ನಾನು ಪ್ರತಾಪ್ ಸಿಂಹ,
ಇದುವರೆಗೂ 15 ವರ್ಷಗಳ ಕಾಲ ಪತ್ರಿಕೋದ್ಯಮದಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಬದ್ಧತೆಯಿಂದ ಮಾಡಿಕೊಂಡು ಬಂದೆ. ಆದರೆ ಬದಲಾವಣೆಯನ್ನು ವಾಸ್ತವದಲ್ಲಿ ತರಬೇಕಾದದ್ದು ರಾಜಕೀಯ ಕ್ಷೇತ್ರ. ಹಾಗಾಗಿ ಯಾರನ್ನೂ ದೂರುವ, ಶಪಿಸುವ ಬದಲು ನಾವೇ ಏಕೆ ಜನರ ನೋವಿಗೆ, ಕುಂದು ಕೊರತೆಗಳಿಗೆ ಸ್ಪಂದಿಸಬಾರದು ಎಂಬ ಕಾರಣಕ್ಕೆ ಈ ಕ್ಷೇತ್ರಕ್ಕೆ ಬಂದಿದ್ದೇನೆ. ನನ್ನನ್ನು ನಿಮ್ಮ ಮನೆಯ ಮಗನಂತೆ, ತಮ್ಮನಂತೆ ಭಾವಿಸಿ ಆಶೀರ್ವದಿಸಿ. ಇಷ್ಟಕ್ಕೂ ನಿಮಗೂ ಇದೆ ನನ್ನಂತೆ ಭಾರತ ಬದಲಿಸುವ ತವಕ. ತಡವೇತಕೆ? ಕೈ ಜೋಡಿಸಿ ನಾನೂ ನಿಮ್ಮಂತೆ ಯುವಕ…