Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Others > ಅನ್ಯರ ಬಗ್ಗೆ ಅವಹೇಳನಕಾರಿಯಾಗಿ “ಆಡಾಡ್ತಾ ಆಯುಷ್ಯ” ಕಳೆಯುತ್ತಿದ್ದೀರಾ ಕಾರ್ನಾಡರೇ?

ಅನ್ಯರ ಬಗ್ಗೆ ಅವಹೇಳನಕಾರಿಯಾಗಿ “ಆಡಾಡ್ತಾ ಆಯುಷ್ಯ” ಕಳೆಯುತ್ತಿದ್ದೀರಾ ಕಾರ್ನಾಡರೇ?

“ಮುಂಬೈ ಸಾಹಿತ್ಯ ಹಬ್ಬ ಶುಕ್ರವಾರ ಒಂದು ‘ದೊಡ್ಡ ನಾಟಕ’ಕ್ಕೆ ಸಾಕ್ಷಿಯಾಯಿತು. ಹಿರಿಯ ನಟ ಹಾಗೂ ರಂಗಭೂಮಿ ಕಲಾವಿದ ಗಿರೀಶ್ ಕಾರ್ನಾಡ್, ನೊಬೆಲ್ ಪುರಸ್ಕೃತ ಸಾಹಿತಿ ವಿ.ಎಸ್. ನೈಪಾಲ್ ಅವರ ಮೇಲೆ ಟೀಕಾ ಪ್ರಹಾರ ಮಾಡಿ ಅವರೊಬ್ಬ ಮುಸ್ಲಿಂ ವಿರೋಧಿ ಎಂದರು. ರಂಗಭೂಮಿಯ ಬಗ್ಗೆ ತರಗತಿಯೊಂದನ್ನು ತೆಗೆದುಕೊಳ್ಳಲು ಅಲ್ಲಿ ಉಪಸ್ಥಿತರಿದ್ದ ಕಾರ್ನಾಡ್ ನೈಪಾಲ್ ಬಗ್ಗೆಯೇ ಉದ್ದುದ್ದ ಮಾತನಾಡಿದರು”!

ಸಿಎನ್್ಎನ್-ಐಬಿಎನ್ ಚಾನೆಲ್ ವೆಬ್್ಸೈಟ್್ನಲ್ಲಿ ಪ್ರಕಟಗೊಂಡ ವರದಿಯ ಈ ಮೊದಲನೇ ಪ್ಯಾರಾವೇ ಗಿರೀಶ್ ಕಾರ್ನಾಡ್್ರು ‘ದೊಡ್ಡ ನಾಟಕ’ ಮಾಡಿದರು ಹಾಗೂ ಅವರು ಅಲ್ಲಿಗೆ ಆಗಮಿಸಿದ್ದ ಉದ್ದೇಶವೇ ಬೇರೆ ಎಂಬುದನ್ನು ಸೂಚಿಸುತ್ತದೆ. ರಂಗಭೂಮಿ ಬಗ್ಗೆ ತರಗತಿ ತೆಗೆದುಕೊಳ್ಳುವಂತೆ ಇವರನ್ನು ಅಲ್ಲಿಗೆ ಆಹ್ವಾನಿಸಿದ್ದರೋ ಅಥವಾ ನೈಪಾಲ್ ಬಗ್ಗೆ ಮತ್ಸರವನ್ನು ಕಾರಿಕೊಳ್ಳುವುದಕ್ಕೆ ವೇದಿಕೆ ಮಾಡಿಕೊಡುತ್ತಿದ್ದೇವೆ ಬನ್ನಿ ಎಂದು ಕರೆದಿದ್ದರೋ? ಜೀವಮಾನದ ಸಾಧನೆಗಾಗಿ ‘ಲಿಟರೇಚರ್ ಲೈವ್್’ ಪುರಸ್ಕಾರವನ್ನು ನೈಪಾಲ್್ಗೆ ನೀಡಿದರೆ ಕಾರ್ನಾಡರ ಎದೆಯನ್ನು ಚುಚ್ಚಿದ್ದೇನು?

ಹೌದು, ಕಾರ್ನಾಡ್ ಹೇಳುವಂತೆ ನೈಪಾಲ್ ಭಾರತದ ಬಗ್ಗೆ ಮೂರು ಪುಸ್ತಕಗಳನ್ನು ಬರೆದಿದ್ದಾರೆ. “ಅವರ ಮೊದಲನೆಯ ಪುಸ್ತಕ ‘ಎ ವೂಂಡೆಡ್ ಸಿವಿಲೈಜೇಷನ್್’ನಲ್ಲೇ ಮುಸ್ಲಿಮರ ಮೇಲೆ ಅವರಿಗಿರುವ ಅತಿಯಾದ ದ್ವೇಷ ಕಾಣುತ್ತದೆ. ಪುಸ್ತಕದ ಶೀರ್ಷಿಕೆಯಲ್ಲಿ ಬರುವ ‘ವೂಂಡ್್’(ಗಾಯ) ಬಾಬರನ ಆಕ್ರಮಣದಿಂದಾಗಿ ಭಾರತದ ಮೇಲಾದ ಗಾಯವನ್ನು ಸೂಚಿಸುತ್ತದೆ. ಆ ಕೃತಿಯಿಂದ ಇಲ್ಲಿವರೆಗೂ ಆಕ್ರಮಣಕಾರರನ್ನು ತೆಗಳುವ ಒಂದು ಅವಕಾಶವನ್ನೂ ನೈಪಾಲ್ ಬಿಟ್ಟಿಲ್ಲ. ಐದು ಶತಮಾನಗಳ ಕಾಲ ಭಾರತವನ್ನು ಬರ್ಬರವಾಗಿ ದಮನ ಮಾಡಿದರು, ಬಡತನವನ್ನು ತಂದರು, ವೈಭವಯುತ ಹಿಂದು ಸಂಸ್ಕೃತಿಯನ್ನು ನಾಶ ಮಾಡಿದರು ಎಂದು ನೈಪಾಲ್ ಆರೋಪಿಸುತ್ತಾರೆ” ಎಂದರು ಕಾರ್ನಾಡ್. ಇಷ್ಟಕ್ಕೂ ಕಾರ್ನಾಡರಿಗೇನಾಗಿದೆ? ನೈಪಾಲ್ ಬರೆದಿದ್ದರಲ್ಲಿ ತಪ್ಪಾದರೂ ಏನಿದೆ?

ಪರ್ಷಿಯನ್ ಸಾಮ್ರಾಜ್ಯವನ್ನು ರೋಮನ್ನರು ಹಾಳುಗೆಡವಿದರು, ಗ್ರೀಕ್ ನಾಗರಿಕತೆಯನ್ನು ಕ್ರೈಸ್ತರು ನಾಶ ಮಾಡಿದರು ಎಂದು ಹೇಗೆ ಇತಿಹಾಸದಲ್ಲಿ ಹೇಳುತ್ತಾರೋ ಭಾರತವನ್ನು ಹಾಳುಗೆಡವಿದ್ದೂ ಘಜ್ನಿ-ಘೋರಿ, ತುಘಲಕ್ ಮುಘಲರು ಎಂದು ಹೇಳಿದರೆ ತಪ್ಪೇನು? ಅಲ್ಲ, ಬಾಬರನೇನು ಭಾರತವನ್ನು ಉದ್ಧಾರ ಮಾಡುವುದಕ್ಕೆ ಬಂದಿದ್ದಾ? ಹಾಗೆ ಮಾಡುವುದೇ ಅವನ ಉದ್ದೇಶವಾಗಿದ್ದರೆ, ಆತ ಜನಿಸಿದ ಉಜ್ಬೇಕಿಸ್ತಾನವನ್ನೇ (ಮಧ್ಯ ಏಷ್ಯಾ) ಉದ್ದಾರ ಮಾಡಬಹುದಿತ್ತಲ್ಲವೆ? ಆಕ್ರಮಣಕಾರರ ಬಗ್ಗೆ ಮಾಡುವ ಟೀಕೆ, ವಸ್ತುನಿಷ್ಠ ವಿಶ್ಲೇಷಣೆಗಳು ಭಾರತೀಯ ಮುಸ್ಲಿಮರ ಟೀಕೆ ಹೇಗಾದೀತು? ಮುಸ್ಲಿಮರನ್ನು ಟೀಕೆ ಮಾಡಿದ ವ್ಯಕ್ತಿಗೆ ಹೇಗೆ ಪುರಸ್ಕಾರ ಕೊಡುತ್ತೀರಿ ಎನ್ನುವುದು ಕಾರ್ನಾಡರ ತರ್ಕವೇ ಆದರೆ, ಸ್ವಾತಂತ್ರ್ಯ ಪೂರ್ವದಲ್ಲಿ ಬರೆದ ‘ಥಾಟ್ಸ್ ಆನ್ ಪಾಕಿಸ್ತಾನ್್’ನಲ್ಲಿ ಮುಸಲ್ಮಾನರ ಮನಸ್ಥಿತಿ ಬಗ್ಗೆ ಅಂಬೇಡ್ಕರ್ ಹೇಳಿಲ್ಲವೆ? ಹಾಗಾದರೆ ಅವರಿಗೂ ‘ಭಾರತ ರತ್ನ’ ಕೊಡಬಾರದಿತ್ತು ಎನ್ನುತ್ತೀರಾ?

ಮುಂದುವರಿದು ಕಾರ್ನಾಡ್ ಹೇಳುತ್ತಾರೆ-’ತಾಜ್ ಸ್ಮಾರಕ ಮುಘಲ್ ಕಾಲದಲ್ಲಿ ಇದ್ದ ಹಿಂದು-ಮುಸ್ಲಿಂ ಶೈಲಿಯ ಸಮ್ಮಿಲನದ ಪ್ರತೀಕ (ಅರ್ಥಾತ್ ಹಿಂದು-ಮುಸ್ಲಿಮರು ಭಾಯಿ ಭಾಯಿ ಆಗಿದ್ದರು)’ ಎಂದು ಇತಿಹಾಸಜ್ಞೆ ರೊಮಿಲಾ ಥಾಪರ್ ಮಾಡಿದ ವಿಶ್ಲೇಷಣೆಯನ್ನು ಟೀಕಿಸುವ ನೈಪಾಲ್, ಅದು ಆಕ್ರಮಣಕಾರರ ದೌರ್ಜನ್ಯದ ಸಂಕೇತ ಎನ್ನುತ್ತಾರೆ’. ಈ ಮಾತಿನಲ್ಲಿ ತಪ್ಪೇನಿದೆ? ಮುಘಲರ ಸಾಮ್ರಾಜ್ಯಕ್ಕಿರುವುದು ದೌರ್ಜನ್ಯದ ಇತಿಹಾಸವೇ ಅಲ್ಲವೇ? ಕಾರ್ನಾಡರೇ, ಜೌರಂಗಜೇಬ್ ಯಾರು? ಆತ ಕೂಡ ಮುಘಲ್ ರಾಜನೇ ಅಲ್ಲವೆ? ವಾರಾಣಸಿಯ ಕಾಶಿ ವಿಶ್ವನಾಥ ಮಂದಿರವನ್ನು ಕೆಡವಿ ಮಸೀದಿ ಕಟ್ಟಲು ಔರಂಗಜೇಬ್ 1669ರಲ್ಲಿ ಆದೇಶಿಸಿದನಲ್ಲ ಅದು ಹಿಂದು-ಮುಸ್ಲಿಂ ಸಮ್ಮಿಲನದ ಸಂಕೇತವೋ, ದೌರ್ಜನ್ಯದ ಪ್ರತೀಕವೋ? ಆತ ಹಿಂದುಗಳ ಮೇಲಷ್ಟೇ ವಿಧಿಸಿದ ತೆರಿಗೆ (ಜಝಿಯಾ) ಬಗ್ಗೆ ಯಾವ ವಿಶ್ಲೇಷಣೆ ಕೊಡುತ್ತೀರಿ ಜ್ಞಾನಪೀಠಿಗಳೇ?

‘ನೈಪಾಲ್ ಭಾರತದ ಬಗ್ಗೆ 3 ಪುಸ್ತಕಗಳನ್ನು ಬರೆದಿದ್ದಾರೆ. ಆದರೆ ಒಂದು ಪುಸ್ತಕದಲ್ಲೂ ಸಂಗೀತದ ಉಲ್ಲೇಖವಿಲ್ಲ. ಭಾರತದಾದ್ಯಂತ ಸಂಚರಿಸಿದ್ದೇನೆ ಎನ್ನುವ ಅವರು ಸಂಗೀತವನ್ನು ಗ್ರಹಿಸುವಲ್ಲಿ ವಿಫಲರಾಗಿದ್ದಾರೆ’ ಎಂದೂ ಹೇಳಿದ್ದಾರೆ. ಅಂದರೆ ಭಾರತವನ್ನು ಸಂಚರಿಸಿ ಇಲ್ಲಿನ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ಸಂಗೀತವನ್ನೇ ಗ್ರಹಿಸದ, ಅದರ ಬಗ್ಗೆ ತಮ್ಮ ಪುಸ್ತಕಗಳಲ್ಲೆಲ್ಲೂ ಬರೆಯದ ವ್ಯಕ್ತಿ ಭಾರತವನ್ನು ಅರ್ಥಮಾಡಿಕೊಂಡಿರಲಾರ ಎಂಬುದು ಅವರ ಮಾತಿನ ಅರ್ಥ. ಇದೇ ಧಾಟಿಯಲ್ಲಿ ನಾವೂ ಜ್ಞಾನನಪೀಠಿ ಕಾರ್ನಾಡರನ್ನು ಕೇಳೋಣ. ನೈಪಾಲ್ ಭಾರತವನ್ನು ತಿರುಗಿದವರೇ ಹೊರತು ಭಾರತದಲ್ಲಿ ಜನಿಸಿದವರಲ್ಲ. ಆದರೆ ಇಲ್ಲೇ ಹುಟ್ಟಿ, ಇಲ್ಲೇ ಬೆಳೆದು ಇಲ್ಲಿನ ಭಾಷೆಗಳಲ್ಲೊಂದಾದ ಕನ್ನಡದಲ್ಲೇ ಬರೆದ ನಿಮ್ಮ ಯಾವ ನಾಟಕಗಳಲ್ಲಿ ಭಾರತೀಯ ಸಂಸ್ಕೃತಿಯ ಪ್ರಧಾನ ಅಂಗವಾದ ಶಿಲ್ಪಕಲೆಯ ಬಗ್ಗೆ ಹೇಳಿದ್ದೀರಿ ಸಾರ್?

ಈ ಭರತಭೂಮಿಯ ಇತಿಹಾಸ ಗ್ರಂಥಗಳಿಗಿಂತ ಹೆಚ್ಚಾಗಿ ಗೋಚರಿಸುವುದು ನಮ್ಮ ಶಿಲ್ಪಕಲೆಗಳಲ್ಲೇ ಅಲ್ಲವೆ? ಸಂಗೀತದ ಬಗ್ಗೆ ನೈಪಾಲ್್ರನ್ನು ಪ್ರಶ್ನಿಸುವ ನೀವು ಶಿಲ್ಪಕಲೆಯ ಬಗ್ಗೆ ಎಲ್ಲಿ ಬರೆದಿದ್ದೀರಿ? ಶಿಲ್ಪಕಲೆಯನ್ನೇ ಅರಿಯದವರು ಭಾರತವನ್ನು ಹೇಗೆ ಅರಿಯಲು ಸಾಧ್ಯ? ಜತೆಗೆ ಈ ದೇಶದ ಸಂಸ್ಕೃತಿ, ಸಂಸ್ಕಾರದೊಳಗೆ ಮಿಳಿತಗೊಂಡಿರುವ ವೇದಮಂತ್ರದ ಬಗ್ಗೆ ನೀವು ಯಾವ ಕೃತಿಯಲ್ಲಿ ಬರೆದಿದ್ದೀರಿ?

ಹೀಗೆ ಕೇಳಿದರೆ ಹೇಗೆ ಅಸಂಗತ ಎನಿಸುತ್ತದೋ ನೈಪಾಲರು ಭಾರತೀಯ ಸಂಗೀತವನ್ನು ಗ್ರಹಿಸುವಲ್ಲಿ ವಿಫಲರಾಗಿದ್ದಾರೆ ಎಂಬುದೂ ಅಷ್ಟೇ ಅಸಂಬದ್ಧವಾಗುವುದಿಲ್ಲವೆ? ಬರೆದಿಲ್ಲ ಎಂಬ ಮಾತ್ರಕ್ಕೆ ಗ್ರಹಿಸಿಲ್ಲ ಎಂದು ಹೇಗೆ ಹೇಳುತ್ತೀರಿ? ಗ್ರಹಿಸಿದ್ದನ್ನೆಲ್ಲ ಬರೆಯಲೇ ಬೇಕೆಂಬ ನಿಯಮವಿದೆಯೇ? ಬರೆದರಷ್ಟೇ ಅರ್ಥಮಾಡಿಕೊಂಡಿದ್ದಾರೆ ಎಂದೇ?

ಅದಿರಲಿ, 2008ರಲ್ಲಿ ಆಗಿನ ಬೆಂಗಳೂರು ಪೊಲೀಸ್ ಕಮಿಷನರ್ ಶಂಕರ್ ಬಿದರಿಯವರು ಭಯೋತ್ಪಾದಕ ದಾಳಿಯ (ಜಿಲೆಟಿನ್ ಕಡ್ಡಿಗಳ ಸ್ಫೋಟ) ಹಿನ್ನೆಲೆಯಲ್ಲಿ, ಪಬ್್ಗಳಲ್ಲಿ ರಾತ್ರಿ 11 ಗಂಟೆ ನಂತರ ಲೌಡ್ ಮ್ಯೂಸಿಕ್ ಹಾಕಬಾರದು, ಬಾಗಿಲು ಮುಚ್ಚಬೇಕು ಎಂದು ಆದೇಶಿಸಿದಾಗ ನೀವು ಮಾಡಿದ್ದ ಪ್ರತಿಭಟನೆ ನೆನಪಿದೆಯೇ? ಪಬ್್ಗಳಲ್ಲಿ ಸಂಗೀತ ಕೇಳುವುದು ತಪ್ಪಾ? ನಡುರಾತ್ರಿವರೆಗೂ ಕೆಲಸ ಮಾಡುವವರು ವಿಶ್ರಮಿಸಿಕೊಳ್ಳಲು ಪಬ್ ಅಲ್ಲದೆ ಎಲ್ಲಿಗೆ ಹೋಗಬೇಕು ಎಂದು ಏರುಧ್ವನಿಯಲ್ಲಿ ಪ್ರಶ್ನಿಸಿದ್ದನ್ನು ಮರೆತಿಲ್ಲಾ ತಾನೇ? ಪಬ್್ಗಳಲ್ಲಿ ಭಾರತೀಯ ಸಂಗೀತವನ್ನು ಪ್ಲೇ ಮಾಡುತ್ತಾರಾ ಕಾರ್ನಾಡರೇ? ನೀವು ಅದನ್ನೇ ನಮ್ಮ ಸಂಗೀತ ಎಂದು ಭಾವಿಸಿದ್ದರೆ ಟ್ರಿನಿಡಾಡ್್ನಲ್ಲಿ ಜನಿಸಿದ ನೈಪಾಲ್್ಗೆ ನಿಮಗಿಂತಲೂ ಹೆಚ್ಚು ಸಂಗೀತ ಜ್ಞಾನವಿದೆ ಎಂದು ಭಾವಿಸಬಹುದಲ್ಲಾ?!

ಅದಿರಲಿ, ನೈಪಾಲರ ಸಂಗೀತ ಪ್ರಜ್ಞೆ, ಗ್ರಹಿಕೆಯನ್ನು ಪ್ರಶ್ನಿಸುವ ನೀವು, ಸಂಗೀತ ಯಾವುದರ ಒಂದು ಅಂಗವಾಗಿದೆಯೋ ಆ ‘ಭಾರತೀಯತೆ’, ‘ಭಾರತೀಯ ಸಂಸ್ಕತಿ’ಯನ್ನು ಎಷ್ಟು ಪಾಲಿಸುತ್ತೀರಿ, ಗೌರವಿಸುತ್ತೀರಿ?

ಇದು ವೈಯಕ್ತಿವೆನಿಸಬಹುದು, ಆದರೆ ನಿಮ್ಮ ಆತ್ಮಚರಿತ್ರೆ ‘ಆಡಾಡ್ತಾ ಆಯುಷ್ಯ’ದಲ್ಲಿ ನೀವೇ ಸಾರ್ವಜನಿಕವಾಗಿ ಹೇಳಿರುವುದರಿಂದ ಪ್ರಸ್ತಾಪ ಮಾಡಬಹುದು. ನಿಮ್ಮ ಹಾಗೂ ನಿಮ್ಮ ಪತ್ನಿಯ ನಡುವೆ ಮದುವೆಗೂ ಮುನ್ನ 17 ವರ್ಷ ಪ್ರಣಯ ನಡೆದಿತ್ತು. ಆ ಅವಧಿಯಲ್ಲಿ ನೀವೇ ಬರೆದುಕೊಂಡಂತೆ ಇಬ್ಬರ ನಡುವೆ ಒಪ್ಪಂದವಾಗಿತ್ತು. ನೀನು ‘ಹೇಗೆ’ ಬೇಕಾದರೂ ಇರು, ನಾನು ‘ಹೇಗೆ’ ಬೇಕಾದರೂ ಇರುತ್ತೇನೆ! ಇಬ್ಬರ ನಡುವೆ ಯಾವುದೇ ಕಟ್ಟುಪಾಡುಗಳಿಲ್ಲ! ಅದರ ಗೂಢಾರ್ಥವೇನು ಸಾರ್?! ನೀವು ಮದ್ರಾಸ್್ನ ಆಕ್ಸ್್ಫರ್ಡ್ ಯೂನಿವರ್ಸಿಟಿ ಪ್ರೆಸ್್ನಲ್ಲಿ ಮ್ಯಾನೇಜರ್ ಆಗಿದ್ದಾಗ ಮಧ್ಯಾಹ್ನ ಊಟದ ಸಂದರ್ಭದಲ್ಲಿ ನಿಮ್ಮ ರೂಮಿಗೆ ಬರುತ್ತಿದ್ದ ವಿವಾಹಿತ ಮಹಿಳೆಯ ಬಗ್ಗೆ ಖುಲ್ಲಂಖುಲ್ಲಾ ಬರೆದುಕೊಂಡಿದ್ದೀರಿ. ಹಾಗಾದರೆ ಹೇಳಿ, ನಿಮಗೆ ಭಾರತೀಯ ಮೌಲ್ಯದ ಬಗ್ಗೆ ಯಾವ ಗೌರವವಿದೆ? ಭಾರತೀಯತೆ ಬಗ್ಗೆ ಏನು ಗೊತ್ತು? ನಿಮ್ಮ ಯಾವ ನಾಟಕಗಳಲ್ಲಿ ಭಾರತೀಯತೆಯನ್ನು ಎತ್ತಿಹಿಡಿದಿದ್ದೀರಿ ಹೇಳಿ? ಅಂಜುಮಲ್ಲಿಗೆಯಲ್ಲಿ ಅಕ್ಕ-ತಮ್ಮನ ಕಾಮಕೇಳಿ ಬರೆದಿದ್ದೀರಲ್ಲಾ ಅದು ಭಾರತೀಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ವಿಚಾರವೇ? ನೈಪಾಲ್ ಭಾರತೀಯತೆಯನ್ನು ಹುಡುಕಲು ಪ್ರಾಮಾಣಿಕವಾಗಿ ಪ್ರಯತ್ನಿಸಿದರು, ನೀವು ಜೀವನದುದ್ದಕ್ಕೂ ಭಾರತೀಯತೆಯನ್ನು ತಿರಸ್ಕರಿಸುತ್ತಾ ಬಂದವರು. ನಿಮ್ಮಂಥವರಿಂದ ನೈಪಾಲ್ ಸಂಗೀತದ ಪಾಠ ಹೇಳಿಸಿಕೊಳ್ಳಬೇಕಾ? ನೈಪಾಲ್ ಭಾರತದಲ್ಲಿ ಹುಟ್ಟಲಿಲ್ಲ, ಆದರೆ ತಮ್ಮ ಪೂರ್ವಿಕರ ನಾಡಾದ ಭಾರತವನ್ನು ಶೋಧಿಸಲು ಬಂದರು. ಅವರದ್ದು ‘ಪ್ರವಾಸ ಕಥನ’ ಶೈಲಿ. ಭಾರತದಲ್ಲಿ ಕಂಡಿದ್ದನ್ನು ಬರೆದಿದ್ದಾರೆ. ಮುಸ್ಲಿಮರು ಯಾವ ದೇಶಕ್ಕೆ ಹೋದರೂ ಅಸಹಿಷ್ಣುಗಳು ಎಂದಿದ್ದಾರೆ. ಅದರಲ್ಲಿ ತಪ್ಪೇನಿದೆ? ಅದು ಭಾರತೀಯರಾದ ನಮಗೆ ಗೊತ್ತಿರದ ವಿಚಾರವೇನು?

“The higher we soar the smaller we appear to those who cannot fly’ ಎಂಬ ಜರ್ಮನ್ ತತ್ವಜ್ಞಾನಿ ಫ್ರೆಡ್ರಿಕ್ ನೀಶೆಯ ಮಾತು ನಿಮಗೆ ಚೆನ್ನಾಗಿ ಅನ್ವಯವಾಗುತ್ತದೆ. ನೈಪಾಲ್ ಮಟ್ಟಕ್ಕೆ ಏರಲಾಗದೆ ಕೆಳಗೇ ಇರುವ ನಿಮಗೆ ಉನ್ನತಸ್ತರದಲ್ಲಿರುವ ನೈಪಾಲ್ ಸಣ್ಣ ವ್ಯಕ್ತಿಯಂತೆ ಕಾಣುವುದರಲ್ಲಿ ಯಾವ ಆಶ್ಚರ್ಯವಿದೆ? ನೀವು ಸಾಹಿತಿ, ನಾಟಕಕಾರನ ರೂಪದಲ್ಲಿರುವ ಅವಕಾಶವಾದಿ ರಾಜಕಾರಣಿಯಷ್ಟೇ. ಟಿಪ್ಪು ಸುಲ್ತಾನ್ ಕನ್ನಡ ವಿರೋಧಿ ಎಂದು ಆಗಿನ ಉನ್ನತ ಶಿಕ್ಷಣ ಸಚಿವ ಡಿ.ಎಚ್. ಶಂಕರಮೂರ್ತಿ ಟೀಕಿಸಿದಾಗ ನೀವು ಟಿಪ್ಪು ಪರವಾಗಿ ಬೊಬ್ಬೆ ಹಾಕಿದಿರಿ. ನಿಮ್ಮ ವಾದವನ್ನು ಖ್ಯಾತ ಸಾಹಿತಿ ಎಸ್.ಎಲ್. ಭೈರಪ್ಪನವರು ವಾಕ್ಯ ವಾಕ್ಯವಾಗಿ ಸುಳ್ಳೆಂದು ನಿರೂಪಿಸಿದಾಗ ಭೈರಪ್ಪನವರ ‘ವಂಶವೃಕ್ಷ’ ಮತ್ತು ‘ತಬ್ಬಲಿಯು ನೀನಾದೆ ಮಗನೆ’ಗಳನ್ನು ನಿರ್ದೇಶನ ಮಾಡಿ ತಪ್ಪು ಮಾಡಿದೆ, ಅವು ಕಳಪೆ ಕೃತಿಗಳು ಎಂದಿರಿ. ನೀವು ಏನೂ ಆಗಿಲ್ಲದಾಗ ಹೆಸರು ಗಳಿಸಲು ಭೈರಪ್ಪನವರ ಕೃತಿಗಳು ಬೇಕಾದವು, ಜ್ಞಾನಪೀಠ ‘ವಿಜೇತ’ರಾದ ಕೂಡಲೇ ಅವು ಕಳಪೆ ಎನಿಸಿದವು. ಹಾಗೆಯೇ ಈ ಹಿಂದೆ ನೈಪಾಲ್್ಗೆ ನೊಬೆಲ್ ಬಂದಾಗ “Greatest living litterateur of Indian origin’ ಎಂದೆಲ್ಲ ಹೊಗಳಿ ಹತ್ತಿರಕ್ಕೆ ಹೋಗಿದ್ದ ನಿಮಗೆ ಈಗ ನೈಪಾಲ್ ಮುಸ್ಲಿಂ ವಿರೋಧಿಯಂತೆ ಕಾಣುತ್ತಿದ್ದಾರೆ. ಇಂತಹ ಧೋರಣೆಯಲ್ಲಿ ಕಾಣುವುದು ನಿಮ್ಮ ವ್ಯಕ್ತಿತ್ವದ ‘ಒಡಕಲು ಬಿಂಬ’ವೇ ಅಲ್ಲವೆ?

ಇಂಥ ನಿಮ್ಮ ಮನಸ್ಥಿತಿ ಅರ್ಥವಾದ ಕಾರಣದಿಂದಲೇ, ಮುಂಬೈ ಲಿಟರರಿ ಫೆಸ್ಟ್್ನ ಆಯೋಜಕರಾದ ಅನಿಲ್ ದಾರ್ಕರ್ ‘ನೈಪಾಲ್ ಬಗ್ಗೆ ಕಾರ್ನಾಡರು ಮಾಡಿದ ದಾಳಿ ಕಂಡು ನಮಗೇ ದಿಗ್ಭ್ರಮೆಯಾಯಿತು. ಇಷ್ಟಕ್ಕೂ ನಾವು ಅವರನ್ನು ಕರೆದಿದ್ದು ತಮ್ಮ ವೈಯಕ್ತಿಕ ರಂಗಯಾತ್ರೆಯ ಬಗ್ಗೆ ಮಾತನಾಡಿ ಎಂದೇ ಹೊರತು, ನೈಪಾಲ್್ಗೂ ಅವರಿಗೂ ಯಾವುದೇ ಸಂಬಂಧವಿರಲಿಲ್ಲ” ಎಂದಿದ್ದಾರೆ.

ಹುಬ್ಬಳ್ಳಿ-ಧಾರವಾಡದ ಕಡೆ ನಿಮ್ಮ ‘ಕನ್ನಡ’ದ ಬಗ್ಗೆ ಅಲ್ಲಿನ ಸಾಹಿತಿ ಮಂದಿ ಹೇಳಿಹೇಳಿಕೊಂಡು ಪಕಪಕ ನಗುತ್ತಾರೆ. ಕಾರ್ನಾಡ್ ಬರೆದ ಕನ್ನಡ(?)ವನ್ನು ಕನ್ನಡಕ್ಕೇ ತರ್ಜುಮೆ ಮಾಡಬೇಕು ಅಂತ. ಈ ಕೆಲಸವನ್ನು ಬದುಕಿರುವಷ್ಟು ಕಾಲ ಕೀರ್ತಿನಾಥ ಕುರ್ತಕೋಟಿ ಅವರು ಮಾಡಿದರು. ಅವರ ನಿಧನದ ನಂತರ ನೀವು ಬರೆದಿದ್ದು ಅಷ್ಟರಲ್ಲೇ ಇದೆ.

ನಿಮ್ಮ ಪ್ರಚಾರದ ನಾಟಕವನ್ನು ಸಾಕು ಮಾಡ್ರೀ ಕಾರ್ನಾಡರೇ. ಇಲ್ಲವೇ ನೇರಾನೇರ ಚರ್ಚೆಗೆ ಬನ್ನಿ. ತುಫಾಕಿ ಹಾರಿಸಿ ಓಡಿಹೋಗುವ ಬುದ್ಧಿಬೇಡ. ಅನ್ಯರ ಬಗ್ಗೆ ಅವಹೇಳನಕಾರಿಯಾಗಿ ‘ಆಡಾಡ್ತಾ ಆಯುಷ್ಯ’ ಕಳೆದಿದ್ದು ಸಾಕು!

59 Responses to “ಅನ್ಯರ ಬಗ್ಗೆ ಅವಹೇಳನಕಾರಿಯಾಗಿ “ಆಡಾಡ್ತಾ ಆಯುಷ್ಯ” ಕಳೆಯುತ್ತಿದ್ದೀರಾ ಕಾರ್ನಾಡರೇ?”

  1. VIVEKANANDA says:

    Mr.Kumar Please read histroy & write properly if we not ask questions to these pseudosecular cum politician people we can’t able to save india

  2. Abhilash says:

    You have mentioned in this article that Girish Karnad that he speaks in something in some other programe but you need to remember that you have spoken about U R Ananthmurthy in a programe organised about Avarana. That does not mean I am supporting U R A. I read weekly and love it http://www.youtube.com/watch?v=tvXX-f9S38A

  3. Abhilash says:

    watch the video in the above link

  4. Kodava says:

    ಪತ್ರಿಕಾ ರಂಗದಲ್ಲಿ ಇರುವ ಗಂಡು ಸಿಂಹ ಅಂದ್ರೆ ಪ್ರತಾಪ್ ಸಿಂಹ .. ಭವ್ಯ ಭಾರತದ ಸಿಂಹ . ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಯಾಗುತ್ತೆ ಸರ್ . ನಿಮ್ಮ ಲೇಖನಗಳು ಹೀಗೆಯೇ ಮುಂದುವರೆಯಲಿ . ಹಾಗು ಮತಕ್ಕೊಸ್ಕರ ಯಾವುದೋ ಪಕ್ಷದ ಏಜೆಂಟ್ ಆಗಿರುವ ಇಂಥಹ ಗುಳ್ಳೆನರಿಗಳಿಗೆ ಎಷ್ಟು ಉಗಿದರು ಪ್ರಯೋಜನವಿಲ್ಲ ..

  5. lovely lamp says:

    Good article pratapanna…….Ooops!! I think the committee for awarding jnanapeetha award should be changed. And this “(A)Jnaanapeethi” should become VC of “Aligarh Muslim University” and mr.karanth you have not understood the idea behind those scriptures and idols infront of temples. you need to ascend still in that path.Try and understand.

  6. sachin says:

    jnanapeetakke ondu maryadenu bedva..u r ananth..g karnad?

  7. SUNITA says:

    ಪತ್ರಿಕಾ ರಂಗದಲ್ಲಿ ಇರುವ ಗಂಡು ಸಿಂಹ ಅಂದ್ರೆ ಪ್ರತಾಪ್ ಸಿಂಹ .. ಭವ್ಯ ಭಾರತದ ಸಿಂಹ . ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಯಾಗುತ್ತೆ ಸರ್ . ನಿಮ್ಮ ಲೇಖನಗಳು ಹೀಗೆಯೇ ಮುಂದುವರೆಯಲಿ . ಹಾಗು ಮತಕ್ಕೊಸ್ಕರ ಯಾವುದೋ ಪಕ್ಷದ ಏಜೆಂಟ್ ಆಗಿರುವ ಇಂಥಹ ಗುಳ್ಳೆನರಿಗಳಿಗೆ ಎಷ್ಟು ಉಗಿದರು ಪ್ರಯೋಜನವಿಲ್ಲ .. THIRTHAHALLIYANTHAHA VURALLI HUTTI ADARA MAANA KALEYUVA URA HAAGU EE “SWAYAMGHOSHIUTA PRAGATIPARA LEKHAKA” RELLA ONDE APPANA MAKKLU

  8. SUNITA says:

    THIRTHAHALLIYANTHAHA VURALLI HUTTI ADARA MAANA KALEYUVA URA HAAGU EE “SWAYAMGHOSHIUTA PRAGATIPARA LEKHAKA” RELLA ONDE APPANA MAKKLU

  9. SUNITA says:

    ಪತ್ರಿಕಾ ರಂಗದಲ್ಲಿ ಇರುವ ಗಂಡು ಸಿಂಹ ಅಂದ್ರೆ ಪ್ರತಾಪ್ ಸಿಂಹ .. ಭವ್ಯ ಭಾರತದ ಸಿಂಹ . ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಯಾಗುತ್ತೆ ಸರ್ . ನಿಮ್ಮ ಲೇಖನಗಳು ಹೀಗೆಯೇ ಮುಂದುವರೆಯಲಿ . ಹಾಗು ಮತಕ್ಕೊಸ್ಕರ ಯಾವುದೋ ಪಕ್ಷದ ಏಜೆಂಟ್ ಆಗಿರುವ ಇಂಥಹ ಗುಳ್ಳೆನರಿಗಳಿಗೆ ಎಷ್ಟು ಉಗಿದರು ಪ್ರಯೋಜನವಿಲ್ಲ ..