Archive for April, 2009

ಶೇಮ್ ಶೇಮ್ ಸೆತಲ್ವಾಡ್, ಶಿಕ್ಷೆ ಕೊಡಲ್ವಾ ಮೈ ಲಾರ್ಡ್?!

Monday, April 20th, 2009

ಸ್ಥಳ: ಹುಸೇನ್ ನಗರ, ನರೋಡಾ ಪಾಟಿಯಾ
ಪ್ರತ್ಯಕ್ಷದರ್ಶಿ: ಅಮೀನಾ ಆಪಾ
ಆಗ ಬೆಳಗ್ಗೆ 9 ಗಂಟೆ 10 ನಿಮಿಷವಾಗಿತ್ತು. ಅದು 2002, ಫೆಬ್ರವರಿ 28, ಗುರುವಾರ. ನಾನು ಚಹಾ ಸಿದ್ಧಪಡಿಸುತ್ತಿದ್ದೆ. ನಮ್ಮ ಮೊಹಲ್ಲಾದ ಬಾಲಕಿಯೊಬ್ಬಳು ಇದ್ದಕ್ಕಿದ್ದಂತೆಯೇ ಮನೆ ಕೆಲಸ ಬಿಟ್ಟು ಗಾಬರಿಯಿಂದ ಹೊರಗೋಡಿ ಬಂದಳು. ಬಜರಂಗ ದಳದ ವ್ಯಕ್ತಿಗಳು ಬರುತ್ತಿದ್ದಾರೆ ಎಂದು ಅವರು ಕೂಗುತ್ತಿದ್ದರು. ನಾನೂ ಕೂಡ ಮನೆಯಿಂದ ಹೊರಗೋಡಿದೆ. ಕಾಲುಪುರ್ ಹಾಗೂ ನರೋಡಾ ಪಾಟಿಯಾ ನಡುವೆ ಜನಜಂಗುಳಿ ಸೃಷ್ಟಿ ಯಾಗುತ್ತಿತ್ತು. ಎಲ್ಲಿ ನೋಡಿದರೂ ತಲೆ, ತಲೆ, ತಲೆಗಳೇ. ಅವರ [...]

ಆಕ್ಸ್‌ಫರ್ಡ್‌ನ ಅರ್ಥಶಾಸ್ತ್ರಜ್ಞರೇ ಚರ್ಚೆಗೆ ಅಂಜಿದೊಡೆಂತಯ್ಯ?

Friday, April 10th, 2009

ಹೆಸರು: ಡಾ ಮನಮೋಹನ್ ಸಿಂಗ್
ಹುದ್ದೆ: ಭಾರತದ ಪ್ರಧಾನಿ
ಶಿಕ್ಷಣ: ಪ್ರತಿಷ್ಠಿತ ಆಕ್ಸ್‌ಫರ್ಡ್ ವಿವಿಯಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ೧೯೬೨ರಲ್ಲಿ ಅರ್ಥ ಶಾಸ್ತ್ರದಲ್ಲೇ ಡಾಕ್ಟರೇಟ್.
ಸಾಧನೆ: 1966ರಲ್ಲಿ UNCTAD ಕಾರ್ಯದರ್ಶಿಯಾಗಿ ನೇಮಕ, 1971ರಲ್ಲಿ ಕೇಂದ್ರ ವಾಣಿಜ್ಯ ಖಾತೆಯ ಆರ್ಥಿಕ ಸಲಹೆಗಾರರಾಗಿ ನೇಮಕ, ಡೆಲ್ಲಿ ಸ್ಕೂಲ್ ಆಫ್ ಇಕನಾಮಿಕ್ಸ್‌ನಲ್ಲಿ ಉಪನ್ಯಾಸಕರಾಗಿ ಸೇವೆ, 1982ರಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ)ದ ಗವರ್ನರ್, 1987ರಲ್ಲಿ ‘ನ್ಯಾಮ್’ನ ‘ದಿ ಸೌತ್ ಕಮಿಷನ್’ನ ಮಹಾ ಕಾರ್ಯದರ್ಶಿಯಾಗಿ ಆಯ್ಕೆ.
ಅಷ್ಟೇ ಅಲ್ಲ, 1991ರಲ್ಲಿ ಕೇಂದ್ರ ಹಣಕಾಸು ಸಚಿವರಾಗಿ ನಿಯುಕ್ತಿಗೊಳ್ಳುವ ಮೊದಲು ಯುಜಿಸಿ [...]

ವರುಣ್ ಮಾಡಿದ್ದು ‘ಡ್ರಾಮಾ’ ಅನ್ನುವುದಾದರೆ, ‘Sick’ಯುಲರ್ ಮಾಧ್ಯಮಗಳು ಮಾಡಿದ್ದೇನು?

Sunday, April 5th, 2009

“ಒಂದು ವೇಳೆ ಯಾರಾದರೂ ಹಿಂದೂಗಳ ಮೇಲೆ ಕೈ ಎತ್ತಿದರೆ, ಹಿಂದೂಗಳು ದುರ್ಬಲರು, ನಾಯಕರೇ ಇಲ್ಲದವರು, ಅವರ ಹಿಂದೆ ಯಾರೂ ಇಲ್ಲ ಎಂದು ಯಾರಾದರೂ ಎಣಿಸಿದರೆ, ಹಿಂದೂಗಳತ್ತ ಬೆರಳೆತ್ತಿದ್ದರೆ, ಭಗವದ್ಗೀತೆಯ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ, ವರುಣ್ ಗಾಂಧಿ ಆ ಕೈಯನ್ನು ಕತ್ತರಿಸುತ್ತಾನೆ. ಈ ಕೈ…ತಾವರೆಯ ಕೈ!ಎಲ್ಲರೂ ನಿಮ್ಮ ನಿಮ್ಮ ಹಳ್ಳಿಗಳಿಗೆ ಹೋಗಿ, ಈ ಕ್ಷೇತ್ರ ಮತ್ತೊಂದು ಪಾಕಿಸ್ತಾನವಾಗದಂತೆ ತಡೆಯಬೇಕಾದರೆ ಹಿಂದೂಗಳೆಲ್ಲ ಒಂದಾಗಬೇಕು ಎಂದು ಹೇಳಿ. ಹಿಂದೂಗಳೆಲ್ಲ ಒಂದೆಡೆ ನಿಂತು ಉಳಿದವರನ್ನು ಪಾಕಿಸ್ತಾನಕ್ಕೆ ತಳ್ಳಿ. ಈ ವ್ಯಕ್ತಿಗಳ ಕರೀಮುಲ್ಲಾ, [...]