<?xml version="1.0" encoding="UTF-8"?>
<rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	>

<channel>
	<title>Pratap Simha</title>
	<atom:link href="http://pratapsimha.com/feed/" rel="self" type="application/rss+xml" />
	<link>http://pratapsimha.com</link>
	<description>Just another WordPress weblog</description>
	<pubDate>Sun, 04 Jan 2009 15:51:32 +0000</pubDate>
	<generator>http://wordpress.org/?v=2.5.1</generator>
	<language>en</language>
			<item>
		<title>ಸಮಾಜದ ಸಾಕ್ಷಿಪ್ರಜ್ಞೆಯನ್ನು ಎತ್ತಿಹಿಡಿಯಲು ಸದಾ ಅವರು ನಮ್ಮೊಡನಿರಬೇಕು</title>
		<link>http://pratapsimha.com/bettale-jagattu/veerendraheggade/</link>
		<comments>http://pratapsimha.com/bettale-jagattu/veerendraheggade/#comments</comments>
		<pubDate>Sun, 04 Jan 2009 15:49:17 +0000</pubDate>
		<dc:creator>Pratap Simha</dc:creator>
		
		<category><![CDATA[Bettale-Jagattu]]></category>

		<guid isPermaLink="false">http://pratapsimha.com/?p=75</guid>
		<description><![CDATA[ಮಂಗಳೂರಿನವರು ಸಾಮಾನ್ಯವಾಗಿ ಮೂಗುಮುರಿ ಯುವ ದೂರದ ಧಾರವಾಡದಲ್ಲಿ ವಿಶ್ವದರ್ಜೆಯ ಡೆಂಟಲ್ ಕಾಲೇಜು, ಜತೆಗೊಂದು ಎಂಜಿನಿಯ ರಿಂಗ್ ಕಾಲೇಜು, ಮೈಸೂರಿನಲ್ಲೊಂದು ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ಹಾಗೂ ಮಹಿಳಾ ಪಿಯು ಕಾಲೇಜು, ಅಲೋಪತಿ ಬಿಟ್ಟರೆ ಬೇರೆ ವೈದ್ಯರೇ ಇಲ್ಲವೆಂಬಂತಿರುವ ಹಾಸನದಲ್ಲಿ ಆಯುರ್ವೇದ ಕಾಲೇಜು, ಉಡುಪಿಯಲ್ಲಿ ಮತ್ತೊಂದು, ಮಂಗಳೂರಿನಲ್ಲಿ ಕಾನೂನು ಕಾಲೇಜು&#8230; ಹೀಗೆ ಒಂದೊಂದು ದಿಕ್ಕುಗಳಲ್ಲಿ ಒಂದೊಂದು ಕಾಲೇಜುಗಳನ್ನು ‘ಖಾವಂದ’ರೇಕೆ ಕಟ್ಟಿದರು?

ಇಂತಹ ಪ್ರಶ್ನೆ ಆಗಾಗ್ಗೆ ಕಾಡಿದ್ದಿದೆ.
ಈ ಎಲ್ಲ ಕಾಲೇಜುಗಳನ್ನು ಧರ್ಮಸ್ಥಳದ ಬಳಿ ಇರುವ ಉಜಿರೆಯಲ್ಲೇ ಕಟ್ಟಿದ್ದರೆ ಉಜಿರೆಯನ್ನು ಮತ್ತೊಂದು ಮಣಿ(ನಿ)ಪಾಲವನ್ನಾಗಿಸಬಹುದಿತ್ತು. ಕಾಲ ಬುಡದಲ್ಲೇ [...]]]></description>
			<content:encoded><![CDATA[<p>ಮಂಗಳೂರಿನವರು ಸಾಮಾನ್ಯವಾಗಿ ಮೂಗುಮುರಿ ಯುವ ದೂರದ ಧಾರವಾಡದಲ್ಲಿ ವಿಶ್ವದರ್ಜೆಯ ಡೆಂಟಲ್ ಕಾಲೇಜು, ಜತೆಗೊಂದು ಎಂಜಿನಿಯ ರಿಂಗ್ ಕಾಲೇಜು, ಮೈಸೂರಿನಲ್ಲೊಂದು ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ಹಾಗೂ ಮಹಿಳಾ ಪಿಯು ಕಾಲೇಜು, ಅಲೋಪತಿ ಬಿಟ್ಟರೆ ಬೇರೆ ವೈದ್ಯರೇ ಇಲ್ಲವೆಂಬಂತಿರುವ ಹಾಸನದಲ್ಲಿ ಆಯುರ್ವೇದ ಕಾಲೇಜು, ಉಡುಪಿಯಲ್ಲಿ ಮತ್ತೊಂದು, ಮಂಗಳೂರಿನಲ್ಲಿ ಕಾನೂನು ಕಾಲೇಜು&#8230; ಹೀಗೆ ಒಂದೊಂದು ದಿಕ್ಕುಗಳಲ್ಲಿ ಒಂದೊಂದು ಕಾಲೇಜುಗಳನ್ನು ‘ಖಾವಂದ’ರೇಕೆ ಕಟ್ಟಿದರು?</p>
<p><span id="more-75"></span></p>
<p>ಇಂತಹ ಪ್ರಶ್ನೆ ಆಗಾಗ್ಗೆ ಕಾಡಿದ್ದಿದೆ.</p>
<p>ಈ ಎಲ್ಲ ಕಾಲೇಜುಗಳನ್ನು ಧರ್ಮಸ್ಥಳದ ಬಳಿ ಇರುವ ಉಜಿರೆಯಲ್ಲೇ ಕಟ್ಟಿದ್ದರೆ ಉಜಿರೆಯನ್ನು ಮತ್ತೊಂದು ಮಣಿ(ನಿ)ಪಾಲವನ್ನಾಗಿಸಬಹುದಿತ್ತು. ಕಾಲ ಬುಡದಲ್ಲೇ ಕಾಲೇಜುಗಳಿದ್ದರೆ ಆಡಳಿತಯಂತ್ರದ ಮೇಲೆ ನಿಗಾವನ್ನೂ ಇಡಬಹುದಿತ್ತು, ಆದಾಯದ ಮೇಲೂ ನಿಯಂತ್ರಣ ಸಾಧಿಸ ಬಹುದಿತ್ತು. ಈ ರೀತಿಯ ಯೋಚನೆಗಳೇಕೆ ಖಾವಂದರಲ್ಲಿ ಬರಲಿಲ್ಲ? ಧರ್ಮಸ್ಥಳದ ಧರ್ಮಾಧಿಕಾರಿಯಾದ ಖಾವಂದರು ಯಾಕಾಗಿ ರಾಜ್ಯದ ವಿವಿಧೆಡೆಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪನೆ ಮಾಡಿದರು? ಇಂಥದ್ದೊಂದು ಪ್ರಶ್ನೆಯನ್ನು ಮುಂದಿಟ್ಟುಕೊಂಡು ಉತ್ತರ ಹುಡುಕಲು ಹೊರಟರೆ ಖಾವಂದರ ಕಾಳಜಿ ಅರ್ಥ ವಾಗುತ್ತಾ ಹೋಗುತ್ತದೆ, ಅವರಲ್ಲಿರುವ ಸಾಮಾಜಿಕ ನ್ಯಾಯ ತೆರೆದುಕೊಳ್ಳುತ್ತಾ ಸಾಗುತ್ತದೆ. ಒಬ್ಬ ಆಳುವ ಮುಖ್ಯಮಂತ್ರಿ ಯಲ್ಲಿರಬೇಕಾದ ದೂರದೃಷ್ಟಿ, ಸಾಮಾಜಿಕ ನ್ಯಾಯ, ರಾಜ್ಯದ ಸಮಗ್ರ ಅಭಿವೃದ್ಧಿಯ ಪರಿಕಲ್ಪನೆ ಖಾವಂದರಲ್ಲಿ ಕಾಣಸಿಗುತ್ತದೆ. ಅಲ್ಲಾ, ಯಾರೀ ಖಾವಂದರು ಎಂಬ ಪ್ರಶ್ನೆ ಕಾಡುತ್ತಿದೆಯೇ? ‘ಖಾವಂದ’ ಎಂಬುದು ಪಾರ್ಸಿ ಪದ. ಧಣಿ, ರಕ್ಷಕ, ಒಡೆಯ ಎಂಬ ಅರ್ಥ ಅದಕ್ಕಿದೆ. ಅಂದರೆ ಒಂದು ಕ್ಷೇತ್ರದ, ಪ್ರಾಂತ್ಯದ ಒಡೆಯರನ್ನು ‘ಖಾವಂದ’ ಎಂದು ಕರೆಯುವ ವಾಡಿಕೆ ಹಿಂದೆ ಇತ್ತು. ಧರ್ಮಸ್ಥಳವೂ ಒಂದು ಬೀಡು. ಅದರ ಒಡೆಯರಾದ ಧರ್ಮಾಧಿಕಾರಿ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರನ್ನು ಖಾವಂದರು ಎನ್ನುತ್ತಾರೆ, ಆದರೆ ಭಯದಿಂದಲ್ಲ ಪ್ರೀತಿ, ಗೌರವಗಳಿಂದ.</p>
<p>ವೀರೇಂದ್ರ ಹೆಗ್ಗಡೆಯವರು ಜನಿಸಿದ್ದು ೧೯೪೮, ನವೆಂಬರ್ ೨೫ರಂದು. ಧರ್ಮಸ್ಥಳದ ಚುಕ್ಕಾಣಿ ಹಿಡಿದಿದ್ದು ೧೯೬೮ರಲ್ಲಿ. ತಂದೆ ರತ್ನವರ್ಮ ಹೆಗ್ಗಡೆಯವರ ಅಕಾಲಿಕ ನಿಧನ ಅತ್ಯಂತ ಚಿಕ್ಕವಯಸ್ಸಿನಲ್ಲಿಯೇ ಅತಿ ಭಾರವಾದ ಜವಾಬ್ದಾರಿಯನ್ನು ಹೆಗಲಿಗೆ ಹಾಕಿತು. ಒಬ್ಬ ವ್ಯಕ್ತಿಯ ನಿಜವಾದ ಗುಣವನ್ನು ಅರಿಯ ಬೇಕಾದರೆ ಆತನಿಗೆ ಅಧಿಕಾರ ಕೊಟ್ಟು ನೋಡಬೇಕು ಎಂಬ ಮಾತಿದೆ. ಚುನಾವಣೆಗೆ ಮೊದಲು ನಮ್ಮ ಕೈ, ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೇರಿದ ಮೇಲೆ ನಮ್ಮ ವಿಶ್ವಾಸವನ್ನು ‘ಶೇಕ್’ ಮಾಡುವ ರಾಜಕಾರಣಿಗಳನ್ನು ನೋಡಿರುವ ನಮಗೆ ಅಧಿಕಾರದಿಂದ ಬರುವ ಮದದ ಪರಿಚಯ ಚೆನ್ನಾಗಿಯೇ ಆಗಿದೆ. ಹಾಗಿರುವಾಗ ಇಪ್ಪತ್ತರ ಕಿರಿ ವಯಸ್ಸಿನಲ್ಲಿ ಪಟ್ಟಕ್ಕೇರಿದ ಹೆಗ್ಗಡೆಯವರೂ ತಪ್ಪೆಸಗಬಹುದಾದ, ದರ್ಪದಲ್ಲಿ ಅಚಾತುರ್ಯಗಳಿಗೆ ಅವಕಾಶವೀಯಬಹುದಾದ ಎಲ್ಲ ಸಾಧ್ಯತೆಗಳೂ ಇದ್ದವು.  ಮಂಜುನಾಥನನ್ನು ದುಡ್ಡಿನ ಗಿಡ ಮಾಡಿಕೊಂಡು, ಬಂಗಲೆ ಕಟ್ಟಿಕೊಂಡು ರಾಜ್ಯಭಾರ ಮಾಡಬಹುದಿತ್ತು. ಜನರ ಭಕ್ತಿಯನ್ನೇ ಬಂಡವಾಳವನ್ನಾಗಿಸಿಕೊಳ್ಳ ಬಹುದಿತ್ತು. ಮಠ ಕಟ್ಟಿಕೊಂಡು ಶಿಲಾಯುಗದ ಕಾಲದ ಕಥೆಗಳನ್ನು ಹೇಳಿಕೊಂಡು ಸಾಮಾಜಿಕ ಸೇವೆಯ ಬದಲು ಭಕ್ತರಿಂದ ಸೇವೆ ಮಾಡಿಸಿಕೊಳ್ಳುವ ಮತ್ತೊಬ್ಬ ಸ್ವಾಮಿಯೂ ಆಗಬಹುದಿತ್ತು. ಆದರೆ ಹಾಗಾಗಲಿಲ್ಲ.</p>
<p>ಅದಕ್ಕೆ ಬಹುಶಃ ರತ್ನವರ್ಮ ಹೆಗ್ಗಡೆಯವರೇ ಕಾರಣವಿದ್ದಿರ ಬಹುದು.</p>
<p>ಯಾವುದಾದರೂ ಹುಡುಗನಿಗೆ ಅಪ್ಪ-ಅಮ್ಮ ಯಾರೂ ಇಲ್ಲ, ಇದ್ದರೂ ತಿನ್ನುವುದಕ್ಕೇ ಗತಿಯಿಲ್ಲ ಎಂದಾಗಿದ್ದರೆ ಆತನನ್ನು ಸಿದ್ಧಗಂಗಾ ಮಠಕ್ಕೆ ಬಿಟ್ಟು ಬನ್ನಿ, ಶ್ರೀ ಶಿವಕುಮಾರ ಸ್ವಾಮೀಜಿಗಳ ಸುಪರ್ದಿಗೆ ವಹಿಸಿ ಬಿಡಿ ಉದ್ಧಾರವಾಗುತ್ತಾನೆ ಎನ್ನುವುದನ್ನು  ಉತ್ತರ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಕಾಣಬಹುದು. ಹಾಗೆಯೇ ದಕ್ಷಿಣ ಕನ್ನಡದಲ್ಲಿ ಉಚಿತ ಅನ್ನ ಹಾಗೂ ಅಕ್ಷರ ದಾಸೋಹವೆಂದ ಕೂಡಲೇ ನೆನಪಿಗೆ ಬರುತ್ತಿದ್ದುದು ಉಜಿರೆಯ ‘ಸಿದ್ಧವನ ಗುರುಕುಲ’. ಎಷ್ಟೋ ಬಡಮಕ್ಕಳು ಬರಿಗೈಲಿ ಬಂದು ಪದವಿ ಸರ್ಟಿಫಿಕೆಟ್‌ನೊಂದಿಗೆ ಇಲ್ಲಿಂದ ಹೊರಹೋಗಿದ್ದಾರೆ. ಸಿದ್ಧವನವೆಂಬುದು ರತ್ನವರ್ಮ ಹೆಗ್ಗಡೆಯವರು ಬಡಮಕ್ಕಳಿ ಗಾಗಿಯೇ ಕಟ್ಟಿಸಿದ ಗಂಜಿಕೇಂದ್ರವೆಂದರೂ ತಪ್ಪಾಗದು. ಬಹಳ ಇತ್ತೀಚಿನವರೆಗೂ ಒಂದೇ ಪ್ಯಾಂಟು ವಾರದ ೬ ದಿನವೂ ಕಾಲೇಜಿನ ಬೇರೆ ಬೇರೆ ಕ್ಲಾಸ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದೆಯೆಂದರೆ ಅದು ಸಿದ್ಧವನದ ಯಾವುದೋ ಒಬ್ಬ ವಿದ್ಯಾರ್ಥಿಯದ್ದು, ಉಳಿದವರು ಸರದಿಯ ಮೇಲೆ ಹಾಕಿಕೊಳ್ಳುತ್ತಿದ್ದಾರೆ  ಎಂದು ಆಡಿಕೊಳ್ಳುವ ಸನ್ನಿವೇಶವಿತ್ತು. ಅಂತಹ ಬಡ ಹಿನ್ನೆಲೆಯಿಂದ ಬಂದವರೇ ಸಿದ್ಧವನದಲ್ಲಿರುತ್ತಿದ್ದರು. ತನ್ನ ಮಗನಿಗೂ ಪರಿಸ್ಥಿತಿಯ ಪರಿಚಯವಾಗಬೇಕು, ಬಡವರ ನೋವು ಅರ್ಥವಾಗಬೇಕು, ಕಷ್ಟದಲ್ಲಿ ಜೀವನ ನಡೆಸುವುದು, ಕಷ್ಟಗಳ ನಡುವೆಯೂ ಕಲಿತು ಮೇಲೆ ಬರುವುದನ್ನು ಕಲಿಸಬೇಕು ಎಂಬ ಆಶಯದಿಂದ ರತ್ನವರ್ಮ ಹೆಗ್ಗಡೆಯವರು ವೀರೇಂದ್ರ ಹೆಗ್ಗಡೆಯವರನ್ನೂ ಸಿದ್ಧವನಕ್ಕೆ ಸೇರಿಸಿದ್ದರು. ಹಾಗೆ ಸೇರಿಸಿದ ಕಾರಣದಿಂದಲೋ ಏನೋ ಹೆಗ್ಗಡೆಯವರು ಒಬ್ಬ ಟಿಪಿಕಲ್ ಸ್ವಾಮಿ ಅಥವಾ ಧರ್ಮಾಧಿಕಾರಿಯಾಗುವ ಬದಲು ಪಟ್ಟಕ್ಕೇರಿದ ಮೇಲೆ ಅವರಲ್ಲಿ ಸಮಾಜ ಸುಧಾರಣೆಯ ತುಡಿತ ಕಾಣತೊಡಗಿತು.</p>
<p>ಧರ್ಮಸ್ಥಳವಿರುವುದು ದಕ್ಷಿಣ ಕನ್ನಡದಲ್ಲಾದರೂ ಮಂಜುನಾಥನ ಬಳಿಗೆ ಬರುವ ಭಕ್ತಾದಿಗಳು ನಾಡಿನ ಮೂಲೆ ಮೂಲೆಯವರು. ಹಾಗಾಗಿಯೇ ಕಾಣಿಕೆಯನ್ನು ಕುಡಿಕೆಗೆ ಹಾಕಿಡುವ ಬದಲು ವೀರೇಂದ್ರ ಹೆಗ್ಗಡೆಯವರು ಧಾರವಾಡ, ಮೈಸೂರು, ಹಾಸನ ಹೀಗೆ ರಾಜ್ಯದ ವಿವಿಧ ಭಾಗಗಳಲ್ಲಿ ಸುಮಾರು ೫೦ಕ್ಕೂ ಹೆಚ್ಚು ಶೈಕ್ಷಣಿಕ ಕೇಂದ್ರಗಳನ್ನು ಕಟ್ಟುವ ಮೂಲಕ ವಿದ್ಯಾದಾನದಲ್ಲೂ ಸಾಮಾಜಿಕ ನ್ಯಾಯವನ್ನು ತರಲು ಹೊರಟರು. ವಿದ್ಯಾ ಸಂಸ್ಥೆಗಳನ್ನು ಕಟ್ಟಿದ್ದರಿಂದ ಆದಾಯ ಬಂತಾ ದರೂ ಲಾಭದ ಉದ್ದೇಶದಿಂದ ಏನನ್ನೂ ಮಾಡಲಿಲ್ಲ. ಹಾಗಾಗಿ ಶಿಕ್ಷಣ ನೀಡಿಕೆಯಲ್ಲೂ ಕೆಲವು ಪ್ರಯೋಗಗಳನ್ನು ಮಾಡಲು ಹೊರಟರು. ಅವರದ್ದೊಂಥರ Out of the box thinking ಅನ್ನುತ್ತಾರಲ್ಲಾ ಹಾಗೆ. ಕ್ಯಾಪಿಟೇಶನ್ ಮೇಲೆ ಕಣ್ಣಿಟ್ಟು  ಮೆಡಿಕಲ್ ಕಾಲೇಜು ಕಟ್ಟುವ ಯಾರೂ ಕೇಳಿರದ, ಅಕಸ್ಮಾತ್ ಕೇಳಿದರೂ ಹುಬ್ಬು ಗಂಟಿಕ್ಕಿಕೊಂಡು ನೋಡುವಂತಿದ್ದ ಕಾಲದಲ್ಲಿ “ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿeನ&#8221; ಎಂಬ ಕಾಲೇಜು ಆರಂಭಕ್ಕೆ ಮುಂದಾದರು. ಬೊಜ್ಜು, ಮಾನಸಿಕ ಒತ್ತಡ, ಮೈ-ಕೈ ನೋವಿ ನಿಂದ ನರಳುತ್ತಿರುವವರೇ ಹೆಚ್ಚಾಗಿರುವ ಇಂದಿನವರಿಗೆ ಪ್ರಕೃತಿ ಚಿಕಿತ್ಸೆ ಹಾಗೂ ಯೋಗವಿeನವೇ ಪರಿಹಾರವಾಗಿ ಹೊರಹೊಮ್ಮಿದೆ. ಒಬ್ಬ ಅಲೋಪತಿ ವೈದ್ಯನಿಗಿಂತ ಪ್ರಕೃತಿ ಚಿಕಿತ್ಸೆ ಹಾಗೂ ಯೋಗವಿeನದಲ್ಲಿ ಪದವಿ ಪಡೆದವರೇ ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿದ್ದಾರೆ, ಭಾರತಕ್ಕಿಂತಲೂ ವಿದೇಶಗಳಲ್ಲೇ ಹೆಚ್ಚಿನ ಬೇಡಿಕೆ ಕಂಡುಬರುತ್ತಿದೆ. ಇಪ್ಪತ್ತು ವರ್ಷಗಳಷ್ಟು ಹಿಂದೆ ಹೆಗ್ಗಡೆಯವರು ತೋರಿದ್ದ ದೂರದೃಷ್ಟಿ ಇಂದು ನಮ್ಮ ಅರಿವಿಗೆ ಬರುತ್ತಿದೆ.<br />
ಹಾಗಂತ ಹೆಗ್ಗಡೆಯವರ ಕಾರ್ಯಕ್ಷೇತ್ರ ಧರ್ಮಸ್ಥಳ ಹಾಗೂ ವಿದ್ಯಾಕೇಂದ್ರಗಳ ಸ್ಥಾಪನೆಗಷ್ಟೇ ಸೀಮಿತವಾಗಲಿಲ್ಲ.</p>
<p>ನಮ್ಮ ಸರಕಾರಗಳು ಮದ್ಯ ವ್ಯಸನವನ್ನು ತಡೆಗಟ್ಟಲು ಮದ್ಯ ಮಾರಾಟವನ್ನು ನಿಷೇಧ ಮಾಡುವುದೇ ಮಾರ್ಗ ಎಂಬಂತೆ ಯೋಚಿಸುತ್ತವೆ. ಅಂತಹ ಧೋರಣೆಯಿಂದ ಆಗಿದ್ದಾದರೂ ಏನು? ಇಪ್ಪತ್ತು ರೂ. ಕೊಟ್ಟು ಪ್ಯಾಕೆಟ್ ಕುಡಿಯುತ್ತಿದ್ದವನು ೪೦ ರೂ. ಕೊಟ್ಟು ಕಳಪೆ ವಿಸ್ಕಿ ಕುಡಿಯಬೇಕಾಗಿ ಬಂತು. ಅಂದರೆ ಪ್ಯಾಕೆಟ್ ಹೋಗಿ ಕಾರ್ಮಿಕ ಕ್ವಾರ್ಟರ್ ಹಿಡಿದನೇ ಹೊರತು ಮದ್ಯವ್ಯಸನ ಕೊನೆಗಾಣಲಿಲ್ಲ. ಈ ಸಮಸ್ಯೆಯನ್ನು ತೊಡೆದುಹಾಕಲು ಹೆಗ್ಗಡೆಯವರು ಹಿಡಿದ ಮಾರ್ಗವೇ ಬೇರೆ. ಮೊದಲಿಗೆ ೧೯೯೫ರಲ್ಲಿ ಬೆಳ್ತಂಗಡಿ ತಾಲೂಕಿನಿಂದ ಮದ್ಯಪಾನ ಸಮಸ್ಯೆಯನ್ನು ನಿರ್ಮೂಲನೆ ಮಾಡಲು ಹೆಗ್ಗಡೆಯವರು ಮುಂದಾದರು. “ಕಳಿ, ಗಂಗಸರ ಬುಡ್ಕ, ತೆಳಿಗಂಜಿ ಪರ್‍ಕ&#8221; (ಹೆಂಡ, ಸಾರಾಯಿ ಬಿಡೋಣ: ತಿಳಿ ಗಂಜಿ ಕುಡಿಯೋಣ) ಎಂಬ ಅವರ ಸ್ಲೋಗನ್‌ಗಳು ಭಿತ್ತಿಪತ್ರಗಳಿಗೆ ಸೀಮಿತವಾಗಲಿಲ್ಲ. ಮನೆ ಮನೆಗಳಿಗೆ ಹೋಗಿ ಮದ್ಯವ್ಯಸನಿ ಕುಟುಂಬಗಳ ಸಮಸ್ಯೆಗಳನ್ನು ತಿಳಿದುಕೊಳ್ಳುವ ಕೆಲಸ ಆರಂಭಿಸಿದರು. ಮೊದಲು ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸಿ, ನಂತರ ಮದ್ಯಪಾನ ನಿಲ್ಲಿಸಿ ಎಂದು ತಿಳಿಹೇಳುವ ಕೆಲಸ ಮಾಡಿದರು. ಸಾಮಾನ್ಯವಾಗಿ ಮದ್ಯಪಾನ ವ್ಯಸನಗಳು ಕಾಡುವುದು ಸಣ್ಣ ಹಾಗೂ ಅರೆ ಕೃಷಿಕರು, ಭೂರಹಿತ ಕಾರ್ಮಿಕರನ್ನೇ. ಹಾಗಾಗಿ ಇಂತಹ ದುರ್ಬಲ ವರ್ಗಗಳ ಶ್ರೇಯೋಭಿವೃದ್ಧಿಗಾಗಿ ೧೯೯೬ರಲ್ಲಿ “ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ&#8221;(SKDRDP)ಯನ್ನು ಆರಂಭಿಸಿದರು. “ಪ್ರಗತಿ ನಿಧಿ&#8221; ಎಂಬ ಕಾರ್ಯಕ್ರಮದಡಿ ಕೃಷಿಕರು ಹಾಗೂ ಅಗತ್ಯವಿರುವವರಿಗೆ ಯಾವುದೇ ತಲೆನೋವು ಕೊಡದೆ ಸಾಲ ನೀಡಲು ಆರಂಭಿಸಿದರು. ‘ಸ್ವ-ಸಹಾಯ’ ಗುಂಪುಗಳನ್ನು ಆರಂಭಿಸಿ ಅಂತಹ ಗುಂಪುಗಳೂ ಸಾಲ ಪಡೆದು ಕೊಳ್ಳಬಹುದಾದ ಅವಕಾಶ ಕಲ್ಪಿಸಿದರು. ಈ ಯೋಜನೆ ಹಾಗೂ ಸ್ವ-ಸಹಾಯ ಪದ್ಧತಿಯಿಂದಾಗಿ ಎಷ್ಟೋ ಬಡವರು ಸ್ವಂತ ಗೂಡು ಕಟ್ಟಿಕೊಂಡಿದ್ದಾರೆ, ಅವರ ಮಕ್ಕಳು ಶಾಲೆಯ ಮುಖ ನೋಡುತ್ತಿದ್ದಾರೆ, ಕುಡಿತ ಬಿಟ್ಟಿದ್ದಾರೆ. ಹೀಗೆ ಒಂದು ಸ್ವಸ್ಥ ಸಮಾಜವನ್ನು ಹೇಗೆ ಕಟ್ಟಬಹುದು ಎಂಬುದನ್ನು ಹೆಗ್ಗಡೆಯವರು ಕೃತಿಯಲ್ಲಿ ತೋರುತ್ತಿದ್ದಾರೆ. ಇವತ್ತು ಧರ್ಮಸ್ಥಳ ಹಾಗೂ ಹೆಗ್ಗಡೆ ಯವರ ಹೆಸರು ರಾಷ್ಟ್ರಮಟ್ಟದಲ್ಲಿ ಕೇಳಿಬರುತ್ತಿದ್ದರೆ ಅದಕ್ಕೆ ಅವರು ಆರಂಭಿಸಿರುವ ಗ್ರಾಮಾಭಿವೃದ್ಧಿ ಯೋಜನೆಯೇ ಕಾರಣ.</p>
<p>ಉಜಿರೆಯ ‘ರುಡ್ ಸೆಟ್’ ಅಂತೂ ಸ್ವ-ಉದ್ಯೋಗಕ್ಕೆ ಒಂದು ಮಾದರಿ.</p>
<p>ಪದವಿ ಇದ್ದವರು ಕೆಲಸಕ್ಕೆ ಅರ್ಜಿಹಾಕಿಕೊಂಡಾದರೂ ಕುಳಿತು ಕೊಳ್ಳಬಹುದು. ಯಾವ ಸರ್ಟಿಫಿಕೆಟ್‌ಗಳೂ ಇಲ್ಲದವರು ಏನು ಮಾಡಬೇಕು? ಹೈನುಗಾರಿಕೆ, ಟೈಲರಿಂಗ್, ವಾಹನ ರಿಪೇರಿ, ಸೈಕಲ್ ರಿಪೇರಿ, ಬ್ಯೂಟಿಶಿಯನ್ ಹೀಗೆ ಹತ್ತಕ್ಕೂ ಹೆಚ್ಚು ಕ್ಷೇತ್ರಗಳ ಬಗ್ಗೆ ಇಲ್ಲಿ ತರಬೇತಿ ನೀಡಲಾಗುತ್ತದೆ. ತರಬೇತಿ ಸಂಪೂರ್ಣವಾಗಿ ಉಚಿತ, ತರಬೇತಿಯ ನಂತರ ಒಂದು ವೇಳೆ ಯಾರಿಗಾದರೂ ಹಣ ಸಹಾಯ ಬೇಕೆಂದಾದರೆ ಸಾಲ ಸೌಲಭ್ಯವನ್ನೂ ಕಲ್ಪಿಸುತ್ತಾರೆ. ಹಾಗಾಗಿ ‘ರುಡ್ ಸೆಟ್’ ಎಷ್ಟು ಜನಪ್ರಿಯವಾಗಿದೆಯೆಂದರೆ ಇತರ ರಾಜ್ಯಗಳಲ್ಲೂ ಇದರ ಶಾಖೆಗಳನ್ನು ಆರಂಭಿಸಲಾಗಿದೆ. ಇವೆಲ್ಲಾ ಯೋಜನೆ, ಕಾರ್ಯಕ್ರಮಗಳಿಗೆ ಖಂಡಿತ ಸರಕಾರದ ನಿಧಿ ಬರುತ್ತಿದೆ. ಆದರೆ ಸರಕಾರದ ಹಣ ಫಲಾನುಭವಿಗಳಿಗೆ ಎಷ್ಟರಮಟ್ಟಿಗೆ ಮುಟ್ಟುತ್ತಿದೆ? ನೀವೇ ನೋಡಿ, ಜೆಡಿಎಸ್-ಬಿಜೆಪಿ ಮೈತ್ರಿ ಸರಕಾರ ಸಾಲಮನ್ನಾ ಮಾಡಿತು. ಆದರೆ ಲಾಭ ಪಡೆದುಕೊಂಡಿದ್ದು ಯಾರು? ಸಾಮಾನ್ಯವಾಗಿ ರಾಜ್ಯದ ಬಹುತೇಕ ಎಲ್ಲ ಸಹಕಾರಿ ಬ್ಯಾಂಕ್, ಸೊಸೈಟಿಗಳೂ ಒಬ್ಬಲ್ಲಾ ಒಬ್ಬ ಪುಢಾರಿಯ ಹಿಡಿತದಲ್ಲೇ ಇವೆ. ಸರಕಾರ ಸಾಲಮನ್ನಾ ಮಾಡಿದ ಕೂಡಲೇ ಖೊಟ್ಟಿ ಸಾಲ ಖಾತೆಗಳನ್ನು ತೆರೆದು ೩೦೦ ಕೋಟಿಗೂ ಹೆಚ್ಚು ಹಣವನ್ನು ಸೊಸೈಟಿಗಳ ಸೆಕ್ರೆಟರಿ ಹಾಗೂ ಆಡಳಿತ ಮಂಡಳಿಗಳೇ ನುಂಗಿಹಾಕಿದರು. ಆದರೆ ಧರ್ಮಸ್ಥಳ ನಡೆಸುತ್ತಿರುವ ಗ್ರಾಮೀಣಾಭಿವೃದ್ಧಿ ಯೋಜನೆಯಲ್ಲಿ ನೂರಕ್ಕೆ ನೂರರಷ್ಟು ಎಂದು ಹೇಳಲಾಗದಿದ್ದರೂ ಹೆಚ್ಚಿನ ಲಾಭ ಫಲಾನುಭವಿಗಳನ್ನು ತಲುಪುತ್ತಿದೆ. ಹಾಗಾಗಿಯೇ ಕಳೆದ ಭಾನು ವಾರ ಮೂಡಬಿದಿರೆಯಲ್ಲಿ ನಡೆದ ವೀರೇಂದ್ರ ಹೆಗ್ಗಡೆಯ ವರ ಸನ್ಮಾನ ಸಮಾರಂಭಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪನವರು, ‘ಉತ್ತರ ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ನಾವೂ ಗ್ರಾಮೀಣಾಭಿವೃದ್ಧಿ ಯೋಜನೆಯನ್ನು ಜಾರಿಗೆ ತರುತ್ತೇವೆ, ಅದಕ್ಕೆ ನಿಮ್ಮ ಮಾರ್ಗದರ್ಶನ ಬೇಕು’ ಎಂದು ಹೆಗ್ಗಡೆಯವರಲ್ಲಿ ಮನವಿ ಮಾಡಿಕೊಂಡರು. ಮುಖ್ಯ ಮಂತ್ರಿಯಾದವರು ಸನ್ಮಾನ ಸಮಾರಂಭಗಳಿಗೆ ಹೋದಾಗ ಅನಿವಾರ್ಯವಾಗಿ ಹೊಗಳಬೇಕಾಗುತ್ತದೆ, ಸ್ವಾಮೀಜಿಗಳ ಕಾಲಿಗೆ ಬೀಳಬೇಕಾಗುತ್ತದೆ, ಆಶೀರ್ವಾದವನ್ನು ಕೇಳಬೇಕಾಗುತ್ತದೆ, ಧನ ಸಹಾಯವನ್ನೂ ಘೋಷಣೆ ಮಾಡಬೇಕಾಗುತ್ತದೆ. ಆದರೆ ಹೆಗ್ಗಡೆಯವರ ಬಳಿಗೆ ಹೋದವರು ‘ಮಾರ್ಗದರ್ಶನ’ ಮಾಡಿ ಎಂದು ಕೇಳಿಕೊಳ್ಳುತ್ತಾರೆ!</p>
<p>ಅವರ ಮಹತ್ವವನ್ನು ಅರಿತುಕೊಳ್ಳಲು ಅಷ್ಟೇ ಸಾಕು.</p>
<p>ಹಾಗಂತ ಧರ್ಮಸ್ಥಳದಲ್ಲಿ ಎಲ್ಲವೂ ಸರಿಯಾಗಿಯೇ ಇದೆ, ಅನ್ಯಾಯ, ದೌರ್ಜನ್ಯಗಳೇ ಇಲ್ಲ. ಗ್ರಾಮೀಣಾಭಿವೃದ್ಧಿ ಯೋಜನೆ ಯಲ್ಲಿ ತಪ್ಪುಗಳಾಗಿಲ್ಲ, ಅತಿರೇಕಗಳಾಗಿಲ್ಲ, ದೌರ್ಜನ್ಯ ನಡೆದೇ ಇಲ್ಲ ಎಂದೂ ಹೇಳುತ್ತಿಲ್ಲ. ಅವುಗಳಲ್ಲಿ ಒಂದಿಷ್ಟು ಸತ್ಯವೂ ಇದೆ. ಒತ್ತಡಗಳಿಗೆ ಒಳಗಾಗಿ ಸಾಲ ತೆಗೆದುಕೊಂಡು, ಮತ್ತಿನ್ಯಾವುದೋ ಅಗತ್ಯಕ್ಕೆ ಬಳಸಿಕೊಂಡು ಸಂಕಷ್ಟ ಅನುಭವಿಸುತ್ತಿರುವವರೂ ಇದ್ದಾರೆ. ಆದರೆ ಕಾಲ ಕೆಳಗಿರುವವರು ತಪ್ಪು ಮಾಡಿದರೂ ನಾಯಕನಿಗೆ ಕೆಟ್ಟ ಹೆಸರು ಬರುತ್ತದೆ. ಹಾಗೆಯೇ ಹೆಗ್ಗಡೆಯವರೂ ಟೀಕೆಯಲ್ಲಿ ಪಾಲು ಪಡೆದುಕೊಂಡಿದ್ದಿದೆ. ಇಷ್ಟೆಲ್ಲಾ ಯೋಜನೆ, ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಅವುಗಳ ಅನುಷ್ಠಾನ, ಜಾರಿ ವೇಳೆ ಸಣ್ಣ ಪುಟ್ಟ ತಪ್ಪುಗಳಾಗುವುದು, ಅಚಾತುರ್ಯಗಳು ನಡೆಯುವುದು ಸಹಜ ಹಾಗೂ ಸಹ್ಯ ಕೂಡ.</p>
<p>ಇಷ್ಟಾಗಿಯೂ ಹೆಗ್ಗಡೆಯವರ ಅತಿದೊಡ್ಡ ಹೆಗ್ಗಳಿಕೆಯೊಂದಿದೆ.</p>
<p>ಗುಜರಾತ್ ಹಿಂಸಾಚಾರವನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಕೊಲೆಗಡುಕ, ಕೋಮುವಾದಿ, ಹಿಂದುತ್ವವಾದಿ ಎಂದು ಹಿಗ್ಗಾಮುಗ್ಗ ಟೀಕಿಸುವ ವರೂ ಕೂಡ ಒಂದು ವಿಷಯದಲ್ಲಿ ಚಕಾರವೆತ್ತುವುದಿಲ್ಲ. ಅವರದ್ದು Clean hand. ಮೋದಿಯವರ ಅತಿದೊಡ್ಡ ಸಾಮರ್ಥ್ಯ ಅವರ ಶುದ್ಧಹಸ್ತ ಎಂದಾದರೆ, ನಮ್ಮ ಹೆಗ್ಗಡೆಯವರ ಸಾಮರ್ಥ್ಯ ಅವರ ಶುದ್ಧಚಾರಿತ್ರ್ಯದಲ್ಲಿದೆ. ಅಂತಹ ನೆಹರು, ಗಾಂಧೀಜಿ ಕೂಡ Personal follyಯಿಂದ ಮುಕ್ತರಾದವರಲ್ಲ. ಆದರೆ ಖಾವಂದರದ್ದು spotless personal life. ಅವರ ವೈಯಕ್ತಿಕ ಜೀವನದಲ್ಲಿ ಒಂದು ಸಣ್ಣ ಕಪ್ಪು ಚುಕ್ಕೆಯನ್ನೂ ಕಾಣಲು, ಪತ್ತೆ ಮಾಡಲು ಸಾಧ್ಯವಿಲ್ಲ. ‘God&#8217;s chosen one’ ಅನ್ನುತ್ತಾರಲ್ಲಾ ಹಾಗೆ ‘ದೇವರ ಆಯ್ಕೆ’ ಅವರಾಗಿದ್ದರೋ ಏನೋ ಹೆಗ್ಗಡೆಯವರು ಚುಕ್ಕಾಣಿ ಹಿಡಿದ ನಂತರ ಧರ್ಮಸ್ಥಳದ ಹಿರಿಮೆ ಹೆಚ್ಚಾಗುತ್ತಲೇ ಹೋಯಿತು. ಮಂಜುನಾಥನ ಮೇಲಿನ ಭಕ್ತಿ, ಶ್ರದ್ಧೆಯ ಜತೆಗೆ ಧರ್ಮಸ್ಥಳದ ಬಗ್ಗೆ ನಾಡಿನ ಜನರಲ್ಲಿ ಗೌರವವೂ ಹೆಚ್ಚಾಯಿತು. ಧರ್ಮಸ್ಥಳಕ್ಕೆ ಬರುವವರಲ್ಲಿ ಎಷ್ಟೋ ಜನರು ಹೆಗ್ಗಡೆಯವರನ್ನು ಕಂಡು, ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು, ಪರಿಹಾರ ಕೇಳಿಕೊಂಡು ಹೋಗುತ್ತಾರೆ. ಒಬ್ಬ ಮನಃಶಾಸ್ತ್ರಜ್ಞನಂತೆ ಕೌನ್ಸೆಲಿಂಗ್ ಮಾಡುತ್ತಾರೆ, ಅವರು ಏನಾದರೂ ಹೇಳಿದರೆ ಅದನ್ನು ಯಾರೂ ಮೀರುವುದಿಲ್ಲ, ಅವರು ಹೇಳಿದಂತೆಯೇ ನಡೆಯುತ್ತದೆ ಎಂಬ ಮನೋಭಾವನೆ ಜನರಲ್ಲೂ ಕಂಡುಬರುತ್ತಿದೆ. ೧೯೭೨ರಷ್ಟು ಹಿಂದೆಯೇ ಸಾಮೂ ಹಿಕ ವಿವಾಹವೆಂಬ ಪರಿಕಲ್ಪನೆಯನ್ನು ಕೃತಿಯಲ್ಲಿ ತೋರಿ, ಅದ ಕ್ಕೊಂದು ಹೊಸ ಅರ್ಥ ನೀಡಿದವರು ನಮ್ಮ ಖಾವಂದರು.<br />
ಕಳೆದ ನವೆಂಬರ್ ೨೫ಕ್ಕೆ ಖಾವಂದರು ೬೦ ವಸಂತಗಳನ್ನು ಪೂರೈಸಿ, ೬೧ಕ್ಕೆ ಕಾಲಿಟ್ಟಿದ್ದಾರೆ. ಮೊನ್ನೆ ಡಿಸೆಂಬರ್ ೨೮ರಂದು ಮೂಡಬಿದಿರೆಯಲ್ಲಿ ಷಷ್ಟ್ಯಬ್ದ ನಡೆಯಿತು. ಇವತ್ತು ಸಮಾಜ ಯಾರಿಂದಲೂ ನೂರಕ್ಕೆ ನೂರರಷ್ಟು ಪ್ರಾಮಾಣಿಕತೆಯನ್ನಾಗಲಿ, ಶುದ್ಧಹಸ್ತವನ್ನಾಗಲಿ ನಿರೀಕ್ಷಿಸುತ್ತಿಲ್ಲ. ಏಕೆಂದರೆ ತಾನೇdegenerate ಆಗಿದ್ದೇನೆ ಎಂದು ಸಮಾಜಕ್ಕೂ ತಿಳಿದಿದೆ. ಇಂತಹ ಪರಿಸ್ಥಿತಿಯ ನಡುವೆಯೂ ಒಬ್ಬ Conscience keeperನಂತೆ ಖಾವಂದರಿದ್ದಾರೆ.</p>
<p>ಸಮಾಜದ ಸಾಕ್ಷಿಪ್ರಜ್ಞೆಯನ್ನು ಎತ್ತಿಹಿಡಿಯಲು ಅವರು ನೂರ್ಕಾಲ ನಮ್ಮೊಂದಿಗಿರಬೇಕು.</p>
]]></content:encoded>
			<wfw:commentRss>http://pratapsimha.com/bettale-jagattu/veerendraheggade/feed/</wfw:commentRss>
		</item>
		<item>
		<title>ಈಗಾಗಲೇ 3ನ್ನು ಕಳೆದುಕೊಂಡಿದ್ದೀರಿ, ಉಳಿದಿರುವುದೊಂದೇ!</title>
		<link>http://pratapsimha.com/bettale-jagattu/yeddi-2/</link>
		<comments>http://pratapsimha.com/bettale-jagattu/yeddi-2/#comments</comments>
		<pubDate>Mon, 29 Dec 2008 07:01:19 +0000</pubDate>
		<dc:creator>Pratap Simha</dc:creator>
		
		<category><![CDATA[Bettale-Jagattu]]></category>

		<guid isPermaLink="false">http://pratapsimha.com/?p=68</guid>
		<description><![CDATA[ಸ್ವಾಮಿ ಯಡಿಯೂರಪ್ಪನವರೇ,
ಏಕೋ ನಿಮ್ಮನ್ನು ‘ಮುಖ್ಯಮಂತ್ರಿ’ ಎಂದು ಸಂಬೋಧಿಸಲು ಮನಸ್ಸಾಗುತ್ತಿಲ್ಲ. ‘ಮುಖ್ಯಮಂತ್ರಿ’ ಸ್ಥಾನಕ್ಕೆ ಒಂದು ಘನತೆ, ಪಾವಿತ್ರ್ಯತೆ, ಹಿರಿಯಣ್ಣನ ಹೃದಯ ವೈಶಾಲ್ಯತೆ ಇರುತ್ತದೆ. ನಿಮ್ಮಲ್ಲಿ ಅವ್ಯಾವುವೂ ಕಾಣುತ್ತಿಲ್ಲ. ಹಾಗಾಗಿ ನಿಮ್ಮನ್ನು ಯಡಿಯೂರಪ್ಪ ನವರೇ ಎಂದರೆ ಹೆಚ್ಚು ಸೂಕ್ತವಾದೀತು.

ನೀವು ಬರೀ ಶಾಸಕ, ಬಿಜೆಪಿ ನಾಯಕ, ಪ್ರತಿಪಕ್ಷ ನೇತಾರ ಯಡಿಯೂರಪ್ಪನವರಾಗಿದ್ದಾ ಗಲೂ ಸಿಡುಕುತ್ತಿದ್ದಿರಿ, ರೇಗುತ್ತಿದ್ದಿರಿ, ಸಿಟ್ಟಿಗೇಳುತ್ತಿದ್ದಿರಿ. ಆಗ ನಮಗೆ ಬೇಸರವಾಗುತ್ತಿರಲಿಲ್ಲ. ನಿಮ್ಮ ಸಿಟ್ಟು ನಮಗೆ ಸಾತ್ವಿಕವಾಗಿ ಕಾಣುತ್ತಿತ್ತು. ಜನರಿಗೆ ಏನೋ ಒಳ್ಳೆಯದನ್ನು ಮಾಡಬೇಕೆಂಬ ತುಡಿತ ಯಡಿಯೂರಪ್ಪನವರಲ್ಲಿದೆ ಎಂದೆನಿಸುತ್ತಿತ್ತು. ಹಾಗಾ ಗಿಯೇ ನಿಮಗೂ [...]]]></description>
			<content:encoded><![CDATA[<p>ಸ್ವಾಮಿ ಯಡಿಯೂರಪ್ಪನವರೇ,</p>
<p>ಏಕೋ ನಿಮ್ಮನ್ನು ‘ಮುಖ್ಯಮಂತ್ರಿ’ ಎಂದು ಸಂಬೋಧಿಸಲು ಮನಸ್ಸಾಗುತ್ತಿಲ್ಲ. ‘ಮುಖ್ಯಮಂತ್ರಿ’ ಸ್ಥಾನಕ್ಕೆ ಒಂದು ಘನತೆ, ಪಾವಿತ್ರ್ಯತೆ, ಹಿರಿಯಣ್ಣನ ಹೃದಯ ವೈಶಾಲ್ಯತೆ ಇರುತ್ತದೆ. ನಿಮ್ಮಲ್ಲಿ ಅವ್ಯಾವುವೂ ಕಾಣುತ್ತಿಲ್ಲ. ಹಾಗಾಗಿ ನಿಮ್ಮನ್ನು ಯಡಿಯೂರಪ್ಪ ನವರೇ ಎಂದರೆ ಹೆಚ್ಚು ಸೂಕ್ತವಾದೀತು.</p>
<p><span id="more-68"></span></p>
<p>ನೀವು ಬರೀ ಶಾಸಕ, ಬಿಜೆಪಿ ನಾಯಕ, ಪ್ರತಿಪಕ್ಷ ನೇತಾರ ಯಡಿಯೂರಪ್ಪನವರಾಗಿದ್ದಾ ಗಲೂ ಸಿಡುಕುತ್ತಿದ್ದಿರಿ, ರೇಗುತ್ತಿದ್ದಿರಿ, ಸಿಟ್ಟಿಗೇಳುತ್ತಿದ್ದಿರಿ. ಆಗ ನಮಗೆ ಬೇಸರವಾಗುತ್ತಿರಲಿಲ್ಲ. ನಿಮ್ಮ ಸಿಟ್ಟು ನಮಗೆ ಸಾತ್ವಿಕವಾಗಿ ಕಾಣುತ್ತಿತ್ತು. ಜನರಿಗೆ ಏನೋ ಒಳ್ಳೆಯದನ್ನು ಮಾಡಬೇಕೆಂಬ ತುಡಿತ ಯಡಿಯೂರಪ್ಪನವರಲ್ಲಿದೆ ಎಂದೆನಿಸುತ್ತಿತ್ತು. ಹಾಗಾ ಗಿಯೇ ನಿಮಗೂ ಒಂದು ಅವಕಾಶವನ್ನು ಕೊಡಬೇಕೆಂದು ರಾಜ್ಯದ ಜನತೆ ಅಂದುಕೊಳ್ಳುತ್ತಿದ್ದರು. ಆ ಸಮಯ ಕಳೆದ ಏಪ್ರಿಲ್-ಮೇನಲ್ಲಿ ಬಂದಿತ್ತು. ನಿಮ್ಮನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಕಾರಣವಾದ ಅಂಶಗಳನ್ನು ಈ ರೀತಿ ಪಟ್ಟಿಮಾಡ ಬಹುದು.</p>
<p>೧. ಕುಮಾರಸ್ವಾಮಿಯವರ ವಚನಭ್ರಷ್ಟತೆ.<br />
೨. ವಚನಭ್ರಷ್ಟತೆಯಿಂದ ಸೃಷ್ಟಿಯಾದ ಬಹುಸಂಖ್ಯಾತ ಲಿಂಗಾ ಯತರ ಮತಗಳ ಧ್ರುವೀಕರಣ.<br />
೩. ಈ ಹಿಂದಿನ ಪ್ರತಿ ವಿಧಾನಸಭೆ ಚುನಾವಣೆಗಳಲ್ಲೂ ಬಿಜೆಪಿಯ ಸ್ಥಾನಗಳನ್ನು ೩೮, ೪೪, ೭೯ ಹೀಗೆ ಏರಿಸುತ್ತಲೇ ಹೋಗಿದ್ದ ಮತದಾರ ಇವರಿಗೂ ಒಂದು ಅವಕಾಶ ಕೊಡೋಣ ಎಂಬ ತೀರ್ಮಾನಕ್ಕೆ ಬಂದಿದ್ದು.<br />
೪. ಈ ಬಿಜೆಪಿಯವರು ಭಾರಿ ಭಾರಿ ಮಾತನಾಡುತ್ತಾರೆ, ಏನೋ ಮಾಡಿ ತೋರಿಸುತ್ತೇವೆ ಎನ್ನುತ್ತಿದ್ದಾರೆ. ಇವರನ್ನೂ ಒಮ್ಮೆ ಟೆಸ್ಟ್ ಮಾಡೋಣ ಎಂಬ ನಿರ್ಧಾರ.</p>
<p>ಈ ಕಾರಣಗಳ ಬೆನ್ನೇರಿ ಬಿಜೆಪಿ ಗೆದ್ದು ಬಂತು. ಆದರೆ ೨೦೦೮, ಮೇ ೩೦ರಂದು ನೀವು ಮುಖ್ಯಮಂತ್ರಿಯಾದ ಕೂಡಲೇ ಈ ಮೇಲಿನ ನಾಲ್ಕರಲ್ಲಿ ಎರಡು ಕಾರಣಗಳು ನೆಗೆದುಬಿದ್ದವು. ಅಂದರೆ ಕುಮಾರಸ್ವಾಮಿಯವರ ವಚನಭ್ರಷ್ಟತೆಗೆ ಮತದಾರ ಉತ್ತರ ಕೊಟ್ಟ. ೧೧೦ ಶಾಸಕರನ್ನು ಗೆಲ್ಲಿಸುವುದರೊಂದಿಗೆ ‘ಬಿಜೆಪಿಗೂ ಒಂದು ಅವಕಾಶ ಕೊಡೋಣ’ ಎಂಬುದಕ್ಕೂ ತೆರೆಬಿತ್ತು. ನೀವು ಅಧಿಕಾರಕ್ಕೆ ಬಂದು ಈಗ ೬ ತಿಂಗಳಾಗಿದೆ. ನೀವು ಅಧಿಕಾರಗ್ರಹಣ ಮಾಡಿದ ಪ್ರಾರಂಭದಲ್ಲೇ ರೈತರ ಮೇಲೆ ಗೋಲಿಬಾರ್ ನಡೆಯಿತು, ರಸಗೊಬ್ಬರ ಸಿಗದೆ ಜನ ಹಾಹಾಕಾರ ಪಡುವಂತಾಯಿತು, ಸಚಿವಸ್ಥಾನಕ್ಕಾಗಿ ನಡೆದ ಪೈಪೋಟಿಯಿಂದಾಗಿ ಪಕ್ಷದೊಳಗೇ ಅತೃಪ್ತಿ ಆರಂಭವಾಯಿತು, ಆ ಕಾರಣಕ್ಕಾಗಿ ಶಾಸಕರ ಖರೀದಿಗೆ ಹೊರಟಿರಿ. ಹೀಗೆ ಒಂದರ ಹಿಂದೆ ಒಂದು ತಪ್ಪುಗಳನ್ನು ಮಾಡುತ್ತಲೇ ಹೋದಿರಿ. ಆದರೆ ಜನ ಸಿಟ್ಟು ಮಾಡಿಕೊಳ್ಳಲಿಲ್ಲ. “ಬಿಜೆಪಿಯವರ ಗ್ರಹಚಾರ ಸರಿಯಿಲ್ಲ&#8221; ಎಂದು ತಮ್ಮನ್ನು ತಾವೇ ಸಮಾಧಾನ ಮಾಡಿಕೊಂಡರು. ಗೋಲಿಬಾರ್ ನಡೆದು ರೈತ ಸತ್ತಾಗಲೂ ಕಾಂಗ್ರೆಸ್, ಜೆಡಿಎಸ್‌ನವರ ಕುತಂತ್ರವಿದು ಎಂದುಕೊಂಡು ಆ ತಪ್ಪನ್ನೂ ಮನ್ನಿಸಿದರು. ಮುಂಗಾರು ಕೈಕೊಟ್ಟಾಗ “ಪಾಪ ಯಡಿಯೂರಪ್ಪ&#8221; ಎಂದು ಸುಮ್ಮನಾದರು.</p>
<p>ಅಂತಹ ತಪ್ಪುಗಳನ್ನೂ ಜನ ಮನ್ನಿಸುವ “ಹನಿಮೂನ್ ಪೀರಿಯಡ್&#8221; ಮುಗಿದು ಹೋಯಿತು.</p>
<p>ಆರು ತಿಂಗಳ ಹಿಂದೆ ನಿಮ್ಮ ಮೇಲಿದ್ದ ಭರವಸೆ, ಆಶಾಭಾವನೆ ಇಂದು ನುಚ್ಚುನೂರಾಗಿದೆ. ಕಾಂಗ್ರೆಸ್, ಜೆಡಿಎಸ್‌ಗಿಂತ ಬಿಜೆಪಿಯೇ ಕೀಳು ಎಂಬ ಭಾವನೆ ನಿಮಗೆ ಮತಹಾಕಿದವರಲ್ಲೇ ಕೇಳಿಬರುತ್ತಿದೆ. ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗದಂತಹ ಬಿಜೆಪಿ ಪ್ರಾಬಲ್ಯದ ಜಿಲ್ಲೆಗಳಲ್ಲೇ ಜನ ಥೂ, ಛೀ ಎನ್ನುತ್ತಿದ್ದಾರೆ. ಅಲ್ಲಿಗೆ ‘ಬಿಜೆಪಿಯವರು ಏನೋ ಮಾಡಿ ತೋರಿಸುತ್ತೇವೆ ಎನ್ನುತ್ತಿ ದ್ದಾರೆ. ಇವರನ್ನೂ ಒಮ್ಮೆ ಟೆಸ್ಟ್ ಮಾಡೋಣ’ ಎಂದುಕೊಂಡಿದ್ದ ಮತದಾರನ ಪ್ರಶ್ನೆಗೂ ಉತ್ತರ ಸಿಕ್ಕಿದೆ. ಇನ್ನು ಉಳಿದಿರುವುದು ಒಂದೇ!</p>
<p>ನಿಮ್ಮ ಜಾತಿ.</p>
<p>ಕಳೆದ ವಿಧಾನಸಭೆ ಚುನಾವಣೆಯಲ್ಲಿ ‘ಜಾತಿ’ ನಿಮ್ಮ ಪರ ಎಷ್ಟು ಪ್ರಭಾವಿಯಾಗಿ ಕೆಲಸ ಮಾಡಿತು ಎಂಬುದಕ್ಕೆ ಒಂದು ಸಣ್ಣ ಉದಾಹರಣೆ ಬೇಕಾ? ಇದುವರೆಗೂ ಚಿಕ್ಕಮಗಳೂರು ವಿಧಾನಸಭೆ ಕ್ಷೇತ್ರದಲ್ಲಿ ಲಿಂಗಾಯತ ಅಭ್ಯರ್ಥಿಯೊಬ್ಬರು ಗೆದ್ದ ನಿದರ್ಶನವಿರಲಿಲ್ಲ. ಆದರೆ ೨೦೦೮ರಲ್ಲಿ ಮೊಟ್ಟಮೊದಲ ಬಾರಿಗೆ ಲಿಂಗಾಯತ ಅಭ್ಯರ್ಥಿಯೊಬ್ಬರು ಗೆಲುವು ಸಾಧಿಸುವಂತಹ ವಾತಾವರಣ ಸೃಷ್ಟಿಯಾಗಿತ್ತು. ಅಂದರೆ ಕ್ಷೇತ್ರ ಮರುವಿಂಗಡಣೆಯ ಫಲವಾಗಿ ಚಿಕ್ಕಮಗಳೂರು ಕ್ಷೇತ್ರದ ಒಟ್ಟಾರೆ ಮತದಾರರಲ್ಲಿ ಲಿಂಗಾಯತರ ಕೈ ಮೇಲಾಗಿತ್ತು. ಅದಕ್ಕೆ ತಕ್ಕಂತೆ ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳಿಬ್ಬರೂ ಒಕ್ಕಲಿಗರಾಗಿದ್ದರು. ಅದನ್ನು ಲೆಕ್ಕಹಾಕಿಯೇ ಕಾಂಗ್ರೆಸ್ ಲಿಂಗಾಯತ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ೨೦೦೪ರಲ್ಲಿ ಗೆದ್ದು ಬಂದಿದ್ದ ಬಿಜೆಪಿಯ ಸಿ.ಟಿ. ರವಿ ಎಷ್ಟು ‘ಒಳ್ಳೆಯ’ ಹೆಸರು ಪಡೆದುಕೊಂಡಿದ್ದರೆಂದರೆ ಲಿಂಗಾಯತರೇನಾದರೂ ಯಡಿಯೂರಪ್ಪನವರು ಮುಖ್ಯ ಮಂತ್ರಿಯಾಗಬೇಕೆಂಬ ದೂರಾಲೋಚನೆಯಿಂದ ಬಿಜೆಪಿಗೆ ಮತಹಾಕದಿದ್ದರೆ ಕಾಂಗ್ರೆಸ್ ಗೆಲ್ಲುವುದು ನಿಶ್ಚಿತ ಎಂದು ಭಾವಿಸ ಲಾಗಿತ್ತು. ಊಹೆ ನಿಜವಾಯಿತು. ‘ನಮ್ಮವನು’ ಮುಖ್ಯಮಂತ್ರಿ ಯಾಗಬೇಕೆಂದು ಮತಕೊಟ್ಟ ಕಾರಣ ರವಿ ಗೆದ್ದು ಬಂದರು. ಇಂತಹ ಜಾತಿ ಧ್ರುವೀಕರಣ ರಾಜ್ಯಾದ್ಯಂತ ಕಂಡುಬಂದಿದ್ದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಅದರಲ್ಲಿ ತಪ್ಪೂ ಇರಲಿಲ್ಲ. ಲಿಂಗಾಯತ, ಕುರುಬ ಜಾತಿಗಳ ಧ್ರುವೀಕರಣಕ್ಕೆ ದೇವೇಗೌಡರ ಹೊಲಸು ರಾಜಕೀಯವೇ ಮುಖ್ಯಕಾರಣವಾಗಿತ್ತು.</p>
<p>ಆದರೆ ಗೆದ್ದ ಮೇಲೆ ನಿಮ್ಮಲ್ಲಿ ಸಮಗ್ರ ಕರ್ನಾಟಕದ ಮುಖ್ಯ ಮಂತ್ರಿಯನ್ನು ನಿರೀಕ್ಷಿಸಿದ್ದು ತಪ್ಪಾ?</p>
<p>ಅಷ್ಟಕ್ಕೂ ಲಿಂಗಾಯತ ಮತಗಳ ಧ್ರುವೀಕರಣದ ಜತೆಗೆ ಬಿಜೆಪಿಯ ಸಾಂಪ್ರದಾಯಿಕ ಮತದಾರರೂ ಬೆಂಬಲಿಸಿ ದ್ದರಿಂದಲೇ ನೀವು ಮುಖ್ಯಮಂತ್ರಿಯಾಗಿದ್ದು. ಆಮೇಲೆ ನೀವು ಮಾಡಿದ್ದೇನು? ಈಗ ಮಾಡುತ್ತಿರುವುದೇನು? ನಿಮ್ಮ ವರ್ಗಾವಣೆ ಹಗರಣವನ್ನೇ ತೆಗೆದುಕೊಳ್ಳಿ. ಅದೆಷ್ಟು ಬಾರಿ ಪೊಲೀಸರ ವರ್ಗಾವಣೆ ಮಾಡಿದ್ದೀರಿ ಎಂದು ನೆನಪಿದೆಯೇ? ನಿಮ್ಮ ಮನೆಮಂದಿಯೆಲ್ಲ ಏಜೆಂಟರಾಗಿದ್ದಾರೆ ಎಂದು ಜನ ಆಡಿಕೊಳ್ಳುತ್ತಿದ್ದಾರೆ. ವರ್ಗಾವಣೆಯಲ್ಲೂ ಜಾತಿಯನ್ನು ಮಾನದಂಡ ಮಾಡಿಕೊಂಡರು ಎಂದು ಜನ ಹೇಳುತ್ತಿರುವುದರಲ್ಲಿ ಹುರುಳಿಲ್ಲದೇ ಇಲ್ಲ. ನಿಮ್ಮ ಸುತ್ತ-ಮುತ್ತ ಇರುವವರನ್ನು ಒಮ್ಮೆ ನೋಡಿಕೊಳ್ಳಿ ಗೊತ್ತಾಗುತ್ತದೆ! ನಿವೃತ್ತಿ ವಯಸ್ಸನ್ನು ೬೦ಕ್ಕೇರಿಸಿದಾಗ ಆಡಳಿತದಲ್ಲಿ ದಕ್ಷತೆ ತರುವುದಕ್ಕಾಗಿ ಎಂದು ಕಥೆ ಹೇಳಿದ್ದಿರಲ್ಲಾ, ಅಧಿಕಾರಿಗಳ ವರ್ಗಾವಣೆಯಲ್ಲಿ ಲಕ್ಷ ಲಕ್ಷ ಸುಲಿದು ಅವರಿಂದ ಹೇಗೆತಾನೇ ಪ್ರಾಮಾಣಿಕತೆಯನ್ನು ನಿರೀಕ್ಷಿಸುತ್ತೀರಿ?</p>
<p>ನಿಮ್ಮದು ಜೆಡಿಎಸ್‌ನಂತಹ ಮತ್ತೊಂದು ಪಕ್ಷವಾಗಿದ್ದರೆ ಖಂಡಿತ ಜಾತಿ ವಿಚಾರವನ್ನು ಎಳೆದು ತರುತ್ತಿರಲಿಲ್ಲ.  “ನಾವು ಹಿಂದು, ನಾವು ಒಂದು, ನಾವು ಬಂಧು&#8221; ಎಂದು ಘೋಷಣೆ ಹಾಕುವವರ ಪಕ್ಷ ನಿಮ್ಮದು. ಈ ದೇಶದ ಬಗ್ಗೆ ಒಂದಿಷ್ಟು ಕಾಳಜಿ, ಪ್ರೀತಿ ಇಟ್ಟುಕೊಂಡಿರುವ ಮಧ್ಯಮವರ್ಗದವರೇ ಬಿಜೆಪಿಯ ಸಾಂಪ್ರದಾಯಿಕ ಬೆಂಬಲಿಗರು ಎಂಬ ಹೆಗ್ಗಳಿಕೆ ನಿಮ್ಮ ಪಕ್ಷಕ್ಕಿದೆ. ಅಂತಹ ಪಕ್ಷದ ಮುಖ್ಯಮಂತ್ರಿಯಾಗಿ ದೇವೇಗೌಡರನ್ನು ಮಾದರಿಯಾಗಿ ತೆಗೆದುಕೊಂಡಿದ್ದೀರಲ್ಲಾ ನಿಮಗೆ ಇದು ಶೋಭೆ ತರುವಂಥದ್ದೆ? ಒಂದು ಕಾಲದಲ್ಲಿ ಬಿಜೆಪಿಯನ್ನು ಹುಬ್ಬಳ್ಳಿ-ಧಾರವಾಡ ಕಡೆಗಳಲ್ಲಿ ‘ಭಾರತೀಯ ಜನಿವಾರ ಪಾರ್ಟಿ’ ಎಂದು ಜನ ಆಡಿಕೊಳ್ಳುತ್ತಿದ್ದರು. ಈಗ ಅದೇ ಜನ ಬಿಜೆಪಿಯನ್ನು ‘ವಿಜೆಪಿ’(ವೀರಶೈವ ಜನತಾ ಪಾರ್ಟಿ) ಎಂದು ಜೋಕು ಮಾಡಿಕೊಳ್ಳುತ್ತಿದ್ದಾರೆ ಸಾರ್.</p>
<p>ಇನ್ನು ನಿಮ್ಮ ಇತ್ತೀಚಿನ ಸಾರ್ವಜನಿಕ ರಂಪಗಳನ್ನು ತೆಗೆದುಕೊಳ್ಳಿ. ಪ್ರತಿಪಕ್ಷದವರು ಟೀಕೆ ಮಾಡಿದ ಕೂಡಲೇ ‘ಪ್ರಾಣಿಗಳು’ ಎಂದು ಹರಿಹಾಯುತ್ತೀರಿ. ಸಣ್ಣ ಸಣ್ಣದಕ್ಕೂ Excite ಆಗುತ್ತೀರಿ. ಸಣ್ಣಪುಟ್ಟ ಟೀಕೆಗಳಿಗೂ ಉತ್ತರಿಸಲು ಹೋಗುತ್ತೀರಿ. ಪ್ರತಿಪಕ್ಷದ ನಾಯಕನಾಗಿದ್ದಾಗ ನೀವು ವಾಚಾಮಗೋಚರವಾಗಿ ಮಾತನಾಡುತ್ತಿದ್ದಾಗ ಉಳಿದವರೂ ನಿಮ್ಮಂತೆಯೇ ವರ್ತಿಸುತ್ತಿದ್ದರೆ? ಟೀಕೆಗಳನ್ನು ನಿಭಾಯಿಸುವ ಪ್ರಭುದ್ಧತೆಯೇ ನಿಮ್ಮಲ್ಲಿ ಕಾಣುತ್ತಿಲ್ಲವಲ್ಲಾ ಸ್ವಾಮಿ? ಜೋಕುಗಳಲ್ಲೇ ಬಾಯಿಮುಚ್ಚಿಕೊಳ್ಳುವಂಥ ಮಾರುತ್ತರ ಕೊಡುತ್ತಿದ್ದ ಜೆ.ಎಚ್. ಪಟೇಲ್ ಅವರಲ್ಲಿದ್ದ ಜಾಣ್ಮೆ, ಬುದ್ಧಿ ವಂತಿಕೆ ನಿಮ್ಮಲ್ಲಿಲ್ಲದಿದ್ದರೇನಂತೆ, ಎಸ್.ಎಂ. ಕೃಷ್ಣ ಅವರಲ್ಲಿದ್ದ ನಯವಂತಿಕೆಯನ್ನು ರೂಢಿಸಿಕೊಳ್ಳಬಹುದಲ್ಲವೆ? ಕಾವೇರಿ ವಿವಾದ, ಗೋಲಿಬಾರ್ ಪ್ರಕರಣ, ರಾಜ್‌ಕುಮಾರ್ ಅಪ ಹರಣ, ರೈತರ ಆತ್ಮಹತ್ಯೆ, ಸತತ ಬರದಂತಹ ಗಂಭೀರ ಸಮಸ್ಯೆಗಳನ್ನು ಬೆನ್ನಿಗೆ ಕಟ್ಟಿಕೊಂಡಿದ್ದರೂ ತಾಳ್ಮೆ ಕಳೆದುಕೊಳ್ಳದ ಕೃಷ್ಣ ಅವರನ್ನು ಮಾದರಿಯಾಗಿಟ್ಟುಕೊಳ್ಳುವುದರಲ್ಲಿ ತಪ್ಪೇನು? ಕುಮಾರಸ್ವಾಮಿಯವರಿಂದ ಎಲ್ಲರೊಡನೆ ಬೆರೆಯುವ, ಇತರರ ನೋವನ್ನು ಆಲಿಸುವ ಸೌಜನ್ಯವನ್ನು ಕಲಿತುಕೊಳ್ಳಬಹುದಲ್ಲವೆ?</p>
<p>ಅಲ್ಲಾ, ಜನ ನಿಮಗೆ ವೋಟು ಕೊಟ್ಟು ಮುಖ್ಯಮಂತ್ರಿಯನ್ನಾಗಿ ಮಾಡಿರುವುದು ದೇವೇಗೌಡರು ಹಾಗೂ ನಿಮ್ಮ ನಡುವಿನ ಬೀದಿ ಜಗಳವನ್ನು ನೋಡಿ ಮಜಾ ತೆಗೆದುಕೊಳ್ಳುವುದಕ್ಕಾ? ನೀವು ದೇವೇಗೌಡರ ಮೇಲೆ ಮಾನನಷ್ಟ ಮೊಕದ್ದಮೆ ಹೂಡುವುದಾಗಲಿ, ದೇವೇಗೌಡರು ನಿಮ್ಮ ಮೇಲೆ ಮಾನನಷ್ಟ ಮೊಕದ್ದಮೆ ಹಾಕುವುದಾಗಲಿ ತೀರಾ ನಗು ತರುವ ವಿಚಾರ. ಮಾನ ಇದ್ದವರಿಗೆ ಮಾತ್ರ ಅಂತಹ ಹಕ್ಕಿರುವುದು ಸ್ವಾಮಿ. ಇನ್ನು ಮಾತೆತ್ತಿದರೆ ಆ ತನಿಖೆಗೆ, ಈ ತನಿಖೆಗೆ ಆದೇಶ ನೀಡುತ್ತೇನೆ ಅಂತ ಏಕೆ ನೆಪ ಹೇಳುತ್ತಿದ್ದೀರಿ? ನುಣುಚಿಕೊಳ್ಳಲು ಪ್ರಯತ್ನಿಸುತ್ತಿದ್ದೀರಿ? ಅಷ್ಟಕ್ಕೂ ತನಿಖೆಗಳ ಹಣೆಬರಹ ಎಂಥದ್ದು ಅಂತ ನಾಡಿನ ಮಹಾಜನತೆಗೆ ಚೆನ್ನಾಗಿ ತಿಳಿದಿದೆ. ಹಾಗಿದ್ದಾಗ್ಯೂ ದೇವೇಗೌಡರು ಮತ್ತು ನೀವು ಕರ್ನಾಟಕವನ್ನೇಕೆ ಗಬ್ಬೇಳಿಸುತ್ತಿದ್ದೀರಿ? ದೇವೇಗೌಡರು ನಿಮ್ಮ ಬಗ್ಗೆ ಸಾಕಷ್ಟು ಬಾರಿ ಆರೋಪ ಮಾಡಿದ್ದಾರೆ. ಆದರೆ ಯಾರೂ ನಂಬುತ್ತಿರಲಿಲ್ಲ. ಏಕೆಂದರೆ ಡಿಪ್ಲೊಮಾ ಓದಿಕೊಂಡು ಮೋರಿ ಕಟ್ಟಿಸುತ್ತಿದ್ದ ದೇವೇಗೌಡರು ಒಡೆಯನಾದ ಯಶೋಗಾಥೆಯನ್ನು ಜನ ಕಣ್ಣಾರೆ ಕಂಡಿದ್ದರು.  ಈಗ ಜನ ಯಾವ ಹಂತಕ್ಕೆ ಬಂದಿದ್ದಾರೆಂದರೆ ಒಂದಿಷ್ಟು ಮಾಡಿಕೊಂಡರೆ ಏನೂ ತಪ್ಪಿಲ್ಲ ಎಂದು ಮಾಫಿ ಮಾಡಿಬಿಡುತ್ತಾರೆ. ನಿಮಗೆ ಸಿಕ್ಕಿದ್ದೂ ಅಂತಹ ಮಾಫಿಯೇ. ಆದರೆ ಈಗ ಹಿಡಿದಿರುವ ಹಾದಿ ಕಟ್ಟಾ ಬಿಜೆಪಿ ಬೆಂಬಲಿಗನೂ ಸಿಟ್ಟಿಗೇಳುವಂತೆ ಮಾಡುತ್ತಿದೆ. ಜನಸಂಘ, ಬಿಜೆಪಿ ಎಂಬ ಹೆಸರುಗಳು ಕರ್ನಾಟಕಕ್ಕೆ ತೀರಾ ಅಪರಿಚಿತವೆನಿಸಿಕೊಂಡಿದ್ದ ಕಾಲದಲ್ಲಿ ಹಳ್ಳಿ ಹಳ್ಳಿಗಳಿಗೆ ಹೋಗಿ ಮಕ್ಕಳನ್ನು ಒಟ್ಟು ಸೇರಿಸಿ ಭಗತ್ ಸಿಂಗ್, ಚಂದ್ರಶೇಖರ ಆಜಾದ್, ಸಾವರ್ಕರ್, ಸುಭಾಷ್‌ಚಂದ್ರ ಬೋಸ್, ಮದನ್ ಲಾಲ್ ಧಿಂಗ್ರಾ ಮುಂತಾದ ಸ್ವಾತಂತ್ರ್ಯ ಕಲಿಗಳ ಕಥೆ ಹೇಳಿ, ದೇಶದ ಬಗ್ಗೆ ಅಭಿಮಾನ ಮೂಡಿಸಿ, ಶಾಖೆಗಳನ್ನು ಆರಂಭಿಸಿ ಆ ಮೂಲಕ ಬಿಜೆಪಿಯ ಪರಿಚಯ ಮಾಡಿಕೊಟ್ಟು ಪಕ್ಷ ನೆಲೆಕಂಡುಕೊಳ್ಳುವಂತೆ ಮಾಡಿದ ಒಬ್ಬ ಸ್ವಯಂ ಸೇವಕ ನಿಮ್ಮ ಬಗ್ಗೆ ಏನಂದುಕೊಂಡಾನು ಎಂದು ಯಾವತ್ತಾದರೂ ಯೋಚಿಸಿದ್ದೀರಾ? ಸ್ವಯಂಸೇವಕರು ತತ್ತ್ವ, ಸಿದ್ಧಾಂತದ ಮೇಲೆ ಪಕ್ಷ ಕಟ್ಟಿದರೆ, ಶಾಮ ಪ್ರಸಾದ್ ಮುಖರ್ಜಿ, ದೀನದಯಾಳ್ ಉಪಾಧ್ಯಾಯರು ಪಕ್ಷದ ದಾರಿ ದೀವಿಗೆಯಾದರು. ಇವತ್ತು ಕೈಯಲ್ಲಿ ಕಾಸಿದ್ದವರೆಲ್ಲ ಅಂತಹ ಸಿದ್ಧಾಂತವಾದಿ ಪಕ್ಷದ ಸದಸ್ಯ ರಾಗಬಹುದು, ಎಂಎಲ್‌ಎ  ಟಿಕೆಟ್ ಪಡೆದುಕೊಂಡು ಮಂತ್ರಿ ಗಳಾಗಬಹುದು ಎಂದಾದರೆ ಆ ಸ್ವಯಂಸೇವಕನ ಸಾಕ್ಷಿಪ್ರeಗೆ ಎಂತಹ ಹೊಡೆತ ಬೀಳಬಹುದು ಸ್ವಾಮಿ.</p>
<p>ಅದಿರಲಿ, ಏಕೆ ದೇವೇಗೌಡರಂತೆ ದ್ವೇಷದ ರಾಜಕಾರಣಕ್ಕೆ ಕೈಹಾಕಿದ್ದೀರಿ?</p>
<p>ಎಂ.ಪಿ. ಪ್ರಕಾಶ್ ಅವರು, ಹೂವಿನ ಹಡಗಲಿಗೆ ಮಂಜೂರು ಮಾಡಿಸಿಕೊಂಡಿದ್ದ ಎಂಜಿನಿಯರಿಂಗ್ ಕಾಲೇಜನ್ನು ಬಳ್ಳಾರಿಗೆ ವರ್ಗಾವಣೆ ಮಾಡುವ ಸಣ್ಣತನವೇಕೆ? ಸಾಕಷ್ಟು ವಿದ್ಯಾರ್ಥಿ ಗಳಿರಲಿಲ್ಲ, ಮೂಲಭೂತಸೌಕರ್ಯಗಳಿರಲಿಲ್ಲ ಎಂದು ನೆಪವನ್ನೇಕೆ ಹೇಳುತ್ತೀರಿ? ಬಳ್ಳಾರಿಯಲ್ಲಿ ಈಗಾಗಲೇ ಎರಡು ಎಂಜಿನಿಯರಿಂಗ್ ಕಾಲೇಜುಗಳಿವೆ. ಹಾಗಿರುವಾಗ ಹೂವಿನ ಹಡಗಲಿಯಲ್ಲೇ ಮೂಲಭೂತಸೌಕರ್ಯವನ್ನು ಸುಧಾರಣೆ ಮಾಡಬಹುದಿತ್ತಲ್ಲವೆ?  ಸರಕಾರಿ ಎಂಜಿನಿಯರಿಂಗ್ ಕಾಲೇಜಿಗೆ ವಿದ್ಯಾರ್ಥಿಗಳು ಬರುವಂತೆ ಮಾಡುವುದು ಯಾವ ದೊಡ್ಡ ಕೆಲಸವೂ ಅಲ್ಲ. ಹೀಗಿದ್ದಾಗ್ಯೂ, ಆ ರೆಡ್ಡಿ ಸಹೋದರರ ತಾಳಕ್ಕೆ ಕುಣಿಯುವ ಕೆಲಸ ಮಾಡಿದಿರಿ.</p>
<p>ನಿಮ್ಮ ‘ಗುಣಗಾನ’ ಮಾಡುತ್ತಾ ಹೋದರೆ ಎಲ್ಲ ಪುಟಗಳೂ ಭರ್ತಿಯಾದಾವು. ಅದಕ್ಕಿಂತ ಆತಂಕ ಹುಟ್ಟಿಸುವ ಸಂಗತಿ ಯೆಂದರೆ ಇನ್ನೂ ನಾಲ್ಕೂವರೆ ವರ್ಷ ಗುಣಗಾನ ಮಾಡಬೇಕಾಗುತ್ತದೆಯೇನೋ ಎಂಬ ಭಯ!!</p>
<p>ಆರು ತಿಂಗಳಲ್ಲಿ ಮ್ಯಾಜಿಕ್ ಮಾಡುತ್ತೀರಿ ಎಂದು ಯಾರೂ ನಿರೀಕ್ಷಿಸಿರಲಿಲ್ಲ ಅಥವಾ ಮ್ಯಾಜಿಕ್ ಮಾಡಬೇಕಿತ್ತು ಎಂದೂ ಹೇಳುತ್ತಿಲ್ಲ. ಆದರೆ ಒಳ್ಳೆಯ ಕೆಲಸಗಳನ್ನಾದರೂ ಆರಂಭಿಸ ಬಹುದಿತ್ತಲ್ಲವೆ? ರೈತರಿಗೆ ಉಚಿತ ವಿದ್ಯುತ್ ಕೊಡುತ್ತೇವೆ ಎಂದು ಆಶ್ವಾಸನೆ ಕೊಟ್ಟಿದ್ದೇನೋ ಸರಿ, ಆದರೆ ರಾಜ್ಯ ಸುಮಾರು ೧೭೦೦ ಮೆಗಾವ್ಯಾಟ್ ವಿದ್ಯುತ್ ಕೊರತೆಯನ್ನು ಎದುರಿಸುತ್ತಿದೆ. ಈ ಸಮಸ್ಯೆಯನ್ನು ಪರಿಹರಿಸಲು ಸ್ಥಳೀಯವಾಗಿ ಕೆಲವು ಮಾರ್ಗೋಪಾಯಗಳನ್ನು ಯೋಚಿಸಬಹುದಿತ್ತು. ಉದಾ ಹರಣೆಗೆ ರಾಜ್ಯದಲ್ಲಿ ಸುಮಾರು ೫೨ ಸಕ್ಕರೆ ಕಾರ್ಖಾನೆಗಳಿವೆ, ಅವುಗಳಲ್ಲಿ ೨೪ ಸುಸಜ್ಜಿತವಾಗಿವೆ. ಎಲ್ಲ ಸಕ್ಕರೆ ಕಾರ್ಖಾನೆಗಳನ್ನೂ ಸರಿಯಾಗಿ ಬಳಸಿಕೊಂಡರೆ ಅಪಾರ ಪ್ರಮಾಣದ ವಿದ್ಯುತ್ ತಯಾರಿಸಬಹುದು. ಆದರೆ ಸಕ್ಕರೆ ಕಾರ್ಖಾನೆಗಳು ತಯಾರಿ ಸುವ ವಿದ್ಯುತ್‌ಗೆ ಇತ್ತೀಚಿನವರೆಗೂ ಪ್ರತಿ ಯೂನಿಟ್‌ಗೆ ೩.೮೦ ರೂ. ನೀಡಲು ಮೀನಮೇಷ ಎಣಿಸುತ್ತಿದ್ದ ನೀವು, ರಿಲಯನ್ಸ್, ಸುಝ್ಲಾನ್, ಟಾಟಾದಂತಹ ಕಂಪನಿಗಳಿಗೆ ಪ್ರತಿ ಯೂನಿಟ್‌ಗೆ ೮.೮೦ ರೂ. ಕೊಟ್ಟು ಖರೀದಿಸುತ್ತೀರಿ, ಏಕೆ? ಸುಲಭವಾಗಿ ಮಾಮೂಲಿ ಬರುತ್ತದೆ ಎಂಬ ಕಾರಣಕ್ಕಾ? ಉಮೇಶ್ ಕತ್ತಿಯವರನ್ನು ಭ್ರಷ್ಟಗೊಳಿಸಿದ್ದು ಸಾಕು, ಸಕ್ಕರೆ ಕಾರ್ಖಾನೆಗಳಿಂದ ಹೇಗೆ ವಿದ್ಯುತ್ ತಯಾರಿಸಬಹುದು, ಕೊರತೆಯನ್ನು ಕೊಂಚ ಮಟ್ಟಿಗೆ ಹೇಗೆ ನಿವಾರಿಸಿಕೊಳ್ಳಬಹುದು ಎಂಬುದನ್ನು ಅವರಿಂದ ಕೇಳಿಕೊಳ್ಳಿ.</p>
<p>ಇವತ್ತು ರೇಶನ್ ಕಾರ್ಡ್ ಎಂಬುದು ನಮ್ಮ ದೇಶದಲ್ಲಿ ಗುರುತಿನ ಚೀಟಿಯಂತಾಗಿದೆ. ಒಬ್ಬ ವಿದ್ಯಾವಂತನಿಗೆ, ಹಣ ವಂತನಿಗೆ ಬ್ಯಾಂಕ್ ಅಕೌಂಟ್, ಪಾಸ್‌ಪೋರ್ಟ್, ಎಸ್‌ಎಸ್‌ಎಲ್‌ಸಿ ಮಾರ್ಕ್ಸ್‌ಕಾರ್ಡ್‌ನಂತಹ ಗುರುತುಗಳಿವೆ. ಆದರೆ ಇವ್ಯಾವವೂ ಇಲ್ಲದ ಬಡ ಅನಕ್ಷರಸ್ಥ ಏನು ಮಾಡಬೇಕು? ನಿಮ್ಮ ಸರಕಾರ ಅಧಿಕಾರಕ್ಕೆ ಬಂದು ೬ ತಿಂಗಳಾಯಿತು. ಕನಿಷ್ಠ ಬಡವರಿಗೆ ಪಡಿತರ ಚೀಟಿಯನ್ನಾದರೂ ವಿತರಿಸಬಹುದಿತ್ತಲ್ಲವೆ? ಜತೆಗೆ ಸರಕಾರಿ ಇನ್‌ಸ್ಟಿಟ್ಯೂಷನ್‌ಗಳ ಸಂಖ್ಯೆಯನ್ನು ಹೆಚ್ಚು ಮಾಡುವುದಕ್ಕಾದರೂ ಪ್ರಯತ್ನಿಸಬಹುದಿತ್ತು. ಅಂದರೆ ಸರಕಾರಿ ಶಾಲೆ, ಕಾಲೇಜು, ಆಸ್ಪತ್ರೆಗಳನ್ನು ನಿರ್ಮಾಣ ಮಾಡುವುದರಿಂದ ಉದ್ಯೋಗ ಸೃಷ್ಟಿಯೂ ಆಗುತ್ತದೆ, ಜನಕಲ್ಯಾಣ ಕಾರ್ಯವೂ ನಡೆಯುತ್ತದೆ. ಇಂತಹ ಕೆಲಸ ಮಾಡುವುದು ಬಿಟ್ಟು ‘ಸಿಇಟಿ’ಯನ್ನೇ ರದ್ದು ಮಾಡಲು ಸಂಚು ರೂಪಿಸುತ್ತಿದ್ದೀರಲ್ಲಾ ಇದು ಸರೀನಾ? ಜೆಡಿಎಸ್-ಬಿಜೆಪಿ ಮೈತ್ರಿಕೂಟ ಸರಕಾರವಿದ್ದಾಗ ‘ಹೆಣ್ಣುಮಕ್ಕಳಿಗೆ ಸೈಕಲ್ ಕೊಟ್ಟೆ, ಕೊಟ್ಟೆ’ ಅಂತ ಬಡಾಯಿ ಕೊಚ್ಚಿಕೊಳ್ಳುತ್ತಾ ಇದ್ದಿರಿ. ಮುಖ್ಯಮಂತ್ರಿಯಾಗಿ ಆರು ತಿಂಗಳಾದರೂ, ಶಾಲೆಗಳು ಪುನಾರಂಭಗೊಂಡು ಐದು ತಿಂಗಳಾದರೂ ಏಕೆ ಸೈಕಲ್ ಕೊಟ್ಟಿಲ್ಲ? ಜಯಲಲಿತಾ ಅವರು ನಿಮಗಿಂತಲೂ ಮೊದಲೇ ಹೆಣ್ಣು ಮಕ್ಕಳಿಗೆ ಸೈಕಲ್ ಕೊಟ್ಟು ಮೇಲ್ಪಂಕ್ತಿ ಹಾಕಿಕೊಟ್ಟಿದ್ದರು. ಅದನ್ನೇ ಕಾಪಿ ಮಾಡಿ, ಯಾರೂ ಮಾಡದ ಕೆಲಸವನ್ನು ಮಾಡಿದೆ ಎಂಬಂತೆ ಬೀಗಿದ್ದೀರಿ. ಅಷ್ಟೇ ಅಲ್ಲ, ರೈತರ ಸಾಲಮನ್ನಾ ಮಾಡಿದ್ದು ತಾನೇ ಎಂದು ಕೊಚ್ಚಿಕೊಂಡಿರಲ್ಲಾ ಅದೆಂತಹ ಸುಳ್ಳು ಎಂಬುದು ನಮಗೆ ಗೊತ್ತಿಲ್ಲವೆ? ಸಾಲಮನ್ನಾ ಮಾಡುವುದಾಗಿ ಘೋಷಣೆ ಮಾಡಿದ್ದು ಕುಮಾರಸ್ವಾಮಿಯವರೇ ಹೊರತು ನೀವಲ್ಲ. ಹಾಗೆ ಘೋಷಣೆ ಮಾಡಿದಾಗ, ‘ಖಜಾನೆಯಲ್ಲಿ ದುಡ್ಡಿಲ್ಲ, ಸಾಲಮನ್ನಾ ಸಾಧ್ಯವಿಲ್ಲ’ ಎಂದು ತಕರಾರು ತೆಗೆದಿದ್ದ ನೀವು ಕೊನೆಗೆ ಕುಮಾರಸ್ವಾಮಿಯವರು ಪಟ್ಟು ಹಿಡಿದಿದ್ದರಿಂದ ಒತ್ತಡಕ್ಕೆ ಮಣಿದಿರಿ. ಆದರೆ ಕಳೆದ ವಿಧಾನಸಭೆ ಚುನಾವಣೆ ಪ್ರಚಾರಾಂದೋಲನದ ವೇಳೆ “ಸಾಲಮನ್ನಾ ಮಾಡಿದ್ದು ನಾನೇ&#8221; ಎಂದು ಪೋಸುಕೊಟ್ಟಿರಿ.</p>
<p>ಆರು ತಿಂಗಳಲ್ಲಿ ಏನೇನು ಮಾಡಿದ್ದೀರಿ ಎಂದು ಶ್ವೇತಪತ್ರ ಹೊರಡಿಸಿ ನೋಡೋಣ?</p>
<p>ಹಣ ಇಲ್ಲ ಎಂದು ಹೇಳುತ್ತಿದ್ದೀರಲ್ಲಾ, ಕಳೆದ ಮೂರು ವರ್ಷಗಳಿಂದ ಬಜೆಟ್ ಮಂಡಿಸುತ್ತಾ ಬಂದಿರುವವರು ಯಾರು? ಒಬ್ಬ ವಿತ್ತ ಸಚಿವನಾಗಿ ನಿಮಗೆ ರಾಜ್ಯದ ಹಣಕಾಸು ಸ್ಥಿತಿಯ ಅರಿವಿರಲಿಲ್ಲವೆ? ಹಾಗಾದರೆ ೧೦ ಲಕ್ಷ ಮನೆ ಕಟ್ಟಿಸಿಕೊಡುತ್ತೇವೆ ಎಂದು ಚುನಾವಣಾ ಪ್ರಣಾಳಿಕೆಯಲ್ಲಿ ಸುಳ್ಳು ಆಶ್ವಾಸನೆ ಕೊಟ್ಟಿದ್ದೇಕೆ? ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ಕೊಡುತ್ತೇವೆ ಎಂದು ಚುನಾವಣಾ ಪ್ರಣಾಳಿಕೆಯಲ್ಲಿಯೇ ಹೇಳಿದ್ದೀರಿ. ಆದರೆ ಆರು ತಿಂಗಳಾದರೂ ಆ ಬಗ್ಗೆ ಏಕೆ ಚಕಾರವೇ ಇಲ್ಲ? ಈಗ ಪರಿಶೀಲನೆ ನಡೆಸುತ್ತೇವೆ ಎಂಬ ಕಾರಣ ಹೇಳುತ್ತಿದ್ದೀರಿ. ಆಶ್ವಾಸನೆ ಕೊಟ್ಟ ಮೇಲೆ ಪರಿಶೀಲನೆಯ ಪ್ರಶ್ನೆ ಏಕೆ?</p>
<p>ಅದಿರಲಿ, ನಿಮಗೆ ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ನಂಬಿಕೆಯಿದೆಯೇ? ಎಲ್ಲ ಸಚಿವಾಲಯಗಳೂ ತಮ್ಮ ಅಡಿಯಲ್ಲಿಯೇ ಕೆಲಸ ಮಾಡಬೇಕು ಎಂದರೆ ಹೇಗೆ? ಏಕೆ ಸ್ವಾತಂತ್ರ್ಯ ಕೊಡುವುದಿಲ್ಲ? ಎಲ್ಲ ಖಾತೆಗಳ ವ್ಯವಹಾರದಲ್ಲೂ ಹಸ್ತಕ್ಷೇಪ ಮಾಡುವ ನೀವು, ಸಚಿವರಿಗೆ ಅವರ ಖಾತೆ ನಿರ್ವಹಣೆ ಮಾಡಿಕೊಳ್ಳುವ ಸ್ವಾತಂತ್ರ್ಯ ಕೊಡಬೇಕು ಎಂಬುದನ್ನು ಜೆ.ಎಚ್. ಪಟೇಲರಿಂದ ಕಲಿಯಬೇಕಿತ್ತು. ನಿಮಗೆ ಅಧಿಕಾರ ವಿಕೇಂದ್ರೀಕರಣದಲ್ಲಿ ನಂಬಿಕೆ ಇದ್ದಂತೆಯೇ ಕಾಣುವುದಿಲ್ಲ. ಒಳ್ಳೆಯ ಕೆಲಸ ಮಾಡಬೇಕೆಂಬ ಮನಸ್ಸಿದ್ದರೆ ಖಂಡಿತ ಸಾಕಷ್ಟು ಮಾರ್ಗಗಳಿವೆ. ಸಾವಿರಾರು ಗುಡಿ, ಗೋಪುರಗಳು, ನಿಸರ್ಗತಾಣಗಳು, ಸಮುದ್ರ ಕಿನಾರೆ ಹೊಂದಿರುವ ಕರ್ನಾಟಕವನ್ನು ಪ್ರವಾಸೋದ್ಯಮದಿಂದಲೇ ಮೇಲೆತ್ತಬಹುದು. ಅದಕ್ಕೇನು ಬಹಳ ಪರಿಶ್ರಮಪಡಬೇಕಿಲ್ಲ. ಒಂದು ಮಾರ್ಗದರ್ಶಿ, ಸಾಗಣೆ ವ್ಯವಸ್ಥೆ, ಉತ್ತಮ ರಸ್ತೆ ಮತ್ತು ವಸತಿ ಸೌಲಭ್ಯ ಕಲ್ಪಿಸಿದರೆ ಸಾಕು. ಅದರಿಂದ ಪ್ರವಾಸಿ ತಾಣಗಳ ಸಮೀಪದಲ್ಲಿರುವ ಸ್ಥಳೀಯರಿಗೂ ಅನ್ನ ದುಡಿದುಕೊಳ್ಳುವ ಮಾರ್ಗ ಸೃಷ್ಟಿಯಾಗುತ್ತಿತ್ತು. ಮೊನ್ನೆ ತಾನೇ ಶಿವರಾಜ್ ಸಿಂಗ್ ಚವ್ಹಾಣ್, ರಮಣ್ ಸಿಂಗ್ ಅವರು ತಾವು ಕೈಗೊಂಡ ಜನ ಪರ ಕೆಲಸಗಳು ಹಾಗೂ ಅಭಿವೃದ್ಧಿ ಕಾರ್ಯಗಳಿಂದಲೇ ಮರು ಆಯ್ಕೆಯಾಗಿ ಬಂದರು. ಉತ್ತರಾಖಂಡದ ಬಿ.ಸಿ. ಖಂಡೂರಿ ಯವರಂತೂ ೨೦೦೮ನೇ ಸಾಲಿನ ಅತ್ಯುತ್ತಮ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವತ್ತು ಜಾತಿ ರಾಜಕೀಯ, ರಾಮನಾಮ ಸ್ಮರಣೆ ಹೆಚ್ಚು ದಿನ ನಡೆಯುವುದಿಲ್ಲ.</p>
<p>ನೀವೂ ಐದು ವರ್ಷ ಆಡಳಿತ ನಡೆಸಬಹುದು. ನಿಮ್ಮಂತೆಯೇ ಎಷ್ಟೋ ಜನ ಈ ರಾಜ್ಯದ ಮುಖ್ಯಮಂತ್ರಿಗಳಾಗಿ ಹೋಗಿದ್ದಾರೆ. ಅವರಲ್ಲಿ ಬಹಳ ಜನ ಮರೆತೇ ಹೋಗಿದ್ದಾರೆ. ಏಕೆಂದರೆ ಅವರನ್ನು ನೆನಪಿಸಿಕೊಳ್ಳುವಂತಹ ಯಾವ ಸಾಧನೆಯನ್ನೂ ಬಿಟ್ಟುಹೋಗಿಲ್ಲ. ಅಂತಹ &#8220;Faceless&#8221;  ಮುಖ್ಯಮಂತ್ರಿಗಳ ಪಟ್ಟಿಗೆ ನೀವೂ ಸೇರಿಕೊಳ್ಳಬಹುದು. ಹಿಂದಿನವರ ತಪ್ಪುಗಳನ್ನು ನೋಡಿ ಕಲಿಯಲೂಬಹುದು, ಅದೇ ತಪ್ಪುಗಳನ್ನು ಪುನರಾವರ್ತನೆ ಕೂಡ ಮಾಡಬಹುದು. ಐದು ವರ್ಷಗಳ ಆಡಳಿತ ಮುಗಿಸುವ ಮುನ್ನ ಪತ್ರಕರ್ತರು ಬರೆಯುವ ಮಾಮೂಲು ಷರಾ ಬದಲು, ಅಧಿಕಾರದ ಹೊಸ್ತಿಲಲ್ಲಿಯೇ ಇರುವ ನಿಮಗೆ ಹೇಳಿದರೆ ಮುಂದೆ ತಿದ್ದಿಕೊಳ್ಳಬಹುದೆಂಬ ಸದುದ್ದೇಶದಿಂದ ಇವನ್ನೆಲ್ಲಾ ಬರೆದಿದ್ದು, ಅನ್ಯಥಾ ಭಾವಿಸಿದರೆ ನಷ್ಟ ನಿಮಗೆ. ನಿಮ್ಮಿಂದ ಈ ರಾಜ್ಯಕ್ಕೆ ಒಳ್ಳೆಯದಾದರೆ, ಅಷ್ಟರಮಟ್ಟಿಗೆ ನಾವೂ ನಿಮ್ಮ ಪರವೇ.</p>
<p>ಆದರೆ ಆಯ್ಕೆ ನಿಮ್ಮದು.</p>
]]></content:encoded>
			<wfw:commentRss>http://pratapsimha.com/bettale-jagattu/yeddi-2/feed/</wfw:commentRss>
		</item>
		<item>
		<title>ಡಿಸೆಂಬರ್ 7 ಬಂದು ಹೋಯಿತು, ಅಂದೇ ಅವರ ನೆನಪಾಗಿತ್ತು, ಆದರೆ&#8230;</title>
		<link>http://pratapsimha.com/bettale-jagattu/bichi/</link>
		<comments>http://pratapsimha.com/bettale-jagattu/bichi/#comments</comments>
		<pubDate>Sun, 21 Dec 2008 12:21:48 +0000</pubDate>
		<dc:creator>Pratap Simha</dc:creator>
		
		<category><![CDATA[Bettale-Jagattu]]></category>

		<guid isPermaLink="false">http://pratapsimha.com/?p=65</guid>
		<description><![CDATA[(Photo: Master Hirannaiah, Beechi and Uday Shankar)
ಆ ಕಾಲದಲ್ಲಿ ಸಂಜೆ ಹೆಂಡತಿ ಜತೆ ವಾಕಿಂಗ್ ಹೋಗು ವುದೂ ಒಂದು ಸಂಪ್ರದಾಯವಾಗಿತ್ತು. ಬೀChi  ಕೂಡ ವಾಕಿಂಗ್‌ಗೆ ಹೊರಟಿದ್ದರು. ಹಾಗೆ ಹೋಗುತ್ತಿರು ವಾಗ ಮಾರ್ಗ ಮಧ್ಯದಲ್ಲಿ ಕಂಡ ಹುಬ್ಬಳ್ಳಿಯ ಕೊಪ್ಪಿಕರ್ ರಸ್ತೆಯಲ್ಲಿರುವ ‘ಸಾಹಿತ್ಯ ಭಂಡಾರ’ದತ್ತ ಕೈತೋರಿ “ಇದೇ ನನ್ನ ಆಫೀಸು, ಈ ಪುಸ್ತಕದಂಗಡಿಯಲ್ಲಿಯೇ ನಾನು ಹೆಚ್ಚು ಕಾಲ ಕಳೆಯುತ್ತೇನೆ&#8221; ಎಂದು ಹೆಂಡತಿಗೆ ಹೇಳುತ್ತಾರೆ.

ಸರಕಾರಿ ಗುಮಾಸ್ತರಾಗಿದ್ದ ಬೀಚಿಯವರು ಸಂಜೆ ಕಳೆಯುತ್ತಿದ್ದುದೇ ಸಾಹಿತ್ಯ ಭಂಡಾರದಲ್ಲಿ. ಬೀಚಿಯವರ ಮಾತು ಕೇಳಿಸಿಕೊಂಡ ಅವರ ಪತ್ನಿ [...]]]></description>
			<content:encoded><![CDATA[<p>(Photo: Master Hirannaiah, Beechi and Uday Shankar)</p>
<p>ಆ ಕಾಲದಲ್ಲಿ ಸಂಜೆ ಹೆಂಡತಿ ಜತೆ ವಾಕಿಂಗ್ ಹೋಗು ವುದೂ ಒಂದು ಸಂಪ್ರದಾಯವಾಗಿತ್ತು. ಬೀChi  ಕೂಡ ವಾಕಿಂಗ್‌ಗೆ ಹೊರಟಿದ್ದರು. ಹಾಗೆ ಹೋಗುತ್ತಿರು ವಾಗ ಮಾರ್ಗ ಮಧ್ಯದಲ್ಲಿ ಕಂಡ ಹುಬ್ಬಳ್ಳಿಯ ಕೊಪ್ಪಿಕರ್ ರಸ್ತೆಯಲ್ಲಿರುವ ‘ಸಾಹಿತ್ಯ ಭಂಡಾರ’ದತ್ತ ಕೈತೋರಿ “ಇದೇ ನನ್ನ ಆಫೀಸು, ಈ ಪುಸ್ತಕದಂಗಡಿಯಲ್ಲಿಯೇ ನಾನು ಹೆಚ್ಚು ಕಾಲ ಕಳೆಯುತ್ತೇನೆ&#8221; ಎಂದು ಹೆಂಡತಿಗೆ ಹೇಳುತ್ತಾರೆ.</p>
<p><span id="more-65"></span></p>
<p>ಸರಕಾರಿ ಗುಮಾಸ್ತರಾಗಿದ್ದ ಬೀಚಿಯವರು ಸಂಜೆ ಕಳೆಯುತ್ತಿದ್ದುದೇ ಸಾಹಿತ್ಯ ಭಂಡಾರದಲ್ಲಿ. ಬೀಚಿಯವರ ಮಾತು ಕೇಳಿಸಿಕೊಂಡ ಅವರ ಪತ್ನಿ “ಅಲ್ಲಿ ಯಾವ ಪುಸ್ತಕಗಳಿವೆ? ತೆಲುಗು ಪುಸ್ತಕಗಳಿ ವೆಯೇ?&#8221; ಎಂದು ಕೇಳುತ್ತಾರೆ. “ಇದು ಹುಬ್ಬಳ್ಳಿ&#8221; ಎಂದು ನಗುತ್ತಾ ಹೇಳಿದ ಬೀಚಿ, “ಸುಡುಗಾಡು ಕನ್ನಡ ಪುಸ್ತಕ ಮಾರತಾರ&#8221; ಎಂದರು. ಇಂಗ್ಲಿಷ್ ಸಾಹಿತ್ಯದಿಂದ ಬಹುವಾಗಿ ಪ್ರಭಾವಿತರಾಗಿದ್ದ ಅವರು, ಕನ್ನಡ ಪುಸ್ತಕಗಳನ್ನು ಕಣ್ಣೆತ್ತಿಯೂ ನೋಡಿದವರಲ್ಲ.</p>
<p>ಅಂದು ಬೀಚಿಯವರು ‘ಸಾಹಿತ್ಯ ಭಂಡಾರ’ದ ಬಗ್ಗೆ ಹೇಳಿದ್ದನ್ನು ನೆನಪಿಟ್ಟುಕೊಂಡಿದ್ದ ಅವರ ಹೆಂಡತಿ, “ಮಧ್ಯಾಹ್ನ ಕಳೆಯುವುದೇ ಕಷ್ಟವಾಗುತ್ತಿದೆ. ಯಾವುದಾದರೂ ಕನ್ನಡ ಪುಸ್ತಕ ತಂದುಕೊಡಿ&#8221; ಎಂದು ಒಂದು ದಿನ ಗಂಡನನ್ನು ಕೇಳಿದರು. ಎಂದಿನಂತೆ ಮರುದಿನ ಸಂಜೆ ಸಾಹಿತ್ಯ ಭಂಡಾರಕ್ಕೆ ಬಂದ ಬೀಚಿ, “ಯಾವುದಾದರೂ ಕನ್ನಡದ ಕಥೆ ಪುಸ್ತಕ ಕೊಡಿ. ನನ್ನ ಹೆಂಡತಿ ಪೀಡಿಸುತ್ತಿದ್ದಾಳೆ. ಓದಿಯಾದ ಮೇಲೆ ತಂದುಕೊಡುತ್ತೇನೆ&#8221; ಎಂದು ಸಾಹಿತ್ಯ ಭಂಡಾರ ಸ್ಥಾಪಕರೂ ಹಾಗೂ ಮಾಲೀಕರೂ ಆಗಿದ್ದ ಗೋವಿಂದರಾಯರನ್ನು ಕೇಳಿದರು. ಸೌಜನ್ಯಕ್ಕೆ ಹೆಸರಾಗಿದ್ದ ಗೋವಿಂದರಾಯರು ನಗು ನಗುತ್ತಲೇ ಕಪಾಟದಿಂದ ಪುಸ್ತಕವೊಂದನ್ನು ಹೊರತೆಗೆದು ಕವರ್‌ಗೆ ಹಾಕಿಕೊಟ್ಟರು. ಬೀಚಿ ಯವರು ಅದನ್ನು ಬಿಡಿಸಿಯೂ ನೋಡಲಿಲ್ಲ. “ಅಂಚೆ ಜವಾನನ ಕೆಲಸ ಮಾಡಿದೆ&#8221; ಎಂದು ಅವರೇ ತಮ್ಮ ‘ಭಯಾಗ್ರಫಿ&#8221;ಯಲ್ಲಿ ಹೇಳಿಕೊಂಡಿದ್ದಾರೆ. ಹೆಂಡತಿಗೆ ಪುಸ್ತಕ ತಂದುಕೊಟ್ಟು, ತಲೆನೋವು ತಪ್ಪಿತು ಎಂದು ಸುಮ್ಮನಾದರು. ಆದರೆ ಮರುದಿನ ಮಧ್ಯಾಹ್ನ ಊಟಕ್ಕೆಂದು ಕಚೇರಿಯಿಂದ ಮನೆಗೆ ಹೋದರೆ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡಿದ್ದ ಅವರ ಪತ್ನಿ ಬಿಕ್ಕಳಿಸಿ ಅಳುತ್ತಿದ್ದಾರೆ! ಆಶ್ಚರ್ಯಚಕಿತರಾದ ಬೀಚಿ, “ಕನ್ನಡ ಓದಲಿಕ್ಕೆ ಬರುತ್ತಿಲ್ಲ ಅಂತ ಅಳುತ್ತಿದ್ದೀಯೇನು?&#8221; ಎಂದು ಕೇಳಿದರು. ಬಳ್ಳಾರಿ ಜಿಲ್ಲೆಯಲ್ಲಿ ಹುಟ್ಟಿ, ಬೆಳೆದಿದ್ದ ಆಕೆಗೆ ಕನ್ನಡ ಓದುವುದಕ್ಕೆ ಕಷ್ಟವಾಗುತ್ತಿದೆ ಎಂಬುದು ಬೀಚಿಯವರ ಊಹೆಯಾಗಿತ್ತು. ಆದರೆ “ಕನ್ನಡ ಮತ್ತು ತೆಲುಗು ಲಿಪಿಗಳಲ್ಲಿ ಯಾವ ಮಹಾಭೇದವಿದೆ? ಒಂದರ ಲಿಪಿಯನ್ನು ತಿಳಿದವರು ಎರಡನ್ನೂ ಓದಬಹುದು&#8221; ಎಂದು ಕಣ್ಣೊರೆಸಿಕೊಳ್ಳುತ್ತಾ ಹೇಳಿದ ಆಕೆ, “ಪುಸ್ತಕ ಬಹಳ ಚೆನ್ನಾಗಿದೆ. ಇದನ್ನೊಮ್ಮೆ ನೀವೂ ಓದಬೇಕು&#8221; ಎಂದರು! ಇದ್ಯಾವ ಗ್ರಹಚಾರ ಎಂದುಕೊಂಡ ಬೀಚಿ, “ನೀನಂತೂ ಓದಿ ಮುಗಿಸು&#8221; ಎಂದು ಊಟಕ್ಕೆ ಅಣಿ ಯಾದರು. ಇತ್ತ ಪುಸ್ತಕವನ್ನು ಓದಿ ಮುಗಿಸಿದ ಕೂಡಲೇ ಕಾಟ ಶುರುವಿಟ್ಟುಕೊಂಡರು ಪತ್ನಿ. ‘ಒಮ್ಮೆ ನೀವೂ ಓದಿ’ ಎಂದು ಗಂಡನ ದುಂಬಾಲು ಬಿದ್ದರು. “ಹೆಂಡತಿಗಾಗಿ ಯಾರ್‍ಯಾರೋ ಏನೇನೋ ಮಾಡಿದ್ದಾರೆ. ಬ್ರಿಟನ್ ರಾಜ  ೬ನೇ ಜಾರ್ಜ್ ಪತ್ನಿಗಾಗಿ ಸಿಂಹಾ ಸನವನ್ನೇ ತ್ಯಾಗ ಮಾಡಲಿಲ್ಲವೆ? ಮದುವೆಯಾದವನು ಎಂತಹ ತ್ಯಾಗಗಳಿಗೂ ಸಿದ್ಧನಾಗಬೇಕು&#8221; ಎಂದುಕೊಂಡ ಬೀಚಿ, ಪತ್ನಿಯ ಮಾತಿಗೆ ತಲೆಯಾಡಿಸಿದರು.</p>
<p>ಮರುದಿನ ರೈಲು ಪ್ರಯಾಣವಿತ್ತು.</p>
<p>ಆದರೆ ರೈಲಿನಲ್ಲಿ ಕನ್ನಡ ಪುಸ್ತಕ ಓದಿದರೆ ಮಾನ ಉಳಿಯುವುದಿಲ್ಲ. ಕನ್ನಡ ಪುಸ್ತಕ ಓದುತ್ತಿರುವುದನ್ನು ನೋಡಿ, ಯಾರಾದರೂ ಬೀಡಿ ಕೇಳಿದರೆ ಏನು ಗತಿ? ಎಂದುಕೊಂಡ ಬೀಚಿ, ‘ಇಲಸ್ಟ್ರೇಟೆಡ್ ವೀಕ್ಲಿ’ ಮ್ಯಾಗಝಿನ್‌ನೊಳಗೆ ಕನ್ನಡ ಪುಸ್ತಕವನ್ನಿಟ್ಟುಕೊಂಡು ಓದಲಾರಂಭಿಸಿದರು. ಆರಂಭ ಮಾಡಿದ್ದಷ್ಟೇ ಗೊತ್ತು, ಕಣ್ಣುಗಳು ಅದೆಷ್ಟು ಬಾರಿ ಜಿನುಗಿದ್ದವೋ ಗೊತ್ತಿಲ್ಲ! ‘ಕನ್ನಡದಲ್ಲೂ ಒಳ್ಳೆಯ ಬರಹಗಾರರಿದ್ದಾರೆ ಎಂಬುದು ಅರಿವಾಯಿತು. ಆ ಶುಭಮುಹೂರ್ತದಲ್ಲಿ ಕನ್ನಡದಲ್ಲಿ ದೀಕ್ಷೆ ಸ್ವೀಕರಿಸಿದೆ’ ಎನ್ನುತ್ತಾರೆ ಬೀಚಿ.</p>
<p>ರೈಲಿನಲ್ಲಿ ಅವರು ಓದಿದ್ದು ಅನಕೃ ಅವರ ‘ಸಂಧ್ಯಾರಾಗ&#8221;!</p>
<p>ಆ ಘಟನೆ ಬೀಚಿಯವರ ಮೇಲೆ ಎಷ್ಟು ಪ್ರಭಾವ ಬೀರಿತೆಂದರೆ ಅನಕೃ ಅವರ ಪರಿಚಯ ಬಯಸಿ ಹೊರಟರು. ಕನ್ನಡ ಸಾರಸ್ವತ ಲೋಕಕ್ಕೆ ಕಾಲಿಟ್ಟರು, ಅವರನ್ನು ಪತ್ರಿಕೋದ್ಯಮವೂ ಆಕರ್ಷಿಸದೇ ಬಿಡಲಿಲ್ಲ. ಆ ಕಾಲದಲ್ಲಿ ಪಾಟೀಲ ಪುಟ್ಟಪ್ಪನವರ “ವಿಶಾಲ ಕರ್ನಾಟಕ&#8221; ಉತ್ತರ ಕರ್ನಾಟಕದ ಒಂದು ಜನಪ್ರಿಯ ಪತ್ರಿಕೆಯಾಗಿತ್ತು. ಹೊಸ ಪ್ರತಿಭೆಗಳಿಗಾಗಿ ತಡಕಾಡುತ್ತಿದ್ದ ಪಾಟೀಲ ಪುಟ್ಟಪ್ಪನವರಿಗೆ ಕಂಡಿದ್ದು ಬೀಚಿ. ಅವರ ಒತ್ತಾಯಕ್ಕೆ ಮಣಿದ ಬೀಚಿಯವರು ಒಂದು ಅಂಕಣ ಶುರುಮಾಡಿದ್ದರು. “ಕೆನೆ ಮೊಸರು&#8221; ಎಂಬ ಹೆಸರಿನ ಅಂಕಣದಲ್ಲಿ ಸಕಾಲಿಕ ವಿಷಯ ಗಳ ಬಗ್ಗೆ ಬರೆಯುತ್ತಿದ್ದ ಬೀಚಿ, ಲೇಖನದ ಕೊನೆಯಲ್ಲಿ ಒಂದು ಜೋಕು ಬರೆಯುತ್ತಿದ್ದರು. ಆ ಜೋಕು ಎಷ್ಟು ಜನಪ್ರಿಯತೆ ಪಡೆಯಿತೆಂದರೆ ಒಮ್ಮೆ ಬೀಚಿಯವರು ಏಕಾಏಕಿ ಅಂಕಣ ಬರೆಯುವುದನ್ನು ನಿಲ್ಲಿಸಿದಾಗ, ಓದುಗರ ಪತ್ರಗಳು ಕಚೇರಿಗೆ ದಾಳಿಯಿಟ್ಟವು. ಸಂಪಾದಕರಾಗಿದ್ದ ಪಾಪು, ‘ಕೆನೆ ಮೊಸರು’ ಹೆಸರಿನಡಿ ಬೀಚಿಯವರ ಫೋಟೋ ಹಾಕಿ, “ಹುಡುಕಿ ಕೊಡಿ&#8221; ಎಂದು ಪ್ರಕಟಿಸಿ ಬಿಟ್ಟರು! ಅದೆಲ್ಲಿದ್ದರೋ ಏನೋ ಕಚೇರಿಗೆ ಓಡಿಬಂದ ಬೀಚಿ, ಇನ್ನು ಮುಂದೆ ತಪ್ಪದೆ ಅಂಕಣ ಬರೆಯುವುದಾಗಿ ವಾಗ್ದಾನ ಮಾಡಿದರು. ಅವರು ಲೇಖನದ ಕೊನೆಯಲ್ಲಿ ಬರೆಯುತ್ತಿದ್ದ ಜೋಕುಗಳ ಸಂಗ್ರಹವೇ “ತಿಂಮನ ತಲೆ&#8221;. ೧೯೫೦ರಲ್ಲಿ ಮೊದಲ ಮುದ್ರಣ ಕಂಡ “ತಿಂಮನ ತಲೆ&#8221; ಮೂವತ್ತಕ್ಕೂ ಹೆಚ್ಚು ಮರುಮುದ್ರಣಗಳನ್ನು ಕಂಡಿದೆ. ಅಷ್ಟೇ ಅಲ್ಲ, ಇಂದಿಗೂ ಕನ್ನಡ ಸಾರಸ್ವತ ಲೋಕದಲ್ಲಿ ಅಂತಹ ಅದ್ಭುತ ಜೋಕುಗಳನ್ನು ಕಾಣಲು ಸಾಧ್ಯವಿಲ್ಲ.</p>
<p>ಹಾಗಂತ ಹೇಳಿದರೆ ಖಂಡಿತ ಅತಿಶಯೋಕ್ತಿಯಾಗದು.</p>
<p>ನಿಮಗೆ ಆರ್ಟ್ ಬುಕ್‌ವಾಲ್ಡ್ ಗೊತ್ತಿರಬಹುದು. ಅಮೆರಿಕದ ‘ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಯ ಮೂಲಕ ಹಾಸ್ಯಕ್ಕೆ ಹೊಸ ಭಾಷ್ಯ ಬರೆದಾತ. ಒಮ್ಮೆ ಅಮೆರಿಕದ ಅಧ್ಯಕ್ಷರು ಬುಕ್‌ವಾಲ್ಡ್ ನನ್ನು ಔತಣಕ್ಕೆ ಕರೆದರು. ಪತ್ನಿ ಸಮೇತ ಬುಕ್‌ವಾಲ್ಡ್ ಹೋದ. ಆ ವೇಳೆಗಾಗಲೇ ಬುಕ್‌ವಾಲ್ಡ್ ಬುದ್ಧಿಗೆ ಸ್ವಲ್ಪ ಮಂಕು ಕವಿದು ಅರುಳೋ-ಮರುಳೋ ಎಂಬಂತಾಗಿತ್ತು. ಇತ್ತ ಬುಕ್‌ವಾಲ್ಡ್ ಪತ್ನಿ ಮಹಾ ಕುಳ್ಳಿ. ಊಟಕ್ಕೆ ಕುಳಿತಿದ್ದಾಗ ಬುಕ್‌ವಾಲ್ಡ್ ತನ್ನ ಬಗ್ಗೆಯೇ ಒಂದು ಜೋಕು ಹೇಳಿದ- I am mentally challenged and she is vertically challenged!!</p>
<p>ಅಂಕಣದಲ್ಲಿ ಬುಕ್‌ವಾಲ್ಡ್ ರಾಜಕೀಯ ವಿಡಂಬನೆ ಮಾಡುತ್ತಿದ್ದರು. ಆದರೆ ಬೀಚಿಯವರು ಅತ್ಯಂತ ಗಂಭೀರ ಸಮಸ್ಯೆಗಳ ಬಗ್ಗೆಯೂ ಮಾರ್ಮಿಕವಾಗಿ ಹಾಸ್ಯ ಮಾಡುತ್ತಿದ್ದರು.</p>
<p>ಒಮ್ಮೆ ಇಬ್ಬರು ವ್ಯಕ್ತಿಗಳು ಕುರಿಯೊಂದನ್ನು ಕಸಾಯಿ ಖಾನೆಗೆ ಎಳೆದುಕೊಂಡು ಹೋಗುತ್ತಿದ್ದರು. ಅದನ್ನು ನೋಡಿದ ಪುಟ್ಟ ಬಾಲಕ ಅಪ್ಪನನ್ನು ಕೇಳಿದ-ಕುರಿಯನ್ನು ಎಲ್ಲಿಗೆ ಎಳೆದೊಯ್ಯುತ್ತಿದ್ದಾರೆ?<br />
ಅಪ್ಪ: ಕಸಾಯಿ ಖಾನೆಗೆ.<br />
ಮಗ: ಸಧ್ಯಾ<br />
ಅಪ್ಪ: ಏಕೆ ಹಾಗೆ ನಿಟ್ಟುಸಿರು ಬಿಡುತ್ತಿದ್ದೀಯಾ?<br />
ಮಗ: ನನ್ನಂತೆಯೇ ಆ ಕುರಿಯನ್ನೂ ಶಾಲೆಗೆ ಎಳೆದುಕೊಂಡು ಹೋಗುತ್ತಿದ್ದಾರೆ ಎಂದು ನಾನಂದುಕೊಂಡಿದ್ದೆ!</p>
<p>ಆಗ ದೇಶಾದ್ಯಂತ ಕಡ್ಡಾಯ ಶಿಕ್ಷಣ ನೀತಿ ಜಾರಿಗೆ ಬಂದಿತ್ತು. ಹಠ ಹಿಡಿದ ಮಕ್ಕಳನ್ನು ಹೊಡೆದು, ಬಡಿದಾದರೂ ಶಾಲೆಗೆ ಎಳೆದುಕೊಂಡು ಹೋಗುತ್ತಿದ್ದರು. ಅಂದರೆ ಕಡ್ಡಾಯ ಶಿಕ್ಷಣ ಜಾರಿಯ ಉದ್ದೇಶವೇನೋ ಒಳ್ಳೆಯದಿತ್ತು. ಮಾರ್ಗ ಸರಿಯಿರ ಲಿಲ್ಲ ಎಂಬುದನ್ನು ತಿಳಿಹಾಸ್ಯದೊಂದಿಗೆ ಹೇಳುವ ಜಾಣ್ಮೆ ಬೀಚಿ ಯವರಲ್ಲಿ ಮಾತ್ರ ಇತ್ತು. ಅವರ “ಬೆಳ್ಳಿ ತಿಂಮ ೧೦೮ ಹೇಳಿದ&#8221;, “ತಿಮ್ಮನ ತಲೆ&#8221;, “ಅಂದನಾ ತಿಮ್ಮ&#8221;- ಈ ಮೂರು ಪುಸ್ತಕಗಳೂ ನಿಮ್ಮನ್ನು ನಕ್ಕು ನಗಿಸಿದರೂ ಒಂದಕ್ಕಿಂತ ಒಂದು ಭಿನ್ನ.</p>
<p><strong>ಭ್ರಾತೃಪ್ರೇಮ</strong><br />
ಪ್ರಾಣಿದಯೆಯ ಬಗ್ಗೆ ದೀರ್ಘ ಭಾಷಣ ಮಾಡಿದ ಆನಂತರ ಪ್ರಶ್ನೆಗಳನ್ನು ಕೇಳಲು ಶುರುಮಾಡಿದರು ತಿಂಮನ ಮಾಸ್ತರು. “ರಸ್ತೆಯಲ್ಲಿ ಹೋಗುವಾಗ ನಾನೊಬ್ಬ ತುಂಟ ಹುಡುಗನನ್ನು ನೋಡುತ್ತೇನೆ. ಯಾರ ಗೋಜಿಗೂ ಹೋಗದೆ ತಲೆಬಗ್ಗಿಸಿ ತನ್ನಷ್ಟಕ್ಕೆ ಹೋಗುತ್ತಿದ್ದ ಮೂಕಪ್ರಾಣಿ ಕತ್ತೆಯೊಂದನ್ನು ಹುಡುಗ ಹೊಡೆಯುತ್ತಿದ್ದಾನೆ. ಆಗ ನಾನು ಅವನಿಗೆ ಛೀ ಮಾಡಿ ಕಳಿಸಿ ಕತ್ತೆಯನ್ನು ಕಷ್ಟದಿಂದ ಪಾರುಮಾಡುತ್ತೇನೆ. ಈ ನನ್ನ ಕಾರ್ಯ ಏನನ್ನು ಸೂಚಿಸುತ್ತದೆ?&#8221;.<br />
“ನಾನು ಹೇಳುತ್ತೇನೆ ಸಾರ್&#8221; ಎಂದು ಎದ್ದು ನಿಂತ ತಿಂಮ. ಕೂಡಲೇ ಉತ್ತರವನ್ನೂ ಹೇಳಿದ “ನಿಮ್ಮದು ಭ್ರಾತೃಪ್ರೇಮ ಸಾರ್!&#8221;</p>
<p><strong>ಕಡೇ ಪರೀಕ್ಷೆ</strong><br />
ತಿಂಮನ ಅಜ್ಜ ತಮ್ಮ ಕೋಣೆಯಿಂದ ಹೊರಕ್ಕೇ ಬರುತ್ತಿರಲಿಲ್ಲ. ಅವರಾಯಿತು, ಅವರ ಗ್ರಂಥಾವಲೋಕನವಾಯಿತು. ತಿಂಮನ ತಮ್ಮನಿಗೆ ಆಶ್ಚರ್ಯವಾಯಿತು. ಅಣ್ಣನನ್ನು ಕೇಳಿದ-“ಅದೇನು ಅಜ್ಜ ಅಷ್ಟು ಓದುತ್ತಿದ್ದಾರೆ? ಅವರಿಗೂ ಪರೀಕ್ಷೆ ಇದೆಯೇ?&#8221;.<br />
ತಿಂಮ ತಮ್ಮನಿಗೆ ಸಮಾಧಾನ ಹೇಳಿದ.<br />
“ಹೌದು, ಭಗವದ್ಗೀತೆ ಬಾಯಿಪಾಠ ಮಾಡುತ್ತಿದ್ದಾರೆ-ಕಡೇ ಪರೀಕ್ಷೆ ಬಂತಲ್ಲಾ ಅವರಿಗೆ?!&#8221;</p>
<p><strong>ಮಾತು ಕೇಳುವ ಹೆಂಡತಿ</strong><br />
“ತಿಂಮಾ?&#8221;<br />
“ಏನು ಸ್ವಾಮಿ?&#8221;<br />
“ನನ್ನ ಹೆಂಡತಿ ನನ್ನ ಮಾತನ್ನು ಕೇಳುವುದೇ ಇಲ್ಲ, ನಿನ್ನ ಹೆಂಡತಿ?&#8221;<br />
“ಚೆನ್ನಾಗಿ ಕೇಳಿದಿರಿ. ಯಾರು, ನನ್ನ ಹೆಂಡತಿಯೇ?&#8221;<br />
“ಹೌದು, ಕೇಳುತ್ತಾಳೇನಯ್ಯಾ ನಿನ್ನ ಮಾತು?&#8221;<br />
“ಏನು ಸ್ವಾಮಿ, ಹಾಗನ್ನುತ್ತೀರಿ? ಬೇರೆ ಸ್ತ್ರೀಯರೊಟ್ಟಿಗೆ ನಾನು ಮಾತನಾಡುತ್ತಿರುವಾಗ ಎಷ್ಟು ಚೆನ್ನಾಗಿ ಕಿವಿಕೊಟ್ಟು ಕೇಳುತ್ತಾಳೆ ಗೊತ್ತೆ?!&#8221;</p>
<p><strong>ತಂದೆಯ ಶತ್ರುವಿನಂತೆ ಮಗ</strong><br />
ಹೊಸದಾಗಿ ಸಾಹಿತಿಯಾಗಿದ್ದ ತನ್ನ ಗೆಳೆಯನನ್ನು ಕಾಣಲು ತಿಂಮ ಹೋಗಿದ್ದ. ಆದರೆ ಮಿತ್ರನ ಮನೆಯ ಸನ್ನಿವೇಶವನ್ನು ಕಂಡು ತಿಂಮ ಪೆಚ್ಚಾದ. ತನ್ನ ಕೊನೆಯ ಮಗನ ಮೇಲೆ ಗೆಳೆಯ ಸಿಟ್ಟಾಗಿದ್ದ, ಬೈಗುಳಗಳ ಸುರಿಮಳೆಗೈಯ್ಯುತ್ತಿದ್ದ. ಅದನ್ನು ಕಂಡ ತಿಂಮ, ‘ಏನು?’ ಎಂದು ಕೇಳುವ ಮೊದಲೇ ಸ್ನೇಹಿತ ಎಲ್ಲವನ್ನೂ ವಿವರಿಸಿದ.</p>
<p>“ನೋಡಯ್ಯಾ ಈ ಅವಿವೇಕಿಯನ್ನ. ಎಂತಹ ಕೆಲಸ ಮಾಡಿ ದ್ದಾನೆ? ರಾತ್ರಿಯೆಲ್ಲಾ ಕುಳಿತು ೬ ಕವನ ಬರೆದಿಟ್ಟಿದ್ದೆ. ಆ ಎಲ್ಲ ಕಾಗದಗಳನ್ನೂ ಒಯ್ದು ಒಲೆಯಲ್ಲಿ ಹಾಕಿದ್ದಾನೆ ಇವನು&#8221;.</p>
<p>ಆದರೆ ದುಃಖ ತೋಡಿಕೊಂಡ ಗೆಳೆಯನನ್ನು ಸಮಾಧಾನ ಮಾಡುವ ಬದಲು “ಶಬಾಸ್&#8221; ಎಂದು ಆತನ ಮಗನ ಬೆನ್ನು ತಟ್ಟಿದ ತಿಂಮ, ಸ್ನೇಹಿತನಿಗೆ ಹೇಳಿದ-“ನಿಮ್ಮ ವಂಶವೇ ಅಂಥದ್ದು. ತಂದೆ ಸಾಹಿತಿ, ಮಗ ವಿಮರ್ಶಕ! ಈ ವಯಸ್ಸಿಗೇ ನಿನ್ನ ಕೃತಿಗಳನ್ನು ಅರ್ಥಮಾಡಿಕೊಂಡಿದ್ದಾನೆ ನೋಡು!!&#8221;</p>
<p>ಇಂದು ಜೋಕುಗಳು ಬೇಕೆಂದರೆ ಗೂಗಲ್ ಡಾಟ್‌ಕಾಮ್ ಮೂಲಕ ತಡಕಾಡಬಹುದು, ‘ವಿಕಿಪೀಡಿಯಾ’ದ ಮೊರೆಹೋಗ ಬಹುದು, ಆನ್‌ಲೈನ್ ಜೋಕ್ಸ್‌ಗಾಗಿಯೇ “Funtoosh&#8221; ಇದೆ. ಇದು ಇಂಟರ್‌ನೆಟ್ ಯುಗ. ನಮ್ಮ ಕನ್ನಡದಲ್ಲಿ ಈಗ ಕಾಣ ಸಿಗುತ್ತಿರುವವರೂ ಇಂಟರ್‌ನೆಟ್ ಕವಿಗಳು, ಸಣ್ಣಕಥೆಗಾರರೇ. ಗದ್ಯದ ಒಂದು ಸಾಲು ಅಥವಾ ವಾಕ್ಯವನ್ನು ನಾಲ್ಕು ಕಡೆ ತುಂಡು ಮಾಡಿ ಅದೇ ಕವಿತೆ, ಕವನ ಹಾಗೂ ತಾನೊಬ್ಬ ಕವಿ, ಕವಯಿತ್ರಿ ಎಂದು ಪೋಸು ಕೊಡುವವರಿಗೂ ಕಡಿಮೆಯೇನಿಲ್ಲ. ಇನ್ನು ಕೆಲವರು ಶಬ್ದಗಳ ಆಡಂಬರವೇ ಸಾಹಿತ್ಯ ಎಂಬಂತೆ ಪೋಸು ಕೊಡುತ್ತಾರೆ. ಇದನ್ನೆಲ್ಲಾ ನೋಡಿದಾಗ ಇಂಟರ್‌ನೆಟ್ ಎಂಬುದು ಕಲ್ಪನೆಗೂ ನಿಲುಕದ ಕಾಲದಲ್ಲಿ ಬೀಚಿ ಹೇಗೆ ಇಂತಹ ಹಾಸ್ಯಚಟಾಕಿಗಳನ್ನು ಬರೆದರು ಎಂದು ಆಶ್ಚರ್ಯವಾಗುತ್ತದೆ. ಈಗಿನ ಜೋಕು, ಚಟಾಕಿ, ಚೋದ್ಯ, ಸಣ್ಣಕಥೆಗಳನ್ನು ಓದಿದಾಗ ಅವುಗಳನ್ನು ಅನುಭವಿಸುವ ಬದಲು ‘ಎಲ್ಲೋ ಕೇಳಿದ್ದೇನಲ್ಲಾ, ಎಲ್ಲೋ ಓದಿದ ಹಾಗೆ ಇದೆಯೆಲ್ಲಾ’ ಎಂದು ಮನಸ್ಸು ಮೂಲ ವನ್ನು ಹುಡುಕಲಾರಂಭಿಸುತ್ತದೆ. ಒಂದೇ ಜೋಕು ಹಲವು ಪತ್ರಿಕೆಗಳಲ್ಲಿ ಬೇರೆ ಬೇರೆ ಹೆಸರಿನಲ್ಲಿ ‘ರೀಸೈಕ್ಲ್’ ಆಗುತ್ತದೆ. ಆದರೆ ಬೀಚಿಯವರ ಬಹುದೊಡ್ಡ ಹೆಗ್ಗಳಿಕೆಯೆಂದರೆ ಅವರ ಜೋಕುಗಳಲ್ಲಿ ಇಂದಿಗೂ ತಾಜಾತನವಿದೆ, ಇಂದಿನ ಪರಿಸ್ಥಿತಿಗೂ ಹೋಲಿಕೆ ಮಾಡಿಕೊಳ್ಳಬಹುದು. ತೀರಾ Original ಎನಿಸುತ್ತವೆ.</p>
<p>ಬೀಚಿ ಕಾರ್ಯಕ್ಷೇತ್ರ ಬರೀ ಜೋಕು, ಕಥೆಗಳಿಗಷ್ಟೇ ಸೀಮಿತವಾಗಲಿಲ್ಲ.</p>
<p>‘ಸುಧಾ’ ವಾರಪತ್ರಿಕೆಯಲ್ಲಿ ‘ನೀವು ಕೇಳಿದಿರಿ?’ ಎಂಬ ಅಂಕಣ ಇಂದಿಗೂ ಪ್ರಕಟವಾಗುತ್ತದೆ. ಒಂದು ಕಾಲದಲ್ಲಿ ಈ ಅಂಕಣದಲ್ಲಿ ಬರುತ್ತಿದ್ದ ಪ್ರಶ್ನೆಗಳಿಗೆ ಬೀಚಿ ಉತ್ತರಿಸುತ್ತಿದ್ದರು.<br />
ಪ್ರಶ್ನೆ: ಸರ್, ನಾನು ಎಂ.ಎಲ್.ಎ. ಹಾಗೂ ಎಂ.ಪಿ. ಎರಡಕ್ಕೂ ನಿಂತುಕೊಳ್ಳಬೇಕೆಂದಿದ್ದೇನೆ?<br />
ಬೀಚಿ: ಒಂದಕ್ಕೆ ನಿಂತುಕೊಳ್ಳುತ್ತಾರೆ. ಆದರೆ ಎರಡಕ್ಕೂ ನಿಂತು ಕೊಳ್ಳುತ್ತಾರೆ ಅಂತ ಗೊತ್ತಿರಲಿಲ್ಲ!</p>
<p>‘ಪ್ರಜಾಮತ’ದ ‘ಗುಪ್ತ ಸಮಾಲೋಚನೆ’ ಒಂಥರಾ ಮಜಾ ಕೊಟ್ಟರೆ ಬೀಚಿ ಬುಲೆಟ್‌ಗಳು ಚಿಳ್ ಎನಿಸುತ್ತಿದ್ದವು. ಇವತ್ತಿಗೂ ಇಂತಹ ಪ್ರಶ್ನೆ-ಉತ್ತರಗಳ ಕಾಲಂಗಳು ಹೆಚ್ಚೂಕಡಿಮೆ ಎಲ್ಲ ವಾರಪತ್ರಿಕೆ, ಟ್ಯಾಬ್ಲಾಯ್ಡ್‌ಗಳಲ್ಲೂ ಪ್ರಕಟವಾಗುತ್ತಿವೆ. ಉತ್ತರ ಕೊಡುವವರೇ ಕೆಲವೊಮ್ಮೆ ಪ್ರಶ್ನೆಗಳನ್ನೂ ‘ಕೇಳಿ’ಕೊಳ್ಳುತ್ತಾರೆ! ಅವುಗಳಲ್ಲಿ ತಿಳಿಹಾಸ್ಯದ ಬದಲು ಯಾರನ್ನೋ ಅವಹೇಳನ ಮಾಡುವ ಉದ್ದೇಶ ತೂರಿಬಂದಿರುತ್ತದೆ. ಹಾಗಾಗಿ ನಕ್ಕು, ನಗಿ ಸುವ ಬದಲು &#8220;PJ&#8217; (poor jokes)ಗಳೆನಿಸಿಕೊಂಡು ಬಿಡುತ್ತವೆ. ಇಂಗ್ಲಿಷ್‌ನಲ್ಲಿ ಜಗ್ ಸುರೈಯಾ(ಟೈಮ್ಸ್ ಆಫ್ ಇಂಡಿಯಾ) ಅವರಂತಹ ಕೆಲವರು ಗಂಭೀರವಾದ ವಿಚಾರಗಳನ್ನು ತಿಳಿಹಾಸ್ಯ ದೊಂದಿಗೆ ಇಂದಿಗೂ ಚೆನ್ನಾಗಿ ಬರೆಯುತ್ತಿದ್ದಾರೆ. ಆದರೆ ಕನ್ನಡದಲ್ಲಿ ಬೀಚಿ ಹಾಕಿಕೊಟ್ಟ ಪರಂಪರೆಯನ್ನು ಮುಂದು ವರಿಸಿಕೊಂಡು ಹೋಗುವ ಸಾಮರ್ಥ್ಯ ಪೂರ್ಣಮಟ್ಟದಲ್ಲಿ ಯಾರಲ್ಲೂ ಕಾಣಲಿಲ್ಲ. ಒಂದೆರಡು ದಶಕಗಳ ಕಾಲ ‘ಕೊರವಂಜಿ’ ಕೊಂಚ ಕೊರತೆಯನ್ನು ನೀಗಿಸಿದರೂ ಕಾಲಾಂತರದಲ್ಲಿ ಬದುಕುಳಿಯಲಿಲ್ಲ. ವೈಯೆನ್ಕೆ, ನಾ. ಕಸ್ತೂರಿ, ಪುಂಡಲಿಕ ಶೇಠ್ ಅವರಂತಹವರು ಈ ಪರಂಪರೆಯನ್ನು ಮುಂದುವರಿಸಿದರೂ ತಟ್ಟೆ ಖಾಲಿಯಾದ ನಂತರ ಬೆರಳು ನೆಕ್ಕುವಾಗ ಸಿಕ್ಕಷ್ಟು ಸುಖ ಅವುಗಳಿಂದ ಸಿಕ್ಕಿತೇ ಹೊರತು ಬೀChiಯವರಂತೆ ಭರಪೂರ ಭೋಜನವನ್ನು ಉಣ ಬಡಿಸಲೂ ಯಾರಿಗೂ  ಸಾಧ್ಯವಾಗಲಿಲ್ಲ. ಈಗಂತೂ ಯಾರೂ ಇಲ್ಲವಾಗಿದ್ದಾರೆ.</p>
<p><strong>ಅಶ್ಲೀಲ ಸಾಹಿತ್ಯ</strong><br />
“ಅಪ್ಪಾ&#8221;<br />
“ಏನೋ ತಿಂಮಾ?&#8221;<br />
“ಅಶ್ಲೀಲ ಸಾಹಿತ್ಯವೆಂದರೆ ಯಾವುದಪ್ಪಾ?&#8221;<br />
“ಚಿಕ್ಕವರು ಓದಬಾರದ್ದು ಅಶ್ಲೀಲ ಸಾಹಿತ್ಯ&#8221;<br />
“ಹೀಗೆಂದು ದೊಡ್ಡವರು ಹೇಳ್ತಾರಲ್ವೇನಪ್ಪಾ?&#8221;<br />
“ಹೌದೋ ತಿಂಮಾ&#8221;<br />
“ಚಿಕ್ಕವರಿದ್ದಾಗ ಓದಿ, ದೊಡ್ಡವರಾದ ಮೇಲೆ ಚಿಕ್ಕವರು ಓದಕೂಡದು ಎಂಬುದಕ್ಕೇ ಅಶ್ಲೀಲಸಾಹಿತ್ಯವೆನ್ನುತ್ತಾರೇನಪ್ಪಾ?&#8221;</p>
<p>ಅವರಷ್ಟು ಚೆನ್ನಾಗಿ ಕಾಲೆಳೆಯಲು, ಕಾಲೆಳೆಯುತ್ತಲೇ ದೊಡ್ಡವರನ್ನು, ದೊಡ್ಡವರ ಧೂರ್ತತನವನ್ನು ಬೆತ್ತಲು ಮಾಡಲು ಬಹುಶಃ ಯಾರಿಗೂ ಬರುವುದಿಲ್ಲ.</p>
<p><strong>ಜನಿವಾರ</strong><br />
ಅಪ್ಪ: ತಿಂಮಾ ಜನಿವಾರ ಹಾಕಿಕೋ.<br />
ತಿಂಮಾ: ಯಾಕಪ್ಪಾ?<br />
ಅಪ್ಪ: ಜನಿವಾರ ಹಾಕಿಕೊಳ್ಳದಿದ್ದರೆ ಮುಂದಿನ ಜನ್ಮದಲ್ಲಿ ನೀನು ಕತ್ತೆಯಾಗಿ ಹುಟ್ಟುತ್ತೀಯಾ.<br />
ತಿಂಮಾ: ಅಪ್ಪಾ ಊರಲ್ಲಿ ಬಹಳ ಕತ್ತೆಗಳಿವೆ. ಅವರೆಲ್ಲ ಹಿಂದಿನ ಜನ್ಮದಲ್ಲಿ ಬ್ರಾಹ್ಮಣರಾಗಿದ್ದು ಜನಿವಾರ ಹಾಕಿಕೊಳ್ಳುವುದನ್ನು ಮರೆತಿದ್ದವರಾ?!</p>
<p>ಝೆನ್ ಕಥೆಗಳಂತೆ ಅತ್ಯಂತ ಕಡಿಮೆ ಪದ, ಸಾಲುಗಳಲ್ಲಿ ಕಥೆ, ಜೋಕು ಹೇಳುತ್ತಿದ್ದ ಬೀಚಿ, ಆಧುನಿಕ ಬರಹಗಾರರಿಗೆ ಮಾದರಿ. ಅರವತ್ಮೂರು ಕೃತಿಗಳನ್ನು ರಚಿಸಿರುವ ಅವರಲ್ಲಿ ಅತ್ಯಂತ ಗಂಭೀರವಾದ ಸಮಸ್ಯೆಯನ್ನು ಚೋದ್ಯದ ಮೂಲಕ ಹೇಳುವ ಜಾಣ್ಮೆ, ಸ್ವತಃ ಬಡತನದಲ್ಲಿದ್ದರೂ ಸಮಾಜವನ್ನು ಗೇಲಿ ಮಾಡಿ ನಗುವ, ನಗಿಸುವ ಸಾಮರ್ಥ್ಯ, ಒಬ್ಬ ವ್ಯಂಗ್ಯಚಿತ್ರ ಬರಹಗಾರನಲ್ಲಿರಬೇಕಾದ ಹಾಸ್ಯಪ್ರeಯನ್ನು ಕಾಣಬಹು ದಾಗಿತ್ತು. ಹಾಗಾಗಿಯೇ ಆ ಕಾಲದಲ್ಲಿ ಹೊಸದಾದ ಒಂದು ಓದುಗ ವರ್ಗವನ್ನು ಸೃಷ್ಟಿಸಿದರು. ಒಂದಿಡೀ ತಲೆಮಾರು ಅವರ ಜೋಕು, ಕಥೆಗಳನ್ನು ಕೇಳಿಕೊಂಡು ಬೆಳೆಯಿತು. ಇಂದು ಅವರ ಸ್ಥಾನವನ್ನು ತುಂಬುವ ಮಾತು ಹಾಗಿರಲಿ, ಅವರನ್ನು ನೆನಪು ಮಾಡಿಕೊಡುವಂತಹವರೂ ಕಾಣ ಸಿಗುವುದಿಲ್ಲ.</p>
<p>ಮೊನ್ನೆ ಡಿಸೆಂಬರ್ 7ರಂದು ಬೀChi ಯವರ (ರಾಯಸಂ ಭೀಮಸೇನ ರಾವ್ ) ಪುಣ್ಯತಿಥಿ ಇತ್ತು. ಆದರೆ ಮುಂಬೈ ಮೇಲೆ ನಡೆದಿದ್ದ ಭಯೋತ್ಪಾದನೆಯ ಬೊಬ್ಬೆಯಲ್ಲಿ ಅವರನ್ನು ನೆನಪಿಸಿ ಕೊಳ್ಳಲಾಗಿರಲಿಲ್ಲ. ತಡವಾದರೂ ನೆನಪಿಸಿಕೊಳ್ಳದೇ ಇದ್ದರೆ ಹೇಗೆ, ಅಲ್ಲವೆ?</p>
]]></content:encoded>
			<wfw:commentRss>http://pratapsimha.com/bettale-jagattu/bichi/feed/</wfw:commentRss>
		</item>
		<item>
		<title>ಆ ಕೆಟ್ಟ ಘಟನೆ ಒಂದು ಒಳ್ಳೆಯ ಬದಲಾವಣೆಗೆ ಭಾಷ್ಯ ಬರೆಯುತ್ತಿದೆಯೇ?</title>
		<link>http://pratapsimha.com/bettale-jagattu/mumbaiattack/</link>
		<comments>http://pratapsimha.com/bettale-jagattu/mumbaiattack/#comments</comments>
		<pubDate>Tue, 16 Dec 2008 09:24:23 +0000</pubDate>
		<dc:creator>Pratap Simha</dc:creator>
		
		<category><![CDATA[Bettale-Jagattu]]></category>

		<guid isPermaLink="false">http://pratapsimha.com/?p=64</guid>
		<description><![CDATA[I take instructions from God!
ನನ್ನನ್ನು ದೇವರೇ ಮುನ್ನಡೆಸುತ್ತಿದ್ದಾನೆ, ನನಗೆ ದೇವರೇ ಮಾರ್ಗ ತೋರುತ್ತಿದ್ದಾನೆ, ನಾನು ದೇವರಿಂದ “ನೇರವಾಗಿ&#8221; ಆe ಪಡೆದುಕೊಳ್ಳುತ್ತಿದ್ದೇನೆ ಎಂದಿದ್ದಳು ಫ್ರಾನ್ಸ್‌ನ ದಂತಕಥೆ ಜೋನ್ ಆಫ್ ಆರ್ಕ್. ಆದರೆ ಆಕೆ ಹಾಗೆ ಹೇಳಿದ್ದು ಕ್ಯಾಥೋಲಿಕ್ ಪಾದ್ರಿಗಳ ದೃಷ್ಟಿಯಲ್ಲಿ ಕ್ಷಮಿಸಲಾರದ ತಪ್ಪಾಗಿತ್ತು. ಅಷ್ಟಕ್ಕೂ ೧೪, ೧೫ನೇ ಶತಮಾನದಲ್ಲಿ ಎಂತಹ ಪರಿಸ್ಥಿತಿಯಿತ್ತೆಂದರೆ, ಯಾರಾದರೂ ದೇವರನ್ನು ಕಾಣಬೇಕಿದ್ದರೆ, ದೇವರಿಗೆ ಮೊರೆಯಿಡಬೇಕಾಗಿದ್ದರೆ ಪಾದ್ರಿಗಳ ಮುಖಾಂತರವೇ ದೇವರನ್ನು Contact ಮಾಡಬೇಕಿತ್ತು!

ದೇವರು ಮತ್ತು ಮಾನವರ ನಡುವೆ ತಾವೇ ಮಧ್ಯವರ್ತಿಗಳು ಎಂಬಂತೆ ಬೀಗುತ್ತಿದ್ದರು ಪಾದ್ರಿಗಳು. [...]]]></description>
			<content:encoded><![CDATA[<p>I take instructions from God!</p>
<p>ನನ್ನನ್ನು ದೇವರೇ ಮುನ್ನಡೆಸುತ್ತಿದ್ದಾನೆ, ನನಗೆ ದೇವರೇ ಮಾರ್ಗ ತೋರುತ್ತಿದ್ದಾನೆ, ನಾನು ದೇವರಿಂದ “ನೇರವಾಗಿ&#8221; ಆe ಪಡೆದುಕೊಳ್ಳುತ್ತಿದ್ದೇನೆ ಎಂದಿದ್ದಳು ಫ್ರಾನ್ಸ್‌ನ ದಂತಕಥೆ ಜೋನ್ ಆಫ್ ಆರ್ಕ್. ಆದರೆ ಆಕೆ ಹಾಗೆ ಹೇಳಿದ್ದು ಕ್ಯಾಥೋಲಿಕ್ ಪಾದ್ರಿಗಳ ದೃಷ್ಟಿಯಲ್ಲಿ ಕ್ಷಮಿಸಲಾರದ ತಪ್ಪಾಗಿತ್ತು. ಅಷ್ಟಕ್ಕೂ ೧೪, ೧೫ನೇ ಶತಮಾನದಲ್ಲಿ ಎಂತಹ ಪರಿಸ್ಥಿತಿಯಿತ್ತೆಂದರೆ, ಯಾರಾದರೂ ದೇವರನ್ನು ಕಾಣಬೇಕಿದ್ದರೆ, ದೇವರಿಗೆ ಮೊರೆಯಿಡಬೇಕಾಗಿದ್ದರೆ ಪಾದ್ರಿಗಳ ಮುಖಾಂತರವೇ ದೇವರನ್ನು Contact ಮಾಡಬೇಕಿತ್ತು!</p>
<p><span id="more-64"></span></p>
<p>ದೇವರು ಮತ್ತು ಮಾನವರ ನಡುವೆ ತಾವೇ ಮಧ್ಯವರ್ತಿಗಳು ಎಂಬಂತೆ ಬೀಗುತ್ತಿದ್ದರು ಪಾದ್ರಿಗಳು. ಅವರು ಹೇಳಿದ್ದೇ ದೈವವಾಣಿಯಾಗುತ್ತಿತ್ತು, ಕೆಲವೊಮ್ಮೆ ಶಾಸನವೂ ಆಗಿ ಸತ್ಯ ಹೇಳಿದವರನ್ನು ಸುಟ್ಟುಹಾಕುತ್ತಿತ್ತು. ಹಾಗಾಗಿಯೇ ‘ದೇವರೇ ನನ್ನನ್ನು ಮುನ್ನಡೆಸುತ್ತಿದ್ದಾನೆ, ದಾರಿ ತೋರುತ್ತಿದ್ದಾನೆ’ ಎಂದ ಜೋನ್ ಆಫ್ ಆರ್ಕ್ ಜೀವಂತವಾಗಿ ಬೂದಿಯಾಗಬೇಕಾಯಿತು. ‘ಇಲ್ಲಾ..ಇಲ್ಲಾ.. ಭೂಮಿಯ ಸುತ್ತ ಸೂರ್ಯ ಸುತ್ತುವುದಿಲ್ಲ, ಭೂಮಿಯೇ ಸೂರ್ಯನ ಸುತ್ತ ಸುತ್ತುತ್ತದೆ’ ಎಂದ ಇಟಲಿಯ ಗಿಯೋರ್ಡನೋ ಬ್ರೂನೋನನ್ನು ಜೀವಂತವಾಗಿ ಸುಟ್ಟವರು, ಗೆಲಿಲಿಯೋನನ್ನು ಸಾಯುವವರೆಗೂ ಗೃಹಬಂಧನದಲ್ಲಿಟ್ಟವರೂ ವ್ಯಾಟಿಕನ್ ಪಾದ್ರಿಗಳೇ. “ವಿಕಾಸವಾದ&#8221; ಅಥವಾ “Evolution Theory&#8221;ಯನ್ನು ಮಂಡಿಸಿ ಸೃಷ್ಟಿಯ ರಹಸ್ಯದ ಮೇಲೆ ಬೆಳಕು ಚೆಲ್ಲಿದ ಚಾರ್ಲ್ಸ್ ಡಾರ್ವಿನ್ನನ್ನೂ ಪಾದ್ರಿಗಳು ಬಿಡಲಿಲ್ಲ. ಇದು ಆ ಕಾಲದಲ್ಲಿ ಪ್ರಗತಿಪರ ಚಿಂತಕರನ್ನು ಎಷ್ಟು ಕಾಡಿತೆಂದರೆ ಇವತ್ತು Atheism ಅಥವಾ ‘ನಿರೀಶ್ವರವಾದ’ದ ಬಗ್ಗೆ ಇರುವ ಪುಸ್ತಕಗಳಲ್ಲಿ ಅತಿಹೆಚ್ಚನ್ನು ಬರೆದಿರುವವರೆಲ್ಲ ಕ್ರೈಸ್ತರೇ, ದೇವರ ಅಸ್ತಿತ್ವವನ್ನೇ ಅಲ್ಲಗಳೆದು ಅತಿ ಹೆಚ್ಚು ಪುಸ್ತಕಗಳು ಬಂದಿರುವುದೂ ಕ್ರೈಸ್ತ ಧರ್ಮದ ವಿರುದ್ಧವೇ.</p>
<p>ಅವತ್ತು ಕ್ಯಾಥೋಲಿಕ್ಕರು ವಿeನ ಮತ್ತು ವೈeನಿಕ ಪ್ರಗತಿಗೆ ಅಡ್ಡವಾಗಿ ನಿಂತಿದ್ದರು.</p>
<p>ಇಂತಹ ವಿನಾಶಕಾರಿ ನೀತಿ, ಗೊಡ್ಡು ಸಂಪ್ರದಾಯದ ವಿರುದ್ಧ ೧೫ನೇ ಶತಮಾನದಲ್ಲಿ ಕ್ರೈಸ್ತರೇ ಸಿಡಿದೆದ್ದರು. ಅವರಲ್ಲಿ ಮಾರ್ಟಿನ್ ಲೂಥರ್ ಪ್ರಮುಖರು. ಸ್ವತಃ ಪಾದ್ರಿಯಾಗಿದ್ದ ಮಾರ್ಟಿನ್ ಲೂಥರ್ ನೈಜ ಅರ್ಥದಲ್ಲಿ ಪ್ರಗತಿಪರ ಚಿಂತಕರಾಗಿದ್ದರು. “ಬೈಬಲ್ಲೇ ಆದರ್ಶ ಮತ್ತು ಬೈಬಲ್ಲೇ ಮಾರ್ಗದರ್ಶಿ. ದೇವರು ಎಲ್ಲರಿಗೂ ಲಭ್ಯ. ದೇವರ ಅನುeಯಂತೆ ನಡೆದುಕೊಳ್ಳುವವರಿಗೆಲ್ಲ ಸ್ವರ್ಗದಲ್ಲಿ ಸ್ಥಾನ ಸಿಗುತ್ತದೆ. ದೇವರು ಮತ್ತು ಮನುಷ್ಯನ ನಡುವೆ ಯಾವ ಮಧ್ಯವರ್ತಿಗಳೂ ಇಲ್ಲ&#8221; ಎಂದು ಪ್ರತಿಪಾದಿಸಿದ ಮಾರ್ಟಿನ್ ಲೂಥರ್, ಪಾದ್ರಿಗಳ ಪುರೋಹಿತಶಾಹಿತ್ವವನ್ನು ವಿರೋಧಿಸಿದರು. ಅಲ್ಲದೆ “ದೇವರಿಗೆ ಯಾರೂ Head ಇಲ್ಲ&#8221; ಎಂದು ವ್ಯಾಟಿಕನ್ ಅನ್ನೂ ಧಿಕ್ಕರಿಸಿದರು. ಈ ಮಾರ್ಟಿನ್ ಲೂಥರ್ ಮತ್ತಾರೂ ಅಲ್ಲ, Protestantismನ ಪಿತಾಮಹ. ದೇವರನ್ನು ಕಪಿಮುಷ್ಟಿಯಲ್ಲಿಟ್ಟುಕೊಳ್ಳುವ, ದೇವರಿಗೆ ಬೇಲಿ ಹಾಕುವ ನೀತಿ ಮತ್ತು ಪದ್ಧತಿಗೆ ವಿರೋಧ ವ್ಯಕ್ತಪಡಿಸಿದವರೇ ಪ್ರೊಟೆಸ್ಟೆಂಟರು. ಇಂದಿಗೂ ಪ್ರೊಟೆಸ್ಟೆಂಟರಿಗೆ ಪೋಪ್ ಇಲ್ಲ. ಪ್ರೊಟೆಸ್ಟೆಂಟರಲ್ಲಿ ಪಾದ್ರಿಗಳು ಬ್ರಹ್ಮಚಾರಿಗಳಾಗಿರಬೇಕಿಲ್ಲ, ವಿವಾಹವಾಗಬಹುದು. ಮಾರ್ಟಿನ್ ಲೂಥರ್ ಕೂಡ ವಿವಾಹವಾಗಿದ್ದರು. ಆರು ಮಕ್ಕಳ ತಂದೆಯಾಗಿದ್ದರು. ಹೀಗೆ ಔದಾರ್ಯವನ್ನು ಬೆಳೆಸಿಕೊಂಡ ಕಾರಣ, ಪ್ರಗತಿಪರ ನಿಲುವು ತಳೆದ ಪರಿಣಾಮವಾಗಿ ‘ಪ್ರೊಟೆಸ್ಟೆಂಟಿಸಮ್’ ಜನರ ಸ್ವೀಕೃತಿಯನ್ನು ಪಡೆದುಕೊಳ್ಳತೊಡಗಿತು. ಇಂದು ಅಮೆರಿಕ, ಬ್ರಿಟನ್‌ನಂತಹ ಅತ್ಯಂತ ಪ್ರಗತಿಪರ ರಾಷ್ಟ್ರಗಳು ಪ್ರೊಟೆಸ್ಟಂಟ್ ದೇಶಗಳಾಗಿವೆ. ಅಷ್ಟೇ ಅಲ್ಲ, ಇಂದು ಜಗತ್ತಿನಲ್ಲಿಯೇ ಅತಿ ಹೆಚ್ಚು ಜನರು ಅನುಸರಿಸುವ ಪಂಥ ಪ್ರೊಟೆಸ್ಟೆಂಟಿಸಮ್. ಅಂದರೆ ಕಳೆದ ೫೦೦ ವರ್ಷಗಳಲ್ಲಿ ಕ್ರಿಶ್ಚಿಯಾನಿಟಿಯಲ್ಲಿ ಸಾಕಷ್ಟು ಸುಧಾರಣೆ ಗಳಾಗಿವೆ, ಹಲವಾರು ತಪ್ಪುಗಳನ್ನು ಸರಿಪಡಿಸಿಕೊಂಡಿದ್ದಾರೆ, ಅನಿಷ್ಟಗಳನ್ನು ಹೊರಹಾಕಿದ್ದಾರೆ. ಜೋನ್ ಆಫ್ ಆರ್ಕ್‌ಳನ್ನು ಸುಟ್ಟುಹಾಕಿದ್ದು ತಪ್ಪು ಎಂದು ಒಪ್ಪಿಕೊಂಡಿದ್ದಾರೆ, ಡಾರ್ವಿನ್‌ನನ್ನು ಖಂಡಿಸಿದ್ದು ತಪ್ಪು ಎಂದು ಕ್ಷಮೆ ಕೇಳುವ ಹೃದಯ ವೈಶಾಲ್ಯತೆಯನ್ನು ತೋರಿದ್ದಾರೆ. ಹಾಗಾಗಿ, ಇಂದಿಗೂ ಮಾಟ, ಮಂತ್ರ, ಮ್ಯಾಜಿಕ್ ಎನ್ನುವ ಕರ್ಮಠ ಕ್ರಿಶ್ಚಿಯನ್ನರಿದ್ದರೂ, ಕತ್ತಿ ಹಿಡಿದು ಧರ್ಮಪ್ರಚಾರ ಮಾಡಿದಂತಹ ಕೊಳಕು ಇತಿಹಾಸವನ್ನು ಕ್ರೈಸ್ತ ಮತ ಹೊಂದಿದ್ದರೂ ಅವುಗಳನ್ನು ಬೇರ್ಪಡಿಸಿ ನೋಡಿದಾಗ ಕ್ರಿಶ್ಚಿಯಾನಿಟಿ ಅತ್ಯಂತ ಪ್ರಗತಿಪರ ಧರ್ಮವಾಗಿ ಕಾಣುತ್ತದೆ. ಅಷ್ಟಕ್ಕೂ ಒಂದು ಧರ್ಮ ಕಾಲದ ಜತೆ ಹೆಜ್ಜೆ ಹಾಕಿದಾಗ, ವಿeನವನ್ನು ಒಪ್ಪಿಕೊಂಡಾಗ ಅದು ‘ಯುಗಧರ್ಮ’ವಾಗುತ್ತದೆ. ಇಂದು ಜಗತ್ತಿನ ಅತ್ಯಂತ ಪ್ರಗತಿಪರ ರಾಷ್ಟ್ರಗಳಲ್ಲಿ Church is restricted to Sundays!!</p>
<p>ಇದೇನೇ ಇರಲಿ, ಕ್ರಿಶ್ಚಿಯಾನಿಟಿ ಸುಧಾರಣೆಗೊಳ್ಳಲು ೫೦೦ ವರ್ಷಗಳು ಬೇಕಾದರೆ, ೫ ಸಾವಿರ ವರ್ಷಗಳ ಇತಿಹಾಸ ಹೊಂದಿ ರುವ ಹಿಂದೂ ಧರ್ಮ ಸಾಕಷ್ಟು ಅನಿಷ್ಟಗಳನ್ನು ಹೊಂದಿದ್ದರೂ ವಿeನಕ್ಕೆ ಮಾತ್ರ ಎಂದೂ ಅಡ್ಡಿಪಡಿಸಲಿಲ್ಲ, ಬದಲಾವಣೆಗೆ ಮಾರಕವಾಗಲಿಲ್ಲ. ಹಿಂದೂಧರ್ಮದಲ್ಲಿ ಅಸ್ಪೃಶ್ಯತೆ, ಬಾಲ್ಯ ವಿವಾಹದಂತಹ ಹೀನಕೃತ್ಯಗಳಿಗೆ ಶಾಸ್ತ್ರದ ಸಮ್ಮತಿಯಿದ್ದರೂ ಕಾಲಾಂತರದಲ್ಲಿ ಕೆಲವು ಅನಿಷ್ಟಗಳನ್ನು ತೊಡೆದುಕೊಂಡಿದೆ.  Live Bombನಂತೆ ಜಾತಿವಾದಿಗಳೆಂಬ ಜೀವಂತ ಪಳೆಯುಳಿಕೆಗಳು ಇಂದಿಗೂ ನಮ್ಮ ಸಮಾಜದಲ್ಲಿರಬಹುದು. ಆದರೆ ನಮ್ಮ ಧರ್ಮ ಮಗದೊಂದು ಅಭಿಪ್ರಾಯ ಮಂಡನೆಗೆ, ಪ್ರತಿವಾದಕ್ಕೆ, ಪ್ರಶ್ನೆಗೆ ಯಾವತ್ತೂ space ಅನ್ನು ನಿರಾಕರಿಸಲಿಲ್ಲ. ದೇವರ ಅಸ್ತಿತ್ವದ ಬಗ್ಗೆ ಅನುಮಾನ ವ್ಯಕ್ತಪಡಿಸುವುದಕ್ಕೂ ಅವಕಾಶವೀಯುತ್ತಾ ಬಂದಿದೆ. ರಾಜಾರಾಮ್ ಮೋಹನ್‌ರಾಯ್, ದಯಾನಂದ ಸರಸ್ವತಿ, ಗಾಂಧೀಜಿ, ಅಂಬೇಡ್ಕರ್ ಮುಂತಾದವರು ನಮ್ಮ ಹುಳುಕುಗಳನ್ನು ಕಟು ಶಬ್ದಗಳಿಂದ ಖಂಡಿಸುವ ಕೆಲಸವನ್ನೂ ಮಾಡಿದರು, ಬದಲಾವಣೆಯನ್ನೂ ತರಲು ಪ್ರಯತ್ನಿಸಿದರು. ಹಾಗಾಗಿಯೇ ಜಗತ್ತಿನ ಅತ್ಯಂತ ಗೊಡ್ಡು ಧರ್ಮಗಳಲ್ಲಿ ಒಂದು ಎನ್ನಬಹುದಾಗಿದ್ದ ಹಿಂದೂ ಧರ್ಮ, ಕಾಲಾಂತರದಲ್ಲಿ ಎಷ್ಟೋ ಹುಳುಕುಗಳನ್ನು ಹೊರ ಹಾಕಿ ಪ್ರಗತಿಯತ್ತ ಹೆಜ್ಜೆಹಾಕಿತು. ಹಿಂದೂಗಳೂ ಅಷ್ಟೇ ಇತರರ ತಪ್ಪುಗಳನ್ನು ಖಂಡಿಸುವ ಜತೆಗೆ ಸ್ವಂತ ತಪ್ಪುಗಳನ್ನು ಒಪ್ಪಿಕೊಳ್ಳುವ ಹೃದಯ ವೈಶಾಲ್ಯವನ್ನೂ ಬೆಳೆಸಿಕೊಂಡಿದ್ದಾರೆ. ಇಸ್ಲಾಮಿಕ್ ಭಯೋತ್ಪಾದನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸುವ ಹಿಂದೂಗಳು, ಸ್ವಧರ್ಮೀಯರ ನಕ್ಸಲಿಸಂ ಅನ್ನೂ ಅಷ್ಟೇ ಕಟುವಾಗಿ ಖಂಡಿಸುತ್ತಾರೆ, ನಿರ್ದಯವಾಗಿ ಮಟ್ಟಹಾಕಬೇಕು ಎನ್ನುತ್ತಾರೆ.</p>
<p>ಇಂತಹ ಮುಕ್ತ ವಾತಾವರಣವನ್ನು ಮುಸ್ಲಿಮರಲ್ಲಿ ಕಾಣುವುದು ಕಷ್ಟವಾಗಿತ್ತು.</p>
<p>ಅವರಲ್ಲಿ ಧರ್ಮದ ಬಗ್ಗೆ ಚರ್ಚೆ ನಡೆಸುವ ಮಾತು ಹಾಗಿರಲಿ, ಕೆಲವು ದಾರಿ ತಪ್ಪಿದ ಧರ್ಮಾಂಧರ ನಡವಳಿಕೆಗಳನ್ನು ಪ್ರಶ್ನಿಸುವುದಕ್ಕೂ ಅಂಜಬೇಕಿತ್ತು. ಆದರೆ ಮೊನ್ನೆ ನವೆಂಬರ್ ೨೬ರಂದು ಮುಂಬಯಿಯನಲ್ಲಿ ಏನು ನಡೆಯಿತೋ ಅದು ಅತ್ಯಂತ ದುರದೃಷ್ಟಕರ ಘಟನೆಯಾಗಿದ್ದರೂ ಆ ಘಟನೆಯ ನಂತರ ನಾವೆಲ್ಲ ಖುಷಿಪಟ್ಟುಕೊಳ್ಳಬಹುದಾದ ಒಂದು ಮಹತ್ವದ “ಬದಲಾವಣೆ&#8221; ಕಂಡುಬರುತ್ತಿದೆ! ಮುಂಬಯಿ ಮೇಲೆ ಆಕ್ರಮಣ ಮಾಡಿದ ಪಾಕಿ ಸ್ತಾನದ ೯ ಭಯೋತ್ಪಾದಕರ ಶವಗಳಿಗೆ ಅಂತ್ಯಸಂಸ್ಕಾರ ಮಾಡಲು ನಿರಾಕರಿಸಿರುವ ಮುಂಬಯಿ ಜಾಮಾ ಮಸೀದಿ ಟ್ರಸ್ಟ್, ‘ಹೆಣಗಳನ್ನು ಸಮುದ್ರಕ್ಕೆ ಬೇಕಾದರೆ ಎಸೆಯಿರಿ. ನಾವು ಅಂತ್ಯಸಂಸ್ಕಾರ ಮಾಡುವುದಿಲ್ಲ’ ಎಂದಿದೆ.</p>
<p>“ಭಯೋತ್ಪಾದಕರಿಗೆ ಯಾವ ಧರ್ಮವೂ ಇಲ್ಲ ಎಂಬುದನ್ನು ಈ ರಾಜಕಾರಣಿಗಳು ಯಾವಾಗ ಅರ್ಥಮಾಡಿಕೊಳ್ಳುತ್ತಾರೆ? ಭಯೋತ್ಪಾದಕರು ಹಿಂದೂಗಳೂ ಅಲ್ಲ, ಮುಸ್ಲಿಂ, ಕ್ರಿಶ್ಚಿಯನ್ನರೂ ಅಲ್ಲ. ಅವರು ಯಾವುದೇ ಧರ್ಮ, ದೇವರಿಗೆ ಸೇರಿದವರಲ್ಲ. ಅವರು ತಲೆಯಲ್ಲಿ ರೋಗತುಂಬಿಕೊಂಡಿರುವ ಜನರು ಹಾಗೂ ಅವರಿಗೆ ಅವರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು&#8221; ಎಂದಿದ್ದಾರೆ ಖ್ಯಾತ ಬಾಲಿವುಡ್ ನಟ ಆಮೀರ್ ಖಾನ್. “ನಾನೂ ಪವಿತ್ರ ಕುರಾನ್ ಓದಿದ್ದೇನೆ. ಒಂದು ವೇಳೆ ನೀವು ಒಬ್ಬ ವ್ಯಕ್ತಿಗೆ ಒಳ್ಳೆಯದನ್ನು ಮಾಡಿದರೆ, ಇಡೀ ಮನುಕುಲಕ್ಕೆ ಒಳ್ಳೆಯದನ್ನು ಮಾಡಿದಂತೆ. ಒಬ್ಬ ವ್ಯಕ್ತಿಗೆ ನೋವುಂಟು ಮಾಡಿದರೆ ಇಡೀ ಮಾನವಜನಾಂಗಕ್ಕೆ ನೋವುಂಟು ಮಾಡಿದಂತೆ ಎಂದು ಕುರಾನ್ ಹೇಳುತ್ತದೆ. ಜಿಹಾದ್ ಹೆಸರಿನಲ್ಲಿ ಪ್ರಾಣಾರ್ಪಣೆ ಮಾಡಿದರೆ ಸ್ವರ್ಗ ಸಿಗುತ್ತದೆ ಎಂದು ಕುರಾನ್‌ನಲ್ಲೆಲ್ಲೂ ಹೇಳಿಲ್ಲ. ಅದು ಯುದ್ಧದ ಸಂದರ್ಭವೇ ಆಗಿರಬಹುದು, ಮಹಿಳೆಯನ್ನು ಕೊಲ್ಲಬಾರದು, ಮಗುವನ್ನು ಹತ್ಯೆ ಮಾಡಬಾರದು, ಪ್ರಾಣಿಗಳನ್ನು ಕೊಲ್ಲಕೂಡದು, ಬೆಳೆಯನ್ನೂ ಹಾಳುಗೆಡವಬಾರದು ಎನ್ನುತ್ತದೆ ಕುರಾನ್. ಜಿಹಾದ್ ಅನ್ನು ಸ್ವತಃ ಪ್ರವಾದಿಯವರೇ ಬೋಧಿಸಬೇಕು. ದುರದೃಷ್ಟವಶಾತ್ ಇಂದು ಎರಡು ವಿಧದ ಇಸ್ಲಾಂಗಳಿವೆ-ಒಂದು ಅಲ್ಲಾ ಅವರ ಇಸ್ಲಾಂ, ಮತ್ತೊಂದು ಮುಲ್ಲಾಗಳ ಇಸ್ಲಾಂ. ನಾನು ಎಲ್ಲರಲ್ಲೂ ಮನವಿ ಮಾಡಿಕೊಳ್ಳುತ್ತೇನೆ, ಕುರಾನ್ ಬಗ್ಗೆ ಯುವಜನಾಂಗಕ್ಕೆ ಸರಿಯಾದ ತಿಳಿವಳಿಕೆ ನೀಡಿ&#8221; ಎಂದು ಮೊಟ್ಟಮೊದಲ ಬಾರಿಗೆ ನಟ ಶಾರುಖ್ ಖಾನ್ ಬಹಿರಂಗವಾಗಿ ಭಯೋತ್ಪಾದನೆಯ ವಿರುದ್ಧ ಧ್ವನಿಯೆತ್ತಿದ್ದಾರೆ. ಇತ್ತ ಪ್ರತಿವರ್ಷ ಡಿಸೆಂಬರ್ ೬ ಬಂತೆಂದರೆ ದೇಶಾದ್ಯಂತ ಕೆಲವು ಮುಸ್ಲಿಂ ಸಂಘಟನೆಗಳು ಕಪ್ಪುಪಟ್ಟಿ ಧರಿಸಿಕೊಂಡು ಬಾಬರಿ ಮಸೀದಿ ನೆಲಸಮದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದವು. ಮುಂಬಯಿ ಆಕ್ರಮಣದ ಹಿನ್ನೆಲೆಯಲ್ಲಿ  ಈ ಬಾರಿ ಪ್ರತಿಭಟನೆ ಮಾಡದೇ ಇರುವ ನಿರ್ಧಾರ ಕೈಗೊಳ್ಳಲಾಯಿತು. ಅಷ್ಟೇ ಅಲ್ಲ, ಕೆಲವು ಇಸ್ಲಾಮಿಕ್ ಸ್ಕಾಲರ್‌ಗಳು ಡಿಸೆಂಬರ್ ೬ರಂದು “Muslims initiative against Terrorism&#8221; ಚಳವಳಿಯನ್ನೇ ಆರಂಭಿಸಿದ್ದಾರೆ. ‘ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ’ಯ ಸಂಸ್ಥಾಪಕ ಸದಸ್ಯ ಹಾಗೂ ಜನಪ್ರಿಯ ನಾಯಕ ಕಮಲ್ ಫಾರುಕಿ, ಖ್ಯಾತ ಪತ್ರಕರ್ತ ಎಂ.ಜೆ. ಅಕ್ಬರ್, ಫತೇಪುರಿ ಮಸೀದಿಯ ಧರ್ಮಗುರು ಮುಫ್ತಿ ಮೊಹಮದ್ ಮುಕಾರ್ರನ್ ಅವರಂತಹ ಗಣ್ಯ ವ್ಯಕ್ತಿಗಳು ಭಯೋತ್ಪಾದನೆಯ ವಿರುದ್ಧ ಧ್ವನಿಯೆತ್ತಿದ್ದಾರೆ.  “ಭಯೋತ್ಪಾದನೆಯೆಂಬುದೇ ಇಲ್ಲ ಎಂದು ನಿರಾಕರಿಸುವ ಮನಸ್ಥಿತಿಯಿಂದ ಭಾರತೀಯ ಮುಸ್ಲಿಮರು ಹೊರಬರಬೇಕು. ಕೆಲವು ಮುಸ್ಲಿಮರು ಭಯೋತ್ಪಾದನೆಯಲ್ಲಿ ಭಾಗಿಯಾಗಿರಬಹುದು ಎಂಬ ವಾಸ್ತವವನ್ನು ಒಪ್ಪಿಕೊಳ್ಳಬೇಕು. ಆದರೆ ಈ ಭಯೋತ್ಪಾದಕರಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಭಯೋತ್ಪಾದಕರ ವಿರುದ್ಧ ಹೋರಾಡಬೇಕಾದುದು ನಮ್ಮ ಕರ್ತವ್ಯ. ನಮ್ಮ ಪ್ರೀತಿಯ ನಾಡನ್ನು ಬಲಗೊಳಿಸಬೇಕಾದ ಕರ್ತವ್ಯದಲ್ಲಿ ನಾವು ವಿಫಲಗೊಳ್ಳಬಾರದು&#8221; ಎಂದಿದ್ದಾರೆ ಕಮಲ್ ಫಾರುಕಿ.</p>
<p>ಸಲ್ಮಾನ್ ಖಾನ್, ಮೊಹಮದ್ ಅಜರುದ್ದೀನ್ ಕೂಡ ಭಯೋತ್ಪಾದನೆಯ ವಿರುದ್ಧ ಮಾತನಾಡಿದ್ದಾರೆ.</p>
<p>ಅದು ೧೯೯೩ರ ಮುಂಬಯಿ ಸ್ಫೋಟ, ದಿಲ್ಲಿ ಸರಣಿ ಬಾಂಬ್ ಸ್ಫೋಟ, ಅಹ್ಮದಾಬಾದ್ ಬಾಂಬ್ ದಾಳಿ, ರಘುನಾಥ, ವಿಶ್ವನಾಥ ಮಂದಿರದ ಮೇಲಿನ ಆಕ್ರಮಣವಿರಬಹುದು, ಅಕ್ಷರಧಾಮದ ಮೇಲಿನ ಅಟ್ಯಾಕ್ ಆಗಿರಬಹುದು. ಪ್ರತಿಬಾರಿ ಇಂತಹ ಅಹಿತಕರ ಘಟನೆಗಳು ಸಂಭವಿಸಿದಾಗಲೂ ಮುಸ್ಲಿಮರನ್ನು ಅನುಮಾನದಿಂದ ನೋಡಲಾಗುತ್ತಿತ್ತು. ಆದರೆ ಮುಂಬಯಿ ಆಕ್ರಮಣದ ನಂತರ ಕಂಡುಬರುತ್ತಿರುವ ಒಂದು ಮಹತ್ತರ ಬದಲಾವಣೆಯೆಂದರೆ ಯಾರೂ ನೆರೆಯ ಮುಸ್ಲಿಮರ ಮೇಲೆ ಅನುಮಾನಪಡುತ್ತಿಲ್ಲ. ಅದಕ್ಕೂ ಕಾರಣವಿದೆ. ಈ ಹಿಂದೆಲ್ಲಾ ಬಾಂಬ್ ಸ್ಫೋಟಗಳು ಸಂಭವಿಸಿದಾಗ ಮುಸ್ಲಿಮ್ ನಾಯಕತ್ವ ಮಾತನಾಡುತ್ತಿರಲಿಲ್ಲ, ಸಾರ್ವಜನಿಕವಾಗಿ ಭಯೋತ್ಪಾದನೆಯನ್ನು ಖಂಡಿಸುವ ಗೋಜಿಗೂ ಹೋಗುತ್ತಿರಲಿಲ್ಲ. ಆದರೆ ಇಂದು ಮುಸ್ಲಿಂ ನಾಯಕತ್ವವೇ ಮುಂದೆ ನಿಂತು ಭಯೋತ್ಪಾದನೆಯನ್ನು ಖಂಡಿಸುತ್ತಿದೆ.</p>
<p>ಈ ಮೊದಲು ಏನಾಗುತ್ತಿತ್ತು?</p>
<p>ಬಾಂಬ್ ಸ್ಫೋಟಗಳಾದಾಗ ಸೌಮ್ಯವಾದಿ, ಉದಾರವಾದಿ ಮುಸ್ಲಿಂ ನಾಯಕರು ಮನೆಯಿಂದ ಹೊರಬಂದು ಮಾತನಾಡು ತ್ತಿರಲಿಲ್ಲ. ಇದು ಬಹುಸಂಖ್ಯಾತರನ್ನು ಕುಪಿತಗೊಳಿಸುತ್ತಿತ್ತು, ಅನುಮಾನಕ್ಕೆ ಎಡೆಮಾಡಿಕೊಡುತ್ತಿತ್ತು. ಇನ್ನೊಂದೆಡೆ ಅರುಂಧತಿ ರಾಯ್, ತೀಸ್ತಾ ಸೆತಲ್ವಾಡ್, ಶಾಂತಿಭೂಷಣ್, ಮೂರ್ತಿ ಅವರಂತಹ ವ್ಯಕ್ತಿಗಳು ಭಯೋತ್ಪಾದಕರು ಹಾಗೂ ಅಲ್ಪಸಂಖ್ಯಾತರ ಪರ ವಕಾಲತ್ತು ವಹಿಸಲು ಧಾವಿಸುತ್ತಿದ್ದರು. ಈ ವ್ಯಕ್ತಿಗಳ ಆಷಾಢಭೂತಿತನ, ಅವಕಾಶವಾದಿ ಧೋರಣೆ, ಪ್ರಚಾರಪ್ರಿಯತೆ ಬಗ್ಗೆ ಮೊದಲೇ ಅರಿವಿರುವ ಬಹುಸಂಖ್ಯಾತರಿಗೆ ಕೋಪ ಇನ್ನೂ ಹೆಚ್ಚಾಗುತ್ತಿತ್ತು. ಇವರ ಜತೆಗೆ, ಹಣೆಗೆ ಅಗಲವಾದ ಕೆಂಪು ಬೊಟ್ಟು ಹಾಕಿಕೊಂಡು ಹಿಂದೂಗಳನ್ನೇ ಟೀಕಿಸುತ್ತಿದ್ದ ನಫೀಸಾ ಅಲಿ, ಶಬಾನಾ ಆಜ್ಮಿಯವರಂತಹ ಸೋಗಲಾಡಿಗಳ ಧೋರಣೆಯಂತೂ ರೇಜಿಗೆ ಹುಟ್ಟಿಸುತ್ತಿತ್ತು. ಅಷ್ಟಕ್ಕೂ ಬಲಿಪಶುಗಳಾಗಿದ್ದಲ್ಲದೆ ಬೈಗುಳನ್ನೂ ಕೇಳಿಸಿಕೊಳ್ಳಬೇಕಾಗಿ ಬಂದರೆ ಯಾರು ತಾನೇ ಸುಮ್ಮನಾಗುತ್ತಾರೆ? ಅದಿರಲಿ, ಈ ವ್ಯಕ್ತಿಗಳು ಆಡುತ್ತಿದ್ದ ಮಾತುಗಳಾದರೂ ಎಂಥವು? ಕಾಶ್ಮೀರದ ಭಯೋತ್ಪಾದನೆಯ ವಿಷಯ ಬಂದಾಗ “ನಿರುದ್ಯೋಗ, ಬಡತನ, ಅನಕ್ಷರತೆಯೇ ಭಯೋತ್ಪಾದನೆಗೆ ಕಾರಣ&#8221; ಎಂದು ಸಬೂಬು ಹೇಳುತ್ತಿದ್ದರು. ಮುಂಬಯಿ ಸ್ಫೋಟದ ಬಗ್ಗೆ ಬೆರಳು ತೋರಿದ ಕೂಡಲೇ “ಮುಸ್ಲಿಮರು ಭಯೋತ್ಪಾದನೆಯ ಹಾದಿ ಹಿಡಿಯಲು ೧೯೯೨ರ ಬಾಬರಿ ಮಸೀದಿ ಧ್ವಂಸವೇ ಮುಖ್ಯ ಕಾರಣ’ ಎನ್ನುತ್ತಿದ್ದರು.  ಇತ್ತೀಚೆಗೆ ದೇಶಾದ್ಯಂತ ಕಂಡುಬರುತ್ತಿರುವ ಬಾಂಬ್‌ಸ್ಫೋಟಗಳ ಬಗ್ಗೆ ಗಮನ ಸೆಳೆದ ಕೂಡಲೇ “ಗುಜರಾತ್ ಹಿಂಸಾಚಾರವೇ ಬಾಂಬ್ ಸ್ಫೋಟಗಳಿಗೆ ಕಾರಣ&#8221; ಎಂಬ ಹೊಸ ವ್ಯಾಖ್ಯಾನ ಕೊಡುತ್ತಿದ್ದರು.  ಹಾಗಾದರೆ ನಿರುದ್ಯೋಗ, ಅನಕ್ಷರತೆ, ಬಡತನಗಳು ಮುಸ್ಲಿಮರನ್ನು ಮಾತ್ರ ಕಾಡುತ್ತಿರುವ ಸಮಸ್ಯೆಗಳೇ? ಮಸೀದಿ ಧ್ವಂಸ, ಗುಜರಾತ್ ಹಿಂಸಾಚಾರವೇ ಬಾಂಬ್ ಸ್ಫೋಟಗಳಿಗೆ ಕಾರಣ ಎಂದು ನೆಪ ಹೇಳುವುದಾದರೆ ಹಿಂದೂಗಳು ಒಂದು ಸಾವಿರ ವರ್ಷಗಳ ಹಿಂದೆಯೇ ಮುಸ್ಲಿಮರ ವಿರುದ್ಧ, ೨೦೦ ವರ್ಷಗಳ ಹಿಂದೆಯೇ ಕ್ರೈಸ್ತರ ವಿರುದ್ಧ ಭಯೋತ್ಪಾದನೆ ಆರಂಭಿಸಿರಬೇಕಿತ್ತು ಅಲ್ಲವೆ? ಬಾಂಬ್ ಸ್ಫೋಟದಂತಹ ಅಮಾನವೀಯ ಕೃತ್ಯಗಳ ಬಗ್ಗೆ ಅಲ್ಪಸಂಖ್ಯಾತರಲ್ಲಿ ಜಾಗೃತಿ ಮೂಡಿಸುವ ಬದಲು ನಮ್ಮ ಬುದ್ಧಿಜೀವಿಗಳು ಸಮಸ್ಯೆಗೆ ಕುಂಟು ನೆಪಗಳನ್ನು ಹೇಳಿಕೊಡುತ್ತಿದ್ದರು. ಈ ‘ಡಿನಾಯಲ್ ಮೈಂಡ್‌ಸೆಟ್’ (ನಿರಾಕರಣೆ ಮನಸ್ಥಿತಿ), “ಮೈನಾರಿಟಿ ಸಿಂಡ್ರೋಮ್&#8221; ಮುಂತಾದುವುಗಳನ್ನು ಮುಸ್ಲಿಮರ ತಲೆಗೆ ತುಂಬಿದವರೇ ಇವರು. ನಿಜಹೇಳಬೇಕೆಂದರೆ ಭಯೋತ್ಪಾದಕರಿಗಿಂತ ಸದಾ ಮುಸ್ಲಿಮರ ಪರ ವಕಾಲತ್ತು ವಹಿಸುವ ಬುದ್ಧಿಜೀವಿಗಳಿಂದಲೇ ಮುಸ್ಲಿಂ ಸಮುದಾಯಕ್ಕೆ ಹೆಚ್ಚು ಕೆಟ್ಟ ಹೆಸರು ಬರುತ್ತಿತ್ತು. ಹಿಂದೂ ಹೆಸರುಗಳನ್ನಿಟ್ಟುಕೊಂಡು ಹಿಂದೂವಿರೋಧಿ ಧೋರಣೆ ಅನುಸರಿಸುತ್ತಿರುವ ಇವರಿಗೆ ಸಮಾಜದಲ್ಲಿ ಗೌರವ ಕೊಡುವ ವರು ಅಷ್ಟಕಷ್ಟೇ. ಇಂತಹ ವ್ಯಕ್ತಿಗಳಿಂದ ಮುಸ್ಲಿಂ ಸಮುದಾಯಕ್ಕೆ ಯಾವ ಲಾಭವಾದೀತು? ಅಷ್ಟಕ್ಕೂ ಮುಸ್ಲಿಂ ಸಮುದಾಯದಲ್ಲಿ ಯಾರೂ ಬುದ್ಧಿಜೀವಿಗಳೇ ಇಲ್ಲವೆ? ಎಂ.ಜೆ. ಅಕ್ಬರ್, ಫರೀದ್ ಝಕಾರಿಯಾ ಇರುವಾಗ, ಎರಡೂ ಕಡೆಯ ತಪ್ಪನ್ನು ತೋರಿಸುವ ಬದಲು ಒಬ್ಬರನ್ನು ಮಾತ್ರ ಸಮರ್ಥಿಸುವ ಪ್ರಗತಿಪರರು, ಜಾತ್ಯ ತೀತವಾದಿಗಳೆಂದು ಹೇಳಿಕೊಳ್ಳುವ ಕಳಪೆ ಹಿಂದೂಗಳೇಕೆ ಬೇಕು?</p>
<p>ಈ ಹಿನ್ನೆಲೆಯಲ್ಲಿ ಮುಂಬಯಿ ಸ್ಫೋಟದ ಕರಾಳತೆಯಲ್ಲೂ ಹೊಸ ಆಶಾಕಿರಣವೊಂದು ಗೋಚರಿಸುತ್ತಿದೆ.</p>
<p>ನಾವೆಲ್ಲ ಧರ್ಮವನ್ನು ಮೀರಿ ಪ್ರೀತಿಸುವ, ಗೌರವಿಸುವ ಶಾರುಖ್ ಖಾನ್, ಆಮೀರ್ ಖಾನ್, ಎಂ.ಜೆ. ಅಕ್ಬರ್, ಅಜರ್ ಅವರಂತಹ ವ್ಯಕ್ತಿಗಳು ಇಂದು ಭಯೋತ್ಪಾದನೆಯ ವಿರುದ್ಧ ಧ್ವನಿಯೆತ್ತುವುದರೊಂದಿಗೆ ಸರಿಯಾದ ವ್ಯಕ್ತಿಗಳು ಮುಸ್ಲಿಂ ಸಮುದಾಯವನ್ನು ಪ್ರತಿನಿಧಿಸುತ್ತಿದ್ದಾರೆ. ಜತೆಗೆ ನಮಗೆ ಸತ್ಯದ ಪರವಾಗಿ ಮಾತನಾಡುವವರು ಬೇಕೇ ಹೊರತು, ಒಂದು ಸಿದ್ಧಾಂತ, ನಿಲುವಿಗೆ ಅಂಟಿಕೊಂಡಿರುವ ಜಡ ಮನಸ್ಸುಗಳಲ್ಲ. ಎಡ್ವರ್ಡ್ ಸೆಡ್, ನೋಮ್ ಚೋಮ್‌ಸ್ಕಿ ಅವರಂತಹ ಸಮ ನಿಲುವಿನ ಬುದ್ಧಿ ಜೀವಿಗಳು ನಮ್ಮಲ್ಲೂ ಹೊರ ಹೊಮ್ಮಬೇಕು. ಇರಾಕ್ ವಿಷಯದಲ್ಲಿ ಅಮೆರಿಕ ನಡೆದುಕೊಂಡ ರೀತಿಯನ್ನೂ ಟೀಕಿಸುವ ಚೋಮ್‌ಸ್ಕಿ, ಇರಾಕಿಯರ ಲೋಪಗಳನ್ನೂ ಎತ್ತಿ ತೋರಿಸುತ್ತಾರೆ.</p>
<p>ಇದೇನೇ ಇರಲಿ, ಈ ‘ಮೈನಾರಿಟಿ ಸಿಂಡ್ರೋಮ್’ ನಮ್ಮಲ್ಲಿ ಮಾತ್ರ ಕಂಡುಬರುತ್ತಿದ್ದ ವಿಚಾರವಲ್ಲ. ಅಮೆರಿಕದ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ಜೆಸ್ಸಿ ಜಾಕ್ಸನ್ ಸೇರಿದಂತೆ ಎಲ್ಲಾ ಬ್ಲ್ಯಾಕ್ ನಾಯಕರೂ “ಕರಿಯರೆಲ್ಲ ಒಂದಾಗಬೇಕು&#8221; ಎಂದೇ ಕರೆ ಕೊಡುತ್ತಿದ್ದರು. ಆದರೆ ಸ್ವತಃ ಕರಿಯರಾದ ಬರಾಕ್ ಒಬಾಮ ಯಾವತ್ತೂ ‘ಮೈನಾರಿಟಿ’, ‘ಮೆಜಾರಿಟಿ’ಯ ಮಾತನಾಡಲಿಲ್ಲ. ಕರಿ, ಬಿಳಿ ಎನ್ನಲಿಲ್ಲ. “ಅಮೆರಿಕನ್ನರೆಲ್ಲ ಒಂದಾಗಬೇಕು&#8221; ಎಂದು ವಾದಿಸಿದರು, ಜನರಲ್ಲಿ ಮೊರೆಯಿಟ್ಟರು. ಹಾಗಾಗಿ ಬಿಳಿ, ಕರಿ, ಹಿಸ್ಪ್ಯಾನಿಕ್, ಏಷ್ಯನ್ ಎಂಬ ಭೇದಭಾವವಿಲ್ಲದೆ ಎಲ್ಲರೂ ಒಬಾಮಗೆ ವೋಟು ಕೊಟ್ಟರು. ಹಾಗೆ ನಮ್ಮಲ್ಲೂ ‘ಮೈನಾರಿಟಿಸಂ’ ಬದಲು ‘ನ್ಯಾಷನಲಿಸಂ’ ಬಗ್ಗೆ ಮಾತನಾಡುವಂತಹ ಮುಸ್ಲಿಮ್ ನಾಯಕರು ಹೊರಹೊಮ್ಮಬೇಕು. ಮುಂಬಯಿ ದುರ್ಘಟನೆಯ ನಂತರ ಅಂತಹ ನಾಯಕತ್ವ ಕೊನೆಗೂ ತಲೆಯೆತ್ತುತ್ತಿರುವುದು ಕಂಡುಬರುತ್ತಿದೆ. ‘ನಾವೆಲ್ಲ ಭಾರತೀಯರು’ ಎಂಬ ಮಾತು ಮುಸ್ಲಿಂ ಸಮುದಾಯದಲ್ಲೇ ಮಾರ್ದನಿಸತೊಡಗಿದೆ. ಇಂತಹ ಧ್ವನಿಗಳು ಇನ್ನಷ್ಟು ಬಲಗೊಂಡರೆ, ಎಲ್ಲರಲ್ಲೂ ನಾವು ಭಾರತೀಯರು ಭಾವನೆ ಅಂತರಂಗದಿಂದ ಮೂಡಿಬಂದರೆ ಭಾರತ ಜಗತ್ತಿಗೇ ಮಾದರಿಯಾಗುವುದರಲ್ಲಿ ಯಾವ ಸಂಶಯವೂ ಇಲ್ಲ.</p>
<p>ಆದರೆ, Are we seeing the real change of  heart?</p>
]]></content:encoded>
			<wfw:commentRss>http://pratapsimha.com/bettale-jagattu/mumbaiattack/feed/</wfw:commentRss>
		</item>
		<item>
		<title>ಸಂಕಷ್ಟಕ್ಕೆಲ್ಲಾ ಕಾರಣ ಶನೇಶ್ವರನಲ್ಲ, ಸೋನಿಯಾ!</title>
		<link>http://pratapsimha.com/bettale-jagattu/sonia/</link>
		<comments>http://pratapsimha.com/bettale-jagattu/sonia/#comments</comments>
		<pubDate>Sat, 06 Dec 2008 14:04:26 +0000</pubDate>
		<dc:creator>Pratap Simha</dc:creator>
		
		<category><![CDATA[Bettale-Jagattu]]></category>

		<guid isPermaLink="false">http://pratapsimha.com/?p=63</guid>
		<description><![CDATA[The Arabs will stop fighting us when they love their children more than they hate Jews!
ಹಾಗಂತ ಹೇಳಿದ್ದು ಇಸ್ರೇಲ್‌ನ ಮಾಜಿ ಪ್ರಧಾನಿ ದಿವಂಗತ ಗೋಲ್ಡಾ ಮೈಯರ್. ಮಾರ್ಗರೆಟ್ ಥ್ಯಾಚರ್‌ಗಿಂತ ಮೊದಲು “Iron Lady&#8221; ಎಂದು ಕರೆಯುತ್ತಿದ್ದುದು ಗೋಲ್ಡಾ ಮೈಯರ್ ಅವರನ್ನೇ. ಇಸ್ರೇಲ್‌ನ ಮೊದಲ ಪ್ರಧಾನಿ ಬೆನ್ ಗುರಿಯನ್ ಅವರಂತೂ “The only man in the Cabinet&#8221; ಎಂದು ಆಕೆಯನ್ನು ವರ್ಣಿಸಿದ್ದರು.

ಇಂತಹ ಗೋಲ್ಡಾ ಮೈಯರ್ 1969ರಲ್ಲಿ ಇಸ್ರೇಲ್‌ನ ಪ್ರಧಾನಿಯಾದಾಗ ಆಕೆಗೆ ೭೦ [...]]]></description>
			<content:encoded><![CDATA[<p>The Arabs will stop fighting us when they love their children more than they hate Jews!</p>
<p>ಹಾಗಂತ ಹೇಳಿದ್ದು ಇಸ್ರೇಲ್‌ನ ಮಾಜಿ ಪ್ರಧಾನಿ ದಿವಂಗತ ಗೋಲ್ಡಾ ಮೈಯರ್. ಮಾರ್ಗರೆಟ್ ಥ್ಯಾಚರ್‌ಗಿಂತ ಮೊದಲು “Iron Lady&#8221; ಎಂದು ಕರೆಯುತ್ತಿದ್ದುದು ಗೋಲ್ಡಾ ಮೈಯರ್ ಅವರನ್ನೇ. ಇಸ್ರೇಲ್‌ನ ಮೊದಲ ಪ್ರಧಾನಿ ಬೆನ್ ಗುರಿಯನ್ ಅವರಂತೂ “The only man in the Cabinet&#8221; ಎಂದು ಆಕೆಯನ್ನು ವರ್ಣಿಸಿದ್ದರು.</p>
<p><span id="more-63"></span></p>
<p>ಇಂತಹ ಗೋಲ್ಡಾ ಮೈಯರ್ 1969ರಲ್ಲಿ ಇಸ್ರೇಲ್‌ನ ಪ್ರಧಾನಿಯಾದಾಗ ಆಕೆಗೆ ೭೦ ವರ್ಷ ವಯಸ್ಸಾಗಿತ್ತು. ಆದರೇನಂತೆ ಜವಾಬ್ದಾರಿಯನ್ನು ಹೊರುವ ತಾಕತ್ತು ಆಕೆಯ ಹೆಗಲುಗಳಿಗಿತ್ತು.</p>
<p>ಇತ್ತ ೧೯೭೨ರಲ್ಲಿ ‘ಮ್ಯೂನಿಚ್ ಒಲಿಂಪಿಕ್ಸ್’ ಆರಂಭವಾಯಿತು.</p>
<p>ಮ್ಯೂನಿಚ್ ಇರುವುದು ಪಶ್ಚಿಮ ಜರ್ಮನಿಯಲ್ಲಿ. ಯಹೂದಿ ಗಳನ್ನು ಕೊಂದವರ, ದೇಶಬಿಟ್ಟು ಓಡಿಸಿದವರ ದೇಶವಾದ ಜರ್ಮನಿಗೆ 11 ಜನರ ಒಲಿಂಪಿಕ್ ತಂಡವನ್ನು ಕಳುಹಿಸಿಕೊಟ್ಟ ಇಸ್ರೇಲ್, ಕಗ್ಗೊಲೆಗಳಿಗೆ ತಾನು ಜಗ್ಗಿಲ್ಲ ಎಂಬ ಸಂದೇಶವನ್ನೇನೋ ಮುಟ್ಟಿಸಿತು. ಆದರೆ ಇಸ್ರೇಲಿನ ಒಲಿಂಪಿಕ್ ತಂಡ ಜರ್ಮನಿಗೆ ಬಂದಿಳಿದ ಬೆನ್ನಲ್ಲೇ ಜಗತ್ತನ್ನೇ ತಲ್ಲಣಗೊಳಿಸುವಂತಹ ಅಪಹ ರಣ ನಡೆಯಿತು. ಹನ್ನೊಂದೂ ಜನರನ್ನು ಅಪಹರಿಸಿದ “ಬ್ಲ್ಯಾಕ್ ಸೆಪ್ಟ