ನಿಮ್ಮ ಉದ್ದೇಶ ಶುದ್ಧಿಯ ಬಗ್ಗೆ ಪ್ರಶ್ನೆಗಳೇಳಬಾರದಲ್ಲವೇ ಸ್ವಾಮೀಜಿ?
Tuesday, June 28th, 2011
ಪೂಜ್ಯ ವಿಶ್ವೇಶತೀರ್ಥ ಸ್ವಾಮೀಜಿಯವರಿಗೆ ಗೌರವಪೂರ್ವಕ ವಂದನೆಗಳು. ಜೂನ್ 25ರಂದು ನಾನು ಬರೆದ ‘ಧೀರೇಂದ್ರ ಬಹ್ಮಚಾರಿ, ಚಂದ್ರಾಸ್ವಾಮಿಗೂ ಈ ಸ್ವಾಮಿಗಳಿಗೂ ಏನು ವ್ಯತ್ಯಾಸ?’ ಎಂಬ ಲೇಖನದಲ್ಲಿ ನಿಮ್ಮ ಹೆಸರು ಪ್ರಸ್ತಾಪಿಸಿರುವುದಕ್ಕೆ, ನಿಮ್ಮ ಮಾತು ಧೋರಣೆಯಲ್ಲಿ ಯಡಿಯೂರಪ್ಪನವರ ಪಕ್ಷಪಾತಿಯಾಗಿರುವುದು ಕಾಣುತ್ತದೆ ಎಂಬ ವಾಸ್ತವದ ಯಥಾ ಚಿತ್ರಣಕ್ಕೆ ಪ್ರತಿಯಾಗಿ, ಪ್ರತ್ಯುತ್ತರದ ರೂಪದಲ್ಲಿ ಲೇಖನವನ್ನೇ ಬರೆದು ಕಳುಹಿಸಿದ್ದು ಖಂಡಿತ ಸ್ವಾಗತಾರ್ಹ. ನಿಮ್ಮ ಪ್ರಾಮಾಣಿಕ ಪ್ರತಿಕ್ರಿಯೆ ಖುಷಿ ಕೊಟ್ಟಿದೆ. ಇದೇ ಸಂದರ್ಭದಲ್ಲಿ ನಿಮಗೆ ಕೆಲವು ಪ್ರಶ್ನೆಗಳನ್ನೂ ಕೇಳಬೇಕೆಸುತ್ತಿದೆ. ನಿಮ್ಮ ಮೇಲಿನ ಗೌರವದ ನೆಲೆಯಲ್ಲೇ ಈ [...]














