Date : 20-10-2013, Sunday | 62 Comments
Justice For Kumari Sowjanya!
ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ಎಸ್ಡಿಎಂ ಕಾಲೇಜಿನ ಕುಮಾರಿ ಸೌಜನ್ಯಾಳ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಇಂದಿಗೂ ಜೀವಂತವಿದ್ದರೆ, ಮತ್ತೆ ಸುದ್ದಿಗೆ ಗ್ರಾಸವಾಗಿ ಸಿಐಡಿ ತನಿಖೆ ಚುರುಕುಗೊಂಡಿದ್ದರೆ ಅದಕ್ಕೆ ಮೂಲ ಕಾರಣ ಈ ಮೇಲಿನ ಹೆಸರಿನಲ್ಲಿ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ನಲ್ಲಿ ಸತತವಾಗಿ ನಡೆದ ಹೋರಾಟ. ಇವತ್ತು ಒಂದಿಷ್ಟು ಜನರು ಮುಂದೆ ಬಂದು ಟಿವಿ ಮಾಧ್ಯಮದ ಎದುರು ಧ್ವನಿಯೆತ್ತಿರಬಹುದು, ಆದರೆ ಪ್ರಕರಣವನ್ನು ಜೀವಂತವಾಗಿಟ್ಟಿದ್ದು ಮಾತ್ರ ಫೇಸ್ಬುಕ್ ಆ್ಯಕ್ಟಿವಿಸ್ಟ್ಗಳು ಅಥವಾ ಚಳವಳಿಕಾರರು/ಹೋರಾಟಗಾರರು ಎಂದರೆ ತಪ್ಪಾಗಲಾರದು. ಕಳೆದ ವರ್ಷ ದಕ್ಷಿಣ ಕನ್ನಡ ಬಿಜೆಪಿಯ ಕೆಲವು ರೋಗಗ್ರಸ್ಥ ಮನಸ್ಸುಗಳು ಕುಂದಾಪುರದ ವಾಜಪೇಯಿ ಎಂದೇ ಹೆಸರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಮನನೋಯಿಸಿ ಪಕ್ಷ ತೊರೆಯುವಂತೆ ಮಾಡಿದಾಗಲೂ ಫೇಸ್ಬುಕ್ನಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಆ ಆಕ್ರೋಶ ಹೋರಾಟದ ರೂಪ ಪಡೆಯುವುದಕ್ಕೂ, 2013ರ ಚುನಾವಣೆಯಲ್ಲಿ ಶ್ರೀನಿವಾಸ ಶೆಟ್ಟಿ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಅಭೂತಪೂರ್ವ ಗೆಲುವು ಸಾಧಿಸುವುದಕ್ಕೂ ಪರೋಕ್ಷವಾಗಿ ಕಾರಣವಾಗಿತ್ತು. ಹಾಗೆಯೇ ಸೌಜನ್ಯಾ ಕೊಲೆಯಾದ ನಂತರ ಸತತ ಒಂದು ವರ್ಷದಿಂದ ಫೇಸ್ಬುಕ್ ಆ್ಯಕ್ಟಿವಿಸ್ಟ್ಗಳು ಹೋರಾಟ ನಡೆಸುತ್ತಾ ಬಂದಿದ್ದಾರೆ.
Hats off to you guys!
ಅದರ ಬಗ್ಗೆ ಅನುಮಾನವೇ ಬೇಡ, ಹೀಗೆಂದರೆ ಖಂಡಿತ ಅತಿಶಯೋಕ್ತಿಯೂ ಆಗುವುದಿಲ್ಲ. ಒಂದು ಸಮಾಜ ತನ್ನ ಭಾಗವಾದ ಒಂದು ಕುಟುಂಬದ ನೋವಿಗೆ ಈ ಪರಿ ಸ್ಪಂದಿಸುತ್ತದೆ ಎಂದರೆ, ಆ ಘಟನೆ ಯುವ ಜನತೆಯ ಆತ್ಮಸಾಕ್ಷಿಯನ್ನು ಈ ರೀತಿ ಬಡಿದೆಬ್ಬಿಸುತ್ತದೆ ಎಂದರೆ ಅದು ಖಂಡಿತ ಒಳ್ಳೆಯ ಸಂಕೇತವೇ. ಸಮಾಜವೇ ಈ ಮಟ್ಟಕ್ಕೆ ಸಿಡಿದೇಳುತ್ತದೆ ಎಂದರೆ ಇನ್ನು ಹೆತ್ತು, ಹೊತ್ತು 17 ವರ್ಷ ಸಾಕಿ ಸಲುಹಿದ ಆ ಬಡ ಅಪ್ಪ-ಅಮ್ಮನ ನೋವು, ವೇದನೆಯ ತೀವ್ರತೆ ಎಷ್ಟಿರಬಹುದು? ಟಿವಿಯಲ್ಲಿ ಅವರು ಹೇಳುತ್ತಿರುವುದನ್ನು, ನಮ್ಮ ಮಗುವಿಗೆ ನ್ಯಾಯ ಕೊಡಿಸಿ ಎಂದು ಅಂಗಲಾಚುತ್ತಿರುವುದನ್ನು ನೋಡಿದಾಗಲಂತೂ ಕರುಳು ಹಿಂಡಿದಂಥ ಅನುಭವ ವೀಕ್ಷಕರಿಗಾಗುತ್ತಿತ್ತು. ಇನ್ನು ಆ ಅಪ್ಪ-ಅಮ್ಮನಿಗೆ ತಮ್ಮ ಮಗುವನ್ನು ಕಳೆದುಕೊಂಡ ನೋವು ಒಂದು ಕಡೆಯಾದರೆ, ವರ್ಷ ತುಂಬಿದರೂ ನ್ಯಾಯ ಸಿಗಲಿಲ್ಲವಲ್ಲಾ ಎಂಬ ಹತಾಶೆ ಇನ್ನೊಂದು ಕಡೆ. ಅವುಗಳ ಜತೆಗೆ ಸ್ಥಳೀಯ ಪೊಲೀಸರ ನಿಷ್ಕ್ರಿಯತೆ ಕಳೆದ ಒಂದು ವರ್ಷದಲ್ಲಿ ಪ್ರಕರಣದ ಬಗ್ಗೆ ಏನೆಲ್ಲಾ ಅನುಮಾನಗಳನ್ನು ಸೃಷ್ಟಿಸಿತು. ಯಾರೋ ಪ್ರಭಾವಿ ವ್ಯಕ್ತಿಗಳು ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ಅನುಮಾನ, ಆ ಕಾರಣದಿಂದಲೇ ನ್ಯಾಯಸಮ್ಮತ ತನಿಖೆಯಾಗಿಲ್ಲ, ಆರೋಪಿಗಳನ್ನು ಪತ್ತೆ ಹಚ್ಚಿಲ್ಲ ಎಂಬ ಗಾಳಿ ಸುದ್ದಿ, ಕಿವಿಮಾತುಗಳು ಜತೆಗೂಡಿ ಸೌಜನ್ಯಾಳ ಅಪ್ಪ-ಅಮ್ಮನ ಮಾನಸಿಕ ನೆಮ್ಮದಿಯನ್ನು ಶಾಶ್ವತವಾಗಿ ಹಾಳು ಮಾಡಿದ್ದು ಮಾತ್ರವಲ್ಲ, ಸಮಾಜ ಕೂಡ ವ್ಯವಸ್ಥೆಯ ಮೇಲೆ ಅಪನಂಬಿಕೆ ಬೆಳೆಸಿಕೊಳ್ಳುವಂತಾಯಿತು. ಇದರ ಪರಿಣಾಮವಾಗಿ ಈಗ ಎದ್ದಿರುವ ಹಾಲಿ ಆಕ್ರೋಶ ಖಂಡಿತ ಒಪ್ಪುವಂಥದ್ದೇ. ಇವತ್ತು ಸೌಜನ್ಯಾಳನ್ನು ಆಕೆಯ ಅಪ್ಪ-ಅಮ್ಮ ಕಳೆದುಕೊಂಡಿರಬಹುದು, ಆದರೆ ಇಂಥ ಘಟನೆಗಳು ಸಮಾಜದಲ್ಲಿ ಹೆಣ್ಣು ಹೆತ್ತವರನ್ನೆಲ್ಲ ಆತಂಕದ ಕೂಪಕ್ಕೆ ದೂಡಿ ಬಿಡುವ ಅಪಾಯವೂ ಇದೆ. ಹಾಗಾಗಿ ಸೌಜನ್ಯಾ ಕೊಲೆಯ ಆರೋಪಿಗಳನ್ನು ಪತ್ತೆ ಹಚ್ಚಿ ಶಿಕ್ಷಿಸಲೇಬೇಕು ಹಾಗೂ ಅಂಥ ಘಟನೆಗಳು ಮರುಕಳಿಸದಂತೆ ವ್ಯವಸ್ಥೆ ಮತ್ತು ಸಮಾಜ ಎರಡೂ ನಿಗಾವಹಿಸಬೇಕು. ಈ ಕಾರಣಕ್ಕಾಗಿ ಸೌಜನ್ಯಾ ಪ್ರಕರಣ ಮತ್ತೆ ಸುದ್ದಿಯಾಗಿದ್ದು ಒಳ್ಳೆಯದೇ.
ಆದರೆ…
ಸೌಜನ್ಯಾಳಿಗೆ ನ್ಯಾಯ ಕೊಡಿಸುವ ಹೋರಾಟ/ಚರ್ಚೆ ಧರ್ಮಸ್ಥಳವೆಂಬ ಶ್ರೀಕ್ಷೇತ್ರದ ಮೇಲಿನ ವಿಶ್ವಾಸವನ್ನೇ ಹೊಡೆದು ಹಾಕುವ, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ವೈಯಕ್ತಿಕ ತೇಜೋವಧೆ ಮಾಡುವ ಪ್ರಯತ್ನದ ರೂಪ, ಸಾಕ್ಷ್ಯರಹಿತ ಆರೋಪದ ಅಂಗವಾಗಿದ್ದು ಮಾತ್ರ ಸೌಜನ್ಯಾಳ ಕೊಲೆಯಷ್ಟೇ ದುರದೃಷ್ಟಕರ. ಕೆಟ್ಟದ್ದನ್ನು ಮಾತ್ರ ಅನುಮಾನಿಸದೆ, ಪರಾಮರ್ಶಿಸದೆ, ಅಳುಕದೆ, ಎರಡನೇ ಬಾರಿ ಯೋಚನೆ ಮಾಡದೆ ಯಥಾವತ್ತಾಗಿ ತೆಗೆದುಕೊಳ್ಳುವ ಸಮಾಜದ ಮಧ್ಯೆ ಇವತ್ತು ನಾವಿದ್ದೇವೆ. ನೀವು ಯಾರ ಬಳಿಯಲ್ಲಾದರೂ “ಸಿದ್ರಾಮಣ್ಣ ತುಂಬಾ ಒಳ್ಳೆಯವರು” ಅಂಥ ಹೇಳಿ, “ಇಲ್ಲಾ ಮಾರಾಯ, ಅವನು ಸರಿ ಇಲ್ಲ, ಕಳ್ಳ ಅಂಥ ಯಂಕಣ್ಣ ಹೇಳ್ತಿದ್ದ” ಎಂಬ ಮಾರುತ್ತರ ಬರುತ್ತದೆ. ಅದೇ “ಸಿದ್ರಾಮಣ್ಣ ಸರಿ ಇಲ್ವಂತೆ, ದುಡ್ ತಿನ್ತಾರಂತೆ” ಅನ್ನಿ, “ಹೌದು, ಸೀನಣ್ಣ ಅವತ್ತೇ ಹೇಳಿದ್ದ” ಎಂಬ ಉತ್ತರ ಬರುತ್ತದೆ. ನಮ್ಮ ಜನರ ಮನಸ್ಥಿತಿಯೇ ಅಂಥದ್ದು. ಕೆಟ್ಟದ್ದಕ್ಕೆ ಬೇಗ ಸಹಮತ ವ್ಯಕ್ತಪಡಿಸಿ ಬಿಡುತ್ತಾರೆ. ಹಾಗಾಗಿ ಇವತ್ತು ಸಮಾಜದಲ್ಲಿ ದೊಡ್ಡ ಮಟ್ಟಕ್ಕೇರಿದ್ದವರ ಬಗ್ಗೆ, ಜನರ ಮೆಚ್ಚುಗೆಗೆ ಪಾತ್ರರಾಗಿದ್ದವರ ಬಗ್ಗೆ ಬಹಳ ಸಲೀಸಾಗಿ ಕೆಟ್ಟದ್ದನ್ನು ಹೇಳಿ, ಅಹುದಹುದೆಂದು ತಲೆಯಾಡಿಸುವಂತೆ ಮಾಡಿಬಿಡಬಹುದು. ಬಹಳ ಬೇಸರದ ಸಂಗತಿಯೆಂದರೆ ನಮ್ಮ ಸಮಾಜದ, ಜನರ ಇಂಥ ದೌರ್ಬಲ್ಯವನ್ನು ಕೆಲವರು ಧರ್ಮಸ್ಥಳ ಹಾಗೂ ಅದರ ಧರ್ಮಾಧಿಕಾರಿಯಾದ ವೀರೇಂದ್ರ ಹೆಗ್ಗಡೆಯವರ ಬದ್ನಾಮಿ ಮಾಡಲು ಬಳಸಿಕೊಂಡರು ಎಂದನಿಸುವುದಿಲ್ಲವೇ? ಇಷ್ಟಕ್ಕೂ ವೀರೇಂದ್ರ ಹೆಗ್ಗಡೆಯವರು ಪತ್ರಿಕಾಗೋಷ್ಠಿ ನಡೆಸಿ ಸೌಜನ್ಯಾ ಪ್ರಕರಣ ನಡೆದಾಗ ತಮ್ಮ ಸಹೋದರನ ಪುತ್ರ ದೇಶದಲ್ಲೇ ಇರಲಿಲ್ಲ ಎಂಬುದನ್ನು ಸೂಕ್ತ ದಾಖಲೆಗಳೊಂದಿಗೆ ನಿರೂಪಿಸುವವರೆಗೂ ನಿಶ್ಚಲ್ ಹಾಗೂ ಕುಟುಂಬ ವರ್ಗವನ್ನು ಕಟಕಟೆ ಹಾಗೂ ಆರೋಪಿ ಸ್ಥಾನದಲ್ಲಿ ನಿಲ್ಲಿಸಿರಲಿಲ್ಲವೇ? ನಮ್ಮ ಸಮಾಜ ಹೇಗಿದೆಯೆಂದರೆ ಆರೋಪ ಮಾಡುವವರಿಗೆ ಸಾಕ್ಷ್ಯ ನೀಡುವ ಜವಾಬ್ದಾರಿಯೂ ಇರುವುದಿಲ್ಲ, ಕೇಳಿಸಿಕೊಳ್ಳುವವರು ಆಧಾರವನ್ನೂ ಕೇಳುವುದಿಲ್ಲ. ಸತ್ಯದ ಸರಳ ಸಾದರಕ್ಕಿಂತ Conspiracy Theoryಗಳು ಯಾವತ್ತೂ ರೋಚಕವಾಗಿರುತ್ತವೆ, ಖುಷಿ ಕೊಡುತ್ತವೆ. ಪತ್ರಿಕಾಗೋಷ್ಠಿಯ ನಂತರ ಮತ್ತೆ ನಡೆದ ಟಿವಿ ಚರ್ಚೆಯಲ್ಲಿ ಕಾಂಗ್ರೆಸ್ ನೇತಾರ ಹಾಗೂ ಮಾಜಿ ಸಚಿವರಾದ ಬಿ.ಎಲ್. ಶಂಕರ್ ಬಹಳ ಸ್ಫುಟವಾಗಿ ಇದನ್ನು ಎತ್ತಿ ತೋರಿಸಿದರು, ಅರ್ಥಗರ್ಭಿತವಾಗಿ ಮಾತನಾಡಿದರು. ಆ ಚರ್ಚೆಯಲ್ಲಿ ಭಾಗವಹಿಸಿದ್ದ ಸೌಜನ್ಯಾಳ ತಂದೆ-ತಾಯಿ-ಮಾವನನ್ನು ಪಾಟೀ ಸವಾಲಿಗೆ ಒಳಪಡಿಸಿದಾಗ ‘ನಮಗೆ ಶ್ರೀಕ್ಷೇತ್ರದ ಮೇಲಾಗಲಿ, ವೀರೇಂದ್ರ ಹೆಗ್ಗಡೆಯವರ ಮೇಲಾಗಲಿ ಯಾವುದೇ ಅನ್ಯಥಾ ಭಾವನೆಯಿಲ್ಲ. ಹೆಗ್ಗಡೆಯವರು ಹೇಳಿದ ಮೇಲೆಯೇ ಪೊಲೀಸರು ಪ್ರಕರಣ ದಾಖಲಿಸಿದ್ದು, ಖುದ್ದು ಹೆಗ್ಗಡೆಯವರೇ ನಮ್ಮೆದುರಲ್ಲೇ ಗೃಹ ಸಚಿವರಿಗೆ ಕರೆ ಮಾಡಿ ತನಿಖೆಗೆ ಆಗ್ರಹಿಸಿದರು’ ಎಂದರು. ಇನ್ನೂ ಗಮನಾರ್ಹ ಅಂಶವೆಂದರೆ ‘ಧರ್ಮಸ್ಥಳಕ್ಕೆ ಸೇರಿದವರೇ ಇದನ್ನು ಮಾಡಿಸಿದ್ದಾರೆ ಎಂದು ಕೆಲವರು ನಮಗೆ ಹೇಳಿಕೊಟ್ಟರು’ ಎಂಬ ಮಾತು ಸೌಜನ್ಯಾಳ ತಾಯಿಯ ಬಾಯಿಂದಲೇ ಹೊರಬಂತು!!
ಇದು ಏನನ್ನು ಸೂಚಿಸುತ್ತದೆ ಹೇಳಿ?
ಒಬ್ಬ ಸಾಮಾನ್ಯ ವ್ಯಕ್ತಿಗೇ ಮಿತ್ರ ಹಾಗೂ ಶತ್ರುಗಳಿರುತ್ತಾರೆ. ಹಾಗಿರುವಾಗ ಧರ್ಮಸ್ಥಳದಂಥ ಬೃಹತ್ ಕ್ಷೇತ್ರವನ್ನು ನಿಭಾಯಿಸುತ್ತಿರುವವರ ಬಗ್ಗೆಯೂ ಅಸಮಾಧಾನ ಹೊಂದಿರುವವರು ಖಂಡಿತ ಇರುತ್ತಾರೆ. ಅಂಥವರು ಸೌಜನ್ಯಾ ಪ್ರಕರಣವನ್ನು ತಮ್ಮ ವೈಯಕ್ತಿಕ ದ್ವೇಷಕ್ಕೆ ಪ್ರತೀಕಾರ ತೆಗೆದುಕೊಳ್ಳಲು, ಕೋಪ-ತಾಪಗಳನ್ನು ಹೊರಹಾಕಲು, ವೀರೇಂದ್ರ ಹೆಗ್ಗಡೆಯವರ ಹಾಗೂ ಶ್ರೀಕ್ಷೇತ್ರದ ಚಾರಿತ್ರ್ಯವಧೆ ಮಾಡಲು ಬಳಸಿಕೊಂಡರು ಎಂಬುದು ಸೌಜನ್ಯಾಳ ತಾಯಿಯ ಮಾತಿನಿಂದ ಪರೋಕ್ಷವಾಗಿ ಸ್ಪಷ್ಟವಾಗಲಿಲ್ಲವೇ? “ಧರ್ಮಸ್ಥಳದ ಬಗ್ಗೆ ನಮಗೆ ಯಾವ ಅನುಮಾನಗಳೂ ಇಲ್ಲ, ಶ್ರೀಕ್ಷೇತ್ರದ ಬಗ್ಗೆ ಕೆಟ್ಟದಾಗಿ ಮಾತನಾಡುವುದನ್ನು ನಾವು ಸಹಿಸುವುದಿಲ್ಲ” ಎಂದು ಚರ್ಚೆಯಲ್ಲಿ ಪಾಲ್ಗೊಂಡಿದ್ದ ಸೌಜನ್ಯಾಳ ಮಾವ ವಿಠ್ಠಲ ಗೌಡ ಕೂಡ ಹೇಳಿದರು. ಆದರೆ, ಪ್ರಾರಂಭದ ಚರ್ಚೆಯಲ್ಲಿ ಪಾಲ್ಗೊಂಡಿದ್ದವರು ಮಾಡಿದ್ದು ಧರ್ಮಸ್ಥಳದ ತೇಜೋವಧೆಯನ್ನೇ ಅಲ್ಲವೇ? ಇನ್ನು ನಿಶ್ಚಲ್ ಹಾಗೂ ಕುಟುಂಬ ವರ್ಗದ ಮೇಲೆ ಅನುಮಾನ ಬರುವಂತೆ ಆರಂಭದಲ್ಲಿ ಹೇಳಿದವರು ಹೆಗ್ಗಡೆಯವರು ಬಿಡುಗಡೆ ಮಾಡಿದ ದಾಖಲೆ ಹೇಳುತ್ತಿರುವ ಸತ್ಯಕ್ಕೆ ಯಾವ ಉತ್ತರ ಕೊಡಬಲ್ಲರು? ಅದಿರಲಿ, ಧರ್ಮಸ್ಥಳದವರು ರಕ್ಷಿಸುತ್ತಿದ್ದಾರೆ ಎಂದು ಟೀಕಾಕಾರರು ಬೊಟ್ಟುಮಾಡುತ್ತಿರುವ ಧೀರಜ್ ಕೆಲ್ಲಾ, ಉದಯ್ ಜೈನ್ ಮತ್ತು ಮಲ್ಲಿಕ್ ಜೈನ್ ಯಾರೆಂದುಕೊಂಡಿರಿ? ಧೀರಜ್ ಧರ್ಮಸ್ಥಳದ ಉದ್ಯೋಗಿಯೊಬ್ಬರ ಮಗನಾಗಿದ್ದರೆ, ಉದಯ್ ಜೈನ್ ಆಟೋ ಚಾಲಕ. ಮಲ್ಲಿಕ್ ಜೈನ್ ಧರ್ಮಸ್ಥಳದ ಒಬ್ಬ ಸಣ್ಣ ಉದ್ಯೋಗಿಯಷ್ಟೆ. ಧರ್ಮಸ್ಥಳದ ಪ್ರತಿಷ್ಠೆಯನ್ನು ಅಪಾಯಕ್ಕೆ ತಳ್ಳಿ ಇವರನ್ನು ರಕ್ಷಿಸುವ ಮೂರ್ಖ ಕೆಲಸವನ್ನು ಯಾರೂ ಮಾಡಲು ಸಾಧ್ಯವಿಲ್ಲ. ಖಂಡಿತ ಈ ಮೂವರ ಬಗ್ಗೆ ಸ್ಥಳೀಯರಲ್ಲಿ ಫಟಿಂಗರೆಂಬ ಭಾವನೆ ಇದೆ. ಹಾಗಾಗಿ ಅನುಮಾನಗಳಿಗೆ ಮತ್ತಷ್ಟು ಪುಷ್ಟಿ ಸಿಕ್ಕಿದಂತಾಯಿತು. ಹಾಗಂತ ಅವರ ಮೇಲಿನ ಅನುಮಾನಕ್ಕೆ ಹೆಗ್ಗಡೆಯವರನ್ನು ಕಟಕಟೆಗೆ ತಂದು ನಿಲ್ಲಿಸುವುದು ಎಷ್ಟು ಸರಿ? ತಪ್ಪಿತಸ್ಥರು ಯಾರೇ ಇದ್ದರೂ ಪತ್ತೆಹಚ್ಚಿ ಶಿಕ್ಷಿಸಬೇಕೆಂದು ತಮ್ಮ ಎದುರೇ ಗೃಹ ಸಚಿವರಿಗೆ ಹೆಗ್ಗಡೆಯವರು ಕರೆ ಮಾಡಿ ಒತ್ತಾಯಿಸಿದ್ದಾರೆಂದು ಸೌಜನ್ಯಾಳ ಪೋಷಕರೇ ಒಪ್ಪಿಕೊಂಡಿದ್ದರೂ ಚಾರಿತ್ರ್ಯ ವಧೆ ಮಾಡುವ ಪ್ರಯತ್ನವೇಕೆ? ಇನ್ನು ಮಾನಸಿಕ ಅಸ್ವಸ್ಥನಂತೆ ಕಾಣುವ ಆರೋಪಿ ಸಂತೋಷ್ ರಾವ್ನನ್ನು ಅಮಾಯಕನೆಂದು ಟೀಕಾಕಾರರು ಯಾವ ಆಧಾರದ ಮೇಲೆ ಸರ್ಟಿಫಿಕೆಟ್ ಕೊಡುತ್ತಿದ್ದಾರೆ? ಆತ ಉಮೇಶ್ ರೆಡ್ಡಿ, ಜೈ ಶಂಕರ್ನಂಥ ಮಾನಸಿಕ ರೋಗಿಯೂ ಆಗಿರಬಹುದಲ್ಲವೇ?
ಹಾಗಂತ…
ಶ್ರೀಕ್ಷೇತ್ರದಲ್ಲಿ ನಡೆಯುವುದೆಲ್ಲ ಧರ್ಮಕಾರ್ಯವೇ, ಅಲ್ಲಿ ಯಾವ ಲೋಪಗಳೂ ಇಲ್ಲ ಎಂದು ಖಂಡಿತ ಹೇಳುತ್ತಿಲ್ಲ. ದೇಶದ ಎಲ್ಲಡೆ ಇರುವಂತೆ ಬೆಳ್ತಂಗಡಿ ತಾಲೂಕಿನಲ್ಲೂ ರಿಯಲ್ ಎಸ್ಟೇಟ್ ಮಾಫಿಯಾ ಇದೆ. ಧರ್ಮಸ್ಥಳಕ್ಕೆ ಸೇರಿದ ಕೆಲವರು ಈ ವಿಷಯದಲ್ಲಿ ಅತಿರೇಕ ಎಸಗಿರುವುದು ಖಂಡಿತ ಸುಳ್ಳಲ್ಲ. ಧರ್ಮಸ್ಥಳ ಮಾಡುವ ಒಳ್ಳೆಯ ಕಾರ್ಯಗಳ ಕೀರ್ತಿಯೆಲ್ಲ ಹೆಗ್ಗಡೆಯವರಿಗೆ ಇಡಿಯಾಗಿ ಸಲ್ಲುವಂತೆ, ಕ್ಷೇತ್ರಕ್ಕೆ ಸೇರಿದವರ ಅತಿರೇಕಗಳಿಂದ ಬರುವ ಅಪಕೀರ್ತಿಯನ್ನೂ ಸ್ವೀಕರಿಸಬೇಕಾಗುತ್ತದೆ. ಮನೆ ಗೆದ್ದು ಮಾರು ಗೆಲ್ಲು ಎನ್ನುವಂತೆ ಬೆಳ್ತಂಗಡಿ ತಾಲೂಕಿನ ಸ್ಥಳೀಯರ ಸೂಕ್ಷ್ಮಭಾವನೆಗಳ ಬಗ್ಗೆಯೂ ಎಚ್ಚರಿಕೆಯಿಂದಿರಬೇಕಾಗುತ್ತದೆ. ಇನ್ನು ಗ್ರಾಮೀಣಾಭಿವೃದ್ಧಿ ಯೋಜನೆಯಲ್ಲಿ ಲೋಪವಿದೆ ಎಂಬ ಆರೋಪ ತೆಗೆದುಕೊಳ್ಳಿ. ಇವತ್ತು ಯಾವ ಯೋಜನೆ, ವ್ಯವಸ್ಥೆಯಲ್ಲಿ ಲೋಪವಿಲ್ಲ ಹೇಳಿ? ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೆಜಿಗೆ ಒಂದು ರುಪಾಯಿಯಂತೆ ಕೊಟ್ಟ 30 ಕೆ.ಜಿ. ಅಕ್ಕಿ ಕಾಳಸಂತೆಗೆ ಬರುತ್ತಿಲ್ಲವೆ? ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಉದ್ಯೋಗ ಖಾತ್ರಿ ಯೋಜನೆಯಲ್ಲೇ ಎಲ್ಲಿಲ್ಲದ ಭ್ರಷ್ಟಾಚಾರ ನಡೆದಿದೆ. 200 ಚಿಲ್ಲರೆ ವರ್ಷಗಳ ಇತಿಹಾಸ ಹೊಂದಿರುವ ಅಮೆರಿಕದ ಪ್ರಜಾಪ್ರಭುತ್ವ, ಐದಾರು ಶತಮಾನಗಳ ಇತಿಹಾಸ ಹೊಂದಿರುವ ಬ್ರಿಟನ್ ಹಾಗೂ 66 ವರ್ಷಗಳಿಂದಿರುವ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಲೋಪಗಳಿರುವಂತೆ ಧರ್ಮಸ್ಥಳವೂ ಕೆಲವು ಲೋಪಗಳಿಂದ ಹೊರತಾಗಿಲ್ಲ. ಒಂದು ವ್ಯವಸ್ಥೆಯೆಂದರೆ, ಅದರಲ್ಲಿ ಎಲ್ಲ ಥರದ ಜನರೂ ಇರುತ್ತಾರೆ, ಎಲ್ಲ ರೀತಿಯ ದೌರ್ಜನ್ಯಗಳೂ ನಡೆಯುತ್ತವೆ. ಹಾಗಂತ ಹೆಗ್ಗಡೆಯವರು ಪ್ರತಿಯೊಂದು ವಿಚಾರಗಳ ಮೇಲೂ ಖುದ್ದು ನಿಗಾ ಇಡಲು ಸಾಧ್ಯವೆ? ಪ್ರತಿಯೊಂದು ಲೋಪಗಳಿಗೂ ಹೆಗ್ಗಡೆಯವರನ್ನೇ ದೂಷಿಸುವುದು ಅಥವಾ ಕೆಲವೊಂದಿಷ್ಟು ಲೋಪಗಳಿಗಾಗಿ ಇಡೀ ವ್ಯವಸ್ಥೆಯನ್ನೇ ಸಾರಾಸಗಟಾಗಿ ದೂರುವುದು ಸರಿಯೇ? ಎಷ್ಟೋ ಜನ ಮಾಡಬಾರದ ಕೆಲಸ ಮಾಡಿ ಕೊನೆಗೆ ಹೆಗ್ಗಡೆಯವರ ಪಾದಕ್ಕೆ ಬಿದ್ದು ತಪ್ಪಾಯಿತು ಎಂದು ಕೇಳಿಕೊಂಡಿದ್ದಿದೆ. ಇನ್ನು ಮುಂದೆ ಹಾಗೆ ಮಾಡಬೇಡ ಎಂದು ಹೆಗ್ಗಡೆಯವರು ಹಸುವಿನಂತೆ ಕ್ಷಮಿಸಿದ್ದು, ಅದರಿಂದಾಗಿ ಹೆಗ್ಗಡೆಯವರ ಬಗ್ಗೆ ಕೆಲವರು ಅನ್ಯಥಾ ಭಾವಿಸುವಂತಾಗಿದ್ದೂ ಇದೆ.
ಇನ್ನೊಂದು ಸಂಗತಿ ಇದೆ, ಶ್ರೀಕ್ಷೇತ್ರದಂಥ ಬೃಹತ್ ವ್ಯವಸ್ಥೆಯೊಳಗೆ ನಡೆಯುವ ಎಷ್ಟೋ ವಿಚಾರಗಳು ಹೆಗ್ಗಡೆಯವರನ್ನು ತಲುಪುವುದಿಲ್ಲ ಹಾಗೂ ತಲುಪುವಾಗ ಅದು ಬೇರೆಯದೇ ರೂಪ ಪಡೆದಿರುತ್ತವೆ. ತಮಗೆ ತಲುಪಿದ್ದು ವಾಸ್ತವ ಸಂಗತಿಯೇ ಅಲ್ಲವೇ ಎಂದು ಖಚಿತಪಡಿಸಿಕೊಳ್ಳಲು ಹೆಗ್ಗಡೆಯವರ ಸ್ಥಾನದಲ್ಲಿ ಕುಳಿತಿರುವ ಯಾವ ವ್ಯಕ್ತಿಗೂ ಸಾಧ್ಯವಿಲ್ಲ. ಆದರೆ ಅನ್ಯಾಯಕ್ಕೊಳಗಾದವರು ಗಮನಕ್ಕೆ ತಂದಾಗ ಅದಕ್ಕೆ ಹೆಗ್ಗಡೆಯವರು ಸ್ಪಂದಿಸಿ, ತಪ್ಪಿಸಿದ ಅಗಣಿತ ಉದಾಹರಣೆಗಳು ಧರ್ಮಸ್ಥಳದಲ್ಲಿವೆ. ಹೆಗ್ಗಡೆಯವರು ಸಮಾಜ, ಜನರ ಬಗ್ಗೆ ತುಂಬಾ Compassion, ಅನುಕಂಪ, ಕಳಕಳಿ ಇಟ್ಟುಕೊಂಡಿರುವ ವ್ಯಕ್ತಿ. ಗ್ರಾಮಾಭಿವೃದ್ಧಿ ಯೋಜನೆಯಡಿ ಕೊಡುತ್ತಿರುವ ಸಾಲಕ್ಕೆ ವಿಪರೀತ ಬಡ್ಡಿ ಹಾಕಲಾಗುತ್ತಿದೆ ಎಂಬ ಅಂಶವನ್ನು ಟೀಕೆಯ ಅಸ್ತ್ರವಾಗಿಸಿಕೊಳ್ಳುವ ಬದಲು ಹೆಗ್ಗಡೆಯವರ ಗಮನಕ್ಕೆ ತಂದಿದ್ದರೆ ಈ ವೇಳೆಗಾಗಲೇ ಲೋಪವಿದ್ದರೆ ಸರಿಯಾಗಿರುತ್ತಿತ್ತು. ಇವತ್ತು ಧರ್ಮಸ್ಥಳಕ್ಕೆ ಯಾರೇ ಬರಲಿ, ಮಂಜುನಾಥನ ದರ್ಶನದ ಜತೆಗೆ ಹೆಗ್ಗಡೆಯವರನ್ನು ಭೇಟಿಯಾಗುವುದಕ್ಕೂ ಬಯಸುತ್ತಾರೆ. ನಮ್ಮ ಮುಖ್ಯಮಂತ್ರಿಗಳು ಜನತಾದರ್ಶನ ಮಾಡದೇ ಇರಬಹುದು, ಹೆಗ್ಗಡೆಯವರು ಜನತಾದರ್ಶನವನ್ನು ಶಿಸ್ತು, ಶ್ರದ್ಧೆಯಿಂದ ಮಾಡುತ್ತಾರೆ. ಅಪ್ಪ-ಮಕ್ಕಳ ನಡುವೆ ನಡೆಯುವ ವಿವಾದಗಳನ್ನು ಅವರ ಮುಂದೆ ಹೇಳಿಕೊಳ್ಳುತ್ತಾರೆ ಹಾಗೂ ಹೆಗ್ಗಡೆಯವರು ಸ್ಪಂದಿಸುತ್ತಾರೆ. ಹಾಗಿರುವಾಗ ಶ್ರೀಕ್ಷೇತ್ರದ ಯಾವುದೋ ವ್ಯಕ್ತಿಗಳಿಂದ ತಮಗೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯರೇಕೆ ಹೆಗ್ಗಡೆಯವರ ಬಳಿ ಹೇಳಿಕೊಳ್ಳಬಾರದು? ಹಾಗೆ ಹೇಳಿಕೊಂಡರೂ ತೊಂದರೆ ತಪ್ಪಲಿಲ್ಲ ಎನ್ನುವ ಏಕೈಕ ಉದಾಹರಣೆಯನ್ನು ಟೀಕಾಕಾರರು ಕೊಡಬಲ್ಲರೇ? ಒಂದು ಲೋಪವನ್ನು ಎತ್ತಿತೋರುವ ಮೊದಲು ಆ ವ್ಯಕ್ತಿಯಿಂದ ಸಮಾಜಕ್ಕೆ ಆಗುತ್ತಿರುವ ಲಾಭವನ್ನು ಅಳೆದು ತೂಗಬೇಕು.
ವೀರೇಂದ್ರ ಹೆಗ್ಗಡೆಯವರು ಜನಿಸಿದ್ದು 1948, ನವೆಂಬರ್ 25ರಂದು. ಧರ್ಮಸ್ಥಳದ ಚುಕ್ಕಾಣಿ ಹಿಡಿದಿದ್ದು 1968ರಲ್ಲಿ. ತಂದೆ ರತ್ನವರ್ಮ ಹೆಗ್ಗಡೆಯವರ ಅಕಾಲಿಕ ನಿಧನ ಅತ್ಯಂತ ಚಿಕ್ಕವಯಸ್ಸಿನಲ್ಲಿಯೇ ಅತಿ ಭಾರವಾದ ಜವಾಬ್ದಾರಿಯನ್ನು ಹೆಗಲಿಗೆ ಹಾಕಿತು. ಒಬ್ಬ ವ್ಯಕ್ತಿಯ ನಿಜವಾದ ಗುಣವನ್ನು ಅರಿಯಬೇಕಾದರೆ ಆತನಿಗೆ ಅಧಿಕಾರ ಕೊಟ್ಟು ನೋಡಬೇಕು ಎಂಬ ಮಾತಿದೆ. ಚುನಾವಣೆಗೆ ಮೊದಲು ನಮ್ಮ ಕೈ, ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೇರಿದ ಮೇಲೆ ನಮ್ಮ ವಿಶ್ವಾಸವನ್ನು ಶೇಕ್ ಮಾಡುವ ರಾಜಕಾರಣಿಗಳನ್ನು ನೋಡಿರುವ ನಮಗೆ ಅಧಿಕಾರದಿಂದ ಬರುವ ಮದದ ಪರಿಚಯ ಚೆನ್ನಾಗಿಯೇ ಆಗಿದೆ. ಹಾಗಿರುವಾಗ ಇಪ್ಪತ್ತರ ಕಿರಿ ವಯಸ್ಸಿನಲ್ಲಿ ಪಟ್ಟಕ್ಕೇರಿದ ಹೆಗ್ಗಡೆಯವರೂ ತಪ್ಪೆಸಗಬಹುದಾದ, ದರ್ಪದಲ್ಲಿ ಅಚಾತುರ್ಯಗಳಿಗೆ ಅವಕಾಶವೀಯಬಹುದಾದ ಎಲ್ಲ ಸಾಧ್ಯತೆಗಳೂ ಇದ್ದವು. ಆದರೆ ಹಾಗಾಗಲಿಲ್ಲ.
ಅದಕ್ಕೆ ಬಹುಶಃ ರತ್ನವರ್ಮ ಹೆಗ್ಗಡೆಯವರೇ ಕಾರಣವಿದ್ದಿರಬಹುದು.
ಯಾವುದಾದರೂ ಹುಡುಗನಿಗೆ ಅಪ್ಪ-ಅಮ್ಮ ಯಾರೂ ಇಲ್ಲ, ಇದ್ದರೂ ತಿನ್ನುವುದಕ್ಕೇ ಗತಿಯಿಲ್ಲ ಎಂದಾಗಿದ್ದರೆ ಆತನನ್ನು ಸಿದ್ಧಗಂಗಾ ಮಠಕ್ಕೆ ಬಿಟ್ಟು ಬನ್ನಿ, ಶ್ರೀ ಶಿವಕುಮಾರ ಸ್ವಾಮೀಜಿಗಳ ಸುಪರ್ದಿಗೆ ವಹಿಸಿ ಬಿಡಿ ಉದ್ಧಾರವಾಗುತ್ತಾನೆ ಎನ್ನುವುದನ್ನು ಉತ್ತರ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಕಾಣಬಹುದು. ಹಾಗೆಯೇ ದಕ್ಷಿಣ ಕನ್ನಡದಲ್ಲಿ ಉಚಿತ ಅನ್ನ ಹಾಗೂ ಅಕ್ಷರ ದಾಸೋಹವೆಂದ ಕೂಡಲೇ ನೆನಪಿಗೆ ಬರುತ್ತಿದ್ದುದು ಉಜಿರೆಯ ರತ್ನಮಾನಸ ಹಾಗೂ ಸಿದ್ಧವನ ಗುರುಕುಲ. ಎಷ್ಟೋ ಬಡಮಕ್ಕಳು ಬರಿಗೈಲಿ ಬಂದು ಪದವಿ ಸರ್ಟಿಫಿಕೆಟ್ನೊಂದಿಗೆ ಇಲ್ಲಿಂದ ಹೊರ ಹೋಗಿದ್ದಾರೆ. ಇವು ರತ್ನವರ್ಮ ಹೆಗ್ಗಡೆಯವರು ಬಡಮಕ್ಕಳಿಗಾಗಿಯೇ ಕಟ್ಟಿಸಿದ ಗಂಜಿಕೇಂದ್ರವೆಂದರೂ ತಪ್ಪಾಗದು. ಬಹಳ ಇತ್ತೀಚಿನವರೆಗೂ ಒಂದೇ ಪ್ಯಾಂಟು ವಾರದ 6 ದಿನವೂ ಕಾಲೇಜಿನ ಬೇರೆ ಬೇರೆ ಕ್ಲಾಸ್ಗಳಲ್ಲಿ ಕಾಣಿಸಿಕೊಳ್ಳುತ್ತಿದೆಯೆಂದರೆ ಅದು ಸಿದ್ಧವನದ ಯಾವುದೋ ಒಬ್ಬ ವಿದ್ಯಾರ್ಥಿಯದ್ದು, ಉಳಿದವರು ಸರದಿಯ ಮೇಲೆ ಹಾಕಿಕೊಳ್ಳುತ್ತಿದ್ದಾರೆ ಎಂದು ಆಡಿಕೊಳ್ಳುವ ಸನ್ನಿವೇಶವಿತ್ತು. ಅಂಥ ಬಡ ಹಿನ್ನೆಲೆಯಿಂದ ಬಂದವರೇ ಸಿದ್ಧವನದಲ್ಲಿರುತ್ತಿದ್ದರು. ತನ್ನ ಮಗನಿಗೂ ಪರಿಸ್ಥಿತಿಯ ಪರಿಚಯವಾಗಬೇಕು, ಬಡವರ ನೋವು ಅರ್ಥವಾಗಬೇಕು, ಕಷ್ಟದಲ್ಲಿ ಜೀವನ ನಡೆಸುವುದು, ಕಷ್ಟಗಳ ನಡುವೆಯೂ ಕಲಿತು ಮೇಲೆ ಬರುವುದನ್ನು ಕಲಿಸಬೇಕು ಎಂಬ ಆಶಯದಿಂದ ರತ್ನವರ್ಮ ಹೆಗ್ಗಡೆಯವರು ವೀರೇಂದ್ರ ಹೆಗ್ಗಡೆಯವರನ್ನೂ ಸಿದ್ಧವನಕ್ಕೆ ಸೇರಿಸಿದ್ದರು. ಹಾಗೆ ಸೇರಿಸಿದ ಕಾರಣದಿಂದಲೋ ಏನೋ ಹೆಗ್ಗಡೆಯವರು ಒಬ್ಬ ಟಿಪಿಕಲ್ ಸ್ವಾಮಿ ಅಥವಾ ಧರ್ಮಾಧಿಕಾರಿಯಾಗುವ ಬದಲು ಪಟ್ಟಕ್ಕೇರಿದ ಮೇಲೆ ಅವರಲ್ಲಿ ಸಮಾಜ ಸುಧಾರಣೆಯ ತುಡಿತ ಕಾಣತೊಡಗಿತು. ಹಾಗಾಗಿಯೇ 1995ರಲ್ಲಿ ಬೆಳ್ತಂಗಡಿ ತಾಲೂಕಿನಿಂದ ಮದ್ಯಪಾನ ಸಮಸ್ಯೆಯನ್ನು ನಿರ್ಮೂಲನೆ ಮಾಡಲು ಹೆಗ್ಗಡೆಯವರು ಮುಂದಾದರು. ‘ಕಳಿ, ಗಂಗಸರ ಬುಡ್ಕ, ತೆಳಿಗಂಜಿ ಪರ್ಕ’ (ಹೆಂಡ, ಸಾರಾಯಿ ಬಿಡೋಣ: ತಿಳಿ ಗಂಜಿ ಕುಡಿಯೋಣ) ಎಂಬ ಅವರ ಸ್ಲೋಗನ್ಗಳು ಭಿತ್ತಿಪತ್ರಗಳಿಗೆ ಸೀಮಿತವಾಗಲಿಲ್ಲ. ಮನೆ ಮನೆಗಳಿಗೆ ಹೋಗಿ ಮದ್ಯವ್ಯಸನಿ ಕುಟುಂಬಗಳ ಸಮಸ್ಯೆಗಳನ್ನು ತಿಳಿದುಕೊಳ್ಳುವ ಕೆಲಸ ಆರಂಭಿಸಿದರು. ಮೊದಲು ಸಮಸ್ಯೆಗಳಿಗೆ ಪರಿಹಾರ ಸೂಚಿಸಿ, ನಂತರ ಮದ್ಯಪಾನ ನಿಲ್ಲಿಸಿ ಎಂದು ತಿಳಿಹೇಳುವ ಕೆಲಸ ಮಾಡಿದರು. ಸಾಮಾನ್ಯವಾಗಿ ಮದ್ಯಪಾನ ವ್ಯಸನಗಳು ಕಾಡುವುದು ಸಣ್ಣ ಹಾಗೂ ಅರೆ ಕೃಷಿಕರು, ಭೂರಹಿತ ಕಾರ್ಮಿಕರನ್ನೇ. ಹಾಗಾಗಿ ಇಂಥ ದುರ್ಬಲ ವರ್ಗಗಳ ಶ್ರೇಯೋಭಿವೃದ್ಧಿಗಾಗಿ 1996ರಲ್ಲಿ ‘ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ’ (SKDRDP)ಯನ್ನು ಆರಂಭಿಸಿದರು. ‘ಪ್ರಗತಿ ನಿಧಿ’ ಎಂಬ ಕಾರ್ಯಕ್ರಮದಡಿ ಕೃಷಿಕರು ಹಾಗೂ ಅಗತ್ಯವಿರುವವರಿಗೆ ಯಾವುದೇ ತಲೆನೋವು ಕೊಡದೆ ಸಾಲ ನೀಡಲು ಆರಂಭಿಸಿದರು. ‘ಸ್ವ-ಸಹಾಯ’ ಗುಂಪುಗಳನ್ನು ಆರಂಭಿಸಿ ಅಂಥ ಗುಂಪುಗಳೂ ಸಾಲ ಪಡೆದುಕೊಳ್ಳಬಹುದಾದ ಅವಕಾಶ ಕಲ್ಪಿಸಿದರು. ಈ ಯೋಜನೆ ಹಾಗೂ ಸ್ವ-ಸಹಾಯ ಪದ್ಧತಿಯಿಂದಾಗಿ ಎಷ್ಟೋ ಬಡವರು ಸ್ವಂತ ಗೂಡು ಕಟ್ಟಿಕೊಂಡಿದ್ದಾರೆ, ಅವರ ಮಕ್ಕಳು ಶಾಲೆಯ ಮುಖ ನೋಡುತ್ತಿದ್ದಾರೆ, ಕುಡಿತ ಬಿಟ್ಟಿದ್ದಾರೆ. ಗ್ರಾಮೀಣಾಭಿವೃದ್ಧಿ ಯೋಜನೆಯನ್ನು ಟೀಕಿಸುವವರು ಈ ಅಂಶಗಳನ್ನೂ ಪರಿಗಣಿಸಬೇಕಾಗುತ್ತದೆ.
ಈ ಹಿನ್ನೆಲೆಯಲ್ಲಿ ಸೌಜನ್ಯಾಳಿಗೆ ನ್ಯಾಯ ಕೊಡಿಸುವ ಆವೇಶದಲ್ಲಿ ಆ ಪ್ರಕರಣವನ್ನು ಶ್ರೀಕ್ಷೇತ್ರ ಹಾಗೂ ಅದರ ಧರ್ಮಾಧಿಕಾರಿಯವರ ತೇಜೋವಧೆ ಮಾಡುವ ಅಸ್ತ್ರವನ್ನಾಗಿ ಮಾಡಿಕೊಳ್ಳುವುದು ಬೇಡ. ಅಸಾರಾಮ್ ಬಾಪು, ನಿತ್ಯಾನಂದನಂಥವರು ಜನರ ವಿಶ್ವಾಸ, ನಂಬಿಕೆಗೆ ಖಂಡಿತ ಕೊಡಲಿ ಏಟು ಹಾಕಿದ್ದಾರೆ. ಹಾಗಂತ ಎಲ್ಲರನ್ನೂ ಅಪನಂಬಿಕೆಯಿಂದ ನೋಡುವುದು, ಆ ಮೂಲಕ ಜನರ ನಂಬಿಕೆ, ವಿಶ್ವಾಸವನ್ನೇ ಹಾಳುಗೆಡವುದು ಇಂಥ ಪ್ರಯತ್ನಗಳಿಂದಾಗಿ ಹಿನ್ನಡೆಯಾಗುವುದು ಹಿಂದು ಧರ್ಮಕ್ಕೇ ಎಂಬುದನ್ನು ಭಗವಾಧ್ವಜ ಹಿಡಿದು ಬೀದಿಗಿಳಿದಿದ್ದವರು ಅರ್ಥಮಾಡಿಕೊಳ್ಳಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ, ಅಲ್ಪಸಂಖ್ಯಾತ ಕೋಮಿಗೆ ಸೇರಿದ ಕೆ.ಜೆ. ಜಾರ್ಜ್ ಗೃಹ ಸಚಿವರಾಗಿದ್ದಾರೆ. ಖಂಡಿತ ಅವರ ಬಳಿ ನಿಷ್ಪಕ್ಷಪಾತ ತನಿಖೆ, ನ್ಯಾಯ ಕೇಳೋಣ. ಹಾಲಿ ಸಿಐಡಿ ತನಿಖೆಯ ಪ್ರಾರಂಭಿಕ ಸಂಕೇತಗಳು ಸಂತೋಷ್ ರಾವ್ನತ್ತಲೇ ಬೆರಳು ತೋರುತ್ತಿವೆ. ವರದಿ ಹೊರಬಿದ್ದ ನಂತರವೂ ಅನುಮಾನವಿದ್ದರೆ ಸಿಬಿಐ ತನಿಖೆಗೆ ಒತ್ತಾಯಿಸೋಣ. ಎಷ್ಟೋ ಸಲ ಮಕ್ಕಳು ಮಾಡಿದ ತಪ್ಪಿಗೆ ಅಪ್ಪ-ಅಮ್ಮ ತಲೆ ಕೊಡಬೇಕಾಗುತ್ತದೆ. ಒಂದು ವೇಳೆ ನಿಶ್ಚಲ್ ತಪ್ಪಿತಸ್ಥನೆಂದು ಸಾಬೀತಾದರೆ ಧರ್ಮಸ್ಥಳದಿಂದ ಹೊಣೆಗಾರಿಕೆ ಕೇಳೋಣ. ಆದರೆ ಈಗ್ಗೆ ಹದಿನೈದು ದಿನಗಳ ಹಿಂದಷ್ಟೇ ಬೀದರ್ನ ಬಿಜೆಪಿ ಕಾರ್ಯದರ್ಶಿ ಬಾಬುವಾಲಿಯನ್ನು ಬೆಳಗ್ಗಿನಿಂದ ಸಂಜೆಯವರೆಗೂ ಬದ್ನಾಮಿ ಮಾಡಿದ ಮಾಧ್ಯಮಗಳು ಮರುದಿನ ಸಣ್ಣ ಕ್ಷಮೆ ಕೇಳಿದ ಘಟನೆಯನ್ನು ಮರೆಯಬೇಡಿ. ಹಾಗಾಗಿ ಆಧಾರ ರಹಿತ ಆರೋಪಗಳ ಮೂಲಕ ಶ್ರೀಕ್ಷೇತ್ರದ ಮೇಲಿನ ನಂಬಿಕೆ, ವಿಶ್ವಾಸ ಒಡೆಯುವುದು ಬೇಡ.
ಅಂಥ ದೇದೀಪ್ಯಮಾನನಾದ ಸೂರ್ಯನಿಗೇ ಗ್ರಹಣ ಹಿಡಿಯುತ್ತದೆ. ಇನ್ನು ಸಾಮಾನ್ಯ ಮನುಷ್ಯರು ಯಾವ ಲೆಕ್ಕ? ಹಾಗಾಗಿ ಶ್ರೀ ವೀರೇಂದ್ರ ಹೆಗ್ಗಡೆಯವರು ಈ ಘಟನೆಯಿಂದ ಅಧೀರರಾಗದೆ, ಆದರೆ ಮುಂದೆ ಎಚ್ಚರಿಕೆಯಿಂದ ತಮ್ಮ ಸಮಾಜಸೇವೆಯನ್ನು ಎಂದಿನಂತೆ ಮುಂದುವರಿಸಿ ಕೊಂಡು ಹೋಗುವಂತಾಗಲಿ.
dont stop when u loose we,r with u
Good article!
As said by someone on news channel, I wish people who allege someone, should show some sort of proof for their allegation. But people who are alleging, are alleging based on ‘anthe-kanthe’s.
In the same way, if there is an allegation on someone, the rest of the people should let the investigation take place. But people who are supporting alleged person, are claiming with no proof that the hegde is innocent. It is understandable that it hurts you if your closed one’s are alleged for murder. But that doesn’t mean you give judgement by yourself that he is innocent. Let the law take action.
Btw, your article also should have done certain background investigation for the possible reasons why so many murders(i heard 450) happened in dharmastala, without culprit being found ???
Hegde is known as dharmadhikaari, and almost like the supreme for dharmastala. What is the action he has taken for the welfare of innocents girls who are getting killed mysteriously ?
sir… howdu sir, elli olledu irutto alli kettuddu iratte.. saakshi (proof) ilde obrunna dushane maadodu , avr tejo vadhe maadodu khandita tappu.. ivattin media davr bagge namigantu nambike annode hortogide, moor kotre sose kade, aar kotre atte kade anno taradoru.. nijaamsha irodna helode illa, adbittu bed’de iro bogas ella heltare.. saaladakke dudd iddorella(politians) avrde ondhu channel anta maadkondu, swanta battangi tana maadta idare.. avr tappugalna media davaru torsodu bittu avre great anno tara advtmnt kodatare. ivugalige THE END annode ilwa ??
Whatever may come the people of the nation are with the great man his holiness Dr Veerendra Heggade….Namo Manjunatha.
s pratap sir ur rit…
dear all…
my question is if hegde is innocent…or he dont have aware of rape in dharmastala.. then what do u mean by Dharmadhikari?
since 20 yrs nearly more than 100 fir registerd as rape and murder. if hegde is failed to trace out this issue then he dnt have right to continue his post. he dont have righr to give judgemnt to others claim. fist he have ro clean his area….
Good One ,,,,
Kaal kaalakke namm janarannu heege eccharisadiddalli nammavarella swabhimaana hagu swa pradne maretu tamma budakke taave kodali etu hodakollodu nischita,,,,
Hi,
Pratap , we need more people like you in our country . The thoughts which you put in our minds is just amazing.I’m following you and your articles since i was in 9th-10th standard. Currently Im a software engineer and the articles which you have written believe it or not has a tremendous effect on me, what i am and what i do..!! Hats off.!! 🙂
ಹಿಂದೂ ಧರà³à²® ಮà³à²•à³à²•à²¾à²²à³à²à²¾à²— ಹಾಳಾಗತà³à²¤à²¿à²°à³à²µà²¦à³ ಹಿಂದೂ ಧರà³à²®à²¦ ಗಂಧ ಅರಿಯದ ಹಿಂದೂಗಳಿಂದಲೇ.ಚರà³à²šà²®à³‡à²²à³† ಅಥವಾ ಮಸೀದೆಮೇಲೆ ಇಂಥಹ ಮಸಿ ಹಚà³à²šà²¾à²• ಯಾರ ಹತà³à²¤à²¿à²° ಧೈರà³à²¯ ಇದೆ ಹೇಳಿ ಕಾರಣ ಆ ಧರà³à²®à²¦à²²à²¿à²°à³à²µ ಒಗà³à²—ಟà³à²Ÿà³.ಅಂಥಹ ಗಟà³à²Ÿà²¿à²¤à²¨ ಇರದ ಧರà³à²® ಹಿಂದೂ ಧರà³à²® ಎಂದರೆ ತಪà³à²ªà²¾à²—ಲಾರದೠಕಾರಣ ಮನೆ ಬೆಂಕಿ ಆರಿದಮà³à²¯à²¾à²— ಹೊರಗ ಬರೠಜನ ಹಿಂದೂಗಳà³.
ಚೀನಾ ದೇಶà³à²¯à²¾à²¨ ಇಡೀ ಜಗತೠನಂಬà³à²µà²¦à²¿à²²à³ ಅಂದಮà³à²¯à²¾à²— ಆ ದೇಶದ ನಿಯಮನ ಚೆಂದೆಂದೠಹೋರಾಡà³à²µà²µà²°à³ ಹಿಂದೂಗಳೇ ಅಲà³à²². ವಾಸà³à²¤à²µ ಹೀಗಿರà³à²µà²¾à²— ಪವಿತà³à²°à²µà²¾à²¦ ಜಾಗದಾಗ ಕಸ ಚೆಲà³à²²à²¿ ಕೈತೊಳà³à²•à³‹à²¨à²¾à²• ಹೊಂಟವರ ಬಂಡ ಬಾಯಿ ನಂಬವದಿರಲಿ ಮà³à²šà³à²šà²µà²¦à³ ಆ ದೇವರಿಗೂ ಅಸಾದà³à²¯.
ಕಾಂಗà³à²°à³†à²¸à³ ಗಿಡದ ಕಸ ಸà³à²Ÿà³à²Ÿà²¾à²— ಬರವಂತಹ ಹೊಗೆ ಕೆಂಡ ಇಲà³à²²à²¦ ಬೂದಿಯಂತೆ ಅಂದà³à²°à³† ಸà³à²³à³à²³à²¿à²¨ ಹೊಗೆ ಗಾಳà³à²¯à²— ಬೇಗ ಹರಡಿಬಿಡà³à²µà²¦à³. ಸತà³à²¯ ಕೆಂಡದಾಗ ಕೈ ಇಟà³à²Ÿà²®à³à²¯à²¾à²— ಗೊತà³à²¤à²¾à²—à³à²µà²¦à³.
ಸತà³à²¯à²µà²¾à²¦ ದೇಗà³à²²à²¦à²®à³à²¯à²¾à²— ಗೂಬಿಕà³à²‚ದರà³à²¸à²¾à²• ಹೊಂಟವರ ಮನೆಮà³à²¯à²¾à²— ಗೂಬಿ ಬಂದೠಕೂಗಿದರ ಎಲà³à²²à²°à²¦à³‚ ಅಂತà³à²¯.
ಸà³à²³à³à²³à³ ಆಪಾದನೆ ಮಾಡà³à²µà²µà²°à³ ಸà³à²µà²¤à²ƒ ಗೂಬಿ ಕರೆಯಾಕತà³à²¤à²¾à²°à²‚ದà³à²° ಅವರ ಅವದಿ ಮà³à²—à³à²¯à²¾à²• ಬಂದೈತೀ ಅಂತ.
ಹಿಂದೂ ಧರà³à²® ಆಲದ ಮರದಂಗà³à²¹ ಹಿಂಗà³à²¹à²¾à²—ಿ ಮರದ ಬಡà³à²¡à²¿ ಅಗಿಯà³à²µà²¦à³ ಕಡಲೆ ತಿಂದಷà³à²Ÿà³ ಸà³à²²à²à²µà²²à³à²².ಒಂದೠಟೊಂಗಿ ಕಟà³à²Ÿà²®à²¾à²¡à³à²µà²¦à²° ಒಳಗ ಮತà³à²¤à³Šà²‚ದೠಚಿಗಿಯà³à²¤à³à²¤à²¿à²°à²¤à³à²¤. à²à²¯à²¬à³‡à²¡à²¿ à²à²¨à³‚ ಆಗದೠಪವಿತà³à²° ಧರà³à²®à²¸à³à²¥à²³à²•à³à²•à³† ಮತà³à²¤à³ ಧರà³à²®à²¾à²¦à³€à²•à²¾à²°à²¿à²—ಳಿಗೂ.
ಬà³à²¦à³à²¦à³.
hello sir,
very good article… i ws expecting this article from u.
Jp
Engineer
S.v. Gurukula old student
kanare kandaru parambarisi nodu…………………………………………………………………………….
super……………….!ಹೆಗà³à²—ಡೆ is great person
hi sir
u have done a great job,got to know about so many things which i haven’t aware of.you have your own rights to talk and even me also have the same.but in your article ಕà³à²®à²¾à²°à²¿ ಸೌಜನà³à²¯à²¾à²³ ಅಮಾನà³à²· ಕೊಲೆಗೆ ನà³à²¯à²¾à²¯ ಸಿಗಲೇಬೇಕà³, ಆದರೆ..,you are giving hype to dr.verebdra heggade,he is just a ordinary human being with a title card of ”dharmasthala dharmadhikari” he might have done so many good things and it doesn’t mean that he or his family will not commit to any mistakes.Truth can’t be hidden for too long.it may comes for/against hegde ji.whatever it may be justice should be done for sowjany’s family.better you change your article name because i personally feels it doesn’t suits….
thumba arthavathadha baraha
Good to see your valuable comments on the article… but people are taking in to another route that is hurting a lot ……it’s unfortunate…
Nice one…
Please give facbook liking option on your website. So that such articles can be shared with FB community easily rather than copy the URL and paste.
its just the hatred that is playing in the minds of few activists but in our country everything takes form of complicated controversy common man is losing his conscience rapidly and also fore thinking ability before accusing somebody every step a movement takes it must be re thought before moving forward hope people understand this
Yes, It is utter non sense to link Shri Dharmadhikari to this rape and murder case. Those ಧೀರಜೠಕೆಲà³à²²à²¾, ಉದಯೠಜೈನೠಮತà³à²¤à³ ಮಲà³à²²à²¿à²•à³ ಜೈನೠmay belongs to Jain community in which Dharmadhikari also belongs to Jain community. Is is fare to conect two persons who belobgs to same community. It is like connceting orange and apple. Utter shameless.
However, dharmasthala is dharmasthala. Epitome of Seva.
ಲೇಖನ ಸೌಜನà³à²¯ ಹಾಗೠಹೆಗà³à²—ಡೆಯವರ ಬಗà³à²—ೆ ಅಳೆದೠತೂಗಿ ಬರೆದಂತಿದೆ. ಸೌಜನà³à²¯ ಪà³à²°à²•à²°à²£à²¦à²²à³à²²à²¿ ಆರೋಪಿ ಸಂತೋಷೠಆಗಲಿ ಅಥವಾ ಇನà³à²¨à²¾à²°à³‡ ಆಗಿದà³à²¦à²°à³‚ ಆಕೆ ಸಾಯà³à²µà²¾à²— ಅನà³à²à²µà²¿à²¸à²¿à²¦ ಹಾಗೠಆಕೆಯ ಕà³à²Ÿà³à²‚ಬ ಈಗ ಅನà³à²à²µà²¿à²¸à³à²¤à³à²¤à²¿à²°à³à²µ ನೊವೠಎಳà³à²³à²·à³à²Ÿà³‚ ಕಡಿಮೆಯಾಗà³à²µà³à²¦à²¿à²²à³à²². ಸೌಜನà³à²¯à²³ ಸಾವೠಅನà³à²®à²¾à²¨ ತರಿಸà³à²µ ರೀತಿಯಲà³à²²à²¿à²¦à³à²¦à²¦à³à²¦à²•à³à²•à³‡à²¨à³‹ ಬಹà³à²·à²ƒ ಅದೠಹೆಗà³à²—ಡೆಯವರ ಕà³à²Ÿà³à²‚ಬ ಸದಸà³à²¯à²°à²¿à²—ೆ ತಳà³à²•à³ ಹಾಕà³à²µà²‚ತಾಗಿದೆ. ಹೆಗà³à²—ಡೆಯವರಲà³à²²à²¿ ರಾಜà³à²¯à²¦ ಜನತೆ ದೈವ à²à²¾à²µà²¨à³†à²¯à²¨à³à²¨à³Šà²‚ದಿರà³à²µà³à²¦à²°à²²à³à²²à²¿ ಎರಡೠಮಾತಿಲà³à²². ಆದರೂ ಸೌಜನà³à²¯à²³à²¿à²—ಾಗಿ ಹೆಗà³à²—ಡೆಯವರೠಈ ನೋವನà³à²¨à³ ಸಹಿಸಿಕೊಂಡೠತನಿಖೆಗೆ ಸಹಕರಿಸಲಿ. ಆದರೆ ತನಿಖಾ ವರದಿ ಬರà³à²µ ಮà³à²‚ಚೆಯೇ ಹೆಗà³à²—ಡೆಯವರಿಗೆ ಅವಮಾನವಾಗಿದೆ ಎಂದೠವಾದ ಬೆಳೆಸà³à²µ, ಹೋರಾಟಕà³à²•à²¿à²³à²¿à²¯à³à²µ ಮಂದಿ ಸೌಜನà³à²¯ ಸಾವೠಇಡೀ ಧರà³à²®à²¸à³à²¥à²³à²•à³à²•à³† ಆದ ಅವಮಾನ ಎಂದೠತಿಳಿದೠಉನà³à²¨à²¤ ಮಟà³à²Ÿà²¦ ತನಿಖೆ ಆಗà³à²µà²µà²°à³†à²—ೂ ಕಾಯಬೇಕà³. ತನಿಖೆಯಲà³à²²à²¿ ಹೆಗà³à²—ಡೆ ಕà³à²Ÿà³à²‚ಬಸà³à²¥à²° ತಪà³à²ªà²¿à²²à³à²²à²¦à²¿à²¦à³à²¦à²°à³† ಇದನà³à²¨à³ ಹಬà³à²¬à²¿à²¸à²¿à²¦à²µà²°à²¿à²—ೂ ಶಿಕà³à²·à³†à²¯à²¾à²—ಲಿ.
Very very careful words thank u
HI Prathap,
I totally agree with you . Some people want to shake the people trust on Dhrmastala, for that they are using Sauganyas name. whole Hinduism stands on trust, if u shake that trust its easy to brake the Hindu dharma . Darmastala is pilot project for them.
But people who want to brake Hindu Dharma they dont know that ,this Dharma is not only a dharam its way of life, how can you shake any one way of life?
Regards
Adiga
super article sir….
ಅರà³à²¥à²—ರà³à²à²¿à²¤ ಲೇಖನ
Sir virendra hegadyavare nayya sigbekanta heluva nivu horatake bandu sowjanya sistrge nayya siguvahage madi bani.nivu horatake bandare horatake ondu sakthi bandahage
balanced article.
Tappu yar madidaru gotila .tapu yare madidaru yelarigu onde nayya aglebeku badavane agali sirivantane agali tapu tappe. Ondu tahi ondu makkalanu sakudake yestu kasta padtale yestu novana anubavisatale .ega a tahi ge a novige bele yelide .kanniralle jivana nedesutiro aa sowjanya sistrna tahiya horatake nayya sigali.
Hello Pratap,
I completely agree with you. The thing is the society jumps into conclusion very soon because of the happenings around us.
Take an example of Swamiji. Before, when I was a small kid (now I am 23), I used to hear my parents and others speaking of many swamijis and they used to treat them as gods. Because of the news related to one or two Swamijis involving in “Samaja Ghatuka Kriya”, people are losing faith in all the swamijis.
In a similar way, even though certain people will be knowing that their deeds are wrong, they do it because of some pressures. For example, during elections, the voter will be knowing that the person who is contesting is not the eligible candidate, still because of his personal problems or for the greed of some worldly pleasures, they vote the wrong candidate. At that moment, they may feel that they are profited by this, but, people are forgetting that in long run, they are not really in profit but in loss.
I hope that every person should be a true patriot first. And humanity should be his principle of life. Then this country and by large this world shall prosper and peace is established automatically. This is just my opinion.
ನಿಮà³à²® ಲೇಖನ ಓದಿದ ಮೇಲೆ ಮನಸà³à²¸à²¿à²—ೆ ಸà³à²µà²²à³à²ª ನೆಮà³à²®à²¦à²¿ ಸಿಕà³à²•à²¿à²¦à²‚ತಾಗಿದೆ. ಪà³à²°à²¤à²¾à²ªà²°à³† ನೀವೠಬರೆದಿರà³à²µ ಪà³à²°à²¤à²¿à²¯à³Šà²‚ದೠವಾಕà³à²¯à²µà²¨à³à²¨à³ ಜನ ಓದಬೇಕà³. ಹೋರಾಟದ ಗà³à²‚ಗಿನಲà³à²²à²¿à²°à³à²µ ಜನರನà³à²¨à³ ಯಾವà³à²¦à³‹ ಅದೃಶà³à²¯ ಶಕà³à²¤à²¿à²—ಳೠದà³à²°à³à²ªà²¯à³‹à²—ಪಡಿಸಿಕೊಳà³à²³à²²à³ ಪà³à²°à²¯à²¤à³à²¨à²¿à²¸à³à²¤à³à²¤à²¿à²°à³à²µà³à²¦à²‚ತೠಸತà³à²¯
very nice artical…
Super sir
pakkad manege benki biddag arisodu bittu adar pakkad mane docho kelasa madtidare tikakararu.ivaru samajakke kalanka .thank you pratap anna .
Obviously you have the knack of mending the facts to suit your argument. Even though you have strongly pitched for VH, you do not have any facts to back it up. You have written a lot about Hegde and SDM as if public is ignorant about them, but how does it prove Nischal is innocent ?
Your only argument is, Hegde showed some papers proving his relative was not in town on that day !
Well isn’t it a classic technique used by all rich and powerful ? We have grown up reading and watching movies which have again and again used this ploy to prove someone innocent ?
Have you seen those documents? You go on lengths to prove Tippu sultan indeed massacred and converted loads of Hindus to Islam, have you investigated more than what you saw on Television in Saujanya’s case?
However great Veerendra Hegde could be, those qualities can not pass on to his nephew! Doesn’t it indirectly pass on the undue goodwill ,VH has gathered over the years, to his nephew ?
Well it might be the case, you have to return some favors to Veerendra Hegde or your effort will be appreciated by him in some way !
P S:- expecting some nasty comments from ignorant followers of yours
Excellent article by u, go ahead, wish u a bright future
Vegy Good Article
Pratap, i expected your article on this. The Guilty should be punished. You’ve written in every aspects and anti-hindu elements are making these kind of allegations on Dharmastala and SKDRDP as well as Shree Virendra Hegde. The great medias also misleading the society.I hope truth will come out. But i do believe in Dharmastala and Hegade.
http://udupibits.com/2013/10/23/%E0%B2%A4%E0%B2%BE%E0%B2%A8%E0%B3%81-%E0%B2%AA%E0%B3%8D%E0%B2%B0%E0%B2%B6%E0%B3%8D%E0%B2%A8%E0%B2%BE%E0%B2%A4%E0%B3%80%E0%B2%A4%E0%B2%A8%E0%B3%86%E0%B2%82%E0%B2%AC-%E0%B2%AD%E0%B2%BE%E0%B2%B5%E0%B2%A8/
100% incorrect. nimma baraha satyakke dooravaddu
ಜೈ ಪà³à²°à²¤à²¾à²ªà³ ಸಿಂಹರವರೇ…
ಚಿಕà³à²• ವಯಸà³à²¸à²¿à²¨à²¿à²‚ದಲೇ ನಿಮà³à²® ಲೇಖನವನà³à²¨à³ ಓದà³à²µà³à²¦à³†à²‚ದರೆ ನನಗೆ ಎಲà³à²²à²¿à²²à³à²²à²¾à²¦ ಆಸಕà³à²¤à²¿,ಸಾಲದೆಂಬà³à²¦à²•à³à²•à³† ನಿಮà³à²® ಪà³à²¸à³à²¤à²•à²µà²¨à³à²¨à³ ಬರೀ ಲೈಬà³à²°à³‡à²°à²¿ ಅಥವಾ ಪೇಪರೠನಲà³à²²à²¿ ಮಾತà³à²° ಓದಿ ಸಾಕಾಗದೇ ನಿಮà³à²® ಲೇಖನದ ಕೆಲವೊಂದೠಪà³à²¸à³à²¤à²•à²µà²¨à³à²¨à³ ಖರೀದಿ ಮಾಡಿ ಓದà³à²¤à³à²¤à²¿à²¦à³à²¦à³‡à²¨à³† ಯಾಕೆಂದರೆ ನಿಮà³à²® ಲೇಕನದಲà³à²²à²¿ à²à²¨à³‹ ಸಿಗà³à²¤à³à²¤à³† ಅನà³à²¨à³‹ ಉದà³à²¦à³‡à²¶à²¦à²¿à²‚ದ BUT ಇವತà³à²¤à³ ನಿಮà³à²® ಲೇಖನ ಓದಿ ನಿಜವಾಗಿಯೂ ತà³à²‚ಬಾನೆ ನಿರಾಶೆ ಆಗà³à²¤à³à²¤à²¿à²¦à³†! ಒಬà³à²¬ ಸಾಹಿತಿಗೆ ಸಾಹಿತà³à²¯à²µà²¨à³à²¨à³ ರಚಿಸಿ ಗೊತà³à²¤à²¿à²¦à³‡ ಹೊರತೠತನà³à²¨ ನಿಜ ಜೀವನದಲà³à²²à²¿ ಅಳವಡಿಸಿ ಅಥವಾ ಅನà³à²à²µà²¿à²¸à²¿ ಗೊತà³à²¤à²¿à²²à³à²²! ಇಷà³à²Ÿà²•à³à²•à³ ಸೌಜನà³à²¯ ಪà³à²°à²•à²°à²£à²¦ ಬಗà³à²—ೆ ಒಂದೇ ಮಾತಿನಲà³à²²à²¿ ಹೇಳಬೇಕೆಂದರೆ ವಿರೇಂದà³à²° ಹೆಗà³à²—ಡೆಯವರಕà³à²Ÿà³à²‚ಬ ತಪà³à²ªà²¿à²¤à²¸à³à²¥à²°à²²à³à²² ಅಂಥಾ ಹೇಳೊಕೆ ನಾವà³à²¯à²¾à²°à³?ಧರà³à²®à²¸à³à²¥à²³à²¦ ಒಳà³à²²à³‡à²¯ ಕಾರà³à²¯à²•à³à²°à²®à²µà²¨à³à²¨à³ ಮಾತà³à²° ನಾವೠನೋಡà³à²¤à³à²¤à³‡à²µà³† ವಿನ: ನಡೆಯà³à²µ ಯಾವà³à²¦à³‡ ದೌರà³à²œà²¨à³à²¯ ಅಥವಾ ಅನà³à²¯à²¾à²¯à²¦ ಬಗà³à²—ೆ ಯಾರೠಮಾತನಾಡಲà³à²² ಯಾಕೆಂದರೆ ನಾವೠಎಷà³à²Ÿà²¾à²¦à²°à³‚ ಬೇರೆಕಡೆ ಇರà³à²µà²µà²°à³,ನಿಜವಾದ ನೋವೠಇರೋದೠಅಲà³à²²à²¿à²¨ ವಾಸಿಗಳಿಗೆ ಮಾತà³à²° ಗೊತà³à²¤à²¿à²°à²¦à³‹..So ದಯವಿಟà³à²Ÿà³ ಜನರೠಹೋರಾಟ ಮಾಡà³à²¤à³à²¤à²¿à²¦à³à²¦à²¾à²°à³† ನà³à²¯à²¾à²¯ ಯಾವ ರೀತಿ ಇರà³à²¤à³à²¤à³† ಅನà³à²¨à³Šà²¦à²¨à³à²¨ ಕಾದೠನೋಡೋಣ ನಿಮà³à²®à²‚ತವರ ಪà³à²°à²à²¾à²µ ಬೀಳà³à²µ ಲೇಖನಗಾರರೠಈ ರೀತಿ Suddenly Decission ಕೊಡà³à²¤à³à²¤à²¿à²¦à³à²¦à²¿à²°à²¿ ಅಂದà³à²°à³† ನಿಜಕà³à²•à³‚ ಇದೠತà³à²‚ಬಾ ಬೇಜಾರದ ಸಂಗಾತಿ.
Prathap sir bahala uttama lekana hindu mata,devastaanagala virudda nadeyuttiruva shadyantrada ondu baaga dharmastalada viruddada aaropa
Prathap sir bahala uttama lekana hindu mata,devastaanagala virudda nadeyuttiruva shadyantrada ondu baaga dharmastalada viruddada aaropa…….
Prathap sir bahala uttama lekana hindu mata,devastaanagala virudda nadeyuttiruva shadyantrada ondu baaga dharmastalada viruddada aaropa…….aadre nammavare virodigalondige serkondirodu maatra viparyaasa
sir, nimma artivle noodidmele samaadhana aayutu.
VERY GOOD ARTICLE. I APPRECIATE YOUR CONCERN AND WAY OF THINKING.
I EXPECT MANY MORE ARTICLES FROM YOU
ಸೌಜನà³à²¯à²¯à³à²¤
ಪà³à²°à²¤à²¾à²ªà³ ನಾನೠನಿಮà³à²®à²¾ ಅà²à²¿à²®à²¾à²¨à²¿, ಟà³à²µà²¿à²Ÿà³à²Ÿà²°à³ ನಲà³à²²à²¿ ಕೂಡ ನಾನೠನಿಮà³à²®à²¨à³à²¨à²¾ follow ಮಾಡà³à²¤à³€à²¨à²¿.
Hats ಆಫೠಕಣà³à²°à³€ ನಿಮà³à²®à²¾ ಇ artcle ತà³à²‚ಬಾ correct ಆಗಿದೆ.
ಪà³à²°à²¤à²¾à²ª ಸಿಂಹ ರಿಗೆ,
ಬೆಳà³à²³à²—ೆ ಕಾಣೋದೆಲà³à²² ಹಾಲೠಅಂತ ತಿಳಿಯೋದೠಮೂರà³à²–ತನ ಹಾಲೠಆದà³à²°à³† ಒಳà³à²³à³†à²¯à²¦à³ ಆದà³à²°à³† ಅದೠಸà³à²£à³à²£à²¨à³‚ ಆಗಬಹà³à²¦à³ ಅಲà³à²µà³†… ಲೇಖನದಲà³à²²à²¿ ತಪà³à²ªà³ ಮಾಡಿದವರನà³à²¨à³ ಹೆಗà³à²—ಡೆಯವರೠಪಶà³à²µà²¿à²¨à²‚ತೆ ಕà³à²·à²®à²¿à²¸à³à²¤à³à²¤à²¾à²°à³† ಅಂತ ನಿಮಗೆ ಹೇಲಿದವರೠಯಾರೠರೀ… ಅಲà³à²²à²¿à²¨ ಪರಿಸà³à²¥à²¿à²¤à²¿à²¯ ಆಳ ಅರಿವಿಲà³à²²à²¦à³† ನನಗೂ ಮಾತಾಡೋಕೆ ಆಗಲà³à²² ಹೇಗೆ ನಿಮಗೂ ಸಹ… ಇಸà³à²Ÿà²•à³à²•à³‚ ತಮà³à²®à²¦à³‡ ಕಾಲೇಜಿನ ಹೆಣà³à²£à³à²®à²—ಳ ಮೇಲೆ ಈ ರೀತಿ ಘà³à²¹à³‹à²° ದೌರà³à²œà²¨à³à²¯ ಆಗಿ ಒಂದೠವರà³à²·à²†à²¦à³à²°à³‚ ಸà³à²®à³à²®à²¨à³† ಇದà³à²°à²²à³à²² ಬೇಗ ತನಿಕೆ ಮಾಡಿ ಅಂತ ಪà³à²°à²à²¾à²µà²¿à²—ಳಾದ ಇವರೠಸರಕಾರವನà³à²¨à³ ಒತà³à²¤à²¾à²¯ ಮಾಡಬಹà³à²¦à²¿à²¤à³à²¤à²²à³à²µà³†… ತಮà³à²®à²¦à³‡ ಊರಿನ ಹೆಣà³à²£à³‚ಮಗಳಿಗೆ ಈ ತರದ ಅನà³à²¯à²¾à²¯à²µà²¾à²¦à²¾à²—à³à²²à³‚ ನೆಡೇದಾಡೋ ದೇವà³à²°à³ ಮಾತಾಡದ ಕಲà³à²²à²¿à²¨ ದೇವà³à²°à²¾à²¦à³à²°à²²à³à²² ಯಾಕೆ ಅಂತ ಅನà³à²®à²¾à²¨ ಒಬà³à²¬ ಸಣà³à²£ ಮಗà³à²µà²¿à²—ಾದà³à²°à³ ಬರà³à²¤à³à²¤à³† ಮತà³à²¤à³† ಕೇಳೇ ಕೇಳà³à²¤à²¾à²°à³† ಮಿಸà³à²Ÿà²°à³ ಪà³à²°à²¤à²¾à²ª ಸಿಂಹ ರವರೆ!! ಇದà³à²°à²²à³à²²à²¿ ಕೇಳà³à²¤à²¾à²‡à²°à³‹à²° ತಪà³à²ªà³ ತಂತ ನಮà³à²®à²‚ತವರೠನಿಮà³à²®à²‚ತವರೠಸರà³à²Ÿà²¿à²‡à²•à³‡à²Ÿà³ ಕೊಡೋಕೆ ಆಗಲà³à²²…
Hi Prathap,
Yes, the points you discussed are so relevant to each of us, and should always judge by the history not by incident was really good. No one is above law, so wait for results as its going to other higher investigation agency.
Nice facts provided to reader.
-Vasantha
ಸಮತೂಕದ, ಸಂದರà³à²à³‹à²šà²¿à²¤ ಬರಹ.
” ನಮà³à²® ಸಮಾಜ ಹೇಗಿದೆಯೆಂದರೆ ಆರೋಪ ಮಾಡà³à²µà²µà²°à²¿à²—ೆ ಸಾಕà³à²·à³à²¯ ನೀಡà³à²µ ಜವಾಬà³à²¦à²¾à²°à²¿à²¯à³‚ ಇರà³à²µà³à²¦à²¿à²²à³à²², ಕೇಳಿಸಿಕೊಳà³à²³à³à²µà²µà²°à³ ಆಧಾರವನà³à²¨à³‚ ಕೇಳà³à²µà³à²¦à²¿à²²à³à²². ಸತà³à²¯à²¦ ಸರಳ ಸಾದರಕà³à²•à²¿à²‚ತ Conspiracy Theoryಗಳೠಯಾವತà³à²¤à³‚ ರೋಚಕವಾಗಿರà³à²¤à³à²¤à²µà³†, ಖà³à²·à²¿ ಕೊಡà³à²¤à³à²¤à²µà³†.”
ಎನà³à²¨à³à²µ ನಿಮà³à²® ಮಾತà³à²—ಳೠಅಕà³à²·à²°à²¶à²ƒ ಸತà³à²¯!
ಲೇಖನ ಚೆನà³à²¨à²¾à²—ಿದೆ. ಇದರಿಂದ ಶà³à²²à²¾à²˜à²¨à³† ಪಡಿತೀರ ಅನà³à²¤à²¾ ಇರೊರಿಗೆ ಒಂದೠಮಾತ೅ಈ ಲೇಖನದಿಂದ ಸತà³à²¯ ಸಾಬೀತಾಗಲà³à²², ತನಿಖೆಯೊಂದಿಗೆ ಸೌಜನà³à²¯à²³à²¿à²—ೆ ನà³à²¯à²¾à²¯ ಸಿಗಲಿ ಅನà³à²¨à³Šà²¦à³‡ ಇದರ ಉದà³à²¦à³‡à²¶. ಸಹನೆಯಿಂದ ಕಾಯೊಣ.