Date : 08-07-2015, Wednesday | no Comment
ಮೈಸೂರು, ಜು.07 : ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ನಗರದ ಅಶೋಕಪುರಂ ನಿವಾಸಿ ರಾಜೀವ್ ಅವರ ಚಿಕಿತ್ಸೆಗೆ ಸಂಸದ ಪ್ರತಾಪ ಸಿಂಹ ನೆರವಾಗಿದ್ದಾರೆ.
ಮೈಸೂರಿನ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ರಾಜೀವ್ ಅವರಿಗೆ, ಆಸ್ಪತ್ರೆಯ ವೈದ್ಯರು ಅದಷ್ಟುಬೇಗ ಕಿಡ್ನಿ ಕಸಿ ಮಾಡಿಕೊಳ್ಳುವಂತೆ ಸೂಚಿಸಿದ್ದರು. ಅದಕ್ಕೆ ಪೂರಕವಾಗಿ ರೋಗಿಯ ಮಡದಿ ಸುಧಾ ರಾಜೀವ ಅವರು ಕಿಡ್ನಿಯನ್ನು ಧಾನ ಮಾಡಲು ಒಪ್ಪಿಕೊಂಡು, ಪರಸ್ಪರ ತಿರ್ಮಾನಿಸಿ ಶಸ್ತ್ರ ಚಿಕಿತ್ಸೆಗೆ ಸಿದ್ದರಾಗಿದ್ದಾರೆ.
ಇವರಿಗೆ ಹಣ ಕಾಸಿನ ಆಭಾವದಿಂದ ಹಾಗೂ ಬಡವರಾಗಿದ್ದರಿಂದ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಭರಿಸಲು ಸಾಧ್ಯವಾಗದ ಕಾರಣ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರ ಮೊರೆಹೊದರು.
ಕೂಡಲೆ ಸ್ಪಂದಿಸಿದ ಸಂಸದ ಸಿಂಹ, ಚಿಕಿತ್ಸೆಗೆ ತಗಲುವ ಸಂಪೂರ್ಣ ವೆಚ್ಚವನ್ನು ಕೇಂದ್ರ ಸರಕಾರದಿಂದ ಭರಿಸುವ ವ್ಯವಸ್ಥೆಯನ್ನು ಮಾಡಿದರು. ಸದರಿ ಚಿಕಿತ್ಸೆಗೆ ಖರ್ಚಾಗುವ ಅಂದಾಜು ಮೊತ್ತ ರೂ.3,50,000 (ಮೂರು ಲಕ್ಷದ ಐವತ್ತು ಸಾವಿರ ರೂಪಾಯಿಗಳು) ಮೊಬಲಗನ್ನು ರಾಜೀವರವರಿಗೆ ಕೇಂದ್ರ ಸರಕಾರದ ಡಾ|| ಬಿ.ಆರ್.ಅಂಬೇಡ್ಕರ್ ಮೆಡಿಕಲ್ ಫೌಂಡೇಷನ್ನ ಅನುದಾನದಿಂದ ಬಿಡುಗಡೆ ಮಾಡಿಸಿಕೊಟ್ಟರು. ಈ ಮೊತ್ತದ ಡಿಡಿಯನ್ನು ಸಂಸದ ಪ್ರತಾಪ್ ಸಿಂಹ , ನೀಡಿ ಆನಾರೋಗ್ಯದಿಂದ ಬಳಲುತ್ತಿರುವ ಬಡ ಕುಟುಂಬದ ರೋಗಿಗೆ ನೇರವಾಗಿ ಉತ್ತಮ ಜೀವನ ನಡೆಸಲು ಅನುವು ಮಾಡಿಕೊಟ್ಟಿದ್ದಾರೆ. ಇದೇ ವೇಳೆ ಶಸ್ತ್ರ ಚಿಕಿತ್ಸೆಯು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.