Date : 26-11-2017 | no Comment. | Read More
ನಾಡು ನುಡಿಯ ಜಾತ್ರೆಯಾಗಬೇಕಿದ್ದ ಸಮ್ಮೇಳನ ಸಿದ್ದರಾಮಯ್ಯನ ಜಾತ್ರೆಯಾಗಿದೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುತ್ತಿರುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ ಸಿಕ್ಕಿದೆ. ಎಲ್ಲ ಕನ್ನಡದ ಮನಸ್ಸುಗಳು ಸಮ್ಮೇಳನದಲ್ಲಿ ಒಂದೆಡೆ ಸೇರಿವೆ. ಸಮ್ಮೇಳನಾಧ್ಯಕ್ಷರಾದ ಚಂದ್ರಶೇಖರ ಪಾಟೀಲ (ಚಂಪಾ) ಅವರು ಸಮ್ಮೇಳನ ಕುರಿತು ಮಾಡಿದ ಭಾಷಣ ಇದೀಗ ಚರ್ಚೆಗೆ ಗ್ರಾಸವಾಗಿದೆ. ನಮ್ಮ ನೆಲ,ಜಲ, ಭಾಷೆ ಬಗ್ಗೆ ಚರ್ಚಿಸಬೇಕಿದ್ದ ವೇದಿಕೆಯನ್ನು ರಾಜಕೀಯವಾಗಿ ಬಳಸಿಕೊಂಡಿರುವ ಬಗ್ಗೆ ರಾಜ್ಯವ್ಯಾಪಿ ವಿರೋಧ ವ್ಯಕ್ತವಾಗುತ್ತಿದೆ. ಕನ್ನಡದ ಕುರಿತು ಚರ್ಚಿಸಲು ಸಾಕಷ್ಟು ವಿಷಯ ಇರುವಾಗ […]
Date : 25-11-2017 | no Comment. | Read More
ಸುಬ್ರಮಣಿಯನ್ ಸ್ವಾಮಿ ಬರುತ್ತಿದ್ದಾರೆ ಎಂದರೆ ಏನೋ ಒಂಥರಾ ಉತ್ಸಾಹ! ಈ ಮನುಷ್ಯನನ್ನು ನೀವು ಇಷ್ಟಪಡದಿರಬಹುದು. ಆತನ ಮಾರ್ಗ ಇಷ್ಟವಾಗದಿರಬಹುದು, ಆತ ಬಳಸುವ ಪದಗಳು ಕ್ರೋಧಯುಕ್ತ ಅಥವಾ ಅಡೆತಡೆಯಿಲ್ಲದ ರಾಜಕೀಯ ವಾಗ್ಝರಿ ನಿಮಗೆ ಇರಸುಮುರಸನ್ನುಂಟು ಮಾಡಬಹುದು. ಆದರೆ ಸೋನಿಯಾ ಗಾಂಧಿ ಎಂಬಾಕೆ ಒಬ್ಬ ಪೇಪರ್ ಟೈಗರ್ ಅಷ್ಟೇ, ರಾಜಕೀಯ ಜಾಣ್ಮೆ ಹಾಗೂ ಮಾಧ್ಯಮದ ಮೂಲಕ ಆಕೆ ಬಹಳ ಗಟ್ಟಿಗಿತ್ತಿ ಎಂಬ ಮಿಥ್ಯೆಯನ್ನು ಸೃಷ್ಟಿಸಲಾಗಿದೆ ಎಂಬುದನ್ನು ಏಕಾಂಗಿಯಾಗಿ ನಿರೂಪಿಸಿದ, ಅಂಥ ಕಲ್ಪನೆಯನ್ನು ನೆಲಸಮ ಮಾಡಿದ ವ್ಯಕ್ತಿ ಡಾ. ಸುಬ್ರಮಣಿಯನ್ ಸ್ವಾಮಿ! […]
Date : 18-11-2017 | no Comment. | Read More
ಧೋನಿ ನಿವೃತ್ತಿ ಬಗ್ಗೆ ಮಾತಾಡುವವರು ಅವರ ಸಾಧನೆ ಮರೆತುಬಿಟ್ಟರೇ? 2013ರಲ್ಲಿ ಭಾರತ, ಶ್ರೀಲಂಕಾ ಮತ್ತು ವೆಸ್ಟಿಂಡೀಸ್ ತ್ರಿಕೋನ ಸರಣಿ -ನಲ್ ಪಂದ್ಯ ನಡೆಯುತ್ತಿತ್ತು. ಬಾಲಿಂಗ್ ಪಿಚ್. ಚೆಂಡು ಎಂದಿಗಿಂತ ಹೆಚ್ಚು ಪುಟಿಯುತ್ತಿತ್ತು. ಕುಮಾರ ಸಂಗಕ್ಕರ ಅವರ 71 ರನ್ಗಳ ನೆರವಿನಿಂದ ಶ್ರೀಲಂಕಾ ಕೇವಲ ೨೦೧ ರನ್ಗಳನ್ನು ಗಳಿಸಿತ್ತು. ಅದನ್ನು ಬೆನ್ನತ್ತಿದ ಭಾರತ ತಂಡ 152ರನ್ಗಳಿಗೆ ಏಳು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಇನ್ನೊಂದು ಬದಿಯಲ್ಲಿ 16 ಬಾಲ್ಗಳಲ್ಲಿ ಕೇವಲ 4 ರನ್ಗಳಿಸಿ ಆಡುತ್ತಿದ್ದ. ಕೆಲವೇ ಹೊತ್ತಿನಲ್ಲಿ ತಂಡದ ಮೊತ್ತ […]
Date : 11-11-2017 | no Comment. | Read More
ಕನ್ನಡ ಬಾರದ ಪರಪುಟ್ಟನಿಗೆ ಕಾರ್ಯಪ್ಪ ಹೇಗೆ ತಾನೇ ಅರ್ಥವಾದಾರು? ಕಳೆದ ವಾರ ಪತ್ರಿಕೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿಯನ್ನು ನೋಡಿದವರಿಗೆ ಗಾಬರಿಯಾಗುವ ಸಂಗತಿಯೊಂದು ಕಾದಿತ್ತು. ನಾಡು–ನುಡಿಗಳ ಸಾಧಕರ ಹೆಸರಿನ ಜತೆಗೆ ಕನ್ನಡದಲ್ಲದ, ಕನ್ನಡದ ಗಂಧ ಗಾಳಿಯೂ ಇಲ್ಲದ ರಾಮಚಂದ್ರ ಗುಹಾ ಎಂಬ ಹೆಸರು ಕರ್ನಾಟಕದ ಏಕೀಕರಣವನ್ನೂ, ಕನ್ನಡದ ಮಣ್ಣಿನ ವಾಸನೆಯನ್ನೂ ಅಣಕಿಸುವಂತೆ ರಾರಾಜಿಸುತ್ತಿತ್ತು. ಹಲವರ ವಿರೋಧದ ನಡುವೆ ರಾಮಚಂದ್ರ ಗುಹಾ ಪ್ರಶಸ್ತಿಯನ್ನು ಯಾವ ನಾಚಿಕೆ ಇಲ್ಲದೆ ಸ್ವೀಕರಿಸಿದ್ದರು. ಸದಾ ಬಲಪಂಥೀಯ ವಿಚಾರಧಾರೆಯ ವಿರುದ್ಧ ಇಂಗ್ಲಿಷಿನಲ್ಲಿ ಬರೆವ ಗುಹಾನನ್ನು […]
Date : 04-11-2017 | no Comment. | Read More
ಕೊಡಗಿಗೆ ಜನರಲ್ಗಳು ಬರುವುದೆಂದರೆ ಊರಿಗೇ ಹಬ್ಬ ಬಂದಂತೆ ಕೊಡಗಿನಲ್ಲಿ ನಾಟಿ ಕೆಲಸವಿರಲಿ, ಕಟಾವಿನ ಭರಾಟೆಯಿರಲಿ, ಕಾಫಿಯ ಸೀಸನ್ನೇ ಇರಲಿ ಬೆಳಗೆದ್ದು ಕ್ಷೌರ ಮುಗಿಸಿ ಟಾಕುಠೀಕಾಗಿ ತಯಾರಾಗಿ ಪೇಟೆಗೆ ಹೋಗುವ ಮಧ್ಯವಯಸ್ಕರನ್ನು ಕಂಡರೆ ನಿಸ್ಸಂಶಯವಾಗಿ ಅವರು ಮಾಜಿ ಯೋಧರೆಂದೇ ಅರ್ಥ! ಪುಟಿಯುವ ಚೆಂಡಿನಂಥಾ ಉತ್ಸಾಹ, ಬಿರುಸಾದ ನಡಿಗೆ, ಮಾತಿನಲ್ಲಿ ಶಿಸ್ತು, ಸಮಯದಲ್ಲಿ ಕಟ್ಟುನಿಟ್ಟು. ಅಂಥ ಮಾಜಿ ಯೋಧರು ಕೆಲದಿನಗಳಿಂದ ಎಂದಿಗಿಂತ ಹೆಚ್ಚು ಉಲ್ಲಸಿತರಾಗಿದ್ದರು. ಏಕೆಂದರೆ ಅವರ ಮೆಚ್ಚಿನ ಚೀಫ್ ‘ಆಫ್ ಆರ್ಮಿ ಸ್ಟಾಫ್’ ಇಂದು ಕೊಡಗಿಗೆ ಆಗಮಿಸುತ್ತಿದ್ದಾರೆ. ಅದರಲ್ಲೂ […]