್ಗಳು ಬ್ರೇಕಿಂಗ್ ನ್ಯೂಸ್ ರೂಪದಲ್ಲಿ ಅತಿ ಪ್ರಚಾರಕೊಟ್ಟು ಪ್ರಸಾರ ಮಾಡುತ್ತಿದ್ದರೆ, ‘UP is run by touts may be, But what about the whole country it is being run by mega touts’ ಎಂದು ಯುವಜನತೆ ಮುಖಕ್ಕೆ ಉಗುಳುತ್ತಿತ್ತು.

ಪತ್ರಿಕೋದ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ಥಂಬ ಎನ್ನುತ್ತಾರೆ. ಇಂಗ್ಲಿಷ್ ಚಾನೆಲ್್ಗಳು ಅದನ್ನು ನೆಹರು ಕುಟುಂಬವನ್ನು ಹೊತ್ತುನಿಲ್ಲುವ ಸ್ಥಂಬವೆಂದು ಭಾವಿಸಿದಂತಿದೆ. ತೆಲಂಗಾಣ ಸಮಸ್ಯೆ ಇಡೀ ಆಂಧ್ರಪ್ರದೇಶವೇ ರಣರಂಗವಾಗುವ ಅಪಾಯವನ್ನು ತಂದೊಡ್ಡುತ್ತಿರುವ ಸಮಯದಲ್ಲೂ ಚಾನೆಲ್್ಗಳು ರಾಹುಲ್್ಗಾಂಧಿಯ ಬಾಲ ಹಿಡಿದು ಹೊರಟಿರುವುದನ್ನು ನೋಡಿದರೆ ಹಾಗನಿಸದೇ ಇರದು. ಛೇ!

175 Responses to “ಇಷ್ಟಕ್ಕೂ ಇವರ್ಯಾರು, ಇವರ ಕೊಡುಗೆ, ಸಾಧನೆ ಏನು?”

  1. Sandeep Kharvi says:

    Good work pratap………….

  2. Raghavendra prasad c says:

    if ganghi is not added to ther name they are big zero

  3. Puneeth S says:

    Pratap simha sir,
    I accept whatever you tell about the facts of Rahul gandhi and Congress politics. I have red all the articles of you. I admire your information about the politics as wll as critics abt politics and real hard facts happening in india.
    BUT, BUT
    Your writings are always towards saffronisation Mr prathap. I don’t tell or accept BJP as communal party, I don’t tell it is towards hinduism..etc. but still now a days BJP is much much worst party than any other. Even RSS guys statements doen’t have any value. BJP has thrown all its principles to air. The best example is worst worst politics in karnataka. If you are so much concerned about our society, please make imapct to karnataka people by writing abt the worst politics of karnataka.
    Bring change in karnataka by your sharp words
    Tell to people what is yedurappa
    Tell about reddy’s
    Pls never ever support BJP……..in karnataka
    What can be made to BJP in Karanataka

  4. Channu says:

    Estakku congress sarkara yen maha kelsa madideyanta avaru ennu badkiddare anta gottagtaella. Yakandre yaro madiro kelasakke tamma hesaru hakikollutaralla evaranna……yen anta anbeku gottagtaella. janarinda terige (TAX) collect madiro duddalli bada janarige mane,ration,etc (Example-“indira avas yojaneyadi” mane) kottu adanna tamma hesaralli helikollokke avarige nachikeyagodilva.

    Ade NDA bjp sarkar madilva kelsa “”Pradhana mantri sadak (road) rojgar yojane” ennu bekadastide evaradu hagarana 30 year Evara Muttat(neharu),ajji (indira gandhi),Appa (Rajiv Gandhi) 30-35 years sarkara tamma kaiyallittukondu yen maha ghana karyya madiddare helali evaru.

    Astakku UPA Congree yen evara manetanakkaste simitana or congres nalli bere yaru nayakaragoddakke like elvo anta anumana!!!!?????

    Ennadru Valle sarkara barali anta bharatada prajegvalige ond request…..

  5. Muniraja.H.N says:

    very fantastic article…

    s sir ….realy correct bcoz……..who is the Rahul….he just ………nothing….nothing totally 00000000000000….

  6. Pradeep says:

    Nice article!
    Ridiculous media and ridiculous politicians as well,people minset need to be changed and people should bring change for the country.i hope he never become prime minister of INDIA because he is immeture,corrupt,lack of vision.love your writings
    thank you!

  7. PRATHAP DESHA DROHI NAN MAKLUNNA YERANNU BEEDUVUDU BEDA NEEVU BAREYUVA DESHA BAKTHI ARTICLE NAM TUMKUR DESHA PREMIGALGE TUMBA ISHTA SIR DESH DROHIGALA MELE BRASHTACHARIGAL MELE YUDDA SARI SIR NIM JATEGE NAVU IRTIVI EDI YUVA SKAKTHINE NIM JATE IRRUTE HARA HARA HARA MAHADEV VANDE MATARAM

  8. PRATHAP DESHA DROHI NAN MAKLUNNA YERANNU BEEDUVUDU BEDA NEEVU BAREYUVA DESHA BAKTHI ARTICLE NAM TUMKUR DESHA PREMIGALGE TUMBA ISHTA SIR DESH DROHIGALA MELE BRASHTACHARIGAL MELE YUDDA SARI SIR NIM JATEGE NAVU IRTIVI EDI YUVA SKAKTHINE NIM JATE IRRUTE HARA HARA HARA MAHADEV VANDE MATARAM jai hind

  9. NARENDRA MODI BAGGE KETTADAGI MATHADKE YAV KETTA OOLAKU ADIKARA ILLA PLEASE DONT TALK OPPOSITE TO MODHI

  10. chandan BK says:

    Hi Prathap,

    Its really good. Go ahead. Current Congress party is the greatest for India.

  11. Basavaraj.K says:

    Why you will not write about present BJP’s politics

  12. Sandeep Barve says:

    Dear Pratap,

    I follow the transalated versions of your articles on Sandeep B.’s blog

    However when I visited your blog, I found it is in Kannada only. Is there an English version available? Please publish the English version also for the benefit of non Kannada speaking people/

  13. laxmikant purohit says:

    ನೆಹರು ಕುಟುಂಬದ ಕುಡಿಯಲ್ಲವೇ? 42 ರ ಅರೆ ಯುವಕ ಅದ್ಯಾಕೆ ಮಿಡಿಯಾದಲ್ಲಿ ಐಕಾನ ಆಗಲಾರ ? ಕಾಂಗ್ರೆಸ್ನಲ್ಲಿ ನೆಹರು ಇಂದಿರಾ ಸಾಕಿದ ಭಟ್ಟಂಗಿಗಳಿದ್ದಾರೆ. ದಲ್ಲಾಳಿಗಳಿದ್ದಾರೆ.ಇಂಥರಿಗೆಲ್ಲ ಯಾರನ್ನು ಯಾವಾಗ ಬೇಕೆಂದರು ಕೊಳ್ಲುವ ಟ್ತಾಪ ಮಾಡುವ ಕಲೆ ಗೊತ್ತಿಲ್ಲವೇ?2ಜಿ ಹಗರಣ.ಕಾಮನವೆಲ್ತ ಹಗರಣ,ಕಲ್ಲಿದ್ದಲು ಹಗರಣ. ಇವು ಯಾವು ಭಾರತದ ಭಾವಿ ಪ್ರಧಾನಿಗೆ (ಕಾಂಗ್ರೆಸ್ಸಿಗರು ಅಂದುಕೊಂಡಂತೆ) ಕಾಣಲ್ಲ,ಇತನ ಕಣ್ಣಿಗೆ ಕಾಣುವದು ಕಾಂಗ್ರೆಸ್ಸೆತರ ಸರಕಾರದ ರಾಜ್ಯಗಳು ಮಾತ್ರ.

  14. raju says:

    We are going to be ruled by F“`rs

  15. Kumara says:

    ನಮ್ಮ ದೇಶದ ಜನಕ್ಕೆ ಇನ್ನೂ ಯಾವಗ ಬುದ್ದಿ ಬರುತ್ತದೋ ಗೋತ್ತಿಲ್ಲ. ಇಷ್ಟಾದರೂ ಅವರನ್ನೇ ಹಿಂಭಾಲಿಸುತ್ತಾರಲ್ಲಾ,

  16. puneeth p says:

    i want job

  17. shawad goonadka says:

    Rahul Gandhi ki jai ho modi manege

  18. deekshith says:

    hi pratap brother please publish it in news paper let everyone comes to know about this rapist

  19. Dharma Raj says:

    Dear sir….

    Hende madida papa kitha. iga madatha ira papa na nillishi. mude navu enudru nam deshake konna..

  20. lohith says:

    now it is the right time for people to uproot congress from india………..modi the best…give him a chance.

  21. lohith says:

    ”NANAGE BARATHIYA ENDU HELALU NACHIKE AGUTHIDE”RAHUL GANDI…………..HE IS RIGHT BCZ HE IS AN ITALIAN………….

  22. ajay says:

    modi nu aste

  23. girish kr says:

    Hands up u my dear sir.

  24. lovely lamp says:

    @ thomas thanks for giving information about “youth icon”(?).
    @ pramod avananna maduve agalu yaaru ishta padatare bidri…….