Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಕುರುಡು ಕಾಂಚಾಣ ಕುಣಿಯುತ್ತಲಿತ್ತು, ಕಾಲಿಗೆ ಬಿದ್ದವರ ತುಳಿಯುತ್ತಲಿತ್ತು!

ಕುರುಡು ಕಾಂಚಾಣ ಕುಣಿಯುತ್ತಲಿತ್ತು, ಕಾಲಿಗೆ ಬಿದ್ದವರ ತುಳಿಯುತ್ತಲಿತ್ತು!

ಭಿನ್ನಹಕೆ ಬಾಯಿಲ್ಲವಯ್ಯ ಅನಂತ ಅಪರಾಧಗಳು
ಎನ್ನೊಳಿರಲಾಗಿ….
ಅನ್ನ ಮದ ಅರ್ಥ ಮದ
ಅಷ್ಟೈಶ್ವರ್ಯ ಮದ
ಮುನ್ನ ಪ್ರಾಯದ ಮದವು, ರೂಪ ಮದವು….

ದುರಹಂಕಾರ ಮಾಡಿದರೆ ಕೊನೆಗೆ ಗಂಜಿಗೂ ಗತಿಯಿಲ್ಲ ದಂತಾಗುತ್ತದೆ ಅಂತ ೫೦೦ ವರ್ಷಗಳ ಹಿಂದೆಯೇ ಪುರಂದರ ದಾಸರು ಹೇಳಿದ್ದರು. ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಕಂಡುಬರುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ದಾಸರು ಹೇಳಿದ್ದ ಮಾತು ಇಂದಿಗೂ ಎಷ್ಟು ನಿಜ ಎನಿಸಲಾರಂಭಿಸಿದೆ. ಫ್ಲ್ಯಾಟು, ಸೈಟು ಎನ್ನುತ್ತಿದ್ದವರೆಲ್ಲ ಗಂಜಿಯ ಮಾತನಾಡುತ್ತಿದ್ದಾರೆ. ಕೆಲವರು ಈಗಾಗಲೇ ಕೆಲಸ ಕಳೆದುಕೊಂಡಿದ್ದರೆ, ಉಳಿದವರು ನಮ್ಮ ಸರದಿ ಯಾವ ಕ್ಷಣದಲ್ಲೂ ಬರಬಹುದು ಎಂಬ ಆತಂಕ ದಲ್ಲಿದ್ದಾರೆ. ನಿಜಕ್ಕೂ ಐಟಿ ಕ್ಷೇತ್ರದಲ್ಲಿರುವವರು ನೀರಿನಿಂದ ಮೇಲೆತ್ತಿ ದಡಕ್ಕೆ ಹಾಕಿದ ಮೀನಿನಂತಾಗಿದ್ದಾರೆ.

ಹಾಗಂತ ಯಾರೂ ಇವರ ಬಗ್ಗೆ ಅನುಕಂಪ ವ್ಯಕ್ತಪಡಿಸುತ್ತಿಲ್ಲ!

‘ಬಹಳ ಹಾರಾಡುತ್ತಿದ್ದರು, ತಕ್ಕ ಶಾಸ್ತಿಯಾಗಿದೆ’ ಎಂದು ಉಳಿದವರು  ಒಂದು ರೀತಿ  rejoice ಮಾಡುತ್ತಿದ್ದಾರೆ!! ಆದರೆ ಅದು ಶ್ರೀಮಂತಿಕೆಯ ಮೇಲಿನ ಮತ್ಸರದಿಂದಲ್ಲ. ಇವತ್ತು ಒಬ್ಬ ಸಾಫ್ಟ್‌ವೇರ್ ಎಂಜಿನಿಯರ್ ಅಥವಾ ಬಿಪಿಒ, ಕೆಪಿಒದಲ್ಲಿದ್ದವರು ಕೆಲಸ ಕಳೆದುಕೊಂಡರೆ ಅವರ ಬಗ್ಗೆ ಸಮಾಜ ಕಿಂಚಿತ್ತೂ ಅನುಕಂಪವನ್ನು ತೋರದ ಪರಿಸ್ಥಿತಿಯನ್ನು ಸೃಷ್ಟಿಸಿಕೊಂಡವರು ಅವರೇ.

Force of the market is force of the devil ಎನ್ನುತ್ತಿದ್ದರು ಗಾಂಧೀಜಿ. ಅವರ ಮಾತನ್ನು ಐಟಿ ಕ್ಷೇತ್ರದಲ್ಲಿರುವವರು ಯಾವತ್ತೂ ಅರ್ಥಮಾಡಿಕೊಳ್ಳಲಿಲ್ಲ. ಅಪ್ಪ ನಿವೃತ್ತಿಯಾಗುವಾಗ ಪಡೆಯುತ್ತಿದ್ದ ಸಂಬಳವನ್ನು ಮಗ ಕೆಲಸಕ್ಕೆ ಸೇರಿದ ಮೊದಲ ತಿಂಗಳೇ ಪಡೆದುಕೊಳ್ಳಲಾರಂಭಿಸಿದ. ಹಾಗೆಂದು ಐಟಿ ಕ್ಷೇತ್ರದಲ್ಲಿರುವವರಿಗೆ ಅಷ್ಟು ಸಂಬಳ ಕೊಟ್ಟಿದ್ದು ತಪ್ಪು ಅಂತ ಯಾರೂ ಭಾವಿಸಲಿಲ್ಲ. ಕಷ್ಟಪಟ್ಟು ದುಡಿಯುವವರಿಗೆ ಒಳ್ಳೆಯ ಸಂಬಳ ಕೊಟ್ಟರೆ ಯಾರಾದರೂ ಬೇಡ ಎನ್ನಲು ಸಾಧ್ಯವೆ? ಇಪ್ಪತ್ಮೂರು ವರ್ಷಕ್ಕೇ ಕೈ ತುಂಬ ದುಡ್ಡೇನೋ ಬಂತು, ದುಡ್ಡಿನ ಬೆಲೆ ಅರ್ಥಮಾಡಿಕೊಳ್ಳುವ ವಯಸ್ಸು ಅದಾಗಿರಲಿಲ್ಲ. ಹಾಗಾಗಿ ದುಡ್ಡು ಬಂದ ಮೇಲೆ ಅವರ “Attitude”ಗಳೇ ಬದಲಾಗಿ ಬಿಟ್ಟಿದ್ದವು. “ನನ್ನ ದುಡ್ಡು, ನಾನು ಖರ್ಚು ಮಾಡುತ್ತೇನೆ” ಎನ್ನಲಾರಂಭಿಸಿದರು. ನಿಮಗೆ ಜವಾಬ್ದಾರಿಯೇ ಇಲ್ಲ, ನಿಮ್ಮಿಂದಾಗಿ ಎಲ್ಲರಿಗೂ ಸಮಸ್ಯೆಯಾಗುತ್ತಿದೆ ಎಂದು ಯಾರಾ ದರೂ ನೋವು ತೋಡಿಕೊಂಡರೆ, “ಟ್ಯಾಕ್ಸ್ ಕಟ್ಟಲ್ವಾ, ನಾವು ಕಟ್ಟುತ್ತಿರುವ ಟ್ಯಾಕ್ಸ್‌ನಿಂದಾಗಿಯೇ ಸರಕಾರ ನಡೆಯುತ್ತಿದೆ” ಎಂಬ ಉಡಾಫೆಯ ಮಾತುಗಳನ್ನು ಹೇಳಲಾರಂಭಿಸಿದರು. ಅರ್ಹತೆ ಮೀರಿ ಸಿಕ್ಕಿದ ಸಂಬಳ ‘ಪ್ರಾಯ ಬರುವ ಮುನ್ನದ ಮದ’ಕ್ಕೆ ಕಾರಣವಾಯಿತು. ಹಾಗಾಗಿ ತಮಗೂ ಸಾಮಾಜಿಕ ಜವಾಬ್ದಾರಿ (ಸೋಷಿಯಲ್ ರೆಸ್ಪಾನ್ಸಿಬಿಲಿಟಿ) ಇದೆ ಎಂಬುದು ಇವರಿಗೆ ಅರ್ಥವಾಗಲೇ ಇಲ್ಲ.

ನಮ್ಮ ಸ್ವಾತಂತ್ರ್ಯ ಚಳವಳಿಯನ್ನು ತೆಗೆದುಕೊಳ್ಳಿ.

ಆಗಲೂ ಆಗರ್ಭ ಶ್ರೀಮಂತರಿದ್ದರು. ಮೋತಿ ಲಾಲ್ ನೆಹರು, ಜಮ್ನಾ ಲಾಲ್ ಬಜಾಜ್, ಬಿರ್ಲಾ ಅವರಂತಹ ಕೋಟ್ಯಧಿಪತಿಗಳು ಬಂಗಲೆಯಲ್ಲಿ ಆಡಂಬರದ ಜೀವನ ನಡೆಸಬಹುದಿತ್ತು. ಆದರೆ ಭೋಗದ ಆಸೆ ಬಿಟ್ಟ ಅವರು, ಸ್ವಾತಂತ್ರ್ಯ ಚಳವಳಿಯಲ್ಲಿ ತೊಡಗಿದ್ದವರಿಗೆ ಹಣಕಾಸು ನೆರವು ನೀಡುವ ಜತೆಗೆ ಮನೆಯಿಂದ ಹೊರಬಂದು ಬ್ರಿಟಿಷರ ವಿರುದ್ಧ ಸ್ವತಃ ಬೀದಿಗಿಳಿದಿದ್ದರು. ಒಬ್ಬ ಸಾಮಾನ್ಯ ಭಾರತೀಯನ ಮಧ್ಯೆ ಸಾಮಾನ್ಯನಾಗಿ ಹೋರಾಡಿದರು. ಅಂತಹ ಸರಳ ನಡೆ, ನುಡಿ ಹಾಗೂ ಜೀವನದ ಮೂಲಕ ಎಲ್ಲರಿಗೂ ಒಂದು ಮೇಲ್ಪಂಕ್ತಿ ಹಾಕಿಕೊಟ್ಟರು. ಅವರ ವೇಷ-ಭೂಷಣಗಳೂ ಯಾರ ಕಣ್ಣುಕುಕ್ಕುವಂತಿರಲಿಲ್ಲ. ಅವರು ಶ್ರೀಮಂತರು ಎಂದು ಯಾರಿಗೂ ಅನಿಸಲಿಲ್ಲ. ಅಂತಹ ಶ್ರೀಮಂತರೇ ಸಾಮಾನ್ಯರಂತೆ ಹೋರಾಡುತ್ತಿದ್ದಾರೆ, ಇನ್ನು ನಾವು ಸುಮ್ಮನೆ ಕುಳಿತುಕೊಳ್ಳುವುದಾದರೂ ಹೇಗೆ ಎಂಬ ಭಾವನೆ ಇತರರಲ್ಲಿ ಮೂಡತೊಡಗಿತು. ಹೀಗೆ ದೇಶವೇ ಒಂದಾಗಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿತು.

ಇವತ್ತು ಅಂತಹ ಮನಸ್ಥಿತಿಯನ್ನು ಕಾಣಲು ಸಾಧ್ಯವಿಲ್ಲ.

ಅದರಲ್ಲೂ ಈ ‘First Time Rich’ ಅಥವಾ ‘Neo-Rich’ ಅಥವಾ Neo-Capitalists’ಗಳಿದ್ದಾರಲ್ಲಾ ಅವರು “ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧರಾತ್ರಿಯಲ್ಲಿ ಕೊಡೆ ಹಿಡಿದ” ಎಂಬ ನಾಣ್ನುಡಿಯನ್ನು ನಿಜವಾಗಿಸಲಾರಂಭಿಸಿದರು. ಇಂತಹ ವರ್ತನೆಯನ್ನು ಕಂಪನಿಗಳು ಬಹಳ ಚೆನ್ನಾಗಿಯೇ ಅರ್ಥಮಾಡಿಕೊಂಡವು. ಮೊದಲೆಲ್ಲ ಬ್ಯಾಂಕ್‌ನಲ್ಲಿ ಒಂದು ಅಕೌಂಟ್ ತೆರೆಯಬೇಕೆಂದರೆ ಅದೇ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವ ಮತ್ತೊಬ್ಬರ ಸಹಿ ಬೇಕಿತ್ತು, ಬ್ಯಾಂಕ್ ಮೇನೇಜರ್ ಎದುರು ಕೈಕಟ್ಟಿ ನಿಂತುಕೊಂಡು ತನಗೇಕೆ ಅಕೌಂಟ್ ಬೇಕೆಂದು ಮನವರಿಕೆ ಮಾಡಿಕೊಡಬೇಕಿತ್ತು, ಖಾತೆ ತೆರೆಯುವಾಗ ಇಂತಿಷ್ಟು ಠೇವಣಿ  ಇಡಬೇಕಿತ್ತು. ಆದರೆ ಐಟಿ ಕ್ಷೇತ್ರ ಭಾರತದಲ್ಲಿ ಉಚ್ಛ್ರಾಯ ಸ್ಥಿತಿಗೆ ತಲುಪುವ ಜತೆಗೆ ಖಾಸಗಿ ಬ್ಯಾಂಕ್‌ಗಳೂ ಆಗಮಿಸಿದವು. ಒಬ್ಬ ಎಂಜಿನಿಯರ್ ಕೆಲಸಕ್ಕೆ ಸೇರಿದ ದಿನವೇ ಕಂಪನಿಗಳು ಆತನ ಕೈಗೊಂದು ಪಾಸ್ ಮತ್ತು ಚೆಕ್ ಬುಕ್, ಎಟಿಎಂ ಕಾರ್ಡ್ ಜತೆಗೊಂದು ಕ್ರೆಡಿಟ್ ಕಾರ್ಡ್ ಕೊಡಲಾರಂಭಿಸಿದವು. ದುಡ್ಡು ಬಿಡಿಸಿಕೊಳ್ಳಲು ಎಟಿಎಂ, ಖರ್ಚು ಮಾಡಲು ಕ್ರೆಡಿಟ್ ಕಾರ್ಡ್. ಅಂದರೆ ಕಾಸು ಕೊಟ್ಟ ಕಂಪನಿಗಳು ಅದನ್ನು ಖರ್ಚು ಮಾಡುವ ದಾರಿಯನ್ನೂ ತೋರಿದವು. ಅಷ್ಟಕ್ಕೂ ಸರಕಾರವೆಂಬುದು “Welfare Oriented” ಆಗಿದ್ದರೆ, ಕಂಪನಿಗಳೇನಿದ್ದರೂ “Profit oriented”. ಉದ್ಧಾರ ಮಾಡುವುದಕ್ಕಿಂತ ಎಷ್ಟು ಖರ್ಚು ಮಾಡಿಸಬಹುದು, ಎಷ್ಟು ಗಿಟ್ಟುತ್ತದೆ ಎಂಬುದನ್ನೇ ಲೆಕ್ಕಹಾಕುತ್ತವೆ. ಇಪ್ಪತ್ತೆರಡು, ಇಪ್ಪತ್ಮೂರು ವರ್ಷ ಇಂತಹ ತಂತ್ರಗಳನ್ನು ಅರ್ಥಮಾಡಿಕೊಳ್ಳುವ ವಯಸ್ಸಲ್ಲ.  ‘ನಾವು ದುಡಿದಿದ್ದನ್ನು ನಾವೇ ತಿನ್ನಬೇಕು’ ಎಂಬ ಮನಸ್ಥಿತಿ ನಮ್ಮ ಯುವಜನಾಂಗದಲ್ಲಿ ಬೇರು ಬೀಡಲು ಆರಂಭಿಸಿತು. “ನಮ್ಮಪ್ಪ ಹೊಟ್ಟೆ-ಬಟ್ಟೆ ಕಟ್ಟಿಕೊಂಡು ನಿವೃತ್ತಿಯಾಗುವವರೆಗೂ ದುಡಿದ, ಈಗ ಅನುಭವಿಸಲು ಆರೋಗ್ಯವೇ ಸರಿಯಿಲ್ಲ” ಅಂತ ಅದಕ್ಕೊಂದು ಸಮಜಾಯಿಷಿಯನ್ನೂ ಕಂಡುಕೊಂಡರು. ಭವಿಷ್ಯಕ್ಕೆ ಕೂಡಿಡುವ ಬಗ್ಗೆ ಯೋಚಿಸುವುದನ್ನೇ ನಿಲ್ಲಿಸಿದರು. “ನನ್ನ ದುಡ್ಡು-ನಾನು ಖರ್ಚು ಮಾಡುತ್ತೇನೆ, ನಾನು ದುಡಿಯು ತ್ತೇನೆ-ನಾನೇ ತಿನ್ನುತ್ತೇನೆ” ಎಂಬ ಧೋರಣೆ ಜೀವನವನ್ನೇ ದಿಕ್ಕುತಪ್ಪಿಸಲಾರಂಭಿಸಿತು. ‘ಇಂದು ಕಷ್ಟಪಟ್ಟರೆ ನಾಳೆ ಸುಖ’ ಅಲ್ಲ, ‘ಬೆಳಗ್ಗೆ ಕಷ್ಟಪಟ್ಟರೆ ಸಂಜೆಯೇ ಸುಖ ಅನುಭವಿಸಬೇಕು’, “ನಾನು, ನನ್ನದು, ನಾನೇ”… ಇವುಗಳು ಎಂತಹ ಪರಿಸ್ಥಿತಿಯನ್ನು ಸೃಷ್ಟಿಸಿದವು ಎಂದರೆ ಅವರ “ವರ್ಕ್ ಕಲ್ಚರ್” ಮೇಲೆಯೇ ಪರಿಣಾಮ ಬೀರಲಾರಂಭಿಸಿದವು.

ಐಟಿಯವರು ಒಂಥರಾ “Salary oriented workers” ಆಗಿ ಬಿಟ್ಟರು.

ಅವರದ್ದೇ ಆದ ಒಂದು “ವರ್ಕ್ ಕಲ್ಚರ್” ಏನಿದೆ ಹೇಳಿ? ಒಬ್ಬ ಮಿಲಿಟರಿಯವನು ಎಂದ ಕೂಡಲೇ ಜನರಿಗೆ ಶಿಸ್ತುಬದ್ಧ ಜೀವನ ನೆನಪಾಗುತ್ತದೆ. ಒಬ್ಬ ಶಿಸ್ತುಬದ್ಧ ಜೀವನ ನಡೆಸುತ್ತಿದ್ದಾನೆ ಎಂದರೆ ಕೂಡ, ‘ಅವನು ಬಿಡಪ್ಪ ಶಿಸ್ತಿನ ಸಿಪಾಯಿ’ ಎಂದು ಜನ ಹೇಳುವುದನ್ನು ಕಾಣಬಹುದು. ಮೇಷ್ಟ್ರು ವಿಷಯಕ್ಕೆ ಬಂದಾಗ ಥಟ್ಟನೆ “ಗುರು” ಎಂಬ ಭಾವನೆ ಮೂಡುತ್ತದೆ. ಒಬ್ಬ ವಿeನಿ ಎಂದ ಕೂಡಲೇ ‘ದೇಶ ಸೇವೆ’ಯ ನೆನಪಾಗುತ್ತದೆ. ಅಂದರೆ ಯಾವುದೇ ವೃತ್ತಿಗಳನ್ನು ತೆಗೆದುಕೊಳ್ಳಿ. ಅವುಗಳೆಲ್ಲವೂ ಮೂಲತಃ ವೃತ್ತಿಗಳೇ ಆಗಿದ್ದರೂ, ಆ ವೃತ್ತಿಯಲ್ಲಿರುವವರೂ ಸಂಬಳ ಪಡೆಯುವವರೇ ಆಗಿದ್ದರೂ, ಆ ವೃತ್ತಿಗಳಿಗೆ ಅವುಗಳದ್ದೇ ಒಂದು ವೈಶಿಷ್ಟ್ಯ, ಗುಣ-ಲಕ್ಷಣಗಳಿವೆ. ಆದರೆ ಐಟಿ ಎಂದ ಕೂಡಲೇ ಏನು ನೆನಪಾಗುತ್ತದೆ? ಐಟಿ ಬೂಮ್ ಪ್ರಾರಂಭವಾಗಿ ೧೫ ವರ್ಷಗಳೇ ಆಗಿದ್ದರೂ ಅವರು ಏನು ಮಾಡುತ್ತಿದ್ದಾರೆ ಎಂಬುದು ಒಬ್ಬ ಸಾಮಾನ್ಯ ವ್ಯಕ್ತಿಗೆ ಇಂದಿಗೂ ಅರ್ಥವಾಗಿಲ್ಲ. ಐಟಿ ಎಂದ ಕೂಡಲೇ ಎಲ್ಲರಿಗೂ ನೆನಪಾಗುವುದು ಬರೀ ದುಡ್ಡು!!

ಹಾಗಂತ ಜನರನ್ನು ದೂರಿ ಪ್ರಯೋಜನವಿಲ್ಲ.

‘ದುಡ್ಡಿಗಿಂತ ಕಸುಬು ಕಲಿಯಬೇಕು’ ಎಂಬ ಮೆಂಟಾಲಿಟಿ ಐಟಿಯವರಲ್ಲಿ ಬರಲೇ ಇಲ್ಲ. ಸೋಮವಾರ ಬಂದರೆ ಯಾವಾಗ ಶುಕ್ರವಾರ ಬರುತ್ತದೋ ಎಂಬ ಮನಸ್ಥಿತಿ.  ಇಂತಹ ಮನಸ್ಥಿತಿಯಿಂದಾಗಿ, ಎಲ್ಲಿ ಹುಲ್ಲು ಚೆನ್ನಾಗಿ ಬೆಳೆದಿದೆಯೋ ಅಲ್ಲಿಗೆ ಹಸುಗಳನ್ನು ಹೊಡೆದುಕೊಂಡು ಹೋಗುತ್ತಾನಲ್ಲಾ ಅಂತಹ ಕೌಬಾಯ್‌ನಂತಾದರು. ಅಂದರೆ ‘ಜಾಸ್ತಿ ಸಿಕ್ಕುವ ಕಡೆಗೆ ಹೋಗುವ’ ಕೌಬಾಯ್ ಮೆಂಟಾಲಿಟಿ. ವೃತ್ತಿ ನಿಷ್ಠೆ ಇವರಿಗೆ ಬರಲೇ ಇಲ್ಲ, ಅವರ ನಿಷ್ಠೆಯೇನಿದ್ದರೂ ದುಡ್ಡಿಗೆ. ಹಾಗಾಗಿ ಐಟಿ ಕ್ಷೇತ್ರದಲ್ಲಿ ಕತ್ತೆಯಂತೆ ದುಡಿದರೂ ಒಳ್ಳೆಯ ‘ವರ್ಕ್ ಕಲ್ಚರ್’ ಬರಲೇ ಇಲ್ಲ. ಅವರಿಗೆ ದುಡ್ಡಿನ ‘ಪ್ರಮಾಣ’ದ ಅರಿ ವಾಯಿತಾದರೂ ಅದರ ‘ಮೌಲ್ಯ’ದ ಅಂದಾಜು ಸಿಗಲಿಲ್ಲ. ಕಿಸೆಯಿಂದ ನೋಟನ್ನು ಎಳೆದುಕೊಡುವ ಮೊದಲು, ವಸ್ತುವಿನ ನೈಜ ಬೆಲೆಯನ್ನು ನಾಲ್ಕಾರು ಕಡೆ ವಿಚಾರಿಸಿ ಕೊಡಬೇಕು, ಕೇಳಿದ ಕೂಡಲೇ ಕೇಳಿದಷ್ಟನ್ನು ಕೊಡಬಾರದು, ಅದರಿಂದ ದುಡ್ಡಿಲ್ಲದವರ ಮೇಲೆ ದುಷ್ಪರಿಣಾಮವಾಗುತ್ತದೆ ಎಂಬ ಯೋಚನೆಯೇ ಅವರ ಮನಸ್ಸಿನಲ್ಲಿ ಬರಲಿಲ್ಲ. ನಮ್ಮಪ್ಪ ಪೈಸಾ ಪೈಸಾ ಲೆಕ್ಕಹಾಕಿ ಕೂಡಿಟ್ಟಿದ್ದರಿಂದ, ಮನೆ ಖರ್ಚಿಗೆಂದು ಅಪ್ಪ ಕೊಟ್ಟಿದ್ದರಲ್ಲಿಯೂ ಅಮ್ಮ ಜಿಗುಟಿ ಕೂಡಿಹಾಕಿದ್ದರಿಂದ ನಮಗೆ ಒಳ್ಳೆಯ ಶಿಕ್ಷಣ ಪಡೆದುಕೊಳ್ಳುವ ಅವಕಾಶ ಲಭ್ಯವಾಯಿತು, ನಾವೂ ಕೂಡಿಡಬೇಕು, ಕಂಡಾಪಟ್ಟೆ ಖರ್ಚು ಮಾಡಿದರೆ ಮನೆಯೂ ಹಾಳಾಗುತ್ತದೆ, ಕಾಸಿಲ್ಲದವರ ಮೇಲೂ ಕೆಟ್ಟ ಪರಿ ಣಾಮವಾಗುತ್ತದೆ, ಇತರರಲ್ಲಿ ಹತಾಶೆ ನೆಲೆಗೊಳ್ಳಬಹುದು. ಈ ಯಾವ ಅಂಶಗಳ ಬಗ್ಗೆಯೂ ತಲೆಕೆಡಿಸಿಕೊಳ್ಳಲಿಲ್ಲ.
ಒಂದು ಹಂತದವರೆಗೂ ಸುಮ್ಮನಿದ್ದ ಕೆಲವು ಜನರು, ಐಟಿ ಯವರ ಕಿಸೆ ಮೇಲೆ ಕಣ್ಣುಹಾಕಲಾರಂಭಿಸಿದರು.

ಇವತ್ತು ಶಿವಮೊಗ್ಗ, ಮಡಿಕೇರಿ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ತೋಟದ ಮನೆಗಳ ಮುಂದೆಲ್ಲ “ಹೋಮ್ ಸ್ಟೇ” ಎಂಬ ಬೋರ್ಡು ನೇತು ಹಾಕಿಕೊಂಡಿರುವುದನ್ನು ಕಾಣಬಹುದು. ವಾರದ ಐದು ದಿನ ದುಡಿದು ಶನಿವಾರ, ಭಾನುವಾರವೂ ಬೆಂಗಳೂರಲ್ಲೇ ಇದ್ದು ಹೊಗೆ ಕುಡಿಯಲು ಯಾವ ಟೆಕ್ಕಿ ಕೂಡ ಇಷ್ಟಪಡುವುದಿಲ್ಲ. ಶುಕ್ರವಾರ ರಾತ್ರಿಯೇ ‘ಇನೋವಾ’ ಬುಕ್ ಮಾಡಿ ಮಲೆನಾಡಿನ ಕಡೆಗೆ ಹೊರಟು ಬಿಡುತ್ತಾರೆ. ಇವರಿಂದಾಗಿ ಹಳ್ಳಿಯವರು ಯಾವ ಸ್ಥಿತಿಗೆ ಬಂದಿದ್ದಾರೆ ಎಂದರೆ ಸ್ವಂತ ಮನೆಯನ್ನೇ ಟೆಕ್ಕಿಗಳಿಗೆ ಬಿಟ್ಟುಕೊಟ್ಟು ಶೆಡ್‌ನಲ್ಲಿ ಬಿಡಾರ ಹೂಡಿದ್ದಾರೆ. “ಒಂದೆರಡು ದಿನ ಮನೆ ಬಿಟ್ಟು ಕೊಟ್ಟರೆ ದಿನಕ್ಕೆ ಕನಿಷ್ಠ ಐದಾರು ಸಾವಿರ ರೂ. ಸಿಗುತ್ತದೆ” ಎಂಬ ಲಾಭದ ಯೋಚನೆ. ಒಂದು ದಿನಕ್ಕೆ ‘ಅಷ್ಟೊಂದು’ ಚಾರ್ಜ್ ಮಾಡಬೇಕಾದ ಅಗತ್ಯವಿದೆಯೇ ಎಂದು ಕೇಳಿದರೆ, “ಯಾರಪ್ಪನ ದುಡ್ಡು ಕೊಡುತ್ತಾರೆ, ತಿಂಗಳಿಗೆ ಮೂವತ್ತು ನಲ್ವತ್ತು ಸಾವಿರ ಸಿಗುತ್ತದಲ್ವಾ?” ಎಂದು ಕಾರಣ ನೀಡುತ್ತಾರೆ. ‘ಅಕಸ್ಮಾತ್ ನಾವು ಕಡಿಮೆ ಚಾರ್ಜ್ ಮಾಡಿದರೆ ಕ್ವಾಲಿಟಿ ಸರಿಯಿಲ್ಲ ಅಂತ ಐಟಿಯವರು ಭಾವಿಸುತ್ತಾರೆ’ ಎಂದು ಸಬೂಬು ನೀಡುತ್ತಾರೆ. ಹೀಗೆ ವಾರಾಂತ್ಯದಲ್ಲಿ ಕಾಡುದಾರಿ ಹಿಡಿಯುವ, ತೋಟದ ಮನೆ ಹುಡುಕುವ ಐಟಿಯವರಿಂದಾಗಿ ‘ಹೋಮ್ ಸ್ಟೇ’, ‘ಮಾಲ್’ಗಳ ರೂಪದಲ್ಲಿ ಪರಸ್ಪರ ದೋಚುವ ಕೆಲಸ ಆರಂಭವಾಯಿತು. ಇತ್ತ ಐಟಿ ಎಂಬ ದುಡ್ಡು ಕೊಡುವ ‘ಜಾಬ್ ಮಾರ್ಕೆಟ್’ನಿಂದ ‘ಮ್ಯಾರೇಜ್ ಮಾರ್ಕೆಟ್’ ಕೂಡ ರಂಗೇರಿತು. ಬಿಕಾಂ, ಬಿಎಸ್ಸಿ ಓದಿದವಳೂ ತನ್ನ ಅರ್ಹತೆ ಎಷ್ಟೇ ಇದ್ದರೂ ಐಟಿ ಗಂಡನೇ ಬೇಕು ಎನ್ನಲಾರಂಭಿಸಿದ್ದಳು. ಐಟಿ ಅಲ್ಲದವರು ಮೂರು ಕಾಸಿಗೂ ಬೇಡದವರು ಎಂಬ ಭಾವನೆ ಸೃಷ್ಟಿಯಾಗಿ, ಫೀಲಿಂಗ್ಸ್ ಕೂಡ ‘ಮಾರ್ಕೆಟ್ ಓರಿಯೆಂಟೆಡ್’ ಆಗಿತ್ತು. ಈ ಐಟಿ ಉಪಟಳ ಎಷ್ಟಾಗಿತ್ತು ಎಂದರೆ ಇತರ ವೃತ್ತಿಗಳಲ್ಲಿರುವವರು ತಮ್ಮ ಸಂಬಳ ಎಷ್ಟೆಂದು ಹೇಳಿಕೊಳ್ಳುವುದಕ್ಕೂ ನಾಚಿಕೆ, ಮುಜುಗರಪಟ್ಟುಕೊಳ್ಳಬೇಕಾದ ಪರಿಸ್ಥಿತಿ ಇತ್ತು. ಈ ನಾಡಲ್ಲಿ ಬಡವರಿಗೆ ಜಾಗವೇ ಇಲ್ಲ, ಬಡವರೇ ಇರಬಾರದು ಎಂಬ ಪರಿಸ್ಥಿತಿ ಸೃಷ್ಟಿ ಯಾಗುತ್ತಿತ್ತು.

ಖಂಡಿತ ದುಡ್ಡು ಎಲ್ಲರೂ ಇಷ್ಟಪಡುವಂತಹ ವಸ್ತುವೇ.

ಆದರೆ ದುಡ್ಡಿನ ಒಳಹರಿವಿನಿಂದ ಬರುವ ‘ಎಕಾನಮಿಕ್ ಎಂಪವರ್‌ಮೆಂಟ್’ ಅಂತಿಮವಾಗಿ ‘ಸೋಷಿಯಲ್ ಎಂಪವರ್ ಮೆಂಟ್’ನಲ್ಲಿ ಪರ್ಯವಸಾನಗೊಳ್ಳಬೇಕಿತ್ತು. ಆದರೆ ಆಗಿ ದ್ದೇನು? ಐಟಿ ಕಂಪನಿಗಳು ಹಾಗೂ ಉದ್ಯೋಗಿಗಳ ಪ್ರಕಾರ ಮೂರು ತಿಂಗಳಿಗೊಮ್ಮೆ ಯಾವುದಾದರೂ ಅನಾಥಾಲಯ, ವೃದ್ಧಾಶ್ರಮಗಳಿಗೆ ಭೇಟಿ ಕೊಟ್ಟು, ಒಂದಿಷ್ಟು ಸಮಯ ಕಳೆದು, ನೂರು ರೂ. ನೋಟನ್ನಿಟ್ಟು ಹಿಂದಿರುಗುವುದೇ ಮಹಾನ್ ಸಾಮಾಜಿಕ ಕಾರ್ಯವಾಗಿ ಬಿಟ್ಟಿದೆ. ಟ್ಯಾಕ್ಸ್ ಕಟ್ಟುವುದೇ ಈ ಸಮಾಜ ಹಾಗೂ ಸರಕಾರಕ್ಕೆ ನಾವು ಕೊಡುತ್ತಿರುವ ದೊಡ್ಡ ಕೊಡುಗೆ ಎಂದು ಭಾವಿಸಿದ್ದಾರೆ. ಹಾಗಾಗಿಯೇ ಕಳಪೆ ರಸ್ತೆ, ಲೋಡ್‌ಶೆಡ್ಡಿಂಗ್ ಬಗ್ಗೆ ಹರಿಹಾಯುವ ಐಟಿ ದೊರೆಗಳಿಗೆ ರಸ್ತೆ ಅಭಿವೃದ್ಧಿ, ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಬಂಡವಾಳ ತೊಡಗಿಸುವುದೂ ಕೂಡ ಸಾಮಾಜಿಕ ಸೇವೆ, ಜವಾಬ್ದಾರಿ ಎಂದನಿಸುವುದಿಲ್ಲ. ಈ ವಿಷಯದಲ್ಲಿ ದೇಶ ಕಟ್ಟಿದ ಟಾಟಾ, ಬಿರ್ಲಾ ಇವರಿಗೆ ಮಾದರಿಯಾಗುವುದಿಲ್ಲ. ಇನ್ನು ಇಂತಹ ಮಾಲೀಕರ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರಿಂದ ಸಾಮಾಜಿಕ ಜವಾಬ್ದಾರಿಯನ್ನು ನಿರೀಕ್ಷಿಸಲು ಸಾಧ್ಯ?

ಅಷ್ಟೇ ಅಲ್ಲ, ಇವತ್ತು ಪ್ರಗತಿಯ ಮಾನದಂಡಗಳೇ ಬದಲಾಗಿ ಬಿಟ್ಟಿವೆ. ಸೆಲ್‌ಫೋನ್‌ಗಳ ಸಂಖ್ಯೆ ಇಷ್ಟು ಹೆಚ್ಚಾಗಿದೆ, ಟೆಲಿಕಾಂ ಕ್ಷೇತ್ರ ಇಷ್ಟು ಗತಿಯಲ್ಲಿ ವೃದ್ಧಿಯಾಗುತ್ತಿದೆ ಎಂಬುದರ ಮೇಲೆ ಅಭಿವೃದ್ಧಿಯನ್ನು ಅಳೆಯುತ್ತಾರೆ. ಸೆಲ್‌ಫೋನ್ ಸಂಖ್ಯೆ ಹೆಚ್ಚಳ ಪ್ರಗತಿಯ ಸಂಕೇತವೇ? ಒಂದು ಪುಟ್ಟ ಪಟ್ಟಣದ ಕೂಲಿ ಕಾರ್ಮಿಕನ ಕೈಯಲ್ಲೂ ವಿಚಿತ್ರ ನಮೂನೆಯ ಮೊಬೈಲ್ ಸೆಟ್‌ಗಳನ್ನು ಕಾಣಬಹುದು. ಆತನಿಗೆ ಕೂಲಿಯಿಂದ ದಿನಕ್ಕೆ ೧೨೦ ರೂ. ಬಂದರೆ, ಅದರಲ್ಲಿ ೫೦ ರೂ. ಕಿವಿ ಬಳಿ ಮೊಬೈಲ್ ಇಟ್ಟುಕೊಂಡು “ಹಲೋ……” ಎಂದು  ಕೂಗುವುದಕ್ಕೇ ಬೇಕು. ಎಷ್ಟು ಜೋರಾಗಿ ಕೂಗಿದರೂ ಅತ್ತ ಕಡೆ ಇರುವವರಿಗೆ ಎಷ್ಟು ಕೇಳಬೇಕೋ ಅಷ್ಟೇ ಕೇಳುತ್ತದೆ ಎಂಬ ಸಾಮಾನ್ಯ ಅರಿವು  ಇಲ್ಲದವರೂ ಮೊಬೈಲ್ ದಾಸರಾಗಿ ಬಿಟ್ಟಿದ್ದಾರೆ. ಇವು ಐಟಿ ಹಾಗೂ ಜಾಗತೀಕರಣ ಪ್ರೇರಿತ ಬೆಳವಣಿಗೆಗಳು. ಇವುಗಳನ್ನು ಯಾವ ದೃಷ್ಟಿಯಲ್ಲಿ ಪ್ರಗತಿ ಎನ್ನುತ್ತೀರಿ? ಹಣ, ಶ್ರೀಮಂತಿಕೆ ಬಂದ ಕೂಡಲೇ ಒಂದು ಸಮಾಜ ಉದ್ಧಾರವಾಗುವುದಿಲ್ಲ, ಸಮಗ್ರ ಅಭಿವೃದ್ಧಿ ಹೊಂದುವುದಿಲ್ಲ ಎಂಬುದಕ್ಕೆ ಹಾಲಿ ಭಾರತವೇ ದೊಡ್ಡ ಉದಾಹರಣೆ.

ಶಿವಮೊಗ್ಗ, ಶಿರಸಿ, ಸಾಗರ ಭಾಗದಲ್ಲೊಂದು ವಿಚಿತ್ರ ಸಮಸ್ಯೆ ಎದುರಾಗಿದೆ. ಎಷ್ಟೋ ಅಪ್ಪ-ಅಮ್ಮಂದಿರು ಅಂಗೈ ಅಗಲದ ಅಡಕೆ ತೋಟದಲ್ಲಿ ಕಷ್ಟಪಟ್ಟು ದುಡಿದು, ಬೆಲೆಯಲ್ಲಿನ ಏರು-ಪೇರನ್ನೂ ಸಹಿಸಿಕೊಂಡು ಮಕ್ಕಳನ್ನು ಸಾಫ್ಟ್‌ವೇರ್ ಎಂಜಿನಿಯರ್‌ಗಳಾಗಿ ಮಾಡಿದ್ದಾರೆ. ಮಕ್ಕಳು ದುಡಿಯಲು ಆರಂಭಿಸಿದ ನಂತರ ಮನೆ, ಊರು ಉದ್ಧಾರವಾಗಬೇಕಿತ್ತು ತಾನೇ? ಒಂದು ವೇಳೆ ದುಡ್ಡಿನಿಂದ ಪ್ರಗತಿ ಹೆಚ್ಚಾಗಿದ್ದರೆ ಊರಲ್ಲಿರುವ ತೋಟ ಅರ್ಧ, ಒಂದು ಎಕರೆಯಿಂದ ಎರಡು, ಮೂರು ಎಕರೆಗಳಾಗಬೇಕಿತ್ತು ಅಲ್ಲವೆ? ಕನಿಷ್ಠ ಅಭಿವೃದ್ಧಿಯನ್ನಾದರೂ ಕಾಣಬೇಕಿತ್ತು ಅನಿಸುವು ದಿಲ್ವಾ? ಆದರೆ ಈ ಭಾಗದ ಮಲೆನಾಡಿನಲ್ಲಿ, ‘ಕೆಲಸಕ್ಕೆ ಜನರೇ ಸಿಗುತ್ತಿಲ್ಲ, ಅಡಕೆಗೆ ಬೆಲೆಯೂ, ಮಕ್ಕಳಿಗೆ ತೋಟದ ಮೇಲೆ ಆಸಕ್ತಿಯೂ ಇಲ್ಲ’ ಎಂಬ ಕೊರಗು ಕೇಳಿಬರುತ್ತಿದೆ. ಊರಲ್ಲಿದ್ದ ತೋಟವನ್ನು ಕೇರಳದ ಕಾಕಾಗಳಿಗೆ ಮಾರಿ ಬೆಂಗಳೂರು ಸೇರುತ್ತಿದ್ದಾರೆ. ಅಪ್ಪ-ಅಮ್ಮ ಯಾವ ಕೃಷಿಯಿಂದಾಗಿ ತಮ್ಮನ್ನು ಓದಿಸಿ ವಿದ್ಯಾ ವಂತರನ್ನಾಗಿ ಮಾಡಿದರೋ ಆ ಕೃಷಿಯ ಬಗ್ಗೆಯಾಗಲಿ, ಭೂಮಿಯ ಬಗ್ಗೆಯಾಗಲಿ ಮಕ್ಕಳಿಗೆ ಪ್ರೀತಿಯೇ ಇಲ್ಲದಾಗಿದೆ. ಮುಂದೊಂದು ದಿನ ಕಾಕಾಗಳು ಶಿರಸಿ, ಸಾಗರ, ಬನವಾಸಿಗಳನ್ನು ಮತ್ತೊಂದು ಭಟ್ಕಳವನ್ನಾಗಿಸಿದರೂ ಆಶ್ಚರ್ಯ ವಿಲ್ಲ!
ಇದೇನೇ ಇರಲಿ, ಎಲ್ಲ ಭಾಗಗಳ ಜನರೂ ಒಂದಿಲ್ಲೊಂದು ನೆಪ ಹೇಳಿಕೊಂಡು, ‘ಬೆಂಗಳೂರಿನಲ್ಲಿ ದುಡ್ಡಿದೆ’ ಎಂಬ ದೂರ ದೃಷ್ಟಿಯನ್ನಿಟ್ಟುಕೊಂಡು ಬೆಂಗಳೂರು ಸೇರುತ್ತಿರುವುದರಿಂದ ವಿನಾಕಾರಣ ಎಲ್ಲದರ ಬೆಲೆಗಳೂ ಹೆಚ್ಚಾಗುತ್ತಿವೆ.

ಇಂತಹ ಒಂದು ಪರಿಸ್ಥಿತಿಯಲ್ಲಿ, ಹೋಳಿ ಹುಣ್ಣಿಮೆಯ ದಿನ ಜೋರಾಗಿ ಮಳೆ ಬಂದರೆ ಏನಾಗಬಹುದೋ ಹಾಗೆ “ಇಕನಾಮಿಕ್ ರಿಸೆಷನ್”(ಆರ್ಥಿಕ ಹಿಂಜರಿತ) ಆಗಮಿಸಿದೆ. ರಿಸೇಷನ್ ಎಂಬ ಭಾರೀ ಮಳೆಯಿಂದಾಗಿ ಬಣ್ಣ ತೊಳೆದುಹೋಗಿ ನಗ್ನದರ್ಶನವಾಗುತ್ತಿದೆ. ಇದು ದೇಶಕ್ಕೆ ಹಿನ್ನಡೆ ಎಂದು ಗೊತ್ತಿದ್ದರೂ ಅದನ್ನು ಸ್ವಾಗತಿಸಬೇಕಾದ, ಅದರಲ್ಲೂ ಒಂದು ಆಶಾಕಿರಣವನ್ನು ಕಂಡುಕೊಳ್ಳಬೇಕಾದ ಪರಿಸ್ಥಿತಿಯನ್ನು ನಾವೇ ಸೃಷ್ಟಿಸಿಕೊಂಡಿದ್ದೇವೆ. ೯/೧೧ ನಂತರ ನಮ್ಮ ಮೇಲೆ ಒಂದೇ ಒಂದು ಭಯೋತ್ಪಾದಕ ದಾಳಿಯನ್ನು ನಡೆಸಲು ಯಾರಿಗೂ ಸಾಧ್ಯವಾಗಿಲ್ಲ ಎಂದು ಬೀಗುತ್ತಿದ್ದ ಅಮೆರಿಕ ಅಸಹಾಯಕವಾಗಿ ನಿಂತಿದೆ. ಲಾಡೆನ್‌ಗೆ ಹೆದರದ ಅಮೆರಿಕ ರಿಸೆಷನ್‌ಗೆ ಬೆದರಿ ಕುಳಿತಿದೆ. ಅಮೆರಿಕವನ್ನೇ ನಂಬಿಕೊಂಡಿದ್ದ ಭಾರತದ ಐಟಿ ಕ್ಷೇತ್ರ ಕೂಡ ಕುಸಿದು ಬೀಳಲಾರಂಭಿಸಿದೆ. ಖಂಡಿತ ಐಟಿ ಕ್ಷೇತ್ರದ ಬಗ್ಗೆ ನಮಗ್ಯಾರಿಗೂ ಮತ್ಸರವಿಲ್ಲ. ಐಟಿಯಿಂದಾಗಿಯೇ ಭಾರತಕ್ಕೆ ವಿಶ್ವಮಾನ್ಯತೆ ದೊರೆಯಿತು, ಸಾಕಷ್ಟು ಬದಲಾವಣೆಗಳಾದವು ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ಆದರೆ ಐಟಿ ಕ್ಷೇತ್ರದಲ್ಲಿರುವ ಉದ್ಯೋಗಿಗಳಾಗಲಿ, ಮಾಲೀಕರಾಗಲಿ ಒಂದು ವೇಳೆ ಐಟಿ ಬಿದ್ದು ಹೋದರೆ ಏನು ಮಾಡಬೇಕು? ಎಂಬುದರ ಬಗ್ಗೆ ಎಂದೂ ಯೋಚಿಸಲಿಲ್ಲ. ೧೯೯೧ರ ನಂತರ ಅಂದರೆ ನರಸಿಂಹರಾವ್ ನೀತಿಗಳ ಲಾಭ ಪಡೆದು ರಾತ್ರೋರಾತ್ರಿ ಶ್ರೀಮಂತರಾಗಿ ಮಧ್ಯಮವರ್ಗದವರ ಹೀರೋಗಳಾದ ಐಟಿ ದೊರೆಗಳು ಅಮೆರಿಕ, ಬ್ರಿಟನ್‌ನ ದುಡ್ಡನ್ನು ಭಾರತಕ್ಕೆ ತಂದರೇ ಹೊರತು, ಆ ದುಡ್ಡಿನಿಂದ ತಂತ್ರeನವನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸ ಲಿಲ್ಲ. ಅಮೆರಿಕದ ಕಾಮಗಾರಿಗಳನ್ನು ಗುತ್ತಿಗೆ ಹಿಡಿದು ನಮ್ಮ ಸಾಫ್ಟ್‌ವೇರ್ ಎಂಜಿನಿಯರ್‌ಗಳನ್ನು ಐಟಿ ಕೂಲಿಗಳನ್ನಾಗಿ ಮಾಡಿದರೇ ಹೊರತು ಐಬಿಎಂ, ಮೈಕ್ರೋಸಾಫ್ಟ್, ಆಪಲ್‌ಗಳಂತೆ ಅಭಿವೃದ್ಧಿ ಮತ್ತು ಸಂಶೋಧನೆಗೆ (ಆರ್ ಆಂಡ್ ಡಿ) ಬಂಡವಾಳ ತೊಡಗಿಸಿ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲಿಲ್ಲ. ಹಾಗಾಗಿ ಅವರ ಕಂಪನಿಗಳಲ್ಲಿ ಕೆಲಸಕ್ಕೆ ಸೇರಿದವರೂ ಕೂಡ ಭವಿಷ್ಯದ ದೃಷ್ಟಿಯಿಂದ ದುಡ್ಡನ್ನು ಕೂಡಿಡುವ ಬದಲು ಶೋಕಿ ಬೆಳೆಸಿಕೊಂಡರು. ಇವತ್ತು ನಮ್ಮ ಯಾವ ಖ್ಯಾತನಾಮ ಐಟಿ ಕಂಪನಿಗಳ ಬಳಿ ಪೇಟೆಂಟ್‌ಗಳಿವೆ ಹೇಳಿ? ಜಾಸ್ತಿ ಕೂಲಿ ಕೊಟ್ಟಿದ್ದೇ ದೊಡ್ಡ ಸಾಧನೆಯೆಂದು ಬೀಗುವುದರ ಹೊರತು ಭಾರತದ ಐಟಿ ಕ್ಷೇತ್ರದ ಭವಿಷ್ಯವನ್ನು ಹಸನಾಗಿಟ್ಟುಕೊಳ್ಳಲು ಯಾರೂ ಪ್ರಯತ್ನಿಸಲಿಲ್ಲ. ಇವತ್ತು ಒಬ್ಬ ಐಟಿಯವನು ಕೆಲಸ ಕಳೆದುಕೊಂಡರೆ ಪ್ಯಾನಿಕ್ ಆಗುತ್ತಾನೆ. ಅವನಿಗೆ ಬೇರೆ ಕೆಲಸವೂ ಗೊತ್ತಿಲ್ಲ, ತನ್ನ ಭವಿಷ್ಯಕ್ಕಾಗಿ ಕೂಡಿಡುವುದೂ ಒಂದು ಸಾಮಾಜಿಕ ಜವಾಬ್ದಾರಿ ಎಂಬುದನ್ನೂ ಕಲಿಯಲಿಲ್ಲ.

ತ ಅರ್ಥಶಾಸ್ತ್ರಜ್ಞರಾದ ಅಮರ್ತ್ಯ ಸೇನ್ ಹಾಗೂ ಜೀನ್ ಡ್ರೆಝ್ ಅವರ “Being rich doesn’t mean being happy” ಎಂಬ ಮಾತು ನಿಜಕ್ಕೂ ಅರ್ಥಗರ್ಭಿತ. ದುಡ್ಡಿನಿಂದ ಅಭಿವೃದ್ಧಿಯನ್ನು ಅಳೆಯಲಾಗದು, ನಾಲ್ಕು ಜನ ಶ್ರೀಮಂತರಾದ ಮಾತ್ರಕ್ಕೆ ದೇಶ ಅಭಿವೃದ್ಧಿಯಾದಂತಲ್ಲ ಎಂಬುದನ್ನು ನಿರೂಪಿಸಲು ಇವರು “ಹ್ಯೂಮನ್ ಡೆವೆಲಪ್‌ಮೆಂಟ್ ಇಂಡೆಕ್ಸ್” ಎಂಬ ಹೊಸ ಮಾನದಂಡವನ್ನು ರೂಪಿಸಿದರು. ವಿಶ್ವಸಂಸ್ಥೆಯ ಸಲಹೆಗಾರರಾಗಿದ್ದಾಗ ಇವರಿಬ್ಬರುಗಳು ನೀಡಿದ ಸಲಹೆಯಿಂದಾಗಿಯೇ ಏಷ್ಯಾ ಹಾಗೂ ಆಫ್ರಿಕಾದಲ್ಲಿ ಮಕ್ಕಳಿಗೆ “ಮಧ್ಯಾಹ್ನದ ಊಟ”(ಮಿಡ್ ಡೇ ಮೀಲ್ಸ್) ಯೋಜನೆ ಯನ್ನು ಜಾರಿಗೆ ತಂದಿದ್ದು.  ೧. ಆತ್ಮಗೌರವ ಮತ್ತು ಸಮಾನ ಅವಕಾಶ, ೨. ಆರೋಗ್ಯ, ೩. ಶಿಕ್ಷಣ, ೪. ಉದ್ಯೋಗ ಎಲ್ಲರಿಗೂ ಲಭ್ಯವಾಗಬೇಕು ಎಂದು ಹೇಳಿದ್ದೂ ಇವರೇ. ಕೆಲವು ಮೂಲಭೂತ ವೃತ್ತಿಗಳ (ಫಂಡಮೆಂಟಲ್ ಆಕ್ಯುಪೇಶನ್ಸ್) ಮೇಲೆ ಸಮಾಜ ನಿಂತಿದೆ. ಇವುಗಳಾಚೆಯ ಯಾವುದೋ ಒಂದು ಕ್ಷೇತ್ರ ಅಸಹಜವಾಗಿ ಅಭಿವೃದ್ಧಿಯಾದರೆ, ಆ ಕ್ಷೇತ್ರದವರು ಅತಿಯಾಗಿ ವರ್ತಿಸಿದರೆ ಅದರಿಂದ ಸಮಾಜದ ಮೇಲೆ ಆಗುವುದು ಕೆಟ್ಟಪರಿಣಾಮವೇ. ಈ ಹಿನ್ನೆಲೆಯಲ್ಲಿ ಐಟಿ ಕ್ಷೇತ್ರದವರು ತಮ್ಮ ಸಾಮಾಜಿಕ ಜವಾಬ್ದಾರಿ ಹಾಗೂ ಕರ್ತವ್ಯಗಳನ್ನು ಅರ್ಥಮಾಡಿಕೊಳ್ಳಲು, False pride ನಿಂದ ಹೊರಬರುವಂತಾಗಲು, ಕೂಡಿಡುವುದನ್ನು ಕಲಿಯಲು ಇಂಥದ್ದೊಂದು ಆರ್ಥಿಕ ಹಿಂಜರಿತ ಬೇಕಿತ್ತು ಎನಿಸುತ್ತಿದೆ. ಅಷ್ಟಕ್ಕೂ ಐಟಿಯಿಂದಾಗಿ ಸಾವಿರಾರು ಕುಟುಂಬಗಳು ಉದ್ಧಾರ ವಾದವು ಎಂಬುದು ಎಷ್ಟು ಸತ್ಯವೋ, ಐಟಿಯವರ ಹಣದ ಮದದಿಂದಾಗಿ ಹತ್ತು ಪಟ್ಟು ಹೆಚ್ಚು ಕುಟುಂಬಗಳು ಸಂಕಷ್ಟಕ್ಕೂ ಸಿಲುಕಿದವು ಎಂಬುದು ಅಷ್ಟೇ ಸತ್ಯ.

ಕುರುಡು ಕಾಂಚಾಣ ಕುಣಿಯುತ್ತಲಿತ್ತು
ಕಾಲಿಗೆ ಬಿದ್ದವರ ತುಳಿಯುತ್ತಲಿತ್ತು….
ಅಂಗಾತ ಬಿತ್ತು ಹೆಗಲಾಗೆ ಎತ್ತು…
ಎಂಬ ಬೇಂದ್ರೆಯವರ ಮಾತುಗಳನ್ನು ಇನ್ನಾದರೂ ಅರ್ಥ ಮಾಡಿಕೊಳ್ಳಿ. ಒಮ್ಮೆ ಕೆಳಗೆ ಬಿದ್ದರೆ ಹೆಗಲ ಮೇಲೆಯೇ ಹೊತ್ತು ಕೊಂಡು ಹೋಗಬೇಕಾಗುತ್ತದೆ.

71 Responses to “ಕುರುಡು ಕಾಂಚಾಣ ಕುಣಿಯುತ್ತಲಿತ್ತು, ಕಾಲಿಗೆ ಬಿದ್ದವರ ತುಳಿಯುತ್ತಲಿತ್ತು!”

  1. naveenchandra says:

    grt article by pratap simha………..these it people make parties and tey r the people who started pub and bar culture……..these people always complains about bad roads etc…….but they r not willing to help poor children……….tey will make big parties every week and they have no systematic culture ie no of divorces and culprit cases r more……….

    right thing have happened to them at the right time……….

  2. seshadri says:

    The spectacle of Malenadu becoming Bhatkal (malayalle muslim dominated) is frighteningly serious. It is very real.

  3. avinash belavadi says:

    What the readers have expressed is also biased….. most of the readers have commented on your opinion about techies but not about your concern for the need of Indian IT companies to work on R&D……. we should look at the writers writing from a broader perspective which is genuinely issue based and IT employees are quoted only to explain the issue……

  4. ಮೋಹನ್ says:

    ಪ್ರತಾಪ್ ಅವರೆ… ನೀವು ಬರೆದ ಲೇಖನ ನಿಜವಾಗಲೂ ತರ್ಕಕ್ಕೆ ಎಡೆ ಮಾಡಿ ಕೊಡುತ್ತಾ ಇದೆ….. ಆದರೆ ಒ೦ದು ಮಾತ್ರ ಸತ್ಯ… ಆಗ ITಯವರು ಸಂಪಾದಿಸುತ್ತಿದ್ದ ಹಣ ನೋಡಿ ಜನ ಅಸೂಯೆ ಪಡುತ್ತಾ ಇದ್ದೊರು ಈಗ ಆತ್ಮ ತ್ರಪ್ತಿಗೆ ಹೀಗೆ ಹೇಳೋದು ಸಹಜ.. ಮೊದಲು ನೀವು ಬರೆಯುತ್ತಿದ್ದ ಲೇಖನಗಳಲ್ಲಿ ಹುರುಳು ಇರುತಿತ್ತು.. ಆದರೆ ಈ ಲೇಖನ ಮಾತ್ರ ನೀವು ಅಸಮಂಜಸವಾಗಿ ಬರೆದಿದ್ದೀರ.. ನಿಮ್ಮ ಲೆಖನ ದೇಶದ ಅಭಿವ್ರದ್ದಿಗೆ ಹೇಗೆ ಸಹಾಯಕ ಅಂತ ಸ್ವಲ್ಪ ತಿಳಿಸಿ ಪುಣ್ಯ ಕಟ್ಟಿಕೊಳ್ಳಿ…

    Criticism ಮಾಡೋದು ಸುಲಭ.. ಆದರೆ ಅದನ್ನ ಅರ್ಥಗರ್ಭಿತವಾಗಿ ಬರೆಯೋದು ಕಷ್ಟ ಅಲ್ವ 🙂

    ಮೋಹನ್
    ಬೆಂಗಳೂರು….

  5. vijay says:

    I giggle at you. sometimes people like you are really pratap simhas.

  6. HR says:

    I had read couple of your other articles and felt that the articles were pretty good… But recently when I read this new article, I was totally disappointed.

    Even though few of your points are really true, the way you have gone about writing the article seems really pathetic and not well thought out. Its like our Masala Bollywood movies with less of truth and more of nonsense.

    Anything in life has both positives and negatives and so has IT impact in India. Surely there were so many benefited from it while it has caused negative impact on some others. You cannot ignore all the good things and highlight only the darker part of it. Im sure all the ones who are negatively impacted by IT are here to praise your article…

    Being candid doest mean that you can write any crap what comes to your mind… especially, when you know that you are reaching out to so many people through your articles… So think ten times before you make (especially generalized) statements… Instead of posting comment later to explain what you really mean (patch up job), its better you write articles in a manner where it speaks for itself.

    Good Luck.

  7. pradeepa says:

    kurudu kaanchana kuniyutalittu..pratapana lekhaniyannnu kenakutalittu.. avana kai inda ee lekhana vannu baresittu..yuva janaangada hrudyakke kicchu hacchisutalitthu…

  8. Tushar says:

    Dear Pratap,
    Do good research before writing down something because readers wait for your article every satuarday. I am from Malanadu. I am not techi. but know their struggle. They have sleepless nights, work load, tension. Any indian or outside company are not so stupid to pay high. They extract whatever they could from techies, so no need for techies to be faithful to those companies. Today what our politicians starting from munciple cousilor to PM making money is the direct contribution of hard work of these these techies. I found 90% of young generation is blaming IT guys which is hiden agenda of jealousy. Some readers have pointed out that “If they are not like other techies then why should they feel bad and raise vioce against Pratap” You guys always support when Pratap writes against Aravind Adiga , Millioner Slum dog etc.If slum is sporadic in India then why do you raise vioce against such books , films ? If you are not in slum don’t raise vioce against such things.
    Dear pratap, you are vioce of Hindus. Don,t shift your thoughts.
    Waiting for good articles in future

    Tushar

  9. Chethan, Coorg says:

    Hi Pratap,

    I am forced by my friends to read your column. Its great that you have mentioned, how IT and BT affected to our culture.
    My Point is- Only IT or BT people is not responsible for what’s happening in our envn. Everyone is contributing themselves either directly or indirectly for everything.
    You have just bombarded about the IT guy. Do you know how much effort he/she has put to become an engineer. Why all cant become Engineer or Doctors. Few cant even pass 10 or 12. Bcz they( who dint pass) enjoy and waste thier time at that point of period, which engineers or doctors or any high profile people wont do. Finally after their education they are deserves to get high pay.

    Tmr if your son or daughter reads well, will you make them a high profile graduate or not? If they get more salary, does it mean that they are going to spoil culture.
    Not yet all… All fingures are not equal. Your words wont imply to all IT likes including me.

    You told that, in few places including coorg HOMESTAY kind of thing is started. Do u want the people of this place to be still where they where before 10yrs. In City, technology improves, more jobs, more salary. etc etc.. Day to day daily needs getting costly, what these people should do for their source of income. Only agriculture is not source of income. If no rain, what the farmer will do? Will you politician will help this poor farmer for his needs. He needs to look for the alternative for the safe to avoid the count of farmers death.
    Which one you want, count of farmers death or farmers homestay kind of stuff which provides him food and shelter during bad time.

    Kindly accept that few things are going wrong by IT guys, but again Everythign is not from IT guys.

    Chethan, Coorg

  10. shridhar says:

    ಹದಗೆಟ್ಟ ಆಯ್ಟಿ ಇಂಡಸ್ಟ್ರಿ ಇನ್ನಷ್ಟು ಹದಗೆಡಿಸುವ ವಿಚಾರ ಇವರದು

  11. Dr. Gururaj says:

    ಇತ್ತ ಐಟಿ ಎಂಬ ದುಡ್ಡು ಕೊಡುವ ‘ಜಾಬ್ ಮಾರ್ಕೆಟ್’ನಿಂದ ‘ಮ್ಯಾರೇಜ್ ಮಾರ್ಕೆಟ್’ ಕೂಡ ರಂಗೇರಿತು. ಬಿಕಾಂ, ಬಿಎಸ್ಸಿ ಓದಿದವಳೂ ತನ್ನ ಅರ್ಹತೆ ಎಷ್ಟೇ ಇದ್ದರೂ ಐಟಿ ಗಂಡನೇ ಬೇಕು ಎನ್ನಲಾರಂಭಿಸಿದ್ದಳು. ಐಟಿ ಅಲ್ಲದವರು ಮೂರು ಕಾಸಿಗೂ ಬೇಡದವರು ಎಂಬ ಭಾವನೆ ಸೃಷ್ಟಿಯಾಗಿ, ಫೀಲಿಂಗ್ಸ್ ಕೂಡ ‘ಮಾರ್ಕೆಟ್ ಓರಿಯೆಂಟೆಡ್’ ಆಗಿತ್ತು.

    I completely agree with your points regarding marriage market [:D]….I personally being doctorate in science and doing research in abroad, has faced lot of problem to get bride. Since people in Karnataka know only IT professionals and professionals like me are not been considered.
    Dr. Gururaj

  12. Srinivas Erappa says:

    Dear Pratap,
    Stop writing junk.
    Use you aptitude to write how to defeat or overcome the circumstances.
    Present scenario not only on IT, it’s interlinked with each and every one in the sphere. (Counting you)
    If an IT guy dropped from his work, it circuitously harms an Unloading & loading guy in the market.
    Please think wise…

    Many Thanks,
    Srinivas Erappa

  13. Hi Pratap
    Splendid..I really like the way you write and ‘am one of your fan.

    One important thing I like is the way you have connected IT and marriage.Coming from the district of Uttarkannada I have seen many instances related to this.Even a girl who has just studied upto SSLc dream of getting married to a IT guy…..she may not the full form of IT though.

    The situation is that,it does not matter how much land you have…the only thing that matters is IT and Bangalore for marriage.

    Hope people will learn and improve…Hatts off to your article

  14. Gangadhar Hegde says:

    Friends, I did not read the article and the responses completely. However, I feel both should be interesting and will read later. “ಸಾಫ್ಟ್ – ವೇರ್ ಕಂಪೆನಿಯವರು ಸ್ಥಳಿಯರಿಗೆ ಯಾಕೆ ಹೆಚ್ಚು ಅವಕಾಶ ಒದಗಿಸಲಿಲ್ಲ…?” I felt this could be a topic for discussion.
    – Gangadhar Hegde

  15. sachin says:

    It’s false notion about IT people made you to write this article.I agree they ll spend money lavishly till they get married after that they ll get responsibility, and regarding work culture the stress level due to dead line for project is high so they ve to ve some enjoyment.
    You mentioned about some great people ya really they are great but why did’t their descendants names(for some good cause) did’t appear after that in history….?

    Thanks

  16. Ravi N Rao says:

    tumba chennagi mudibandide ee lekhana.
    aadare, neevu IT Engineers kastagala bageeyu swalpa gamana kodabekittu.
    Ivattu obba auto davanu minimum charge badalu Rs 40 keluttane,( naavu IT andre atava IT Office hatra andre)
    Heege ellarigu hana beku. Innu naavu savings yelli maduvudu.

  17. s shetty says:

    so good

  18. mudiraj says:

    sir u r artcle so supers we r waiting when u r come to back

  19. Rashmi Simha says:

    Hi pratap.
    Nice article.
    But i dont agree all ur points.
    In this world, no industry or company will pay for free… they pay high and take work for that. working infront of computer more than 10 to 12 hours per day is not easy. They work and will get paid for that. Thats it.
    None of the job is high profile or Low profile.
    Hard working/Smart working people will always get paid to their job.

    Regards,
    Rashmi

  20. SRIDHAR says:

    HI
    BROTHER THESE IS SUPER ARTICLE I LIKED VERY MUCH

  21. Nandini says:

    ಅನಿಷ್ಟಕ್ಕೆಲ್ಲ ಶನೆಶ್ವರನೆ ಕಾರಣ ಅನ್ನುವಂತೆ , ಕೇವಲ ಒಂದು ಕೋನ ದಿಂದ ಯೋಚಿಸಿ ಬರೆದ ಲೇಖನ ಇದು.
    ಪ್ರತಾಪ್ ಅವರನ್ನು ಒಳಗೊಂಡಂತೆ ಹಲವಾರು ಮಂದಿ ಐ ಟಿ ಉದ್ಯೋಗಿ ಗಳನ್ನು ಏನೆಂದು ಕೊಂಡಿದ್ದರೋ ಗೊತ್ತಿಲ್ಲ. ಅವರೆಲ್ಲ sadist ಥರ ನಡೆದುಕೊಳ್ಳುತ್ತಿದ್ದಾರೆ. ಇಲ್ಲಿ ಕೆಲವೊಂದು ವಿಚಾರ ಗಳನ್ನು ಪಟ್ಟಿ ಮಾಡುತ್ತಿದ್ದೇನೆ… ಓದಿ.
    1.ಐ ಟಿ ಉದ್ಯೋಗಿ ಗಳಿಗೆ work culture ಇಲ್ವಂತೆ !!!!!!!!. ಸರಕಾರೀ ಕೆಲಸ ದವರು ಬೆಳಿಗ್ಗೆ ೧೦ ರಿಂದ ಸಂಜೆ ೫.೩೦ ಅಥವಾ ೬ ಗಂಟೆ ವರೆಗೆ ಕೆಲಸ ಮಾಡುತ್ತಾರೆ (ಆಫೀಸ್ ನಲ್ಲಿ ಇರ್ತಾರೆ. ಆದ್ರೆ ಕೆಲಸ ಮಾಡುತ್ತಾರಾ? ಗೊತ್ತಿಲ್ಲ. )
    2. ಪ್ರತಿಯೊಬ್ಬರಿಗೂ ಅವರವರ ವೃತ್ತಿಯ ಬಗ್ಗೆ ಅಭಿಮಾನ ಗೌರವ ಇರುತ್ತದೆ. ನಮ್ಮ ಐ ಟಿ ವೃತ್ತಿಯ ಬಗ್ಗೆ ಗೊತ್ತಿಲ್ಲ ದವರಿಗೆ ಈ ಕೆಲಸದ ಬಗ್ಗೆ work culture ಬಗ್ಗೆ ಹೇಗೆ ಮಾಹಿತಿ ಸಿಕ್ಕಿತು ಎಂದು ಇನ್ನು ನನಗೆ ತಿಳಿದಿಲ್ಲ.
    3..ನಾವು ಬೆಳಿಗ್ಗೆ ೮.೩೦ ರಿಂದ ರಾತ್ರಿ ಕನಿಷ್ಟ ೬.೩೦ ವರೆಗೂ ಆಫೀಸ್ ನಲ್ಲಿರುತ್ತೇವೆ. ಅಷ್ಟು ಹೊತ್ತು ಆಫೀಸ್ ನಲ್ಲಿ ಮಾಡಿದ ಪ್ರತಿ ಕೆಲಸ ವನ್ನು, ಅದಕ್ಕಾಗಿ ವಿನಿಯೋಗಿಸಿದ ಸಮಯವನ್ನು ಟೈಮ್ ಶೀಟ್ ನಲ್ಲಿ ಭರ್ತಿ ಮಾಡಿ ಬರಬೇಕು. ಸಾಫ್ಟ್ವೇರ್ ನಲ್ಲಿ ಕೆಲಸ ಮಾಡುವುದು ಜೋಕ್ ಅಲ್ಲ. ಪ್ರಾಜೆಕ್ಟ್ ಟೈಮ್ ಗೆ ಸರಿಯಾಗಿ ಮುಗಿಸಬೇಕು. ಕಷ್ಟ ಪಟ್ಟು ದುಡಿಯುತ್ತೇವೆ ಅದಕ್ಕೆ ತಕ್ಕ ಸಂಬಳ ಪಡೆಯುತ್ತೇವೆ. ನಮ್ಮ ಕೆಲಸಕ್ಕೆ ಅಷ್ಟೊಂದು ಬೆಲೆ ಕೊಡುತ್ತಾರೆ ಎಂದರೆ ಕೆಲಸದಲ್ಲಿನ ಕಷ್ಟ ಅರಿತು ಕೊಳ್ಳಿ.ಹಣ ಕೊಡುವವರು ಯಾರೂ ಸುಮ್ಮನೇ ಕೊಡುವುದಿಲ್ಲ.
    4.ಪ್ರತಾಪ್ ರವರ ಪ್ರಕಾರ, 23 ವರ್ಷಕ್ಕೆ ಕೆಲಸ ಸಿಕ್ಕಿ ಕೈ ಸಂಬಳ ಸಿಗುತ್ತದೆ ಅಂತ attitude ಬದಲಾಗುತ್ತದೆ ಯಂತೆ. ಹಾಗೆಂದು ನಾವುಗಳು ನಮ್ಮ ತಂದೆ ತಾಯಂದಿರಿಗೆ ಗೌರವ ಕೊಡದೇ ನಡೆದು ಕೊಳ್ಳುವುದಿಲ್ಲ.
    ದೇವರ ಬಗ್ಗೆ , ಸಂಪ್ರದಾಯದ ಬಗ್ಗೆ ಭಯ ಭಕ್ತಿ ಕಳೆದು ಕೊಂಡಿಲ್ಲ. ನಮಗೂ ತಿಳಿದಿದೆ ನಮ್ಮ ತಂದೆ ತಾಯಂದಿರು ನಮಗಾಗಿ ಎಷ್ಟು ಕಷ್ಟ ಪಟ್ಟಿದ್ದಾರೆ ಎಂದು. ಅವರು 30 ವರ್ಷ ಸರ್ವಿಸ್ನ ಅಂತ್ಯದಲ್ಲಿ ಪಡೆಯುವುದಕ್ಕಿಂತ ಹೆಚ್ಚು ಸಂಬಳ ಹಣವನ್ನು ನಾವು ಮೊದಲ ಸಂಬಳದಲ್ಲೇ ಪಡೆಯುತ್ತೇವೆ. ತಕ್ಷಣ ನಾವು ಮಾಡುವ ಮೊದಲನೆ ಕೆಲಸ ಅಪ್ಪನಿಗೆ ಮನೆಯಲ್ಲಿ ವಿಶ್ರಮಿಸಲು ಹೇಳುವುದು. ಕಷ್ಟ ಪಟ್ಟು ದುಡಿದ ಅವರು ಸ್ವಯಂ ನಿವೃತ್ತಿ ತೆಗೆದು ಕೊಂಡು ನೆಮ್ಮದಿ ಇಂದ ಇರಲಿ ಬಯಸುತ್ತೇವೆ,
    5.ಪ್ರತಿಯೊಬ್ಬರಿಗೆ ಅವರದೇ ಆದ ಜವಾಬ್ದಾರಿ ಗಳಿರುತ್ತವೆ. ಅಣ್ಣ ನಾದವನಿಗೆ ತಂಗಿ ತಮ್ಮನಿಗೆ ವಿದ್ಯಾಭ್ಯಾಸ ಕೊಡಿಸುವ, ಒಳ್ಳೇ ಕಡೆ ತಂಗಿ ಮದುವೆ ಮಾಡಿಸುವ, ಸ್ವಂತ ಮನೆ ಕೊಲ್ಲುವ ಆಸೆ ಜವಾಬ್ದಾರಿ ಗಳು ಇದ್ದೇ ಇರುತ್ತವೆ. 23 ವರ್ಷಕ್ಕೆ ದುಡ್ಡಿನ ಬೆಲೆ ಗೊತ್ತಿರಲ್ಲ ಅನ್ನುವುದು ತಪ್ಪು . ಮಧ್ಯಮ ವರ್ಗ ದಿಂದ ಬಂದ ಯಾವುದೇ ಸಾಫ್ಟ್‌ವೇರ್ ಇಂಜಿನಿಯರ್ ಗೆ ಕೂಡ ಬೇರೆ ಎಲ್ಲರಿಗೂ ಗೊತ್ತಿರುವಂತೆ ಕಷ್ಟದ ಅರಿವಿರುತ್ತದೆ.
    ಕೆಲವು ಜನ ಇರುತ್ತಾರೆ ಹುಟ್ಟುವಾಗಕೆ ಚಿನ್ನದ ಚಮಚ ಬಾಯಿಯಲ್ಲಿ ಇಟ್ಟುಕೊಂಡು ಹುಟ್ತಿರುವವರು ಅವರು ದುಂದು ವೆಚ್ಚ ಮಾಡಬಹುದೇನೋ. ಆದರೆ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗುವುದು ಬೇಡ.
    6. ಹಾಗೆಂದು ಎಲ್ಲರಿಗೂ ಕಾಲೇಜ್ ನಲ್ಲಿರುವಾಗೆ ಕೆಲ್ಸಾ ಸಿಕ್ಕಿಬಿಡುವುದಿಲ್ಲ. ಐ ಟಿ ಯಲ್ಲಿ ಕೆಲಸ ಸಿಗೋದಕ್ಕೆ ಲಂಚ ಅಥವಾ ಇನ್ಫ್ಲುಯೆನ್ಸ್ ಸಹಾಯ ಮಾಡುವುದಿಲ್ಲ. 7 ಅಥವಾ 8 ಸುತ್ತು ಗಳನ್ನು ಮುಗಿಸ ಬೇಕು. ಪ್ರತಿಬೆ ಇದ್ದರೂ ಲಂಚ ಇಲ್ಲದೇ ಸರಕಾರಿ ಕೆಲಸ ಸಿಗುವುದಿಲ್ಲ ಇದು ಎಲ್ಲರಿಗೂ ಗೊತ್ತಿರುವ ವಿಷಯ.
    7.ಪ್ರತಾಪ್ ರವರ ಪ್ರಕಾರ, ಸಾಫ್ಟ್‌ವೇರ್ ಇಂಜಿನೀಯರ್ಸ್ ಬಿಟ್ಟು ಬೇರೆ ಎಲ್ಲರಿಗೂ ಸೋಶಿಯಲ್ ರೆಸ್ಪಾನ್ಸಿಬಿಲಿಟೀ ಇದೆ ಯಂತೆ.ಯಾರಿಗಾದರೂ ರಕ್ತದ ಅವಶ್ಯಕತೆ ಇದೆ ಅಂತ ಒಂದೇ ಒಂದು ಈ ಮೇಲ್ ಫಾರ್ವರ್ಡ್ ಮಾಡಿ ನೋಡಿ. 10 ನಿಮಿಷದಲ್ಲಿ ಕನಿಷ್ಟ 100 ಕರೆಗಳು ಬಂದಿರತ್ತದೆ,ಯಾವ ಆಸ್ಪತ್ರೆ ಗೆ ಬರಬೇಕು ಅಂತ.
    ದಾರಿಯಲ್ಲಿ ಅಶಕ್ತರು, ವೃದ್ಧರನ್ನು ಕಂಡರೆ ಬೇರೆ ಜನಕ್ಕೆ ಇರುವಷ್ಟೇ ಅನುಕಂಪ ಇದೆ.
    8.ಸಮಯಕ್ಕೆ ಸರಿಯಾಗಿ ಟ್ಯಾಕ್ಸ್ ಕಟ್ಟುತ್ತೀವಿ. ಸಮುಹ ಸಾರಿಗೆ ಉಪಯೋಗಿಸುತ್ತೇವೆ. ಯಾವ ರೀತಿಯ ಸೋಶಿಯಲ್ ರೆಸ್ಪಾನ್ಸಿಬಿಲಿಟೀ ಬಗ್ಗೆ ಮಾತಾಡುತ್ತಿದ್ದರೋ ನಂಗೆ ಗೊತ್ತಿಲ್ಲ.
    ನಮ್ಮ ಸುತ್ತ ಮುತ್ತಾ ಇರುವ ಕನ್ನಡ ಗೊತ್ತಿಲ್ಲದ ಜನಕ್ಕೆ ಕನ್ನಡ ಕಳಿಸೂತ್ಹೇವೆ. ಕಾರ್ಪೊರೇಟ್ ಕಂಪನೀ ಗಳಲ್ಲಿ ಕನ್ನಡ ಕಲಿ ಕಾರ್ಯಕ್ರಮ ಮಾಡ್ತೀವಿ. ಆಫೀಸ್ ನಲ್ಲಿ ಕನ್ನಡ ದಲ್ಲಿ ಮಾತಾಡ್ತೀವಿ .
    ಕನ್ನಡ ನಾಡು ನುಡಿಯ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳುತ್ತೇವೆ. ( ನಮ್ಮ ಐ ಟಿ ಕನ್ನಡಿಗರು ಗ್ರೂಪ್ ನೋಡಿ, enguru.blogspot.com).
    ಕನ್ನಡ ರಾಜ್ಯೋತ್ಸವ ಆಚರಿಸುತ್ತೇವೆ. ಬೇರೆ ರಾಜ್ಯದ ಜನಕ್ಕೆ ಕನ್ನಡದ ಬಗ್ಗೆ ತಿಳಿಸಿಕೊಡುತೇವೆ. (ನಮ್ಮ ನಾಡಹಬ್ಬ ಬ್ಲಾಗ್ ನೋಡಿ, http://naadahabba.blogspot.com/ )
    9.ನೆಹರು ಅವರುಸ್ವಾತ್ಂತ್ರ ಹೋರಾಟದಲ್ಲಿ ಭಾಗವಹಿಸಿದರು ಅನ್ನುವುದು ನಮಗೂ ಗೊತ್ತು. ಈಗ ಯಾವ ಹೋರಾಟ ದಲ್ಲಿ ನಾವು ಭಾಗವಹಿಸಬೇಕು ಅಂತ ತಿಳಿಸಿ. ಶನಿವಾರ ಮತ್ತು ಭಾನುವಾರ ಗಳಂದು ನಮಗೆ ಸಮಯ ಇದೆ. ನಾವು ಹೋರಾಟ ಮಾಡುತ್ಹೇವೆ. ಈಗ ನಡೆಯುವ ರಾಸ್ತ ರೋಕೋ, ಚಳುವಳಿ ಗಳು ಟ್ರಾಫಿಕ್ ಅನ್ನು ಜಾಮ್ ಮಾಡಿ ಜನಸಾಮಾನ್ಯರಿಗೆ ತೊಂದರೆ ಕೊಡುವಂಥವು. ಅಂತವುಗಳಲ್ಲಿ ಭಾಗವಹಿಸುವ ಆಸೆ ನಮಗೆ ಇಲ್ಲ.
    10.ಹಣ ಕೂಡಿಡುವುದರ ಬಗ್ಗೆ ಎಲ್ಲರಿಗಿಂತ ಚೆನ್ನಾಗಿ ನಮಗೆ ತಿಳಿದಿದೆ. ನಾವು ಸಾಯುವ ವರೆಗೂ ಅಥವಾ 60 ವರ್ಷ ಆಗುವವರೆಗೂ ಸಾಫ್ಟ್‌ವೇರ್ ನಲ್ಲಿ ಇರಬೇಕೆಂದೂ ಬಯಸುವುದಿಲ್ಲ. ಇರುವಷ್ಟು ದಿನ ಹಣ ಕೂಡಿಸಿ ಸ್ವಂತ ಉದ್ಯೋಗ ಅಥವಾ ಹೊಲ, ತೋಟ ಮಾಡಿಸುವ ಯೋಜನೆ ಗಳು ಇರುತವೆ. ಇದಕ್ಕೆಲ್ಲ ಹಣ ಸಂಗ್ರಹ ಮಾಡಬೇಕು.ನಾವು ಸ್ಯಾಲರೀ ಓರಿಯೆನ್‌ಟೆಡ್ ಆಗುವುದರಲ್ಲಿ ತಪ್ಪೇನಿದೆ?
    11. ಯಾವುದೇ ದೇಶದ ಆರ್ಥಿಕತೆ (economy) ನಿರಂತರ ವಾಗಿ ಬೆಳೆಯ ಬೇಕಾದರೆ ಜನಗಳು ಹಣ ಖರ್ಚು ಮಾಡಬೇಕು. ಗಳಿಸಿದ್ದನ್ನೆಲ್ಲ ಕೂಡಿಟ್ಟರೆ ಎಕಾನಮೀ ನಿಂತ ನೀರಿನಂತಾಗುತ್ಹಾದೆ. ಹಣ ಖರ್ಚು ಮಾಡಿದರೆ demand for goods ಜಾಸ್ತಿಯಾಗುತ್ತದೆ. ಗ್ರಾಹಕರು ಜಾಸ್ತಿಯಾದಂತ,. ಉದ್ಯೋಗ ಗಳು ಸೃಷ್ಟಿ ಯಾಗುತವೆ. ಹೀಗೆ ದೇಶ ಮುಂದುವರೆಯುತ್ತದೆ.
    12.ನಮಗೆ ಬರುವ ಹಣ ಪೂರ್ತಿ ಬೇರೆ ದೇಶದ್ದು. ಅವರಿಂದ ಮಿಲಿಯನ್ ಗಟ್ಟಲೆ ದುಡ್ಡು ನಾವು ಪಡೆಯುತೇವೆ. ಪಡೆದದ್ದನ್ನು ನಾವು ಖರ್ಚು ಮಾಡುವುದು ಭಾರತದಲ್ಲಿಯೇ… ಹಗಲೂ ರಾತ್ರಿ ಕಷ್ಟ ಪಟ್ಟು ದುಡಿದ ನಾವು ವಾರಾಂತ್ಯದಲ್ಲಿ ಗೆಳೆಯರ ಜೊತೆ ಅಥವಾ ಕುಟುಂಬದವರ ಜೊತೆ ಸಮಯ ಕಳೆಯುವುದು ತಪ್ಪೇ?
    ನಾನು ಲಂಚ ತೆಗೆದು ಕೊಂಡಿದ್ದಾರೆ ಅಥವಾ ಯಾರಿಗಾದರೂ ಅನ್ಯಾಯ ಮಾಡಿ ಹಣ ಗಳಿಸಿ ಮೋಜು ಮಾಡಿದ್ದರೆ ಅದು ತಪ್ಪು ಆದರೆ ದುಡಿದ ಹಣ ನಮಗಾಗಿ , ನಮ್ಮ ಕುಟುಂಬಕ್ಕಾಗಿ ಖರ್ಚು ಮಾಡಿದರೆ ತಪ್ಪಾ?
    13..ಐ ಟಿ ಯವರು ಏನು ಕೆಲಸ ಮಾಡುತಿದ್ದಾರೆ ಎಂದು ಜನ ಸಾಮಾನ್ಯನಿಗೆ ತಿಳಿದಿಲ್ಲ ಎಂದರೆ ನಮ್ಮ ತಪ್ಪಲ್ಲ. ಇವತ್ತು ಪ್ರತಿಯೊಂದು ಮಧ್ಯಮ ಗಾತ್ರದ, ಹೊಟೆಲ್ ನಲ್ಲೂ, ಆಸ್ಪತ್ರೆ ಯಲ್ಲೂ, ಶಾಲೆಯಲ್ಲೂ ಕಂಪ್ಯೂಟರ್ ಬಳಸುತ್ತಿದ್ದಾರೆ. ನಮ್ಮ ದಿನ ನಿತ್ಯದ ಕೆಲಸ ದಲ್ಲಿ ಕಂಪ್ಯೂಟರ್ ಬಳಸಿ ಮಾನವ ಸಮಯ ಉಳಿಸಬಹುದು. ಹಾಗು ಸಾಕಷ್ಟು ದಾಖಲೆ ಗಳನ್ನು ಸಂಗ್ರಹಿಸಿ ಇಡಬಹುದು.
    ಸರಳ ವಾದ ಉದಾಹರಣೆ ಎಂದರೆ ಆಸ್ಪತ್ರೆ ಗಳಲ್ಲಿ (ಪ್ರೈವೇಟ್ ಆಸ್ಪತ್ರೆ ಗಳಲ್ಲಿ ಈಗ ಬಳಸುತ್ತಿದ್ದಾರೆ. ಸರಕಾರಿ ಆಸ್ಪತ್ರೆ ಗಲ್ಲಿ ಬಳಸುತ್ತಿಲ್ಲ .ಅದು ನಮ್ಮ ತಪ್ಪಲ್ಲ!!!!) ದಾಖಳಾದ ರೋಗಿಗಳ ವಿವರಗಳನ್ನು ಅವನು ದಾಖಲಾದ ಕ್ಷಣ ದಿಂದ ಬಿಡುಗಡೆ ಯಾಗಿ ಹೊರ ಹೋಗುವ ತನಕ ಮಾಡುವ ಎಲಾ ಚಿಕಿತ್ಸೆ ಗಳು, ಕಟ್ಟಿದ ಹಣ, ದೈಹಿಕ ಲಕ್ಷಣ ಎಲ್ಲವನ್ನು ದಾಖಲಿಸಿ ಇಡಬಹುದು. ಇದು ಸಾಕಷ್ಟು ಪೇಪರ್ ವರ್ಕ್ ಅನ್ನು ಕಡಿಮೆ ಮಾಡುತ್ತದೆ. ಇದೆ ರೀತಿ ದೊಡ್ಡ ಕಂಪನಿ ಗಳನ್ನು manage ಮಾಡುವುದಕ್ಕೆ ಸಾಫ್ಟ್‌ವೇರ್ ಗಳನ್ನು ಬಳಸುತ್ತಾರೆ. ನಾವು ಅವುಗಳನ್ನು ಡಿಸೈನ್ ಮಾಡಿ ಕೊಡುತ್ತೇವೆ. ಇದನ್ನು ಸಾಮಾನ್ಯ ಜನ ಅರ್ಥ ಮಾಡಿ ಕೊಳ್ಳದಿದ್ದರೆ ಅದು ನಮ್ಮ ತಪ್ಪಲ್ಲ. ಅವರಿಗೆ ತಿಳಿದುಕೊಳ್ಳ ಬೇಕು ಅನ್ನಿಸಿದರೆ ತಿಳಿದು ಕೊಳ್ಳಲಿ.
    14. ಬೇರೆ ಜನಗಳು ನಮ್ಮಿಂದ ಹಣ ವಸೂಲಿ ಮಾಡಲು ಕಾಯುತ್ತಿರುತ್ತಾರೆ. ಆಟೋ ದವನು ನಾವು ಸಾಫ್ಟ್‌ವೇರ್ ನವರು ಎಂದು ತಿಳಿದರೆ ಮೀಟರ್ ಮೇಲೆ 4 ಪಟ್ಟು ಹಣ ಕೇಳುತ್ತಾನೆ!!!!! ಬೇರೆ ಜನಗಳು ನಮ್ಮಿಂದ ಹಣ ಪೀಕುವುದರಲ್ಲಿ ನಿಪುಣರಾಗುತ್ತಿದ್ದಾರೆ. ಇನ್ನು ಹೋಮ್ ಸ್ಟೇ ಬಗ್ಗೆ …. ಹೋಮ್ ಸ್ಟೇ ಗಳಲ್ಲಿ ಉಳಿದು ಕೊಂಡು ಪ್ರಾಕೃತಿಕ ಸೌಂದರ್ಯ ಸವೀಯುವುದರಲ್ಲಿ ತಪ್ಪೇನಿದೆ? ಅಲ್ಲಿನ ಜನ ನಮಗೆ ಮನೆ ಬಿಟ್ಟು ಕೊಡ್ಡು ಶೆಡ್ ನಲ್ಲಿ ಬಿಡಾರ ಹೂಡಿದ್ದಾರಂತೆ . ಅದೂ ನಮ್ಮ ತಪ್ಪಾ? ನಾವು ಕೊಡುವ ಸಾವಿರ ದುಡ್ಡಿನಲ್ಲಿ ಮಕ್ಕಳ ಸ್ಕೂಲ್ ಫೀಸ್ ಕಟ್ಟಬಹುದು, ಮನೆಗೆ ಆಹಾರ ಸಾಮಗ್ರಿ ಕೊಲ್ಲಬಹುದು. ಅವರುಊ ನಾಲ್ಕು ಜನದಂತೆ ಒಳ್ಳೇ ಜೀವನ ನಡೆಸಬಹುದು. ಇದರಲ್ಲಿ ತಪ್ಪೇನಿದೆ? ನಾವೇನೂ ಅವರನ್ನು ಮನೆ ಬಿಟ್ಟು ಓಡಿಸಿದ್ದೆವಾ?
    15.ಇನ್ನು ಮುಖ್ಯ ವಾದ ಮ್ಯಾರೇಜ್ ಮಾರ್ಕೆಟ್… ಬಿ ಕಾಮ್ ಓದಿರುವ ಹುಡುಗಿ ಸಾಫ್ಟ್ವೇರ್ ಗಂಡನ್ನು ಆಸೆ ಪದಬಾರದ? ಯಾವ ಹುಡುಗಿಯೇ ಆಗಲಿ ಆರ್ಥಿಕ ವಾಗಿ ಸಬಲ ರಾಗಿರುವವರನ್ನು ಇಷ್ಟ ಪಡುವುದರಲ್ಲಿ ತಪ್ಪೇನು? ಅದು ಅವರ ಪರ್ಸನಲ್ ವಿಷಯಗಳು. ಮುಂದಿನ ಜೀವನ ಚೆನ್ನಾಗಿರಬೇಕು ಅಂದರೆ ಜೀವನ ಸಂಗಾತಿ ಆರ್ಥಿಕ ವಾಗಿ ಸಬಲ ರಾಗಿರಬೇಕು ಅಂತ ಆಸೆ ಪಡುವುದರಲ್ಲಿ ಮಹಾಪರಾಧ ವೇನಾದರೂ ಇದೆಯಾ?
    16.ಜಾಬ್ ಮಾರ್ಕೆಟ್… ಐ ಟಿ ಬಂದಮೇಲೆ ಎಲ್ಲರೂ ಐ ಟಿ ನೇ ಬೇಕು ಎಂದು ಅಂದು ಕೊಂಡಿಲ್ಲ. ಇವತ್ತು ಕೂಡ ಯಾವುದಾದರೂ 200 ಸರಕಾರಿ ಹುದ್ದೆ ಗಳಿಗೆ ಕಾಲ್ ಮಾಡಿದರೆ ಕನಿಷ್ಟ 2 ಲಕ್ಷ ಅರ್ಜಿಗಳು ಬರುತ್ತವೆ. ಸರಕಾರಿ ಕೆಲಸವನ್ನು ಯಾರು ಕಡೆಗಣಿಸಿಲ್ಲ. ಸರಕಾರಿ ಕೆಲಸ ವೇನು ಪುಕ್ಕಟೆ ಸಿಗುವುದಿಲ್ಲ. ಲಂಚ ವಿಲ್ಲದೇ ಸರಕಾರಿ ಕೆಲಸ ಪಡೆಯುವುದು ಸಾವಿಲ್ಲದ ಮೆನೆಿಂದ ಸಾಸಿವೆ ತಂದ ಹಾಗೆ ….
    17.ಐ ಟಿ ಯವರು 3 ತಿಂಗಳಿಗೊಮ್ಮೆ ಯಾದರು ಅನಾಥಾಲಯ ಮತ್ತು ವೃದ್ಧಶ್ರಮ ಗಳಿಗೆ ಭೇಟಿ ನೀಡುತ್ತಾರೆ, ಬೇರೆ ಯವರು ಎಂದಾದರೂ ಭೇಟಿ ನೀಡಿದ್ದಾರ ?
    ಅನುಕಂಪ ಸಹಾಯ ಎಲ್ಲ ಅವರವರ ಪರ್ಸನಲ್ ವಿಚಾರ ಗಳು…
    18.ತರಕಾರಿ ಮಾಡುವವನು ಮೊಬೈಲ್ ಇಟ್ಟುಕೊಂಡಿರುವುದಕ್ಕೂ ಐ ಟಿ ಕಾರಣವಂತೆ…. ತಗಳಪ್ಪಾ 🙂

    ಪ್ರತಾಪ್ ರವರೆ … ಐ ಟಿ ಯವರಿಗೆ ಕೆಲ್ಸಾ ಹೋಯ್ತು ಅಂತ ಯಾರೂ ಅನುಕಂಪ ತೋರಿಸಬೇಕಾಗಿಲ್ಲ…. ಖುಷಿ ಪಡುವವರು … ಮನೆ ಕಾರು ಮಾರಿ ಲೋನ್ ಗಳನ್ನು ಕಟ್ಟುತ್ತೇವೆ. ಗಂಜಿ ಗು ಗತಿ ಇಲ್ಲದಂತೆ ಆದರೆ, ನಮ್ಮ ಹೆಣೆ ಬರಹ, ಅನುಭವಿಸುತ್ತೇವೆ, ನಮ್ಮ ಕಷ್ಟ ನೋಡಿ ರಿಜಾಯ್ಸ್ ಮಾಡುವಂಥ ಮಂದಿಯ ಬಳಿ ಗಂತೂ ಸಾಲ ಕೇಳುವುದಕ್ಕೆ ಬರುವುದಿಲ್ಲ….

    ಇನ್ನೊಮ್ಮೆ ಯಾವುದೇ ವೃತ್ತಿಯ ಬಗ್ಗೆ ಬರೆಯುವ ಮುನ್ನ ಆ ವೃತ್ತಿಯ ಜನರನ್ನು ಮಾತನಾಡಿಸಿ ಕಷ್ಟಗಳನ್ನು ತಿಳಿದು ಕೊಂಡು ನಂತರ ಬರೆಯಿರಿ.