<?xml version="1.0" encoding="UTF-8"?>
<rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Pratap Simha &#187; Others</title>
	<atom:link href="http://pratapsimha.com/category/others/feed/" rel="self" type="application/rss+xml" />
	<link>http://pratapsimha.com</link>
	<description>Columnist, Writer &#38; Journalist</description>
	<lastBuildDate>Sat, 04 Feb 2012 12:55:00 +0000</lastBuildDate>
	<language>en</language>
	<sy:updatePeriod>hourly</sy:updatePeriod>
	<sy:updateFrequency>1</sy:updateFrequency>
	<generator>http://wordpress.org/?v=3.1</generator>
		<item>
		<title>ಕಾಂಗ್ರೆಸ್-ಶಾಂತಿಭೂಷಣ್ ಮಧ್ಯೆ ಹಳೆ ವೈಷಮ್ಯವೇನಾದರೂ ಇದೆಯೇ?</title>
		<link>http://pratapsimha.com/2011/04/30/shantibhushan/</link>
		<comments>http://pratapsimha.com/2011/04/30/shantibhushan/#comments</comments>
		<pubDate>Sat, 30 Apr 2011 12:34:12 +0000</pubDate>
		<dc:creator>Pratap Simha</dc:creator>
				<category><![CDATA[Others]]></category>

		<guid isPermaLink="false">http://pratapsimha.com/?p=1021</guid>
		<description><![CDATA[ &#8221;ಇದು ಒಬ್ಬ ವ್ಯಕ್ತಿಯ ಪಿತೂರಿಯಲ್ಲ. ಸರಕಾರ ಹಾಗೂ ಕಾಂಗ್ರೆಸ್ ಪಕ್ಷದ ಒಳಗಿರುವ ಅನೇಕರು ಭಾಗಿಯಾಗಿದ್ದಾರೆ&#8217; ಎಂದಿದ್ದಾರೆ ಮಾಜಿ ಕಾನೂನು ಸಚಿವ ಶಾಂತಿ ಭೂಷಣ್. ತಮ್ಮ ವಿರುದ್ಧ ಹೊರಬಿದ್ದಿರುವ ಸಿ.ಡಿ.ಯ ಹಿಂದಿರುವ ಕಾಣದ  &#8220;ಕೈ&#8217;ಗಳ ಬಗ್ಗೆ ಹಾಗೆ ಹೇಳಿದ್ದಾರೆ. 2008ರಲ್ಲಿ ನಾಗರೀಕ ಅಣು ಸಹಕಾರ ಒಪ್ಪಂದ ಸಲುವಾಗಿ ಕಮ್ಯುನಿಸ್ಟರು ಬೆಂಬಲ ವಾಪಸ್ ತೆಗೆದುಕೊಂಡಾಗ ಕಾಂಗ್ರೆಸ್ ಸರಕಾರವನ್ನು ಉಳಿಸಿದ್ದೇ ಅಮರ್ ಸಿಂಗ್. ಅಂತಹ ವ್ಯಕ್ತಿ ಪ್ರಸ್ತುತ ಹೊರಹಾಕಿರುವ ಸಿ.ಡಿ.ಯ ಹಿಂದೆ ಕಾಂಗ್ರೆಸ್ ಕೈವಾಡ ಇರುವುದನ್ನ ಯಾರೂ ತಳ್ಳಿಹಾಕಲು ಸಾಧ್ಯವಿಲ್ಲ. ಇಷ್ಟಕ್ಕೂ [...]]]></description>
			<content:encoded><![CDATA[<p><a href="http://pratapsimha.com/wp-content/uploads/2011/04/Bhushan.jpg"><img class="aligncenter size-medium wp-image-1022" title="Bhushan" src="http://pratapsimha.com/wp-content/uploads/2011/04/Bhushan-300x221.jpg" alt="" width="300" height="221" /></a></p>
<p> &#8221;ಇದು ಒಬ್ಬ ವ್ಯಕ್ತಿಯ ಪಿತೂರಿಯಲ್ಲ. ಸರಕಾರ ಹಾಗೂ ಕಾಂಗ್ರೆಸ್ ಪಕ್ಷದ ಒಳಗಿರುವ ಅನೇಕರು ಭಾಗಿಯಾಗಿದ್ದಾರೆ&#8217; ಎಂದಿದ್ದಾರೆ ಮಾಜಿ ಕಾನೂನು ಸಚಿವ ಶಾಂತಿ ಭೂಷಣ್. ತಮ್ಮ ವಿರುದ್ಧ ಹೊರಬಿದ್ದಿರುವ ಸಿ.ಡಿ.ಯ ಹಿಂದಿರುವ ಕಾಣದ  &#8220;ಕೈ&#8217;ಗಳ ಬಗ್ಗೆ ಹಾಗೆ ಹೇಳಿದ್ದಾರೆ. 2008ರಲ್ಲಿ ನಾಗರೀಕ ಅಣು ಸಹಕಾರ ಒಪ್ಪಂದ ಸಲುವಾಗಿ ಕಮ್ಯುನಿಸ್ಟರು ಬೆಂಬಲ ವಾಪಸ್ ತೆಗೆದುಕೊಂಡಾಗ ಕಾಂಗ್ರೆಸ್ ಸರಕಾರವನ್ನು ಉಳಿಸಿದ್ದೇ ಅಮರ್ ಸಿಂಗ್. ಅಂತಹ ವ್ಯಕ್ತಿ ಪ್ರಸ್ತುತ ಹೊರಹಾಕಿರುವ ಸಿ.ಡಿ.ಯ ಹಿಂದೆ ಕಾಂಗ್ರೆಸ್ ಕೈವಾಡ ಇರುವುದನ್ನ ಯಾರೂ ತಳ್ಳಿಹಾಕಲು ಸಾಧ್ಯವಿಲ್ಲ. ಇಷ್ಟಕ್ಕೂ ಕಾಂಗ್ರೆಸ್ ಏಕೆ ಶಾಂತಿ ಭೂಷಣ್ ಅವರ ಚಾರಿತ್ರ್ಯವಧೆಗಿಳಿದಿದೆ ಕಾಂಗ್ರೆಸ್್ಗೂ ಶಾಂತಿ ಭೂಷಣ್್ಗೂ ಏನಾದರೂ ಹಳೇ ವೈಷಮ್ಯವಿದೆಯೇ?</p>
<p>1971ರ ಲೋಕಸಭೆ ಚುನಾವಣೆಯನ್ನು ನೆನಪಿಸಿಕೊಳ್ಳಿ.</p>
<p>ಉತ್ತರ ಪ್ರದೇಶದ ರಾಯ್್ಬರೇಲಿಯಿಂದ ಸ್ಪರ್ಧಿಸಿದ್ದ ಪ್ರಧಾನಿ ಇಂದಿರಾ ಗಾಂಧಿಯವರು ಜನತಾ ಪಕ್ಷದ ರಾಜ್್ನಾರಾಯಣ್ ಅವರನ್ನು ಸೋಲಿಸಿದ್ದರು. ಆದರೆ ಚುನಾವಣಾ ಅಕ್ರಮದ ಅರೋಪ ಹೊರಿಸಿ ರಾಜ್್ನಾರಾಯಣ್ ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದರು. ಅಂದು ರಾಜ್್ನಾರಾಯಣ್ ಪರ ವಾದಕ್ಕಿಳಿದ ವಕೀಲ ಮತ್ತಾರೂ ಅಲ್ಲ ಶಾಂತಿ ಭೂಷಣ್. ಚುನಾವಣೆ ಸಂದರ್ಭದಲ್ಲಿ ಇಂದಿರಾ ಗಾಂಧಿಯವರು 1951ರ ಪ್ರಜಾಪ್ರತಿನಿಧಿ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಶಾಂತಿ ಭೂಷಣ್, ಒಟ್ಟು 7 ದುರುಪಯೋಗಗಳನ್ನು ಪಟ್ಟಿ ಮಾಡಿದರು. 1. ಪ್ರಚಾರಕ್ಕೆ ವಾಯುಪಡೆಯ ವಿಮಾನಗಳು ಹಾಗೂ ಹೆಲಿಕಾಪ್ಟರ್್ಗಳ ದುರ್ಬಳಕೆ. 2. ಮತದಾರರಿಗೆ ಬಟ್ಟೆ ಮತ್ತು ಮದ್ಯ ಹಂಚಿಕೆ. 3. ಚುನಾವಣೆಗೆ ಹಸು ಮತ್ತು ಕರು ಮುಂತಾದ ಧಾರ್ಮಿಕ ಸಂಕೇತಗಳ ಬಳಕೆ. 4. ಮತಗಟ್ಟೆಗೆ ಆಗಮಿಸಲು ಮತದಾರರಿಗೆ ಉಚಿತ ವಾಹನ ವ್ಯವಸ್ಥೆ. 5. ನಿಗದಿಗಿಂತ ಹೆಚ್ಚು ಚುನಾವಣಾ ವೆಚ್ಚ. 6. ಜಿಲ್ಲಾ ಮ್ಯಾಜಿಸ್ಟ್ರೇಟ್, ಎಸ್ಪಿ, ಎಕ್ಸಿಕ್ಯುಟಿವ್ ಎಂಜಿನಿಯರ್ ಮುಂತಾದ ಸರಕಾರಿ ಅಧಿಕಾರಿಗಳನ್ನು ಪ್ರಚಾರ ಕಾರ್ಯಕ್ಕೆ ಬಳಕೆ. 7. ಭಾರತ ಸರಕಾರದ ಸೇವೆಯಲ್ಲಿದ್ದ ಗೆಝೆಟೆಡ್ ಅಧಿಕಾರಿ ಯಶ್ಪಾಲ್ ಕಪೂರ್ ಅವರನ್ನು ತಮ್ಮ ಚುನಾವಣಾ ಅನುಕೂಲಕ್ಕೆ ಉಪಯೋಗ.</p>
<p>ಇವುಗಳಲ್ಲಿ ಕೊನೆಯ ಎರಡು ಅರೋಪಗಳನ್ನು ಸಾಬೀತಾದ ಚುನಾವಣಾ ಅಕ್ರಮಗಳೆಂದು ಪರಿಗಣಿಸಿದ ನ್ಯಾಯಮೂರ್ತಿ ಜಗ್ಮೋಹನ್್ಲಾಲ್ ಸಿನ್ಹಾ, 1975, ಜೂನ್ 12ರಂದು ನೀಡಿದ ತೀರ್ಪಿನಲ್ಲಿ 1971ರಲ್ಲಿ ಇಂದಿರಾ ಗಾಂಧಿಯವರು ಲೋಕಸಭೆಗೆ ಆಯ್ಕೆಯಾಗಿದ್ದನ್ನು ಅಸಿಂಧು ಎಂದು ಘೋಷಿಸಿದರು. ಜತೆಗೆ 6 ವರ್ಷ ವಿಧಾನಸಭೆ ಅಥವಾ ಲೋಕಸಭೆ ಈ ಯಾವ ಶಾಸನಸಭೆಗಳಿಗೂ ಸ್ಪರ್ಧಿಸದಂತೆ ನಿರ್ಬಂಧ ಹೇರಿದರು. ದಿಕ್ಕೆಟ್ಟ ಇಂದಿರಾ ಗಾಂಧಿ 1975, ಜೂನ್ 25ರಂದು ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದರು. ಇಂತಹ ಸ್ಥಿತಿಗೆ ತಂದ ಶಾಂತಿ ಭೂಷಣ್ ಅವರನ್ನು ನೆಹರು ಕುಟುಂಬ ಮರೆಯುವುದಕ್ಕಾಗಲಿ, ಮನ್ನಿಸುವುದಕ್ಕಾಗಲಿ ಸಾಧ್ಯವೇ?</p>
<p>ಇಷ್ಟು ಮಾತ್ರವಲ್ಲ, 1990ರಿಂದ 2007ರವರೆಗೂ ಅಂದರೆ ನ್ಯಾಯಮೂರ್ತಿ ರಂಗನಾಥ ಮಿಶ್ರಾರಿಂದ ವೈ.ಕೆ. ಸಭರ್್ವಾಲ್ ವರೆಗೂ ನೇಮಕವಾದ ಒಟ್ಟು 16 ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಗಳಲ್ಲಿ 8 ಮಂದಿ ಭ್ರಷ್ಟರು ಎಂದು 2010, ಸೆಪ್ಟೆಂಬರ್್ನಲ್ಲಿ ತೆಹೆಲ್ಕಾ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಗಂಭೀರ ಅರೋಪ ಮಾಡಿದರು. ಯಾರ್ಯಾರು ಭ್ರಷ್ಟರು ಎಂಬುದನ್ನು ಪಟ್ಟಿ ಮಾಡಿದ ಲಕೋಟೆಯನ್ನು ಸುಪ್ರೀಂ ಕೋರ್ಟ್್ಗೂ ಸಲ್ಲಿಸಿದ್ದರು. ಅಂತಹ ಭ್ರಷ್ಟ ನ್ಯಾಯಮೂರ್ತಿಗಳನ್ನು ನೇಮಕ ಮಾಡಿದ್ದೇ ಕಾಂಗ್ರೆಸ್ ಎಂಬುದನ್ನು ಪರೋಕ್ಷವಾಗಿ ಬಯಲಿಗೆಳೆದಿದ್ದರು. ಹಾಗಿರುವಾಗ ಕಾಂಗ್ರೆಸ್ ಶಾಂತಿ ಭೂಷಣ್್ರನ್ನು ಸುಮ್ಮನೆ ಬಿಟ್ಟೀತೆ? 2ಜಿ ಹಗರಣಕ್ಕೆ ಸಂಬಂಧಿಸಿದ ಟೆಲಿಫೋನ್ ಕರೆಗಳನ್ನು (ರಾಡಿಯಾ ಟೇಪ್) ಗೌಪ್ಯವಾಗಿ ರೆಕಾರ್ಡ್ ಮಾಡಿದ್ದು ರಿಲಾಯನ್ಸ್ ಕಂಪನಿ. 2006-2007ರ ನಡುವೆ ಸಂಬಂಧಿಸಿದ ನೂರಾರು ಕರೆಗಳನ್ನು ಅದು ರೆಕಾರ್ಡ್ ಮಾಡಿತ್ತು. ಸಮಾಜವಾದಿ ಪಕ್ಷದಿಂದ ಹೊರದಬ್ಬಲ್ಪಟ್ಟಿರುವ ಹಾಗೂ ಸಂದರ್ಭ ಸಿಕ್ಕಾಗಲೆಲ್ಲ ಕಾಂಗ್ರೆಸ್ ಜತೆ ಕೈಜೋಡಿಸುವ ಅಮರ್ ಸಿಂಗ್ ಇಂಥದ್ದೇ ಸಂಪರ್ಕವನ್ನು ಬಳಸಿಕೊಂಡು ಶಾಂತಿ ಭೂಷಣ್ ಅವರ ಕರೆಯೊಂದನ್ನು ಸಮಯ, ಸಂದರ್ಭ, ಸನ್ನಿವೇಶಗಳನ್ನು ತಿರುಚಿ ಸಿ.ಡಿ. ಮಾಡಿ ಹೊರಹಾಕಿದ್ದಾರೆ. ಸತ್ಯಾಸತ್ಯತೆ ಇನ್ನೂ ಸಾಬೀತಾಗಬೇಕು. ಅದರೆ ರಾಜಕೀಯ ಪುನರ್ವಸತಿಗಾಗಿ ತಡಕಾಡುತ್ತಿರುವ ಅಮರ್ ಸಿಂಗ್ ಹಾಗೂ ಶಾಂತಿ ಭೂಷಣ್ ಅವರನ್ನು ಹಣಿಯಲು ಹವಣಿಸುತ್ತಿದ್ದ ಕಾಂಗ್ರೆಸ್ ಪರಸ್ಪರ ಈಗ ಕೈಜೋಡಿಸಿವೆ ಅಷ್ಟೇ.</p>
]]></content:encoded>
			<wfw:commentRss>http://pratapsimha.com/2011/04/30/shantibhushan/feed/</wfw:commentRss>
		<slash:comments>20</slash:comments>
		</item>
		<item>
		<title>An appeal to my readers</title>
		<link>http://pratapsimha.com/2011/01/07/an-appeal-to-my-readers/</link>
		<comments>http://pratapsimha.com/2011/01/07/an-appeal-to-my-readers/#comments</comments>
		<pubDate>Fri, 07 Jan 2011 11:08:42 +0000</pubDate>
		<dc:creator>Pratap Simha</dc:creator>
				<category><![CDATA[Others]]></category>

		<guid isPermaLink="false">http://pratapsimha.com/?p=863</guid>
		<description><![CDATA[My beloved readers, when I took the most powerful head on, when I continued to write against Islamic terrorism despite some elements of muslim community openly threatened me to kill, when I continued the war against religious conversion, you all stood by me, enouraged me, loved me like never before. You all know, I had&#8230; [...]]]></description>
			<content:encoded><![CDATA[<p>My beloved readers, when I took the most powerful head on, when I continued to write against Islamic terrorism despite some elements of muslim community openly threatened me to kill, when I continued the war against religious conversion, you all stood by me, enouraged me, loved me like never before. You all know, I had&#8230; put my life into risk and wrote my column week after week for 11 long years.  In this 11 years, I was virtually fired from job atleast 6 times, I was subjected to abusive utterances, But my mentor Vish Bhat was my savior all along. Now I am fighting a personal battle against RB, who is belittling all of us in his toilet tissue paper. Guyz, please don&#8217;t advise me keep quiet or ingone. After all, as I said earlier, I am not Srikrishna to forgive Shishupala untill he commits 101 mistakes. Step into my shoes for a while, you will understand&#8230;</p>
]]></content:encoded>
			<wfw:commentRss>http://pratapsimha.com/2011/01/07/an-appeal-to-my-readers/feed/</wfw:commentRss>
		<slash:comments>140</slash:comments>
		</item>
		<item>
		<title>Visit &#8220;www.vbhat.in&#8221;</title>
		<link>http://pratapsimha.com/2011/01/03/visit-www-vbhat-in/</link>
		<comments>http://pratapsimha.com/2011/01/03/visit-www-vbhat-in/#comments</comments>
		<pubDate>Mon, 03 Jan 2011 11:12:31 +0000</pubDate>
		<dc:creator>Pratap Simha</dc:creator>
				<category><![CDATA[Others]]></category>

		<guid isPermaLink="false">http://pratapsimha.com/?p=851</guid>
		<description><![CDATA[Dear friends, our beloved editor Vishweshwar Bhat has started a website to reach out to his fans. Please use this opportunity to enrich ur knowledge. Link- http://vbhat.in/]]></description>
			<content:encoded><![CDATA[<p><a href="http://pratapsimha.com/wp-content/uploads/2011/01/V-Bhat21.jpg"></a><a href="http://pratapsimha.com/wp-content/uploads/2011/01/photo.png"><img class="aligncenter size-medium wp-image-860" title="photo" src="http://pratapsimha.com/wp-content/uploads/2011/01/photo-225x300.png" alt="" width="225" height="300" /></a></p>
<p>Dear friends, our beloved editor Vishweshwar Bhat has started a website to reach out to his fans. Please use this opportunity to enrich ur knowledge.</p>
<p>Link- <a href="http://vbhat.in/">http://vbhat.in/</a></p>
]]></content:encoded>
			<wfw:commentRss>http://pratapsimha.com/2011/01/03/visit-www-vbhat-in/feed/</wfw:commentRss>
		<slash:comments>50</slash:comments>
		</item>
		<item>
		<title>VB and his Team</title>
		<link>http://pratapsimha.com/2011/01/01/vb-and-his-team/</link>
		<comments>http://pratapsimha.com/2011/01/01/vb-and-his-team/#comments</comments>
		<pubDate>Sat, 01 Jan 2011 15:23:54 +0000</pubDate>
		<dc:creator>Pratap Simha</dc:creator>
				<category><![CDATA[Others]]></category>

		<guid isPermaLink="false">http://pratapsimha.com/?p=824</guid>
		<description><![CDATA[]]></description>
			<content:encoded><![CDATA[<p><a href="http://pratapsimha.com/wp-content/uploads/2011/01/VB-Team12.jpg"><img class="aligncenter size-medium wp-image-846" title="VB Team1" src="http://pratapsimha.com/wp-content/uploads/2011/01/VB-Team12-243x300.jpg" alt="" width="243" height="300" /></a></p>
]]></content:encoded>
			<wfw:commentRss>http://pratapsimha.com/2011/01/01/vb-and-his-team/feed/</wfw:commentRss>
		<slash:comments>29</slash:comments>
		</item>
		<item>
		<title>JOKE OF THE YEAR (2011) by RAVI BELAGERE</title>
		<link>http://pratapsimha.com/2011/01/01/joke-of-the-year-2011-by-ravi-belagere/</link>
		<comments>http://pratapsimha.com/2011/01/01/joke-of-the-year-2011-by-ravi-belagere/#comments</comments>
		<pubDate>Sat, 01 Jan 2011 14:41:49 +0000</pubDate>
		<dc:creator>Pratap Simha</dc:creator>
				<category><![CDATA[Others]]></category>

		<guid isPermaLink="false">http://pratapsimha.com/?p=810</guid>
		<description><![CDATA[JOKE OF THE YEAR (2011) by RAVI BELAGERE (Check the above comment by RB, to know what he has written after maligning our beloved editor Vishweshwar Bhat in FACEBOOK). Link- http://www.facebook.com/permalink.php?story_fbid=190169924327078&#38;id=100000035964536&#38;notif_t=share_reply Long live turncoats!!]]></description>
			<content:encoded><![CDATA[<p><a href="http://pratapsimha.com/wp-content/uploads/2011/01/rb-1.png"><img class="aligncenter size-medium wp-image-811" title="rb-1" src="http://pratapsimha.com/wp-content/uploads/2011/01/rb-1-300x225.png" alt="" width="300" height="225" /></a></p>
<p>JOKE OF THE YEAR (2011) by RAVI BELAGERE (Check the above comment by RB, to know what he has written after maligning our beloved editor Vishweshwar Bhat in FACEBOOK).</p>
<p>Link- <a href="http://www.facebook.com/permalink.php?story_fbid=190169924327078&amp;id=100000035964536&amp;notif_t=share_reply">http://www.facebook.com/permalink.php?story_fbid=190169924327078&amp;id=100000035964536&amp;notif_t=share_reply</a></p>
<p>Long live turncoats!!</p>
]]></content:encoded>
			<wfw:commentRss>http://pratapsimha.com/2011/01/01/joke-of-the-year-2011-by-ravi-belagere/feed/</wfw:commentRss>
		<slash:comments>54</slash:comments>
		</item>
		<item>
		<title>Truth Alone Triumphs!</title>
		<link>http://pratapsimha.com/2010/12/23/truth-alone-triumphs/</link>
		<comments>http://pratapsimha.com/2010/12/23/truth-alone-triumphs/#comments</comments>
		<pubDate>Thu, 23 Dec 2010 07:14:39 +0000</pubDate>
		<dc:creator>Pratap Simha</dc:creator>
				<category><![CDATA[Others]]></category>

		<guid isPermaLink="false">http://pratapsimha.com/?p=805</guid>
		<description><![CDATA[Dear Friends, my book on MINING MAFIA and Bettale Jagattu part 9 and 10 were released on 2010, Feb 6th by Lokayukta Justice Santhosh Hegde and Former chief justice of Supreme court MN Venkatachalaiah. If u want to have a copy of them, please visit the nearest leading book stall or u can have a [...]]]></description>
			<content:encoded><![CDATA[<p><a href="http://pratapsimha.com/wp-content/uploads/2010/12/18.jpg"><img class="aligncenter size-medium wp-image-806" title="18" src="http://pratapsimha.com/wp-content/uploads/2010/12/18-300x199.jpg" alt="" width="300" height="199" /></a></p>
<p>Dear Friends, my book on MINING MAFIA and Bettale Jagattu part 9 and 10 were released on 2010, Feb 6th by Lokayukta Justice Santhosh Hegde and Former chief justice of Supreme court MN Venkatachalaiah. If u want to have a copy of them, please visit the nearest leading book stall or u can have a copy from my publisher M.A.  Subrahmanya. U can reach him at 9448110034. Coz of marketing reasons I have not uploaded the pdfs of some of my books.</p>
<p> And please wish Ravi Belagere, a speedy recovery.  Get well soon RB!</p>
]]></content:encoded>
			<wfw:commentRss>http://pratapsimha.com/2010/12/23/truth-alone-triumphs/feed/</wfw:commentRss>
		<slash:comments>25</slash:comments>
		</item>
		<item>
		<title>ಸಮರ್ಪಣೆಯ ದೀಕ್ಷೆ ತೊಟ್ಟವಗೆ ಸಾವು ಬಗೆದ ಅನ್ಯಾಯ!</title>
		<link>http://pratapsimha.com/2010/12/01/rajiv-dixith/</link>
		<comments>http://pratapsimha.com/2010/12/01/rajiv-dixith/#comments</comments>
		<pubDate>Wed, 01 Dec 2010 09:47:55 +0000</pubDate>
		<dc:creator>Pratap Simha</dc:creator>
				<category><![CDATA[Others]]></category>

		<guid isPermaLink="false">http://pratapsimha.com/?p=776</guid>
		<description><![CDATA[1. ಅವರು ಬಂಡವಾಳವನ್ನು ತರುತ್ತಾರೆ. 2. ಉದ್ಯೋಗವನ್ನು ಸೃಷ್ಟಿಸುತ್ತಾರೆ. 3. ಅದರಿಂದ ದೇಶದ ರಫ್ತು ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತದೆ. 4. ಅಷ್ಟೇ ಅಲ್ಲ, ನಮ್ಮ ದೇಶಕ್ಕೆ ಅತ್ಯಾಧುನಿಕ ತಂತ್ರeನವನ್ನೂ ತರುತ್ತಾರೆ. ನಮ್ಮ ದೇಶದಲ್ಲಿ ಬಂಡವಾಳ ತೊಡಗಿಸುವಂತೆ ಬಹುರಾಷ್ಟ್ರೀಯ ಕಂಪನಿಗಳನ್ನು ಆಹ್ವಾನಿಸುತ್ತಿರುವ ಸರಕಾರ ಈ ರೀತಿಯ ಕಾರಣ, ನೆಪಗಳನ್ನು ಕೊಟ್ಟು ನಿಮ್ಮನ್ನು ಸಮಾಧಾನಪಡಿಸುತ್ತಿದೆ. ಆದರೆ ವಾಸ್ತವದಲ್ಲಿ ವಿದೇಶಿ ಕಂಪನಿಗಳ ಆಗಮನದಿಂದಾಗಿ ನಮ್ಮ ದೇಶದ ಸಂಪತ್ತು ಹೊರಕ್ಕೆ ಹರಿದುಹೋಗುತ್ತಿದೆ, ಲೂಟಿಯಾಗುತ್ತಿದೆ. ಬಹುರಾಷ್ಟ್ರೀಯ ಕಂಪನಿಗಳ ಆಗಮನದಿಂದ ಉದ್ಯೋಗ ಸೃಷ್ಟಿಯಾಗುತ್ತದೆ ಎಂಬ ಮಾತೂ [...]]]></description>
			<content:encoded><![CDATA[<p><a href="http://pratapsimha.com/wp-content/uploads/2010/12/rajiv-dixit.jpg"><img class="aligncenter size-medium wp-image-777" title="rajiv dixit" src="http://pratapsimha.com/wp-content/uploads/2010/12/rajiv-dixit-300x188.jpg" alt="" width="300" height="188" /></a></p>
<p>1. ಅವರು ಬಂಡವಾಳವನ್ನು ತರುತ್ತಾರೆ.<br />
2. ಉದ್ಯೋಗವನ್ನು ಸೃಷ್ಟಿಸುತ್ತಾರೆ.<br />
3. ಅದರಿಂದ ದೇಶದ ರಫ್ತು ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತದೆ.<br />
4. ಅಷ್ಟೇ ಅಲ್ಲ, ನಮ್ಮ ದೇಶಕ್ಕೆ ಅತ್ಯಾಧುನಿಕ ತಂತ್ರeನವನ್ನೂ ತರುತ್ತಾರೆ.<br />
<span id="more-776"></span><br />
ನಮ್ಮ ದೇಶದಲ್ಲಿ ಬಂಡವಾಳ ತೊಡಗಿಸುವಂತೆ ಬಹುರಾಷ್ಟ್ರೀಯ ಕಂಪನಿಗಳನ್ನು ಆಹ್ವಾನಿಸುತ್ತಿರುವ ಸರಕಾರ ಈ ರೀತಿಯ ಕಾರಣ, ನೆಪಗಳನ್ನು ಕೊಟ್ಟು ನಿಮ್ಮನ್ನು ಸಮಾಧಾನಪಡಿಸುತ್ತಿದೆ. ಆದರೆ ವಾಸ್ತವದಲ್ಲಿ ವಿದೇಶಿ ಕಂಪನಿಗಳ ಆಗಮನದಿಂದಾಗಿ ನಮ್ಮ ದೇಶದ ಸಂಪತ್ತು ಹೊರಕ್ಕೆ ಹರಿದುಹೋಗುತ್ತಿದೆ, ಲೂಟಿಯಾಗುತ್ತಿದೆ. ಬಹುರಾಷ್ಟ್ರೀಯ ಕಂಪನಿಗಳ ಆಗಮನದಿಂದ ಉದ್ಯೋಗ ಸೃಷ್ಟಿಯಾಗುತ್ತದೆ ಎಂಬ ಮಾತೂ ಶುದ್ಧ ಸುಳ್ಳು. ಖಾಸಗಿ ಕಂಪನಿಗಳಿಂದಾಗಿ ಸ್ಥಳೀಯ ಸಣ್ಣ ಉದ್ದಿಮೆಗಳು ನಾಶಗೊಂಡು ಭಾರೀ ಪ್ರಮಾಣದ ನಿರುದ್ಯೋಗ ಸೃಷ್ಟಿಯಾಗುತ್ತದೆ ಹಾಗೂ ಆರ್ಥಿಕ ಅಸಮಾನತೆಯುಂಟಾಗುತ್ತದೆ. ರಫ್ತು ಪ್ರಮಾಣ ಹೆಚ್ಚಾಗುತ್ತದೆ ಎಂಬ ಮಾತೂ ಕೂಡ ಸತ್ಯಕ್ಕೆ ದೂರವಾದುದು. ವಾಸ್ತವದಲ್ಲಿ ವಿದೇಶಿ ಕಂಪನಿಗಳಿಂದಾಗಿ ಆಮದು ಪ್ರಮಾಣ ಹೆಚ್ಚಾಗುತ್ತಿದೆ. ಅವು ತಮ್ಮ ದೇಶದ ಸರಕುಗಳನ್ನು ಭಾರತಕ್ಕೆ ತಂದು ಮಾರಾಟ ಮಾಡುತ್ತಿವೆಯಷ್ಟೇ. ಅಂದರೆ ತಮ್ಮ ದೇಶದ ಕಚ್ಚಾವಸ್ತು ಗಳನ್ನು ಇಲ್ಲಿಗೆ ತಂದು, ಸರಕನ್ನಾಗಿ ಪರಿವರ್ತಿಸಿ ಭಾರೀ ಲಾಭವನ್ನಿಟ್ಟು ಮಾರಾಟ ಮಾಡುತ್ತಿವೆಯಷ್ಟೇ. ನಮ್ಮ ದೇಶದ ಸಂಪತ್ತೇ ಕೊಳ್ಳೆಯಾಗುತ್ತಿದೆ. ಬಹುರಾಷ್ಟ್ರೀಯ ಕಂಪನಿಗಳು ತಂತ್ರeನವನ್ನು ತರುತ್ತವೆ ಎಂಬ ವಾದವೂ ಒಂದು ದೊಡ್ಡ ಸುಳ್ಳು. ಸಮೀಕ್ಷೆಗಳು ಹೇಳುವಂತೆ ವಿದೇಶಿ ಕಂಪನಿಗಳು ಯಾವುದೇ ಉತ್ಪಾದನಾ ತಂತ್ರeನವನ್ನು ನಮ್ಮ ದೇಶಕ್ಕೆ ತರುತ್ತಿಲ್ಲ, ಜತೆಗೆ ಯಾವುದೇ ಸಂಶೋಧನಾ ಕೇಂದ್ರಗಳನ್ನೂ ನಮ್ಮಲ್ಲಿ ಸ್ಥಾಪಿಸುತ್ತಿಲ್ಲ. ತಮ್ಮ ತಮ್ಮ ದೇಶಗಳಿಂದ ಬಿಡಿ ಭಾಗಗಳನ್ನು ತರಿಸಿ, ಇಲ್ಲಿ ಜೋಡಿಸಿ ಮಾರಾಟ ಮಾಡುವ ಕೆಲಸವನ್ನಷ್ಟೇ ಮಾಡುತ್ತಿವೆ. ಈ ದೇಶದಲ್ಲಿ ಅತ್ಯಾಧುನಿಕ ತಂತ್ರeನ ಹೊಂದಿರುವ ಕಂಪನಿಗಳೆಂದರೆ ISRO ಮತ್ತು DRDO ಮಾತ್ರ. ಅವು ದೇಶೀಯವಾಗಿ ಸುಧಾರಿತ ತಂತ್ರeನವನ್ನು ಅಭಿವೃದ್ಧಿಪಡಿಸಿವೆ. ಹೀಗೆ ನಾವು ನಮ್ಮ ದೇಶದಲ್ಲೇ ಆಧುನಿಕ ತಂತ್ರeನವನ್ನು ಅಭಿವೃದ್ಧಿಪಡಿಸಲು ಶಕ್ತವಿರುವಾಗ ವಿದೇಶಿ ಕಂಪನಿಗಳನ್ನೇಕೆ ಕೆಂಪು ಕಂಬಳಿಹಾಕಿ ಆಹ್ವಾನಿಸಬೇಕು? ಈ ದೇಶದ ಸಂಪತ್ತನ್ನೇಕೆ ಲೂಟಿ ಮಾಡಿಕೊಂಡು ಹೋಗಲು ಬಿಡಬೇಕು?</p>
<p>ಈಸ್ಟ್ ಇಂಡಿಯಾ ಕಂಪನಿ!</p>
<p>ಆ ಹೆಸರಿನ ಒಂದೇ ಕಂಪನಿ ನಮ್ಮ ದೇಶವನ್ನು ಎಷ್ಟು ಲೂಟಿ ಮಾಡಿತು ಎಂಬುದು ನಿಮಗೆಲ್ಲ ಗೊತ್ತೇ ಇದೆ. ಆ ಒಂದು ಕಂಪನಿಯನ್ನು ಓಡಿಸಲು ನಮಗೆ 200 ವರ್ಷ ಬೇಕಾದವು! ಈಗ ಭಾರತದಲ್ಲಿ ಸುಮಾರು 5 ಸಾವಿರ ವಿದೇಶಿ ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ!! ಹಾಳೂ-ಮೂಳೂ ಸರಕುಗಳನ್ನು ಮಾರಿ, ದೇಶದ ಸಂಪತ್ತನ್ನು ದೋಚುತ್ತಿವೆ. ಒಂದು ವೇಳೆ ನಮ್ಮ ದೇಶ ಒಂದು ಸುಭದ್ರ ಹಾಗೂ ಬಲಿಷ್ಠ ರಾಷ್ಟ್ರವಾಗಬೇಕಾದರೆ ಈ ಕಂಪನಿಗಳನ್ನು ಆದಷ್ಟು ಬೇಗ ದೇಶದಿಂದ ಹೊರಹಾಕಿ ಸ್ವದೇಶಿ ತಂತ್ರeನದ ಅಭಿವೃದ್ಧಿಗೆ ಪ್ರೋತ್ಸಾಹ ನೀಡಬೇಕು&#8230;&#8230;&#8221;</p>
<p>ರಾಜೀವ್ ದೀಕ್ಷಿತ್ ಅವರ ಭಾಷಣವನ್ನು ಕೇಳುವುದೆಂದರೆ ಪ್ರವಾಹಕ್ಕೆ ಬೆನ್ನುಕೊಟ್ಟು ಕುಳಿತುಕೊಂಡಂತೆ, ಕೊಚ್ಚಿಹೋಗದೆ ಬೇರೆ ದಾರಿಯೇ ಇರುತ್ತಿರಲಿಲ್ಲ!</p>
<p>“ತೆರಿಗೆ ಮೂಲಕ ಸಂಗ್ರಹವಾಗುವ ಸಂಪತ್ತನ್ನು ಹಂಚಿದರೆ ಈ ದೇಶದ ಜನರ ತಲಾ ಆದಾಯ ವರ್ಷಕ್ಕೆ 6 ಸಾವಿರ ರೂಪಾಯಿ ಗಳಾಗುತ್ತವೆ. ಸರಕಾರ ಪ್ರತಿ ವ್ಯಕ್ತಿಗೂ ಮಾಡುವ ವೆಚ್ಚ ಕೇವಲ 600 ರೂಪಾಯಿ! ಉಳಿದ ಹಣ ಎಲ್ಲಿಗೆ ಹೋಗುತ್ತದೆ? ಕೇವಲ 20 ಪರ್ಸೆಂಟ್ ಹಣವಷ್ಟೇ ಅಭಿವೃದ್ಧಿ ಕಾರ್ಯಕ್ಕೆ ವಿನಿಯೋಗವಾಗುತ್ತದೆ. ಸರಕಾರಿ ಉದ್ಯೋಗಿಗಳು, ಶಾಸಕ-ಸಂಸದರ ಸಂಬಳ, ಸವಲತ್ತಿಗೆ 80 ಪರ್ಸೆಂಟ್ ವೆಚ್ಚವಾಗುತ್ತಿದೆ. ಹಾಗಿರುವಾಗ ದೇಶದ ಅಭಿವೃದ್ಧಿ ಹೇಗೆ ಸಾಧ್ಯ?&#8221;</p>
<p>ಹೀಗೆ ರಾಜೀವ್ ದೀಕ್ಷಿತ್ ಅವರು ಭಾಷಣದ ಮೂಲಕ ತಮ್ಮ ವಾದ ಮಂಡಿಸುತ್ತಿದ್ದರೆ ಅಹುದಹುದೆಂದು ತಲೆಯಾಡಿಸದೇ, ಅಚ್ಚರಿಗೊಳ್ಳದೆ, ಮರುಕ್ಷಣವೇ ಹತಾಶೆಗೊಳ್ಳದೆ ಇರಲಾಗುತ್ತಿರಲಿಲ್ಲ. ನಿಜ ಹೇಳಬೇಕೆಂದರೆ ರಾಜಕೀಯೇತರ ಕ್ಷೇತ್ರಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಂಡುಬಂದ ಅತ್ಯುತ್ತಮ ವಾಗ್ಮಿಗಳಲ್ಲಿ ರಾಜೀವ್ ಒಬ್ಬರು. ಅವರು ಕೊಡುತ್ತಿದ್ದ ಅಂಕಿ-ಅಂಶಗಳಲ್ಲಿ ಎಷ್ಟರಮಟ್ಟಿನ ಹುರುಳಿತ್ತು ಎಂಬುದು ವಾದಮಾಡುವಂತಹ ವಿಷಯವಾಗಿದ್ದರೂ ಅವರ ಭಾಷಣ ಮಾತ್ರ ತರ್ಕಬದ್ಧವಾಗಿರುತ್ತಿತ್ತು. ಮಾತುಗಳು ಅತ್ಯಂತ ಸ್ಫುಟ. ಅಸ್ಖಲಿತ ಹಿಂದಿ. ಅಂದಮಾತ್ರಕ್ಕೆ ಅವರು ಬರೀ ಭಾಷಣಕಾರರಾಗಿರಲಿಲ್ಲ. ಎಂ.ಟೆಕ್ ಓದಿದ್ದರು. ಸಿಎಸ್‌ಐಆರ್ ಜತೆ ಕೆಲಸ ಮಾಡಿದ್ದ ಅನುಭವ ಹೊಂದಿದ್ದರು.</p>
<p>ಸುಮಾರು ೮ ವರ್ಷಗಳ ಹಿಂದಿನ ಮಾತು.</p>
<p>ಬೆಂಗಳೂರಿನ ಚಿಕ್ಕಪೇಟೆಯಲ್ಲಿರುವ ‘ಆಜಾದಿ ಬಚಾವೋ ಆಂದೋಲನ’ದ ಕಚೇರಿಗೆ ಸ್ನೇಹಿತ ಚಕ್ರವರ್ತಿ ಸೂಲಿಬೆಲೆ ಕರೆದುಕೊಂಡು ಹೋಗಿದ್ದರು. ಅಲ್ಲಿ ರಾಜೀವ್ ದೀಕ್ಷಿತ್ ಉಪನ್ಯಾಸವಿತ್ತು. ಅವರನ್ನು ನೋಡಿದ್ದು ಅದೇ ಮೊದಲು. ಇಸ್ತ್ರಿಯನ್ನೇ ಕಾಣದ ಕುರ್ತಾ, ಪೈಜಾಮ ಹಾಕಿದ್ದ ವ್ಯಕ್ತಿಯೇ ರಾಜೀವ್ ದೀಕ್ಷಿತ್ ಅವರಾ ಎಂದು ಆಶ್ಚರ್ಯವುಂಟಾಗಿತ್ತು. ಆ ವೇಳೆಗಾಗಲೇ ರಾಜೀವ್ ದೀಕ್ಷಿತ್ ಎಂದರೆ ಸ್ವದೇಶಿ ಚಳವಳಿಯಲ್ಲಿ ದೇಶದಲ್ಲೇ ದೊಡ್ಡ ಹೆಸರು. ಅವರ ಭಾಷಣದ ತೀವ್ರತೆ ದಂತಕಥೆಯಂತಾಗಿತ್ತು. ಆದರೆ ಅವರ ಜೀವನ ಶೈಲಿಯಲ್ಲಿ ಮಾತ್ರ ಯಾವುದೇ ಬದಲಾವಣೆಗಳಾಗಿರಲಿಲ್ಲ. ಖ್ಯಾತ ಗಾಂಧೀವಾದಿ ಧರ್ಮಪಾಲ್ ಅವರ ಅನುಯಾಯಿಯಾಗಿದ್ದ ರಾಜೀವ್ ದೀಕ್ಷಿತ್, ತಮ್ಮ ಜೀವನದಲ್ಲೂ ಗಾಂಧೀಜಿಯಂತೆ ಖಾದಿ ಹಾಗೂ ಸರಳ ಜೀವನ ಅಳವಡಿಸಿಕೊಂಡಿದ್ದರು. ಬಹಳ ಆಶ್ಚರ್ಯದ ಸಂಗತಿಯೆಂದರೆ ಗಾಂಧೀಜಿಯವರನ್ನು ಬಹುವಾಗಿ ಮೆಚ್ಚಿಕೊಂಡಿದ್ದ ರಾಜೀವ್ ದೀಕ್ಷಿತ್ ಅವರು ಚಂದ್ರಶೇಖರ್ ಆಜಾದ್, ಭಗತ್ ಸಿಂಗ್, ಸುಭಾಷ್‌ಚಂದ್ರ ಬೋಸ್ ಮುಂತಾದ ಕ್ರಾಂತಿಕಾರಿಗಳನ್ನೂ ಅಷ್ಟೇ ತೀವ್ರತೆಯೊಂದಿಗೆ ಆರಾಧಿಸುತ್ತಿದ್ದರು. ಹಾಗಾಗಿ ಸ್ವದೇಶಿ ಬಗ್ಗೆ ಮಾತನಾಡುವಾಗಲೂ ಅವರ ಭಾಷಣದಲ್ಲಿ ಒಂದು ಶಕ್ತಿ ಎದ್ದು ಕಾಣುತ್ತಿತ್ತು.</p>
<p>ಹಾಗಂತ ರಾಜೀವ್ ದೀಕ್ಷಿತ್ ಹೇಳಿದ್ದನ್ನೆಲ್ಲಾ ಒಪ್ಪಿಕೊಳ್ಳಬೇಕು ಅಥವಾ ಒಪ್ಪಿಕೊಳ್ಳುವಂತಿರುತ್ತಿತ್ತು ಎಂದಲ್ಲ.</p>
<p>ಉದಾಹರಣೆಗೆ 1948ರಲ್ಲಿ ಸಂಭವಿಸಿದ ಭೋಪಾಲ್ ಅನಿಲ ದುರಂತದ ಬಗ್ಗೆ ರಾಜೀವ್ ದೀಕ್ಷಿತ್ ತಮ್ಮದೇ ಆದ ವ್ಯಾಖ್ಯಾನ ಕೊಡುತ್ತಿದ್ದರು. ಅದು ಅನಿಲ ದುರಂತವಲ್ಲ, ಅಮೆರಿಕ ಉದ್ದೇಶ ಪೂರ್ವಕವಾಗಿ ಎಸಗಿದ ಕೃತ್ಯ, ನೂತನ ಮಾದರಿ ಬಾಂಬೊಂದನ್ನು ಅದು ಪರೀಕ್ಷೆ ಮಾಡಿದೆ ಎಂದೆಲ್ಲ ಹೇಳುತ್ತಿದ್ದರು. 2001, ಸೆಪ್ಟೆಂಬರ್ 11ರಂದು ವಿಶ್ವ ವ್ಯಾಪಾರ ಸಂಸ್ಥೆಯ ಮೇಲೆ ನಡೆದ ಭಯೋತ್ಪಾದಕ ದಾಳಿಯ ಬಗ್ಗೆಯೂ ಕಥೆ ಹೇಳುತ್ತಿದ್ದರು. ಅದು ಅಮೆರಿಕವೇ ಎಸಗಿದ ಕೃತ್ಯ ಎಂದೆಲ್ಲ ಆಧಾರರಹಿತ  Conspiracy theory ಗಳನ್ನು ಹೇಳಿ ಏನೂ ಅರಿಯದವರನ್ನು ನಂಬಿಸಿದ್ದೂ ಇದೇ. ಅವು ಕೇಳುವುದಕ್ಕಷ್ಟೇ ಹಿತವಾಗಿರುತ್ತಿದ್ದವು. ಅವರ ಬಹುದೊಡ್ಡ ಸಾಮರ್ಥ್ಯವೆಂದರೆ ಅವರು ಏನನ್ನೇ ಹೇಳಿದರೂ ಅದನ್ನು ನಂಬುವಂತೆ ಹೇಳುತ್ತಿದ್ದರು. ಆಗಿನ ಕಾಲ ಕೂಡ ಅವರಿಗೆ ಹೇಳಿ ಸೃಷ್ಟಿಸಿದಂತಿತ್ತು. 1991ರಲ್ಲಿ ಪ್ರಧಾನಿ ನರಸಿಂಹರಾವ್ ಆರ್ಥಿಕ ಉದಾರೀಕರಣ ನೀತಿಗಳನ್ನು ಜಾರಿಗೆ ತಂದ ನಂತರ ಬಹುರಾಷ್ಟ್ರೀಯ ಕಂಪನಿಗಳ ಬಗ್ಗೆ ದೇಶಾದ್ಯಂತ ಒಂದು ರೀತಿಯ ಆತಂಕ, ಭಯ ಸೃಷ್ಟಿಯಾಗಿತ್ತು. ಇಂತಹ ಒಂದು ಸರಿಯಾದ ಸಂದರ್ಭದಲ್ಲಿ ರಾಜೀವ್ ದೀಕ್ಷಿತ್ ಅವರ ಪ್ರವೇಶವಾಯಿತು. 1995-2005 ಅವಧಿಯಲ್ಲಿ ಅವರು ಇಡೀ ದೇಶದ ಉದ್ದಗಲಕ್ಕೂ ತಿರುಗಿ, ಊರೂರು ಸುತ್ತಿ ಭಾಷಣ ಮಾಡಿದರು. ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿದರು. ಒಂದು ದೊಡ್ಡ ಯುವಪಡೆ ಅವರ ಹಿಂದೆ ಟೊಂಕಕಟ್ಟಿ ನಿಂತಿತು.</p>
<p>ಆದರೆ&#8230;</p>
<p>ರಾಜೀವ್ ದೀಕ್ಷಿತ್ ಒಬ್ಬ ಒಳ್ಳೆಯ ಮಾತುಗಾರರಾಗಿದ್ದರೇ ಹೊರತು, ಒಳ್ಳೆಯ ಸಂಘಟಕರಾಗಿರಲಿಲ್ಲ, ದೂರದೃಷ್ಟಿಯ ಕೊರ ತೆಯೂ ಸಾಕಷ್ಟಿತ್ತು. ಭಾಷಣದಾಚೆ ಅವರಲ್ಲಿ ಯಾವ ಐಡಿಯಾ ಗಳೂ ಇರಲಿಲ್ಲ. ಈ ಬಾರಿ ಬಂದಾಗಲೂ ಭಾಷಣ, ಮುಂದಿನ ಬಾರಿಯೂ ಭಾಷಣವೇ. ಅದನ್ನು ಕೃತಿಗಿಳಿಸಲು ಪ್ರಯತ್ನಿಸಲಿಲ್ಲ. ಹಾಗಾಗಿ ಆಜಾದಿ ಬಚಾವೋ ಆಂದೋಲನ ಒಂದು ಫಲದಾಯಕ ಚಳವಳಿಯಾಗಲಿಲ್ಲ, ಒಂದು ದೊಡ್ಡ ಸಂಘಟನೆಯಾಗಿ ಬೆಳೆಯ ಲಿಲ್ಲ. ಆದರೂ ಅವರು ದೇಶದ ಬಗ್ಗೆ ಇಟ್ಟುಕೊಂಡಿದ್ದ ಕಾಳಜಿ, ಪ್ರೀತಿ ಮಾತ್ರ ಅಪಾರ. ಕಳೆದ ಕೆಲ ವರ್ಷಗಳಿಂದ ಕೇವಲ ಉತ್ತರ ಭಾರತದ ಕೆಲವು ರಾಜ್ಯಗಳಿಗಷ್ಟೇ ತಮ್ಮನ್ನು ಸೀಮಿತ ಮಾಡಿಕೊಂಡ ರಾಜೀವ್ ದೀಕ್ಷಿತ್, ಬಾಬಾ ರಾಮ್‌ದೇವ್ ಜತೆ ಸೇರಿ ‘ಭಾರತ್ ಸ್ವಾಭಿಮಾನ್’ ಎಂಬ ರಾಜಕೀಯ ವೇದಿಕೆ ಪ್ರಾರಂಭಿಸಿದ್ದರು. ಅದು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಗುರಿಯನ್ನೂ ಹೊಂದಿತ್ತು. ಆದರೆ ಕನಸು ಸಾಕಾರಗೊಳ್ಳುವ ಮೊದಲೇ ವಿಧಿ ಅವರನ್ನು ಕಿತ್ತುಕೊಂಡಿದೆ. ನವೆಂಬರ್ 30ರಂದು ಬೆಳಗಿನ ಜಾವ ರಾಜೀವ್ ದೀಕ್ಷಿತ್ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಸುಮಾರು 15 ವರ್ಷಗಳ ಕಾಲ ಜನರಲ್ಲಿ ಜಾಗೃತಿ ಮೂಡಿಸಲು ಅವಿರತವಾಗಿ, ಪ್ರಾಮಾಣಿಕವಾಗಿ ಪ್ರಯತ್ನಿಸಿದ, ಲಕ್ಷಾಂತರ ಯುವಕರಿಗೆ ಪ್ರೇರಣೆ ನೀಡಿದ ರಾಜೀವ್ ದೀಕ್ಷಿತ್‌ರನ್ನು 44ನೇ ವರ್ಷಕ್ಕೆ ವಿಧಿ ಕಿತ್ತುಕೊಂಡಿದ್ದು ಮಾತ್ರ ಈ ದೇಶದ ದುರಂತ. ಹೀಗೆ ದುಃಖದ ಮಡುವಿಗೆ ಬಿದ್ದಿರುವಾಗ ಏಳುವ ಪ್ರಶ್ನೆಯೇನೆಂದರೆ, ಈ ಸಾವೇಕೆ ಸಾಧಕರನ್ನು ಸಣ್ಣಪ್ರಾಯದಲ್ಲೇ ಕಿತ್ತುಕೊಂಡುಬಿಡುತ್ತದೆ?</p>
<p>ಛೇ.</p>
]]></content:encoded>
			<wfw:commentRss>http://pratapsimha.com/2010/12/01/rajiv-dixith/feed/</wfw:commentRss>
		<slash:comments>17</slash:comments>
		</item>
		<item>
		<title>YOU ARE ALL INVITED</title>
		<link>http://pratapsimha.com/2010/11/11/you-are-all-invited/</link>
		<comments>http://pratapsimha.com/2010/11/11/you-are-all-invited/#comments</comments>
		<pubDate>Thu, 11 Nov 2010 08:53:48 +0000</pubDate>
		<dc:creator>Pratap Simha</dc:creator>
				<category><![CDATA[Others]]></category>

		<guid isPermaLink="false">http://pratapsimha.com/?p=759</guid>
		<description><![CDATA[Dear Friends, I am getting married on Nov 18th, at Chikmagalore. Treat this as personal invitation. Do come and bless us&#8230;]]></description>
			<content:encoded><![CDATA[<p><a href="http://pratapsimha.com/wp-content/uploads/2010/11/Invitation.jpg"><img class="aligncenter size-medium wp-image-760" title="Invitation" src="http://pratapsimha.com/wp-content/uploads/2010/11/Invitation-300x224.jpg" alt="" width="300" height="224" /></a></p>
<p>Dear Friends, I am getting married on Nov 18th, at Chikmagalore. Treat this as personal invitation. Do come and bless us&#8230;</p>
]]></content:encoded>
			<wfw:commentRss>http://pratapsimha.com/2010/11/11/you-are-all-invited/feed/</wfw:commentRss>
		<slash:comments>174</slash:comments>
		</item>
		<item>
		<title>ಈ ಸುದಿನ ನಿನ್ನ ಜನುಮದಿನ ಮಿಡಿಯಲಿ ನಮ್ಮ ಮನ&#8230;</title>
		<link>http://pratapsimha.com/2010/09/28/bhagatsingh/</link>
		<comments>http://pratapsimha.com/2010/09/28/bhagatsingh/#comments</comments>
		<pubDate>Tue, 28 Sep 2010 12:08:15 +0000</pubDate>
		<dc:creator>Pratap Simha</dc:creator>
				<category><![CDATA[Others]]></category>

		<guid isPermaLink="false">http://pratapsimha.com/?p=720</guid>
		<description><![CDATA[ಒಂದು ದಿನ ಸಾಯಂಕಾಲ ವೀರಕಲಿಗಳ ಕತೆ ಹೇಳುತ್ತಿದ್ದ ಅಪ್ಪ ಮುಂದೆ ಮುಂದೆ ಸಾಗುತ್ತಿದ್ದರೆ, ಮೂರು ವರ್ಷದ ಮಗ ಹಿಂದೆ ಹಿಂದೆ ಹೆಜ್ಜೆ ಹಾಕುತ್ತಿದ್ದ. ಅಪ್ಪನ ಕತೆ ಮುಂದು ವರಿದಿತ್ತು. ಗದ್ದೆ ದಾಟಿ ಆಚೆ ಬದಿಗೆ ಬಂದು ಸೇರಿದ್ದೂ ಆಯಿತು. ಆದರೆ ಬರಬರುತ್ತಾ ಹೆಜ್ಜೆ ಸಪ್ಪಳವೇ ನಿಂತುಹೋಗಿತ್ತು. ಹಿಂದಿರುಗಿ ನೋಡಿದರೆ ಮಗನೇ ಇಲ್ಲ. ನಡೆದು ಬಂದ ದಾರಿಯಲ್ಲೇ ವಾಪಸ್ ಬಂದರೆ ಆ ಮೂರು ವರ್ಷದ ಬಾಲಕ ಗದ್ದೆಯಲ್ಲಿ ಗುಂಡಿ ತೋಡುತ್ತಿದ್ದ. ಆಶ್ಚರ್ಯಚಕಿತನಾದ ಅಪ್ಪ, ಏನು ಮಾಡುತ್ತಿ ದ್ದೀಯಾ? ಅಂತ [...]]]></description>
			<content:encoded><![CDATA[<p><a href="http://pratapsimha.com/wp-content/uploads/2010/09/bhagat_singh.jpg"><img class="aligncenter size-full wp-image-721" title="bhagat_singh" src="http://pratapsimha.com/wp-content/uploads/2010/09/bhagat_singh.jpg" alt="" width="200" height="282" /></a></p>
<p>ಒಂದು ದಿನ ಸಾಯಂಕಾಲ ವೀರಕಲಿಗಳ ಕತೆ ಹೇಳುತ್ತಿದ್ದ ಅಪ್ಪ ಮುಂದೆ ಮುಂದೆ ಸಾಗುತ್ತಿದ್ದರೆ, ಮೂರು ವರ್ಷದ ಮಗ ಹಿಂದೆ ಹಿಂದೆ ಹೆಜ್ಜೆ ಹಾಕುತ್ತಿದ್ದ. ಅಪ್ಪನ ಕತೆ ಮುಂದು ವರಿದಿತ್ತು. ಗದ್ದೆ ದಾಟಿ ಆಚೆ ಬದಿಗೆ ಬಂದು ಸೇರಿದ್ದೂ ಆಯಿತು. ಆದರೆ ಬರಬರುತ್ತಾ ಹೆಜ್ಜೆ ಸಪ್ಪಳವೇ ನಿಂತುಹೋಗಿತ್ತು. ಹಿಂದಿರುಗಿ ನೋಡಿದರೆ ಮಗನೇ ಇಲ್ಲ. ನಡೆದು ಬಂದ ದಾರಿಯಲ್ಲೇ ವಾಪಸ್ ಬಂದರೆ ಆ ಮೂರು ವರ್ಷದ ಬಾಲಕ ಗದ್ದೆಯಲ್ಲಿ ಗುಂಡಿ ತೋಡುತ್ತಿದ್ದ. ಆಶ್ಚರ್ಯಚಕಿತನಾದ ಅಪ್ಪ, ಏನು ಮಾಡುತ್ತಿ ದ್ದೀಯಾ? ಅಂತ ಪ್ರಶ್ನಿಸಿದಾಗ ಮಗ ಹೇಳಿದ-‘ಅಪ್ಪಾ, ಈ ಗದ್ದೆ ಯಲ್ಲೆಲ್ಲ ಬಾಂಬ್ ಬೆಳೆಯಬೇಕು. ಅದಕ್ಕೇ ಬಾಂಬ್ ಗಿಡ ನೆಡಲು ಗುಂಡಿ ತೋಡುತ್ತಿದ್ದೇನೆ’!</p>
<p>ಅವನೇ ಭಗತ್ ಸಿಂಗ್.</p>
<p>ಅತ್ಯಂತ ಎಳೆ ವಯಸ್ಸಿನಲ್ಲೇ ಆತನನ್ನು ಅತಿಯಾಗಿ ಕಾಡಿದ್ದು 1919ರಲ್ಲಿ ಸಂಭವಿಸಿದ ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡ. ಅಂದು ಸಾವಿರಾರು ಜನರು ಹತ್ಯೆಯಾಗಿರುವ ಸುದ್ದಿ ಎಲ್ಲೆಡೆಯೂ ಹಬ್ಬಿತ್ತು. ಶಾಲೆ ಬಿಟ್ಟ ಕೂಡಲೇ ತಂಗಿಯ ಕೈಗೆ ಬ್ಯಾಗ್ ಕೊಟ್ಟ ಭಗತ್, ಅದೆತ್ತಲೋ ಹೆಜ್ಜೆ ಹಾಕಿದ. ರಾತ್ರಿ ಮನೆಗೆ ಮರಳಿದಾಗ ಕೈಯಲ್ಲಿ ಇಂಕಿನ ಬಾಟಲಿಯಿತ್ತು. ಅದರಲ್ಲಿ ಶಾಯಿಯ ಬದಲು ಮಣ್ಣು ತುಂಬಿತ್ತು. ಆ ಮಣ್ಣು ಮನೆಯ ಪೂಜಾ ಕೊಠಡಿ ಸೇರಿ ನಿತ್ಯ ಆರಾಧನೆಗೆ ಭಾಜನವಾಯಿತು. ಅಷ್ಟಕ್ಕೂ ಅದು ಜಲಿಯನ್ ವಾಲಾಬಾಗ್‌ನಲ್ಲಿ ಪೊಲೀಸರ ಗುಂಡಿಗೆ ಬಲಿಯಾಗಿದ್ದ ದೇಶವಾಸಿಗಳ ರಕ್ತದಿಂದ ತೊಯ್ದಿದ್ದ ಮಣ್ಣಾಗಿತ್ತು!</p>
<p>1922ರಲ್ಲಿ ಗೋರಕ್‌ಪುರ ಜಿಲ್ಲೆಯ ಚೌರಿಚೌರಾ ಎಂಬಲ್ಲಿ ಕಾಂಗ್ರೆಸ್ ಮೆರವಣಿಗೆಯೊಂದನ್ನು ಆಯೋಜಿಸಿತ್ತು. ಆದರೆ ಪೊಲೀಸರು ಅಮಾಯಕರ ಮೇಲೆ ಲಾಠಿ ಪ್ರಹಾರ ಮಾಡಿದಾಗ ರೊಚ್ಚಿಗೆದ್ದ ಜನ, 22 ಪೊಲೀಸರನ್ನು ಠಾಣೆಯೊಳಗೆ ಕೂಡಿಹಾಕಿ ಸಜೀವ ದಹನ ಮಾಡಿದರು. ಮನನೊಂದ ಗಾಂಧೀಜಿ ದೇಶಾದ್ಯಂತ ನಡೆಯುತ್ತಿದ್ದ ‘ಅಸಹಕಾರ ಚಳವಳಿ’ಯಿಂದಲೇ ಹಿಂದೆ ಸರಿದರು. 22 ಪೊಲೀಸರನ್ನು ಕೊಂದರೆಂಬ ಕಾರಣಕ್ಕೆ ಅಸಹಕಾರದಂತಹ ಮಹತ್ವದ ಚಳವಳಿಯನ್ನೇ ಕೈಬಿಟ್ಟಿದ್ದು ಸರಿಯೆ? ತನ್ನ ಬಾಲ್ಯದ ಹೀರೋ ಕರ್ತಾರ್ ಸಿಂಗ್‌ನನ್ನು ಗಲ್ಲಿಗೇರಿಸಿದಾಗ ಕಾಂಗ್ರೆಸ್ಸಿಗರೇಕೆ ಧ್ವನಿಯೆತ್ತಲಿಲ್ಲ? ಪೊಲೀಸರನ್ನು ಕೊಂದಾಗ ಮಾತ್ರ ಅಹಿಂಸಾವಾದ ಜಾಗೃತವಾಗುವುದೇಕೆ? ಎಂಬ ಪ್ರಶ್ನೆಗಳು 15 ವರ್ಷದ ಭಗತ್ ಸಿಂಗ್‌ನನ್ನು ಕಾಡಲಾರಂಭಿಸಿದವು. ಅದರಲ್ಲೂ ಲಾಲಾಲಜಪತ್ ರಾಯ್ ಪ್ರಾರಂಭಿಸಿದ್ದ ಲಾಹೋರ್‌ನ ನ್ಯಾಷನಲ್ ಕಾಲೇಜು ಸೇರಿದ ನಂತರ ಭಗತ್ ಸಂಪೂರ್ಣವಾಗಿ ಬದಲಾದ.</p>
<p>ಅದು 1928, ಅಕ್ಟೋಬರ್ 30.</p>
<p>ಸೈಮನ್ ಆಯೋಗ ಇಂಗ್ಲೆಂಡ್‌ನಿಂದ ಆಗಮಿಸಿತ್ತು, ಭಾರ ತೀಯರಿಗೆ ಎಷ್ಟು ಸ್ವಾತಂತ್ರ್ಯ ಕೊಡಬೇಕೆಂಬುದನ್ನು ನಿರ್ಧರಿಸಲು. ಅದು ಲಾಹೋರ್ ರೈಲು ನಿಲ್ದಾಣಕ್ಕೆ ಬಂದಿಳಿಯುವ ವೇಳೆಗೆ ಲಾಲಾ ಜಲಪತ್‌ರಾಯ್ ಹಾಗೂ ಪಂಡಿತ್ ಮದನ್ ಮೋಹನ್ ಮಾಳವೀಯ ನೇತೃತ್ವದಲ್ಲಿ ‘ನೌಜವಾನ್ ಭಾರತ್ ಸಭಾ’ ಭಾರಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಕಪ್ಪು ಬಾವುಟಗಳನ್ನು ಹಿಡಿದಿದ್ದ ಪ್ರತಿಭಟನಾಕಾರರಿಗೆ ಹಿಂದೆ ಸರಿಯುವಂತೆ ಖಾಕಿಧಾರಿಗಳು ಸೂಚನೆ ನೀಡಿದರು. ಯಾರೂ ಕದಲಲಿಲ್ಲ. ಪೊಲೀಸ್ ಸೂಪ ರಿಂಟೆಂಡೆಂಟ್ ಸ್ಯಾಂಡರ್ಸ್, ಲಾಠಿಚಾರ್ಜ್‌ಗೆ ಆದೇಶ ನೀಡಿದ. ಸ್ಕಾಟ್ ಎಂಬ ಪೊಲೀಸ್ ಅಧಿಕಾರಿ ವಯೋವೃದ್ಧ ಲಾಲಾ ಲಜಪತ್ ರಾಯ್ ಅವರ ಎದೆಗೆ ಲಾಠಿಯಿಂದ ಬಡಿದು ಪ್ರಾಣಾಂತಿಕವಾಗಿ ಗಾಯಗೊಳಿಸಿದ. 18 ದಿನಗಳ ಕಾಲ (1928, ನವೆಂಬರ್ 17) ನರಳಿದ ಲಜಪತ್ ರಾಯ್ ನಮ್ಮನ್ನಗಲಿದರು. ಕೆರಳಿದ ಭಗತ್ ಸಿಂಗ್ ಮತ್ತು ರಾಜಗುರು 1928, ಡಿಸೆಂಬರ್ 17ರ ಸಾಯಂ ಕಾಲ 4 ಗಂಟೆ ಸಮಯದಲ್ಲಿ ಠಾಣೆಯಿಂದ ಹೊರಬಂದ ಸ್ಯಾಂಡರ್ಸ್‌ನನ್ನು ಗುಂಡಿಕ್ಕಿ ಕೊಲೆಗೈದು ಪರಾರಿಯಾದರು.</p>
<p>ಆ ವೇಳೆಗಾಗಲೇ ಮತ್ತೊಬ್ಬ ಕ್ರಾಂತಿಕಾರಿ ಚಂದ್ರಶೇಖರ್ ಆಜಾದರ ಪರಿಚಯವಾಗಿತ್ತು. ಆಜಾದರ ಮಾರ್ಗದರ್ಶನದಲ್ಲಿ ಮತ್ತೊಂದು ಯೋಜನೆ ಸಿದ್ಧವಾಯಿತು. 1929, ಏಪ್ರಿಲ್‌ನಲ್ಲಿ ದಿಲ್ಲಿಯ ಕೇಂದ್ರೀಯ ಶಾಸನಸಭೆಯ ಮುಂದೆ ಬ್ರಿಟಿಷ್ ಸರಕಾರ ಎರಡು ಮಸೂದೆಗಳನ್ನು ಮುಂದಿಡಲಿತ್ತು. ಆ ಮಸೂದೆಗಳು ಸ್ವಾತಂತ್ರ್ಯ ಚಳವಳಿಯನ್ನು ಹತ್ತಿಕ್ಕುವ ಉದ್ದೇಶ ಹೊಂದಿವೆ ಎಂಬುದು ಗೊತ್ತಾಗಿತ್ತು. ದೇಶಾದ್ಯಂತ ವಿರೋಧ ವ್ಯಕ್ತವಾಗಿತ್ತು. ಕಾಂಗ್ರೆಸ್ ಕೂಡ ವಿರುದ್ಧವಾಗಿತ್ತು. ಹಾಗಾಗಿ ಮಸೂದೆಗಳು ಬಿದ್ದುಹೋಗುವ ಎಲ್ಲ ಸಾಧ್ಯತೆಗಳೂ ಇದ್ದವು. ಆದರೆ ವೈಸರಾಯ್ ತನ್ನ ‘ವೀಟೋ ಪವರ್’ ಉಪಯೋಗಿಸಿ ಮಸೂದೆಗೆ ಅಂಗೀಕಾರ ನೀಡುವ ಅವಕಾಶವಿತ್ತು. ಇತ್ತ ಚಂದ್ರಶೇಖರ್ ಆಜಾದ್ ಯೋಜನೆಯೊಂದನ್ನು ರೂಪಿಸಿದ್ದರು. 1929, ಏಪ್ರಿಲ್ 8ರಂದು ಅಧಿವೇಶನ ಆರಂಭವಾಯಿತು. ಪನಾಮ ಹ್ಯಾಟ್ ಧರಿಸಿದ್ದ ಭಗತ್ ಸಿಂಗ್ ಹಾಗೂ ಬಟುಕೇಶ್ವರ್ ದತ್ ಬಾಂಬ್ ಮತ್ತು ರಿವಾಲ್ವರ್‌ಗಳೊಂದಿಗೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಆಸೀನರಾಗಿದ್ದರು. ನಿರೀಕ್ಷೆಯಂತೆಯೇ ಮತದಾನದ ವೇಳೆ ಎರಡೂ ಮಸೂದೆಗಳು ಬಿದ್ದುಹೋದವು. ವೀಟೋ ಅಧಿಕಾರವನ್ನು ಬಳಸಿ ಮಸೂದೆಯನ್ನು ಕಾನೂನಾಗಿ ಮಾರ್ಪಡಿಸುವುದಾಗಿ ವೈಸರಾಯ್ ಘೋಷಣೆ ಮಾಡಿದ್ದೂ ಆಯಿತು. ಆದರೆ ವೀಟೋ ಪ್ರಯೋಗಿಸುವ ಮೊದಲು ಸದನದೊಳಗೆ ಬಾಂಬ್ ಸ್ಫೋಟ. ಇದ್ದಕ್ಕಿದ್ದಂತೆಯೇ ‘ಇಂಕ್ವಿಲಾಬ್ ಜಿಂದಾಬಾದ್’ ಎಂಬ ಘೋಷಣೆ. ಜನಜಂಗುಳಿಯಲ್ಲಿ ಭಗತ್ ಸಿಂಗ್ ಹಾಗೂ ಬಟುಕೇಶ್ವರ ದತ್ತ ತಪ್ಪಿಸಿಕೊಳ್ಳಬಹುದಿತ್ತು. ಆದರೆ ವಿಚಾರಣೆ ಎದುರಿಸುವ ಮೂಲಕ ಕ್ರಾಂತಿಯ ಸಂದೇಶವನ್ನು ದೇಶದುದ್ದಗಲಕ್ಕೂ ಪಸರಿಸುವ, ಸಾರುವ ಸಲುವಾಗಿ ಬಂಧಿತರಾದರು. 1930, ಅಕ್ಟೋಬರ್ 7ರಂದು ತೀರ್ಪು ಹೊರಬಿತ್ತು. ಶಾಸನಸಭೆಯಲ್ಲಿ ಬಾಂಬ್‌ಸ್ಫೋಟ ಮಾಡಿದ್ದಕ್ಕಾಗಿ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್‌ಗೆ ಗಲ್ಲುಶಿಕ್ಷೆ ನಿಗದಿಯಾಯಿತು.</p>
<p>ಈ ನಡುವೆ ಮಹಾತ್ಮ ಗಾಂಧೀಜಿ ದುಂಡುಮೇಜಿನ ಸಮ್ಮೇಳನ ದಲ್ಲಿ ಪಾಲ್ಗೊಳ್ಳಲು ಇಂಗ್ಲೆಂಡಿಗೆ ಹೊರಟು ನಿಂತರು.</p>
<p>ಆ ವೇಳೆಗಾಗಲೇ ಭಗತ್ ಸಿಂಗ್, ರಾಜಗುರು ಹಾಗೂ ಸುಖದೇವ್‌ರನ್ನು ಗಲ್ಲಿಗೇರಿಸುವ ವಿರುದ್ಧ ದೇಶಾದ್ಯಂತ ಸಹಿ ಸಂಗ್ರಹಣೆ ಆರಂಭವಾಗಿತ್ತು. ಗಲ್ಲುಶಿಕ್ಷೆಯನ್ನು ತೆಗೆದುಹಾಕುವಂತೆ ಬ್ರಿಟನ್ ಆಡಳಿತದ ಮನವೊಲಿಸಬೇಕೆಂದು ‘ಯುವ ವಾಹಿನಿ’, ‘ನೌಜವಾನ್ ಭಾರತ್ ಸಭಾ’ ಹಾಗೂ ಖ್ಯಾತ ಗಾಂಧೀವಾದಿ ಅರುಣಾ ಅಸಫ್ ಅಲಿ ಸೇರಿದಂತೆ ಇಡೀ ದೇಶವಾಸಿಗಳು ಒಕ್ಕೊರಲಿ ನಿಂದ ಮಹಾತ್ಮನಿಗೆ ಮನವಿ ಮಾಡಿದರು. ಇಂಗ್ಲೆಂಡ್‌ಗೆ ತೆರಳಿದ ಗಾಂಧೀಜಿ 1931, ಮಾರ್ಚ್ 5ರಂದು ಲಾರ್ಡ್ ಇರ್ವಿನ್ ಜತೆ ಒಪ್ಪಂದಕ್ಕೆ ಸಹಿ ಹಾಕಿದರು. ಅದರೊಂದಿಗೆ ಕಾಂಗ್ರೆಸ್ ಅಸಹಕಾರ ಚಳವಳಿಯನ್ನು ಅಧಿಕೃತವಾಗಿ ಕೈಬಿಡಲು ಒಪ್ಪಿತು. ಕಾಂಗ್ರೆಸ್ಸಿಗರ ವಿರುದ್ಧ ಹೇರಿದ್ದ ನಿರ್ಬಂಧವನ್ನು ತೆಗೆದು ಹಾಕಲು ಬ್ರಿಟಿಷ್ ಆಡಳಿತ ಕೂಡ ಸಮ್ಮತಿ ನೀಡಿತು.</p>
<p>ಆದರೆ&#8230;</p>
<p>ಗಾಂಧೀಜಿಯವರು, ಭಗತ್ ಸಿಂಗ್‌ಗೆ ಮಾಫಿ ನೀಡುವ ವಿಚಾರ ಬಿಟ್ಟು ಉಳಿದೆಲ್ಲ ವಿಷಯಗಳ ಬಗ್ಗೆಯೂ ಇರ್ವಿನ್ ಜತೆ ಚರ್ಚೆ ನಡೆಸಿದ್ದರು! ಒಂದು ವೇಳೆ, ಅಸಹಕಾರ ಚಳವಳಿಯನ್ನು ಕೈಬಿಡಬೇಕಾದರೆ, ಒಪ್ಪಂದಕ್ಕೆ ಸಹಿ ಹಾಕಬೇಕಾದರೆ ಭಗತ್ ಸಿಂಗ್‌ಗೆ ಗಲ್ಲುಶಿಕ್ಷೆಯಿಂದ ಮಾಫಿ ನೀಡಬೇಕೆಂದು ಗಾಂಧೀಜಿ ಯೇನಾದರೂ ಪೂರ್ವಷರತ್ತು ಹಾಕಿದ್ದರೆ, ಬ್ರಿಟಿಷರಿಗೆ ಬೇರೆ ಮಾರ್ಗವೇ ಇರುತ್ತಿರಲಿಲ್ಲ. ಆದರೆ ಭಗತ್ ಸಿಂಗ್ ಸಾಯುವುದು ಬ್ರಿಟಿಷರಿಗಿಂತ ಗಾಂಧೀಜಿಗೆ ಅನಿವಾರ್ಯವಾಗಿತ್ತು! ಬಾಲ ಗಂಗಾಧರ ತಿಲಕರ ಮರಣದ ಆ ಸ್ಥಾನವನ್ನು ಬಹಳ convenient ಆಗಿ ಆಕ್ರಮಿಸಿದ್ದ ಗಾಂಧೀಜಿಗೆ ಭಯವಿದ್ದಿದ್ದು ಭಗತ್ ಸಿಂಗ್ ಮತ್ತು ಸುಭಾಷ್‌ಚಂದ್ರ ಬೋಸ್ ಬಗ್ಗೆ ಮಾತ್ರ. 23 ವರ್ಷದ ಭಗತ್ ಸಿಂಗ್, 62 ವರ್ಷದ ಗಾಂಧೀಜಿಯಷ್ಟೇ ಹೆಸರುವಾಸಿಯಾಗಿದ್ದ. ಗಾಂಧೀಜಿ ಹೇಗೆತಾನೇ ಸಹಿಸಿಯಾರು? ಒಂದು ವೇಳೆ 1931ರಲ್ಲಿ ಭಗತ್ ಸಿಂಗ್‌ನನ್ನು ಗಲ್ಲಿಗೇರಿಸದಿದ್ದರೆ ಹೇಗೆ ಗಾಂಧಿ-ಭಗತ್ ಚಿಂತನೆ ನಡುವೆ ಸಂಘರ್ಷ ಆರಂಭವಾಗು ತ್ತಿತ್ತು ಎಂಬುದನ್ನು “To Make the Deaf Hear: Ideology and Programme of Bhagat Singh and His Comrades&#8221; ಪುಸ್ತಕದಲ್ಲಿ ವಿಶ್ಲೇಷಿಸಲಾಗಿದೆ. ಇದೇನೇ ಇರಲಿ, ಗಾಂಧೀಜಿ ದ್ರೋಹ ಬಗೆದ ನಂತರ, ಭಗತ್‌ನನ್ನು ಉಳಿಸಿಕೊಳ್ಳಲು ಬೇರಾವುದೇ ಮಾರ್ಗಗಳು ಉಳಿದಿರಲಿಲ್ಲ. 1931, ಮಾರ್ಚ್ ೨೩ರಂದು ರಾತ್ರಿ 7 ಗಂಟೆ 33 ನಿಮಿಷಕ್ಕೆ ಮೊದಲು ಸುಖದೇವ್, ನಂತರ ಭಗತ್ ಸಿಂಗ್, ಕೊನೆಯವನಾಗಿ ರಾಜಗುರು ಮುಖಕ್ಕೆ ಕಪ್ಪುಬಟ್ಟೆ ತೊಡದೆ, ಕೈಗೆ ಕೋಳ ಹಾಕಿಸಿಕೊಳ್ಳದೆ ಕುಣಿಕೆಯನ್ನು ಚುಂಬಿಸಿ ನಗುತ್ತಲೇ ತಲೆಕೊಟ್ಟು ನಮ್ಮಿಂದ ದೂರವಾದರು.</p>
<p>ಆದರೆ ಈ ದೇಶ ಇಂದಿಗೂ ಅವರ ತ್ಯಾಗವನ್ನು ಮರೆತಿಲ್ಲ.</p>
<p>ಅಕ್ಟೋಬರ್ 2, ನವೆಂಬರ್ 14ನೇ ದಿನಾಂಕವನ್ನು ಪ್ರತಿ ವರ್ಷವೂ ರಾಷ್ಟ್ರೀಯ ಹಬ್ಬವೆಂಬಂತೆ ಆಚರಿಸುತ್ತೇವೆ. ಆದರೆ ರಾಷ್ಟ್ರೀಯ ನಿಯತಕಾಲಿಕೆಯೊಂದು ಇತ್ತೀಚೆಗೆ ನಡೆಸಿದ ಸಮೀಕ್ಷೆ ಯಲ್ಲಿ ಜನಪ್ರಿಯ ಸ್ವಾತಂತ್ರ್ಯ ಹೋರಾಟಗಾರರ ಯಾದಿಯಲ್ಲಿ ಗಾಂಧೀಜಿಯ ಸ್ಥಾನ 6ನೇಯದ್ದಾದರೆ ಭಗತ್ ಸಿಂಗ್, ಸುಭಾಷ್‌ಚಂದ್ರ ಬೋಸ್ ಮೊದಲೆರಡು ಸ್ಥಾನಗಳಲಿದ್ದರು!!</p>
<p>ಏ ಮೇರೆ ವತನ್ ಕೆ ಲೋಗೋ<br />
ಜರ ಆಂಖ್ ಮೆ ಭರಲೋ ಪಾನಿ<br />
ಜೋ ಶಹೀದ್ ಹುವೇ ಹೈ ಉನ್ ಕಿ<br />
ಜರಾ ಯಾದ್ ಕರೋ ಕುರ್‌ಬಾನಿ</p>
<p>ಈ ಹಾಡನ್ನು ನೆನಪಿಸಿಕೊಂಡಾಗಲೆಲ್ಲ ದೇಶಕ್ಕಾಗಿ ಮಡಿದ ವೀರಕಲಿಗಳು ನೆನಪಾಗುತ್ತಾರೆ. ಭಗತ್ ಸಿಂಗ್ ಜನಿಸಿದ್ದು ೧೯೦೭, ಸೆಪ್ಟೆಂಬರ್ ೨೭ರಂದು. ಆತ ಸರ್ದಾರ್ ಕಿಶನ್ ಸಿಂಗ್ ಮತ್ತು ವಿದ್ಯಾವತಿಯವರ ಮೂರನೇ ಪುತ್ರ. ಇಡೀ ಕುಟುಂಬವೇ ಕ್ರಾಂತಿಕಾರಿಗಳಿಂದ ಕೂಡಿತ್ತು. ಕಿಶನ್‌ಸಿಂಗ್ ಮತ್ತು ಅವರ ಕಿರಿಯ ಸೋದರರಾದ ಸ್ವರಣ್‌ಸಿಂಗ್ ಹಾಗೂ ಅಜಿತ್ ಸಿಂಗ್ ಮೂವರೂ ಜೈಲು ಸೇರಿದ್ದರು. ಭಗತ್ ಸಿಂಗ್ ಜನಿಸುವ ವೇಳೆಗೆ ಸರಿಯಾಗಿ ಕಿಶನ್ ಸಿಂಗ್ ಮತ್ತು ಸ್ವರಣ್ ಸಿಂಗ್ ಬಿಡುಗಡೆಯಾದರು. ಅಜಿತ್ ಸಿಂಗ್ ಕೂಡ ಬಿಡುಗಡೆಯಾಗುವ ಸಂದರ್ಭ ಬಂತು. ಹೀಗೆ ಜನನದೊಂದಿಗೆ ಇಡೀ ಕುಟುಂಬಕ್ಕೇ ಅದೃಷ್ಟ ತಂದನೆಂಬ ಕಾರಣಕ್ಕೆ ಆತನ ಅಜ್ಜಿ ಭಗತ್ ಸಿಂಗ್ ‘ಭಗವಾನ್‌ವಾಲಾ’ (ಅದೃಷ್ಟವಂತ) ಎಂದು ಪ್ರೀತಿಯಿಂದ ಕರೆಯಲಾರಂಭಿಸಿದರು.</p>
<p>ಅಂತಹ ಪುತ್ರನಿಗೆ ಜನ್ಮಕೊಟ್ಟ ಭಾರತಾಂಬೆ ಕೂಡ ಅದೃಷ್ಟ ವಂತಳಲ್ಲವೆ?!</p>
<p>&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8212;&#8211;</p>
<p><em><strong>ಆತ ನಾಸ್ತಿಕನಾಗಿದ್ದನೇ? ಕಮ್ಯುನಿಸ್ಟನಾ? ಅಥವಾ ರಾಷ್ಟ್ರೀಯವಾದಿಯೇ?</strong></em></p>
<p>ಭಗತ್ ಸಿಂಗ್ ಜನಿಸಿ 103 ವರ್ಷಗಳಾದರೂ ಇಂಥದ್ದೊಂದು ಚರ್ಚೆ ಇಂದಿಗೂ ನಡೆಯುತ್ತಿದೆ. ಆತ ನಾಸಿಕ್ತನಾಗಿದ್ದ. ದೇವರಲ್ಲಿ ಅವನಿಗೆ ನಂಬಿಕೆ ಇರಲಿಲ್ಲ. ಹೀಗಾಗಿ ಹಿಂದುತ್ವದ ಜತೆಗೆ ಅವನು ಮಾಡುವಂಥದ್ದೇನೂ ಇರಲಿಲ್ಲ ಎನ್ನುವುದು ಕಮ್ಯುನಿಸ್ಟರ ವಾದ. ಕಮ್ಯನಿಸ್ಟ್ ಪಕ್ಷ ಭಾರತದಲ್ಲಿ ಸ್ಥಾಪನೆಯಾಗಿದ್ದು 1925ರಲ್ಲಿ. ಆದರೆ ಭಗತ್‌ಸಿಂಗ್ ಕೊನೆಯುಸಿರೆಳೆಯುವವರೆಗೂ ಕಮ್ಯುನಿಸ್ಟ್ ಪಕ್ಷದ ಸದಸ್ಯನಾಗಲಿಲ್ಲ.</p>
<p>ಆತ ಶುದ್ಧ ರಾಷ್ಟ್ರೀಯವಾದಿಯಾಗಿದ್ದ. ದೇಶವನ್ನು ವಿದೇಶಿ ಆಕ್ರಮಣಕಾರರಿಂದ ಬಿಡುಗಡೆಗೊಳಿಸುವುದು ಅವನ ಜೀವನದ ಪರಮ ಧ್ಯೇಯವಾಗಿತ್ತು. ಆತನಲ್ಲಿ ಅಪ್ರತಿಮ ದೇಶಭಕ್ತಿ ಮೂಡುವಲ್ಲಿ ಅವನ ಕುಟುಂಬ, ಅವನು ಬೆಳೆದ ವಾತಾವರಣು ಕಾರಣವಾಗಿದ್ದವು. ಭಗತ್ ಸಿಂಗ್ ಹುಟ್ಟಿದ್ದು ದೇಶಭಕ್ತ ಕುಟುಂಬದಲ್ಲಿ. ಆ ಕುಟುಂಬದವರು ಆರ್ಯ ಸಮಾಜದ ಅನುಯಾಯಿಗಳಾಗಿದ್ದರು. ಅವನ ತಾತ ಅರ್ಜುನ್ ಸಿಂಗ್, ಆರ್ಯ ಸಮಾಜದ ಸದಸ್ಯರಾಗಿದ್ದರು. ತಂದೆ ಕಿಶನ್ ಸಿಂಗ್, ಚಿಕ್ಕಪ್ಪ ಅಜಿತ್ ಸಿಂಗ್ ಗದಾರ್ ಪಕ್ಷದ ಸದಸ್ಯರಾಗಿದ್ದರು. ಭಾರತದಿಂದ ಬ್ರಿಟಿಷರನ್ನು ಒದ್ದೋಡಿಸುವ ನಿಟ್ಟಿನಲ್ಲಿ ಈ ಪಕ್ಷವನ್ನು ಅಮೆರಿಕದಲ್ಲಿ ಸ್ಥಾಪಿಸಲಾಗಿತ್ತು.</p>
<p>ದಯಾನಂದ ಸರಸ್ವತಿ ಸ್ಥಾಪಿಸಿದ ಆರ್ಯ ಸಮಾಜದ ತತ್ತ್ವ, ಸಿದ್ಧಾಂತಗಳಿಂದ ಭಗತ್ ಸಿಂಗ್ ಪ್ರಭಾವಿತನಾಗಿದ್ದ. ಆರ್ಯ ಸಮಾಜ ಸ್ಥಾಪನೆಯಾಗಿದ್ದೇ ಸಾಮಾಜಿಕ ಅಸಮಾನತೆಯನ್ನು ಹೊರ ಹಾಕುವುದು ಮತ್ತು ಯುವಕರಲ್ಲಿ ದೇಶಭಕ್ತಿಯನ್ನು ಮೂಡಿಸುವ ಉದ್ದೇಶದಿಂದ. ಆರ್ಯ ಸಮಾಜ ಮೂರ್ತಿ ಪೂಜೆಯನ್ನು ವಿರೋಧಿಸುತ್ತಾದರೂ, ವೇದಗಳ ಸಾರ್ವಭೌಮತೆಯನ್ನು ಅದು ಎತ್ತಿ ಹಿಡಿದಿತ್ತು. ಹೀಗಾಗಿ ಭಗತ್ ಸಿಂಗ್‌ನಲ್ಲಿ ರಾಷ್ಟ್ರೀಯತೆ ಪುಟಿದೇಳುತ್ತಿತ್ತು. ಅಲ್ಲದೆ ಛತ್ರಪತಿ ಶಿವಾಜಿ ಮತ್ತು ಮಹಾರಾಣಾ ಪ್ರತಾಪ್ ಅವರ ದೇಶಪ್ರೇಮದಿಂದ ಆತ ಪ್ರಭಾವಿತನಾಗಿದ್ದ. ಇದನ್ನು ಭಗತ್ ಸಿಂಗ್ ಬಹಿರಂಗವಾಗಿ ಹೇಳಿಕೊಂಡಿದ್ದ. ಅಲ್ಲದೆ, ಭಗತ್ ಸಿಂಗ್, ರಾಜಕೀಯದ ಪ್ರಥಮ ಪಾಠವನ್ನು ಕಲಿತುಕೊಂಡಿದ್ದು ಶಚೀಂದ್ರನಾಥ್ ಸನ್ಯಾಲ್ ಅವರಿಂದ. ಸನ್ಯಾಲ್ ಅವರು ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಶನ್‌ನ ಸ್ಥಾಪಕರು. ಹೀಗಾಗಿ ಭಗತ್ ಸಿಂಗ್ ಕಮ್ಯುನಿಸ್ಟ್ ಪಕ್ಷದಿಂದ ಯಾವುದೇ ರಾಜಕೀಯ ಪಾಠವನ್ನೂ ಕಲಿಯಲಿಲ್ಲ ಎನ್ನುವುದು ಸ್ಪಷ್ಟ. ಭಗತ್ ಸಿಂಗ್‌ನ ಆಪ್ತರಾಗಿದ್ದ ಆರ್ಯ ಸಮಾಜವಾದಿ ಮತ್ತು ಹಿಂದೂ ರಾಷ್ಟ್ರದ ಪ್ರಚಾರಕನಾಗಿದ್ದ ರಾಮ ಪ್ರಸಾದ್ ಬಿಸ್ಮಿಲ್, ಚಂದ್ರಶೇಖರ ಆಜಾದ್ ಎಲ್ಲರೂ ಸನಾತನ ಧರ್ಮದ ಪ್ರತಿಪಾದಕರಾಗಿದ್ದರು. ಅದರ ಅನುಯಾಯಿಗಳಾಗಿದ್ದರು. ಮಿಗಿಲಾಗಿ, ‘ಭಗತ್’ ಎಂದರೇ ‘ಭಕ್ತ’ ಎಂದರ್ಥ.</p>
]]></content:encoded>
			<wfw:commentRss>http://pratapsimha.com/2010/09/28/bhagatsingh/feed/</wfw:commentRss>
		<slash:comments>41</slash:comments>
		</item>
		<item>
		<title>ಸ್ಫೂರ್ತಿಯ ಅಣೆಕಟ್ಟು ಸರ್.ಎಂ.ವಿ</title>
		<link>http://pratapsimha.com/2010/09/15/sirmv/</link>
		<comments>http://pratapsimha.com/2010/09/15/sirmv/#comments</comments>
		<pubDate>Wed, 15 Sep 2010 12:21:43 +0000</pubDate>
		<dc:creator>Pratap Simha</dc:creator>
				<category><![CDATA[Others]]></category>

		<guid isPermaLink="false">http://pratapsimha.com/?p=728</guid>
		<description><![CDATA[ಜ್ಯೋತಿ ಬಸು 25 ವರ್ಷ ಪಶ್ಚಿಮ ಬಂಗಾಳವನ್ನಾಳಿದರು. ಕರುಣಾನಿಧಿ ಇದುವರೆಗೂ 18 ವರ್ಷ ತಮಿಳು ನಾಡನ್ನಾಳಿದ್ದಾರೆ. ನವೀನ್ ಪಟ್ನಾಯಕ್ ಕಳೆದ 10 ವರ್ಷಗಳಿಂದ ಒರಿಸ್ಸಾವನ್ನಾಳುತ್ತಿದ್ದಾರೆ. ಇವರ ಹೆಸರು ಹೇಳಿದಾಕ್ಷಣ, ಕೇಳಿದಾಕ್ಷಣ ನಿಮಗೆ ಒಂದಾದರೂ ಸಾಧನೆ ನೆನಪಾಗುತ್ತದೆಯೇ? ಅಳಿದ ಮೇಲೂ ನೆನಪಿಸಿ ಕೊಳ್ಳುವಂತಹ ಒಂದಾದರೂ ಸಾಧನೆ ಮಾಡಿದ್ದಾರೆಯೇ? ಮಾಡುವ ಲಕ್ಷ್ಮಣವಾದರೂ ಇದೆಯೇ? ಆದರೆ&#8230; ಮೈಸೂರು ಒಡೆಯರು ಹಾಗೂ ಬ್ರಿಟಿಷರ ಅಂಕುಶದಡಿ 1912ರಿಂದ 1918ರವರೆಗೂ ಆಡಳಿತ ನಡೆಸಿದ ಸರ್. ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ಆಳಿದ್ದು ಕೇವಲ 6 ವರ್ಷಗಳಾದರೂ, ಮಾಡಿದ್ದು ಎಂತಹ [...]]]></description>
			<content:encoded><![CDATA[<p><a href="http://pratapsimha.com/wp-content/uploads/2010/09/SirMV.png"><img class="aligncenter size-full wp-image-729" title="SirMV" src="http://pratapsimha.com/wp-content/uploads/2010/09/SirMV.png" alt="" width="180" height="248" /></a></p>
<p>ಜ್ಯೋತಿ ಬಸು 25 ವರ್ಷ ಪಶ್ಚಿಮ ಬಂಗಾಳವನ್ನಾಳಿದರು. ಕರುಣಾನಿಧಿ ಇದುವರೆಗೂ 18 ವರ್ಷ ತಮಿಳು ನಾಡನ್ನಾಳಿದ್ದಾರೆ. ನವೀನ್ ಪಟ್ನಾಯಕ್ ಕಳೆದ 10 ವರ್ಷಗಳಿಂದ ಒರಿಸ್ಸಾವನ್ನಾಳುತ್ತಿದ್ದಾರೆ. ಇವರ ಹೆಸರು ಹೇಳಿದಾಕ್ಷಣ, ಕೇಳಿದಾಕ್ಷಣ ನಿಮಗೆ ಒಂದಾದರೂ ಸಾಧನೆ ನೆನಪಾಗುತ್ತದೆಯೇ? ಅಳಿದ ಮೇಲೂ ನೆನಪಿಸಿ ಕೊಳ್ಳುವಂತಹ ಒಂದಾದರೂ ಸಾಧನೆ ಮಾಡಿದ್ದಾರೆಯೇ? ಮಾಡುವ ಲಕ್ಷ್ಮಣವಾದರೂ ಇದೆಯೇ?</p>
<p>ಆದರೆ&#8230;</p>
<p>ಮೈಸೂರು ಒಡೆಯರು ಹಾಗೂ ಬ್ರಿಟಿಷರ ಅಂಕುಶದಡಿ 1912ರಿಂದ 1918ರವರೆಗೂ ಆಡಳಿತ ನಡೆಸಿದ ಸರ್. ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ಆಳಿದ್ದು ಕೇವಲ 6 ವರ್ಷಗಳಾದರೂ, ಮಾಡಿದ್ದು ಎಂತಹ ಸಾಧನೆ ಅಲ್ಲವೆ?!</p>
<p>ಕನ್ನಂಬಾಡಿ ಕಟ್ಟೆ, ಹಿಂದೂಸ್ಥಾನ್ ಏರ್‌ಕ್ರಾಫ್ಟ್ ಫ್ಯಾಕ್ಟರಿ(ಈಗ ಎಚ್‌ಎಎಲ್), ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ, ಸರಕಾರಿ ಸಾಬೂನು ಕಾರ್ಖಾನೆ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಕನ್ನಡ ಸಾಹಿತ್ಯ ಪರಿಷತ್, ಮೈಸೂರು ವಿವಿ, ಶಿವನಸಮುದ್ರ, ಜೋಗದ ಜಲವಿದ್ಯುತ್ ಯೋಜನೆ, ಬ್ಲಾಕ್ ಸಿಸ್ಟಮ್(ನೀರಾವರಿ ಯೋಜನೆ), ಪ್ಯಾರಾಸಿಟಾಯ್ಡ್ಸ್ ಲ್ಯಾಬೋ ರೇಟರಿ, ಮೈಸೂರು ಸಕ್ಕರೆ ಕಾರ್ಖಾನೆ, ಮೈಸೂರು ಸ್ಯಾಂಡಲ್ ಸೋಪ್, ಪ್ರಿಂಟಿಂಗ್ ಪ್ರೆಸ್, ಭಟ್ಕಳ ಬಂದರು, ಶ್ರೀಗಂಧ ಎಣ್ಣೆ ತಯಾರಿಕೆ, ಹಿಂದೂ ಮಾಡರ್ನ್ ಹೋಟೆಲ್, ಬೆಂಗಳೂರಿನ ಸಾರ್ವಜನಿಕ ಗ್ರಂಥಾಲಯಗಳು, ಬೆಂಗಳೂರು ವಿವಿ ಎಂಜಿನಿಯರಿಂಗ್ ಕಾಲೇಜು, ಜಯಚಾಮರಾಜೇಂದ್ರ ವೃತ್ತಿ ತರಬೇತಿ ಸಂಸ್ಥೆ, ಕಬ್ಬನ್ ಪಾರ್ಕ್‌ನ ಸೆಂಚುರಿ ಕ್ಲಬ್, ಪೂನಾ ಡೆಕ್ಕನ್ ಕ್ಲಬ್, ಹೆಬ್ಬಾಳದ ಕೃಷಿ ಸಂಶೋಧನಾ ಕೇಂದ್ರ, ದೇಶದಲ್ಲಿಯೇ ಮೊಟ್ಟಮೊದಲಿಗೆ ಕಡ್ಡಾಯ ಪ್ರಾಥಮಿಕ ಶಿಕ್ಷಣ ಜಾರಿ, ಗ್ವಾಲಿಯರ್‌ನ ಟೈಗರ್ ಡ್ಯಾಂ, ಪುಣೆಯ ಖಡಕ್‌ವಾಸ್ಲಾ ಜಲಾಶಯ ಹಾಗೂ ಕನ್ನಂಬಾಡಿಗೆ ವಿಶ್ವದಲ್ಲಿಯೇ ಮೊದಲ ಸ್ವಯಂಚಾಲಿತ ಗೇಟ್‌ಗಳ ಅಳವಡಿಕೆ, ಒರಿಸ್ಸಾದ ಮಹಾನದಿ ಪ್ರವಾಹ ನಿಯಂತ್ರಣ ಯೋಜನೆ&#8230;.</p>
<p>ಇವೆಲ್ಲವೂ ಅವರ ಕನಸಿನ ಕೂಸುಗಳೇ. ಅವರ ದೂರದೃಷ್ಟಿಯ ಫಲಗಳೇ. ಒಬ್ಬ ವ್ಯಕ್ತಿಯಿಂದ ಒಂದು ದೇಶಕ್ಕೆ ಇಷ್ಟೆಲ್ಲಾ ಲಾಭವಾದ ಮತ್ತೊಂದು ಉದಾಹರಣೆ ಜಗತ್ತಿನ ಯಾವ ಭಾಗದಲ್ಲಾದರೂ ಇದೆಯೆ? ಅಂತಹ ವ್ಯಕ್ತಿಯ ಬಗ್ಗೆ ಕೇಳಿದ್ದೀರಾ? 1915ರಲ್ಲೇ ಬ್ರಿಟನ್ ಸರಕಾರ ನೈಟ್ ಪದವಿ ಕೊಟ್ಟು ಗೌರವಿಸುತ್ತದೆಯೆಂದರೆ ವಿಶ್ವೇಶ್ವರಯ್ಯನವರ ವ್ಯಕ್ತಿತ್ವ, ಸಾಧನೆ ಎಂಥದ್ದಿರಬಹುದು? ಒಬ್ಬ ಒಳ್ಳೆಯ ವಿeನಿಯನ್ನು, ಎಂಜಿನಿಯರ್‌ನನ್ನು, ಸಾಫ್ಟ್‌ವೇರ್ ತಂತಜ್ಞನನ್ನು, ಆಡಳಿತಗಾರನನ್ನು ಖಂಡಿತ ಕಾಣಬಹುದು. ಆದರೆ ಇಷ್ಟೆಲ್ಲಾ ಗುಣಗಳೂ ಒಬ್ಬನೇ ವ್ಯಕ್ತಿಯಲ್ಲಿ ಅಡಗಿರುವುದು ಸಾಧ್ಯವೇ?</p>
<p>ಹೂವರ್ ಡ್ಯಾಮ್ ಇರುವುದು ಅಮೆರಿಕದಲ್ಲಿ.  ಅರಿಝೋನಾ ಮತ್ತು ನೆವಡಾ ರಾಜ್ಯಗಳ ಗಡಿಯಲ್ಲಿ ಬರುವ ಕೊಲರ್‍ಯಾಡೋ ನದಿಗೆ ಅಣೆಕಟ್ಟೆಯೊಂದನ್ನು ಕಟ್ಟಬೇಕೆಂಬ ಯೋಚನೆ ಯೇನೋ ಹೊಳೆದಿತ್ತು. ಆದರೆ ಅದು ಸಾಮಾನ್ಯ ಮಾತಾಗಿರಲಿಲ್ಲ. 1922ರಲ್ಲಿ ಈ ನದಿ ವ್ಯಾಪ್ತಿಯಲ್ಲಿ ಬರುವ ರಾಜ್ಯಗಳ ಪ್ರತಿನಿಧಿಗಳನ್ನೊಳಗೊಂಡ ಆಯೋಗವೊಂದನ್ನು ರಚನೆ ಮಾಡಲಾಯಿತು. ಅದರಲ್ಲಿ ಹರ್ಬರ್ಟ್ ಹೂವರ್ ಸರಕಾರದ ಪ್ರತಿನಿಧಿಯಾಗಿ ನಿಯುಕ್ತಿಗೊಂಡರು. ಅಧ್ಯಕ್ಷ ವಾರೆನ್ ಹಾರ್ಡಿಂಗ್ ಸಂಪುಟದಲ್ಲಿ ವಾಣಿಜ್ಯ ಸಚಿವರೂ ಆಗಿದ್ದ ಹೂವರ್ ವೃತ್ತಿಯಲ್ಲಿ ಇಂಜಿನಿಯರ್. ಹಾಗಾಗಿ ಅಣೆಕಟ್ಟು ನಿರ್ಮಾಣದ ರೂಪುರೇಷೆ ತಯಾರಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಅಣೆಕಟ್ಟು ನಿರ್ಮಾಣಕ್ಕೆ ಸಂಸತ್ತಿನ ಅನುಮೋದನೆ ದೊರೆತು ಕಾಮಗಾರಿ ಆರಂಭ ವಾಗುವ ವೇಳೆಗೆ ಹೂವರ್ ಅವರೇ ಅಧ್ಯಕ್ಷರಾದರು. 1931ರಲ್ಲಿ ಪ್ರಾರಂಭವಾದ ನಿರ್ಮಾಣ ಕಾರ್ಯ, 1936ರಲ್ಲಿ ಕೊನೆಗೊಂಡಿತು. ಆದರೆ 1932ರಲ್ಲಿ ನಡೆದ ಮರು ಚುನಾವಣೆಯಲ್ಲಿ ಸೋಲನುಭವಿಸಿದ ಹೂವರ್ ಅಣೆಕಟ್ಟು ನಿರ್ಮಾಣಗೊಳ್ಳುವ ಮೊದಲೇ ಅಧಿಕಾರ ಕಳೆದುಕೊಂಡಿದ್ದರು. ಆದರೇನಂತೆ ಆ ಕಾಲದಲ್ಲಿ ವಿಶ್ವದಲ್ಲಿಯೇ ಅತಿ ಎತ್ತರದ ಅಣೆಕಟ್ಟು ಎಂಬ ಖ್ಯಾತಿ ಪಡೆದ 726.4 ಅಡಿ ಎತ್ತರದ ಈ ಡ್ಯಾಮ್‌ಗೆ ಹೂವರ್ ಅವರ ಹೆಸರನ್ನೇ ಇಡಲಾಯಿತು.ಅದೊಂದು ಬರೀ ಅಣೆಕಟ್ಟಲ್ಲ. ಅಮೆರಿಕದ ಐತಿಹಾಸಿಕ ಸ್ಥಳಗಳಲ್ಲಿ ಒಂದು, ಐತಿಹಾಸಿಕ ಮೈಲುಗಲ್ಲು ಎಂದು ಗುರುತಿಸಲಾಗಿದೆ.</p>
<p>ಆದರೆ ನಮ್ಮ ವಿಶ್ವೇಶ್ವರಯ್ಯನವರು 1911ರಲ್ಲೇ ಜಗತ್ತಿನ ಹುಬ್ಬೇರಿಸಿದ್ದರು!</p>
<p>ಆ ಕಾಲದಲ್ಲಿ ಭಾರತದಲ್ಲೇ ಅತ್ಯಂತ ದೊಡ್ಡ ಅಣೆಕಟ್ಟು ಎಂಬ ಖ್ಯಾತಿ ಪಡೆದಿದ್ದ ಕನ್ನಂಬಾಡಿ(ಕೆಆರ್‌ಎಸ್) ಕಟ್ಟೆಯನ್ನು ಕೇವಲ ನಾಲ್ಕು ವರ್ಷಗಳಲ್ಲೇ ಕಟ್ಟಿ ಮುಗಿಸಿದ್ದರು. ಇಂದಿಗೂ ಗಡುವಿಗಿಂತ ಮೊದಲೇ ಪೂರ್ಣಗೊಂಡ ಭಾರತದ ಏಕೈಕ ಅಣೆಕಟ್ಟೆಯೆಂದರೆ ಕನ್ನಂಬಾಡಿ ಕಟ್ಟೆ ಮಾತ್ರ. ಅಷ್ಟೇ ಅಲ್ಲ, ಕನ್ನಂಬಾಡಿ ಕಟ್ಟೆಗೆ ಸ್ವಯಂ ಚಾಲಿತ ಗೇಟುಗಳನ್ನು ಅಳವಡಿಸಿದ ವಿಶ್ವೇಶ್ವರಯ್ಯ ನವರು ಜಗತ್ತಿನಲ್ಲಿಯೇ ಯಾರೂ ಮಾಡದ ಸಾಧನೆಯನ್ನೂ ಮಾಡಿದರು. ಇತ್ತ ಹೂವರ್ ಡ್ಯಾಮನ್ನು ಕಾಂಕ್ರೀಟಿನಿಂದ ಕಟ್ಟಿದರೆ ಕನ್ನಂಬಾಡಿ ಕಟ್ಟೆಯನ್ನು ಸುಣ್ಣ ಮತ್ತು ಬೆಲ್ಲದಿಂದ ಕಟ್ಟಿದರು. ಇಂದು ಕಾಂಕ್ರೀಟಿನಿಂದ ಕಟ್ಟಿದ ಅಣೆಕಟ್ಟುಗಳೇ ಸೋರುತ್ತವೆ. ಆದರೆ ಶತಮಾನ ಸಂಭ್ರಮದತ್ತ ಮುನ್ನುಗ್ಗುತ್ತಿರುವ ಕನ್ನಂಬಾಡಿ ಕಟ್ಟೆ ಇವತ್ತಿಗೂ ಭಾರತದಲ್ಲೇ ಅತ್ಯಂತ ಬಲಿಷ್ಠ ಅಣೆಕಟ್ಟು.</p>
<p>ಇಂತಹ ಅಣೆಕಟ್ಟನ್ನು ಕಟ್ಟಿದ ವಿಶ್ವೇಶ್ವರಯ್ಯನವರು ವೃತ್ತಿಯಲ್ಲಿ ಸಿವಿಲ್ ಎಂಜಿನಿಯರ್. 1883ರಲ್ಲಿ ಬಾಂಬೆ ವಿಶ್ವವಿದ್ಯಾಲಯದಲ್ಲಿ ರ್‍ಯಾಂಕ್‌ನೊಂದಿಗೆ ಎಂಜಿನಿಯರಿಂಗ್ ಡಿಗ್ರಿ ಮುಗಿಸಿದ ಅವರು, ಮೊದಲಿಗೆ ಬಾಂಬೆ ಸರಕಾರದ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ)ಯಲ್ಲಿ ಸಹಾಯಕ ಇಂಜಿನಿಯರ್ ಆಗಿ ಕೆಲಸಕ್ಕೆ ಸೇರಿದರು. ಆಗ ಸಿಂಧ್ ಪ್ರಾಂತ್ಯವೂ ಬಾಂಬೆಯ ಆಡಳಿತಕ್ಕೊಳ ಪಟ್ಟಿತ್ತು. ಹಾಗಾಗಿ ಜಲವಿತರಣೆ ಕಾಮಗಾರಿಯೊಂದನ್ನು ಕೈಗೆತ್ತಿಕೊಂಡ ವಿಶ್ವೇಶ್ವರಯ್ಯನವರು ಸಿಂಧೂ ನದಿಯಿಂದ ಸುಕ್ಕೂರಿಗೆ ನೀರು ಹರಿಸುವ ಮೂಲಕ ತಮ್ಮ ಜಾಣ್ಮೆಯ ಪರಿಚಯ ಮಾಡಿಕೊಟ್ಟರು. ದಕ್ಷಿಣ ಹಾಗೂ ಪಶ್ಚಿಮ ಭಾರತದಲ್ಲಿ ತೀವ್ರ ನೀರಿನ ತೊಂದರೆಯಿತ್ತು. ಹಾಗಾಗಿ ವಿಶ್ವೇಶ್ವರ್‍ಯನವರನ್ನು ಕೂಡಲೇ ಗುಜರಾತ್‌ನ ಸೂರತ್‌ಗೆ ವರ್ಗಾವಣೆ ಮಾಡಲಾಯಿತು. ಅಲ್ಲಿನ ನೀರು ಸರಬರಾಜು ಹಾಗೂ ಒಳಚರಂಡಿ ಸಮಸ್ಯೆಯನ್ನೂ ಯಶಸ್ವಿಯಾಗಿ ಪರಿಹರಿಸಿದರು. ಇಲ್ಲಿ ಗಮನಿಸಬೇಕಾದ ಬಹುಮುಖ್ಯ ಅಂಶವೆಂದರೆ 2001ರಲ್ಲಿ ತೀವ್ರ ಭೂಕಂಪಕ್ಕೆ ಗುರಿಯಾದ ಗುಜರಾತ್‌ನ ಕಛ್ ಮತ್ತು ಭುಜ್ ಜಿಲ್ಲೆಗಳು ಹೆಚ್ಚೂಕಡಿಮೆ ನಾಮಾವಶೇಷಗೊಂಡಂತಾದರೂ ಅಲ್ಲಿನ ನೀರು ಸರಬರಾಜು ವ್ಯವಸ್ಥೆ ಮಾತ್ರ ಹಾನಿಗೊಳಗಾಗಿರಲಿಲ್ಲ! ಏಕೆಂದರೆ ಅದನ್ನು ರೂಪಿಸಿದ್ದು ವಿಶ್ವೇಶ್ವರಯ್ಯನವರು!!</p>
<p>ಆ ಕಾಲದಲ್ಲಿ ಸಿಂಧ್ ಹೊರತುಪಡಿಸಿದರೆ ಬಾಂಬೆ ಪ್ರಾಂತ್ಯ ದಲ್ಲಿ ಅತಿ ಹೆಚ್ಚು ನೀರಾವರಿಯನ್ನು ಹೊಂದಿದ್ದ ಪ್ರದೇಶವೆಂದರೆ ಪೂನಾ. ಸೂರತ್‌ನಿಂದ ವಿಶ್ವೇಶ್ವರಯ್ಯನವರನ್ನು  ಪೂನಾಕ್ಕೆ ವರ್ಗಾವಣೆ ಮಾಡಲಾಯಿತು. ಅಲ್ಲಿ ನೀರನ್ನು ಪೋಲು ಮಾಡದೆ ಬಳಸುವ ವ್ಯವಸಾಯ ಕ್ರಮವೊಂದನ್ನು ಸಿದ್ಧಪಡಿಸಿ ದರು. ಅದೇ ‘ಬ್ಲಾಕ್ ಸಿಸ್ಟಮ್’. 1903ರಲ್ಲಿ ಪೂನಾ ಬಳಿಯ ಖಡಕ್‌ವಾಸ್ಲಾ ಜಲಾಶಯಕ್ಕೆ ಸ್ವಯಂಚಾಲಿತ ಗೇಟ್‌ಗಳನ್ನು ಅಳವಡಿಸಿದ ಅವರು, ಅಂತಹ ಸಾಧನೆಗೈದ ವಿಶ್ವದ ಏಕೈಕ ವ್ಯಕ್ತಿ ಎನಿಸಿದರು.</p>
<p>ಹೈದರಾಬಾದ್, ವಿಶಾಖಪಟ್ಟಣಗಳನ್ನು ಪ್ರವಾಹದಿಂದ ರಕ್ಷಿಸುವುದಕ್ಕೂ ಯೋಜನೆ ಕೈಗೊಂಡರು. ಹೈದರಾಬಾದ್ ಸರಕಾರ 1909ರಲ್ಲಿ ವಿಶ್ವೇಶ್ವರಯ್ಯನವರನ್ನೇ ಮುಖ್ಯ ಎಂಜಿನಿಯರ್ ಆಗಿ ನೇಮಕ ಮಾಡಿತು. ಇಂತಹ ವಿಶ್ವೇಶ್ವರಯ್ಯ ನವರು 1912ರಲ್ಲಿ ನಮ್ಮ ಮೈಸೂರು ರಾಜ್ಯದ ದಿವಾನರಾಗಿ ನೇಮಕಗೊಂಡಿದ್ದು ಇಡೀ ಕನ್ನಡನಾಡಿನ ಅದೃಷ್ಟವೆಂದರೆ ಖಂಡಿತ ತಪ್ಪಾಗದು. ಅವರ ಸಾಧನೆಯನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. 1913ರಲ್ಲಿ ‘ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, 1915ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪಿಸಿದ ಅವರು, 1916ರಲ್ಲಿ ಮೈಸೂರು ವಿಶ್ವವಿದ್ಯಾನಿಲಯವನ್ನು ಪ್ರಾರಂಭಿಸುವ ಮೂಲಕ eನ ಪಸರಿಸುವಂತಹ ಅಮೂಲ್ಯ ಕಾಯಕಕ್ಕೂ ಕೈಹಾಕಿದರು. ೧೯೧೭ರಲ್ಲಿ ಅವರು ಸ್ಥಾಪಿಸಿದ ‘ಬೆಂಗಳೂರು ವಿವಿ ಎಂಜಿನಿಯರಿಂಗ್ ಕಾಲೇಜು’ ದೇಶದಲ್ಲಿಯೇ ಮೊದಲು ಆರಂಭವಾದ ಎಂಜಿನಿಯರಿಂಗ್ ಸಂಸ್ಥೆಗಳಲ್ಲಿ ಒಂದಾಗಿದೆ. ಇತ್ತ ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ, ಮೈಸೂರ್ ಸ್ಯಾಂಡಲ್ ಸೋಪ್, ಶ್ರೀಗಂಧ ಎಣ್ಣೆ ತಯಾರಿಕೆ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ದುಡಿಯುವ ಕೈಗಳಿಗೆ ಕೆಲಸ ನೀಡಿದ್ದು ಮಾತ್ರವಲ್ಲ, ಕನ್ನಂಬಾಡಿ ಕಟ್ಟಿ ಅನ್ನವನ್ನೂ ಕೊಟ್ಟರು.</p>
<p>ಅಷ್ಟು ಮಾತವಲ್ಲ, ಇವತ್ತು ಐಟಿ ಅಂತ ನಾವು ಏನನ್ನು ಹೆಮ್ಮೆ ಪಡುತ್ತೇವೆ ಅದರ ಬೀಜ ಬಿತ್ತಿದವರೇ ವಿಶ್ವೇಶ್ವರಯ್ಯ! ಅವರಿಗೆ ನಮ್ಮಲ್ಲೇ ಕಾರು ತಯಾರಿಸಬೇಕೆಂಬ ಹೆಬ್ಬಯಕೆಯಿತ್ತು. ಅದಕ್ಕಾಗಿ ಐದು ತಿಂಗಳುಗಳ ಕಾಲ ಅಮೆರಿಕ ಮತ್ತು ಯುರೋಪನ್ನು ಸುತ್ತಿ ಬಂದರು. ಅವರ ಮಹತ್ವಾಕಾಂಕ್ಷಿ ಯೋಜನೆಗೆ ಮೈಸೂರು ಮಹಾರಾಜರು ಜಾಗವನ್ನೂ ಕೊಟ್ಟರು. ಆದರೆ ಭಾರತದ ಚುಕ್ಕಾಣಿ ಹಿಡಿದಿದ್ದ ಬ್ರಿಟಿಷರು ಬಿಡಲಿಲ್ಲ. ವಿಶ್ವೇಶ್ವರಯ್ಯನವರು ಧೃತಿಗೆಡಲಿಲ್ಲ. ಅದೇ ಜಾಗದಲ್ಲಿ ಏರ್‌ಕ್ರಾಫ್ಟ್ ರಿಪೇರಿ ಮಾಡುವುದಾಗಿ ಹಿಂದೂಸ್ಥಾನ್ ಏರ್‌ಕ್ರಾಫ್ಟ್ ಫ್ಯಾಕ್ಟರಿ ಸ್ಥಾಪಿಸಿದರು. ಹಾಗಾಗಿ ಕಾನ್ಪುರಕ್ಕೆ ಬದಲು ಬೆಂಗಳೂರು ಏರ್‌ಕ್ರಾಫ್ಟ್ ಸೆಂಟರ್ ಆಯಿತು. ಟಾಟಾ ಇನ್‌ಸ್ಟಿಟ್ಯೂಟ್(ಐಐಎಸ್‌ಸಿ)ನ ಮನವೊಲಿಸಿದ ವಿಶ್ವೇಶ್ವರಯ್ಯನವರು ಏರೋನಾಟಿಕ್ಸ್ ಡಿಪಾರ್ಟ್‌ಮೆಂಟ್ ಪ್ರಾರಂಭಕ್ಕೆ ಕಾರಣರಾದರು. ಅದರಿಂದಾಗಿ ಬಾಹ್ಯಾಕಾಶ ಸಂಬಂಧಿತ ಸಂಶೋಧನೆ ಬೆಂಗಳೂರಿನಲ್ಲಿ ಪಾರಂಭವಾಯಿತು. ಏರ್‌ಫೋರ್ಸ್ ನೆಲೆಯೂ ಬಂತು. ಕೌನ್ಸಿಲ್ ಫಾರ್ ಸೈಂಟಿಫಿಕ್ ಆಂಡ್ ಇಂಡಸ್ಟ್ರಿಯಲ್ ರೀಸರ್ಚ್(ಸಿಎಸ್‌ಐಆರ್), ನ್ಯಾಷನಲ್ ಏರೋನಾಟಿಕಲ್ಸ್ ಲಿಮಿಟೆಡ್(ಎನ್.ಎ.ಎಲ್) ಅನ್ನು ಸ್ಥಾಪನೆ ಮಾಡಿದರು. ಡಿಆರ್ ಡಿಓ ಕೂಡ ಏರೋನಾಟಿಕ್ಸ್‌ಗೆ ಸಂಬಂಧಿತ ಸಂಶೋಧನೆಗಳನ್ನು ಬೆಂಗಳೂರಿಗೆ ವರ್ಗಾಯಿಸಿತು. ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್‌ಗಳು ಅತಿ ಹೆಚ್ಚು ಬೇಕಾಗಿರುವುದೇ ಏರೋನಾಟಿಕ್ಸ್‌ಗೆ. ಅವೂ ಬಂದವು. ಉಪಗ್ರಹ ಬಳಕೆ ಆರಂಭವಾಯಿತು. ಸಂಪರ್ಕ ಜಾಲ ರೂಪುಗೊಂಡಿತು. ಅದು ಐಟಿ ಆಗಮನಕ್ಕೆ ದಾರಿ ಮಾಡಿಕೊಟ್ಟಿತು. Spin-off ಅಂದರೆ ಇದೇ. ಅಷ್ಟೇ ಅಲ್ಲ, ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಯ ಜನರು ಇಂದು ಅನ್ನ ತಿನ್ನುತ್ತಿದ್ದರೆ, ಬೆಂಗಳೂರಿನ ಜನರು ನೀರು ಕುಡಿಯುತ್ತಿದ್ದರೆ ಅದರ ಹಿಂದೆ ವಿಶ್ವೇಶ್ವರಯ್ಯನವರ ಪರಿಶ್ರಮವಿದೆ, ದೂರದೃಷ್ಟಿಯಿದೆ. ಇವತ್ತು ವಿಶ್ವೇಶ್ವರಯ್ಯನವರ ಜನ್ಮದಿನ. ಅವರು ಈ ಭುವಿಗೆ ಬಂದು ಇಂದಿಗೆ 150 ವರ್ಷಗಳಾದವು. ಆ ಮಹಾನ್ ಚೇತನವನ್ನು ನೆನಪಿಸಿಕೊಳ್ಳದೆ ಇರಲಾದೀತೆ?</p>
<p>Happy Engineer’s Day</p>
]]></content:encoded>
			<wfw:commentRss>http://pratapsimha.com/2010/09/15/sirmv/feed/</wfw:commentRss>
		<slash:comments>15</slash:comments>
		</item>
	</channel>
</rss>

