Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಹಾಗಂತ ಹೇಳಿದವನು ಯಾವ ಬಜರಂಗಿಯೂ ಅಲ್ಲ !

ಹಾಗಂತ ಹೇಳಿದವನು ಯಾವ ಬಜರಂಗಿಯೂ ಅಲ್ಲ !

ಒಬ್ಬ ಕ್ಯಾಥೋಲಿಕ್ಕನಾಗಿ ನಾನು ಪೂರ್ವಗ್ರಹಪೀಡಿತನಾಗಿದ್ದೆ. ನನ್ನ ಅಂಕಲ್ ಅಂದು ಹಾಗೂ ಇಂದಿಗೂ ಒಬ್ಬ ಮಿಷನರಿ. ಒಂದು ವೇಳೆ ದಕ್ಷಿಣ ಅಮೆರಿಕದ ಜನರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡದೇ ಹೋದರೆ ಅವರು ಅನಂತ ಅನಾಹುತಕ್ಕೆ ಈಡಾಗುತ್ತಾರೆ ಎಂದು ಆತ ಅಲ್ಲಿಗೆ ತೆರಳಿದ. ನಾನು ಕ್ಯಾಥೋಲಿಕ್ ಶಾಲೆಯಲ್ಲಿ ಕಲಿತವನು. ಹಿಂದೂಯಿಸಂ ಎಂದರೆ ಬಹುದೇವತಾರಾಧನೆ, ಮೂರ್ತಿಪೂಜೆ ಮತ್ತು ಮೂಢನಂಬಿಕೆ. ಹಿಂದೂಗಳಿಗೆ ಸ್ವರ್ಗದಲ್ಲಿ ಯಾವುದೇ ಜಾಗವಿಲ್ಲ ಎಂದು ನನಗೆ ಹೇಳಿಕೊಡಲಾಯಿತು. ನನ್ನ ಬಾಲ್ಯದ ಕ್ಯಾಥೋಲಿಸಂ ಅಂದರೆ ಇದಾಗಿತ್ತು, ಇಂದಿಗೂ ಹಿಂದೂಧರ್ಮವನ್ನು ಅವಹೇಳನ ಮಾಡುವ ಅದೇ ಕ್ಯಾಥೋಲಿಸಂ ಅನ್ನು ಕಾಣಬಹುದು.

೧೯೯೪ರಲ್ಲಿ ಪೋಪ್ ಎರಡನೇ ಜಾನ್ ಪಾಲ್ ಅವರು ಹೇಳಿಕೆಯೊಂದನ್ನು ನೀಡಿದರು. “ಬುದ್ಧಿಸಂ, ಹಿಂದೂಯಿಸಂನಂತಹ ಪುರಾತನ ಧರ್ಮಗಳು ಕ್ರೈಸ್ತ ಮತ ಪ್ರತಿಪಾದನೆಗೆ ಎಸೆದಿರುವ ಸವಾಲನ್ನು ಏಷ್ಯಾದ ಕ್ರೈಸ್ತ ಧರ್ಮಭೋದಕರು ನಿಭಾಯಿಸಲಿದ್ದಾರೆ. ಈ ಧರ್ಮಗಳ ಲ್ಲಿರುವ ಸತ್ಯಾಸತ್ಯತೆಗೆ ಗೌರವ ವ್ಯಕ್ತಪಡಿಸುತ್ತಲೇ ದೇವರು ಹಾಗೂ ಮನುಷ್ಯನ ನಡುವಿನ ಏಕೈಕ ಸಂಧಾನಕಾರನೆಂದರೆ ಜೀಸಸ್. ಆತನೊಬ್ಬನೇ ಮಾನವತೆಯ ಉದ್ಧಾರಕ ಎಂಬುದನ್ನು ಚರ್ಚ್ ಮನವರಿಕೆ ಮಾಡಿಕೊಡಬೇಕು”.

ಈ ಹೇಳಿಕೆಯ ಪ್ರಕಾರ ಬುದ್ಧನಾಗಲಿ, ಕೃಷ್ಣನಾಗಲಿ, ರಾಮನಾಗಲಿ ಜೀಸಸ್‌ಗೆ ಸಮನಲ್ಲ ಎಂದಾಯಿತು. ನಮ್ಮ ಧರ್ಮ ಮಾತ್ರ ಶ್ರೇಷ್ಠ ಎಂಬ “Exclusiveness” ಈ ಹೇಳಿಕೆಯಿಂದ ವ್ಯಕ್ತವಾಗುತ್ತದೆ! ಒಂದು ವೇಳೆ ಇಂತಹದ್ದು ನನ್ನ ದೃಢ ನಂಬಿಕೆಯಾಗಿದ್ದರೆ ನೀವು ಬೇರೊಂದು ಧರ್ಮವನ್ನು ಅನುಸರಿಸುತ್ತಿದ್ದರೆ ನಿಮ್ಮ ಬಗ್ಗೆ ನಾನು ಹೇಗೆತಾನೇ ಸಹಿಷ್ಣುತೆ ಹೊಂದಿರಲು ಸಾಧ್ಯ? ನಾನು ನಿಮ್ಮ ನಂಬಿಕೆಯನ್ನು ಗೌರವಿಸುವುದಾದರೂ ಹೇಗೆ? ಈ ರೀತಿಯ ಸಂಕೀರ್ಣ ಮನಸ್ಥಿತಿ ಅನಗತ್ಯ ಘರ್ಷಣೆ, ಒಡಕು, ಉದ್ವಿಗ್ನತೆಗೆ ದಾರಿ ಮಾಡಿಕೊಡದೇ ಇದ್ದೀತೆ?

ಇಂದು ಮಿಷನರಿ ಕೆಲಸವೆಂಬುದು ದೊಡ್ಡ ಬ್ಯುಸಿನೆಸ್. ಬಹುಶಃ ಜಗತ್ತಿನ ಅತಿದೊಡ್ಡ ವ್ಯಾಪಾರ! ಬರೀ ಕ್ಯಾಥೋಲಿಕ್ ಚರ್ಚ್‌ಗಳಷ್ಟೇ ಅಲ್ಲ, ಹಲವಾರು ಪ್ರೊಟೆಸ್ಟೆಂಟ್ ಸಂಘಟನೆಗಳೂ ಕೂಡ ಅನ್ಯಧರ್ಮೀಯರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಕೋಟ್ಯಂತರ ಡಾಲರ್‌ಗಳನ್ನು ಮೀಸಲಾಗಿಟ್ಟಿವೆ. ಮತ ಪ್ರಚಾರ ಕೆಲಸಕ್ಕಾಗಿ ಲಕ್ಷಾಂತರ ಕಾರ್ಯಕರ್ತರನ್ನು ರೂಪಿಸಿವೆ, ಹಲವಾರು ಯೋಜನೆಗಳನ್ನು ರೂಪಿಸಿವೆ, ಕೆಲವು ಸಮುದಾಯಗಳನ್ನು ಗುರಿಯಾಗಿಸಿಕೊಂಡು ಮತಾಂತರ ಮಾಡುತ್ತಿವೆ. ಇಂತಹ ಬಹುರಾಷ್ಟ್ರೀಯ ಮತಾಂತರ ಬ್ಯುಸಿನೆಸ್ ಇದೆಯಲ್ಲಾ, ಅದು ಬಹುರಾಷ್ಟ್ರೀಯ ಆರ್ಥಿಕ ವಹಿವಾಟಿನಂತಲ್ಲ. ಇಲ್ಲಿ ನ್ಯಾಯವೂ ಇಲ್ಲ, ಒಳತಂತ್ರ ಬಹಿರಂಗವಾಗಿ ಕಾಣುವುದೂ ಇಲ್ಲ. ಮಾತುಕತೆಯೂ ಇಲ್ಲ, ಚರ್ಚೆಗೂ ಜಾಗವಿಲ್ಲ. ಇದು, ಒಂದು ಧರ್ಮ ತಾನೊಂದೇ ಶ್ರೇಷ್ಠವೆಂದು ಇತರ ಎಲ್ಲ ಧರ್ಮಗಳನ್ನೂ ಅವಹೇಳನ ಮಾಡುವುದಾಗಿದೆ, ಇತರ ಧರ್ಮಗಳಿಗೆ ಮಸಿ ಬಳಿಯುವ ಕಾರ್ಯವಾಗಿದೆ. ಇಂತಹ ಮತಾಂತರ ವಹಿವಾಟು ಭಾರತದಲ್ಲಿ ಬಹುವಾಗಿದೆ. ಏಕೆಂದರೆ ಮಿಷನರಿಗಳು ಯಾವ ಅಡ್ಡಿ ಆತಂಕಗಳೂ ಇಲ್ಲದೆ ಸ್ವತಂತ್ರವಾಗಿ ಮತಾಂತರ ಮಾಡಬಹುದಾದ ವಿಶ್ವದ ಅತಿ ದೊಡ್ಡ ಕ್ರೈಸ್ತೇತರ ರಾಷ್ಟ್ರವೆಂದರೆ ಭಾರತವೊಂದೇ. ಪಾಕಿಸ್ತಾನ, ಬಾಂಗ್ಲಾದೇಶಗಳಂತಹ ಮುಸ್ಲಿಂ ರಾಷ್ಟ್ರಗಳು ಕ್ರೈಸ್ತ ಮಿಷನರಿ ಚಟುವಟಿಕೆಗಳಿಗೆ ಅವಕಾಶವನ್ನೇ ನೀಡುವು ದಿಲ್ಲ. ಸೌದಿ ಅರೇಬಿಯಾದಲ್ಲಿ ಬೈಬಲ್ ಅಥವಾ ಜೀಸಸ್‌ನ ಸಣ್ಣ ಚಿತ್ರವನ್ನು ಇಟ್ಟುಕೊಳ್ಳುವ ಸ್ವಾತಂತ್ರ್ಯವೂ ಇಲ್ಲ. ಚೀನಾ ಕೂಡ ಮಿಷನರಿಗೆ ಬಾಗಿಲು ಮುಚ್ಚಿದೆ.

ಇತ್ತೀಚೆಗೆ ಭಾರತದಲ್ಲಿ ಮಿಷನರಿಯೊಬ್ಬರನ್ನು ಕೊಂದಿದ್ದನ್ನು ಎಲ್ಲ ಮಾಧ್ಯಮಗಳೂ ಪ್ರಸಾರ ಮಾಡಿದವು. ಕಾಶ್ಮೀರದಲ್ಲಿ ಹಿಂದೂಗಳು ಕಾಲ ಕಾಲಕ್ಕೆ ಹತ್ಯೆಯಾಗುತ್ತಲೇ ಬಂದಿದ್ದಾರೆ. ಆದರೆ ಹಿಂದೂಗಳ ಹತ್ಯೆ ಪಾಶ್ಚಿಮಾತ್ಯ ಮಾಧ್ಯಮಗಳಿಗೆ ‘ಸುದ್ದಿ’ ಎನಿಸುವುದೇ ಇಲ್ಲ. ಮಿಷನರಿ ಚಟುವಟಿಕೆಗಳು ಎಲ್ಲ ಖಂಡಗಳಲ್ಲೂ ಸಾಮೂಹಿಕ ಹತ್ಯಾಕಾಂಡದ ಇತಿಹಾಸವನ್ನು ಹೊಂದಿವೆ. ದಕ್ಷಿಣ ಅಮೆರಿಕದ ಮೂಲನಿವಾಸಿಗಳ ಮೇಲೆ ಎಸಗಿದ ದೌರ್ಜನ್ಯದ ಸಲುವಾಗಿ ಕ್ರೈಸ್ತರು ಕ್ಷಮೆ ಯಾಚಿಸಿದ್ದಾರೆ. ಆದರೆ ಹಿಂದೂ ಧರ್ಮದ ಮೇಲೆ ಮಾಡಿರುವ ದೌರ್ಜನ್ಯ, ಅವಹೇಳನದ ಸಲುವಾಗಿ ಕ್ರೈಸ್ತರು ಎಂದಾದರೂ ಕ್ಷಮೆ ಕೇಳಿದ್ದಾರೆಯೇ?

ಅಷ್ಟಕ್ಕೂ ಮತಾಂತರವನ್ನೇಕೆ ಮಾಡಬೇಕು?

ಮತಾಂತರಕ್ಕೆ ಪ್ರೇರಣೆ ಏನು? ತಮ್ಮದೊಂದೇ ನಿಜವಾದ ಧರ್ಮ, ಜೀಸಸ್‌ನೊಬ್ಬನೇ ಮಾನವ ಜನಾಂಗದ ರಕ್ಷಕ, ಕ್ರೈಸ್ತರಿಗೆ ಮಾತ್ರ ಮೋಕ್ಷ ಲಭ್ಯವಾಗುತ್ತದೆ, ಕ್ರೈಸ್ತರಿಗೆ ಮಾತ್ರ ಸ್ವರ್ಗದಲ್ಲಿ ಜಾಗ ಹಾಗೂ ಉಳಿದವರು ನರಕಕ್ಕೆ ದೂಡಲ್ಪಡು ತ್ತಾರೆ ಎಂದು ಕ್ರೈಸ್ತರು ನಂಬಿದ್ದಾರೆ. ಇದು ಧಾರ್ಮಿಕ ಅಶಾಂತಿ ಹಾಗೂ ಸಂಘರ್ಷಕ್ಕೆ ನೀಲನಕಾಶೆಯಲ್ಲವೆ? ಯಾರಾದರೂ ನಿಮ್ಮ ಮನೆ ಅಥವಾ ಊರಿಗೆ ಬಂದು ಮತಾಂತರ ಮಾಡಲು ಮುಂದಾದರೆ ಏನಾಗುತ್ತದೆ? ನಿಮ್ಮ ಧರ್ಮ, ಸಂಪ್ರದಾಯ ಬಿಡಿ ಎಂದರೆ ಮತ್ತಿನ್ನೇನಾಗಲು ಸಾಧ್ಯ? ಎಲ್ಲೆಲ್ಲಿ ಮಿಷನರಿ ಚಟುವಟಿಕೆಗಳು ನಡೆಯುತ್ತವೆಯೋ ಅಲ್ಲೆಲ್ಲ ಘರ್ಷಣೆ, ಸಂಘರ್ಷಗಳಾಗುತ್ತವೆ ಅಷ್ಟೇ.

ಪ್ರೊಟೆಸ್ಟೆಂಟರು, ಆಂಗ್ಲಿಕನ್ಸ್ ಮತ್ತು ಲ್ಯುಥೆರನ್ಸ್ ತಮ್ಮ ಮಿಷನರಿ ಚಟುವಟಿಕೆಗಳನ್ನು ಕಡಿಮೆ ಮಾಡಿದ್ದಾರೆ. ಆದರೆ ಕ್ಯಾಥೋಲಿಕ್ಕರು ಮಾತ್ರ ಸದ್ದಿಲ್ಲದೆ ಜಗತ್ತಿನಾದ್ಯಂತ ಮತಾಂತರ ಕಾರ್ಯ ನಡೆಸುತ್ತಿದ್ದಾರೆ. ವಸಾಹತುಶಾಹಿ ಕಾಲದಲ್ಲಿ ಮಾಡಿದಂತೆ ಬಲಪ್ರಯೋಗ ಮಾಡುತ್ತಿಲ್ಲ, ಆದರೆ ‘ಗ್ಲೋಬಲ್ ಕನ್‌ವರ್ಶನ್’ ಉದ್ದೇಶವನ್ನು ಮಾತ್ರ ಬಿಟ್ಟಿಲ್ಲ. ಇಂದು ಹಲವಾರು ಕ್ರೈಸ್ತ ಮತಪ್ರತಿಪಾದಕ ಸಂಘಟನೆಗಳು ಹುಟ್ಟಿಕೊಂಡಿವೆ. ವರ್ಲ್ಡ್ ವಿಶನ್, ದಿ ಕ್ರಿಶ್ಚಿಯನ್ ಕೋಯು ಲೀಶನ್, ಜೆನೋವ್ಹಾಸ್ ವಿಟ್ನೆಸ್, ಮಾರ್ಮೋನ್ಸ್, ಬ್ಯಾಪ್ಟಿಸ್ಟ್ ಮುಂತಾದ ಸಂಘಟನೆಗಳು ಭಾರತದಲ್ಲಿರುವ ಹಿಂದೂಗಳನ್ನು ಮತಾಂತರ ಮಾಡುವ ಸಲುವಾಗಿ ಅಮೆರಿಕದಲ್ಲಿ ಚಂದಾ ಎತ್ತುತ್ತಿವೆ. ಕ್ರೈಸ್ತ ಟಿವಿ ಚಾನೆಲ್‌ಗಳಲ್ಲಿ ಅಂತಹ ಮನವಿಗಳನ್ನು ನಿತ್ಯವೂ ಕಾಣಬಹುದು. ಪ್ಯಾಟ್ ರಾಬರ್ಟ್ಸ್‌ನ್ ಎಂಬಾತ “ಹಿಂದೂಯಿಸಂ ಎಂಬುದು ಭೂತಪ್ರೇತಗಳ ಧರ್ಮ” ಎಂದು ಕ್ರೈಸ್ತ ಚಾನೆಲ್‌ನಲ್ಲಿ ಬಹಿರಂಗವಾಗಿ ಹೇಳಿದ್ದಾನೆ. ಪ್ರಾಣಿಗಳ ಶಿರವನ್ನು ಹೊಂದಿರುವ ಹಿಂದೂ ದೇವ, ದೇವತೆಗಳನ್ನು ತೋರಿಸಿ “ಓಹ್, ಈ ಜನರು ಅದೆಷ್ಟು ಹಿಂದುಳಿದಿದ್ದಾರೆ ನೋಡಿ” ಎಂದು ವಿಡಂಬನೆ ಮಾಡುತ್ತಾರೆ, ಭಾರತದಲ್ಲಿನ ಸಾಮಾಜಿಕ ಹಾಗೂ ರಾಜಕೀಯ ಸಮಸ್ಯೆಗಳತ್ತ ಬೊಟ್ಟು ಮಾಡಿ, “ಈ ಎಲ್ಲ ಸಮಸ್ಯೆಗಳಿಗೆ ಹಿಂದೂಧರ್ಮವೇ ಕಾರಣ. ಇಂತಹ ಭಯಾನಕ ಧರ್ಮದಿಂದ ಜನರನ್ನು ರಕ್ಷಿಸಲು ದೇಣಿಗೆ ನೀಡಿ” ಎಂದು ಕರೆ ನೀಡುತ್ತಾರೆ.

ಮಿಷನರಿಗಳು ಒಡ್ಡಿರುವ ಈ ರೀತಿಯ ಅಪಾಯ ವೆಂಬುದು ಯಾವುದೋ ತಾತನ ಕಾಲದ್ದು ಎಂದು ಹಿಂದೂಗಳು ಉದಾಸೀನ ತೋರಬಾರದು. ಜಗತ್ತಿನಾದ್ಯಂತ ಧಾರ್ಮಿಕ ಸಾಮರಸ್ಯವಿದೆ, ಅನ್ಯಧರ್ಮೀಯರು ಹಿಂದೂ ಯಿಸಂಗೆ ಗೌರವ ಕೊಡುತ್ತಾರೆ ಎಂದು ಹಿಂದೂಗಳು ಭಾವಿಸಿದರೆ ತಪ್ಪಾಗುತ್ತದೆ. ಮಿಷನರಿಗಳೆಂದೂ ತಮ್ಮ ಉದ್ದೇಶ ಬಿಡುವುದಿಲ್ಲ್ಲ. ಒಂದಿಷ್ಟು ಮತಾಂತರಿಗಳು ಹಿಂದೂ ಧರ್ಮದ ಅವಹೇಳನದಂತಹ ಮಾರ್ಗಕ್ಕೆ ಕೈಹಾಕಿದ್ದರೆ, ಮತ್ತೆ ಕೆಲವು ಅಮೆರಿಕದ ಪಠ್ಯಪುಸ್ತಕಗಳು ‘ಹಿಂದೂಯಿಸಂ ಒಂದು ಧರ್ಮವೇ ಅಲ್ಲ, ಅವರಿಗೆ ಒಬ್ಬ ದೇವರಾಗಲಿ, ಒಂದು ಧರ್ಮಗ್ರಂಥವಾಗಲಿ ಇಲ್ಲ” ಎಂದು ಇಂದಿಗೂ ಬೋಧನೆ ಮಾಡುತ್ತಿವೆ.

ಅಷ್ಟೇ ಅಲ್ಲ, ಮತಾಂತರ ಹಾಗೂ ಬಡತನಕ್ಕೂ ತಳುಕು ಹಾಕಲಾಗುತ್ತಿದೆ. ಆದರೆ ಧಾರ್ಮಿಕ ಮತಾಂತರವನ್ನು ಹೊಂದುವ ಮೂಲಕ ಜಗತ್ತಿನ ಯಾವ ದೇಶ ಆರ್ಥಿಕವಾಗಿ ಮೇಲೆ ಬಂದಿದೆ? ಕ್ಯಾಥೋಲಿಕ್ ದೇಶವಾದ ಫಿಲಿಪ್ಪೀನ್ಸ್ ಏಷ್ಯಾದ ಅತ್ಯಂತ ಪುರಾತನ ಕ್ರೈಸ್ತ ರಾಷ್ಟ್ರವಾಗಿದೆ. ಆದರೂ ಅದು ಏಷ್ಯಾದ ಅತ್ಯಂತ ಹಿಂದುಳಿದ ರಾಷ್ಟ್ರಗಳ ಸಾಲಿನಲ್ಲಿ ರುವುದೇಕೆ? ಅತ್ಯಂತ ದೈವಭಕ್ತ ಕ್ಯಾಥೋಲಿಕ್ಕರಿರುವುದು ಮಧ್ಯ ಹಾಗೂ ದಕ್ಷಿಣ ಅಮೆರಿಕದಲ್ಲಿ. ಅತಿ ಹೆಚ್ಚು ಆರ್ಥಿಕ ಅಸಮಾನತೆ ಇರುವುದೂ ಇದೇ ಭಾಗದಲ್ಲಿ! ಏಕೆ? ಆರ್ಥಿಕ ವಾಗಿ ಅಭಿವೃದ್ಧಿ ಹೊಂದಲು ಅನ್ಯಧರ್ಮಕ್ಕೆ ಮತಾಂತರ ಹೊಂದಿ ಎಂದು ಕ್ಯಾಥೋಲಿಕ್ಕರು ಅಲ್ಲೇಕೆ ಹೇಳುತ್ತಿಲ್ಲ? ಭಾರತದಲ್ಲಾದರೆ ಬಡತನಕ್ಕೆ ಹಿಂದೂ ಧರ್ಮವೇ ಕಾರಣ ಎಂದು ದೂರುವ ಮಿಷನರಿಗಳಿಗೆ, ದಕ್ಷಿಣ ಅಮೆರಿಕದ ಜನರ ಬಡತನಕ್ಕೆ ಕ್ರೈಸ್ತ ಧರ್ಮವೇ ಕಾರಣ ಎಂದು ಏಕೆ ಅನಿಸುವುದಿಲ್ಲ?

ಇನ್ನು ಕ್ರೈಸ್ತರು ಸ್ಥಾಪಿಸಿರುವ ಆಸ್ಪತ್ರೆಗಳು, ಅನಾಥಾಶ್ರಮಗಳು, ಶಾಲೆಗಳ ಬಗ್ಗೆ ಹೇಳಿಕೊಳ್ಳುತ್ತಾರೆ. ಒಂದು ವೇಳೆ ಇವುಗಳೆಲ್ಲವನ್ನೂ ಬಡವರ ಒಳಿತಿಗಾಗಿ ಪ್ರತಿಫಲದ ನಿರೀಕ್ಷೆ ಗಳಿಲ್ಲದೆ ಮಾಡಿದ್ದರೆ ನಿಜಕ್ಕೂ ಅದ್ಭುತವೆನಿಸುತಿತ್ತು. ಆದರೆ ಆಸ್ಪತ್ರೆ, ಅನಾಥಾಲಯ, ಶಾಲೆಗಳ ಮೇಲೇಕೆ ದೊಡ್ಡ ದೊಡ್ಡ ಶಿಲುಬೆಗಳು ರಾರಾಜಿಸುತ್ತಿವೆ?! ಕ್ರೈಸ್ತ ಮಿಷನರಿಗಳ ಬಲಾತ್ಕಾರದ ಮತಾಂತರಕ್ಕೆ ೨೦೦೦ ವರ್ಷಗಳ ಇತಿಹಾಸವಿದೆ. ಹಾಗಿರುವಾಗ ಇವರಿಗೆ ಧರ್ಮವೆಂಬ ಲೇಬಲ್ ಚೇಂಜ್ ಮಾಡುವ ಉದ್ದೇಶವಿಲ್ಲ ಎಂದು ನಂಬಲು ಹೇಗೆ ಸಾಧ್ಯ? ಇವರಿಗೆ ಸೇವಾ ಉದ್ದೇಶವಿರುವುದೇ ಆಗಿದ್ದರೆ ಆಸ್ಪತ್ರೆ, ಶಾಲೆಗಳಲ್ಲಿ ಮತಪ್ರಚಾರ ಮಾಡುವುದೇಕೆ? ಮಾನವ ಜನಾಂಗ ಯಾವ ಚರ್ಚಿನ ಸ್ವತ್ತೂ ಅಲ್ಲ. ಮಾನವ ಜನಾಂಗವೆಂಬುದು ಯಾರಿಗೋ ಸೇರಿರುವ ಆಸ್ತಿಯೂ ಅಲ್ಲ. ಆತ್ಮವನ್ನು ಯಾರೋ ಬಂದು ರಕ್ಷಣೆ ಮಾಡುವ ಅಗತ್ಯವಿಲ್ಲ. ಅದು ನಮ್ಮ ಪ್ರಕೃತಿಯ ಅನಂತ ಹಾಗೂ ಸನಾತನ ಭಾಗ. ನಮ್ಮೊಳಗಿನ ದೈವತ್ವವನ್ನು ಅರ್ಥಮಾಡಿಕೊಳ್ಳಬೇಕಷ್ಟೆ. ಹಿಂದೂಯಿಸಂ ಎಂಬುದು ಪ್ರತಿಯೊಬ್ಬನಿಗೂ ಹಾಗೂ ಪ್ರತಿಯೊಬ್ಬನ ‘ಸ್ವಧರ್ಮ’ಕ್ಕೂ ಗೌರವವೀಯುವ ತತ್ತ್ವವನ್ನು ಆಧರಿಸಿದೆ. ಹಿಂದೂಯಿಸಂ ಎಂಬುದು ಇತರ ಮತಗಳಂತೆ ಇನ್ನೊಂದು ಎಂದು ಕೆಲವರು ಭಾವಿಸಿದ್ದಾರೆ. ಆದರೆ ಯೋಗ, ಧ್ಯಾನ, ವೇದ, ವೇದಾಂತದಂತಹ ಶ್ರೀಮಂತ ಸಂಪ್ರದಾಯಗಳು ಯಾವ ಧರ್ಮದಲ್ಲಿವೆ? ದುರದೃಷ್ಟವಶಾತ್, ಹಿಂದೂಧರ್ಮದ ಬಗ್ಗೆ ಎಲ್ಲೆಡೆಯೂ ತಪ್ಪುಗ್ರಹಿಕೆಗಳೇ ತುಂಬಿವೆ. ಇದಕ್ಕೆ ಹಿಂದೂಗಳೇ ಕಾರಣ. ತಮ್ಮ ಧರ್ಮದ ಹಿರಿಮೆಯನ್ನು ಸಾರುವ, ಹುಸಿ ಪ್ರಚಾರಾಂದೋಲನವನ್ನು ಮಟ್ಟಹಾಕುವ ಕೆಲಸವನ್ನು ಅವರೆಂದೂ ಮಾಡುವುದಿಲ್ಲ. ಅಷ್ಟೇಕೆ, ಅವರು ಸ್ವಧರ್ಮದ ಬಗ್ಗೆಯೇ ಸರಿಯಾಗಿ ತಿಳಿದುಕೊಳ್ಳುವುದಿಲ್ಲ. ಹಾಗಾಗಿ ಇತರರಿಗೆ ವಿವರಿಸಲು ಸಾಧ್ಯವಾಗುತ್ತಿಲ್ಲ.

ಒಂದು ವೇಳೆ, ಭಾರತವೇನಾದರೂ ಹಿಂದೂಧರ್ಮವನ್ನು ತ್ಯಜಿಸಿ ಕ್ರೈಸ್ತ ಅಥವಾ ಇಸ್ಲಾಮಿಕ್ ರಾಷ್ಟ್ರವಾದರೆ ಅದೊಂದು ದೊಡ್ಡ ನಷ್ಟವೆನ್ನದೆ ಬೇರೆ ದಾರಿಯಿಲ್ಲ. ಕ್ರೈಸ್ತ ಹಾಗೂ ಇಸ್ಲಾಂ ಧರ್ಮಗಳನ್ನು ಜಗತ್ತು ಸಾಕಷ್ಟು ನೋಡಿದೆ, ಅನುಭವಿಸಿದೆ. ಪಾಶ್ಚಿಮಾತ್ಯರೇಕೆ ಭಾರತಕ್ಕೆ ಹೋಗುತ್ತಾರೆ? ಭಾರತದ ಆಧ್ಯಾತ್ಮಿಕ eನ, ಆಧ್ಮಾತ್ಮಿಕ ಸಂಪ್ರದಾಯದ ಸಂಪತ್ತಿಗಾಗಿ ಬರುತ್ತಾರೆ. ನಿಜ ಹೇಳಬೇಕೆಂದರೆ ರಫ್ತು ಮಾಡುವಷ್ಟು ಆಧ್ಯಾತ್ಮಿಕ ಸಂಪತ್ತನ್ನು ಭಾರತ ಹೊಂದಿದೆ….

ಇಷ್ಟೆಲ್ಲವನ್ನೂ ಹೇಳಿದ್ದು ಯಾವ ಬಜರಂಗಿಯೂ ಅಲ್ಲ!

ಯಾರೋ ಕೋಮುವಾದಿ ಇರಬೇಕು ಎನ್ನಲು ಆತ ಆರೆಸ್ಸೆಸ್ಸಿಗನೂ ಅಲ್ಲ. ಹಿಂದುತ್ವವಾದಿ ಎಂದು ಕರೆಯಲು ಆತ ವಿಎಚ್‌ಪಿ ನಾಯಕನೂ ಅಲ್ಲ, ಮನುವಾದಿ ಎನ್ನಲು ಬ್ರಾಹ್ಮಣನೂ ಅಲ್ಲ. ಒಬ್ಬ ಕ್ಯಾಥೋಲಿಕ್ ಕ್ರೈಸ್ತನಾಗಿ ಮಿಷನರಿಗಳ ಕುಟುಂಬದಲ್ಲಿ ಹುಟ್ಟಿ, ಮನೆಯಲ್ಲೇ ಮಿಷನರಿಗಳ ನಗ್ನದರ್ಶನ ಮಾಡಿಕೊಂಡಂತಹ ಡಾ. ಡೆವಿಡ್ ಫ್ರಾಲಿ!! ಅಮೆರಿಕದ ಫ್ರಾಲಿ, “Christians Under Siege: A Missionary Ploy” ಎಂಬ ಪುಸ್ತಕದಲ್ಲಿ ಮತಾಂತರಿಗಳನ್ನು ಈ ರೀತಿ ಬೆತ್ತಲು ಮಾಡಿದ್ದಾರೆ. ಅವರು ಹೇಳಿದ ಹಾಗೆ, ಈ ಮಿಷನರಿಗಳು ಎಂತಹ ಚತುರಮತಿಗಳೆಂಬುದಕ್ಕೆ ಮಂಗಳೂರಿನಲ್ಲಿ ನಡೆದ ಘಟನೆಯನ್ನೇ ತೆಗೆದುಕೊಳ್ಳಿ. ಯಾವುದಾದರೂ ಫಿಲ್ಮ್‌ಸ್ಟಾರ್ ಅಥವಾ ಸೆಲೆಬ್ರಿಟಿಗಳನ್ನು ಕರೆಸಿದರೆ ಮಾಧ್ಯಮಗಳಲ್ಲಿ ಭಾರೀ ಪ್ರಚಾರ ದೊರೆಯುತ್ತದೆ ಎಂಬುದು ಮಿಷನರಿಗಳಿಗೆ ಚೆನ್ನಾಗಿ ಗೊತ್ತು. ಮಾಧ್ಯಮಗಳಲ್ಲಿ ಪ್ರಚಾರ ಮಾಡಿ ಹಿಂದೂ ಹೋರಾಟಗಾರರ ಆತ್ಮಸ್ಥೈರ್ಯವನ್ನೇ ಉಡುಗಿಸಲು ಪ್ರಯತ್ನಿಸುತ್ತಾರೆ. ಅದಕ್ಕಾಗಿಯೇ ಮಹೇಶ್ ಭಟ್ ಅವರನ್ನು ಕರೆಸಿ ಹೇಳಿಕೆ ಕೊಡಿಸಿದರು. ಮುರಿದುಬಿದ್ದ ಶಿಲುಬೆಯನ್ನು ಕಂಡಾಗ ಎಂಥವರಿಗೂ ಬೇಸರವಾಗುತ್ತದೆ. ಆದರೆ ಅಂತಹ ದುರದೃಷ್ಟಕರ ಘಟನೆಗೆ ಮೂಲ ಕಾರಣವೇನೆಂಬುದನ್ನು ಮಾತ್ರ ಯಾರೂ ಗಮನಿಸುವುದಿಲ್ಲ. “ಬ್ರಾಹ್ಮಣರಿಗೆಲ್ಲ ಮೂಲಪುರುಷನಾದ ವಸಿಷ್ಠ ಮಹರ್ಷಿ ಶ್ರೀರಾಮನಿಗೆ ಗುರುವೂ ಆಗಿದ್ದಾನೆ. ಈತ ವೇಶ್ಯೆಯಾದ ಊರ್ವಶಿಯ ಮಗ. ಸೂಳೆಯಾದ ಊರ್ವಶಿ ಮಹಾವಿಷ್ಣುವಿಗೆ ಕುಮಾರಿ. ಶ್ರೀಕೃಷ್ಣ ಅತ್ಯಂತ ಪ್ರಕಾಶಮಾನವಾದ ಶಮಂತಕಮಣಿಯನ್ನು ಧರಿಸಲು ಯೋಗ್ಯನಲ್ಲದಿದ್ದರೆ ಆತ ನಿಮ್ಮ ಪಾಪವನ್ನು ಹೇಗೆ ಬಿಡಿಸುವನು?”-ಹೀಗೆ ಅವಹೇಳನ ಮಾಡಿದರೆ ಯಾವ ಸ್ವಾಭಿಮಾನಿ ಹಿಂದೂ ಸುಮ್ಮನಿದ್ದಾನು? ಒಂದು ವೇಳೆ, ತನ್ನ ಜೀವವನ್ನೇ ರಕ್ಷಿಸಿಕೊಳ್ಳಲಾಗದ ಜೀಸಸ್ ಜಗತ್ತನ್ನು ಹೇಗೆ ರಕ್ಷಿಸಿಯಾನು? ಎಂದು ನಾವೂ ಪ್ರಶ್ನಿಸಿದ್ದರೆ ಕ್ರೈಸ್ತರು ಸುಮ್ಮನಿರುತ್ತಿದ್ದರೆ?

ಅದು ಬಜರಂಗ ದಳವಿರಬಹುದು ಅಥವಾ ಇನ್ನಾವುದೇ ಸಂಘಟನೆ ಇರಬಹುದು. ಧರ್ಮದ ಅವಹೇಳನ ಮಾಡಿದಾಗ ಕಾನೂನನ್ನು ಕೈಗೆತ್ತಿಕೊಳ್ಳುವುದು ಸಹಜ. ಡ್ಯಾನಿಶ್ ಕಾರ್ಟೂ ನಿಸ್ಟ್ ಬರೆದ ವ್ಯಂಗ್ಯಚಿತ್ರ ಪ್ರಕಟವಾದಾಗ ಮುಸ್ಲಿಮರು, ಡಾ ವಿನ್ಸಿ ಕೋಡ್, ಜೀಸಸ್‌ಕ್ರೈಸ್ಟ್ ಸೂಪರ್‌ಸ್ಟಾರ್ ಚಿತ್ರಗಳು ಬಂದಾಗ ಕ್ರೈಸ್ತರೂ ಕಾನೂನನ್ನು ಕೈಗೆತ್ತಿಕೊಂಡಿದ್ದರು. ಹಾಗಾಗಿ ಕಳೆದ ವಾರ ಕಂಡುಬಂದ ಹಿಂದೂಗಳ ಪ್ರತಿ ರೋಧವನ್ನು ಸಾರಾಸಗಟಾಗಿ ಖಂಡಿಸಲು ಸಾಧ್ಯವಿಲ್ಲ. ಹಿಂದೂಗಳನ್ನು ಕೆರಳಿಸಿದ್ದು ಮೊದಲ ತಪ್ಪು.

ಇದೇನೇ ಇರಲಿ, ಹಿಂದೂ ಧರ್ಮವನ್ನು ಅವಹೇಳನ ಮಾಡಿದವರಿಗೆ ಈಗ ಬಿಸಿ ಮುಟ್ಟಿಸಿರುವುದು ಸಾಕು. ಚರ್ಚ್ ಒಡೆಯುವ ಕೆಲಸ ಬೇಡ. ಆದರೆ ನಿಮ್ಮ ಊರು, ಕೇರಿ, ಕಾಲೋನಿಗೆ ಯಾರಾದರೂ ಮತಾಂತರ ಮಾಡಲು ಬಂದರೆ ಸುಮ್ಮನೆ ಕುಳಿತುಕೊಳ್ಳಬೇಡಿ. ಅವರು ಹಂಚುವ ಅವಹೇಳನಕಾರಿ ಪುಸ್ತಕಗಳನ್ನು ಮೊದಲು ಪಡೆದುಕೊಂಡು, ಆನಂತರ ಮೈಗೆ ಬಿಸಿ ಮುಟ್ಟಿಸಿ. ಆಧಾರ ಸಮೇತ ಪೊಲೀಸರಿಗೊಪ್ಪಿಸಿ. ದಕ್ಷಿಣ ಕೊರಿಯಾ, ಅಂಗೋಲಾ, ಬುರುಂಡಿ, ಕೆಮರೂನ್, ಚಾಡ್, ಝೈರ್, ಕೀನ್ಯಾ, ಫಿಲಿಪ್ಪೀನ್ಸ್, ದಕ್ಷಿಣ ಆಫ್ರಿಕಾ, ತಾಂಜಾನಿಯಾ ಇವ್ಯಾವುದೂ ಮೂಲತಃ ಕ್ರೈಸ್ತ ರಾಷ್ಟ್ರಗಳಾಗಿರಲಿಲ್ಲ. ಇಂದು ಕ್ರೈಸ್ತರು ಬಹುಸಂಖ್ಯಾತರಾಗಿದ್ದಾರೆ. ಹಿಂದೂಗಳಿಂದ ಕೂಡಿದ್ದ ನಮ್ಮ ಮಣಿಪುರ, ಮೇಘಾಲಯ, ನಾಗಾಲ್ಯಾಂಡ್‌ಗಳು ಈಗಾಗಲೇ ಕ್ರೈಸ್ತ ರಾಜ್ಯಗಳಾಗಿವೆ. ಆಂಧ್ರದ ವಿಜಯ ಭಾಸ್ಕರ ರೆಡ್ಡಿ, ವೈ.ಎಸ್. ರಾಜಶೇಖರ ರೆಡ್ಡಿ ಇವರ ಹೆಸರುಗಳ ಮುಂದೆ ರೆಡ್ಡಿ ಎಂಬ ಹಿಂದೂ ಸರ್‌ನೇಮ್ ಇದ್ದರೂ ಇವರ್‍ಯಾರೂ ಹಿಂದೂಗಳಲ್ಲ, ಮತಾಂತರಗೊಂಡಿರುವ ಕ್ರೈಸ್ತರು. ಒಂದು ವೇಳೆ, ಮತಾಂತರ ಹೀಗೇ ಸಾಗಿದರೆ ಭಾರತ ಭಾರತವಾಗಿ ಉಳಿಯುವುದಿಲ್ಲ. ಇಷ್ಟಾಗಿಯೂ ದೇಶಕ್ಕೆ ಬಾಂಬಿಡುತ್ತಿರುವ ಇಂಡಿಯನ್ ಮುಜಾಹಿದ್ದೀನ್ ಮತ್ತು ಮತಾಂತರದ ಮೇಲೆ ನಿಷೇಧ ಹೇರುವಂತೆ ಒತ್ತಾಯಿಸುವ ಬದಲು ಸ್ವಾಭಿಮಾನಿ ಹಿಂದೂ ಸಂಘಟನೆಗಳನ್ನು ನಿಷೇಧಿಸಬೇಕು ಎನ್ನುತ್ತಿರುವ ವೀರಪ್ಪ ಮೊಯ್ಲಿ, ಖರ್ಗೆ, ಡಿಕೆಶಿ, ದೇವೇಗೌಡ ಇವರು ದೇಶಕ್ಕೆ ಇನ್ನೂ ಬಲುದೊಡ್ಡ ಅಪಾಯವಾಗಿ ಪರಿಣಮಿಸುತ್ತಿದ್ದಾರೆ.

ಹಾಗಿರುವಾಗ ಗೋಕರ್ಣದ ಹಸ್ತಾಂತರ ತಡೆಯಲು ತೊಡೆತಟ್ಟಿಕೊಂಡು ಬೀದಿಗಿಳಿಯಲು ಸಿದ್ಧರಾಗುತ್ತಿರುವ ನಾಡಿನ ಯತಿವರ್ಯರು ಮೊದಲು ಧರ್ಮ ರಕ್ಷಣೆಗಾಗಿ ತೋಳನ್ನೇರಿಸುವುದು ಒಳ್ಳೆಯದು!! ಅಷ್ಟಕ್ಕೂ ಇಂದು ನಾವು ಎಚ್ಚೆತ್ತುಕೊಂಡು ಹೋರಾಟ ಮಾಡದಿದ್ದರೆ ನಮ್ಮ ಯಾವ ಮಠಮಾನ್ಯ, ಮಂದಿರಗಳೂ ಉಳಿಯುವುದಿಲ್ಲ. ಈ ಸತ್ಯ ನಾಡಿನ ಎಲ್ಲ ಜಾತಿ ಮಠ, ಮಠಾಧೀಶರಿಗೂ ಆದಷ್ಟು ಬೇಗ ಅರ್ಥವಾದರೆ ಒಳಿತು. ಅವರೂ ಧರ್ಮ ರಕ್ಷಣೆಗೆ ಮುಂದಾಗಬೇಕು.

61 Responses to “ಹಾಗಂತ ಹೇಳಿದವನು ಯಾವ ಬಜರಂಗಿಯೂ ಅಲ್ಲ !”

  1. john says:

    hello my dear prataap,
    A good writer never hurt the feelings of the brothers and sisters of other religion. you are dishonouring yourself by writing such kind of articles. you have good talent of writing the articles. you have style of writing. you write the articles that which reconcile with the other religion. Allah, Shiva, Parameshwara, Yahweh are the terms and names which are used in their respective religion. Allah is not the God of Muslims. Allah is the term for God used in Islam Language. and also Parameshwara , Shiva so on, are the terms used in Indian language. Being a Christian if I say ‘Allah Oh Akbar’ is nothing wrong. the meaning of that phrase is `God is almighty` the meaning of parameshwara is `Parama Iishwara` God of all. so, for it looks very silly saying that ‘ my religion is true religion, my God is true God. After our death we are going to One destiny, we are going to meet One God. only the style of the living may be different but our goal will be the same, that is the Heaven. All will be saved and all will be going to Heaven. There is no discrimination with regard to the religion. All have the weanesses. Christians have their own weaknesses, hindu brotheren have their own weaknesses, muslim bretheren too have their own weaknesses. as i read the comments of the articles, most of the lovers of this article, speak about the history of 2000 years. I agree that there were failures and mistakes. Now people are educated. now the modern world is the world of knowledge. People are not the same as they were in the past. the lifestyle is being changed. the thinking style has been changed. Now we should act as matured and educated persons.

  2. roshan says:

    35# comments to Kumar.
    The question which was posed by Kumar in comment number 35, was also asked to Jesus by the mockig soldiers who crucified Him. ( Gospel according to St. Luke Chapter 23: 35. and also the same statement is said by one of the Criminal Robber. (luke’s Gosplel Chapter 23:39). I preume Kumar as one of the mocking robber.

  3. shakthi says:

    Dear Friend , i want to appriciate you for your daring and mavrick articles in vijaya karnataka. i have some queastions for you,

    * Conversion is the only way to take India in to 21th century as transforming country. conversion is having many dimentions sociological. interlectual,Psycological, spiritual dimentions.
    * can you find any short comings in character of Christ? no one is perfect in the world, you point out faults with christians not with christ.
    * In india the post morden renoissence has started in 18 th century, i want to list out some of the serious issues which India was facing that time .
    * ILLITRACY, FEMALE FOETICIDE, CHILD MARRIAGE,INFANTICIDE, CASTISM, MANTHRA, HUMAN SACRIFICES, FALSE BELIEFS, VARNASHARAMA , THANDRA, ETC.
    * William Cary, willfer force are the missionaries want to enter to India because ,the british company was decided that state should not inhibit the belief systems of India. The only way to enter to india is to open the interlectual minds of People in India through conversions.
    * i want your Full postal Address to send some books to support my views. i aggree to disagree many of your views on conversions.
    * with love
    * shakthi
    * 9901680849

  4. Raghu says:

    *Nannanu nambidre matra ninge swarga-idu christian dharma. *alla nannu nambadavarannu kolli- idu muslim dharma. *Ninu elle iddaru konege nannallige baruve- idu hindu dharma. Decide which religion is great.

  5. Prathap simha niv obru great manushya nuru koti hindu gali ge dairya thumbuva nimmanthavaru e pavithra baratha bumiyalli matha matha hutti barbaku koti koti hindugala shakthi yagi irbeku
    jai HINDUSTAN

  6. Gangaraju says:

    Hello all,

    Please dont get confuse,
    our Brother Prathap not abusing christian or christ, he is telling Hindhism is great and please leave Hindhus as Hindhus.

    A true follower of a religion , should first learn positives of a religion,
    yes i will agree no religion is perfect.

    Th outflaw , that only way to find peace is via some religion , are base less comments.

    If you belonging to a religion , first follow the things which are relevent, meaningful, doesn’t harm anyone, doesn’t interrupts others freedom.

    I hope all the people against to this article got something.

  7. jagadeesha says:

    Dear pratap,

    I understand the pain you have on conversion , but we need to correct lot of thing within ourselves so ppl. will not get attract to other religion and I know you will agree with me on that. you are a thinker and writer where I’m not figure out some steps to stop this. we need action not reaction.

    with pain…..

  8. Dear Sir,

    As you assume conversion is happening not for a single reason. Majority of the Hindhu get converted voluntarily, due to unavoidable caste system. Why don’t u ever talk about that sir. Caste is thicker then blood in in this so called cultured country. As long as Caste prevails conversion will continue. Sir, please always do not try to decorate the garbage. Instead give proper ways to abolish caste system. If u can’t solve a problem then why u comment on that, just to get your beans to boil. Humanity, Equality, sharing these are important are not with fellow citizens tell me my dear Hindhu Lion.

  9. lovely lamp says:

    he does not have any beans to get them boiled mr. ramesh mahadevpura. i agree that problems need to be solved instead of getting commented. thats what is being done by pratapanna, he is a writer in profession,so he has adopted writing and waking up the active lives to solve the problem thats it. we r not abusing other communities,but lets love our religion and make it still rich.

  10. harish says:

    ನಮ್ಮ ರಾಜಕಾರಣಿಗಳು ವೋಟ್ ಬ್ಯಾಂಕ್ ವ್ಯವಸ್ಥೆಗಾಗಿ ನಮ್ಮ ದೇಶ ಧರ್ಮ ಸಂಸೃತಿ ಇವೆಲ್ಲವನ್ನು ನಾಶ ಮಾಡಲು ಹೊರಟಿದ್ದಾರೆ . ಹಾಗೂ ಹಿಂದೂ ಜನಗಳಿಗೆ ತಮ್ಮ ಧರ್ಮದ ಬಗ್ಗೆ ಸರಿಯಾಗಿ ತಿಳಿಯದಿರುವುದೇ ಇದಕ್ಕೆ ಕಾರಣ

  11. Narayana rao says:

    Really good article. It helps to know our negligence about holy Hinduism…