Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಸಮಾಜದ ಸಾಕ್ಷಿಪ್ರಜ್ಞೆಯನ್ನು ಎತ್ತಿಹಿಡಿಯಲು ಸದಾ ಅವರು ನಮ್ಮೊಡನಿರಬೇಕು

ಸಮಾಜದ ಸಾಕ್ಷಿಪ್ರಜ್ಞೆಯನ್ನು ಎತ್ತಿಹಿಡಿಯಲು ಸದಾ ಅವರು ನಮ್ಮೊಡನಿರಬೇಕು

ಮಂಗಳೂರಿನವರು ಸಾಮಾನ್ಯವಾಗಿ ಮೂಗುಮುರಿ ಯುವ ದೂರದ ಧಾರವಾಡದಲ್ಲಿ ವಿಶ್ವದರ್ಜೆಯ ಡೆಂಟಲ್ ಕಾಲೇಜು, ಜತೆಗೊಂದು ಎಂಜಿನಿಯ ರಿಂಗ್ ಕಾಲೇಜು, ಮೈಸೂರಿನಲ್ಲೊಂದು ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ಹಾಗೂ ಮಹಿಳಾ ಪಿಯು ಕಾಲೇಜು, ಅಲೋಪತಿ ಬಿಟ್ಟರೆ ಬೇರೆ ವೈದ್ಯರೇ ಇಲ್ಲವೆಂಬಂತಿರುವ ಹಾಸನದಲ್ಲಿ ಆಯುರ್ವೇದ ಕಾಲೇಜು, ಉಡುಪಿಯಲ್ಲಿ ಮತ್ತೊಂದು, ಮಂಗಳೂರಿನಲ್ಲಿ ಕಾನೂನು ಕಾಲೇಜು… ಹೀಗೆ ಒಂದೊಂದು ದಿಕ್ಕುಗಳಲ್ಲಿ ಒಂದೊಂದು ಕಾಲೇಜುಗಳನ್ನು ‘ಖಾವಂದ’ರೇಕೆ ಕಟ್ಟಿದರು?

ಇಂತಹ ಪ್ರಶ್ನೆ ಆಗಾಗ್ಗೆ ಕಾಡಿದ್ದಿದೆ.

ಈ ಎಲ್ಲ ಕಾಲೇಜುಗಳನ್ನು ಧರ್ಮಸ್ಥಳದ ಬಳಿ ಇರುವ ಉಜಿರೆಯಲ್ಲೇ ಕಟ್ಟಿದ್ದರೆ ಉಜಿರೆಯನ್ನು ಮತ್ತೊಂದು ಮಣಿ(ನಿ)ಪಾಲವನ್ನಾಗಿಸಬಹುದಿತ್ತು. ಕಾಲ ಬುಡದಲ್ಲೇ ಕಾಲೇಜುಗಳಿದ್ದರೆ ಆಡಳಿತಯಂತ್ರದ ಮೇಲೆ ನಿಗಾವನ್ನೂ ಇಡಬಹುದಿತ್ತು, ಆದಾಯದ ಮೇಲೂ ನಿಯಂತ್ರಣ ಸಾಧಿಸ ಬಹುದಿತ್ತು. ಈ ರೀತಿಯ ಯೋಚನೆಗಳೇಕೆ ಖಾವಂದರಲ್ಲಿ ಬರಲಿಲ್ಲ? ಧರ್ಮಸ್ಥಳದ ಧರ್ಮಾಧಿಕಾರಿಯಾದ ಖಾವಂದರು ಯಾಕಾಗಿ ರಾಜ್ಯದ ವಿವಿಧೆಡೆಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪನೆ ಮಾಡಿದರು? ಇಂಥದ್ದೊಂದು ಪ್ರಶ್ನೆಯನ್ನು ಮುಂದಿಟ್ಟುಕೊಂಡು ಉತ್ತರ ಹುಡುಕಲು ಹೊರಟರೆ ಖಾವಂದರ ಕಾಳಜಿ ಅರ್ಥ ವಾಗುತ್ತಾ ಹೋಗುತ್ತದೆ, ಅವರಲ್ಲಿರುವ ಸಾಮಾಜಿಕ ನ್ಯಾಯ ತೆರೆದುಕೊಳ್ಳುತ್ತಾ ಸಾಗುತ್ತದೆ. ಒಬ್ಬ ಆಳುವ ಮುಖ್ಯಮಂತ್ರಿ ಯಲ್ಲಿರಬೇಕಾದ ದೂರದೃಷ್ಟಿ, ಸಾಮಾಜಿಕ ನ್ಯಾಯ, ರಾಜ್ಯದ ಸಮಗ್ರ ಅಭಿವೃದ್ಧಿಯ ಪರಿಕಲ್ಪನೆ ಖಾವಂದರಲ್ಲಿ ಕಾಣಸಿಗುತ್ತದೆ. ಅಲ್ಲಾ, ಯಾರೀ ಖಾವಂದರು ಎಂಬ ಪ್ರಶ್ನೆ ಕಾಡುತ್ತಿದೆಯೇ? ‘ಖಾವಂದ’ ಎಂಬುದು ಪಾರ್ಸಿ ಪದ. ಧಣಿ, ರಕ್ಷಕ, ಒಡೆಯ ಎಂಬ ಅರ್ಥ ಅದಕ್ಕಿದೆ. ಅಂದರೆ ಒಂದು ಕ್ಷೇತ್ರದ, ಪ್ರಾಂತ್ಯದ ಒಡೆಯರನ್ನು ‘ಖಾವಂದ’ ಎಂದು ಕರೆಯುವ ವಾಡಿಕೆ ಹಿಂದೆ ಇತ್ತು. ಧರ್ಮಸ್ಥಳವೂ ಒಂದು ಬೀಡು. ಅದರ ಒಡೆಯರಾದ ಧರ್ಮಾಧಿಕಾರಿ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರನ್ನು ಖಾವಂದರು ಎನ್ನುತ್ತಾರೆ, ಆದರೆ ಭಯದಿಂದಲ್ಲ ಪ್ರೀತಿ, ಗೌರವಗಳಿಂದ.

ವೀರೇಂದ್ರ ಹೆಗ್ಗಡೆಯವರು ಜನಿಸಿದ್ದು ೧೯೪೮, ನವೆಂಬರ್ ೨೫ರಂದು. ಧರ್ಮಸ್ಥಳದ ಚುಕ್ಕಾಣಿ ಹಿಡಿದಿದ್ದು ೧೯೬೮ರಲ್ಲಿ. ತಂದೆ ರತ್ನವರ್ಮ ಹೆಗ್ಗಡೆಯವರ ಅಕಾಲಿಕ ನಿಧನ ಅತ್ಯಂತ ಚಿಕ್ಕವಯಸ್ಸಿನಲ್ಲಿಯೇ ಅತಿ ಭಾರವಾದ ಜವಾಬ್ದಾರಿಯನ್ನು ಹೆಗಲಿಗೆ ಹಾಕಿತು. ಒಬ್ಬ ವ್ಯಕ್ತಿಯ ನಿಜವಾದ ಗುಣವನ್ನು ಅರಿಯ ಬೇಕಾದರೆ ಆತನಿಗೆ ಅಧಿಕಾರ ಕೊಟ್ಟು ನೋಡಬೇಕು ಎಂಬ ಮಾತಿದೆ. ಚುನಾವಣೆಗೆ ಮೊದಲು ನಮ್ಮ ಕೈ, ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೇರಿದ ಮೇಲೆ ನಮ್ಮ ವಿಶ್ವಾಸವನ್ನು ‘ಶೇಕ್’ ಮಾಡುವ ರಾಜಕಾರಣಿಗಳನ್ನು ನೋಡಿರುವ ನಮಗೆ ಅಧಿಕಾರದಿಂದ ಬರುವ ಮದದ ಪರಿಚಯ ಚೆನ್ನಾಗಿಯೇ ಆಗಿದೆ. ಹಾಗಿರುವಾಗ ಇಪ್ಪತ್ತರ ಕಿರಿ ವಯಸ್ಸಿನಲ್ಲಿ ಪಟ್ಟಕ್ಕೇರಿದ ಹೆಗ್ಗಡೆಯವರೂ ತಪ್ಪೆಸಗಬಹುದಾದ, ದರ್ಪದಲ್ಲಿ ಅಚಾತುರ್ಯಗಳಿಗೆ ಅವಕಾಶವೀಯಬಹುದಾದ ಎಲ್ಲ ಸಾಧ್ಯತೆಗಳೂ ಇದ್ದವು.  ಮಂಜುನಾಥನನ್ನು ದುಡ್ಡಿನ ಗಿಡ ಮಾಡಿಕೊಂಡು, ಬಂಗಲೆ ಕಟ್ಟಿಕೊಂಡು ರಾಜ್ಯಭಾರ ಮಾಡಬಹುದಿತ್ತು. ಜನರ ಭಕ್ತಿಯನ್ನೇ ಬಂಡವಾಳವನ್ನಾಗಿಸಿಕೊಳ್ಳ ಬಹುದಿತ್ತು. ಮಠ ಕಟ್ಟಿಕೊಂಡು ಶಿಲಾಯುಗದ ಕಾಲದ ಕಥೆಗಳನ್ನು ಹೇಳಿಕೊಂಡು ಸಾಮಾಜಿಕ ಸೇವೆಯ ಬದಲು ಭಕ್ತರಿಂದ ಸೇವೆ ಮಾಡಿಸಿಕೊಳ್ಳುವ ಮತ್ತೊಬ್ಬ ಸ್ವಾಮಿಯೂ ಆಗಬಹುದಿತ್ತು. ಆದರೆ ಹಾಗಾಗಲಿಲ್ಲ.

ಅದಕ್ಕೆ ಬಹುಶಃ ರತ್ನವರ್ಮ ಹೆಗ್ಗಡೆಯವರೇ ಕಾರಣವಿದ್ದಿರ ಬಹುದು.

ಯಾವುದಾದರೂ ಹುಡುಗನಿಗೆ ಅಪ್ಪ-ಅಮ್ಮ ಯಾರೂ ಇಲ್ಲ, ಇದ್ದರೂ ತಿನ್ನುವುದಕ್ಕೇ ಗತಿಯಿಲ್ಲ ಎಂದಾಗಿದ್ದರೆ ಆತನನ್ನು ಸಿದ್ಧಗಂಗಾ ಮಠಕ್ಕೆ ಬಿಟ್ಟು ಬನ್ನಿ, ಶ್ರೀ ಶಿವಕುಮಾರ ಸ್ವಾಮೀಜಿಗಳ ಸುಪರ್ದಿಗೆ ವಹಿಸಿ ಬಿಡಿ ಉದ್ಧಾರವಾಗುತ್ತಾನೆ ಎನ್ನುವುದನ್ನು  ಉತ್ತರ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಕಾಣಬಹುದು. ಹಾಗೆಯೇ ದಕ್ಷಿಣ ಕನ್ನಡದಲ್ಲಿ ಉಚಿತ ಅನ್ನ ಹಾಗೂ ಅಕ್ಷರ ದಾಸೋಹವೆಂದ ಕೂಡಲೇ ನೆನಪಿಗೆ ಬರುತ್ತಿದ್ದುದು ಉಜಿರೆಯ ‘ಸಿದ್ಧವನ ಗುರುಕುಲ’. ಎಷ್ಟೋ ಬಡಮಕ್ಕಳು ಬರಿಗೈಲಿ ಬಂದು ಪದವಿ ಸರ್ಟಿಫಿಕೆಟ್‌ನೊಂದಿಗೆ ಇಲ್ಲಿಂದ ಹೊರಹೋಗಿದ್ದಾರೆ. ಸಿದ್ಧವನವೆಂಬುದು ರತ್ನವರ್ಮ ಹೆಗ್ಗಡೆಯವರು ಬಡಮಕ್ಕಳಿ ಗಾಗಿಯೇ ಕಟ್ಟಿಸಿದ ಗಂಜಿಕೇಂದ್ರವೆಂದರೂ ತಪ್ಪಾಗದು. ಬಹಳ ಇತ್ತೀಚಿನವರೆಗೂ ಒಂದೇ ಪ್ಯಾಂಟು ವಾರದ ೬ ದಿನವೂ ಕಾಲೇಜಿನ ಬೇರೆ ಬೇರೆ ಕ್ಲಾಸ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದೆಯೆಂದರೆ ಅದು ಸಿದ್ಧವನದ ಯಾವುದೋ ಒಬ್ಬ ವಿದ್ಯಾರ್ಥಿಯದ್ದು, ಉಳಿದವರು ಸರದಿಯ ಮೇಲೆ ಹಾಕಿಕೊಳ್ಳುತ್ತಿದ್ದಾರೆ  ಎಂದು ಆಡಿಕೊಳ್ಳುವ ಸನ್ನಿವೇಶವಿತ್ತು. ಅಂತಹ ಬಡ ಹಿನ್ನೆಲೆಯಿಂದ ಬಂದವರೇ ಸಿದ್ಧವನದಲ್ಲಿರುತ್ತಿದ್ದರು. ತನ್ನ ಮಗನಿಗೂ ಪರಿಸ್ಥಿತಿಯ ಪರಿಚಯವಾಗಬೇಕು, ಬಡವರ ನೋವು ಅರ್ಥವಾಗಬೇಕು, ಕಷ್ಟದಲ್ಲಿ ಜೀವನ ನಡೆಸುವುದು, ಕಷ್ಟಗಳ ನಡುವೆಯೂ ಕಲಿತು ಮೇಲೆ ಬರುವುದನ್ನು ಕಲಿಸಬೇಕು ಎಂಬ ಆಶಯದಿಂದ ರತ್ನವರ್ಮ ಹೆಗ್ಗಡೆಯವರು ವೀರೇಂದ್ರ ಹೆಗ್ಗಡೆಯವರನ್ನೂ ಸಿದ್ಧವನಕ್ಕೆ ಸೇರಿಸಿದ್ದರು. ಹಾಗೆ ಸೇರಿಸಿದ ಕಾರಣದಿಂದಲೋ ಏನೋ ಹೆಗ್ಗಡೆಯವರು ಒಬ್ಬ ಟಿಪಿಕಲ್ ಸ್ವಾಮಿ ಅಥವಾ ಧರ್ಮಾಧಿಕಾರಿಯಾಗುವ ಬದಲು ಪಟ್ಟಕ್ಕೇರಿದ ಮೇಲೆ ಅವರಲ್ಲಿ ಸಮಾಜ ಸುಧಾರಣೆಯ ತುಡಿತ ಕಾಣತೊಡಗಿತು.

ಧರ್ಮಸ್ಥಳವಿರುವುದು ದಕ್ಷಿಣ ಕನ್ನಡದಲ್ಲಾದರೂ ಮಂಜುನಾಥನ ಬಳಿಗೆ ಬರುವ ಭಕ್ತಾದಿಗಳು ನಾಡಿನ ಮೂಲೆ ಮೂಲೆಯವರು. ಹಾಗಾಗಿಯೇ ಕಾಣಿಕೆಯನ್ನು ಕುಡಿಕೆಗೆ ಹಾಕಿಡುವ ಬದಲು ವೀರೇಂದ್ರ ಹೆಗ್ಗಡೆಯವರು ಧಾರವಾಡ, ಮೈಸೂರು, ಹಾಸನ ಹೀಗೆ ರಾಜ್ಯದ ವಿವಿಧ ಭಾಗಗಳಲ್ಲಿ ಸುಮಾರು ೫೦ಕ್ಕೂ ಹೆಚ್ಚು ಶೈಕ್ಷಣಿಕ ಕೇಂದ್ರಗಳನ್ನು ಕಟ್ಟುವ ಮೂಲಕ ವಿದ್ಯಾದಾನದಲ್ಲೂ ಸಾಮಾಜಿಕ ನ್ಯಾಯವನ್ನು ತರಲು ಹೊರಟರು. ವಿದ್ಯಾ ಸಂಸ್ಥೆಗಳನ್ನು ಕಟ್ಟಿದ್ದರಿಂದ ಆದಾಯ ಬಂತಾ ದರೂ ಲಾಭದ ಉದ್ದೇಶದಿಂದ ಏನನ್ನೂ ಮಾಡಲಿಲ್ಲ. ಹಾಗಾಗಿ ಶಿಕ್ಷಣ ನೀಡಿಕೆಯಲ್ಲೂ ಕೆಲವು ಪ್ರಯೋಗಗಳನ್ನು ಮಾಡಲು ಹೊರಟರು. ಅವರದ್ದೊಂಥರ Out of the box thinking ಅನ್ನುತ್ತಾರಲ್ಲಾ ಹಾಗೆ. ಕ್ಯಾಪಿಟೇಶನ್ ಮೇಲೆ ಕಣ್ಣಿಟ್ಟು  ಮೆಡಿಕಲ್ ಕಾಲೇಜು ಕಟ್ಟುವ ಯಾರೂ ಕೇಳಿರದ, ಅಕಸ್ಮಾತ್ ಕೇಳಿದರೂ ಹುಬ್ಬು ಗಂಟಿಕ್ಕಿಕೊಂಡು ನೋಡುವಂತಿದ್ದ ಕಾಲದಲ್ಲಿ “ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿeನ” ಎಂಬ ಕಾಲೇಜು ಆರಂಭಕ್ಕೆ ಮುಂದಾದರು. ಬೊಜ್ಜು, ಮಾನಸಿಕ ಒತ್ತಡ, ಮೈ-ಕೈ ನೋವಿ ನಿಂದ ನರಳುತ್ತಿರುವವರೇ ಹೆಚ್ಚಾಗಿರುವ ಇಂದಿನವರಿಗೆ ಪ್ರಕೃತಿ ಚಿಕಿತ್ಸೆ ಹಾಗೂ ಯೋಗವಿeನವೇ ಪರಿಹಾರವಾಗಿ ಹೊರಹೊಮ್ಮಿದೆ. ಒಬ್ಬ ಅಲೋಪತಿ ವೈದ್ಯನಿಗಿಂತ ಪ್ರಕೃತಿ ಚಿಕಿತ್ಸೆ ಹಾಗೂ ಯೋಗವಿeನದಲ್ಲಿ ಪದವಿ ಪಡೆದವರೇ ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿದ್ದಾರೆ, ಭಾರತಕ್ಕಿಂತಲೂ ವಿದೇಶಗಳಲ್ಲೇ ಹೆಚ್ಚಿನ ಬೇಡಿಕೆ ಕಂಡುಬರುತ್ತಿದೆ. ಇಪ್ಪತ್ತು ವರ್ಷಗಳಷ್ಟು ಹಿಂದೆ ಹೆಗ್ಗಡೆಯವರು ತೋರಿದ್ದ ದೂರದೃಷ್ಟಿ ಇಂದು ನಮ್ಮ ಅರಿವಿಗೆ ಬರುತ್ತಿದೆ.
ಹಾಗಂತ ಹೆಗ್ಗಡೆಯವರ ಕಾರ್ಯಕ್ಷೇತ್ರ ಧರ್ಮಸ್ಥಳ ಹಾಗೂ ವಿದ್ಯಾಕೇಂದ್ರಗಳ ಸ್ಥಾಪನೆಗಷ್ಟೇ ಸೀಮಿತವಾಗಲಿಲ್ಲ.

ನಮ್ಮ ಸರಕಾರಗಳು ಮದ್ಯ ವ್ಯಸನವನ್ನು ತಡೆಗಟ್ಟಲು ಮದ್ಯ ಮಾರಾಟವನ್ನು ನಿಷೇಧ ಮಾಡುವುದೇ ಮಾರ್ಗ ಎಂಬಂತೆ ಯೋಚಿಸುತ್ತವೆ. ಅಂತಹ ಧೋರಣೆಯಿಂದ ಆಗಿದ್ದಾದರೂ ಏನು? ಇಪ್ಪತ್ತು ರೂ. ಕೊಟ್ಟು ಪ್ಯಾಕೆಟ್ ಕುಡಿಯುತ್ತಿದ್ದವನು ೪೦ ರೂ. ಕೊಟ್ಟು ಕಳಪೆ ವಿಸ್ಕಿ ಕುಡಿಯಬೇಕಾಗಿ ಬಂತು. ಅಂದರೆ ಪ್ಯಾಕೆಟ್ ಹೋಗಿ ಕಾರ್ಮಿಕ ಕ್ವಾರ್ಟರ್ ಹಿಡಿದನೇ ಹೊರತು ಮದ್ಯವ್ಯಸನ ಕೊನೆಗಾಣಲಿಲ್ಲ. ಈ ಸಮಸ್ಯೆಯನ್ನು ತೊಡೆದುಹಾಕಲು ಹೆಗ್ಗಡೆಯವರು ಹಿಡಿದ ಮಾರ್ಗವೇ ಬೇರೆ. ಮೊದಲಿಗೆ ೧೯೯೫ರಲ್ಲಿ ಬೆಳ್ತಂಗಡಿ ತಾಲೂಕಿನಿಂದ ಮದ್ಯಪಾನ ಸಮಸ್ಯೆಯನ್ನು ನಿರ್ಮೂಲನೆ ಮಾಡಲು ಹೆಗ್ಗಡೆಯವರು ಮುಂದಾದರು. “ಕಳಿ, ಗಂಗಸರ ಬುಡ್ಕ, ತೆಳಿಗಂಜಿ ಪರ್‍ಕ” (ಹೆಂಡ, ಸಾರಾಯಿ ಬಿಡೋಣ: ತಿಳಿ ಗಂಜಿ ಕುಡಿಯೋಣ) ಎಂಬ ಅವರ ಸ್ಲೋಗನ್‌ಗಳು ಭಿತ್ತಿಪತ್ರಗಳಿಗೆ ಸೀಮಿತವಾಗಲಿಲ್ಲ. ಮನೆ ಮನೆಗಳಿಗೆ ಹೋಗಿ ಮದ್ಯವ್ಯಸನಿ ಕುಟುಂಬಗಳ ಸಮಸ್ಯೆಗಳನ್ನು ತಿಳಿದುಕೊಳ್ಳುವ ಕೆಲಸ ಆರಂಭಿಸಿದರು. ಮೊದಲು ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸಿ, ನಂತರ ಮದ್ಯಪಾನ ನಿಲ್ಲಿಸಿ ಎಂದು ತಿಳಿಹೇಳುವ ಕೆಲಸ ಮಾಡಿದರು. ಸಾಮಾನ್ಯವಾಗಿ ಮದ್ಯಪಾನ ವ್ಯಸನಗಳು ಕಾಡುವುದು ಸಣ್ಣ ಹಾಗೂ ಅರೆ ಕೃಷಿಕರು, ಭೂರಹಿತ ಕಾರ್ಮಿಕರನ್ನೇ. ಹಾಗಾಗಿ ಇಂತಹ ದುರ್ಬಲ ವರ್ಗಗಳ ಶ್ರೇಯೋಭಿವೃದ್ಧಿಗಾಗಿ ೧೯೯೬ರಲ್ಲಿ “ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ”(SKDRDP)ಯನ್ನು ಆರಂಭಿಸಿದರು. “ಪ್ರಗತಿ ನಿಧಿ” ಎಂಬ ಕಾರ್ಯಕ್ರಮದಡಿ ಕೃಷಿಕರು ಹಾಗೂ ಅಗತ್ಯವಿರುವವರಿಗೆ ಯಾವುದೇ ತಲೆನೋವು ಕೊಡದೆ ಸಾಲ ನೀಡಲು ಆರಂಭಿಸಿದರು. ‘ಸ್ವ-ಸಹಾಯ’ ಗುಂಪುಗಳನ್ನು ಆರಂಭಿಸಿ ಅಂತಹ ಗುಂಪುಗಳೂ ಸಾಲ ಪಡೆದು ಕೊಳ್ಳಬಹುದಾದ ಅವಕಾಶ ಕಲ್ಪಿಸಿದರು. ಈ ಯೋಜನೆ ಹಾಗೂ ಸ್ವ-ಸಹಾಯ ಪದ್ಧತಿಯಿಂದಾಗಿ ಎಷ್ಟೋ ಬಡವರು ಸ್ವಂತ ಗೂಡು ಕಟ್ಟಿಕೊಂಡಿದ್ದಾರೆ, ಅವರ ಮಕ್ಕಳು ಶಾಲೆಯ ಮುಖ ನೋಡುತ್ತಿದ್ದಾರೆ, ಕುಡಿತ ಬಿಟ್ಟಿದ್ದಾರೆ. ಹೀಗೆ ಒಂದು ಸ್ವಸ್ಥ ಸಮಾಜವನ್ನು ಹೇಗೆ ಕಟ್ಟಬಹುದು ಎಂಬುದನ್ನು ಹೆಗ್ಗಡೆಯವರು ಕೃತಿಯಲ್ಲಿ ತೋರುತ್ತಿದ್ದಾರೆ. ಇವತ್ತು ಧರ್ಮಸ್ಥಳ ಹಾಗೂ ಹೆಗ್ಗಡೆ ಯವರ ಹೆಸರು ರಾಷ್ಟ್ರಮಟ್ಟದಲ್ಲಿ ಕೇಳಿಬರುತ್ತಿದ್ದರೆ ಅದಕ್ಕೆ ಅವರು ಆರಂಭಿಸಿರುವ ಗ್ರಾಮಾಭಿವೃದ್ಧಿ ಯೋಜನೆಯೇ ಕಾರಣ.

ಉಜಿರೆಯ ‘ರುಡ್ ಸೆಟ್’ ಅಂತೂ ಸ್ವ-ಉದ್ಯೋಗಕ್ಕೆ ಒಂದು ಮಾದರಿ.

ಪದವಿ ಇದ್ದವರು ಕೆಲಸಕ್ಕೆ ಅರ್ಜಿಹಾಕಿಕೊಂಡಾದರೂ ಕುಳಿತು ಕೊಳ್ಳಬಹುದು. ಯಾವ ಸರ್ಟಿಫಿಕೆಟ್‌ಗಳೂ ಇಲ್ಲದವರು ಏನು ಮಾಡಬೇಕು? ಹೈನುಗಾರಿಕೆ, ಟೈಲರಿಂಗ್, ವಾಹನ ರಿಪೇರಿ, ಸೈಕಲ್ ರಿಪೇರಿ, ಬ್ಯೂಟಿಶಿಯನ್ ಹೀಗೆ ಹತ್ತಕ್ಕೂ ಹೆಚ್ಚು ಕ್ಷೇತ್ರಗಳ ಬಗ್ಗೆ ಇಲ್ಲಿ ತರಬೇತಿ ನೀಡಲಾಗುತ್ತದೆ. ತರಬೇತಿ ಸಂಪೂರ್ಣವಾಗಿ ಉಚಿತ, ತರಬೇತಿಯ ನಂತರ ಒಂದು ವೇಳೆ ಯಾರಿಗಾದರೂ ಹಣ ಸಹಾಯ ಬೇಕೆಂದಾದರೆ ಸಾಲ ಸೌಲಭ್ಯವನ್ನೂ ಕಲ್ಪಿಸುತ್ತಾರೆ. ಹಾಗಾಗಿ ‘ರುಡ್ ಸೆಟ್’ ಎಷ್ಟು ಜನಪ್ರಿಯವಾಗಿದೆಯೆಂದರೆ ಇತರ ರಾಜ್ಯಗಳಲ್ಲೂ ಇದರ ಶಾಖೆಗಳನ್ನು ಆರಂಭಿಸಲಾಗಿದೆ. ಇವೆಲ್ಲಾ ಯೋಜನೆ, ಕಾರ್ಯಕ್ರಮಗಳಿಗೆ ಖಂಡಿತ ಸರಕಾರದ ನಿಧಿ ಬರುತ್ತಿದೆ. ಆದರೆ ಸರಕಾರದ ಹಣ ಫಲಾನುಭವಿಗಳಿಗೆ ಎಷ್ಟರಮಟ್ಟಿಗೆ ಮುಟ್ಟುತ್ತಿದೆ? ನೀವೇ ನೋಡಿ, ಜೆಡಿಎಸ್-ಬಿಜೆಪಿ ಮೈತ್ರಿ ಸರಕಾರ ಸಾಲಮನ್ನಾ ಮಾಡಿತು. ಆದರೆ ಲಾಭ ಪಡೆದುಕೊಂಡಿದ್ದು ಯಾರು? ಸಾಮಾನ್ಯವಾಗಿ ರಾಜ್ಯದ ಬಹುತೇಕ ಎಲ್ಲ ಸಹಕಾರಿ ಬ್ಯಾಂಕ್, ಸೊಸೈಟಿಗಳೂ ಒಬ್ಬಲ್ಲಾ ಒಬ್ಬ ಪುಢಾರಿಯ ಹಿಡಿತದಲ್ಲೇ ಇವೆ. ಸರಕಾರ ಸಾಲಮನ್ನಾ ಮಾಡಿದ ಕೂಡಲೇ ಖೊಟ್ಟಿ ಸಾಲ ಖಾತೆಗಳನ್ನು ತೆರೆದು ೩೦೦ ಕೋಟಿಗೂ ಹೆಚ್ಚು ಹಣವನ್ನು ಸೊಸೈಟಿಗಳ ಸೆಕ್ರೆಟರಿ ಹಾಗೂ ಆಡಳಿತ ಮಂಡಳಿಗಳೇ ನುಂಗಿಹಾಕಿದರು. ಆದರೆ ಧರ್ಮಸ್ಥಳ ನಡೆಸುತ್ತಿರುವ ಗ್ರಾಮೀಣಾಭಿವೃದ್ಧಿ ಯೋಜನೆಯಲ್ಲಿ ನೂರಕ್ಕೆ ನೂರರಷ್ಟು ಎಂದು ಹೇಳಲಾಗದಿದ್ದರೂ ಹೆಚ್ಚಿನ ಲಾಭ ಫಲಾನುಭವಿಗಳನ್ನು ತಲುಪುತ್ತಿದೆ. ಹಾಗಾಗಿಯೇ ಕಳೆದ ಭಾನು ವಾರ ಮೂಡಬಿದಿರೆಯಲ್ಲಿ ನಡೆದ ವೀರೇಂದ್ರ ಹೆಗ್ಗಡೆಯ ವರ ಸನ್ಮಾನ ಸಮಾರಂಭಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪನವರು, ‘ಉತ್ತರ ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ನಾವೂ ಗ್ರಾಮೀಣಾಭಿವೃದ್ಧಿ ಯೋಜನೆಯನ್ನು ಜಾರಿಗೆ ತರುತ್ತೇವೆ, ಅದಕ್ಕೆ ನಿಮ್ಮ ಮಾರ್ಗದರ್ಶನ ಬೇಕು’ ಎಂದು ಹೆಗ್ಗಡೆಯವರಲ್ಲಿ ಮನವಿ ಮಾಡಿಕೊಂಡರು. ಮುಖ್ಯ ಮಂತ್ರಿಯಾದವರು ಸನ್ಮಾನ ಸಮಾರಂಭಗಳಿಗೆ ಹೋದಾಗ ಅನಿವಾರ್ಯವಾಗಿ ಹೊಗಳಬೇಕಾಗುತ್ತದೆ, ಸ್ವಾಮೀಜಿಗಳ ಕಾಲಿಗೆ ಬೀಳಬೇಕಾಗುತ್ತದೆ, ಆಶೀರ್ವಾದವನ್ನು ಕೇಳಬೇಕಾಗುತ್ತದೆ, ಧನ ಸಹಾಯವನ್ನೂ ಘೋಷಣೆ ಮಾಡಬೇಕಾಗುತ್ತದೆ. ಆದರೆ ಹೆಗ್ಗಡೆಯವರ ಬಳಿಗೆ ಹೋದವರು ‘ಮಾರ್ಗದರ್ಶನ’ ಮಾಡಿ ಎಂದು ಕೇಳಿಕೊಳ್ಳುತ್ತಾರೆ!

ಅವರ ಮಹತ್ವವನ್ನು ಅರಿತುಕೊಳ್ಳಲು ಅಷ್ಟೇ ಸಾಕು.

ಹಾಗಂತ ಧರ್ಮಸ್ಥಳದಲ್ಲಿ ಎಲ್ಲವೂ ಸರಿಯಾಗಿಯೇ ಇದೆ, ಅನ್ಯಾಯ, ದೌರ್ಜನ್ಯಗಳೇ ಇಲ್ಲ. ಗ್ರಾಮೀಣಾಭಿವೃದ್ಧಿ ಯೋಜನೆ ಯಲ್ಲಿ ತಪ್ಪುಗಳಾಗಿಲ್ಲ, ಅತಿರೇಕಗಳಾಗಿಲ್ಲ, ದೌರ್ಜನ್ಯ ನಡೆದೇ ಇಲ್ಲ ಎಂದೂ ಹೇಳುತ್ತಿಲ್ಲ. ಅವುಗಳಲ್ಲಿ ಒಂದಿಷ್ಟು ಸತ್ಯವೂ ಇದೆ. ಒತ್ತಡಗಳಿಗೆ ಒಳಗಾಗಿ ಸಾಲ ತೆಗೆದುಕೊಂಡು, ಮತ್ತಿನ್ಯಾವುದೋ ಅಗತ್ಯಕ್ಕೆ ಬಳಸಿಕೊಂಡು ಸಂಕಷ್ಟ ಅನುಭವಿಸುತ್ತಿರುವವರೂ ಇದ್ದಾರೆ. ಆದರೆ ಕಾಲ ಕೆಳಗಿರುವವರು ತಪ್ಪು ಮಾಡಿದರೂ ನಾಯಕನಿಗೆ ಕೆಟ್ಟ ಹೆಸರು ಬರುತ್ತದೆ. ಹಾಗೆಯೇ ಹೆಗ್ಗಡೆಯವರೂ ಟೀಕೆಯಲ್ಲಿ ಪಾಲು ಪಡೆದುಕೊಂಡಿದ್ದಿದೆ. ಇಷ್ಟೆಲ್ಲಾ ಯೋಜನೆ, ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಅವುಗಳ ಅನುಷ್ಠಾನ, ಜಾರಿ ವೇಳೆ ಸಣ್ಣ ಪುಟ್ಟ ತಪ್ಪುಗಳಾಗುವುದು, ಅಚಾತುರ್ಯಗಳು ನಡೆಯುವುದು ಸಹಜ ಹಾಗೂ ಸಹ್ಯ ಕೂಡ.

ಇಷ್ಟಾಗಿಯೂ ಹೆಗ್ಗಡೆಯವರ ಅತಿದೊಡ್ಡ ಹೆಗ್ಗಳಿಕೆಯೊಂದಿದೆ.

ಗುಜರಾತ್ ಹಿಂಸಾಚಾರವನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಕೊಲೆಗಡುಕ, ಕೋಮುವಾದಿ, ಹಿಂದುತ್ವವಾದಿ ಎಂದು ಹಿಗ್ಗಾಮುಗ್ಗ ಟೀಕಿಸುವ ವರೂ ಕೂಡ ಒಂದು ವಿಷಯದಲ್ಲಿ ಚಕಾರವೆತ್ತುವುದಿಲ್ಲ. ಅವರದ್ದು Clean hand. ಮೋದಿಯವರ ಅತಿದೊಡ್ಡ ಸಾಮರ್ಥ್ಯ ಅವರ ಶುದ್ಧಹಸ್ತ ಎಂದಾದರೆ, ನಮ್ಮ ಹೆಗ್ಗಡೆಯವರ ಸಾಮರ್ಥ್ಯ ಅವರ ಶುದ್ಧಚಾರಿತ್ರ್ಯದಲ್ಲಿದೆ. ಅಂತಹ ನೆಹರು, ಗಾಂಧೀಜಿ ಕೂಡ Personal follyಯಿಂದ ಮುಕ್ತರಾದವರಲ್ಲ. ಆದರೆ ಖಾವಂದರದ್ದು spotless personal life. ಅವರ ವೈಯಕ್ತಿಕ ಜೀವನದಲ್ಲಿ ಒಂದು ಸಣ್ಣ ಕಪ್ಪು ಚುಕ್ಕೆಯನ್ನೂ ಕಾಣಲು, ಪತ್ತೆ ಮಾಡಲು ಸಾಧ್ಯವಿಲ್ಲ. ‘God’s chosen one’ ಅನ್ನುತ್ತಾರಲ್ಲಾ ಹಾಗೆ ‘ದೇವರ ಆಯ್ಕೆ’ ಅವರಾಗಿದ್ದರೋ ಏನೋ ಹೆಗ್ಗಡೆಯವರು ಚುಕ್ಕಾಣಿ ಹಿಡಿದ ನಂತರ ಧರ್ಮಸ್ಥಳದ ಹಿರಿಮೆ ಹೆಚ್ಚಾಗುತ್ತಲೇ ಹೋಯಿತು. ಮಂಜುನಾಥನ ಮೇಲಿನ ಭಕ್ತಿ, ಶ್ರದ್ಧೆಯ ಜತೆಗೆ ಧರ್ಮಸ್ಥಳದ ಬಗ್ಗೆ ನಾಡಿನ ಜನರಲ್ಲಿ ಗೌರವವೂ ಹೆಚ್ಚಾಯಿತು. ಧರ್ಮಸ್ಥಳಕ್ಕೆ ಬರುವವರಲ್ಲಿ ಎಷ್ಟೋ ಜನರು ಹೆಗ್ಗಡೆಯವರನ್ನು ಕಂಡು, ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು, ಪರಿಹಾರ ಕೇಳಿಕೊಂಡು ಹೋಗುತ್ತಾರೆ. ಒಬ್ಬ ಮನಃಶಾಸ್ತ್ರಜ್ಞನಂತೆ ಕೌನ್ಸೆಲಿಂಗ್ ಮಾಡುತ್ತಾರೆ, ಅವರು ಏನಾದರೂ ಹೇಳಿದರೆ ಅದನ್ನು ಯಾರೂ ಮೀರುವುದಿಲ್ಲ, ಅವರು ಹೇಳಿದಂತೆಯೇ ನಡೆಯುತ್ತದೆ ಎಂಬ ಮನೋಭಾವನೆ ಜನರಲ್ಲೂ ಕಂಡುಬರುತ್ತಿದೆ. ೧೯೭೨ರಷ್ಟು ಹಿಂದೆಯೇ ಸಾಮೂ ಹಿಕ ವಿವಾಹವೆಂಬ ಪರಿಕಲ್ಪನೆಯನ್ನು ಕೃತಿಯಲ್ಲಿ ತೋರಿ, ಅದ ಕ್ಕೊಂದು ಹೊಸ ಅರ್ಥ ನೀಡಿದವರು ನಮ್ಮ ಖಾವಂದರು.
ಕಳೆದ ನವೆಂಬರ್ ೨೫ಕ್ಕೆ ಖಾವಂದರು ೬೦ ವಸಂತಗಳನ್ನು ಪೂರೈಸಿ, ೬೧ಕ್ಕೆ ಕಾಲಿಟ್ಟಿದ್ದಾರೆ. ಮೊನ್ನೆ ಡಿಸೆಂಬರ್ ೨೮ರಂದು ಮೂಡಬಿದಿರೆಯಲ್ಲಿ ಷಷ್ಟ್ಯಬ್ದ ನಡೆಯಿತು. ಇವತ್ತು ಸಮಾಜ ಯಾರಿಂದಲೂ ನೂರಕ್ಕೆ ನೂರರಷ್ಟು ಪ್ರಾಮಾಣಿಕತೆಯನ್ನಾಗಲಿ, ಶುದ್ಧಹಸ್ತವನ್ನಾಗಲಿ ನಿರೀಕ್ಷಿಸುತ್ತಿಲ್ಲ. ಏಕೆಂದರೆ ತಾನೇdegenerate ಆಗಿದ್ದೇನೆ ಎಂದು ಸಮಾಜಕ್ಕೂ ತಿಳಿದಿದೆ. ಇಂತಹ ಪರಿಸ್ಥಿತಿಯ ನಡುವೆಯೂ ಒಬ್ಬ Conscience keeperನಂತೆ ಖಾವಂದರಿದ್ದಾರೆ.

ಸಮಾಜದ ಸಾಕ್ಷಿಪ್ರಜ್ಞೆಯನ್ನು ಎತ್ತಿಹಿಡಿಯಲು ಅವರು ನೂರ್ಕಾಲ ನಮ್ಮೊಂದಿಗಿರಬೇಕು.

30 Responses to “ಸಮಾಜದ ಸಾಕ್ಷಿಪ್ರಜ್ಞೆಯನ್ನು ಎತ್ತಿಹಿಡಿಯಲು ಸದಾ ಅವರು ನಮ್ಮೊಡನಿರಬೇಕು”

  1. Jagadeesh says:

    Hello Pratap,
    Thanks for the nice article,

    Why don’t you please write article on SREE SREE SHIVAKUMARA SWAMIGALU of Sree Siddaganga Math , Please who studied there know the value of him and food.So lets spread the message.

    Thanks !!

  2. ಮಂಗಳೂರಿನವರು ಧಾರವಾಡವೆಂದರೆ ಮೂಗು ಮುರಿಯುತ್ತಾರೆಂದು ನಿಮಗ್ಯಾರು ಹೇಳಿದವರು? ಯಾವ ಕಾರಣಕ್ಕಾಗಿ ಮೂಗು ಮುರಿಯಬೇಕು? ಧಾರವಾಡ ವೆಂದರೆ ನೆನಪಾಗುವುದೇ ಅಲ್ಲಿನ ರುಚಿಯಾದ ಪೇಡ. ಹೀಗೆ ಬರೆದುದರಿಂದ ಅಲ್ಲಿನವರಿಗೆ ಮಂಗಳೂರಿಗರ ಬಗೆಗೆ ಬೇಸರವಾಗುವುದಿಲ್ಲವೇ ? ಪರಿಣಾಮ ನಮ್ಮ ಮೇಲಲ್ಲವೇ?

  3. hanumant says:

    @ lalitha bhat
    pratap avaru heliddu sari, idu nanna swantha anubhav . nanage bekadastu mangaloru friends iddare avaru dharawadadavarige ghati pradeshadavaru, ghattadavaru , hindulidavaru endu esto saari nanna mundene heliddare

  4. gorli harish says:

    sri pratap simha, congrats on a nice article. i wish someone would delve deeper into , why, inspite of many such social reformers, we live in a disgustingly corrupt society!

  5. vikram says:

    Hi Pratap,
    It would be fantastic if you write an article on Ramakrishna Mission founded by Sri Vivekananda. Having a main office in Belur Matt in Bengal, their branches have been serving the people irrespective of caste, colour, social status etc in almost all states of india, also abroad.
    They have been doing a fantastic service to the mankind and worth a praise. They have NEVER been into any controversies. In your words “Spotless organisation”.
    Since I was brought up in this organisation (Mangalore Branch), I would request you to spread this message so that most people can make use of their services for you are reachable and credible among the mass.

    Thanks,
    Vikram
    Australia

  6. ಹನುಮಂತ್ ಅವರಿಗೆ,
    ನಿಮಗೆ ಮಂಗಳೂರಿನ ಸ್ನೇಹಿತರಿರಬಹುದು, ನಾನೂ ಮಂಗಳೂರಿನವಳೇ ಆದುದರಿಂದ ಮಂಗಳೂರಿಗರ ಬಗೆಗೆ ನನಗೂ ಗೊತ್ತಿದೆ. ಇನ್ನು …ಘಟ್ಟದವರು.. ಘಾಟಿ ಪ್ರದೇಶದವರು …ಅಂದರೆ ಬೈಗುಳ ಅಥವಾ ತೆಗಳುವಿಕೆ ಎಂದು ನೀವು ತಿಳಿದಿರುವಿರಾದರೆ ತಪ್ಪು ನಮ್ಮದಲ್ಲ. ಕರಾವಳಿ ಜನರು, ಮಲೆನಾಡಿಗರು…….ಬಯಲು ಸೀಮೆಯವರು ……….ಎಂದರೆ ನಿಮ್ಮ ಪ್ರಕಾರ ಏನರ್ಥ ಎಂದು ಕೇಳಬಹುದೇ ?? ……………………………..ಪ್ರತಾಪ್ ಸಿಂಹ ರ ಬಗೆಗೆ ನಿಮ್ಮಂತೆ ನನಗೂ ಬಹಳ ಅಭಿಮಾನವಿದೆ, ಅಂದ ಮಾತ್ರಕ್ಕೆ ಅವರನ್ನು ಪ್ರಶ್ನಿಸಬಾರದೆಂದಿಲ್ಲವಲ್ಲಾ ?…. ನಿಮ್ಮ ಸ್ನೇಹಿತರಾಗಲೀ ಅಥವಾ ಪ್ರತಾಪ್ ಸಿಂಹ ರೇ ಆಗಿರಲಿ, ಅವರ ಅಭಿಪ್ರಾಯ/ಭಾವನೆ ಗಳು ಸಮಸ್ತ ಮಂಗಳೂರಿಗರದ್ದೂ ಆಗಿರಬೇಕೆಂದಿಲ್ಲವಲ್ಲಾ ?

  7. ravi says:

    Nice Article Prataap, I agree with Lalitha Bhat. Yaaro obbara abhipraayavannu ellaraddu anta pariganisabaaradu. Nanna prakara prataap avaru swaabavikavaagie quoto maadiddare.

    Regards,
    ravi

  8. ಯೋಗೇಶ್ ಗೌಡ. ಆರ್ says:

    ಶ್ರೀ ಶಿವಕುಮಾರ ಸ್ವಾಮಿಯವರು ನಡೆದಾಡುವ ದೇವರಾದರೆ ಹೆಗ್ಡೆಯವರು ದೇವರ ಆಯ್ಕೆ ಅನ್ನೊದು ಉಚಿತವೆ. ಇಂದಿನ ಅಶುದ್ದ ಮತ್ತು ಭ್ರಷ್ಟ ಸಮಾಜದಲ್ಲೂ, ಇಂತ ವ್ಯಕ್ತಿಗಳು ನಮ್ಮ ಮಧ್ಯೆ ಇರೋದೆ ನಮ್ಮೆಲ್ಲರ ಪುಣ್ಯ. ಧರ್ಮಸ್ಥಳದ ವೀರೇಂದ್ರ ಹೆಗಡೆ, ಸಿದ್ದಗಂಗಾ ಮಠದ ಹಾಗೆ ಆದಿ ಚುಂಚನಗಿರಿ ಮುರುಗ ರಾಜೇಂದ್ರ ಮಠ ಇನ್ನು ಇತರೆ ಹಲವಾರು ಮಠಗಳು ಸಮಾಜದ ಒಳಿತಿಗಾಗಿ ಕೆಲಸಗಳನ್ನ ಮಾಡುತ್ತಿವೆ. ಕೆಲವುಬಾರಿ ಇವುಗಳ ಕಾರ್ಯತಂತ್ರ,ರಾಜಕೀಯ ಹಸ್ತಾಷ್ಷೇಪ ಕೆಲವೊಮ್ಮೆ ಟೀಕೆಗೆ ಗುರಿಯಾದರು ಸಮಾಜೊದ್ದಾರಕ ಕಾರ್ಯಗಳಿಂದಾಗಿ ಎಲ್ಲವು ನಗಣ್ಯವಾಗುತ್ತವೆ. ಹಾಗೆ ಮಿಸ್ ಲಲಿತ ಅವರೇ ಸ್ವಲ್ಪ ಶಾಂತರಾಗಿ, ಧಾರವಾಡದ ಜನ ಘಾಟಿ ಆದರು ಮನಸ್ಸು ಮೃದು. ಘಟ್ಟದ ಜನರು ಸುಂದರರು ಹಾಗೆ ಅವರ ಮಾತು ಮೃದು. ನಮ್ಮಲ್ಲೆ ಏಕೆ ವಾದ-ವಿವಾದ ಅಲ್ವಾ…

  9. ಯೋಗೇಶ್ ರವರೇ,
    ನನ್ನನ್ನು ಶಾಂತಳಾಗಲು ಹೇಳುವ ಮೊದಲು ನಾನು ಬರೆದದ್ದನ್ನು ನೀವು ಸರಿಯಾಗಿ ಓದಬೇಕಿತ್ತು. ಇರಲಿ ಬಿಡಿ, ಇನ್ನಾದರೂ ಶಾಂತ ಚಿತ್ತದಿಂದ ಅದನ್ನೊಂದು ಬಾರಿ ಓದಿ ಶಾಂತರಾಗಿರಿ.

  10. Vishnu Bhat ,Texas says:

    ಹೊಯ್, ಲಲಿತ ಭಟ್ಟರೂ ಎಂಥದು ಇದು ರಗಳೇ, ರಾಡಿ ಮಾಡ್ಕ ಬೇಡಿ ಮಾರಾಯ್ರೆ, ಎಂಥ ಇದೆ ಮಂಡೆ ಬಿಸಿ ಮಾಡ್ಕಳೋ ಅ೦ಥಾದ್ದು? ಪ್ರತಾಪ ಸಿ೦ಹ ಬರೆದಿದ್ದು ಬೇಸರ ಪಡುವ೦ಥದ್ದು ಎ೦ಥ ಇದೆ?
    ನಾವು ಮಂಗಳೂರಿನ ಜನ ಸಾಚ ಉ೦ಟಲ್ಲವೋ, ಹೊಟ್ಟೆ ಕಿಚ್ಚು ಪಟ್ಟು ಸಾಯುವರು ಸಾಯಲಿ, ನಮಗ್ಯಾಕೆ ಮಾರಾಯ್ರೆ ಈ ತಾಪತ್ರಯ?
    ಇ೦ಥ ಸಣ್ಣ ವಿಚಾರಕ್ಕೆಲ್ಲ ಕೋಪಿಸಿ ಕೊ೦ಡರೆ, ಆ ದರಿದ್ರ ಸಾಬರಿಗೆ ನಮಗೆ ಏನು ವ್ಯತ್ಯಾಸವು೦ಟು ಹೇಳಿ?
    ನಾವು ಬುದ್ದಿವ೦ತರು ಹ್ಯಾಂಗೆ ಇರಬೇಕು ಹೇಳಿ? ಹೊಲಸಿಗೆ ಕಲ್ಲು ಬೀರಿ ಸೀಡಿಸಿ ಕೊಳ್ಳುವುದು ಯಾಕೆ, ಅಲ್ಲವೋ?
    ಬೇಕಾದರೆ ನನಗೆ ಬೈಯ್ಯಿರಿ, ಪ್ರತಾಪ ಸಿ೦ಹನಿಗೆ ಬೇಸರ ಮಾಡಿಸಿದರೆ ನಷ್ಟ ಯಾರಿಗೆ ಹೇಳಿ?

    ಲಲಿತಕ್ಕ, ಇದೊಮ್ಮೆ ಕ್ಷಮಿಸಿ ಬಿಡೇ, ಪ್ಲೀಸ್.

  11. Vijay says:

    ಮಂಗಳೂರಿನವರು ಸಾಮಾನ್ಯವಾಗಿ ಮೂಗುಮುರಿ ಯುವ ದೂರದ ಧಾರವಾಡದಲ್ಲಿ ವಿಶ್ವದರ್ಜೆಯ ಡೆಂಟಲ್ ಕಾಲೇಜು, ಜತೆಗೊಂದು ಎಂಜಿನಿಯ ರಿಂಗ್ ಕಾಲೇಜು, ಮೈಸೂರಿನಲ್ಲೊಂದು ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ಹಾಗೂ ಮಹಿಳಾ ಪಿಯು ಕಾಲೇಜು, ಅಲೋಪತಿ ಬಿಟ್ಟರೆ ಬೇರೆ ವೈದ್ಯರೇ ಇಲ್ಲವೆಂಬಂತಿರುವ ಹಾಸನದಲ್ಲಿ ಆಯುರ್ವೇದ ಕಾಲೇಜು, ಉಡುಪಿಯಲ್ಲಿ ಮತ್ತೊಂದು, ಮಂಗಳೂರಿನಲ್ಲಿ ಕಾನೂನು ಕಾಲೇಜು… ಹೀಗೆ ಒಂದೊಂದು ದಿಕ್ಕುಗಳಲ್ಲಿ ಒಂದೊಂದು ಕಾಲೇಜುಗಳನ್ನು ‘ಖಾವಂದ’ರೇಕೆ ಕಟ್ಟಿದರು?

    Offcourse their is a reason for the statement. But the reason is not as mangaloreans think. SDM The highest donation taking colleges in Dharwad, as i know this because i am also from DHARWAD. It is nothing but making money through education instutuons. If possible they could have given some sort of free education like Siddaganga Education Trust, ಆಳ್ವಾಸ್ ಎಜುಕೇಷನ್ ಫೌಂಡೇಶನ್ನ. I know running a medical colleges for free may be difficult but they could have taken only fees why DONATION.

    NOTHING GREAT!!!

    Some news
    http://www.indianexpress.com/oldstory.php?storyid=74937

  12. jayalakshmi says:

    ಲೇಖನದಲ್ಲಿ ಮಂಗಳೂರಿಗರ ದೃಷ್ಟಿಕೋನದ ಬಗ್ಗೆ ಕಂಡೂ ಕಾಣದಂತೆ ಟೀಕೆ ಇದೆ ಎನ್ನುವುದಕ್ಕಿಂತ ಲೇಖನದ ಪ್ರಾರಂಭ ಒಂದು ರೀತಿಯ ಋಣಾತ್ಮಕ ವಾಕ್ಯದಿಂದ ಆಗಿದೆ ಅಂತ ಲಲಿತಾ ಅವರ ಮಾತಿನ ಒಳ ಮರ್ಮ ಇರಬೇಕು…ಅಲ್ವೇ ಲಲಿತಾ ಅವರೇ?

  13. Varaha says:

    Mr Veerendra Heggade is no doubt a good administrator, and a shrewd manager, but nothing more. He benefits from the under eduation of our people. Believers throng his temple and pour money to God; he builds educational institutions or anything else. And poses as if he has done a noble service. With the poor hindu pilgrims money, he is living in such a luxury, which is not inferior to any Kings. He is a Palegara in his area. The whole Belthangadi Taluk is in his mercy. Indian Government does’t rule there. It is His government which runs the Taluk. He is the Law maker, he is the judiciary, and it is he who punishes the ‘wrongdoers’. Actually he is a blackmark on our democracy.

  14. Varaha says:

    And these Mangaloreans. Yes. Many of them think lowly of anybody who can not speak Tulu. Whoever couldn’t speak Tulu is a “gattadaaye”. So less than a human being. Self styled as intelligent people, they always pretend to be intelligent, or try to appear intelligent. Such typical Mangaloreans are actually the most unintelligent. They are the failed Mangaloreans. The real intelligent among them wouldn’t show a “holyier than thou” attitude, and would mingle with everybody else. These are the famous successful enterprenuers of Mangalore, who are spread all over the world. The typical Mangalorean which our serials and movies dipict are the “Frogs in the well”.

  15. ravi says:

    It is really unfortunate to read Varsha’s comments of Mr. Veerendra Heggade, particularly last line. If he/she (Varsha) does not like Mr. Hedge, please better keep quite. One should not give final judgment until unless know the ground reality. I think Varsha doesn’t know Dharmastala or about Mr. Veerendra Heggade!

  16. ravi says:

    Soory wrongly mentioned name Varsah instead of Varaha!!!!!!!!!!!!

  17. ವೆಂಕಟೇಶ್ ದೊಡ್ಮನೆ, ಅಮೇರಿಕಾ. says:

    ಪ್ರಬುದ್ಧವಾದ ಲೇಖನ. ಪ್ರತಾಪ್, ಧನ್ಯವಾದಗಳು.

    ಲೇಖನ ಬರೆಯುವಾಗ ಕೆಲವುಕಡೆ ಹೋಲಿಕೆ ಮಾಡುವುದು ಸಹಜ. ಅದಕ್ಕೆ ಮ೦ಗಳೂರಿನವರಾಗಲಿ ಧಾರವಾಡದವರಾಗಲಿ ಬೇಸರ ಮಾಡುವುದು ತರವಲ್ಲ. ಮ೦ಗಳೂರಿನವರ ಚಾಣಾಕ್ಷತೆ ಯನ್ನಾಗಲಿ, ಧಾರವಾಡದವರ ಪೇಡಾವನ್ನಾಗಲಿ ಯಾರೂ ಅಲ್ಲಗಳೆಯುವ೦ತಿಲ್ಲ. ಇವೆಲ್ಲ ಊಟದಲ್ಲಿ ಉಪ್ಪಿನಕಾಯಿಯ೦ತೆ. ಮುಖ್ಯವಾದ ರೆಸಿಪಿ ಬೇರೇನೆ ಇದೆ, ಅದರ ಬಗ್ಗೆ ಮಾತನಾಡೋಣ.

    ಶ್ರೀ ವೀರೇ೦ದ್ರ ಹೆಗ್ಗಡೆಯವರು ಉತ್ತಮ ಕೆಲಸ ಮಾಡುತ್ತಿದ್ದಾರೆ ಅ೦ತ ಕೇಳುತ್ತಿದ್ದೇವೆ ಹೊರತು ಇಷ್ಟು ಸಮಗ್ರವಾಗಿ ಮಾಹಿತಿಯನ್ನ ಪತ್ರಿಕೆಯಲ್ಲಿ ಓದಿರಲಿಲ್ಲ. ಆದರೂ ಬರೆಯುವಾಗ ಕೆಲವು ಮಾಹಿತಿಗಳು ಬಿಟ್ಟು ಹೋಗುವುದು ಸಹಜ. ಅದೇನು ದೊಡ್ಡ ಪ್ರಮಾದವಲ್ಲ.
    ಉದಾಹರಣೆಗೆ, ದೇವಸ್ಥಾನಗಳ ಜೇರ್ಣೊದ್ಧಾರಕ್ಕೆ ಬಹಳ ಸಹಾಯ ಮಾಡುತ್ತಿದ್ದಾರೆ.
    ಪ್ರತೀ ಊರಿನಲ್ಲಿ ಒ೦ದು ಸ್ಮಶಾನ ಕಟ್ಟಿ ಕೊಳ್ಳಲು ಧರ್ಮಸ್ಥಳದವರು ಸಹಾಯ ಧನ ನೀಡುತ್ತಾರೆ. (ಸ್ಮಶಾನದ ಪ್ರಾಮುಖ್ಯತೆ ನಗರದಲ್ಲಿರುವವರಿಗೆ ಅರ್ಥವಾಗುವುದಿಲ್ಲ).
    ನಿಯತಕಾಲಿಕೆ / ಪತ್ರಿಕೆಯನ್ನು ಹೊರತರುತ್ತಿದ್ದಾರೆ. ಅದರ ಪ್ರಬುದ್ಧ ಲೇಖನಗಳ ಮೂಲಕ ಪ್ರಭಾವಿ ಸಮಾಜದ ನಿರ್ಮಾಣ ಮಾಡುತ್ತಿದ್ದಾರೆ.
    ನಮ್ಮ ಕನ್ನಡದ ತಾಯಿ ಭಾಷೆಯಾದ ಸಂಸ್ಕೃತಕ್ಕೆ ಹೆಚ್ಚು ಪ್ರೋತ್ಸಾಹ ಕೊಡುತ್ತಿದ್ದಾರೆ.

    ಇದೆಲ್ಲಕ್ಕಿ೦ತ ಹೆಚ್ಚಾಗಿ, ಧರ್ಮಸ್ಥಳವನ್ನು ಸರ್ವಧರ್ಮದ ಬೀಡಾಗಿ ಪರಿವರ್ತಿಸಿದ್ದಾರೆ. ಇಲ್ಲದಿದ್ದರೆ ಅಲ್ಲಿಗೆ ಮುಸ್ಲಿಮರು, ಕ್ರಿಶ್ಚಿಯನ್ನರು ಯಾಕೆ ಬರುತ್ತಿದ್ದರು? (ಈಗ ಬಿಡಿ ಬಾಂಬ್ ಇಡುವುದಕ್ಕೆ ಬ೦ದರೂ ಹೆಚ್ಚಲ್ಲ!)

    ಕೆಲವು ಜೈನತತ್ವದ ಪುಸ್ತಕಗಳನ್ನಿಟ್ಟುಕೊಂಡು, ಬರೀ ತೀರ್ಥಂಕರರ ಮೂರ್ತಿಗಳನ್ನು ಇಟ್ಟುಕೊಂಡು ಒಂದಿಷ್ಟು ಮಾರವಾಡಿಗಳ ಹತ್ತಿರ ಹಣ ವಸೂಲಿ ಮಾಡಿ ಕೊಂಡು ರಾಜ್ಯ ಭಾರ ಮಾಡಬಹುದಾಗಿತ್ತು. ಹಾಗೆ ಮಾಡಿದ್ದರೆ ಅವರೇ ಮೂಲೆ ಗುಂಪಾಗಿ ಹೋಗುತ್ತಿದ್ದರು.
    ಆ ತರಹ ಮಾಡಲಿಲ್ಲ. ಇಡೀ ಸಮಾಜಕ್ಕೆ ತಮ್ಮನ್ನು ಮೀಸಲಾಗಿಟ್ಟರು. ಕೊಟ್ಟು – ಕೊಂಡರು.
    ಹಾಗಾಗೇ ಇ೦ದು ಹಿಂದೂಗಳಿಗೂ ಇದು ಪವಿತ್ರದ ನೆಲೆಯಾಗಿದೆ.

    ಅಂಥಹ ಮಹಾ ಚೇತನಕ್ಕೆ ನಮೋನ್ನಮಃ

  18. Keshav says:

    Hi Pratap,
    Nice Article…….
    ಶ್ರೀ ಶಿವಕುಮಾರ ಸ್ವಾಮಿಯವರು ನಡೆದಾಡುವ ದೇವರಾದರೆ ಹೆಗ್ಡೆಯವರು ದೇವರ ಆಯ್ಕೆ ಅನ್ನೊದು ಉಚಿತವೆ. ಇಂದಿನ ಅಶುದ್ದ ಮತ್ತು ಭ್ರಷ್ಟ ಸಮಾಜದಲ್ಲೂ, ಇಂತ ವ್ಯಕ್ತಿಗಳು ನಮ್ಮ ಮಧ್ಯೆ ಇರೋದೆ ನಮ್ಮೆಲ್ಲರ ಪುಣ್ಯ, Jai Karnataka Mate….,
    ಮಹಾ ಚೇತನಕ್ಕೆ ನಮೋನ್ನಮಃ

  19. veena.g.y says:

    Dhanyavadagalu nimage.. !!

    Entha olle karyakramagalannu namma rajyada rajakaranigalu endu madalararu..

  20. Ibbani says:

    ಹೆಗಡೆಯವರ ಬಳಿ ತಮ್ಮ ಸಮಸ್ಯೆಯನ್ನು ತೋಡಿಕೊಂಡು ಅವರ ನಗು ಮುಖ ಹಾಗು ಹಿತ ವಚನಗಳ ನೆಮ್ಮದಿ ಪಡೆದಿರುವ ಅನೇಕರಲ್ಲಿ ನಾನು ಒಬ್ಬಳು .ಅವರೇನು ನನಗೆ ಮಹತ್ವದ ಸಲಹೆ ನೀಡಲಿಲ್ಲ, ಆದರೆ ಕೆಲವೊಂದು ಸಲ ನಮ್ಮ ಸಮಸ್ಯೆಯನ್ನು ಕೇಳಿ ಮುಂದೆ ಎಲ್ಲ ಚೆನ್ನಾಗಾಗುತ್ತದೆ ಅಂತ ಧೈರ್ಯ ಹೇಳುವವರು ಸಿಕ್ಕರೆ ಅದೇ ನಮಗೆ ಜೀವನದಲ್ಲಿ ಮುಂದುವರೆಯಲು ಹುರಿದುಂಬಿಸುತ್ತದೆ.ಅವರ ಸಾಮಾಜಿಕ ಕೆಲಸಗಳ ಬಗ್ಗೆ ನನಗೆ ಹೆಚ್ಚಾಗಿ ತಿಳಿಯದು, ಆದರೆ ಅವರ ಸರಳ ನಡೆ ನುಡಿ ಎಂಥವರಿಗೂ ಅನುಕರಣೀಯ.

  21. Guruprasad says:

    “ಮನ್ಗಳೂರಿನವರು ಧಾರವಾಡ ವೆಂದರೆ ಮೂಗು ಮುರಿಯುತ್ತಾರೆ” ಇದು ಒಂದು ಕ್ಲೀಶೆ ಮಾತ್ರ… ಯಾರೂ ಅದರ ಯಥಾರ್ಥ ವನ್ನು ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ
    ನಾನು ಧಾರವಾಡದವನು ಮತ್ತೆ ನಾನು ಕರವಳಿ ಪ್ರದೇಶದಲ್ಲಿ ಕೂಡ 1 ವರ್ಷ ವಾಸವಾಗಿದ್ದೆ.. ನನಗೆ ಈ ತರಹದ ಅನುಭವವೇನೂ ಆಗಿಲ್ಲ. ಎಲ್ಲೋ ಒಂದಿಬ್ಬರು
    ಆ ತರಹ ಭಾವಿಸಿದರೆ ಅದರಿಂದ ಯಾರಿಗೂ ಯಾವ ವ್ಯತ್ಯಾಸವೂ ಆಗುವುದಿಲ್ಲ.. ಸುಮ್ಮನೇ ಪ್ರಾದೇಶಿಕತೆಯನ್ನು ಬಿಟ್ಟು ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ತಳೆದರೆ
    ಎಲ್ಲರಿಗೂ ಒಳಿತು…ಬೇರೆಯಾಗಲಿಕ್ಕೆ ನೂರು ಕಾರಣಗಳನ್ನು ಹುಡುಕಬಹುದು… ಆದರೆ ಒಂದಾಗಲಿಕ್ಕೆ ಯಾವ ಕಾರಣವೂ ಬೇಡ

  22. Guruprasad says:

    By the way its a very good article… I am impressed and inspired by shri Veerendra heggade’s work….

  23. Darshan says:

    Hi pratap

    I accept what you have written, But please don’t write like differentiating people. This will really create a gap between people from the regions. See some people might have experienced this differentiation. But not all, Please write by thinking constructive not destuctive. This will help in national integrity.

  24. Subbu says:

    Oh.. Varsha..
    hw silly comment. 🙁
    Is ur father is not palegaara in ur home? is he black mark for democracy??
    its common, people respect , listn to suggetions when u hv respect for a person.
    Mr. Heggade is respectable person , people belive him, so people go to him.

    -Subbu

  25. Ramya Bhat says:

    Namaskara Prathap,

    Ondu lekhana bariwaga kelwondu maathugalu generally kelibarowanthawugalanna upyogisodu ondu roodi. so mangaloorinawalagi nanganthu niwu quote maadida line mana noyisowanthadu anislilla. Yaru paripurnaralla. so yawudannu jasthi serious agi thakkollo badlu, theme of the topic annu arth madkollodu better alwa? erli bidi.. neewidanella serious agi thako bedi (e maathu nanu nimge helowashtu doddolu/ anubhawasthalu alla, putta makkalu kelwomme ammanige tension madbeda antharalla aa thara ondu concern ashte)
    Dr. Veerendra heggadeyawara bagge saakashtu maahithi neediddira.. Thumba thanks.Heggadeyawara birthday date odhi ful khushiyagibitte. nandu ade date.. ondina awara haage naaku jana nenpallitkollonthaha kelsa madbeku annodu nanna aase… ede thara yuwa janathege aadarshaprayaragiruwa hiriyara bagge nimma lekhani enda vichaardhaare hariyuthirali…
    vandanegalondige,
    Ramya

  26. Prasad K says:

    namaskara Prathap,

    naanu nimma website beti needida uddesha modalinindaloo naanu gauravisikondu bandanthaha Dr veerendra hegdeyavra bagge maathanadalu. Avara Dharmasthala Graameenabivruddi sangada dushparinaamagala bagge nanage kandubanda kelavu vishayagalivu
    1. ee sangada sadasyaru sangadinda saalavannu padedu adannu durupayoga maadikolluthiddare.
    2. Samanatheyannu tharuva saduddeshadinda sangada sthapaneyaadaroo samanatheyenu kanisuthilla.
    3.padeda saalavannu hindirugisalu sadasyarugalu madyama vargada jammendaararinda hanavannu padedu krishi kelasagalige sarayagi hogade malenaada krishi karyagalella mandagathiyinda saaguthide.
    4. Ithhechige namma oorinalli nededa 29ne Krishimeladalli manava sampanmoolada durupayogada jothege jothege Aranya sampathhannu nashamaadalagide. Aviveki aranya adhikaarigalindaagi eegagale naisargika aranyada badalu AKESIA thumbithulukuthhide. Krishimelakke agatyhavilladiddaroo nagaravannu shringarisuva hesarinalli malenaada jeevalavagiruva Bidirannu manabandanthe kadiyalaaagide.

    Naanna prakara ee yella duranthagalige hegdeyavare kaarana.
    Modala mooru vishayagalannu saripadisabahudaadaroo shingarada hesarinalli Aranya sampathhannu looti maadidavarannu Aa manjunatha swamy kanditha kshamisalaara.
    Thamma lekhanagala moolaka malenaadige nedeyuthhiruva anyayagala bagge belakannu chellabekendu kelikolluthene
    Nimmava
    Prasad K

  27. Raj says:

    he is a real Hero…Hats off to Dr. Veerendra Heggade………….

  28. mrutyunjayaswamy says:

    namskar

  29. mrutyunjayaswamy says:

    veerendra heggadeji neeu nim saunstegalalli, dakshinakannadadavarige
    first preperence kodtira sir yake ?

    north karnatak jan daddara ?

  30. mrutyunjayaswamy says:

    jagattu jagli mele ada andra
    jeevan janrolagad
    janrolag nav adivandra
    alli jaatre naditad
    jaatri moogd mele mannig hog bek