*/
Date : 27-08-2012 | 71 Comments. | Read More
ಅದನ್ನು Brain Drain ಅಥವಾ ಪ್ರತಿಭಾ ಪಲಾಯನ ಎಂದು ಕರೆದಿದ್ದೂ ಇದೆ, ಅದರ ವಿರುದ್ಧ ದೊಡ್ಡ ಗುಲ್ಲೆಬ್ಬಿಸಿದ್ದೂ ಇದೆ, ಅದೇ ಈ ದೇಶದ ಹಿಂದುಳಿಯುವಿಕೆಗೆ ಕಾರಣವೆಂದು ಗೂಬೆ ಕೂರಿಸಿದ್ದೂ ಇದೆ. ಆದರೇನಂತೆ 1970, 80, 90ರ ದಶಕದಲ್ಲಿ ಭವ್ಯ ಭವಿಷ್ಯದ ಕನಸು ಕಟ್ಟಿಕೊಂಡು, ಹೊಸ ಉದ್ಯೋಗಾವಕಾಶಗಳನ್ನು ಅರಸಿಕೊಂಡು, ತಮ್ಮ ಪ್ರತಿಭೆಗೆ ಭಾರತದಲ್ಲಿ ಸೂಕ್ತ ವೇದಿಕೆ, ಅವಕಾಶದ ಕೊರತೆಯಿದೆಯೆಂದುಕೊಂಡು, ಮೀಸಲಾತಿ ನೀತಿಯ ಉರುಳನ್ನು ತಪ್ಪಿಸಿಕೊಳ್ಳುವ ಸಲುವಾಗಿ ನಮ್ಮ ಎಂಜಿನಿಯರ್್ಗಳು, ಡಾಕ್ಟರ್್ಗಳು, ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಆಸೆ ಹೊತ್ತವರು […]
Date : 18-08-2012 | 141 Comments. | Read More
ಆಗಸ್ಟ್ 8, ಸಂಸತ್ ಅಧಿವೇಶನ… ‘ಕೊನೆಯದಾಗಿ ನಾನು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಕೊಡುತ್ತಿದ್ದೇನೆ! ಇಲ್ಲಿ ಆಸೀನರಾಗಿರುವ ಸಂಸತ್ ಸದಸ್ಯರೇ ಜೋಕೆ…!! ಒಂದು ವೇಳೆ ಅಸ್ಸಾಂನಲ್ಲಿ ಸೂಕ್ತ ಪುನರ್ವಸತಿ (ಬಾಂಗ್ಲಾ ಮುಸ್ಲಿಮರಿಗೆ) ಕಲ್ಪಿಸದಿದ್ದರೆ ಮುಸಲ್ಮಾನ ಯುವಕರ ಮತ್ತೊಂದು ಸುತ್ತಿನ ಮೂಲಭೂತೀಕರಣಕ್ಕೆ ಸಿದ್ಧರಾಗಿ…’ ಹಾಗಂತ ಸಂಸತ್ತಿನಲ್ಲಿ ಹೇಳಿದವನು ಯಾರೋ ಮುಲ್ಲಾನಲ್ಲ, ಮಜಲೀಸ್ ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷದ ಸಂಸದ ಅಸಾದುದ್ದೀನ್ ಓವೈಸಿ!!!
Date : 14-08-2012 | 13 Comments. | Read More
ನೀವೇನಾದರೂ 1996ರಲ್ಲಿ ನಡೆದ ಅಟ್ಲಾಂಟಾ ಒಲಿಂಪಿಕ್ಸ್್ನ ಜಿಮ್ನಾಸ್ಟಿಕ್ ಸ್ಪರ್ಧೆಯನ್ನು ನೋಡಿದ್ದೇ ಆಗಿದ್ದರೆ ಕೆರ್ರಿ ಸ್ಟ್ರಗ್ ಖಂಡಿತ ನಿಮಗೆ ನೆನಪಿರುತ್ತಾಳೆ. Pint-Sized Dynamo ಎಂದೇ ಹೆಸರಾದ ಅವಳು ಅಮೆರಿಕದ Magnificent Seven ಖ್ಯಾತಿಯ ಜಿಮ್ನಾಸ್ಟಿಕ್ ತಂಡದ 7 ಸದಸ್ಯರಲ್ಲಿ ಒಬ್ಬಳು. ಅವರಲ್ಲಿ ಶಾನನ್ ಮಿಲ್ಲರ್ ಅಮೆರಿಕದ ಅತ್ಯಂತ ಪ್ರಸಿದ್ಧ ಜಿಮ್ನಾಸ್ಟ್. ಇನ್ನು 14 ವರ್ಷದ ಡಾಮಿನಿಕ್ ಮೊಸೇನು ನವತಾರೆ. ಡಾಮಿನಿಕ್ ಡಾಸ್, ಅಮಿ ಚೋವ್, ಅಮಂಡಾ ಬೋರ್ಡೆನ್, ಜೈಸಿ ಫೆಲ್ಪ್ಸ್ ಇತರ ಖ್ಯಾತನಾಮ ಹೆಸರುಗಳಾದರೆ 4 ಅಡಿ 9 […]
Date : 04-08-2012 | 42 Comments. | Read More
ಇಂಥದ್ದೊಂದು ಸಾಧ್ಯತೆಯ ಸೂಚನೆ ಗುರುವಾರವೇ ಹೊರಬಿದ್ದಿತ್ತು.ವಿವಿಧ ಟಿವಿ ಚಾನೆಲ್್ಗಳಲ್ಲಿ ಕಾಣಿಸಿಕೊಡ ಅಣ್ಣಾ ತಂಡದ ಸದಸ್ಯರಾದ ಪ್ರಶಾಂತ್ ಭೂಷಣ್, ಅಣ್ಣಾ ಅವರ ಕಟ್ಟಾ ಬೆಂಬಲಿಗರಾಗಿ ಹೊರಹೊಮ್ಮಿರುವ ನಟ ಅನುಪಮ್ ಖೇರ್ ಅದೇ ಸಂಕೇತಗಳನ್ನು ನೀಡಿದರು. ಒತ್ತಡ ತಂತ್ರದಿಂದ ಸಾಧ್ಯವಾಗಲಿಲ್ಲ ಎಂದ ಮೇಲೆ ನೇರವಾಗಿ ರಾಜಕೀಯ ಪ್ರವೇಶ ಮಾಡುವುದನ್ನು ಬಿಟ್ಟರೆ ಬೇರಾವ ಮಾರ್ಗಗಳಿವೆ ಎಂದು ಪ್ರಶಾಂತ್ ಭೂಷಣ್ ಕೇಳಿದರೆ, ಜವಾಹರಲಾಲ್ ನೆಹರು, ಮೌಲಾನಾ ಅಝಾದ್, ಸರ್ದಾರ್ ಪಟೇಲ್ ಕೂಡ ರಾಜಕಾರಣಿಗಳಾಗುವ ಮೊದಲು ನಮ್ಮಂತೆಯೇ ಚಳವಳಿಕಾರರಾಗಿದ್ದರು ಎಂದು ಅಣ್ಣಾ ತಂಡದ ರಾಜಕೀಯ […]
Date : 28-07-2012 | 51 Comments. | Read More
ಆತ್ಮೀಯ ಆದರಣೀಯ ರಾಷ್ಟ್ರಪತಿಯವರೇ, ನಮ್ಮ ನೆರೆಯ ಪೂರ್ವ ಪಾಕಿಸ್ತಾನ/ ಬಾಂಗ್ಲಾದೇಶದಿಂದ ಕಳೆದ 3 ದಶಕಗಳಿಂದ ಆಗಮಿಸುತ್ತಿರುವ ಆಗಾಧ ಪ್ರಮಾಣದ ಅತಿಕ್ರಮಣಕಾರರು ಅಸ್ಸಾಮ್್ನ ಜನಾಂಗೀಯ ವ್ಯವಸ್ಥೆಯ ಸ್ವರೂಪವನ್ನೇ ಬುಡಮೇಲು ಮಾಡುತ್ತಿದ್ದಾರೆ. ಇದು ಅಸ್ಸಾಮ್ ಜನರ ಐಡೆಂಟಿಟಿಗೆ ಮಾತ್ರವಲ್ಲ, ಭಾರತದ ಭದ್ರತೆಗೆ ಗಂಭೀರ ಅಪಾಯವನ್ನು ತಂದೊಡ್ಡಿದೆ. ರಾಜ್ಯ ಹಾಗೂ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಯಾವೊಂದು ಸರ್ಕಾರಗಳೂ ಈ ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸಿಲ್ಲ.
Date : 21-07-2012 | 83 Comments. | Read More
You may write me down in history With your bitter, twisted lies, You may trod me in the very dirt But still, like dust, I’ll rise.
Date : 14-07-2012 | 56 Comments. | Read More
ಇನ್ನು ಐವತ್ತು ವರ್ಷಗಳ ನಂತರ ಇತಿಹಾಸಕಾರರು ಆಧುನಿಕ ಭಾರತದ ನಿರ್ಮಾತೃಗಳಾರು ಎಂಬ ಪ್ರಶ್ನೆಯನ್ನಿಟ್ಟುಕೊಂಡು ತುಲನೆ ಮಾಡಿದರೆ ನಮ್ಮ ಕಾಲದ ಇಬ್ಬರು ವ್ಯಕ್ತಿಗಳು ಬಹಳ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಾರೆ. ಒಂದು ಪಿ.ವಿ. ನರಸಿಂಹರಾವ್ ಹಾಗೂ ಮತ್ತೊಬ್ಬರು ಅಟಲ್ ಬಿಹಾರಿ ವಾಜಪೇಯಿ. ಒಂದು ವೇಳೆ ನ್ಯಾಯ ಸಂದಿದ್ದೇ ಆದರೆ ಆ ವೇಳೆಗೆ ಇವರಿಬ್ಬರಿಗೂ ‘ಭಾರತರತ್ನ’ ನೀಡಿ ಈ ದೇಶ ಸಮ್ಮಾನಿಸಿರುತ್ತದೆ. ಹಾಗೆಂದು ಬರೆಯಲಾಗಿದೆ, ಕಳೆದ ವಾರ ಇದೇ ಅಂಕಣದಲ್ಲಿ ಉಲ್ಲೇಖಿಸಲಾಗಿದ್ದ “A forgotten Revolutionary’ ಲೇಖನದಲ್ಲಿ! ಈ ಮಾತು ನಿಮಗೆ ಅತಿಶಯೋಕ್ತಿ […]
Date : 10-07-2012 | 13 Comments. | Read More
ನಮ್ಮ ಅರ್ಥವ್ಯವಸ್ಥೆ ಕುಂಟುತ್ತಿದೆ, ಆರ್ಥಿಕ ಅಭಿವೃದ್ಧಿ ದರ ಕುಸಿಯುತ್ತಿದೆ. ರುಪಾಯಿಯ ಮೌಲ್ಯ ಕಳೆದ ನವೆಂಬರ್್ನಿಂದ ಗಣನೀಯವಾಗಿ ಕುಸಿಯುತ್ತಲೇ ಇದೆ. ಕಚ್ಛಾ ತೈಲದ ಬೆಲೆ ಏರದಿದ್ದರೂ ಪೆಟ್ರೋಲ್ ಬೆಲೆ ಮಾತ್ರ ಗಗನಕ್ಕೇರುತ್ತಿದೆ, ಬೆಲೆ ಏರಿಕೆಯ ಬಿಸಿ ಎಲ್ಲ ವರ್ಗವನ್ನೂ ತಟ್ಟುತ್ತಿದೆ. 1991ರಲ್ಲಿ ನಿರ್ಮಾಣವಾಗಿದ್ದ ಪರಿಸ್ಥಿತಿ ಮತ್ತೆ ಮರುಕಳಿಸುತ್ತಿದೆಯೇನೋ ಎಂಬ ಆತಂಕ ಉದ್ಯಮ, ಮಾಧ್ಯಮ ಎಲ್ಲ ವಲಯಗಳಲ್ಲೂ ವ್ಯಕ್ತವಾಗುತ್ತಿದೆ. ಈ ದೇಶದಲ್ಲಿ ಏನೇ ಸಕಾರಾತ್ಮಕ ಬೆಳವಣಿಗೆಗಳಾದರೂ, ಅಭಿವೃದ್ಧಿಯಾದರೂ ಅದಕ್ಕೆಲ್ಲ ಸೋನಿಯಾ ಗಾಂಧಿಯವರೇ ಕಾರಣ, ಆದರೆ ಕೆಡುಕಿಗೆಲ್ಲ ಅನ್ಯರು ಕಾರಣವೆಂಬಂತೆ ಬಿಂಬಿಸುವ […]
Date : 01-07-2012 | 15 Comments. | Read More
ಅವರ ಹೆಸರು ಅರುಣ್ ಕುಮಾರ್. ಅಪ್ಪಟ ಕನ್ನಡಿಗರು. ಮೂಲತಃ ಮೈಸೂರಿನವರು. ದಾವಣಗೆರೆಯ ಬಾಪೂಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದಿದವರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್್ನಲ್ಲಿ ಪದವಿ ಪಡೆದವರು. ಓದಿದ್ದು ಮೆಕ್ಯಾನಿಕಲ್ ಇಂಜಿನಿಯರಿಂಗ್ ಆದರೂ ಅದರಲ್ಲಿ ಒಂದು ಕಂಪ್ಯೂಟರ್ ವಿಷಯಇರುತ್ತಿತ್ತು. ಅರುಣ್ ಕುಮಾರ್್ ಗೆ ಮೆಕ್ಯಾನಿಕಲ್ಗಿಂತ ಕಂಪ್ಯೂಟರ್ನಲ್ಲಿ ಹೆಚ್ಚು ಆಸಕ್ತಿಯಿತ್ತು. ಪದವಿ ಮುಗಿದ ನಂತರ ಕಂಪ್ಯೂಟರ್ ಬಗೆಗಿನ ಗೀಳಿನ ಹಿಂದೆಯೇ ಹೊರಟರು. ಅದು 1980ರ ದಶಕದ ಕೊನೆಯ ಭಾಗ. ಪ್ರತಿಭಾ ಪಲಾಯನದ ಕೂಗು ಮೊಳಗುತ್ತಿದ್ದ ಕಾಲ. ಆದರೂ ಭವ್ಯ ಬದುಕಿನ […]
Date : 25-06-2012 | 48 Comments. | Read More
ಈ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್್ಗೇನಾಗಿದೆ? ಅವರ ಚೇಲಾಗಳು ಯಾಕಾಗಿ ಅಟಲ್ ಬಿಹಾರಿ ವಾಜಪೇಯಿಯವರನ್ನು ಎಳೆದು ತರುತ್ತಿದ್ದಾರೆ? ಯಾವ ಉದ್ದೇಶ ಸಾಧನೆಗಾಗಿ ರಾಜಧರ್ಮವನ್ನು ಪಾಲಿಸಿ ಎಂಬ ವಾಜಪೇಯಿಯವರ ಕಿವಿಮಾತನ್ನು ಈಗ ಉಲ್ಲೇಖಿಸುತ್ತಿದ್ದಾರೆ? ನಿತೀಶ್ ಕುಮಾರ್ ಮಾತನಾಡುತ್ತಿರುವ ಜಾತ್ಯತೀತತೆಯಾದರೂ ಯಾವುದು? ಇಷ್ಟಕ್ಕೂ ಜಾತ್ಯತೀತತೆ ಎಂದರೇನು? ಒಂದು ವೇಳೆ ಹಿಂದೂಗಳು ಬಹುಸಂಖ್ಯಾತರಾಗಿಲ್ಲದೇ ಹೋಗಿದ್ದರೆ ಈ ದೇಶ ಜಾತ್ಯತೀತವಾಗಿರುವುದಕ್ಕಾದರೂ ಸಾಧ್ಯವಿತ್ತೆ? ಯಾವ ಕಾರಣಕ್ಕಾಗಿ ಇವರೆಲ್ಲ ನರೇಂದ್ರ ದಾಮೋದರ ದಾಸ್ ಮೋದಿಯವರನ್ನು ಕೋಮುವಾದಿ ಎಂದು ಜರಿಯುತ್ತಿದ್ದಾರೆ? 2002, ಫೆಬ್ರವರಿ 27 ಹಾಗೂ ತದನಂತರ […]