Date : 05-03-2016 | no Comment. | Read More
ಹಾಗಾದರೆ ಮೋದಿಯವರನ್ನು ಮುಗಿಸಲು ನಡೆದಿತ್ತೇ ಯತ್ನ? ಹೇಗೆ ಆಗಿನ ಗೃಹ ಸಚಿವ ಪಿ. ಚಿದಂಬರಂ ನೇರವಾಗಿ ಮೋದಿಯವರನ್ನು ಇಶ್ರತ್ ಜಹಾನ್ ಎನ್ಕೌಂಟರ್ ಪ್ರಕರಣದಲ್ಲಿ ಆರೋಪಿಯನ್ನಾಗಿಸುವ ಪಿತೂರಿಯಲ್ಲಿ ಭಾಗಿಯಾದ್ದರು ಎಂಬ ವಿಚಾರವನ್ನು ಕಳೆದ ಒಂದು ವಾರದಿಂದ ಮಾಜಿ ಕೇಂದ್ರ ಗೃಹ ಕಾರ್ಯದರ್ಶಿ ಜಿಕೆ ಪಿಳ್ಳೆ , ಗೃಹ ಖಾತೆ ಮಾಜಿ ಅಧಿನ ಕಾರ್ಯದರ್ಶಿ ಆರ್ವಿಎಸ್ ಮಣಿ ಹೊರಹಾಕುತ್ತಿರುವ ಒಂದೊಂದು ಅಂಶಗಳೂ ಬಯಲುಗೊಳಿಸುತ್ತಿವೆ. ಮಾಜಿ ಕೇಂದ್ರ ಗೃಹ ಕಾರ್ಯದರ್ಶಿ ಜಿಕೆ ಪಿಳ್ಳೆ , ಗೃಹ ಖಾತೆ ಮಾಜಿ ಅಧಿ ನ […]
Date : 27-02-2016 | no Comment. | Read More
ಸಾವರ್ಕರ್ ಎಂಬ ಸ್ಫೂರ್ತಿ ಕಿಡಿಗೆ ಎದೆಗೂಡಲ್ಲಿ ಜಾಗವಿಡಿ! ಆ ವೀರ ಕಲಿಯನ್ನು ನೆನಪಿಸಿಕೊಂಡಾಗಲೆಲ್ಲ ದಿವಂಗತ ವಿದ್ಯಾನಂದ ಶೆಣೈ ಕಣ್ಣಮುಂದೆ ಬರುತ್ತಾರೆ. ಆರು ವರ್ಷಗಳ ಹಿಂದೆ ಅವರು ಮಾಡಿದ್ದ ಭಾಷಣದ ಝೇಂಕಾರ ಕಿವಿಯಲ್ಲಿ ಇನ್ನೂ ಹಸಿಯಾಗಿಯೇ ಇದೆ. “ಅವತ್ತು ಛಾಫೇಕರ್ ಸಹೋದರರು ಬ್ರಿಟಿಷ್ ಅಧಿಕಾರಿ ರಾಂಡ್ ನನ್ನು ಹತ್ಯೆ ಮಾಡಿದರು. ಅದು ಬ್ರಿಟಿಷರಿಗೆ ತಿಳಿದುಹೋಯಿತು. ಬಂಧಿಸಿ ವಿಚಾರಣೆಗೆ ಗುರಿಪಡಿಸಿದ ಬ್ರಿಟಿಷರು ಛಾಫೇಕರ್ ಸಹೋದರರ ಮೇಲೆ “ಕೊಲೆ’ ಆರೋಪ ಹೊರಿಸಿದರು. ಕೊನೆಗೆ ಗಲ್ಲಿಗೂ ಏರಿಸಿದರು. ಇದನ್ನೆಲ್ಲಾ ನೋಡಿದ 14 ವರ್ಷದ […]
Date : 20-02-2016 | no Comment. | Read More
ಸ್ವಚ್ಛನಗರ ಮೈಸೂರು, ಕಾರಣೀಭೂತರು ಯಾರು? ಇಂಧೋರ್, ಗ್ವಾಲಿಯರ್, ಸಿಂಧ್ನ ಹೈದರಾಬಾದ್, ನಾಗಪುರ, ಗೋವಾ, ರಾಜಕೋಟ್, ಭಾವನಗರಗಳನ್ನು ಸರ್ಎಂವಿ ರೂಪಿಸಿದರು. ಅದಕ್ಕೆಲ್ಲಾ ಮಾದರಿ, ಪ್ರೇರಣೆಯಾಗಿದ್ದು ನಮ್ಮ ಮೈಸೂರು. ಜನನಿಬಿಡ ಪಟ್ಟಣಗಳಾದರೂ ಪಂಢರಾಪುರ, ಸಾಂಗ್ಲಿ, ಮೋರ್ವಿ, ಅಹಮದ್ನಗರಗಳು ಕುಡಿಯುವ ನೀರಿನ ಕೊರತೆ ಅನುಭವಿಸದೆ ಇರುವುದಕ್ಕೆ ಕಾರಣ ಮೈಸೂರು ಮಾದರಿ. ಮೊದಲು ಮೈಸೂರುನಂತರ ಚಂಡೀಗಢಕಳೆದ ಎರಡು ವರ್ಷಗಳಿಂದ ಹೊರಬೀಳುತ್ತಿರುವ ಸ್ವಚ್ಛನಗರಿಗಳ ಪಟ್ಟಿಯಲ್ಲಿ ಇಡೀ ದೇಶದಲ್ಲಿಯೇ ಅತ್ಯಂತ ಸ್ವಚ್ಛನಗರಿ ಎಂದು ನಮ್ಮ ಮೈಸೂರು ಹೆಗ್ಗಳಿಕೆಯನ್ನು ಪಡೆಯುತ್ತಾ ಬರುತ್ತಿದೆ. ವಾಸ್ತವದಲ್ಲಿ ಮೈಸೂರಿನಲ್ಲಿ ಬಹಳಷ್ಟು ಬದಲಾವಣೆಗಳಾಗಬೇಕಿದ್ದರೂ […]