Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಆರು ದಶಕ ಆಳಿದವರು ಕೊಡಗಿನ ಸೈನಿಕ ಪ್ರಜ್ಞೆಗೆ ಕೊಟ್ಟಿದ್ದೇನು?

ಆರು ದಶಕ ಆಳಿದವರು ಕೊಡಗಿನ ಸೈನಿಕ ಪ್ರಜ್ಞೆಗೆ ಕೊಟ್ಟಿದ್ದೇನು?

ಆರು ದಶಕ ಆಳಿದವರು ಕೊಡಗಿನ ಸೈನಿಕ ಪ್ರಜ್ಞೆಗೆ ಕೊಟ್ಟಿದ್ದೇನು?

ಕೊಡಗಿನಲ್ಲೀಗ ನಾಟಿ ಕೆಲಸದ ಬಿರುಸು. ಗದ್ದೆ ಕೆಲಸದ ಹೊತ್ತಲ್ಲಿ ಕೊಡಗಿನ ಪೇಟೆಗಳು ಎಂದಿಗಿಂತ ಖಾಲಿಯಾಗಿ ಕಾಣುತ್ತವೆ. ಏಕೆಂದರೆ ಮಳೆ ಇದ್ದಾಗಲೇ ಗದ್ದೆಗಿಳಿದುಬಿಡಬೇಕು ಎನ್ನುವ ರೈತರ ತುರಾತುರಿ. ಅಂಥ ತುರಾತುರಿಯ ನಡುವೆ ಕೊಡಗಿನ ಮಾಜಿ ಸೈನಿಕರು ಬೇರೊಂದು ಕಾಯ೯ದಲ್ಲಿ ತುರಾತುರಿಯಲ್ಲಿದ್ದರು. ಈ ತುರಾತುರಿಯಲ್ಲಿ ಅವರಿಗೆ ಕೃಷಿ ಮರೆತುಹೋಗಿತ್ತು. ಮನೆಗೆ ಮರಳುವುದು ತಡವಾಗುತ್ತಿತ್ತು. ಪೇಟೆಯ ಸ್ಮಾರಕಗಳ ಅಲಂಕಾರ, ಪ್ರತಿಮೆಗಳಿಗೆ ಬಣ್ಣ, ಆಗಮಿಸುವ ಅತಿಥಿಗಳ ಸತ್ಕಾರಕ್ಕೆ ಸಮಿತಿಗಳ ರಚನೆ ಕಳೆದೊಂದು ತಿಂಗಳ ಹಿಂದಿನಿಂದಲೇ ನಡೆಯುತ್ತಿತ್ತು. ದೂರದ ಕುಟ್ಟ ಪೊನ್ನಂಪೇಟೆಯಿಂದ, ಇತ್ತ ನಾಪೋಕ್ಲು, ಭಾಗಮಂಡಲಗಳಿಂದ ಮಾಜಿ ಸೈನಿಕರು ಮಡಿಕೇರಿಗೆ ದಿನನಿತ್ಯವೆನ್ನುವಂತೆ ಬಂದು ತಯಾರಿ ನಡೆಸುತ್ತಿದ್ದರು. ಮಾಜಿ- ಗಳೆಲ್ಲರಿಗೂ ತಮ್ಮ ಗದ್ದೆಯ ನಾಟಿ ಕೆಲಸಕ್ಕಿಂತ ಮಡಿಕೇರಿಯ ಕಾಯ೯ಕ್ರಮದ ಸಿದ್ಧತೆಯೇ ಹೆಚ್ಚಾಗಿತ್ತು. ಇಷ್ಟೆಲ್ಲಾ ಸಿದ್ಧತೆ ಏಕೆಂದರೆ ಮಡಿಕೇರಿಗೆ ಚೀಫ್ ಆಫ್ ಆಮಿ೯ ಸ್ಟಾಫ್ ಬರುವವರಿದ್ದರು!

  1972ರಲ್ಲಿ ಫೀಲ್ಡ್ ಮಾಷ೯ಲ್ ಮಾಣಿಕ್ ಷಾ
1979-80ರಲ್ಲಿ ಜನರಲ್ ಓಂ ಪ್ರಕಾಶ್ ಮಲೊತ್ರಾ
1991-91ರಲ್ಲಿ ಜನರಲ್ ಸುನಿತ್ ಫ್ರಾನ್ಸಿಸ್ ರೋಡ್ರಿಗಸ್
1996ರಲ್ಲಿ ಜನರಲ್ ಶಂಕರ್ ರಾವ್ ಚೌಧರಿ
ಇಂದು ಜನರಲ್ ದಲ್ಬಿರ್ ಸಿಂಗ್ ಸುಹಾಗ್

  ಮಡಿಕೇರಿ ಪಟ್ಟಣ ಇಂದು ದೇಶದ 25ನೇ ಚೀಫ್ ಆಫ್ ಆಮಿ೯ ಸ್ಟಾಫ್ ಆಗಮನಕ್ಕೆ ಲವಲವಿಕೆಯಿಂದ ಸಜ್ಜುಗೊಂಡಿದೆ. ಎಲ್ಲವೂ ನಿವೃತ್ತರ ಶ್ರಮ, ಶ್ರದೆಟ್ಧ. ಮಡಿಕೇರಿಗೆ ಜನರಲ್‍ಗಳು ಬರುವುದೆಂದರೆ ಜನರಿಗೆಲ್ಲಾ ಒಂದು ಹಬ್ಬದಂತೆ. ಈವರೆಗೆ ಬಂದ ಎಲ್ಲಾ ಜನರಲ್‍ಗಳ ಲೆಕ್ಕವನ್ನೂ ಮಡಿಕೇರಿ ಇಟ್ಟುಕೊಂಡಿದೆ. ಎಲ್ಲಾ ಕಾಯ೯ಕ್ರಮಗಳ ನೆನಪುಗಳೆಲ್ಲವೂ ಮಡಿಕೇರಿಗೆ ಇನ್ನೂ ಹಸಿರಾಗಿದೆ. ಏಕೆ ಹೀಗೆ? ಮಿಲಿಟರಿ ಮುಖ್ಯಸ್ಥರು ದೇಶದ ನಾನಾ ಭಾಗಗಳಿಗೆ ಕಾಯ೯ನಿಮಿತ್ತ ಪ್ರವಾಸ ಕೈಗೊಳ್ಳುತ್ತಾರೆ. ನಾನಾ ಭಾಗಗಳಲ್ಲಿ ಮಾಜಿಗಳನ್ನು ಭೇಟಿಯಾಗುತ್ತಾರೆ. ಆದರೆ ಮಡಿ- ಕೇರಿಯೇಕೆ ಈ ಪರಿಯಲ್ಲಿ ಜನರಲ್ ಆಗಮನಕ್ಕೆ ಸಿದ್ಧವಾಗುತ್ತದೆ?
ಇಲ್ಲಿ ಇನ್ನೂ ಒಂದು ವಿಷಯವಿದೆ. ಈ ಜನರಲ್‍ಗಳ ಭೇಟಿಯಿಂದ ಕೊಡಗಿನ ಜನ ಎಷ್ಟೋಂದು ಪುಳಕಗೊಳ್ಳುತ್ತಾರೋ ಭೇಟಿ ನೀಡಿದ ಜನರಲ್‍ಗಳೂ ವೀರಭೂಮಿಯ ನೆಲವನ್ನು ಸ್ಪಶಿ೯ಸಿ ಪುಳಕಗೊಳ್ಳುತ್ತಾರೆ. ಈ ಐದು ಜನ ಜನರಲ್‍ಗಳು ಮಾತ್ರ ಅಲ್ಲ. ಇದುವರೆಗೆ ಆಗಿಹೋದ 23 (ಇಬ್ಬರು ಕೊಡಗಿನ ಸೇನಾ ಮುಖ್ಯಸ್ಥರನ್ನು ಬಿಟ್ಟು) ಜನರಲ್‍ಗಳೆಲ್ಲರಿಗೂ ಕೊಡಗು ಎಂದರೆ ಅದೇನೋ ಕುತೂಹಲ, ಸೆಳೆತ. ಎಲ್ಲರಿಗೂ ಇಲ್ಲಿನ ಮಾಜಿಗಳೊಡನೆ ಬೆರೆಯುವ ಹಂಬಲ. ವೀರಯೋಧರ ವಿಧವೆ ಪತ್ನಿಯರೊಡನೆ, ಮಕ್ಕಳೊಡನೆ ಮಾತಾಡುವ ಉಮೇದು. ಹಳೆಯ ಗೆಳೆಯರೊಡನೆ ಕುಳಿತು ಊಟ ಮಾಡುವ ಆಸೆ. ಅವರೊಡನೆ ಹಳೆಯ ದಿನಗಳ ನೆನಪು, ಹರಟೆಗಳಿಗೆ ಜೊತೆಯಾಗಲು ಮನಸ್ಸು. ಕೊಡಗಿಗೆ ಬಂದ ಎಲ್ಲಾ ಜನರಲ್‍ಗಳೂ ಮಡಿಕೇರಿಯಲ್ಲಿ ನಡೆಸಿದ್ದು ಇಂಥ ಕಾಯ೯ಕ್ರಮವನ್ನೇ. ಹೆಸರಿಗೆ ಅದು ಸೈನಿಕ ಸಮ್ಮೇಳನವಾದರು ಅಲ್ಲಿ ನೆರೆದವರಿಗೆ ಅದೊಂದು ಸಂತೋಷ ಕೂಟ. ಇಂದು ಮಡಿಕೇರಿಯಲ್ಲಿ ಅಂಥ ಸಂತೋಷ ಕಾಣಲಿದೆ. ಮಾಜಿ ಯೋಧರು ತಿಂಗಳ ಹಿಂದಿನಿಂದಲೇ ಕಾತರದಿಂದ ಕಾಯುತ್ತಿದ್ದ ದಿನ ಬಂದೇಬಿಟ್ಟಿದೆ. ಎರಡನೆ ಮಹಾಯುದ್ಧದಲ್ಲಿ ಭಾಗವಹಿಸಿದ ವೃದ್ಧರು, 62ರ ಚಳಿಯಲ್ಲಿ ನಲುಗಿದವರು, 71ರ ವಿಜಯವನ್ನು ಕಂಡವರು, ಶಾಂತಿ ಪಾಲನೆಗೆ ವಿದೇಶಕ್ಕೆ ಹೋದವರೆಲ್ಲರನ್ನೂ ಮಡಿಕೇರಿ ಇಂದು ಕಣ್ಣುತುಂಬಿಕೊಳ್ಳಲಿದೆ. ಎರಡು ಸಾವಿರಕ್ಕೂ ಹೆಚ್ಚಿನ ಮಾಜಿ ಸೈನಿಕರು ಇಂದಿನ ಸಮ್ಮೇಳನದಲ್ಲಿ ಜಮಾವಣೆಯಾಗಲಿದ್ದಾರೆ.

  ಆದರೆ ಮತ್ತದೇ ಪ್ರಶ್ನೆ! ಕೊಡಗಿನಲ್ಲೇಕೆ ಮಿಲಿಟರಿ ಎಂದರೆ ಅಷ್ಟೊಂದು  ಉತ್ಸಾಹ?
ಮಹಾನಗರಗಳ ಮಿಲಿಟರಿ ಕಾಯ೯ಕ್ರಮಗಳಲ್ಲಿ ಕಾಣದ ಉ ಲ್ಲಾ ಸ ಕೊಡಗಿನಲ್ಲಿ ಮಾತ್ರ ಏಕೆ ಕಾಣುತ್ತದೆ?

  ಏಕೆಂದರೆ ಅದು ಕೊಡಗು. ಇದಕ್ಕಿಂತ ಹೆಚ್ಚಿನ ಉತ್ತರವನ್ನೇನೂ ಅದಕ್ಕೆ ನೀಡಲಾಗದು. ಪ್ರಪಂಚದ ಯಾವ ಪ್ರದೇಶವನ್ನಾದರೂ ತೆಗೆದುಕೊಳ್ಳಿ. ಅಲ್ಲಿನ ಭೌಗೋಳಿಕ ಪರಿಸರ, ರಾಜಕೀಯ ಚಟುವಟಿಕೆ, ಸಾಮಾಜಿಕ ವ್ಯವಸ್ಥೆಗಳಿಂದ ಅಲ್ಲಿನ ಪರಿಸರವನ್ನು ಅರಿಯಬಹುದು. ಆದರೆ ಕೊಡಗನ್ನಲ್ಲ. ಕೊಡಗು ತನ್ನ ಪರಿಚಯವನ್ನು ಮಾಡಿಕೊಳ್ಳುವುದೇ ಯೋಧರ ನಾಡು ಎಂಬುದರ ಮೂಲಕ. ಕೊಡಗಿನ ಇತಿಹಾಸ, ಕೊಡಗಿನ ಸಾಮಾ ಜಿಕ ವ್ಯವಸ್ಥೆ, ಅವಿಭಕ್ತ ಮನೆತನಗಳು, ಕೊಡಗಿನ ಕಾಫಿ, ಜಮ್ಮಾ ಎಂಬ ಆಸ್ತೀಯ ಹಕ್ಕು, ಅವರ ಕೋವಿಯ ಹಕ್ಕು… ಎಲ್ಲವೂ ಸೈನಿಕ ಪರಂಪರೆಯಿಂದ ಹೊರತಾಗಿ ಕಾಣುವುದಿಲ್ಲ. ಇಲ್ಲಿ ಯೋಧರನ್ನು ಹೊರತಾಗಿಸಿ ಕೊಡಗನ್ನು ಪೂಣ೯ ಹೇಳಿದಂತಾಗುವುದಿಲ್ಲ, ಹೇಳಲಾಗುವುದೂ ಇಲ್ಲ. ನೀವು ಕೊಡಗಿನ ಬಗ್ಗೆ ಯಾವುದೇ ವಿವರಣೆಗಳನ್ನು ಬೇಕಾದರೂ ಕೊಡಬಹುದು. ಆದರೆ ಕೊಡಗಿನ ಜನರ ದೇಶಭಕ್ತಿಯ ಬಗ್ಗೆ ಸಂದೇಹ ಪಡಲಾರಿರಿ. ಆತ ಯೋಧ, ಮಾಜಿ ಯೋಧನೇ ಆಗಬೇಕಿಲ್ಲ. ಸಾಮಾನ್ಯ ವ್ಯಕ್ತಿಯೂ ದೇಶ ಎಂದರೆ ಎರಡು ಹೆಮ್ಮೆಯ ಮಾತಾಡುತ್ತಾನೆ. ಆಥವಾ ಪಾಕಿಸ್ಥಾನಕ್ಕೆ ವಾಚಾಮಗೋಚರ ಬಯ್ಯುತ್ತಾನೆ! ಮುಲಾಜಿಲ್ಲದೆ ವಾರ್ ಆಗಬೇಕು ಎನ್ನುತ್ತಾನೆ!

  ಆಷ್ಟೇ ಏಕೆ ನೀವೆಂದಾದರೂ ಮಡಿಕೇರಿಗೆ ಪ್ರವಾಸ ಹೋಗಿದ್ದರೆ ಕೊಡಗಿನ ಮಿಲಿಟರಿಯ ಹೆಜ್ಜೆ ಗುರುತುಗಳನ್ನು ಕಂಡೇ ಇರುತ್ತೀರಿ. ಫಿ.ಮಾ. ಕಾಯ೯ಪ್ಪನವರ ಮನೆ, ಪ್ರತಿಮೆ, ತಿಮ್ಮಯ್ಯ ಮನೆ ಪ್ರತಿಮೆ, ಮುಂದೆ ಸಾಗಿದರೆ ಮೇಜರ್ ಮಂಗೇರಿರ ಮುತ್ತಣ್ಣ ಪ್ರತಿಮೆ, ಬಸ್ ಸ್ಟಾಂಡಿನಲ್ಲಿ ಕಾಣುವ ಸ್ಕಾ.ಲಿ. ಎಬಿ ದೇವಯ್ಯ ವೃತ್ತ, ಕೋಟೆಯ ಬಳಿಯ ಮಹಾಯುದ್ಧದ ಸ್ಮಾರಕ, ರಾಜಾಸೀಟು ಮೂಲಕ ಕೊಡವರ ಸೇನೆ ಇಳಿದುಹೋಗುತ್ತಿದ್ದ ದಾರಿ, ಯೋಧರ ಕಥೆಯನ್ನು ಬಚ್ಚಿಟ್ಟುಕೊಂಡ ಕುಂದುರುಮೊಟ್ಟೆ ಅಮ್ಮನ ಗುಡಿ, ಕೋಟೆಯೊಳಗಿನ ಮುರಿದ ಕಲ್ಲಿನ ಕಂಬ, ಕನ್ನಂಡ ಬಾಣೆ ಎಂಬ ವೀರ ಯೋಧನ ವಂಶಸ್ಥರ ಮನೆ… ಹೀಗೆ ಒಂದು ಪೇಟೆಯಲ್ಲಿ ಯೋಧತನದ ಎಷ್ಟೋ ಕುರುಹುಗಳು. ಇದು ಮಡಿಕೇರಿಯೊಂದರ ಕುರುಹುಗಳು ಮಾತ್ರ. ಕೊಡಗಿನ ಪ್ರತೀ ಊರಲ್ಲೂ ಎಲ್ಲವೂ ಮಿಲಿಟರಿಮಯ. ಯಾವ ಮನೆಗೆ ಹೋದರೂ ಅಲ್ಲೊಬ್ಬ ಮಿಲಿಟರಿ ಮನುಷ್ಯನಿರುತ್ತಾನೆ. ಅಥವಾ ಪುರಾತನ ಯೋಧತನದ ಇತಿಹಾಸವನ್ನು ಆ ಮನೆ ಹೊತ್ತುಕೊಂಡಿರುತ್ತವೆ. ಕೊಡಗಿನ ಎ ಲ್ಲಾ ಪೇಟೆಗಳಲ್ಲಿ ಒಂದಲ್ಲಾ ಒಂದು ಅಂಗಡಿಯ ಹೆಸರು ಜೈ ಜವಾನ್ ಸ್ಟೋರ್ ಎಂದಿರುತ್ತದೆ. ಮಾಜಿ ಸೈನಿಕರ ಸಂಘ ಎಂಬ ಬಸ್ಸೊಂದು ಮಡಿಕೇರಿಯಿಂದ ವೀರಾಜಪೇಟೆಗೆ ಓಡಾಡುತ್ತದೆ. ಪೇಟೆಯಲ್ಲಿ ಕಾರು ಹತ್ತುವ ಹುರಿ ಮೀಸೆಯ ಅಂಕಲ್‍ಗಳು ಖಂಡಿತ ಕನ೯ಲ್ಲೋ ಮೇಜರೋ, ಬ್ರಿಗೇಡಿಯರೋ ಆಗಿರುತ್ತಾರೆ. ಶಿಸ್ತೀನಿಂದ ಹ್ಯಾಟು ಹಾಕಿರುವ ಅಜ್ಜರು ಯಾವುದೋ ಯುದ್ಧದಲ್ಲಿ ಭಾಗವಹಿಸಿದ ಮಾಜಿ ಯೋಧರಾಗಿರುತ್ತಾರೆ. ಇದು ಕೊಡಗಿನ ಎಲ್ಲಾ ಪೇಟೆಗಳ ಸಾಮಾನ್ಯ ದ್ರಶ್ಯ. ಪರಿಸ್ಥಿತಿ ಇಂಥಿರುವಾಗ ತಮ್ಮ ಚೀಫ್ ಆಫ್ ಆಮಿ೯ ಸ್ಟಾಫ್ ಬಂದರೆ ಕೊಡಗಿನ ಜನ ಪುಳಕಗೊಳ್ಳದೆ ಹೇಗಿದ್ದಾರು?

  ಕೊಡಗಿನ ಯೋಧ ಸಂಸ್ಕೃತಿಯ ಬಗ್ಗೆ ಹಲವು ಕಥೆಗಳಿವೆ. ಆದರೆ ಅವೆಲ್ಲವೂ ದಂತೆಕತೆಗಳೋ, ಗಾಳಿ ಸುದ್ಧಿಗಳೋ ಖಂಡಿತಾ ಅಲ್ಲ. ಕೊಡಗಿನಲ್ಲಿ ಯಾರಾದರೋಬ್ಬ ಸಾಮಾನ್ಯ ಮಾಜಿ ಸೈನಿಕ ಚೀಫ್ ಆಫ್ ಆಮಿ೯ ಸ್ಟಾಫ್ ನನ್ನ ಗೆಳೆಯ ಎಂದರೆ ಅದು ನೂರಕ್ಕೆ ನೂರು ಸತ್ಯ! ಏಕೆಂದರೆ ದಲ್ವೀರ್ ಸಿಂಗ್ ಸುಹಾಗರ ಗೆಳೆಯರನೇಕರು ಕೊಡಗಿನಲ್ಲಿದ್ದಾರೆ. ಸುಹಾಗ್ ಆಮಿ೯ ಚೀಫ್ ಆದರೂ ಇಂದಿಗೂ ಅವರೆಲ್ಲರ ಸಂಪಕ೯ದಲ್ಲಿದ್ದಾರೆ. ಪೇಟೆಯಲ್ಲಿ ಸಿಕ್ಕ ಮಾಜಿ ಯೋಧರೊಬ್ಬರು ನಾನು ಚೀನಾ ಯುದ್ಧದಲ್ಲಿ ಸೆರೆಸಿಕ್ಕಿದ್ದೆ ಎಂದರೂ ಅದಕ್ಕೆ ಆಧಾರಗಳಿವೆ. ಏಕೆಂದರೆ ಚೀನಾ ಯುದ್ಧದಲ್ಲಿ ಸುಮಾರು ನಲ್ವತ್ತಕ್ಕೂ ಹೆಚ್ಚಿನ ಕೊಡಗಿನ ಯೋಧರು ಸೆರೆಸಿಕ್ಕಿದ್ದರು. ಇನ್ನೊಬ್ಬ ನನ್ನ ದೊಡ್ಡಪ್ಪ ಯುದ್ಧಕ್ಕೆ ಹೋದವರು ಮರಳಲೇ ಇಲ್ಲ ಎಂದರೆ ಆತ ಸುಳ್ಳು ಹೇಳುತ್ತಿದ್ದಾನೆ ಎಂದಥ೯ವಲ್ಲ. ಇಂದಿಗೂ ತವಾಂಗ್ ಪ್ರದೇಶದಲ್ಲಿ ಮುದ್ದಪ್ಪ, ಮಾದಪ್ಪ ಹೆಸರಿನ ಗೋರಿಗಳಿವೆ. ಕೊಡವರ ಮನೆ ಮನೆಗಳು ಹೇಳುವ ಪ್ರತೀ ಸೈನ್ಯದ ಕತೆಗಳೂ ಅವರ ಪರಂಪರೆಯನ್ನು ರೂಪಿಸಿವೆ. ಯೋಧತನ ಕೊಡಗಿನ ಸಂಸ್ಕೃತಿಯನ್ನು ರೂಪಿಸಿದೆ. ಇಲ್ಲಿನ ಜನರಿಗೆ ಸೈನಿಕ ಪ್ರಜ್ಞೆಯಿದೆ.

  ಖ್ಯಾತ ಸಂಶೋಧಕ ಡಾ. ಐ.ಎಂ ಮುತ್ತಣ್ಣನವರು 11ನೇ ಶತಮಾನದಲ್ಲೇ ಹೊಯ್ಸಳ ಸೈನ್ಯದ ದಂಡನಾಯಕನಾಗಿ ಮಾದಪ್ಪ ಎಂಬ ಕೊಡವನಿದ್ದ ಎಂಬುದನ್ನು ಎತ್ತಿತೋರಿಸುತ್ತಾರೆ. ಮುಂದೆ ಕೊಡಗು ರಾಜಾಡಳಿತಕ್ಕೆ ಒಳಪಟ್ಟಾಗ ಕುಲ್ಲೇಟಿ ಪೊನ್ನಣ್ಣ, ಅಪ್ಪಚ್ಚೀರ ಮಂದಣ್ಣ, ಕನ್ನಂಡ ದೊಡ್ಡಯ್ಯ ಮುಂತಾದ ಮಹಾ ಮಹಾಯೋಧರನ್ನು ಕೊಡಗು ನೋಡಿತು. ಆದರೂ ಕೊಡಗಿನ ಸೈನಿಕ ಪ್ರಜ್ಞೆಯನ್ನು ಮೊದಲು ಕಂಡುಹುಡುಕಿದವರು ಬ್ರಿಟಿಷರು. ಮೊದಲ ಮಹಾಯುದ್ಧದ ಕಾಲದಲ್ಲಿ ಕೊಡವರ ಮಾಷ೯ಲ್ ಗುಣವನ್ನು ಮನಗಂಡ ಬ್ರಿಟಿಷರು ಕೂಗ್‍೯ ರೆಜಿಮೆಂಟ್ ಅನ್ನು ಸ್ಥಾಪಿಸಿದ್ದರು. ಮೊದಲ ಮಹಾಯುದ್ಧದಲ್ಲಿ ಸಾವಿರಾರು ಸಂಖ್ಯೆಯ ಕೊಡವ ಯೋಧರು ವಿದೇಶಗಳಲ್ಲಿ ಹೋರಾಡಿ ಬ್ರಿಟಿಷರಿಗೆ ಜಯವನ್ನು ತಂದಿತ್ತರು. ಮೊದಲ ಮಹಾಯುದ್ಧದ ಬಳಿಕ ಬ್ರಿಟಿಷರು ಕೂಗ್‍೯ ರೆಜಿಮೆಂಟನ್ನು ವಿಸಜಿ೯ಸಿದ್ದರು. ಆದರೆ ಎರಡನೆ ಮಹಾಯುದ್ಧದ ಹೊತ್ತಿಗೆ ಬ್ರಿಟಿಷರ ಪರಿಸ್ಥಿತಿ ಕುತ್ತಿಗೆಗೆ ಬಂದಿತ್ತು. ವಿಸಜಿ೯ಸಲಾಗಿದ್ದ ಕೂಗ್‍೯ ರೆಜೆಮೆಂಟನ್ನು ಮತ್ತೆ ಸ್ಥಾಪಿಸಲಾಯಿತು. ಕೊಡವ ಸೈನಿಕರು ಬಮಾ೯, ಜಪಾನ್, ಆಫ್ರಿಕಾ ದೇಶಗಲ್ಲಿ ಮತ್ತು ಫ್ರಾನ್ಸ್‍ಗಳಲ್ಲಿ ತಮ್ಮದಲ್ಲದ ವಾತಾವರಣದಲ್ಲಿ ಸೆಣಸಿದರೂ ಹೆಚ್ಚಿನ ಕ್ಯಾಶ್ವ ಲ್ಟೀಸ್ ಆಗದೆ ಮರಳಿ ಕೊಡಗಿಗೆ ಬಂದಿದ್ದರು. ಅಷ್ಟರವರೆಗೂ ಬ್ರಿಟಿಷ್ ಸೈನ್ಯದಲ್ಲಿದ್ದ ನೇಟಿವ್ ಇಂಡಿಯನ್ಸ್ ಎಂಬ ಪಕ್ಷಪಾತ ಧೋರಣೆಯ ಬಿಸಿ ಬ್ರಿಟಿಷರಿಗೆ ತಟ್ಟಿತು. ಅದಕ್ಕೆ ಮೊದಲು ನೇಟಿವ್‍ಗಳನ್ನು ಅಧಿಕಾರಿಗಳನ್ನಾಗಿ ನೇಮಿಸಲು ಹಿಂದೇಟು ಹಾಕುತ್ತಿದ್ದ ಬ್ರಿಟಿಷರು ಕೊಡವ ಯೋಧರನ್ನು ಸೈನ್ಯದಲ್ಲಿ ಅಧಿಕಾರಿಗಳನ್ನಾಗಿ ನೇಮಿಸಲು ಆರಂಭೀಸಿದ್ದರು. ಈ ಹೊತ್ತಲ್ಲಿ ಹಲವು ಕೊಡಗಿನ ಸೈನಿಕರು ಅಧಿಕಾರಿಗಳಾಗಿ ಹೆಸರುವಾಸಿಯಾದರು. ಡೆಹರಾಡೂನಿನ ಇಂಡಿಯನ್ ಆಫೀಸಸ್‍೯ ಕೆಡೆಟ್‍ಗೆ ಕೊಡಗಿನ ಕಾಯ೯ಪ್ಪ ಮತ್ತು ತಿಮ್ಮಯ್ಯ ಇಬ್ಬರೂ ಆಯ್ಕೆಯಾಗಿ ದೇಶದಲ್ಲೇ ಹೆಸರು ಮಾಡಿದ್ದರು. ಮುಂದೆ ಅವರಿಬ್ಬರೂ ಚೀಫ್ ಆಫ್ ಆಮಿ೯ ಸ್ಟಾಫ್ ಆಗಿ ಇತಿಹಾಸ ರಚನೆ ಮಾಡಿದರು. ಸ್ವಾತಂತ್ರ್ಯಾನಂತರ ಭಾರತೀಯ ಸ್ವತಂತ್ರ ಸೇನೆಯಲ್ಲಿ ಅಂತಾರಾಷ್ಟ್ರೀಯ ದಜೆ೯ಯ ಅಧಿಕಾರಿಗಳನ್ನು ಸರಕಾರ ಹುಡುಕುತ್ತಿದ್ದಾಗ ಕಂಡವರು ಕೂಡಾ ನಮ್ಮ ಕೊಡಗಿನ ಅಧಿಕಾರಿಗಳೆ. ಇನ್ನೂ ಸ್ವಾತಂತ್ರ್ಯ ದ ಭಾಷಣದ ಬಿಸಿ ಆರದೇ ಇದ್ದ ಹೊತ್ತಲ್ಲೂ ಕಾಶ್ಮೀರದ ಬಂಡಾಯವನ್ನು ಹತ್ತಿಕ್ಕಿ ಲೇಹ…, ಲಡಾಕ್, ಶ್ರೀನಗರಗಳನ್ನು ರಕ್ಷಿಸಿ, ಉತ್ತರದ ಕಾಶ್ಮೀರದತ್ತ ಸೈನ್ಯವನ್ನು ನುಗ್ಗಿಸಿದವರು ನಮ್ಮ ಕನ್ನಡನಾಡಿನ ಹೆಮ್ಮೆಯ ಕೊಡಗಿನ ಅಧಿಕಾರಿಗಳು. ಇಬ್ಬರು ಚೀಫ್ ಆಫ್ ಆಮಿ೯ ಸ್ಟಾಫ್ ಗಳು, ಮೂವತ್ತಕ್ಕೂ ಹೆಚ್ಚಿನ ಲೆಫ್ಟಿನೆಂಟ್ ಜನರಲ್‍ಗಳು, ಅವರಲ್ಲಿ ಆಮಿ೯ ಮುಖ್ಯಸ್ಥರ ವಿಶೇಷ ಅಧಿಕಾರಿಗಳಾಗಿದ್ದ ಹಲವರು, ನಲ್ವತ್ತಕೂ ಹೆಚ್ಚಿನ ಮೇಜರ್ ಜನರಲ್‍ಗಳು, ಅಷ್ಟೇ ಸ೦ಮಂಖ್ಯೆಯ ಬ್ರಿಗೇಡಿಯರುಗಳು, ಲೆಕ್ಕಕ್ಕೆ ಸಿಗದಷ್ಟು ಲೆ.ಕನ೯ಲ್‍ಗಳು, ಮೇಜರ್ ಗಳು ದೇಶದಲ್ಲಿ ಕಾಣಸಿಗುವುದು ನಮ್ಮ ಕನಾ೯ಟಕದ ಕೊಡಗಿನಲ್ಲಿ ಮಾತ್ರ.

ಕನಾ೯ಟಕಕ್ಕೆ ಸಿಕ್ಕ ಎರಡು ಮಹಾವೀರ ಚಕ್ರ ಪದಕಗಳಲ್ಲಿ ಇಬ್ಬರೂ ಕೊಡಗಿನ ವೀರರೇ ಎನ್ನುವುದು ಹೆಮ್ಮೆಯಲ್ಲವೇ?

ಸ್ವತಂತ್ರ್ಯ ಭಾರತದಲ್ಲಿ ಇದುವರೆಗೆ ಕೊಡಗಿನ ನಲ್ವತ್ತೇಳು ಯೋಧರು ಯುದ್ಧರಂಗದಲ್ಲಿ ವೀರಮರಣ ಅಪ್ಪಿದ್ದಾರೆ ಎನ್ನುವುದೊದೇ ಕೊಡಗಿನ ಯೋಧ ಸಂಸ್ಕೃತಿಯ ಬಗ್ಗೆ ಗೌರವ ತಾಳಲು ಸಾಕು. ಅಂಥ ಮಹಾನ್ ಯೋಧ ಇತಿಹಾಸವನ್ನು ಹೊತ್ತುಕೊಂಡ ನಾಡಿಗೆ ಇಂದು  ಸ್ಟಾಫ್ ಆಫ್ ಆಮಿ೯ ಸ್ಟಾಫ್ ಬರುತ್ತಿದ್ದಾರೆ. ಬಹುವಷ೯ಗಳ ನ೦ತರ ಸೇನಾ ಮುಖ್ಯಸ್ಥರ ಜಿಲ್ಲೆಯ ಆಗಮನಕ್ಕೆ ಜಿಲ್ಲೆಗೆ ಜಿಲ್ಲೆಯೇ ಕಾಯುತ್ತಿದೆ.

  ಆದರೆ ಆರು ದಶಕಗಳನ್ನಾಳಿದವರು ಜಿಲ್ಲೆಯ ಸೈನಿಕ ಪ್ರಜ್ಞೆಗೇನು ಕೊಟ್ಟಿದೆ? ಜಿಲ್ಲೆಯಲ್ಲೊಂದು ಆಮಿ೯ಶಾಲೆ ಇರುವುದೊಂದು ಬಿಟ್ಟರೆ ಕೊಡಗಲ್ಲಿ ಯೋಧರಿಗಾಗಲೀ, ಸೈನಿಕ ಪ್ರಜ್ಞೆಗಾಗಲೀ ಏನೆಂದರೆ ಏನನ್ನೂ ಕೊಟ್ಟಿಲ್ಲ.

  ದೇಶದ ಮೂರು ಏರ್ ಫೋಸ್‍೯ ಸೆಲೆಕ್ಷನ್ ಬೋಡ್‍೯ಗಳಲ್ಲಿ ಒಂದನ್ನು ಮ್ಯೆಸೂರಿಗೆ ಕೊಟ್ಟಿದ್ದು ಬಿಟ್ಟರೆ ಕೊಡಗು ಮತ್ತು ಕೊಡಗಿನ ಒತ್ತಿನ ಮ್ಯೆಸೂರಿನಲ್ಲಿ ಯೋಧರಿಗೆ ಏನೇನೂ ಇಲ್ಲ. ಮಡಿಕೇರಿಯಲ್ಲಿ ಮಿಲಿಟರಿ ಕ್ಯಾಂಟಿನ್ ಒಂದಿದೆಯಾದರೂ ಅದಕ್ಕಿಂತ ಸೂಪರ್ ಮಾಕೆ೯ಟುಗಳೇ ವಾಸಿ. ಬಿಎಸ್‍ಎಫ್ ಯೋಧರ ಕ್ಯಾಂಟಿನ್ ಮತ್ತು ವೈದ್ಯಕೀಯ ಸೌಲಭ್ಯಕ್ಕೆ ಕೊಡಗಿನ ಯೋಧ ಬೆಂಗಳೂರಿಗೆ ತೆರಳಬೇಕು. ಕೊಡಗಿನಲ್ಲಿ ಮೊದಲಿನಿಂದಲೂ ಕಮಿಶನ್ಡ್ ಪರೀಕ್ಷೆ ತೆಗೆದುಕೊಳ್ಳುವ ಯುವಕರ ಸಂಖ್ಯೆ ಹೆಚ್ಚಿತ್ತು. ಆದರೆ ಕಳೆದ ಅರವತ್ತು ವಷ೯ಗಳಿಂದ ಕೊಡಗಿನಲ್ಲಿ ರೆಜಿಮೆಂಟಲ್ ರೆಕಾಡ್‍೯ ಆಫೀಸ್ ಸ್ಥಾಪನೆ ಮಾಡಲು ಇಲ್ಲಿ ಆಳಿದವರಿಗೆ ಆಗಲಿಲ್ಲ. ರೆಜಿಮೆಂಟಲ್ ರೆಕಾಡ್‍೯ ಆಫೀಸ್ ಬಿಡಿ ಸೈನ್ಯಕ್ಕೆ ಇಷ್ಟೊಂದು  ಸಂಖ್ಯೆಯಲ್ಲಿ ಯೋಧರನ್ನು ಕೊಟ್ಟ ಊರಲ್ಲಿ ರೆಜಿಮೆಂಟಲ್ ಸೆಂಟರೇ ಇಲ್ಲ! ಕೊಡಗಿನ ಸೈನಿಕ ಇತಿಹಾಸಕ್ಕೆ ಇಲ್ಲೊಂದು ಸೈನ್ಯದ ಊನಿಟ್ಟೇ ಇರಬೇಕಿತ್ತು. ತರಬೇತಿ ಕೇಂದ್ರ ಎಂದೋ ಸ್ಥಾಪನೆಯಾಗಿ ಅದು ಹಳೆಯದಾಗಿರಬೇಕಿತ್ತು. ಕನಿಷ್ಠ ಇಬ್ಬರು ಜನರಲ್‍ಗಳ ಮನೆಗಳನ್ನಾದರೂ ವ್ಯವಸ್ಥಿತ ಮ್ಯೂಸಿಯಂ ಆಗಿ ಮಾಡಬಹುದಿತ್ತು. ಅವರ ಪಠ್ಯಗಳನ್ನು ಹೊರತರಬಹುದಿತ್ತು. ಆದರೆ ಕೆಲವರು ಅರವತ್ತು ವಷ೯ಗಳಿಂದ ಕೈಕಟ್ಟಿ ಕುಳಿತು ನಾಳೆ ರಾತ್ರಿಯೊಳಗಾಗಿ ಇವೆಲ್ಲವನ್ನೂ ಮೋದಿ ಸರಕಾರ ಮಾಡಬೇಕು ಎಂದು ಆರೋಪಿಸುತ್ತಿದ್ದಾರೆ!

  ಕಳೆದ ಮೇ ನಲ್ಲಿ ಜಿಲ್ಲೆಗೆ ಭೇಟಿ ನೀಡಿದ ರಕ್ಷಣಾ ಸಚಿವರ ಸೇನಾ ಅಕಾಡೆಮಿ ಸ್ಥಾಪಿಸುವ ನಿಧಾ೯ರ, ಇದೀಗ ಸೇನಾ ಮುಖ್ಯಸ್ಥರ ಮಡಿಕೇರಿ ಭೇಟಿಗಳು ಜಿಲ್ಲೆಯ ಯೋಧ ಪ್ರಜ್ಞೆಗೆ ಹೊಸ ಭರವಸೆಯನ್ನು ಹುಟ್ಟಿಸಿವೆ. ಕಳೆದ ಆರು ದಶಕಗಳಲ್ಲಿ ನಡೆಯದಿರುವುದೆಲ್ಲವೂ ಸಾಧ್ಯವಾಗುತ್ತಿವೆ.

 kodagu army

Comments are closed.