Date : 24-08-2008, Sunday | 26 Comments
ಅತ್ರತಿಷ್ಠ ಯತಿಶ್ರೇಷ್ಠ ಗೋಕರ್ಣೇ ಮುನಿಸೇವಿತೇ
ಮಹಾಬಲಸ್ಯ ಲಿಂಗಂ ಚ ನಿತ್ಯಂ ವಿಧಿವದರ್ಚನಂ
ಗೋಕರ್ಣ ಮಂಡಲೇ ವ್ಯಕ್ತಂ ತವ ಶಿಷ್ಯ ಪರಂಪರೈಃ
ಆಚಾರ್ಯತ್ವಂಚ ಕುರುತಾಂ ವಿದ್ಯಾನಂದ ಮಹಾಮತೇ
ಅಂದರೆ, ‘ಯತಿಶ್ರೇಷ್ಠನಾದ ವಿದ್ಯಾನಂದನೇ, ಗೋಕರ್ಣ ದಲ್ಲಿ ನಿಲ್ಲು. ನಿತ್ಯವೂ ಮಹಾಬಲನ ಲಿಂಗವನ್ನು ವಿಧಿವತ್ತಾಗಿ ಅರ್ಚಿಸು. ನಿನ್ನ ಶಿಷ್ಯ ಪರಂಪರೆಯಿಂದ ಒಡಗೂಡಿ ಆಚಾರ್ಯತ್ವವನ್ನು ಮಾಡುತ್ತಾ ಮಹಾಮತಿಯಾದ ನೀನು ಇಲ್ಲಿರು’ ಎಂದು ನುಡಿದ ಆದಿ ಶಂಕರಾಚಾರ್ಯರೇ ಗೋಕರ್ಣದಲ್ಲಿ ಮಠವೊಂದನ್ನು ಸ್ಥಾಪಿಸಿದರು.
ವರದ ಮಹರ್ಷಿಯಿಂದ ಪ್ರಾಪ್ತವಾಗಿದ್ದ ಶ್ರೀರಾಮಾದಿ ವಿಗ್ರಹಗಳು, ಚಂದ್ರಮೌಳಿಯ ಲಿಂಗ, ಪಾದುಕೆಯನ್ನು ವಿದ್ಯಾನಂದರಿಗೆ ಒಪ್ಪಿಸಿದ ಶಂಕರಾ ಚಾರ್ಯರು ಈ ಮಠ ‘ರಘೂತ್ತಮ ಮಠ’ವೆಂದು ಪ್ರಸಿದ್ಧಿ ಯಾಗಲಿ ಎಂದು ಹಾರೈಸಿ ಜಗನ್ನಾಥ ಕ್ಷೇತ್ರಕ್ಕೆ ತೆರಳಿದರು. ಹೀಗೆ ಶಂಕರಾಚಾರ್ಯರಿಂದ ನೇರವಾಗಿ ದೀಕ್ಷೆ ಪಡೆದ ವಿದ್ಯಾನಂದರೇ ಈ ಮಠದ ಮೊದಲ ಪೀಠಾಧಿಪತಿಗಳು. ಗೋವಾದ ಮಾಂಡೋವಿ ನದಿಯಿಂದ ಕೇರಳದ ಚಂದ್ರ ಗಿರಿ ನದಿಯವರೆಗೆ ಮಠದ ವ್ಯಾಪ್ತಿ ಹರಡುತ್ತದೆ. ಇದು ಒಂದು ಜಾತಿಗೆ ಸೇರಿದ ಮಠವಲ್ಲ. ಈ ಪ್ರದೇಶಗಳಲ್ಲಿ ಕಂಡುಬರುವ ಹವ್ಯಕ, ದೇವಾಂಗ, ಮಡಿವಾಳ, ಭಂಡಾರಿ, ಹಾಲಕ್ಕಿ, ಅಮ್ಮಕೊಡವ, ಪದ್ಮಶಾಲಿ, ಭೋವಿ, ಹರಿಕಂತರು, ಮರಾಠಿ, ಕೋಕಾಬಿ, ಪಡಿಯಾರು, ಗುಡಿಗಾರ, ಭಜಂತ್ರಿ, ಗಾಣಿಗ, ಗೋಮಾಂತರು, ಕಂಚುಗಾರ, ಕೆಡಿಯ ಹೀಗೆ ೧೮ ಜಾತಿಗಳು ರಘೂತ್ತಮ ಮಠಕ್ಕೆ ಸೇರಿವೆ.
ಇದೇನೇ ಇರಲಿ, ನಮ್ಮ ಕರ್ನಾಟಕದಲ್ಲಿ ಹಿಂದೂ ಧರ್ಮದ ಪುನರುತ್ಥಾನಕ್ಕಾಗಿ ತಲೆಯೆತ್ತಿದ ವಿಜಯ ನಗರ ಸಾಮ್ರಾಜ್ಯ ಹಾಗೂ ಆ ಸಾಮ್ರಾಜ್ಯದ ವ್ಯಾಪ್ತಿಗೆ ಸೇರಿದ್ದ ಮಂಡಲಾಧೀಶರು, ಪ್ರಾಂತಾಧಿಪತಿಗಳು, ಪಾಳೇಗಾರರು ಮಠಕ್ಕೆ ದಾನ, ದತ್ತಿ ನೀಡಲಾರಂಭಿಸಿದರು. ಅವರು ನೀಡಿದ ಹಗಲು ದೀವಟಿಗೆ, ಶ್ವೇತಛತ್ರಗಳು, ಕುದುರೆ, ಆನೆ, ಒಂಟೆಗಳಿಂದ ಶ್ರೀಕ್ಷೇತ್ರ ಗೋಕರ್ಣದಲ್ಲಿ ತಲೆಯೆತ್ತಿದ್ದ ರಘೂತ್ತಮ ಮಠಕ್ಕೂ ವೈಭವ ಬಂತು.
ಈ ರಘೂತ್ತಮ ಮಠಕ್ಕೂ ರಾಮಚಂದ್ರಾಪುರ ಮಠಕ್ಕೂ ಒಂದು ಕೊಂಡಿಯಿದೆ.
ರಘೂತ್ತಮ ಮಠದ ೧೨ನೇ ಯತಿಗಳಾದ ಶ್ರೀ ರಾಮ ಚಂದ್ರ ಭಾರತೀ ಸ್ವಾಮಿಗಳು ಕಾರಣಾಂತರದಿಂದ ಹೊಸನಗರ ತಾಲೂಕಿನಲ್ಲಿರುವ ಶ್ರೀರಾಮಚಂದ್ರಾಪುರ ಗ್ರಾಮದ ಶರಾವತಿ ನದಿ ತೀರಕ್ಕೆ ವಲಸೆ ಬಂದರು. ಅಲ್ಲೇ ಒಂದು ಕುಟೀರವನ್ನು ನಿರ್ಮಿಸಿಕೊಂಡು ವಾಸಮಾಡಲಾರಂಭಿಸಿದರು. ಹಾಗೆ ಯತಿಗಳೇ ಆಗಮಿಸಿದ ಕಾರಣ ಶ್ರೀರಾಮಚಂದ್ರಾಪುರವೇ ಮಠದ ಮುಖ್ಯಕೇಂದ್ರವಾಯಿತು. ರಘೂತ್ತಮ ಮಠ ಹೋಗಿ ಶ್ರೀರಾಮಚಂದ್ರಾಪುರ ಮಠವಾಯಿತು. ಇತ್ತ ೧೨ನೇ ಯತಿಗಳು ಇರುವವರೆಗೂ ಆದಿ ಶಂಕರಾಚಾರ್ಯರ ಅಣತಿಯಂತೆ ಗೋಕರ್ಣದಲ್ಲಿರುವ ವಿಶ್ವವಿಖ್ಯಾತ ಶ್ರೀಸಂಸ್ಥಾನ ಮಹಾಬಲೇಶ್ವರ ದೇವರ ಹಾಗೂ ಪರಿವಾರ ದೇವರ ಪೂಜಾದಿ ಸೇವೆಗಳನ್ನು ಮಠದ ಪೀಠಾಧಿಪತಿಗಳೇ ನೆರವೇರಿಸುತ್ತಾ ಬರುತ್ತಿದ್ದರು. ಅವರಿಗೆ ಪೂಜಾಕಾರ್ಯಗಳ ಸಂದರ್ಭದಲ್ಲಿ ಸಹಾಯ ಮಾಡಲು ಉಪಾಧಿವಂತರು ಎಂಬವವರಿದ್ದರು. ಆದರೆ ೧೨ನೇ ಯತಿಗಳು ರಾಮಚಂದ್ರಾಪುರಕ್ಕೆ ಬಂದು ನೆಲೆಸಿದ ಕಾರಣ, ರಾಮಚಂದ್ರಾಪುರವೇ ಮುಖ್ಯವಾದ ಕೇಂದ್ರವಾದ ಸಲುವಾಗಿ ಗೋಕರ್ಣದ ಮಹಾಬಲೇಶ್ವರ ಹಾಗೂ ಪರಿವಾರ ದೇವರ ಪೂಜಾ ಸೇವೆಯನ್ನು ಯತಿಗಳೇ ನೆರವೇರಿ ಸಲು ಸಾಧ್ಯವಾಗದಂತಾಯಿತು. ಇಂತಹ ಪರಿಸ್ಥಿತಿಯಲ್ಲಿ ಯತಿಗಳಿಗೆ ಪೂಜಾ ಸಂದರ್ಭದಲ್ಲಿ ಸಹಾಯ ಮಾಡುತ್ತಿದ್ದ ಉಪಾಧಿವಂತರೇ ಅರ್ಚನೆ ಮಾಡಬೇಕಾಗಿ ಬಂತು. ಆದರೆ ಮಠ ಸ್ಥಳಾಂತರಗೊಂಡರೂ ಉಪಾಧಿವಂತರು ಪೀಠಾಧಿಪತಿಗಳ ಹತೋಟಿಯಲ್ಲೇ ಇದ್ದರು, ಅಣತಿಗೆ ಅನುಗುಣವಾಗಿ ನಡೆದುಕೊಳ್ಳುತ್ತಿದ್ದರು. ಇತ್ತೀಚಿನವರೆಗೂ, ಅಂದರೆ ೧೯೮೩ರಲ್ಲಿ ಶ್ರೀಕ್ಷೇತ್ರ ಗೋಕರ್ಣದಲ್ಲಿ ಶ್ರೀಸಂಸ್ಥಾನ ಮಹಾಬಲೇಶ್ವರ ದೇವರಿಗೆ ಅಷ್ಟಬಂಧ ಕಾರ್ಯಕ್ರಮ ನಡೆದಾಗಲೂ ಮಠದ ೩೫ನೇ ಪೀಠಾಧಿಪತಿಗಳಾಗಿದ್ದ ರಾಘವೇಂದ್ರ ಭಾರತೀ ಅವರೇ ಮುಂದೆ ನಿಂತು ನವರತ್ನಾದಿಗಳನ್ನು ದೇವರಿಗೆ ಅರ್ಪಿಸಿ ವಿಧಿವಿಧಾನಗಳನ್ನು ನೆರವೇರಿಸಿಕೊಟ್ಟಿದ್ದರು. ಇಂದಿಗೂ ಪೀಠಾಧಿಪತಿಗಳ ಪರಾಕು ಹೇಳುವಾಗ “ಶ್ರೀಸಂಸ್ಥಾನ ಗೋಕರ್ಣ ಮಂಡಲಾಧೀಶ್ವರ ಶ್ರೀಮದ್ ಜಗದ್ಗುರು ಶಂಕರಾಚಾರ್ಯ” ಎನ್ನಲಾಗುತ್ತದೆ.
ಆದರೆ ಆದಿಶಂಕರರು ಹಾದುಹೋದ ಗೋಕರ್ಣಕ್ಕೆ ಇಂದು ನೀವೇನಾದರೂ ಭೇಟಿ ಕೊಟ್ಟರೆ ದೇವರು ಇರುವಿಕೆಯ ಬಗ್ಗೆಯೇ ನಿಮ್ಮ ಮನದಲ್ಲಿ ಖಂಡಿತ ಅನು ಮಾನಗಳೇಳುತ್ತವೆ!!
ಬೆಂಗಳೂರಿನ ಮೆಜೆಸ್ಟಿಕ್ ಬಸ್ಸ್ಟಾಂಡ್ ಅಥವಾ ಗಾಂಧೀನಗರದಲ್ಲಿ ಬಸ್ನಿಂದ ಕೆಳಗಿಳಿದ ಕೂಡಲೇ “ನಿಮ್ಮ ಕೈಯಲ್ಲಿನ ಬ್ಯಾಗನ್ನು ಮೊದಲು ಕಿತ್ತುಕೊಂಡು, ಬನ್ನಿ ಸಾರ್ ಕುಳಿತುಕೊಳ್ಳಿ, ಎಲ್ಲಿಗೆ ಹೋಗಬೇಕು ಸಾರ್” ಎನ್ನುತ್ತಾ ಮುತ್ತಿಗೆ ಹಾಕುವ ಆಟೋ ಡ್ರೈವರ್ಗಳಂತೆ ಗೋಕರ್ಣದಲ್ಲಿ ಅರ್ಚಕರು ನಿಮ್ಮ ಮೇಲೆ ಮುಗಿಬೀಳುತ್ತಾರೆ!! ಸಾಮಾನ್ಯ ಜನರೂ ದೇವರನ್ನು ಮಟ್ಟಬಹುದಾದ ಎರಡೇ ಎರಡು ಕ್ಷೇತ್ರಗಳೆಂದರೆ ಕಾಶಿ ಮತ್ತು ಗೋಕರ್ಣ. ಆದರೆ ಗೋಕರ್ಣದ ಅರ್ಚಕರು, ‘ದೇವರನ್ನು ಮುಟ್ಟಬೇಕಾ?’ ಅಂತ ಕೇಳಿದಾಗ ನೀವೇನಾದರೂ ‘ಹೌದು’ ಎಂದರೆ ಕೂಡಲೇ ‘ರೇಟ್’ ಹೇಳಿ ಬಿಡುತ್ತಾರೆ! ಮೊದಲು ಉಪಾಧಿವಂತರ ಸುಮಾರು ಐದು ಕುಟುಂಬಗಳು ಇಲ್ಲಿ ಅರ್ಚನೆ ಕಾರ್ಯದಲ್ಲಿ ತೊಡಗಿದ್ದವು. ಆದರೆ ಕಾಲಾಂತರದಲ್ಲಿ ಕುಟುಂಬಗಳ ಗಾತ್ರ ದೊಡ್ಡದಾಗಿ, ಒಡೆದು ಹೋಳಾಗಿ, ಪ್ರತ್ಯೇಕವಾಗಿ ಇಂದು ೩೦ಕ್ಕೂ ಹೆಚ್ಚು ಕುಟುಂಬಗಳಿವೆ. ಹಾಗಾಗಿ ಪೂಜಾ ಕಾರ್ಯ ನೆರವೇರಿಸುವುದಕ್ಕೂ ಪೈಪೋಟಿ ಸೃಷ್ಟಿಯಾಗಿದೆ, ಕಿತ್ತಾಟವೂ ನಡೆದಿದೆ. ಹಾಗಾಗಿ ಒಳ ಒಪ್ಪಂದ ಏರ್ಪಟ್ಟು ತಿಂಗಳಲ್ಲಿ ಇಂತಿಷ್ಟು ದಿನ ಒಂದು ಕುಟುಂಬಕ್ಕೆ ಎಂದು ವಿಭಜನೆ ಮಾಡಿಕೊಳ್ಳಲಾಗಿದೆ. ಇಲ್ಲೂ ಒಂದು ರಾಜಕೀಯವಿದೆ. ಒಂದು ಕುಟುಂಬದ ಸರದಿ ಬಂದಾಗ ಉಳಿದ ಕುಟುಂಬಗಳ ಅರ್ಚಕರು ಖಾಲಿ ಕುಳಿತುಕೊಳ್ಳುವುದಿಲ್ಲ. ಪೂಜೆ, ಪುನಸ್ಕಾರವನ್ನು ಮಾತ್ರ ದೇವಸ್ಥಾನದಲ್ಲಿ ಮಾಡಿಸಿ, ಹೋಮ, ಹವನಗಳನ್ನು ನಾವು ಮನೆಯಲ್ಲೇ ಬೇಗ ಮಾಡಿಕೊಡುತ್ತೇವೆ ಎಂದು ಭಕ್ತಾದಿಗಳನ್ನೇ ಪುಸಲಾಯಿಸುತ್ತಾರೆ!
ಇಂತಹ ಅರ್ಚಕರು(ದೇವರ ಏಜೆಂಟರು) ಇರುವ ಕ್ಷೇತ್ರ ಗಳ ಸ್ವಾಸ್ಥ್ಯ ಹೇಗೆ ತಾನೇ ಹಾಳಾಗದೆ ಉಳಿಯಲು ಸಾಧ್ಯ?
ಇಲ್ಲಿನ “ಓಂ ಬೀಚ್”ಗೆ ಹಿಪ್ಪಿಗಳು ಬಂದಿದ್ದಾರೆ, ಬಾರ್ ಗಳಾಗಿವೆ, ಲಾಡ್ಜ್ಗಳಿವೆ, ‘ಚಿನ್ನವೀಡು’ ಸೌಲಭ್ಯವೂ ಇದೆ. ಮತ್ತೂ ಒಂದು ವಿಶೇಷವೆಂದರೆ ಆ ಬಾರ್, ಲಾಡ್ಜ್, ಲಿಕ್ಕರ್ ಶಾಪ್ಗಳ ಮಾಲೀಕರಲ್ಲಿ ದೇವರ ಏಜೆಂಟರೂ ಇದ್ದಾರೆ. ವಿದೇಶಿ ಮದ್ಯವೂ ದೊರೆಯುತ್ತದೆ, ಮಾನಿನಿಯರೂ ಸಿಗುತ್ತಾರೆ. ದಕ್ಷಿಣದ ಕಾಶಿ ಎಂದೇ ಹೆಸರಾಗಿದ್ದ ಗೋಕರ್ಣ ವಿಂದು ಹೇಸಿಗೆಪಟ್ಟುಕೊಳ್ಳಬೇಕಾದ ಮಟ್ಟಕ್ಕೆ ಹೋಗಿದೆ. ಅಲ್ಲಿಗೆ ಹೋದರೆ ದೇವರ ಮೇಲೆ ಇದ್ದ ಶ್ರದ್ಧೆಯೂ ಹೊರಟು ಹೋಗುತ್ತದೆ, ಅರ್ಚಕರ ಬಗ್ಗೆ ಅಸಹ್ಯವುಂಟಾಗುತ್ತದೆ. ಇಷ್ಟಾಗಿಯೂ ಗೋಕರ್ಣದ ಕೊಳೆ ತೊಳೆಯಲು ಸಾಧ್ಯವಾಗುತ್ತಿರಲಿಲ್ಲ.
ಅದಕ್ಕೆ ಕಾರಣವೂ ಇದೆ.
೧೯೫೦ರ ‘ಬಾಂಬೆ ದತ್ತಿ ಕಾಯಿದೆ’ ಒಂದು ದೊಡ್ಡ ಅಡಚಣೆಯಾಗಿತ್ತು. ಈ ಕಾಯಿದೆ ಜಾರಿಗೆ ಬಂದಾಗ ಮಠದ ನಿಯಂತ್ರಣದಲ್ಲಿದ್ದ ಗೋಕರ್ಣದ ಶ್ರೀಮಹಾ ಬಲೇಶ್ವರ ಹಾಗೂ ಅಲ್ಲಿನ ಪರಿವಾರ ದೇವರ ಗುಡಿಗಳನ್ನೂ ಕಾಯಿದೆಯ ವ್ಯಾಪ್ತಿಗೆ ತಪ್ಪಾಗಿ ಒಳಪಡಿಸಿ ಅಧಿಸೂಚನೆ ಹೊರಡಿಸಲಾಯಿತು. ಇತ್ತ ೧೨ನೇ ಯತಿಗಳ ಕಾಲದಲ್ಲೇ, ಅಂದರೆ ೧೬ನೇ ಶತಮಾನದಲ್ಲೇ ಗೋಕರ್ಣದಿಂದ ರಾಮ ಚಂದ್ರಾಪುರಕ್ಕೆ ಸ್ಥಳಾಂತರಗೊಂಡಿದ್ದ ಶ್ರೀರಾಮಚಂದ್ರಾಪುರ ಮಠ ದೇವಾಲಯದ ಮೇಲೆ ನಿಯಂತ್ರಣ ಹೊಂದಿದ್ದರೂ ೧೯೫೦ರ ಕಾಯಿದೆಯಿಂದಾದ ತಪ್ಪನ್ನು ಸರಿಪಡಿಸಲು ಅಷ್ಟಾಗಿ ಪ್ರಯತ್ನಿಸಲಿಲ್ಲ. ಹಾಗಾಗಿ ದೇವಾಲಯ ಮಠಕ್ಕೆ ಬದಲು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿತು. ಅರ್ಚನೆ ಮಾಡಿಕೊಂಡು ಬರುತ್ತಿದ್ದ ಉಪಾಧಿವಂತರನ್ನೇ ದೇವಾಲಯದ ಟ್ರಸ್ಟಿಗಳಾಗಿ ನೇಮಕ ಮಾಡಲಾಯಿತು. ಇವರ ನೇಮಕಕ್ಕೆ ಮಠದ ಅಸ್ತು ಕೂಡ ದೊರಕಿತ್ತು. ಆದರೆ ಮಠದ ನಿರ್ಲಕ್ಷ್ಯ ಹಾಗೂ ಕಾಯಿದೆಯಿಂದಾಗಿ ತಪ್ಪಿದ ನಿಯಂತ್ರಣದಿಂದಾಗಿ ಮಠಕ್ಕೆ ಅಧೀನವಾಗಿ ನಡೆದುಕೊಳ್ಳುವ ವಿಧಿವಿಧಾನಗಳು ಹೆಸರಿಗಷ್ಟೇ ಮುಂದುವರಿದುಕೊಂಡು ಹೋಗಿ ಕಾಲಾಂತರದಲ್ಲಿ ಉಪಾಧಿವಂತರೇ ಗೋಕರ್ಣದ ಬಾಸ್ಗಳಾದರು. ೧೯೫೭ರಲ್ಲಿ ದೇವಾಲಯದ ಟ್ರಸ್ಟಿ ದಾಮೋದರ ದತ್ತಾತ್ರೇಯ ದೀಕ್ಷಿತರು ತೀರಿಕೊಂಡ ನಂತರ ಮತ್ತೆ ಅರ್ಚನೆಯ ಪ್ರಶ್ನೆ ಎದುರಾಯಿತು. ತಮ್ಮ ತಂದೆಯ ಮರಣದಿಂದಾಗಿ ತೆರವಾಗಿರುವ ಸ್ಥಾನವನ್ನು ತನಗೇ ನೀಡಬೇಕೆಂದು ದಾಮೋದರ ದತ್ತಾತ್ರೇಯ ಅವರ ಪುತ್ರ ವಿಘ್ನೇಶ್ವರ ದಾಮೋದರ ದೀಕ್ಷಿತ್ ೧೯೫೦ರ ಬಾಂಬೆ ದತ್ತಿ ಕಾಯಿದೆಯ ಸೆಕ್ಷನ್ ೪೭ರ ಅಡಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರು. ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ವಿಘ್ನೇಶ್ವರ ದೀಕ್ಷಿತರನ್ನು ಟ್ರಸ್ಟಿಯಾಗಿ ನೇಮಕ ಮಾಡಿತು. ದೇವಾಲಯದ ಏಕಮಾತ್ರ ಜೀವಂತ ಟ್ರಸ್ಟಿಯಾಗಿದ್ದ ಅವರು ೨೦೦೪ರಲ್ಲಿ ವಿಧಿವಶರಾದಾಗ ಅವರ ಪುತ್ರ ಬಾಲಚಂದ್ರ ದೀಕ್ಷಿತ್ ದೇವಾಲಯ ತಮ್ಮ ಪಿತ್ರಾರ್ಜಿತ ಆಸ್ತಿಯೆಂಬಂತೆ ಹಕ್ಕುಪ್ರತಿಪಾದಿಸಿದರು. ಇವರ ಮಾತಿಗೆ ಕೋರ್ಟಿನಲ್ಲಿ ಕಿಮ್ಮತ್ತು ಸಿಗಲಿಲ್ಲ. ಅಷ್ಟಕ್ಕೂ “೧೯೯೭ರ ಕರ್ನಾಟಕ ಧಾರ್ಮಿಕ ಮತ್ತು ದತ್ತಿ ಸಂಸ್ಥೆಗಳ ಕಾಯಿದೆ” ಜಾರಿಗೆ ಬಂದ ನಂತರ ೧೯೫೦ರ ಬಾಂಬೆ ದತ್ತಿ ಕಾಯಿದೆ ಅರ್ಥ ಕಳೆದುಕೊಂಡು, ಕರ್ನಾಟಕಕ್ಕೆ ಅನ್ವಯವಾಗುತ್ತಿಲ್ಲ. ೧೯೯೭ರ ಕಾಯಿದೆಯ ಸೆಕ್ಷನ್ ೧(೪)ಮಠಗಳು ಹಾಗೂ ಮಠಗಳಿಗೆ ಸೇರಿದ ದೇವಸ್ಥಾನಗಳನ್ನು ಮುಜರಾಯಿ ಇಲಾಖೆಯ ವ್ಯಾಪ್ತಿಯಿಂದ ಹೊರಗಿಟ್ಟಿದೆ. ಈ ಬಗ್ಗೆ ಎಚ್ಚೆತ್ತುಕೊಂಡ ಗೋಕರ್ಣದ ಸ್ಥಳೀಯರು ಹಾಗೂ ಶ್ರೀರಾಮಚಂದ್ರಾಪುರ ಮಠದ ೩೬ನೇ ಯತಿಗಳಾದ ರಾಘವೇಶ್ವರ ಭಾರತೀ ಸ್ವಾಮೀಜಿಗಳು ೫೮ ವರ್ಷಗಳ ಹಿಂದೆ ಆದ ತಪ್ಪನ್ನು ಸರಿಪಡಿಸಿ, ದೇವಾಲಯವನ್ನು ಅಧಿಸೂಚನೆಯ ವ್ಯಾಪ್ತಿಯಿಂದ ಹೊರಗಿಟ್ಟು ಮಠಕ್ಕೆ ಒಪ್ಪಿಸಬೇಕೆಂದು ಕರ್ನಾಟಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪನವರ ಸರಕಾರ ಆಗಸ್ಟ್ ೧೨ರಂದು ದೇವಾಲಯದ ಆಡಳಿತ ವನ್ನು ಶ್ರೀರಾಮಚಂದ್ರಾಪುರ ಮಠದ ಸುಪರ್ದಿಗೆ ನ್ಯಾಯ ಸಮ್ಮತವಾಗಿ ಒಪ್ಪಿಸಿದೆ. ಸರಕಾರದ ಈ ನಿರ್ಧಾರದಿಂದಾಗಿ ಒಂದು ರೀತಿಯಲ್ಲಿ “Floodgates” ತೆರೆದಂತಾಗಿದೆ. ಇತರ ಮಠಗಳೂ ಕೂಡ ಸರಕಾರದ ಈ ಆದೇಶವನ್ನು ಆಧಾರವಾಗಿಟ್ಟುಕೊಂಡು ಪರಂಪರಾಗತವಾಗಿ ತಮಗೆ ಸೇರಬೇಕಾಗಿರುವ, ಆದರೆ ಈಗ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವ ದೇವಾಲಯಗಳನ್ನು ಮರಳಿ ತಮಗೆ ನೀಡುವಂತೆ ಹಕ್ಕು ಪ್ರತಿಪಾದನೆ ಮಾಡಬಹುದು. ಮಠಗಳು ದೇವಾಲಯಗಳ ಆಡಳಿತವನ್ನು ಕೈಗೆತ್ತಿಕೊಂಡರೆ ತೀರ್ಥಕ್ಷೇತ್ರಗಳ ಅಭಿವೃದ್ಧಿಯೂ ಆಗುತ್ತದೆ. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು “ಧರ್ಮೋ ತ್ಥಾನ ಟ್ರಸ್ಟ್” ಸ್ಥಾಪಿಸಿ ಶಿಥಿಲಗೊಂಡಿರುವ ದೇವಾಲಯಗಳ ಜೀರ್ಣೋದ್ಧಾರದಂತಹ ಮಹತ್ಕಾರ್ಯ ಮಾಡುತ್ತಿದ್ದಾರೆ. ಆದಿ ಚುಂಚನಗಿರಿ ಸ್ವಾಮೀಜಿಯವರು ನಿರ್ಮಿಸಿರುವ ಕಾಲಭೈರವೇಶ್ವರ ದೇವಾಲಯವಂತೂ ಎಲ್ಲರ ಹುಬ್ಬೇರಿಸು ವಂತಿದೆ. ನಮ್ಮ ದೇವಾಲಯಗಳ ಮೇಲಿನ ನಿಯಂತ್ರಣ ಮಠಗಳಿಗೆ ದೊರೆತರೆ ಮುಜರಾಯಿ ಇಲಾಖೆ ಸೇರಿ ಮಸೀದಿ, ಚರ್ಚ್ ಅಭಿವೃದ್ಧಿಯ ಪಾಲಾಗುತ್ತಿದ್ದ ಹುಂಡಿ ಹಣ ದೇವಾಲಯಗಳ ಅಭಿವೃದ್ಧಿಯಂತಹ ಕಾರ್ಯಕ್ಕೆ ಸದ್ವಿನಿಯೋಗವೂ ಆಗುತ್ತದೆ. ಈ ಹಿನ್ನೆಲೆಯಲ್ಲಿ ಗೋಕರ್ಣ ದೇವಾಲಯವನ್ನು ಶ್ರೀರಾಮಚಂದ್ರಾಪುರ ಮಠಕ್ಕೆ ಹಸ್ತಾಂ ತರ ಮಾಡಿರುವುದನ್ನು ಧರ್ಮದ ಬಗ್ಗೆ ಕಾಳಜಿ ಇರುವ ನಾಡಿನ ಎಲ್ಲ ಗಣ್ಯರೂ ಸ್ವಾಗತಿಸಬೇಕು.
ಆದರೆ ಗೋಕರ್ಣದ ಅರ್ಚಕರು ಸುಮ್ಮನಿರುತ್ತಾರೆಯೇ?!
ಮಹಾಬಲೇಶ್ವರ ದೇವಾಲಯ ತಮ್ಮ ಆಸ್ತಿ ಎಂಬಂತೆ ಬೊಬ್ಬೆ ಹಾಕಲಾರಂಭಿಸಿದ್ದಾರೆ. ವಿಷಯದ ಸತ್ಯಾಸತ್ಯತೆಯನ್ನು ಸರಿಯಾಗಿ ಅರಿಯದ ಹಾಗೂ ಅರಿತರೂ ಕಲಹ ತಂದಿಡುವ ಉದ್ದೇಶದಿಂದ ಕೆಲವರು ಬೊಬ್ಬೆ ಹಾಕುತ್ತಿರುವವರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಆದರೆ ಉಡುಪಿಯ ಶ್ರೀಕೃಷ್ಣ ಪೇಜಾವರ ಮಠಕ್ಕೆ ಹೇಗೋ, “ಲಕ್ಷ್ಮಿ”ಯಾಗಿರುವ ಶಾರದೆ ಶೃಂಗೇರಿ ಮಠಕ್ಕೆ ಹೇಗೋ ಹಾಗೆಯೇ ಗೋಕರ್ಣದ ದೇವಾಲಯದ ಮೇಲೆ ಶ್ರೀರಾಮಚಂದ್ರಾಪುರಕ್ಕೂ ಹಕ್ಕಿದೆ. ಹಾಗಂತ ದುಡ್ಡು ಮಾಡುವ ಉದ್ದೇಶದಿಂದ ರಾಘವೇಶ್ವರ ಭಾರತೀ ಅವರು ಯಾರಿಗೋ ಸೇರಿದ್ದ ದೇವಾಲಯವನ್ನು ನಮಗೆ ನೀಡಿ ಎಂದು ಕೇಳಿಕೊಂಡಿರಲಿಲ್ಲ. ಮಠಕ್ಕೆ ಸೇರಿ ರುವ ದೇವಾಲಯಕ್ಕೆ ಅಂಟಿಕೊಂಡಿರುವ ಕೊಳೆಯನ್ನು ತೊಳೆ ಯುವ ಉದ್ದೇಶದಿಂದ ಹಕ್ಕು ಪ್ರತಿಪಾದನೆ ಮಾಡಿದ್ದಾರೆ.
ಇದರಲ್ಲಿ ತಪ್ಪೇನಿದೆ?
ನೀವೇ ಹೇಳಿ, ಈಗಿರುವ ಪರಿಸ್ಥಿತಿಯಲ್ಲಿ ಗೋಕರ್ಣ ವೆಂದರೆ ನಿಮಗೆ ಭಕ್ತಿ ಮೂಡುತ್ತದೋ ಆಥವಾ ಓಂ ಬೀಚ್ನ ಬಿಕಿನಿಗಳು ನೆನಪಾಗುತ್ತವೋ? ಒಂದು ದೇವಸ್ಥಾನ ಶಿಥಿಲಗೊಂಡರೆ ಅದರ ಜೀರ್ಣೋದ್ಧಾರ ಕಾರ್ಯವನ್ನು ಮಾಡಬೇಕಾಗುತ್ತದೆ. ಇಂದು ಇಡೀ ಗೋಕರ್ಣದ ಮಹಾ ಬಲೇಶ್ವರ ದೇವಾಲಯ, ಅದರ ಸುತ್ತಲಿನ ಪರಿಸರ ಮಾತ್ರವಲ್ಲ, ಅರ್ಚನೆಯಲ್ಲಿ ತೊಡಗಿರುವವರ ಮನಸ್ಸುಗಳ ಜೀರ್ಣೋದ್ಧಾರ ಕಾರ್ಯವೂ ಆಗಬೇಕಾಗಿದೆ. ಅಷ್ಟಕ್ಕೂ ನಾವು ನಮ್ಮ ವಿಶ್ವಾಸದ ಗಂಟನ್ನು ಇಟ್ಟಿರುವುದೇ ಮಠ, ಮಂದಿರಗಳಲ್ಲಿ. ಅಂತಹ ಸ್ಥಳಗಳೇ ರೇಜಿಗೆ ಹುಟ್ಟಿಸುವ ತಾಣಗಳಾದರೆ ಜನರಿಗೆ ದೇವರ ಮೇಲಿನ ವಿಶ್ವಾಸವೇ ಹೊರಟು ಹೋಗದೇ ಇದ್ದೀತೆ? ಮಂಗಳಾರತಿ ತಟ್ಟೆಯ ಮೇಲೆ ಹಾಕಿದ್ದು ನೋಟೋ, ನಾಣ್ಯವೋ ಎಂಬುದನ್ನು ನೋಡಿ ಪ್ರಸಾದ ನೀಡುವ ಅರ್ಚಕರಿಂದಾಗಿ ಕೆಲವು ದೇವಾಲಯಗಳ ಬಗ್ಗೆ ನಮಗೆ ಕಸಿವಿಸಿಯಾಗಲಾರಂಭಿಸಿದೆ. ಈ ಹಿನ್ನೆಲೆಯಲ್ಲಿ ರಾಘವೇಶ್ವರ ಭಾರತೀ ಅವರು ಗೋಕರ್ಣದ ಕಡಲ ಕಿನಾರೆಯ ಕೊಳೆ ತೊಳೆದು ಶುದ್ಧೀಕರಣ ಮಾಡಲು ಹೊರಟಿದ್ದಾರೆ. ಆದರೂ ವಿರೋಧ ವ್ಯಕ್ತಪಡಿಸುತ್ತಿರುವುದೇಕೆ? ಒಂದು ವೇಳೆ ರಾಘವೇಶ್ವರರಿಗೆ ದುಡ್ಡು ಮಾಡುವ ಹಂಬಲವಿದ್ದಿದ್ದರೆ ರಾಮಚಂದ್ರಾಪುರದ ಹಟ್ಟಿಯಲ್ಲಿ ದನಕರುಗಳ ಬದಲು ಒಂದೆರಡು ಇಂಜಿನಿಯ ರಿಂಗ್, ಮೆಡಿಕಲ್ ಕಾಲೇಜುಗಳೆಂಬ ‘ಕಾಮ ಧೇನು’ಗಳನ್ನು ಕಟ್ಟುತ್ತಿದ್ದರು. ಅವರ ಸಾಮಾಜಿಕ ಕಾಳಜಿ ಈಗಾಗಲೇ ಸಾಬೀತಾಗಿದೆ. ಇಲ್ಲದಿದ್ದರೆ ಗೋಮಾತೆಯ ಮಹತ್ವವನ್ನು ಸಾರುವ ಪ್ರತಿಫಲವಿಲ್ಲದ ಕೆಲಸಕ್ಕೆ ಅವರು ಕೈಹಾಕುತ್ತಿರಲಿಲ್ಲ.
ಇವತ್ತು ನಾಸ್ತಿಕವಾದಿ ಕಮ್ಯುನಿಸ್ಟರ ಕೇರಳದಲ್ಲಿ ಅಕ್ಕರೆಯ ಅಪ್ಪುಗೆಯ ಮೂಲಕ ದೇವರ ಮೇಲಿನ ವಿಶ್ವಾಸವನ್ನು ಗಟ್ಟಿಗೊಳಿಸುತ್ತಿರುವ ‘ಅಮ್ಮಾ’, ಆಧ್ಯಾತ್ಮದ ಮೂಲಕ ಜನರಿಗೆ ಮನಃಶಾಂತಿ ನೀಡುತ್ತಿರುವ ಶ್ರೀ ಶ್ರೀ ರವಿಶಂಕರ್ ಗುರೂಜಿ, ಯೋಗದ ಮೂಲಕ ಆರೋಗ್ಯಯುತ ಜೀವನ ಮತ್ತು ಆಧ್ಯಾತ್ಮದತ್ತ ನಮ್ಮನ್ನು ಕರೆದೊಯ್ಯುತ್ತಿರುವ ಬಾಬಾ ರಾಮದೇವ್, ಆಮಿಷಗಳಿಗೊಳಗಾಗಿ ಮತಾಂತರಗೊಂಡಿರುವವರನ್ನು “ಶಬರಿ ಕುಂಭ’ದಲ್ಲಿ ಮೀಯಿಸಿ ಮರಳಿ ಮಾತೃಧರ್ಮಕ್ಕೆ ಕರೆತರುತ್ತಿರುವ ಆಶಾರಾಮ್ ಬಾಪು ಮುಂತಾದವರು ಅಪ್ರತಿಮ ಸೇವೆ ಮಾಡುತ್ತಿದ್ದಾರೆ. ನಾವು ತಾಯಿಯ ನಂತರ ಸ್ಥಾನವನ್ನು ನೀಡಿರುವ ಗೋಮಾತೆಯ ಬಗ್ಗೆ ಅರಿವು ಮೂಡಿಸುತ್ತಿರುವ ರಾಘವೇಶ್ವರ ಭಾರತೀ ಸ್ವಾಮಿಗಳು ಮಾಡುತ್ತಿರುವುದೂ ಆ ರೀತಿಯ ಸೇವೆ ಮತ್ತು ಧರ್ಮಸಂಸ್ಥಾಪನಾ ಕಾರ್ಯವನ್ನೇ. ಅಂತಹವರ ಸುಪರ್ದಿಗೆ ಗೋಕರ್ಣದ ದೇವಾಲಯವನ್ನು ನೀಡಿದರೂ ವಿರೋಧಿಸುತ್ತಾರಲ್ಲಾ…
ಹೇ ಆದಿಶಂಕರಾ!
Thanks for enlightening us on this issue in detail with facts.
Hi…….
I am 1 of ur regular reader. This article is simply superb and this will answers several who doesnt know much about Gokarna.
please keep tab on more n more real facts in future also.
Thank you……
Bye
Hi Pratap,
I really appreciate this article. This article cleared all my doubts in detail. Thank you for such a woderful writing. Keep going.
With best wishes,
Santosh DT
Hi Pratap,
Appriciate your beauty of writing.
At least some is there to tell the truth boldly/frankly.
I felt so much relieved after reading your article.
Kindly write an article on Thirupathi Temple also, where our money is being utmis-used for haj piligrims & churches.
Best Regards
Venkatesh, Tx-USA
Hi Pratap,
Thank u for such a wonderful article about the Gokarna issue.
Best Wishes,
Shilpa Sagar
Dear Pratap,
Nice article. I read almost all articles published in “Bettale Jagatthu” either in VK or in thatskannada. From past coulple of weeks I can’t see your article in TK. Today while reading comments for an article in TK, I come to know about your wesite. The way of thinking and research about the facts is interesting. I rememberd you only mentioned in one article that some of your friends will also provide you the necessary stuff for your articles.
I read in VK that “Sri Sri Sri Siddaganga Swamiji” also appriciated your aticles.
Good work, keep it up…………………
Mahabaleshwara Holla
Pratap Namaste,
TK.com nalli ide vishayada bagge odi tumba kasivisi mattu samshaya moodittu. Aadare savistaaravagi vishayada moolakke nammannu kardukondu hogiddakke dhanyavaadagaLu!
Keep sharing such a informations!
ಪà³à²°à²¬à³à²¦à³à²¦à²µà²¾à²¦ ಲೇಖನ, ೨ ವರà³à²·à²—ಳ ಕಾಲ ಓರà³à²µ ವೇದ ಕಲಿಯà³à²µ ವಿದà³à²¯à²¾à²°à³à²¥à²¿à²¯à²¾à²—ಿ ಗೋಕರà³à²£à²¦ ವೇದ ಪಾಠಶಾಲೆಯಲà³à²²à²¿à²¦à³à²¦à³†. “ವಿದà³à²µà²¾à²¨à³ à²à²µà²µà²¿à²œà²¾à²¨à²¾à²¤à²¿ ವಿದà³à²µà²œà³à²œà²¨ ಪರಿಶà³à²°à²®à²‚” ಎನà³à²¨à³à²µà²‚ತೆ, ಗೋಕರà³à²£à²¦ ಅರà³à²šà²•ರ ವಿಷಯದಲà³à²²à²¿ ತಾವೠಹೇಳಿದ ವಿಷಯವೆಲà³à²²à²µà³‚ ಸತà³à²¯ ಎಂದೠಅರà³à²šà²•ನಾಗಿರà³à²µ(ಅಮೇರಿಕದಲà³à²²à²¿) ನಾನೇ ಸà³à²ªà²·à³à²Ÿà³€à²•ರಿಸà³à²¤à³à²¤à³†à²¨à³†, ಕೇವಲ ಪತà³à²°à²¿à²•ೆಯ ಮಾರಾಟಕà³à²•ಾಗೆ ವಿಷಯದ ಸಂಗà³à²°à²¹à²£à³†à²¯à²¿à²²à³à²²à²¦à³† ತೋಚಿದà³à²¦à²¨à³à²¨à³ ಗೀಚà³à²µ ಮೂರà³à²–ರೠಈ ಲೇಖನವನà³à²¨à³ ನೋಡಿ ಕಲಿಯಲಿ ಲೇಖನವೊಂದಕà³à²•ೆ ವಿಷಯ ದಟà³à²Ÿà²£à³†(ಸà³à²ªà²·à³à²Ÿà²¨à³†) ಎಷà³à²Ÿà²¿à²°à²¬à³‡à²•ೆಂದà³. ದಾಖಲೆಗಳೊಂದಿಗಿನ ಈ ಲೇಖನ ಸತà³à²¯à²¤à³†à²¯à²¨à³à²¨à³ ಎತà³à²¤à²¿ ತೋರಿಸà³à²¤à³à²¤à²¿à²¦à³†. ನಿಮà³à²® ಈಲೇಖನಕà³à²•ೆ ನಿಮà³à²®à²¨à³à²¨à³ ಅà²à²¿à²¨à²‚ದಿಸಿ, ಸರಸà³à²µà²¤à²¿à²¯à²¨à³à²¨à³ ಅà²à²¿à²µà²‚ದಿಸà³à²¤à³à²¤à³‡à²¨à³†.
ಗೌತಮ
Hi Pratap,
This is a beautiful article which must be read by everyone. Thanks for your information and enlighting the people regarding Gokarna issue. Thanks for your work.
ಗೆಳೆಯ ಪà³à²°à²¤à²¾à²ªà³….
ನಿಮà³à²® ಲೇಖನ ತà³à²‚ಬಾ ಸà³à²‚ದರವಾಗಿ ಮೂಡಿಬಂದಿದೆ. ನಮà³à²® ದೇಶ ಉದà³à²¦à²¾à²°à²µà²¾à²—ಬೇಕಾದರೆ, ನಮà³à²® ಪರಂಪರೆ ನಶಿಸಿ ಹೋಗದೇ ಉಳಿಯಬೇಕಾದರೆ ಇಂದಿನ ಯà³à²µà²ªà³€à²³à²¿à²—ೆ ಮà³à²‚ದೆ ಬರಬೇಕà³. ಜನರಲà³à²²à²¿ ಧನದಾಹ ಬಂದರೆ ಎಂತ ಹೇಸಿಗೆ ಕೆಲಸವನà³à²¨à³ ಮಾಡಲೠಹಿಂಜರಿಯರà³. ಅದೠಅವರ ವà³à²¯à²•à³à²¤à²¿à²¤à³à²µ. ಅವರೠಬೆಳೆದೠಬಂದ ದಾರಿ, ಅವರ ತಂದೆ ತಾಯಿ, ಕà³à²Ÿà³à²‚ಬದ ವà³à²¯à²•à³à²¤à²¿à²¤à³à²µà²µà²¨à³à²¨à³ ಹೇಳತà³à²¤à³†. ಒಬà³à²¬ ವà³à²¯à²•à³à²¤à²¿ ಸರಿಯಿಲà³à²²à²µà³†à²‚ದರೆ ಮೊದಲೠಹೇಳೋದೠಅವನ ಸಂಸà³à²•ಾರ ಸರಿ ಇಲà³à²² ಅಂತ. ಸಂಸà³à²•ಾರವೆಂದರೆ ಮೇಲಿನ ಎಲà³à²²à²µà³‚ ಸೇರಿದà³à²¦à²¾à²—ಿದೆ.
ತಮà³à²® ಪತà³à²°à²¿à²•ೆ ಹೆಚà³à²šà³ ವà³à²¯à²¾à²ªà²¾à²°à²µà²¾à²—ಬೇಕಾದರೆ ಎಂತಹ ಕೆಲಸಕà³à²•ೂ ಹೇಸೊಲà³à²² ಜನ. ಅದನà³à²¨à³ ನಿರà³à²®à³‚ಲನ ಮಾಡಬೇಕಾದರೆ ಬà³à²¦à³à²¦à²¿à²µà²‚ತ ಯà³à²µà²•ರ ಅವಶà³à²¯à²•ತೆಯಿದೆ. ನಿಮà³à²®à²²à³à²²à²¿ ಆ ಪà³à²°à²¤à²¿à²à³†à²¯à²¿à²¦à³†. ನಿಮà³à²®à²¿à²‚ದ ಇಂತಹ ಅನೇಕ ಲೇಖನಗಳೠಮà³à²‚ದೆ ಬರಲಿ. ಜನರನà³à²¨à³ ಬಡಿದೆಬà³à²¬à²¿à²¸à²²à²¿. ಸತà³à²¯à²µà²¨à³à²¨à³ ಹೇಳಿದರೆ ಅದಕà³à²•ೆ ಅನೇಕ ತೊಂದರೆಗಳೠಎದà³à²°à²¾à²—à³à²¤à³à²¤à²µà³†. ಅದರ ಬಗà³à²—ೆ ತಲೆ ಕೆಡಿಸಿಕೊಳà³à²³à²¦à³‡ ಸತà³à²¯à²µà²¨à³à²¨à³ ಬರೆಯಿರಿ. ಯಾರೂ ಶಹಬà³à²¬à²¾à²¸à³ ಅನà³à²¨à²¦à²¿à²¦à³à²¦à²°à³‚ ಚಿಂತೆಯಿಲà³à²². ನಿಮà³à²® ಒಳಮನಸà³à²¸à²¿à²—ೆ ತೃಪà³à²¤à²¿à²¯à²¾à²¦à²°à³† ಸಾಕ೅.
ಹಿಂದೆಲà³à²²à³‹ ಕೇಳಿದ ಹಾಡ೅”ಹರನೆ ನಿನà³à²¨à²¨à³‚ ಒಲಿಸಲà³à²¬à²¹à³à²¦à³..ನರರನೠಒಲಿಸà³à²µà³à²¦à²¤à²¿ ಕಷà³à²Ÿ… ಸರಿ ಬಂದಂತೆ ಆಡà³à²µ ಜನರೊಳೠಕಡೆತನಕಿರà³à²µà³à²¦à³ ಅತಿ ಕಷà³à²Ÿ”
ಗೋಕರà³à²£à²¦ ನೈಜ ವರದಿಯನà³à²¨à³ ಕೊಟà³à²Ÿà²¿à²¦à³à²¦à²•à³à²•ೆ ಧನà³à²¯à²µà²¾à²¦à²—ಳà³
ಪà³à²°à²¤à²¾à²ªà³ ರೇ,
ಗೋಕರà³à²£à²¦ ಹಸà³à²¤à²¾à²‚ತರವನà³à²¨à³ ವಿರೋದಿಸà³à²¤à³à²¤à²¿à²°à³à²µà²µà²°à³ ಕೆಲವೠವà³à²¯à²•à³à²¤à²¿à²—ಳೠಮಾತà³à²°. ಇಲà³à²²à²¿à²¯ ತನಕ ಬಂದವರನà³à²¨à³†à²²à³à²²à²¾ ದೇವರ ಹೆಸರಲà³à²²à²¿ ದೋಚà³à²¤à³à²¤à²¿à²¦à³à²¦ ವà³à²¯à²•à³à²¤à²¿à²—ಳà³. ತಮà³à²® ಬà³à²¡à²•à³à²•ೆ ಕತà³à²¤à²°à²¿ ಬಿದà³à²¦à²®à³‡à²²à³† ಇಲà³à²²à²¸à²²à³à²²à²¦ ಅಪಪà³à²°à²šà²¾à²° ಮಾಡà³à²¤à²¾à²¯à²¿à²¦à³à²¦à²¾à²°à³†. ಅಂತಹ ವà³à²¯à²•à³à²¤à²¿à²—ಳ ಬà³à²¯à²¾à²‚ಕೠಅಕೌಂಟನà³à²¨à³ ಒಮà³à²®à³† ತಿಳಿಯಲೠಪà³à²°à²¯à²¤à³à²¨à²¿à²¸à²¿.
ಅದರ ನೈಜ ವರದಿ ಬರಲಿ. ಅವರ ಹಿಂದಿರà³à²µ ವà³à²¯à²•à³à²¤à²¿à²—ಳà³/ಮಠಾದೀಶರà³à²—ಳೠಯಾರೆಂದೠಅರಿಯಲೠಪà³à²°à²¯à²¤à³à²¨à²¿à²¸à²¿.
Hi Pratap, Congrats & thanks for giving us a very neat & well researched article. Your article answers all the questions & issues rised by some third class jounalists like Ravi Belagare.
Good article.
I know closely both the Gokarna & Sri Mutt.
Sri Raghaveshwara Swamiji is doing wonderful job, he is already ‘talk of the town’ in Shivamogga, Mangaluru & all over Malenadu if not whole Karnataka for his unselfish contribution.
Many people confuses, this is a Brahmin’s Mutt. But This math has deciples from 18 casts including Brahmins. I have great respect to this mutt, even though being a non-Brahmin. Many huge contribution comes from ‘other’ castes also. Swamiji looks everyone with equal and love. He protects us, he donated many things to many of us, the lower castes. Whenever we went with our problems he has solved. What else we expect?
I support the transfer of Gokarna Temple to Sri Ramachandrapura Mutt, strongly.
Dear readers, pl remember, transferring of Temples not only benefits the Hindus but also prevents our money goes to Haj & Converts.
Best Regards to Pratapsimha for valueable writing, unlike Ravi.
Devegowda is another manace to Hindus, he is a opportunist.
How can he perform yajnya/yaga for his own benefits? He is a pure ‘caste’ based person.
Naik from london.
Dear Friend Pratap,
Ypur article has come out well… But, have a feeling, lacked the historial part which made purohits of Gokarna to use our culture for business purpose….
Mr.Pratap,
I was not surprised to see a biased article from you..
It would be nice to ponder over the following issues
With all respects to Sri Adishankara,how do you project the present seer or the mutt as a good administrator(not great) ?
Is it because Mr.Vishveshwar bhat is a havyak brahmin ??
Have you visited the Goshalas built by the mutt, and understood the state of anarchy there??
What is the state of the various other projects on Savayava KRISHI,cattle related products,etc ??
How well are the pooja’s being conducted at the various shakha mutt’s of the same mutt ??
What is the energy spent by the mutt to propogate Veda’s which was the primary objective of Adishankara ??
Why did the mutt eye on only Gokarna while there are enough temples without any promoters ??
How will the mutt stop foriegners stripping in the beaches when the govt itself was not able to do ??
Hope you will reduce penning such half boiled/ill researched/biased articles.
regards,
Guruprasad
Namaste Pratap,
Truthful article…
Keep writin like this….
This is a very good aricle. I also experienced personally the condition of Gokarna temple. It is very sorry to say about that. Hosnagara Ramachandrapura matt doing a very fantastic job in Hosanagara by constructing cattle shed to lookafter the endagered varieties of indegenous cows. Keep it up your super straight forward wrtitings . I wish you to give some more details about these in coming articles
This is superb…….fantastic job….keep on doingit pratap sir……..
ಪà³à²°à²¤à²¾à²ªà²£à³à²£,
ಚೆನà³à²¨à²¾à²—ಿದà³à²¦à³€à²°à²¾? ನಿಮà³à²® ಲೇಖನಗಳೠಪà³à²°à²¤à²¿à²¯à³Šà²¬à³à²¬à²°à²²à³à²²à³‚ ಮೂಡà³à²µ ಸಮಸà³à²¯à³†à²—ಳಿಗೆ ಸà³à²²à² ಪರಿಹಾರ ನೀಡà³à²¤à³à²¤à²µà³†. ಅದರಲà³à²²à²¿ ಮಾತà³à²° ಎರಡೠಮಾತಿಲà³à²². ಆದರೂ ಸಹಾ ನನà³à²¨à²²à³à²²à²¿ ಅದೇಕೋ ಕಸಿವಿಸಿ, ಕಳವಳದಿಂದ ಒಂದೠಮಾತೠಹೇಳಲೆಬೇಕಾಗಿದೆ. ಹೀಗಾಗಿ ಇದನà³à²¨à³ ಹೇಳದಿದà³à²¦à²°à³† ತಪà³à²ªà²¾à²—à³à²¤à³à²¤à²¦à³†. à²à²•ೆಂದರೆ ನೀವೂ ಇತà³à²¤à³€à²šà²¿à²¨ ದಿನಗಳಲà³à²²à²¿ ಕೇಸರಿ ಪಕà³à²· ಹಾಗೂ ಅದರ ಸಿದà³à²¦à²¾à²‚ತದ ವಕà³à²¤à²¾à²°à²°à²¾à²—ಿ ಲೇಖನ ಬರೆಯà³à²¤à³à²¤à²¿à²¦à³à²¦à²¿à²°à³†à²¯à³‡, ಹೊರತೠಹೆಚà³à²šà²¿à²¨à²¦à³à²¦à³‡à²¨à³‚ ಕಾಣà³à²¦à²¿à²²à³à²². ಹೀಗಾಗಿ ದಯವಿಟà³à²Ÿà³ ಇದರ ಕಡೆ ಗಮನಹರಿಸಿದರೆ ಒಳಿತೠಎಂಬ ಅà²à²¿à²ªà³à²°à²¾à²¯ ನನà³à²¨à²¦à³. ಇನà³à²¨à³‚ ಈ ಲೇಖನದಲà³à²²à²‚ತೂ ಜಾತಿ ಪà³à²°à³‡à²® ಅತಿಯಾಗಿ ಕಾಣà³à²¤à³à²¤à²¿à²°à³à²µà³à²¦à³ ಸà³à²³à³à²³à²²à³à²². ಬದಲಾವಣೆ ನಿರೀಕà³à²·à²¿à²¸à³à²¤à³à²¤à³‡à²µà³†. ಅà²à²¿à²ªà³à²°à²¾à²¯ ವà³à²¯à²•à³à²¤à²ªà²¡à²¿à²¸à²²à³ ಅವಕಾಶ ನೀಡಿದಿಕà³à²•ಾಗಿ. ಧನà³à²¯à²µà²¾à²¦..
ವಂದನೆಗಳೊಂದಿಗೆ
ಅà²à²¿à²®à²¾à²¨à²¿ ಅನಾಮಿಕ
ಸಿಂಹ ಪà³à²°à²¤à²¾à²ªà²¿à²—ಳೇ,
ಲೇಖನ ಅದà³à²à³à²¤ ಎರಡೠಮಾತಿಲà³à²². (ನಿಮà³à²® ಬà³à²²à²¾à²—ೠತಡವಾಗಿ ದೊರೆತಿದà³à²¦à²•à³à²•ೆ ಪಶà³à²šà²¾à²¤à³à²¤à²¾à²ªà²µà²¿à²¦à³†) ಆದರೆ ನಿಮà³à²® ಎಲà³à²²à²¾ (100%) ಬೆತà³à²¤à²²à³†à²œà²—ತà³à²¤à²¨à³à²¨à³ ಕಂಡ ನನಗೆ ತಮà³à²® ಶೈಲಿ à²à²¾à²·à³† ಅವಲೋಕಿಸಿದರೆ ಇದೠತಮà³à²® ಲೇಖನದಂತಿಲà³à²². ಆದರೂ ತಮà³à²®à²¦à²¾à²—ಿದà³à²¦à²°à³† ಮಹಾಸಂತೋಷ ತಮಗೆ ಈ ಶೈಲಿಯೂ ಗೊತà³à²¤à³ ಎಂದà³.
Hi Pratap,
Article is Good,Thaks to more infomation about Gokarna.
Lot of devotees don’t know about the real fact.
You remembered and realised the real truth of Gokarna.
Thanks,
RAVEESH K P AND SUDARSHANA H S
Hi Pratap,
Article is Good,Thaks to more infomation about Gokarna.
Lot of devotees don’t know about the real fact.
You remembered and realised the real truth of Gokarna.
Thanks,
PRABHULING G UMADI
Dear pratap,
great article, thanks for the time u spend on collecting & put it in proper way. God bless you in your activity.
This is true that many heritage centre become comercial centre.
rgds,
PG
As usual a nice article
ಅತà³à²°à²¤à²¿à²·à³à² ಯತಿಶà³à²°à³‡à²·à³à² ಗೋಕರà³à²£à³‡ ಮà³à²¨à²¿à²¸à³‡à²µà²¿à²¤à³‡
ಮಹಾಬಲಸà³à²¯ ಲಿಂಗಂ ಚ ನಿತà³à²¯à²‚ ವಿಧಿವದರà³à²šà²¨à²‚
ಗೋಕರà³à²£ ಮಂಡಲೇ ವà³à²¯à²•à³à²¤à²‚ ತವ ಶಿಷà³à²¯ ಪರಂಪರೈಃ
ಆಚಾರà³à²¯à²¤à³à²µà²‚ಚ ಕà³à²°à³à²¤à²¾à²‚ ವಿದà³à²¯à²¾à²¨à²‚ದ ಮಹಾಮತೇ,
ಎಂದೠನೀವೠಉಲà³à²²à³‡à²–ಿಸಿದ ಶà³à²²à³‹à²• ಹಿಂದಿನ ಗà³à²°à³ ಪರಂಪರೆಯಿಂದ ತಿಳಿದೠಬಂದಂತೆ, ಹಾಗೂ ಶà³à²°à³€ ಮಜà³à²œà²—ದà³à²—à³à²°à³ ಶಂಕರಾಚಾರà³à²¯ ರಾಘವೇಂದà³à²° à²à²¾à²°à²¤à³€ ಮಹಾಸà³à²µà²¾à²®à²¿à²—ಳà³, ರಾಮಚಂದà³à²°à²¾à²ªà³à²° ಮಠ. ಅಂದರೆ ಈಗಿನ ರಾಘವೇಶà³à²µà²°à²° ಹಿಂದಿನ ಗà³à²°à³à²—ಳೠಅವರ ಕಾಲದಲà³à²²à²¿ ಮಠದ ಇತಿಹಾಸವನà³à²¨à³ ಸಾರà³à²µ, ಹಾಗೂ ಈಗಿನ ಗà³à²°à³à²—ಳೇ ಮà³à²¦à³à²°à²¿à²¸à²¿à²¦ ಗà³à²°à²‚ಥಗಳಲà³à²²à²¿ =
ಇದೇ ಮಠದ ವತಿಯಿಂದ ಮà³à²¦à³à²°à²¿à²¤à²µà²¾à²¦, †ಶà³à²°à³€ ಮಠದ ಗà³à²°à³à²ªà²°à²‚ಪರೆ ಮತà³à²¤à³ ಇತಿಹಾಸ ( ಧರà³à²®à²ªà³à²°à²µà³ƒà²¤à³à²¤à²¿ ಎನà³à²¨à³à²µ ತಾಳೆಗರಿ ಎನà³à²¨à²²à²¾à²—ಿದೆ ) ಎಂಬ ಹೆಸರಿನ ಪà³à²¸à³à²¤à²•ದಲà³à²²à²¿
೧೯à³à³« ರಲà³à²²à²¿ ಮà³à²¦à³à²°à²¿à²¤à²µà²¾à²¦=†ಶà³à²°à³€ ಮಜà³à²œà²—ದà³à²—à³à²°à³ ಶಂಕರಾಚಾರà³à²¯ ರಾಘವೇಂದà³à²° à²à²¾à²°à²¤à³€ ಮಹಾಸà³à²µà²¾à²®à²¿à²—ಳೠ†ಎಂಬ ಹೆಸರಿನ ಪà³à²¸à³à²¤à²•ದಲà³à²²à²¿
ನೀವೠಮೊದಲೠಉಲà³à²²à³‡à²–ಿಸಿದ ಶà³à²²à³‹à²•=ರಾಮಚಂದà³à²°à²¾à²ªà³à²° ಮಠಎನà³à²¨à³à²µ ಶಿರೋಲೇಖನದ ಅಡಿಯಲà³à²²à²¿ ಪà³à²Ÿ ಸಂಖà³à²¯à³† ೪-೫ ರಲà³à²²à²¿ ಹಾಗೂ
೧೯೧೯ ರಲà³à²²à²¿ ಮà³à²¦à³à²°à²¿à²¤à²µà²¾à²¦ “ಶà³à²°à³€ ಗà³à²°à³à²à²—ವತà³à²ªà²¾à²¦ ವೈà²à²µà²‚ ಎಂಬ ಗà³à²°à²‚ಥದ à³®-೯ ನೇ ಪà³à²Ÿà²¦ ಅರà³à²¥à²¦à²²à³à²²à²¿
೧೯೯೯ ರಲà³à²²à²¿ ಮà³à²¦à³à²°à²£à²µà²¾à²¦ †ಗà³à²°à³à²à²¾à²°à²¤à³€â€ ಯಲà³à²²à²¿ ೩೯ ನೇ ಪà³à²Ÿà²—ಳಲà³à²²à²¿ ,ಎಲà³à²²à³‚ ಹೀಗೆ ಕಂಡೠಬರದೇ ಕೇವಲ=
ಅತà³à²°à²¤à²¿à²·à³à² ಯತಿಶà³à²°à³‡à²·à³à² ಗೋಕರà³à²£à³‡ ಮà³à²¨à²¿à²¸à³‡à²µà²¿à²¤à³‡ |
ಆಚಾರà³à²¯à²¤à³à²µà²‚ಚ ಕà³à²°à³à²¤à²¾à²‚ ವಿದà³à²¯à²¾à²¨à²‚ದ ಮಹಾಮತೇ || ಎಂದೠಕಂದೠಬರà³à²µ ಹಿಂದಿನ ಮರà³à²®à²µà³‡à²¨à³?
†ಮಹಾಬಲಸà³à²¯ ಲಿಂಗಂ ಚ ನಿತà³à²¯à²‚ ವಿಧಿವದರà³à²šà²¨à²‚
ಗೋಕರà³à²£ ಮಂಡಲೇ ವà³à²¯à²•à³à²¤à²‚ ತವ ಶಿಷà³à²¯ ಪರಂಪರೈ— ಎಂಬ ಎರಡೠಸಾಲನà³à²¨à³ ಸೇರಿಸಿದ à²à³‚ಪನಾರà³? ಹಿಂದಿನ ಗà³à²°à³ ಪರಂಪರೆಗೆ ತಿಳಿಯದೇ ಇದà³à²¦ ನಿಗೂಢ ರಹಸà³à²¯ ಶà³à²²à³‹à²• ಇವರಿಗೆ ಹೇಗೆ ತಿಳಿಯಿತà³? ಇದನà³à²¨à³ ಪà³à²°à²¶à³à²¨à²¿à²¸à²¿à²¦à²°à³† ಉತà³à²¤à²°à²¿à²¸à³à²µ ಅಗತà³à²¯à²µà²¿à²²à³à²² ಎಂಬ ಉದà³à²§à²Ÿà²¤à²¨à²µà³‡ ಉತà³à²¤à²°à²µà²¾à²—ಿದೆ. ಬೇಡ ಈ ಶà³à²²à³‹à²•ವನà³à²¨à³ ಇತà³à²¤à³€à²šà²¿à²—ೆ ಪà³à²°à²•ಟಿಸಿದ ವಿದà³à²µà²¾à²‚ಸರà³, ಇತಿಹಾಸ ಸಂಶೋಧಕರೠಎಂಬ ಬಿರà³à²¦à³ ಹೊಂದಿದ ಮಹಾಶಯರೂ ಕೂಡ ತಾಳೆಗರಿಯೆಲà³à²²à²¿à²¦à³†. ಎಂದೠಹೇಳà³à²¤à³à²¤à²¾à²°à³†à²¯à³‡ ವಿನಹ ಮà³à²– ತೋರಿಸದೇ ಮರೆಯಾಗಿದà³à²¦à²¾à²°à³†. ಇರಲಿ ಕಾಗದ ಪತà³à²° ಸೃಷà³à²Ÿà²¿à²¯à²¨à³à²¨à²¾à²¦à²°à³‚ ( ಲಂಚದಿಂದ ) ಮಾಡಬಹà³à²¦à²¿à²¤à³à²¤à³. ಅದನà³à²¨à³ ಬಿಟà³à²Ÿà³ ಶಂಕರಾಚಾರà³à²¯à²° ಮಾತೠಇದೠಎಂದೠಹೊಸ ಸೃಷà³à²Ÿà²¿ ಮಾಡಲೠಹೋಗಿ, (ಸಂಸà³à²•ೃತಜà³à²¨à²° ಪà³à²°à²•ಾರ ಸರಿಯಾಗಿ ಅನà³à²µà²¯à²µà²¾à²—ಲಾರದೠ) ಅನà³à²µà²¯à²µà²¾à²—ದ ರೀತಿ ಎರಡೠಸಾಲನà³à²¨à³ ತಂದಿಡà³à²µ ಜà³à²¨à²¾à²¨à²¿à²—ಳ ಕೊರತೆ ಇವರಲà³à²²à²¿à²¤à³à²¤à³‡? ಇಂತಹ ಕಪಟತನದ ಸನà³à²¯à²¾à²¸à²¿à²—ಳ ಅವಶà³à²¯à²•ತೆ ಖಂಡಿತ ಇವತà³à²¤à²¿à²¨ ಸಮಾಜಕà³à²•ಿಲà³à²². ಶಂಕರಾಚಾರà³à²¯à²° ಹೆಸರನà³à²¨à³ ಹಾಳà³à²®à²¾à²¡à³à²µ ಇವರ ಬà³à²¦à³à²§à²¿à²—ೆ ಮಂಕೠಕವಿದಿದೆಯೇ?ಸà³à²³à³à²³à²¿à²—ೆ ಬೆಲೆಕೊಡà³à²µ ಮಠಇದೠಎನà³à²¨à³à²µà³à²¦à³ ಈ ಶà³à²²à³‹à²•ದ ಸೃಷà³à²Ÿà²¿à²¯à²¿à²‚ದ ಜಗಜà³à²œà²¾à²¹à³€à²°à²¾à²—ಿದೆ.
ನಿಮಗೆ ಒಂದೠಮಾತà³, ಗà³à²°à³à²—ಳನà³à²¨à³ ಹೊಗಳಬೇಡಿ ಎಂದೠನಾನೠಹೇಳಲಾರೆ. ನಿಮಗೆ ಆದà³à²¯à²¶à²‚ಕರರ ತತà³à²µà²—ಳಿಗೆ ಬೆಲೆ ಕೊಡà³à²µ ಮನಸà³à²¸à²¿à²¦à³à²¦à²²à³à²²à²¿, ಸಂಸà³à²•ೃತದಲà³à²²à²¿ †ಸತೠಶಿಷà³à²¯à³‹ ಗà³à²°à³à²®à²¾à²¶à³à²°à²¯à³‡à²¤à³ || “, ಎನà³à²¨à³à²µ ವಾಕà³à²¯à²µà²¿à²¦à³†. à²à²¾à²°à²¤à²¦à²²à³à²²à²¿ ಶಂಕರರ ನಾಲà³à²•ೠಆಮà³à²¨à²¾à²¯ ಪೀಠಗಳಿವೆ. ಪà³à²°à²§à²¾à²¨à²µà²¾à²¦ ಶೃಂಗೇರಿ ಪೀಠವಿದೆ. ಬೇಡ ಅವರ ಶಿಷà³à²¯ ಪರಂಪರೆ ಇದೆ. ಅದೂ ಬೇಡದಿದà³à²¦à²²à³à²²à²¿ ಸà³à²µà²°à³à²£à²µà²²à³à²²à²¿, ಎಡತೊರೆ, ಇತà³à²¯à²¾à²¦à²¿ ಅನೇಕ ಪೀಠಗಳಿವೆ ಇವà³à²—ಳನà³à²¨à³ ಆಶà³à²°à²¯à²¿à²¸à²¿, ಹೊಗಳಿ.
ಆಚಾರà³à²¯ ಶಂಕರರೠಚತà³à²°à²¾à²®à³à²¨à²¾à²¯ ಪೀಠಗಳನà³à²¨à³ ಸಂಸà³à²¥à²¾à²ªà²¿à²¸à²¿à²¦à²°à³. ಅನೇಕರಿಗೆ ವೈದಿಕ ಧರà³à²®à²¦ ಉತà³à²¥à²¾à²¨à²•à³à²•ಾಗಿ ಸನà³à²¯à²¾à²¸ ದೀಕà³à²·à³†à²—ೈದರà³. ಜೊತೆಗೆ ಅನೇಕ ನಿಬಂಧನೆಗಳನà³à²¨à³ ಕೂಡ ಇಟà³à²Ÿà²¿à²¦à³à²¦à²°à³. ಅದನà³à²¨à³ ಮರೆತ ಈ ಪೀಠಮನಸೋ ಇಚà³à²›à³† ವà³à²¯à²µà²¹à²°à²¿à²¸à³à²¤à³à²¤à²¿à²¦à³†. “ಪರಸà³à²ªà²° ವಿà²à²¾à²—ೇ ತೠನ ಪà³à²°à²µà³‡à²¶à³‹ ಕದಾಚನ †ಇತà³à²¯à²¾à²¦à²¿ ನಿಬಂಧನೆಗಳಿದà³à²¦à²°à³‚ ಕೇವನ ದà³à²¡à³à²¡à²¿à²—ಾಗಿ ಬಾಯà³à²¬à²¿à²¡à³à²µ ಪà³à²°à²¸à³à²¤à³à²¤ ರಾಘವೇಶà³à²µà²°à²°à³ ಮನ ಬಂದಂತೆ ಬೇರೆ ಪೀಠಗಳ ಪà³à²°à²¦à³‡à²¶à²¦à²²à³à²²à²¿ ತಿರà³à²—à³à²¤à³à²¤à²¿à²¦à³à²¦à²¾à²°à³†. ತಾವೠತà³à²‚ಡೠಮಠವೊಂದರ ಮೇಲà³à²µà²¿à²šà²¾à²°à²• ಎಂಬà³à²¦à²¨à³à²¨à³ ಮರೆತೠವà³à²¯à²µà²¹à²°à²¿à²¸à³à²¤à³à²¤à²¿à²°à³à²µà³à²¦à³ ಶೋà²à³† ತರà³à²µà³à²¦à²¿à²²à³à²². ಇದೇ ವà³à²¯à²µà²¹à²¾à²°à²µà²¨à³à²¨à³ ರಾಜರ ಕಾಲದಲà³à²²à²¿ ಮಾಡಿದà³à²¦à²°à³† ಇವರಿಗೆ ಗಡೀಪಾರೠಇಲà³à²²à²µà³‡ ಬಹಿಷà³à²•ಾರವೇ ಗತಿಯಾಗಿರà³à²¤à³à²¤à²¿à²¤à³à²¤à³.
Hello prathap,
I feel very proud of Sri Ramachandrapur matt, a classy direction towards the development and I like this article, this article gives much knowledge to me.