<?xml version="1.0" encoding="UTF-8"?>
<rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Pratap Simha &#187; Bettale-Jagattu</title>
	<atom:link href="http://pratapsimha.com/category/bettale-jagattu/feed/" rel="self" type="application/rss+xml" />
	<link>http://pratapsimha.com</link>
	<description>Columnist, Writer &#38; Journalist</description>
	<lastBuildDate>Sat, 04 Feb 2012 12:55:00 +0000</lastBuildDate>
	<language>en</language>
	<sy:updatePeriod>hourly</sy:updatePeriod>
	<sy:updateFrequency>1</sy:updateFrequency>
	<generator>http://wordpress.org/?v=3.1</generator>
		<item>
		<title>ಇಂಗ್ಲೆಂಡ್್ನಲ್ಲಿ &#8216;ಜಂಟಲ್್ಮನ್ಸ್್&#8217;, ಭಾರತದಲ್ಲಿ &#8216;ಬ್ಯುಸಿನೆಸ್್ಮನ್ಸ್್&#8217; ಗೇಮ್!</title>
		<link>http://pratapsimha.com/2012/02/04/game/</link>
		<comments>http://pratapsimha.com/2012/02/04/game/#comments</comments>
		<pubDate>Sat, 04 Feb 2012 09:05:12 +0000</pubDate>
		<dc:creator>Pratap Simha</dc:creator>
				<category><![CDATA[Bettale-Jagattu]]></category>

		<guid isPermaLink="false">http://pratapsimha.com/?p=1248</guid>
		<description><![CDATA[ಕಳೆದ ನವೆಂಬರ್್ನಲ್ಲಿ ಹೊಸದಿಲ್ಲಿಗೆ ಹೋಗಿದ್ದಾಗ ಖ್ಯಾತ ಇಂಗ್ಲಿಷ್ ವಾರಪತ್ರಿಕೆ ಔಟ್್ಲುಕ್್ನ ಪ್ರಧಾನ ಸಂಪಾದಕರಾಗಿರುವ ಹೆಮ್ಮೆಯ ಕನ್ನಡಿಗ ಕೃಷ್ಣಪ್ರಸಾದ್ ಅವರನ್ನು ಭೇಟಿಯಾಗುವ ಅವಕಾಶ ದೊರೆಯಿತು. ಮಾತಿನ ಮಧ್ಯೆ  ಕೃಷ್ಣಪ್ರಸಾದ್ ಕೇಳಿದರು, &#8216;ನಿನಗೆ ಹೊಸ ಜೋಕು ಗೊತ್ತಾ, ಸಚಿನ್ ತೆಂಡೂಲ್ಕರ್, ಲಾಲ್್ಕೃಷ್ಣ ಆಡ್ವಾಣಿ ಹಾಗೂ ಪೆಟ್ರೋಲ್ ನಡುವೆ ಯಾರು ಮೊದಲು ಸೆಂಚುರಿ ಹೊಡೆಯುತ್ತಾರೆ?!&#8217; -ಪೆಟ್ರೋಲ್! ಅಂಥದ್ದೊಂದು ಜೋಕು ಹುಟ್ಟುವುದಕ್ಕೆ ಕಾರಣವಾದರೂ ಏನಿತ್ತು? ಒಂದೆಡೆ ಇಂಗ್ಲೆಂಡ್್ನಲ್ಲಿ ಆಡಿದ ನಾಲ್ಕೂ ಟೆಸ್ಟ್ ಹಾಗೂ ಏಕದಿನ ಪಂದ್ಯಗಳಲ್ಲಿ ಭಾರತ ಹೀನಾಯವಾಗಿ ಸೋತಿದ್ದು ಮಾತ್ರವಲ್ಲ, ಸಚಿನ್ [...]]]></description>
			<content:encoded><![CDATA[<p><a href="http://pratapsimha.com/wp-content/uploads/2012/02/photo.jpg"><img class="aligncenter size-medium wp-image-1249" title="photo" src="http://pratapsimha.com/wp-content/uploads/2012/02/photo-300x155.jpg" alt="" width="300" height="155" /></a></p>
<p>ಕಳೆದ ನವೆಂಬರ್್ನಲ್ಲಿ ಹೊಸದಿಲ್ಲಿಗೆ ಹೋಗಿದ್ದಾಗ ಖ್ಯಾತ ಇಂಗ್ಲಿಷ್  ವಾರಪತ್ರಿಕೆ ಔಟ್್ಲುಕ್್ನ ಪ್ರಧಾನ ಸಂಪಾದಕರಾಗಿರುವ ಹೆಮ್ಮೆಯ ಕನ್ನಡಿಗ ಕೃಷ್ಣಪ್ರಸಾದ್ ಅವರನ್ನು  ಭೇಟಿಯಾಗುವ ಅವಕಾಶ ದೊರೆಯಿತು. ಮಾತಿನ ಮಧ್ಯೆ  ಕೃಷ್ಣಪ್ರಸಾದ್ ಕೇಳಿದರು, &#8216;ನಿನಗೆ ಹೊಸ ಜೋಕು  ಗೊತ್ತಾ, ಸಚಿನ್ ತೆಂಡೂಲ್ಕರ್, ಲಾಲ್್ಕೃಷ್ಣ ಆಡ್ವಾಣಿ ಹಾಗೂ ಪೆಟ್ರೋಲ್ ನಡುವೆ ಯಾರು ಮೊದಲು  ಸೆಂಚುರಿ ಹೊಡೆಯುತ್ತಾರೆ?!&#8217;</p>
<p>-ಪೆಟ್ರೋಲ್!</p>
<p>ಅಂಥದ್ದೊಂದು ಜೋಕು ಹುಟ್ಟುವುದಕ್ಕೆ ಕಾರಣವಾದರೂ ಏನಿತ್ತು? ಒಂದೆಡೆ  ಇಂಗ್ಲೆಂಡ್್ನಲ್ಲಿ ಆಡಿದ ನಾಲ್ಕೂ ಟೆಸ್ಟ್ ಹಾಗೂ ಏಕದಿನ ಪಂದ್ಯಗಳಲ್ಲಿ ಭಾರತ ಹೀನಾಯವಾಗಿ  ಸೋತಿದ್ದು ಮಾತ್ರವಲ್ಲ, ಸಚಿನ್ ತೆಂಡೂಲ್ಕರ್ ಕೂಡ ಬಹುನಿರೀಕ್ಷಿತ 100ನೇ ಸೆಂಚುರಿ ಹೊಡೆಯುವಲ್ಲಿ  ವಿಫಲರಾಗಿದ್ದರು. ಪರ್ವಾಗಿಲ್ಲ ಬಿಡಿ, ನವೆಂಬರ್ 6ರಿಂದ ಆರಂಭವಾಗಲಿರುವ ವೆಸ್ಟ್್ಇಂಡೀಸ್  ವಿರುದ್ಧದ ಟೆಸ್ಟ್ ಸರಣಿಯಲ್ಲಾದರೂ 100ನೇ ಶತಕ ಬರುತ್ತದೆ ಎಂದು ಜನರೂ ಸುಮ್ಮನಾದರು, ಮಾಧ್ಯಮಗಳೂ  ಹಾಗೇ ಬರೆದವು. ಆದರೆ ರಾಜಧಾನಿ ದಿಲ್ಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಪಂದ್ಯವನ್ನು  ಭಾರತ ಗೆದ್ದುಕೊಂಡರೂ ಎಲ್ಲರ ನಿರೀಕ್ಷೆಯ ಸಚಿನ್ ಸೆಂಚುರಿ ಮಾತ್ರ ಬರಲಿಲ್ಲ. ಕೋಲ್ಕತಾದಲ್ಲಿ 1  ಲಕ್ಷ ಜನರ ಮುಂದೆ ಸಚಿನ್ ಸೆಂಚುರಿ ಹೊಡೆಯುತ್ತಾನೆ ಎಂದು ಜನ ತಮ್ಮನ್ನು ತಾವೇ ಸಮಾಧಾನ  ಮಾಡಿಕೊಂಡರು. ಅಲ್ಲೂ ನಿರಾಸೆಯೇ ಕಾದಿತ್ತು. ಮುಂದಿನ ಟೆಸ್ಟ್ ಮುಂಬೈನಲ್ಲಿ. ತವರಿನಲ್ಲಿ ಸಚಿನ್  ಸೆಂಚುರಿ ಹೊಡೆಯುವುದು ನಿಶ್ಚಿತ ಎಂದು ಪತ್ರಿಕೆಗಳು ಮತ್ತೆ ಜನರ ನಿರೀಕ್ಷೆಗಳನ್ನು ಉಬ್ಬಿಸಿದವು.  ಊಹೂಂ ಅಲ್ಲೂ ಬರಲಿಲ್ಲ. ಇನ್ನೊಂದೆಡೆ ಸಚಿನ್್ಗಿಂತ ಪೆಟ್ರೋಲೇ ಮೊದಲು ಸೆಂಚುರಿ ಹೊಡೆದು  ಬಿಡುತ್ತದೆ ಎಂಬ ಭಾವನೆ ರಾಷ್ಟ್ರಾದ್ಯಂತ ವ್ಯಾಪಿಸಿತು. ಇಷ್ಟಾಗಿಯೂ ನಮ್ಮ ಮಾಧ್ಯಮಗಳು ಹೊಸ ಹೊಸ  ಥಿಯರಿಗಳನ್ನು ಹುಟ್ಟುಹಾಕಲು ಆರಂಭಿಸಿದವು. ಇಲ್ಲಾ ಇಲ್ಲಾ, ಹಾಗಲ್ಲ&#8230; ತಮ್ಮ 100ನೇ ಶತಕ  ದಾಖಲಿಸಲು ತೆಂಡೂಲ್ಕರ್ ಒಂದು ವಿಶೇಷ ಹಾಗೂ ಪ್ರತಿಷ್ಠಿತ ಸ್ಥಳವನ್ನು ಹುಡುಕುತ್ತಿದ್ದಾರೆ.  ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾದಲ್ಲೇ 100 ಶತಕ  ಬಾರಿಸುತ್ತಾರೆ ಎಂದು ಬರೆದವು. ನಾವೂ ಅದನ್ನೇ ನಂಬಿ ಕುಳಿತೆವು. 2011, ಡಿಸೆಂಬರ್ 26ರಂದು  ಮೆಲ್ಬೋರ್ನ್್ನಲ್ಲಿ ಮೊದಲ ಟೆಸ್ಟ್ ಆರಂಭವಾಯಿತು, ನಾಲ್ಕೇ ದಿನಗಳಲ್ಲಿ ಮುಗಿದೂ ಹೋಯಿತು, ಸಚಿನ್  ಮಾತ್ರ ಸೆಂಚುರಿ ಹೊಡೆಯಲಿಲ್ಲ. 2012ರಲ್ಲಿ ಖಂಡಿತ ಸಚಿನ್ ಸೆಂಚುರಿ ಹೊಡೆದೇ ಹೊಡೆಯುತ್ತಾರೆ.  ಕಳೆದ 3 ವರ್ಷಗಳಿಂದ ವರ್ಷದ ಮೊದಲ ಟೆಸ್ಟ್್ನಲ್ಲಿ ಸಚಿನ್ ಸೆಂಚುರಿ ದಾಖಲಿಸಿದ್ದಾರೆ. ಈ ಬಾರಿಯೂ  ಅದೇ ಪುನರಾವರ್ತನೆಯಾಗುತ್ತದೆ. ಬಹಳ ವಿಶೇಷವೆಂದರೆ ಸಿಡ್ನಿಯಲ್ಲಿ 100ನೇ ಟೆಸ್ಟ್ ಜರುಗುತ್ತಿದ್ದು  ಅಲ್ಲಿಯೇ ಸಚಿನ್ 100ನೇ ಸೆಂಚುರಿ ಬರುತ್ತದೆ ಎಂದರು. ಮತ್ತದೇ ಹಳೇ ಕಥೆ. ಪರ್ತ್್ನಲ್ಲಂತೂ ಮೂರೇ  ದಿನಗಳಲ್ಲಿ ಪಂದ್ಯ ಮುಗಿಯಿತು.</p>
<p>ಆಗ&#8230;</p>
<p>ಮಾಧ್ಯಮಗಳು ಸಚಿನ್ ಸೆಂಚುರಿ ಕಥೆ ಬಿಟ್ಟು ಭಾರತದ ವ್ಯಥೆ ಬಗ್ಗೆ  ಚಿಂತಿಸಲಾರಂಭಿಸಿದವು. ವಿದೇಶದಲ್ಲಿ ಅನುಭವಿಸಿದ ಸತತ 7ನೇ ಟೆಸ್ಟ್ ಸೋಲು ಸೆಂಚುರಿ ಚರ್ಚೆಯನ್ನು  ಬೇರೆಡೆಗೆ ಕೊಂಡೊಯ್ಯಿತು. ಜನರೂ ಬೇಸತ್ತರು. ಸಾಮಾಜಿಕ ತಾಣಗಳಲ್ಲಿ ಟೀಕಾಪ್ರಹಾರ ಆರಂಭವಾಯಿತು.  ಅಣ್ಣಾ ಸಚಿನ್ ಬಗ್ಗೆ ಒಂದು ನಕಲಿ &#8216;ಸ್ಟೇಟಸ್್&#8217; ಫೇಸ್ ಬುಕ್್ನಲ್ಲಿ ಸೃಷ್ಟಿಯಾಯಿತು. ಅದು ಬಹಳ  ಮಜಬೂತಾಗಿತ್ತು. ಏನು ಗೊತ್ತಾ?</p>
<p>ಸಚಿನ್ ತೆಂಡೂಲ್ಕರ್: <span style="font-family: Arial Narrow; font-size: large;">Wants  to get the Monkey off my back&#8230;.but India winning in Adelaide is my first  priority!!</span></p>
<p>ಎಂ.ಎಸ್.ಧೋನಿ: <span style="font-family: Arial Narrow; font-size: large;">Well, Of  course you do&#8230; </span></p>
<p>ಯುವರಾಜ್ ಸಿಂಗ್: <span style="font-family: Arial Narrow; font-size: large;">Paaji&#8230;  the Monkey has turned into a Gorilla now!!</span></p>
<p>ಸೈಮಂಡ್ಸ್:<span style="font-family: Arial Narrow; font-size: large;">Sach, did you  just say Monkey?!</span></p>
<p>ಹರ್್ಭಜನ್ ಸಿಂಗ್: <span style="font-family: Arial Narrow; font-size: large;">@Symmo,  Don&#8217;t take it personally dude, he is referring to his 100th ton!!</span></p>
<p>ರವಿ ಶಾಸ್ತ್ರಿ: <span style="font-family: Arial Narrow; font-size: large;">Play your  natural game Sachin, Coz that&#8217;s what the doctor orders</span></p>
<p>ಅರಿಂದಮ್ ಚೌಧರಿ: <span style="font-family: Arial Narrow; font-size: large;">You need  to rediscover the diamond in you Sachin. Come to IIPM for help asap!</span></p>
<p>ಅರ್ಜುನ್ ತೆಂಡೂಲ್ಕರ್: <span style="font-family: Arial Narrow; font-size: large;">Hey  dad, I am having a seminar in school on how to score 100 in exams. Should I book  your seat too?</span></p>
<p>ಡೆಟ್ಟಾಲ್ ಸಾಬೂನು: <span style="font-family: Arial Narrow; font-size: large;">Sachin,  would you like to be our brand amassador? We also kill 99% bacteria! Lol!!</span></p>
<p>ನೀವೇ ಯೋಚನೆ ಮಾಡಿ, ಸಚಿನ್ ತೆಂಡೂಲ್ಕರ್ ಹೊಡೆಯಲಿರುವ ಆ ಒಂದು  ಸೆಂಚುರಿಗಾಗಿ ಕಳೆದ 10 ತಿಂಗಳಲ್ಲಿ ಪತ್ರಿಕೆಗಳ ಎಷ್ಟು ಪುಟಗಳು ನಾಶವಾಗಿರಬಹುದು, ಎಷ್ಟು ಟನ್  ನ್ಯೂಸ್್ಪ್ರಿಂಟ್ ರದ್ದಿಗೆ ಸೇರಿರಬಹುದು? ಎಷ್ಟು ಮಂದಿ ವೀಕ್ಷಕ ವಿವರಣೆಕಾರರ ಗಂಟಲು  ಒಣಗಿರಬಹುದು, ಅದನ್ನು ಕೇಳಿ ಎಷ್ಟು ಜನರ ಕಿವಿ- ಓದಿ ಕಣ್ಣು ಹಾಳಾಗಿರಬಹುದು? ಖಂಡಿತ ಸಚಿನ್  100ನೇ ಸೆಂಚುರಿ ಹೊಡೆಯುವುದು ನಮ್ಮೆಲ್ಲರಿಗೂ ಹೆಮ್ಮೆ ತರುವ, ಕೋಡು ಮೂಡಿಸುವ ಸಂಗತಿಯೇ. ಆದರೆ  ವ್ಯಕ್ತಿ ಆರಾಧನೆ, ವ್ಯಕ್ತಿ ಕೇಂದ್ರಿತ <span style="font-family: Arial Narrow; font-size: large;">Obsession</span>ನಿಂದ  ನಾವು, ನಮ್ಮ ಮಾಧ್ಯಮಗಳು ಹೊರಬರಲು ಸತತ 8 ಸೋಲುಗಳು ಬೇಕಾದವೇ? ಸಚಿನ್ ಸೆಂಚುರಿ ಭಜನೆಯ ನಡುವೆಯೇ  ರಾಹುಲ್ ದ್ರಾವಿಡ್ ಕ್ರಿಕೆಟ್ ಟೆಸ್ಟ್್ನಲ್ಲಿ 13 ಸಾವಿರ ರನ್ ಗಡಿ ದಾಟಿದರು. ಆದರೂ ಅದು ದೊಡ್ಡ  ಸುದ್ದಿಯಾಗಲಿಲ್ಲವೇಕೆ? ಏಕಿಂಥ ತಾರತಮ್ಯ? ಸಚಿನ್ ತೆಂಡೂಲ್ಕರ್ ಆಡಿರುವ 188 ಟೆಸ್ಟ್್ಗಳಲ್ಲಿ  ಎಷ್ಟು ಪಂದ್ಯಗಳಲ್ಲಿ ಜಯ ತಂದುಕೊಟ್ಟಿದ್ದಾರೆ ಎಂದು ನೆನಪುಮಾಡಿಕೊಳ್ಳಿ? ಚೆನ್ನೈನಲ್ಲಿ  ಇಂಗ್ಲೆಂಡ್ ವಿರುದ್ಧ ಗೆದ್ದಾಗ ಅದರಲ್ಲಿ ಪ್ರಮುಖಪಾತ್ರ ವಹಿಸಿದ್ದು ಬಿಟ್ಟರೆ ತೆಂಡೂಲ್ಕರ್ ಬಗ್ಗೆ  ನಾವೇನಾದರೂ ಹೆಮ್ಮೆಪಟ್ಟುಕೊಳ್ಳುವಂಥದ್ದೇನಾದರೂ ಇದ್ದರೆ ಅವರ ವೈಯಕ್ತಿಕ ದಾಖಲೆಗಳಷ್ಟೇ. ಆದರೆ,  ಎಲೆಮರೆಯ ಕಾಯಿಯಂತೆಯೇ ಬಹುಕಾಲ ಉಳಿದ ರಾಹುಲ್ ದ್ರಾವಿಡ್ ತಂದು ಕೊಟ್ಟ ಗೆಲುವುಗಳ ಬಗ್ಗೆ  ಒಮ್ಮೆಯಾದರೂ ಯೋಚಿಸಿದ್ದೀರಾ? ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ಅನುಭವಿಸಿದ ಮುಖಭಂಗದ ನಂತರವೂ ನಾವು  ನಡೆದುಕೊಳ್ಳುತ್ತಿರುವ ರೀತಿ, ತೋರುತ್ತಿರುವ ಧೋರಣೆಯಾದರೂ ಯಾವುದು? ಲಕ್ಷ್ಮಣ್, ದ್ರಾವಿಡ್  ನಿವೃತ್ತಿಯಾಗಬೇಕು ಎಂದು ಎಲ್ಲರೂ ಹೇಳುತ್ತಿದ್ದಾರೆಯೇ ಹೊರತು ಸಚಿನ್ ಕೂಡ ನಿವೃತ್ತಿ ಬಗ್ಗೆ  ಯೋಚಿಸಬೇಕೆಂದು ಏಕೆ ಹೇಳುತ್ತಿಲ್ಲ? ಲಕ್ಷ್ಮಣ್ -ದ್ರಾವಿಡ್್ಗೊಂದು ನ್ಯಾಯ, ಸಚಿನ್್ಗೊಂದು  ನ್ಯಾಯವೇ? ನಾವೆಲ್ಲ ಆರಾಧಿಸುವ ಸಚಿನ್ ತೆಂಡೂಲ್ಕರ್ ಈಗ್ಗೆ ಆರೆಂಟು ತಿಂಗಳುಗಳ ಹಿಂದೆ  ನಡೆದುಕೊಂಡಿದ್ದಾದರೂ ಹೇಗೆ? ಏಪ್ರಿಲ್-ಮೇನಲ್ಲಿ ನಡೆದ ಐಪಿಎಲ್್ನಲ್ಲಿ ಆಡಿದ ಸಚಿನ್, ಅದರ  ಬೆನ್ನಲೇ ವೆಸ್ಟ್್ಇಂಡೀಸ್್ನಲ್ಲಿ ಆರಂಭವಾದ ಟೆಸ್ಟ್ ಸರಣಿಗೆ ಚಕ್ಕರ್ ಹೊಡೆದು ವಿಶ್ರಾಂತಿ  ಪಡೆದರು. ಅವತ್ತು ರಾಹುಲ್ ದ್ರಾವಿಡ್ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡು 2 ಸೆಂಚುರಿ ಹೊಡೆದು  ಸಂದಿಗ್ಧ ಪರಿಸ್ಥಿತಿಯಲ್ಲಿ ಭಾರತವನ್ನು ಗೆಲ್ಲಿಸದಿದ್ದರೆ ಅದೇ ಸರಣಿ ಸೋತು ನಂಬರ್-1 ಪಟ್ಟ  ಕಳೆದುಕೊಂಡಿರುತ್ತಿದ್ದೆವು. ರಿಕಿ ಪಾಂಟಿಂಗ್, ಮೈಕೆಲ್ ಕ್ಲಾರ್ಕ್ ದುಡ್ಡು ತಂದುಕೊಡುವ  ಐಪಿಎಲ್್ಗೆ ಬದಲಾಗಿ ದೇಶಕ್ಕಾಗಿ ಆಡುವ ಟೆಸ್ಟ್ ಸರಣಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅಂತಹ  ನಡತೆಯನ್ನು ತೆಂಡೂಲ್ಕರ್್ರಿಂದ ಕಾಣಲು ಸಾಧ್ಯವೆ? ಬಾಂಗ್ಲಾದೇಶ ಅಥವಾ ಕೀನ್ಯಾ ಅಥವಾ ಐರ್ಲೆಂಡ್  ಮೇಲೆ ಒಂದು ಸರಣಿಯನ್ನು ಏರ್ಪಡಿಸಿ, ತೆಂಡೂಲ್ಕರ್ ಆದಷ್ಟು ಬೇಗನೆ 100ನೇ ಬಾರಿ ಆಗಸದತ್ತ ಬ್ಯಾಟು  ಎತ್ತುವಂತೆ ಮಾಡುವುದೊಳಿತು. ಇಷ್ಟಕ್ಕೂ ಕಪಿಲ್ 434 ವಿಕೆಟ್ ತೆಗೆಯುವ ಸಲುವಾಗಿ ಜಾವಗಲ್  ಶ್ರೀನಾಥ್ ಕ್ರೀಡಾ ಬದುಕಿನ ಅತ್ಯಮೂಲ್ಯ ಎರಡು ವರ್ಷಗಳು ಹಾಳಾದವು. ಸಚಿನ್ 100ನೇ ಸೆಂಚುರಿ  ಹೊಡೆದು ನಿವೃತ್ತಿ ತೆಗೆದುಕೊಂಡರೆ ಯುವ ಆಟಗಾರನೊಬ್ಬನಿಗೆ ಅವಕಾಶವಾದರೂ ದೊರೆಯುತ್ತದೆ ಅಲ್ಲವೆ?</p>
<p>ಅಂದಮಾತ್ರಕ್ಕೆ, ಸಚಿನ್್ರನ್ನು ತೆಗಳುವುದು ಇಲ್ಲಿನ ಉದ್ದೇಶವಲ್ಲ.</p>
<p>ಆಟಗಾರರು ಸ್ವಾರ್ಥಪರರಾದರೆ ಹಾಗೂ ದೇಶವಾಸಿಗಳು ತಂಡಕ್ಕಿಂತ ಆಟಗಾರರ  ವೈಯಕ್ತಿಕ ದಾಖಲೆಗಳ ಬಗ್ಗೆಯೇ ಉನ್ಮಾದ ಬೆಳೆಸಿಕೊಂಡರೆ ತಂಡ ಗೆಲ್ಲುವುದಾದರೂ ಹೇಗೆ? ಇತ್ತೀಚೆಗೆ  ನಡೆದ ಸಿಡ್ನಿ ಪಂದ್ಯವನ್ನೇ ತೆಗೆದುಕೊಳ್ಳಿ. ಒಂದು ವೇಳೆ, ಮೈಕೆಲ್ ಕ್ಲಾರ್ಕ್ ಬದಲು ತೆಂಡೂಲ್ಕರ್  ಆಸ್ಟ್ರೇಲಿಯಾದ ನಾಯಕರಾಗಿದ್ದರೆ ತಾವು 325 ರನ್ ಗಳಿಸಿದ್ದಾಗ ಇನ್ನಿಂಗ್ಸ್ ಡಿಕ್ಲೇರ್  ಮಾಡಿಕೊಳ್ಳುತ್ತಿದ್ದರೆ? ಆ ಪಂದ್ಯ ನಾಲ್ಕೇ ದಿನಗಳಲ್ಲಿ ಮುಗಿದು ಹೋಯಿತು, ಪಿಚ್  ನಿರ್ಜೀವವಾಗಿತ್ತು, ಕ್ಲಾರ್ಕ್ ಮನಸ್ಸು ಮಾಡಿದ್ದರೆ 400 ರನ್ ಹೊಡೆದು ಲಾರಾನ ದಾಖಲೆ  ಮುರಿಯಬಹುದಿತ್ತು. ಆದರೆ ಅವರು ತಂಡದ ಗೆಲುವಿನ ಬಗ್ಗೆ ಯೋಚಿಸಿದರು. ತೆಂಡೂಲ್ಕರ್ ಇನ್ನಿಂಗ್ಸ್  ಡಿಕ್ಲೇರ್ ಮಾಡುವ ಮಾತು ಹಾಗಿರಲಿ, ಒಂದು ವೇಳೆ ಅವರೇ ಮಾಡಿದ್ದರೂ ಮಹಾನ್ ದೇಶವಾಸಿಗಳಾದ ನಾವೇ 400  ರನ್ ಹೊಡೆಯಬೇಕಿತ್ತು ಎಂದು ಟೀಕಿಸುತ್ತಿದ್ದೆವು. ಇಷ್ಟಕ್ಕೂ ಪಾಕಿಸ್ತಾನದಲ್ಲಿ ತೆಂಡೂಲ್ಕರ್ 194  ರನ್ ಗಳಿಸಿದಾಗ ನಾಯಕ ರಾಹುಲ್ ದ್ರಾವಿಡ್ ಇನ್ನಿಂಗ್ಸ್ ಡಿಕ್ಲೇರ್ ಮಾಡಿ ಪಂದ್ಯ ಗೆದ್ದರೂ ನಮ್ಮ ಜನ  ದ್ರಾವಿಡ್್ರನ್ನೇ ಟೀಕಿಸಿದ್ದರು! ಇಂಥ ಧೋರಣೆಯನ್ನು ಬಿಡದೆ, ತಂಡದ ಗೆಲುವಿಗೆ ಮೊದಲ ಆದ್ಯತೆ  ಕೊಡದೆ ಹೋದರೆ ಭಾರತಕ್ಕೆ ಯಾವ ಭವಿಷ್ಯ ಉಳಿದೀತು?</p>
<p>ಸೌರವ್ ಗಂಗೂಲಿ ನಾಯಕರಾದ ನಂತರ ನಮ್ಮ ಭಾರತೀಯ ಕ್ರಿಕೆಟ್್ಗೆ ಕಾಯಕಲ್ಪ  ಸಿಕ್ಕಿತು, ಕೊನೆಗೂ ನಮ್ಮ ಆತ್ಮಸ್ಥೈರ್ಯವನ್ನು ಎತ್ತಿಹಿಡಿಯುವ ನಾಯಕ ಸಿಕ್ಕಿದ ಎಂದು  ಬೀಗಿದ್ದೆವು. ತದನಂತರ ನಾಯಕರಾದ ದ್ರಾವಿಡ್, ಕುಂಬ್ಳೆ ಕಾಲದಲ್ಲೂ ನಮ್ಮ ಸಾಧನೆ ಮೇಲ್ಮುಖವಾಗಿಯೇ  ಸಾಗಿ ಧೋನಿ ಕಾಲದಲ್ಲಿ ಟೆಸ್ಟ್್ನಲ್ಲಿ ನಂ-1 ಸ್ಥಾನಕ್ಕೇರುವುದರೊಂದಿಗೆ ಪರ್ಯಾವಸಾನಗೊಂಡಿತು.  ಆದರೆ ಕಳೆದ 8 ನೇರ ಸೋಲುಗಳನ್ನು ನೋಡಿದರೆ ಅಜರುದ್ದೀನ್, ತೆಂಡೂಲ್ಕರ್ ಕ್ಯಾಪ್ಟನ್್ಗಳಾಗಿದ್ದಾಗ  ವಿದೇಶ ಪ್ರವಾಸ ಕೈಗೊಂಡು ವೈಟ್್ವಾಶ್್ನೊಂದಿಗೆ ಹಿಂದಿರುಗುತ್ತಿದ್ದ ದಿನಗಳು ಮರುಕಳಿಸುತ್ತಿವೆ  ಎಂದೆನಿಸುತ್ತಿದೆ. 1998ರಲ್ಲಿ ತೆಂಡೂಲ್ಕರ್ ನಾಯಕತ್ವದಲ್ಲಿ ಆಸ್ಟ್ರೇಲಿಯಾದಲ್ಲಿ 4-0 ಅಂತರದಿಂದ  ಸೋತಿದ್ದು ಬಿಟ್ಟರೆ, ಯಾವತ್ತೂ ಈ ರೀತಿಯ ವೈಟ್್ವಾಶ್ ಆಗಿರಲಿಲ್ಲ. ಈಗ ನಮ್ಮ ತಂಡಕ್ಕೇನಾಗಿದೆ?  ಆತ್ಮಸ್ಥೆರ್ಯ ಉಡುಗಿರುವ ಕಾಲದಲ್ಲಿ ಧೋನಿ ನೀಡುತ್ತಿರುವ ಹೇಳಿಕೆಯಾದರೂ ಹೇಗಿದೆ? 2003ರ  ಆಸ್ಟ್ರೇಲಿಯಾ ಸರಣಿಯ ಮೊದಲ ಟೆಸ್ಟ್್ನಲ್ಲಿ ಸಚಿನ್ ಸೊನ್ನೆಗೆ, ದ್ರಾವಿಡ್ 1 ರನ್್ಗೆ  ಔಟಾಗುವುದರೊಂದಿಗೆ ಭಾರತ ಬಹುಬೇಗನೆ 4 ವಿಕೆಟ್ ಕಳೆದುಕೊಂಡಾಗ ಬ್ಯಾಟಿಂಗ್್ಗೆ ಬಂದು 144 ರನ್  ಬಾರಿಸಿದ ಸೌರವ್ ಗಂಗೂಲಿ ಇಡೀ ತಂಡಕ್ಕೆ ಪ್ರೇರಣೆ ನೀಡಿದ್ದರು. ಆದರೆ, ಅದೇ ಆಸ್ಟ್ರೇಲಿಯಾದಲ್ಲಿ 4  ಟೆಸ್ಟ್ ಸೋತ ಕೂಡಲೇ ನಾಯಕ ಮಹೇಂದ್ರ ಸಿಂಗ್ ಧೋನಿ ಹೇಳಿದ್ದೇನು?- &#8216;ನನಗಿಂತ ಒಳ್ಳೆಯ ನಾಯಕನಿದ್ದರೆ  ಕಫ್ತಾನಗಿರಿ ಬಿಟ್ಟುಕೊಡುತ್ತೇನೆ&#8217;. ಇದು ಒಬ್ಬ ನಾಯಕನಾದವನು ಹೇಳುವ ಮಾತೇ? <span style="font-family: Arial Narrow; font-size: large;"> &#8220;Sourav Ganguly is the Best captain of Indian Cricket Team and Dhoni is the  captain of Best Indian cricket Team</span>ಎಂಬ ಮಾತು ಖಂಡಿತ ನಿಜ. ಇಷ್ಟಕ್ಕೂ ಗಂಗೂಲಿ  ತಂಡಕ್ಕೆ ಯಾವ ಒಂದು ಆ್ಯಟಿಟ್ಯೂಡ್ ತಂದು ಕೊಟ್ಟರು, ಈಗಿನವರು ತೋರುತ್ತಿರುವ ಆ್ಯಟಿಟ್ಯೂಡ್  ಯಾವುದು? ಆಸ್ಟ್ರೇಲಿಯಾದವರು ಆ ಗ್ರೀನ್ ಕ್ಯಾಪ್ ಸಿಕ್ಕ ದಿನ ತಮ್ಮ ಕ್ರೀಡಾ ಜೀವನಕ್ಕೆ ಹೊಸ ಅರ್ಥ  ಬರುತ್ತದೆ ಎಂಬಂತೆ ಭಾವಿಸಿದರೆ, ಎರ್ರಾಬಿರ್ರಿ ಹೊಡಿ, ಒಳ್ಳೆಯ ಹಣಕ್ಕೆ ಹರಾಜಾಗು ಎಂಬ ಮನಸ್ಥಿತಿ  ನಮ್ಮ ಯುವ ಆಟಗಾರರಲ್ಲಿ ಬಂದುಬಿಟ್ಟಿದೆ. ಐಪಿಎಲ್ ಬಂದ ನಂತರವಂತೂ ನಮ್ಮ ಆಟಗಾರರಲ್ಲಿ  ಇಂಟರ್್ನ್ಯಾಷನಲ್ ಡೆಬ್ಯೂ, ನೀಲಿ ಜರ್ಸಿ ಬಗ್ಗೆ ಮೋಹವೇ ಇಲ್ಲದಾಗಿ ಬಿಟ್ಟಿದೆ. ಎಲ್ಲ ದುಡ್ಡಿನ  ಮಹಿಮೆ. ಒಂದು ಐಪಿಎಲ್್ನಲ್ಲಿ ಆಡುವುದು 100 ಏಕದಿನ ಪಂದ್ಯವಾಡುವುದಕ್ಕೆ ಸಮ. ಅಷ್ಟು ಹಣ ದೊರೆತು  ಬಿಡುತ್ತದೆ. ಹಾಗಿರುವಾಗ ಯಾರು ರಣಜಿ, ದುಲೀಪ್ ಟ್ರೋಫಿ ಪಂದ್ಯಗಳನ್ನಾಡುತ್ತಾರೆ? ಐಪಿಎಲ್್ನಲ್ಲಿ  ಒಳ್ಳೆಯ ಕಾಸು ಸಿಗುವಾಗ ಹತ್ತಿಪ್ಪತ್ತು ಸಾವಿರ ಸಿಗುವ ರಣಜಿ ಯಾರಿಗೆ ಬೇಕು? ಖ್ಯಾತ ಕ್ರೀಡಾ  ಬರಹಗಾರ ನಿರ್ಮಲ್ ಶೇಖರ್ ಇತ್ತೀಚೆಗೆ ಬರೆದಿರುವ ಅಂಕಣದಲ್ಲಿ ಬಿಸಿಸಿಐ ಹಾಗೂ ನಮ್ಮ ಒಟ್ಟಾರೆ  ಮನಸ್ಥಿತಿಯನ್ನು ಹೀಗೆ ವರ್ಣಿಸಿದ್ದಾರೆ- &#8220;ಟೆಸ್ಟ್್ನಲ್ಲಿ 11,947 ರನ್ ಗಳಿಸಿರುವ ಜಾಕ್  ಕಾಲಿಸ್್ಗೆ ಐಪಿಎಲ್್ನಲ್ಲಿ ಒಂದು ಕೋಟಿ ಕೊಟ್ಟರೆ ರಾಬಿನ್ ಉತ್ತಪ್ಪನಂಥ ಕೊಲ್ಟೆಗಳು 9 ಕೋಟಿಗೆ  ಸೇಲಾಗುತ್ತಾರೆ.  <span style="font-family: Arial Narrow; font-size: large;">Value. Value. Value. What do  we value these days? And how do we value them?&#8217;</span>&#8221;</p>
<p>ಹೌದು, ನಾವು ಬೆಲೆ ಕೊಡುತ್ತಿರುವುದಾದರೂ ಯಾವುದಕ್ಕೆ?</p>
<p>ಬಿಸಿಸಿಐ ಬಳಿ ಎಷ್ಟು ಹಣವಿದೆಯೆಂದರೆ ನಮ್ಮ ದೇಶದಲ್ಲೇ ವಿದೇಶಿ  ಪಿಚ್್ಗಳನ್ನು ರೂಪಿಸಿ ಬಿಡಬಹುದು, ನಮ್ಮ ಆಟಗಾರರನ್ನು ಎಲ್ಲ ವಾತಾವರಣವನ್ನೂ ಎದುರಿಸಲು  ಸಿದ್ಧಪಡಿಸಬಹುದು. ಹುಲ್ಲೇ ಹುಟ್ಟದ ದುಬೈನಲ್ಲಿ ಹಸಿರು ಕ್ರೀಡಾಂಗಣವನ್ನು ರೂಪಿಸಿಲ್ಲವೆ?  ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಆಟಗಾರರು ಸ್ಲೈಡಿಂಗ್ ಮಾಡಿಕೊಂಡೆ ಬಾಲ್  ತಡೆಯುತ್ತಾರೆ, ಆದರೆ ನಮ್ಮವರು? ಐಪಿಎಲ್ ಆರಂಭಿಸಿ 30 ಯಾರ್ಡ್ ಸರ್ಕಲ್್ಗಳನ್ನೂ ಕಡಿಮೆ ಮಾಡಿ,  ಫೋರ್, ಸಿಕ್ಸ್್ಗಳನ್ನು ಮ್ಯಾನ್ಯುಫ್ಯಾಕ್ಚರ್ ಮಾಡಿ, ಎಲ್ಲ ಫ್ಲಾಟ್್ಟ್ರ್ಯಾಕ್ ಮಾಡಿ ಓವರ್್ಗೆ  ಸರಾಸರಿ 6 ರನ್ ಕೊಟ್ಟರೂ, &#8216;ವೆರಿ ಎಕಾನಾಮಿಕಲ್್&#8217; ಎನ್ನುತ್ತಾರೆ! ಹೌದು. ನಾವು ರಾಹುಲ್  ದ್ರಾವಿಡ್, ತೆಂಡೂಲ್ಕರ್, ಲಕ್ಷ್ಮಣ್, ಸೆಹವಾಗ್್ರನ್ನು ತಯಾರು ಮಾಡಿದ್ದೇವೆ. ಆದರೆ ಅವರ  ಪರಂಪರೆಯನ್ನು ಮುಂದುವರಿಸುವಂಥ ಉತ್ತರಾಧಿಕಾರಿಗಳನ್ನೇಕೆ ತಯಾರು ಮಾಡಲಾಗುತ್ತಿಲ್ಲವೆಂದರೆ ಇದೇ  ಕಾರಣಕ್ಕಾಗಿ. ಆ ಶರದ್ ಪವಾರ್ ಕೃಷಿ ಸಚಿವರಾಗಿ ನಮ್ಮ ದೇಶದ ಅಗ್ರಿಕಲ್ಚರ್ ಅನ್ನೂ ಹಾಳುಗೆಡವಿದರು,  ಜತೆಗೆ ಬಿಸಿಸಿಐ ಅಧ್ಯಕ್ಷರಾಗಿ ಕ್ರಿಕೆಟ್್ನ ನಾಶಕ್ಕೂ ಕೈಹಾಕಿದರು ಎಂದನಿಸುತ್ತದೆ. ಈ ಮಧ್ಯೆ,  ಹೀನಾಯ ಸೋಲುಗಳ ನಡುವೆಯೂ &#8216;<span style="font-family: Arial Narrow; font-size: large;">We are still World  Champions</span>&#8221; ಎಂದು ಸೆಹವಾಗ್ ಹೇಳಿದ್ದಾರೆ. 2015ರವರೆಗೂ ಹಾಗೆ ಹೇಳಿಕೊಳ್ಳಲು  ಅಡ್ಡಿಯಿಲ್ಲ, ಆದರೆ, ತಲೆಯಲ್ಲಿ ಬುದ್ಧಿಯಿದ್ದವರು ಹಾಗೆ ಹೇಳಲ್ಲ.</p>
<p>ದುರದೃಷ್ಟವಶಾತ್ ಇಂಗ್ಲೆಂಡ್್ನಲ್ಲಿ &#8220;ಜಂಟಲ್್ಮನ್ಸ್್&#8221; ಎನಿಸಿದ್ದ  ಕ್ರಿಕೆಟ್ ಭಾರತದಲ್ಲಿ &#8220;ಬ್ಯುಸಿನೆಸ್್ಮನ್ಸ್್&#8221; ಆಟವಾಗಿ ಪರಿಣಮಿಸಿದೆ!</p>
<p>&nbsp;</p>
<p>&nbsp;</p>
<p>- ಪ್ರತಾಪ್ ಸಿಂಹ</p>
]]></content:encoded>
			<wfw:commentRss>http://pratapsimha.com/2012/02/04/game/feed/</wfw:commentRss>
		<slash:comments>0</slash:comments>
		</item>
		<item>
		<title>ಅಂಥದ್ದೊಂದು ದುರ್ಘಟನೆಯೇ ಸಂಭವಿಸಲಿಲ್ಲವೆಂದಾದರೆ ಅವರು ಏನಾದರು?</title>
		<link>http://pratapsimha.com/2012/02/01/netaji-2/</link>
		<comments>http://pratapsimha.com/2012/02/01/netaji-2/#comments</comments>
		<pubDate>Wed, 01 Feb 2012 14:22:40 +0000</pubDate>
		<dc:creator>Pratap Simha</dc:creator>
				<category><![CDATA[Bettale-Jagattu]]></category>

		<guid isPermaLink="false">http://pratapsimha.com/?p=1244</guid>
		<description><![CDATA[1945, ಆಗಸ್ಟ್ 18ರಂದು ತೈವಾನ್್ನ ತೈಹೋಕು ಬಳಿ ನಡೆದ ವಿಮಾನ ದುರ್ಘಟನೆಯಲ್ಲಿ ಸುಭಾಶ್ಚಂದ್ರ ಬೋಸ್ ನಿಜಕ್ಕೂ ತೀರಿಕೊಂಡರೆ? ಮೊನ್ನೆ ಜನವರಿ 23ರಂದು ನಡೆದ 115ನೇ ಜನ್ಮದಿನದ ನೆನಪಿಗಾಗಿ ಬರೆದ ಲೇಖನವನ್ನೋದಿದ ಬಹಳಷ್ಟು ಜನರು ನೇತಾಜಿ ಅಂತ್ಯ ಹೇಗಾಯಿತು ಎಂದು ತಿಳಿಯಬಯಸಿ ಪತ್ರ ಬರೆದಿದ್ದಾರೆ. ಅಂಥದ್ದೊಂದು ಪ್ರಶ್ನೆ, ಅದರ ಸುತ್ತ ಹೆಣೆದುಕೊಂಡಿರುವ ಅನುಮಾನಗಳು ಕಳೆದ ಆರೂವರೆ ದಶಕಗಳಿಂದಲೂ ಒಂದು ದೊಡ್ಡ ಮಿಸ್ಟರಿ, ಭೇದಿಸಲಾಗದ ರಹಸ್ಯವಾಗಿ ಭಾರತೀಯರನ್ನು ಕಾಡುತ್ತಿದೆ. ವಿಮಾನ ದುರ್ಘಟನೆಯಲ್ಲಿ ನೇತಾಜಿ ಮಡಿದರು ಎಂಬ ಥಿಯರಿಯನ್ನು ಒಪ್ಪಲು ಈ [...]]]></description>
			<content:encoded><![CDATA[<p><a href="http://pratapsimha.com/wp-content/uploads/2012/02/Indias-Nationalist-leader-Subhas-Chandra-Bose-who-is-anti-British-and-pro-Japanese-during-WWII.jpg"><img src="http://pratapsimha.com/wp-content/uploads/2012/02/Indias-Nationalist-leader-Subhas-Chandra-Bose-who-is-anti-British-and-pro-Japanese-during-WWII-230x300.jpg" alt="" title="India&#039;s Nationalist leader Subhas Chandra Bose, who is anti-British and pro-Japanese, during WWII" width="230" height="300" class="aligncenter size-medium wp-image-1245" /></a><br />
1945, ಆಗಸ್ಟ್ 18ರಂದು ತೈವಾನ್್ನ ತೈಹೋಕು ಬಳಿ ನಡೆದ ವಿಮಾನ ದುರ್ಘಟನೆಯಲ್ಲಿ ಸುಭಾಶ್ಚಂದ್ರ ಬೋಸ್ ನಿಜಕ್ಕೂ ತೀರಿಕೊಂಡರೆ? ಮೊನ್ನೆ ಜನವರಿ 23ರಂದು ನಡೆದ 115ನೇ ಜನ್ಮದಿನದ ನೆನಪಿಗಾಗಿ ಬರೆದ ಲೇಖನವನ್ನೋದಿದ ಬಹಳಷ್ಟು ಜನರು ನೇತಾಜಿ ಅಂತ್ಯ ಹೇಗಾಯಿತು ಎಂದು ತಿಳಿಯಬಯಸಿ ಪತ್ರ ಬರೆದಿದ್ದಾರೆ. ಅಂಥದ್ದೊಂದು ಪ್ರಶ್ನೆ, ಅದರ ಸುತ್ತ ಹೆಣೆದುಕೊಂಡಿರುವ ಅನುಮಾನಗಳು ಕಳೆದ ಆರೂವರೆ ದಶಕಗಳಿಂದಲೂ ಒಂದು ದೊಡ್ಡ ಮಿಸ್ಟರಿ, ಭೇದಿಸಲಾಗದ ರಹಸ್ಯವಾಗಿ ಭಾರತೀಯರನ್ನು ಕಾಡುತ್ತಿದೆ. ವಿಮಾನ ದುರ್ಘಟನೆಯಲ್ಲಿ ನೇತಾಜಿ ಮಡಿದರು ಎಂಬ ಥಿಯರಿಯನ್ನು ಒಪ್ಪಲು ಈ ದೇಶದ ಜನಮಾನಸ ತಯಾರಿಲ್ಲ. ಹಾಗಾಗಿಯೇ 1992ರಲ್ಲಿ ನರಸಿಂಹರಾವ್ ಸರ್ಕಾರ ಸುಭಾಶ್ಚಂದ್ರ ಬೋಸ್್ಗೆ &#8216;ಮರಣೋತ್ತರ&#8217;ವಾಗಿ ಭಾರತ ರತ್ನ ನೀಡಲು ಮುಂದಾದಾಗ ದೊಡ್ಡ ವಿವಾದವೇ ಸೃಷ್ಟಿಯಾಗಿತ್ತು. ಅವರು ಮಡಿದಿದ್ದಾರೆ ಎಂಬುದೇ ಸಾಬೀತಾಗಿಲ್ಲದಿರುವಾಗ ಹೇಗೆ &#8216;ಮರಣೋತ್ತರ&#8217;ವಾಗಿ ಭಾರತ ರತ್ನ ನೀಡುತ್ತೀರಿ ಎಂದು ಪ್ರಶ್ನಿಸಿ ಸುಪ್ರೀಂ ಕೋರ್ಟ್್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನೂ ಸಲ್ಲಿಸಲಾಯಿತು. ಮಡಿದಿದ್ದಾರೆ ಎಂಬುದಕ್ಕೆ ಸಾಕ್ಷ್ಯ ಕೊಡಿ ಎಂದು ಕೇಳಲಾಯಿತು. ಭಾರತ ರತ್ನ ಸಮಿತಿಗೆ ಸಾಕ್ಷ್ಯ ನೀಡಲು ಸಾಧ್ಯವಾಗಲಿಲ್ಲ. ಸುಪ್ರೀಂ ಕೋರ್ಟ್ ನಿರ್ದೇಶನದ ನಂತರ ಪುರಸ್ಕಾರವನ್ನು ಹಿಂತೆಗೆದುಕೊಳ್ಳಲಾಯಿತು. ಹಾಗಾದರೆ ನೇತಾಜಿ ಏನಾದರು?</p>
<p>ಈ ಪ್ರಶ್ನೆಯ ಬಗ್ಗೆ ಹಲವಾರು conspiracy theoryಗಳಿವೆ!</p>
<p>ಅವುಗಳಲ್ಲಿ ಒಂದು ಸೋವಿಯತ್ ರಷ್ಯಾದತ್ತ ಬೆರಳು ತೋರುತ್ತದೆ. ಸೋವಿಯತ್ ನಾಯಕ ಜೋಸೆಫ್ ಸ್ಟಾಲಿನ್ ಹಾಗೂ ರಾಜತಾಂತ್ರಿಕ ಅಧಿಕಾರಿ ವ್ಯಾಚೆಸ್ಲಾವ್ ಮೊಲಟೋವ್, ಬೋಸ್್ರನ್ನು ರಷ್ಯಾದ ಜೈಲಿನಲ್ಲೇ ಇಟ್ಟುಕೊಳ್ಳಬೇಕೇ ಬೇಡವೆ ಎಂಬ ಪ್ರಶ್ನೆಯ ಬಗ್ಗೆ 1946ರಲ್ಲಿ ಚರ್ಚೆ ನಡೆಸಿದ್ದರು ಎಂದು ಅನಧಿಕೃತ ವರದಿಗಳು ತಿಳಿಸಿದ್ದವು. ಅದಕ್ಕಿಂತಲೂ ದಿಗ್ಭ್ರಮೆ ಹುಟ್ಟಿಸುವ ವಿಚಾರವೆಂದರೆ ರಷ್ಯಾದಲ್ಲಿ ಭಾರತದ ರಾಯಭಾರಿಯಾಗಿದ್ದ ಡಾ.ಎಸ್. ರಾಧಾಕೃಷ್ಣನ್ ಅವರಿಗೆ ಬೋಸ್್ರನ್ನು ಭೇಟಿಯಾಗುವ ಅವಕಾಶವನ್ನೂ ಕಲ್ಪಿಸಲಾಗಿತ್ತಂತೆ! ಇದು ಆಳುವ ಕಾಂಗ್ರೆಸ್ ನಾಯಕತ್ವ ಹಾಗೂ ಅದರದ್ದೇ ಆದ ಸರ್ಕಾರಕ್ಕೆ ಬಹಳ ಚೆನ್ನಾಗಿ ಗೊತ್ತಿತ್ತು.</p>
<p>ಆದರೆ&#8230;.</p>
<p>ಸುಭಾಶ್ಚಂದ್ರ ಬೋಸ್್ರೇನಾದರೂ ಭಾರತಕ್ಕೆ ಮರಳಿದರೆ ಜನ ಅವರಿಗೆ ಕೊಟ್ಟಿದ್ದ ಆರಾಧ್ಯ ಸ್ಥಾನದ ಬಲದಿಂದ ಅವರು ಅಧಿಕಾರಕ್ಕೇರುವುದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ಸೇ ಅವರ ಹಿಂದಿರುಗುವಿಕೆಗೆ ಅಡ್ಡವಾಯಿತು. ಕಳೆದ ಆರೂವರೆ ದಶಕಗಳಲ್ಲಿ ್ನಕಾಂಗ್ರೆಸ್ ನಡೆದುಕೊಂಡು ಬರುತ್ತಿರುವುದನ್ನು ಗಮನಿಸಿದರೆ ಈ ಅನುಮಾನಕ್ಕೆ ಸಾಕಷ್ಟು ಪುಷ್ಟಿ, ಪುರಾವೆಗಳು ದೊರೆಯುತ್ತವೆ!! ಇಷ್ಟಕ್ಕೂ &#8220;1945, ಆಗಸ್ಟ್ 18ರಂದು ನೇತಾಜಿ ಮಡಿಯಲು ಅಂತಹ ದುರ್ಘಟನೆಯೇ ನಡೆದಿಲ್ಲ. ತೈವಾನ್ ಸರ್ಕಾರ ನೀಡಿರುವ 1945, ಆಗಸ್ಟ್ 14ರಿಂದ ಸೆಪ್ಟೆಂಬರ್ 20ರವರೆಗಿನ ವಿಮಾನಯಾನ ದಾಖಲೆಗಳಲ್ಲಿ ಯಾವೊಂದು ದುರ್ಘಟನೆ ನಡೆದಿರುವ ಮಾಹಿತಿಯಾಗಲಿ, ದಾಖಲೆಯಾಗಲಿ ಇಲ್ಲ! ಜಪಾನಿನ ಟೋಕಿಯೋ ಬಳಿಯ ರೆಂಕೋಜಿ ದೇವಾಲಯದಲ್ಲಿರುವ ಚಿತಾಭಸ್ಮ ಸುಭಾಶ್ಚಂದ್ರ ಬೋಸ್್ರದ್ದಲ್ಲ. ಅದು ತೈವಾನ್್ನ ಸೈನಿಕನೊಬ್ಬನದ್ದು ಎಂಬುದು ಹಲವಾರು ದಾಖಲೆಗಳಿಂದ ಸ್ಪಷ್ಟವಾಗುತ್ತದೆ&#8221; ಎಂದು ನ್ಯಾಯಮೂರ್ತಿ ಮನೋಜ್ ಕೆ. ಮೂತರ್ ಆಯೋಗ 2005ರಲ್ಲಿ ನೀಡಿದ ವರದಿಯನ್ನು ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ತಿರಸ್ಕರಿಸಿದ್ದೇಕೆ? ಈ ಹಿಂದೆ ಆಯೋಗಗಳ ರಚನೆಯ ನೆಪದಲ್ಲಿ ಕಾಂಗ್ರೆಸ್ ಮಾಡಿದ್ದೇನು?</p>
<p>1947ರಲ್ಲಿ ಜವಾಹರಲಾಲ್ ನೆಹರು ಪ್ರಧಾನಿಯಾದ ಕೂಡಲೇ 1945, ಆಗಸ್ಟ್ 18ರಂದು ನಡೆದ ವಿಮಾನ ದುರಂತದಲ್ಲಿ ನೇತಾಜಿ ಮೃತರಾದರು ಎಂದು ಸ್ವತಃ ಘೋಷಣೆ ಮಾಡುವ ಮೂಲಕ ಅನುಮಾನಗಳಿಗೆ ಆಗಲೇ ರೆಕ್ಕೆ-ಪುಕ್ಕ ಬರಿಸಿದ್ದರು. ನೇತಾಜಿ ಸಾವಿನ ಬಗ್ಗೆ ತನಿಖೆ ನಡೆಸಬೇಕೆಂಬ ಒತ್ತಾಯ ಹೆಚ್ಚಾಗಿದ್ದೂ ಅನಂತರವೇ. 1945 ಆಗಸ್ಟ್ 18 ರಂದು ತೈಹೋಕು ಬಳಿ ನಡೆದ ವಿಮಾನ ದುರ್ಘಟನೆಯಲ್ಲಿ ನೇತಾಜಿ ಮಡಿದರು ಎಂದು 1945, ಆಗಸ್ಟ್ 21 ರಂದು ಟೋಕಿಯೋದಿಂದ ವರದಿಯೇನೋ ಆಯಿತು. ಆದರೆ ಟೋಕಿಯೋ ಹಾಗೂ ತೈಹೋಕುಗಳಿಂದ ಪ್ರಕಟವಾದ ಮಾಧ್ಯಮ ವರದಿಗಳು ವಿರೋಧಾಭಾಸದಿಂದ ಕೂಡಿದ್ದವು. ಅದು ನೇತಾಜಿ ಅಗಲಿಕೆ ಬಗ್ಗೆ ಅನುಮಾನ,ಗೊಂದಲಗಳ ಜತೆಗೆ ವಿವಾದಗಳೇಳಲು ಕಾರಣವಾಯಿತು. ಜತೆಗೆ, ನೇತಾಜಿ ಬಗ್ಗೆ ಗಾಂಧಿ-ನೆಹರುಗೆ ಇದ್ದ ಮತ್ಸರ ಜನರಿಗೆ ತಿಳಿದಿದ್ದ ಕಾರಣ ಯಾರೂ ನೆಹರು ಮಾತನ್ನು ಒಪ್ಪಲು ಸಿದ್ಧರಿರಲಿಲ್ಲ. ಅದರೆ ಫಲವೇ ಶಾ ನವಾಜ್ ಖಾನ್ ಆಯೋಗ. 1956ರಲ್ಲಿ ರಚನೆಯಾದ ಶಾ ನವಾಜ್ ಆಯೋಗ ನೇತಾಜಿ ಮಡಿದ ಸಂದರ್ಭಗಳ ಬಗ್ಗೆ ದೃಷ್ಟಿ ಹಾಯಿಸದೆ, ತೈವಾನ್್ಗೆ ಒಮ್ಮೆಯೂ ಭೇಟಿ ನೀಡದೆ ಕೇವಲ ಅವರಿವರ ಅಭಿಪ್ರಾಯ ಸಂಗ್ರಹಿಸಿ &#8216;ನೇತಾಜಿ ಅವರು ವಿಮಾನ ದುರ್ಘಟನೆಯಲ್ಲಿ ಸಾವನ್ನಪ್ಪಿದ್ದಾರೆ&#8217; ಎಂದು ವರದಿ ಸಲ್ಲಿಸಿತು. ಆದರೆ ಆಯೋಗದ ನಾಲ್ವರು ಸದಸ್ಯರಲ್ಲಿ ಒಬ್ಬರಾಗಿದ್ದ ನೇತಾಜಿಯವರ ಹಿರಿಯ ಸಹೋದರ ಸುರೇಶ್ಚಂದ್ರ ಬೋಸ್, &#8216;ನೇತಾಜಿಯವರು ಸಾವನ್ನಪ್ಪಿದ್ದಾರೆ ಎನ್ನಲು ಅಂತಹ ವಿಮಾನ ದುರ್ಘಟನೆಯೇ ಸಂಭವಿಸಿಲ್ಲ&#8217; ಎಂದು ಅಂದೇ ವರದಿಗೆ ವಿರೋಧ ವ್ಯಕ್ತಪಡಿಸಿದರು. ಜನರೂ ವರದಿಯನ್ನು ಒಪ್ಪದಾದರು. ಹೊಸದಾಗಿ ತನಿಖೆ ನಡೆಸಬೇಕೆಂಬ ಬೇಡಿಕೆ ಹೆಚ್ಚಾಯಿತು. ಪ್ರಧಾನಿ ಇಂದಿರಾ ಗಾಂಧಿಯವರು 1970ರಲ್ಲಿ ಪಂಜಾಬ್ ಹೈಕೋರ್ಟ್್ನ ನಿವೃತ್ತ ಮುಖ್ಯ ನ್ಯಾಯಮುರ್ತಿ ಜಿ.ಡಿ. ಖೋಸ್ಲಾ ನೇತೃತ್ವದ ಆಯೋಗವನ್ನು ರಚಿಸಿದರು. ಆದರೆ ಆಗ ತೈವಾನ್ ಜತೆ ಭಾರತ ರಾಜತಾಂತ್ರಿಕ ಸಂಬಂಧವನ್ನು ಹೊಂದಿರದ ಕಾರಣ, ಅಧಿಕೃತವಾಗಿ ತೈವಾನ್ ಸರ್ಕಾರದ ಜತೆ ಚರ್ಚಿಸಲು ನಮ್ಮ ಸರ್ಕಾರ ಅನುಮತಿ ನೀಡದ ಕಾರಣ ಸತ್ಯಾಂಶವನ್ನು ನಿರೂಪಿಸಲು ಖೋಸ್ಲಾ ಅವರಿಗೂ ಸಾಧ್ಯವಾಗಲಿಲ್ಲ. &#8220;1947, ಆಗಸ್ಟ್ 18ರಂದು ತೈವಾನ್ ರಾಜಧಾನಿ ತೈಹೋಕು (ಈಗ ತೈಪೆ) ಬಳಿ ನಡೆದ ವಿಮಾನ ಅಪಘಾತದಲ್ಲಿ ನೇತಾಜಿ ದುರ್ಮರಣಕ್ಕೊಳಗಾದರು&#8221; ಎಂದು ಅವರೂ ವರದಿಯೊಪ್ಪಿಸಿದರು. ನಂತರ ಅಧಿಕಾರಕ್ಕೆ ಬಂದ ಮೊರಾರ್ಜಿ ದೇಸಾಯಿ, &#8216;ವಿಮಾನ ದುರ್ಘಟನೆಯಲ್ಲಿ ನೇತಾಜಿ ಸಾವನ್ನಪ್ಪಿದರು&#8217; ಎಂಬ ಖೋಸ್ಲಾ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿದರು.</p>
<p>ಇದಾಗಿ 21 ವರ್ಷಗಳ ನಂತರ, ಅಂದರೆ 1998ರಲ್ಲಿ ಹೊಸದಾಗಿ ತನಿಖೆ ನಡೆಸಬೇಕೆಂದು ಕೋಲ್ಕತ್ತಾ ಹೈಕೋರ್ಟ್ ನಿರ್ದೇಶನ ನೀಡಿತು ಹಾಗೂ ಅಂತಹ ನಿರ್ದೇಶನಕ್ಕೆ ಪೂರಕವಾಗಿ ಪಶ್ಚಿಮ ಬಂಗಾಳ ವಿಧಾನ ಸಭೆಯೂ ಸರ್ವಸಮ್ಮತ ನಿರ್ಣಯ ಅಂಗೀಕರಿಸಿತು. ಅದರ ಮೇರೆಗೆ 1999ರಲ್ಲಿ ಆಗಿನ ಕೇಂದ್ರ ಗೃಹ ಸಚಿವ ಲಾಲ್್ಕೃಷ್ಣ ಆಡ್ವಾಣಿಯವರು ಮುಖರ್ಜಿ ಆಯೋಗವನ್ನು ರಚಿಸಿದರು. ಆದರೆ 2004, ಮೇನಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಚುಕ್ಕಾಣಿ ಹಿಡಿದು ಐದು ತಿಂಗಳಾಗುವಷ್ಟರಲ್ಲೇ 2004, ಅಕ್ಟೋಬರ್್ನಲ್ಲಿ ತನಿಖಾ ಆಯೋಗವನ್ನೇ ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂತು. ಆ ಮೂಲಕ ಸತ್ಯವನ್ನರಸುತ್ತಾ ರಷ್ಯಾಕ್ಕೆ ತೆರಳಲು ಸಿದ್ಧರಾಗಿದ್ದ ಮುಖರ್ಜಿಯವರನ್ನು ತಡೆಯಲು ಯತ್ನಿಸಿತು. ಆದಾಗ್ಯೂ, ಮಾಧ್ಯಮಗಳ ವರದಿಯ ಹಿನ್ನೆಲೆಯಲ್ಲಿ ಒತ್ತಡಕ್ಕೊಳಗಾದ ಸರ್ಕಾರ ತನಿಖೆಯನ್ನು ಪೂರೈಸಲು ಅವಕಾಶ ನೀಡಬೇಕಾಗಿ ಬಂತು. ಆದರೆ ನೇತಾಜಿ ಸಾವಿನ ಬಗ್ಗೆ ಬೆಳಕು ಚೆಲ್ಲುವಂತಹ ಮಾಹಿತಿಯನ್ನು ಹೊಂದಿದ್ದ ಎರಡು ಪ್ರಮುಖ ದಾಖಲೆಗಳನ್ನೇ ಸರ್ಕಾರ ನೀಡಲಿಲ್ಲ! ಅದರಲ್ಲೂ &#8216;ನೇತಾಜಿ ಕಣ್ಮರೆ&#8217; ಎಂಬ ಬಹುಮುಖ್ಯ ದಾಖಲೆ 1972ರಲ್ಲೇ ಆಕಸ್ಮಿಕವಾಗಿ ನಾಶಗೊಂಡಿದೆ ಎಂದ ಸರಕಾರ ತನಿಖೆಗೆ ಅಸಹಕಾರ ನೀಡಲಾರಂಭಿಸಿತು. ಇಷ್ಟಾಗಿಯೂ ರಷ್ಯಾ, ತೈವಾನ್ ಮತ್ತು ಥಾಯ್್ಲ್ಯಾಂಡ್್ಗಳಿಗೆ ತೆರಳಿ ಮಾಹಿತಿ ಕಲೆಹಾಕಿದ ನ್ಯಾಯಮೂರ್ತಿ ಮುಖರ್ಜಿ, &#8220;ಸೈಗಾನ್್ನಿಂದ (ವಿಯೆಟ್ನಾಂ) ವಿಮಾನದ ಮೂಲಕ ತೆರಳಿದ ನೇತಾಜಿ, 1945, ಆಗಸ್ಟ್ 17 ರಂದು ಅಮೆರಿಕ ನೇತೃತ್ವದ ಪಡೆಗಳ ಅಪಾಯದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಆದರೆ ಆಗಸ್ಟ್ 23 ರಂದು ಪ್ರಸಾರವಾದ &#8216;ವಿಮಾನ ಅಪಘಾತ-ನೇತಾಜಿ ಶವಸಂಸ್ಕಾರ- ಚಿತಾಭಸ್ಮ&#8217;ದ ಸುದ್ದಿ ವಿರೋಧಿಗಳನ್ನು ದಾರಿ ತಪ್ಪಿಸುವ ಸಲುವಾಗಿ ಜಪಾನಿ ಸೇನೆ, ಇಬ್ಬರು ಸೇನಾ ವೈದ್ಯರು ಹಾಗೂ ನೇತಾಜಿ ಸಹಯೋಗಿ ಹಬೀಬುರ್ ರೆಹಮಾನ್ ಒಟ್ಟುಗೂಡಿ ಹೆಣದ ಕಥೆಯೇ ಹೊರತು ಮತ್ತೇನೂ ಅಲ್ಲ. 1945ರಲ್ಲಿ ನೇತಾಜಿ ಸಾವನ್ನಪ್ಪಲು ಅಂತಹ ವಿಮಾನ ದುರಂತವೇ ಸಂಭವಿಸಿಲ್ಲ. ರೆಂಕೋಜಿ ದೇವಾಲಯದಲ್ಲಿರುವ ಚಿತಾಭಸ್ಮ ನೇತಾಜಿಯವರದಲ್ಲ ಎಂಬ ಅಘಾತಕಾರಿ ವಿಷಯವನ್ನು ಮೊಟ್ಟಮೊದಲ ಬಾರಿಗೆ ಬಹಿರಂಗಪಡಿಸಿದರು!</p>
<p>ಆದರೆ ನೇತಾಜಿ ಸಾವಿನ ಬಗ್ಗೆ ವಿಭಿನ್ನ ಬೆಳಕು ಚೆಲ್ಲುವ ಇಂತಹ ವರದಿಯನ್ನೇ ಒಪ್ಪುವುದಿಲ್ಲ ಎಂದ ಕಾಂಗ್ರೆಸ್ ಸರ್ಕಾರ ಕಾರಣವನ್ನೇಕೆ ನೀಡುತ್ತಿಲ್ಲ?</p>
<p>ಮೂರು ಭಾಗಗಳನ್ನು ಹೊಂದಿರುವ ಮುಖರ್ಜಿ ಆಯೋಗದ ವರದಿಯಲ್ಲಿ ಹುರುಳಿಲ್ಲ ಎನ್ನಲು &#8220;1945 ಆಗಸ್ಟ್ 14ರ ಸೆಪ್ಟೆಂಬರ್ 20ರ ವರೆಗೂ ಯಾವುದೇ ವಿಮಾನ ದುರ್ಘಟನೆ ಸಂಭವಿಸಿಲ್ಲ&#8221; ಎಂದು ತೈವಾನ್ ಸರ್ಕಾರವೇ ಅಧಿಕೃತವಾಗಿ ತಿಳಿಸಿದೆ. ಒಂದು ವೇಳೆ, ದುರ್ಘಟನೆ ಸಂಭವಿಸಿ ನೇತಾಜಿ ಮತ್ತು ಸೇನಾ ಜನರಲ್ ಸ್ಥಾನಮಾನ ಹೊಂದಿದ್ದ ಉನ್ನತ ಜಪಾನಿ ಅಧಿಕಾರಿ ಶಿದೀ ಸಾವನ್ನಪ್ಪಿದ್ದರೆ &#8216;ಸೆಂಟ್ರಲ್ ಡೈಲಿ ನ್ಯೂಸ್್&#8217; ವರದಿಯನ್ನೇಕೆ ಮಾಡಲಿಲ್ಲ? ಇನ್ನು ರೆಂಕೋಜಿ ದೇವಾಲಯದಲ್ಲಿರುವ ಚಿತಾಭಸ್ಮ ನೇತಾಜಿಯವರದ್ದೇ ಎಂದು ಕೇಂದ್ರ ಸರ್ಕಾರಕ್ಕೆ ಖಚಿತವಾಗಿ ತಿಳಿದಿದ್ದರೆ, ಡಿ.ಎನ್.ಎ. ಟೆಸ್ಟ್ ಮಾಡಿಸುವ ಮೂಲಕ ತನಗೆ ಮಾತ್ರ ತಿಳಿದಿರುವ &#8216;ಸತ್ಯ&#8217; ವನ್ನು ಸಾಬೀತುಪಡಿಸಬಹುದಲ್ಲವೆ? ಕನಿಷ್ಠ ಪಕ್ಷ, ವರದಿಯನ್ನು ಸ್ವೀಕರಿಸಿ ಹೆಚ್ಚಿನ ತನಿಖೆಗೆ ಆದೇಶ ನೀಡಬಹುದಲ್ಲವೆ? ಇಂತಹ ಅವಕಾಶಗಳಿದ್ದರೂ ಸರ್ಕಾರ ಹಿಂಜರಿಯುತ್ತಿರುವುದೇಕೆ? &#8216;ನೇತಾಜಿ ಕಣ್ಮರೆ&#8217;ಯಂತಹ ಬಹುಮುಖ್ಯ ದಾಖಲೆ ನಾಶವಾಗಲು ಹೇಗೆ ತಾನೇ ಸಾಧ್ಯವಾಯಿತು? ಆದಾಗಲೇ ಸಾರ್ವಜನಿಕಗೊಳಿಸಲಾಗಿದ್ದ ನೇತಾಜಿ ಬದುಕಿಗೆ ಸಂಬಂಧಪಟ್ಟ &#8216;ಅನಿರ್ಬಂಧಿತ ಮಾಹಿತಿ&#8217;ಗಳನ್ನು (ಡಿ-ಕ್ಲಾಸಿಫೈಡ್) ಮುಖರ್ಜಿ ಆಯೋಗ ರಷ್ಯಾಕ್ಕೆ ತೆರಳಿದ ಸಂದರ್ಭದಲ್ಲೇ ಅಲ್ಲಿನ ಸರಕಾರ ಪುನಃ &#8216;ನಿರ್ಬಂಧಿತ ಮಾಹಿತಿ&#8217;ಯನ್ನಾಗಿ (ರಿ-ಕ್ಲಾಸಿಫೈಡ್) ಪರಿವರ್ತಿಸಿದ್ದೇಕೆ? ತನ್ನ ಪ್ರಮುಖ ಅಧಿಕಾರಿಯೊಬ್ಬರನ್ನು ರಷ್ಯಾ ಏಕಾಏಕಿ ಟರ್ಕಿಗೆ ವರ್ಗಾವಣೆ ಮಾಡಿದ್ದೇಕೆ? ಮುಖರ್ಜಿ ಆಯೋಗದ ಮುಂದೆ ಆತ ಸಾಕ್ಷ್ಯ, ನುಡಿದರೆ ಸತ್ಯ ಬೆಳಕಿಗೆ ಬರುತ್ತದೆ ಎಂಬ ಭಯದಿಂದಲೇ? ಏಳು ವರ್ಷಗಳಷ್ಟು ಸುದೀರ್ಘ ಕಾಲ ತನಿಖೆ ನಡೆಸಿ, ಅದರಲ್ಲಿ 5 ವರ್ಷಗಳನ್ನು ಭಾರತ ಹಾಗೂ ವಿದೇಶಿ ಸಂಗ್ರಹಾಲಯಗಳಲ್ಲಿರುವ ಮಾಹಿತಿಯನ್ನು  ಪರಾಮರ್ಶಿಸುವುದರಲ್ಲೇ ಕಳೆದು ರೂಪಿಸಿದ ವರದಿಯನ್ನು ಕಾರಣ ನೀಡದೆ ಸಾರಾಸಗಟಾಗಿ ತಿರಸ್ಕರಿಸಿದ್ದೇಕೆ? ಆಯೋಗದ ವರದಿಯಲ್ಲಿ ಸತ್ಯಾಂಶಗಳೇ ಇಲ್ಲವೆ? ಇಲ್ಲ ಎಂದಾದರೆ ಸರ್ಕಾರಕ್ಕೆ ತಿಳಿದಿರುವ ಸತ್ಯವನ್ನಾದರೂ ಬಹಿರಂಗಪಡಿಸಲಿ? ಸರ್ಕಾರ ಯಾಕಾಗಿ ವರದಿಯನ್ನು ತಿರಸ್ಕರಿಸುತ್ತಿದೆ? ಈ ರೀತಿ ವರ್ತಿಸುವುದರಿಂದ ಜನರ ಮನಸ್ಸಿನಲ್ಲಿ ಅನುಮಾನಗಳು ಮತ್ತೂ ಗಟ್ಟಿಗೊಳ್ಳುವುದಿಲ್ಲವೆ? &#8216;ನೇತಾಜಿ ಮಡಿದರು&#8217; ಎಂದು ನೆಹರು ಹೇಳಿದ ಸುಳ್ಳನ್ನು ಇನ್ನೆಷ್ಟು ವರ್ಷಗಳ ಕಾಲ ನಾವು ನಂಬಬೇಕು?</p>
]]></content:encoded>
			<wfw:commentRss>http://pratapsimha.com/2012/02/01/netaji-2/feed/</wfw:commentRss>
		<slash:comments>0</slash:comments>
		</item>
		<item>
		<title>ನೇತಾಗಳು ಬಹಳಷ್ಟಿದ್ದರು, ನೇತಾಜಿ ಮಾತ್ರ ಅವರೊಬ್ಬರೇ ಆಗಿದ್ದರು!</title>
		<link>http://pratapsimha.com/2012/01/23/netaji/</link>
		<comments>http://pratapsimha.com/2012/01/23/netaji/#comments</comments>
		<pubDate>Mon, 23 Jan 2012 05:48:39 +0000</pubDate>
		<dc:creator>Pratap Simha</dc:creator>
				<category><![CDATA[Bettale-Jagattu]]></category>

		<guid isPermaLink="false">http://pratapsimha.com/?p=1237</guid>
		<description><![CDATA[Give me Blood, I promise you Freedom! ನೀವು ನನಗೆ ರಕ್ತವನ್ನು ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ ಎನ್ನುತ್ತಿದ್ದ ಸುಭಾಶ್ಚಂದ್ರ ಬೋಸ್ ಹಾಗೂ ಮಹಾತ್ಮ ಗಾಂಧೀಜಿ ಇಬ್ಬರ ಆಲೋಚನೆ, ಆಶಯ, ಮಾರ್ಗಗಳು ಸಂಪೂರ್ಣ ಭಿನ್ನವಾಗಿದ್ದವು. ಸ್ವಾತಂತ್ರ್ಯ ಪಡೆಯಲು ಗಾಂಧೀಜಿ ಅನುಸರಿಸಲು ಹೊರಟಿದ್ದ ಮಾರ್ಗದ ಬಗ್ಗೆ ಸುಭಾಷ್ ಮಾತ್ರವಲ್ಲ ಬಾಲಗಂಗಾಧರ ತಿಲಕ್ ಹಾಗೂ ಅರವಿಂದ ಘೋಷ್್ಗೂ ಅಸಮ್ಮತಿಯಿತ್ತು. ರಕ್ತ ಚೆಲ್ಲಿ ಸ್ವಾತಂತ್ರ್ಯ ಪಡೆಯಬೇಕೇ ಹೊರತು, ಗಾಂಧೀ ಪ್ರತಿಪಾದನೆಯ ಗೋಗರೆಯುವ ಮಾರ್ಗದಿಂದ ಯಾವ ಲಾಭವೂ ಇಲ್ಲ ಎಂದು [...]]]></description>
			<content:encoded><![CDATA[<p><a href="http://pratapsimha.com/wp-content/uploads/2012/01/bose.jpg"><img src="http://pratapsimha.com/wp-content/uploads/2012/01/bose.jpg" alt="" title="bose" width="273" height="185" class="aligncenter size-full wp-image-1238" /></a></p>
<p>Give me Blood, I promise you Freedom! </p>
<p>ನೀವು ನನಗೆ ರಕ್ತವನ್ನು ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ ಎನ್ನುತ್ತಿದ್ದ ಸುಭಾಶ್ಚಂದ್ರ ಬೋಸ್ ಹಾಗೂ ಮಹಾತ್ಮ ಗಾಂಧೀಜಿ ಇಬ್ಬರ ಆಲೋಚನೆ, ಆಶಯ, ಮಾರ್ಗಗಳು ಸಂಪೂರ್ಣ ಭಿನ್ನವಾಗಿದ್ದವು. ಸ್ವಾತಂತ್ರ್ಯ ಪಡೆಯಲು ಗಾಂಧೀಜಿ ಅನುಸರಿಸಲು ಹೊರಟಿದ್ದ ಮಾರ್ಗದ ಬಗ್ಗೆ ಸುಭಾಷ್ ಮಾತ್ರವಲ್ಲ ಬಾಲಗಂಗಾಧರ ತಿಲಕ್ ಹಾಗೂ ಅರವಿಂದ ಘೋಷ್್ಗೂ ಅಸಮ್ಮತಿಯಿತ್ತು. ರಕ್ತ ಚೆಲ್ಲಿ ಸ್ವಾತಂತ್ರ್ಯ ಪಡೆಯಬೇಕೇ ಹೊರತು, ಗಾಂಧೀ ಪ್ರತಿಪಾದನೆಯ ಗೋಗರೆಯುವ ಮಾರ್ಗದಿಂದ ಯಾವ ಲಾಭವೂ ಇಲ್ಲ ಎಂದು ಎಲ್ಲರೂ ಭಾವಿಸಿದ್ದರು. ಒಂದೆಡೆ ಸುಭಾಷ್ ಹಾಗೂ ಇತರೆ ಕ್ರಾಂತಿಕಾರಿಗಳು ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ಒತ್ತಾಯಿಸುತ್ತಿರುವ ಬೆನ್ನಲ್ಲೇ ಕೇವಲ ಕೆಲ ಆಡಳಿತಾತ್ಮಕ ಸ್ವಾತಂತ್ರ್ಯ ಕೊಟ್ಟರೆ ಸಾಕೆಂದು ಭಾವಿಸಿ 1931ರಲ್ಲಿ ಎರಡನೇ ದುಂಡುಮೇಜಿನ ಸಭೆಗೆ ಬ್ರಿಟನ್್ಗೆ ತೆರಳಲು ಮುಂದಾದ ಗಾಂಧೀಜಿ ಭಾರತೀಯರಿಗೆ ಅನ್ಯಾಯವೆಸಗುತ್ತಿದ್ದಾರೆ ಎಂದನಿಸಿತು. </p>
<p>ಹಾಗಂತ ಸುಭಾಶ್ಚಂದ್ರ ಬೋಸ್ ಗಾಂಧೀಜಿಯವರಂತೆ ಎಂದೂ ಸಣ್ಣತನ ತೋರಲಿಲ್ಲ!</p>
<p>ಅಭಿಪ್ರಾಯಭೇದ ಸ್ವಾತಂತ್ರ್ಯ ಚಳವಳಿಗೆ ಅಡ್ಡಬರಲು ಬಿಡಲಿಲ್ಲ. ನಿಜಹೇಳಬೇಕೆಂದರೆ ಸುಭಾಷ್ ಅವರ ಗುಣನಡತೆಯಲ್ಲೇ ಸಣ್ಣತನಕ್ಕೆ ಸ್ಥಾನವಿರಲಿಲ್ಲ. ಖ್ಯಾತ ಅಧ್ಯಾತ್ಮ ಗುರು ಓಶೋ ರಜನೀಶ್ ಅವರಿಗೂ ಇಷ್ಟವಾದ ಸಂಗತಿಯೂ ಅದೇ. ಸುಭಾಷ್ ಅವರನ್ನು ಬಹಳ ಮೆಚ್ಚಿಕೊಂಡಿದ್ದ ಅವರು ಸುಭಾಷ್-ಗಾಂಧಿ ಬಗ್ಗೆ ಹೀಗೆ ಹೇಳುತ್ತಾರೆ-&#8217;I am reminded of a young man. His name was Subhash Chandra. He became a great revolutionary and I have tremendeous respect for him, because he was the only man in India who opposed Mahatma Gandhi; he could see that all this Mahatmahood is simply politics and nothing else&#8217;. ಅಂದಮಾತ್ರಕ್ಕೆ ತಲೆಯಲ್ಲಿ ರಕ್ತ ಕ್ರಾಂತಿಯನ್ನೇ ತುಂಬಿಕೊಂಡಿದ್ದ ವ್ಯಕ್ತಿ ಸುಭಾಶ್ಚಂದ್ರ ಬೋಸ್ ಎಂದು ಭಾವಿಸಬೇಡಿ. ಆ ಕಾಲಕ್ಕೆ ಉನ್ನತ ವ್ಯಾಸಂಗಕ್ಕಾಗಿ ಬ್ರಿಟನ್್ಗೆ ಹೋಗಿ ಬ್ಯಾರಿಸ್ಟರ್ ಆಗಿ ಕರಿಕೋಟಿನೊಂದಿಗೆ ಭಾರತಕ್ಕೆ ಯಾರೂ ಬರಬಹುದಿತ್ತು. ಆದರೆ. ಐಸಿಎಸ್ (Indian Civil Service) ಪಾಸಾಗಲು ಹೆಚ್ಚೂ ಕಡಿಮೆ ಸಾಧ್ಯವೇ ಇರಲಿಲ್ಲ! ಪಾಸಾಗಲು ಬ್ರಿಟಿಷರೇ ಅವಕಾಶ ಕೊಡುತ್ತಿರಲಿಲ್ಲ. ಒಂದು ವೇಳೆ ಪಾಸುಮಾಡಿದರೆ ಉನ್ನತ ಆಡಳಿತಾತ್ಮಕ ಸ್ಥಾನಗಳನ್ನು ಭಾರತೀಯರೇ ಆಕ್ರಮಿಸಿ ಬಿಡುತ್ತಾರೆಂಬ ಭಯ ಬ್ರಿಟಿಷರಿಗಿತ್ತು. ಇಂಥ ಅಡೆತಡೆಗಳ ನಡುವೆಯೂ ಐಸಿಎಸ್ ಪಾಸು ಮಾಡಿದ ಮೊದಲ ವ್ಯಕ್ತಿ ರವೀಂದ್ರನಾಥ ಟಾಗೋರರ ಹಿರಿಯಣ್ಣ ಸತ್ಯೇಂದ್ರನಾಥ್ ಬೋಸ್! ಅದು 1863ರಲ್ಲಿ. ನಂತರ ಯಾರಿಂದಲೂ ICS ಪಾಸು ಮಾಡಲಾಗಿರಲಿಲ್ಲ. ಒಂದಿಲ್ಲೊಂದು ಕ್ಷುಲ್ಲಕ ಕಾರಣ ಕೊಟ್ಟು ನಪಾಸು ಮಾಡಿಬಿಡುತ್ತಿದ್ದರು. ಅಂಥ ಅರವಿಂದ ಘೋಷ್್ರನ್ನೇ ಫೇಲು ಮಾಡಿದ್ದರು, ಯಾಕೆ ಗೊತೆ?್ತ ಅರವಿಂದರು ಈ ದೇಶ ಕಂಡ ಅತ್ಯಂತ ಪ್ರತಿಭಾನ್ವಿತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ICS ಪರೀಕ್ಷೆಯ ಪ್ರತಿಯೊಂದು ಸಬ್ಜೆಕ್ಟ್್ಗಳಲ್ಲೂ ಮೊದಲಿಗರಾಗಿ ಪಾಸಾದರು. ಇನ್ನೇನು ICS ಅಧಿಕಾರಿಯಾದರು ಎನ್ನುವಷ್ಟರಲ್ಲಿ ಕುದುರೆ ಸವಾರಿ ಮಾಡಲಾಗಲಿಲ್ಲ ಎಂಬ ಕಾರಣಕ್ಕೆ ಫೇಲು ಮಾಡಿದರು. ಕುದುರೆ ಸವಾರಿಗೂ ICS ಪಾಸಾಗಿ ಅಧಿಕಾರಶಾಹಿಯಾಗುವುದಕ್ಕೂ ಏನು ಸಂಬಂಧವೋ ಗೊತ್ತಿಲ್ಲ, ಆದರೆ ಇಂತಹ ಅಡಚಣೆಗಳ ನಡುವೆಯೂ ಸುಭಾಶ್ಚಂದ್ರ ಬೋಸ್ ಐಈಖ ಮಾಡಲು ಇಂಗ್ಲೆಂಡ್್ಗೆ ತೆರಳಿದರು. ಅಂತಿಮ ಪರೀಕ್ಷೆಯಲ್ಲಿ ಇಂಗ್ಲೆಂಡ್್ಗೇ 4ನೇಯವರಾಗಿ ತೇರ್ಗಡೆಯಾದರು. ಅದರಲ್ಲೂ ಇಂಗ್ಲಿಷ್್ರ ಮಾತೃಭಾಷೆಯಾದ ಇಂಗ್ಲಿಷ್ ವಿಷಯದಲ್ಲಿ ಭಾರತೀಯ ಬೋಸ್ ಮೊದಲಿಗರಾಗಿ ಪಾಸಾಗಿದ್ದರು. ಬ್ರಿಟಿಷರ ಯಾವ ತಂತ್ರಗಳೂ ಬೋಸ್ ICS ಅಧಿಕಾರಿಯಾಗುವುದನ್ನು ತಡೆಯಲು ಸಾಧ್ಯವಾಗಲಿಲ್ಲ. ICS ಮಾಡಿದವರು ವೃತ್ತಿಗೆ ತೆರಳುವ ಮೊದಲು ಗವರ್ನರ್ ಮುಂದೆ ಸಾಂಪ್ರದಾಯಿಕವಾದ ಒಂದು ಇಂಟರ್್ವ್ಯೂ ಎದುರಿಸಬೇಕು. ಆ ಘಟನೆಯನ್ನು ಓಶೋ ಬಹಳ ಚೆನ್ನಾಗಿ ವಿವರಿಸುತ್ತಾರೆ. ಈ ಬೆಂಗಾಲಿಗಳು ಎಲ್ಲಿಗೇ ಹೋಗಲಿ, ಅದು ಮಳೆ, ಚಳಿ, ಬೇಸಿಗೆ ಯಾವುದೇ ಕಾಲವಾಗಿರಲಿ ಬಗಲಲ್ಲೊಂದು ಕೊಡೆಯನ್ನು ಹಿಡಿದೇ ಹೋಗುತ್ತಾರೆ. ಹಾಗೇಕೆ ಎಂದೂ ಯಾರಿಗೆ ಗೊತ್ತಿಲ್ಲ. ಆದರೆ ಕೊಡೆ ಮಾತ್ರ ಕಾಯಂ ಕೈಯಲ್ಲಿರುತ್ತದೆ. ತಲೆಗೆ ಹ್ಯಾಟ್ ಧರಿಸಿ ಗವರ್ನರ್ ಜನರಲ್ ಕಚೇರಿಗೆ ಕಾಲಿರಿಸಿದ ಸುಭಾಷ್ ಬಗಲಲ್ಲೂ ಕೊಡೆಯೊಂದಿರುತ್ತದೆ! ಹಾಗೆ ಬಂದವರೇ ಕುರ್ಚಿಯಲ್ಲಿ ಆಸೀನರಾಗುತ್ತಾರೆ. ಅದನ್ನು ಕಂಡು ಕೆಂಡಾಮಂಡಲರಾದ ಗವರ್ನರ್, &#8220;ನಿನಗೆ ಮ್ಯಾನರ್ಸೆ ಗೊತ್ತಿಲ್ಲ. ನಿನ್ನನ್ನು ICS ಪಾಸು ಮಾಡಿದವನಾನು? ಎಂದು ಚೀರಾಡುತ್ತಾರೆ!!</p>
<p>ಆಗ ಸುಭಾಷ್ ಕೇಳುತ್ತಾರೆ-ಯಾವ ಮ್ಯಾನರ್ಸ್ ಬಗ್ಗೆ ಮಾತನಾಡುತ್ತಿದ್ದೀರಿ ನೀವು? </p>
<p>ಗವರ್ನರ್ ಜನರಲ್-ಒಳಬಂದ ಕೂಡಲೇ ಹ್ಯಾಟ್ ತೆಗೆದು ಗೌರವ ಸೂಚಿಸಬೇಕೆಂದು ನಿನಗೆ ಗೊತ್ತಿಲ್ಲವೆ? ಜತೆಗೆ ಕುಳಿತುಕೊಳ್ಳುವ ಮೊದಲು ನನ್ನ ಅನುಮತಿ ಪಡೆದೆಯಾ?</p>
<p>ಬಗಲಲ್ಲಿದ್ದ ಕೊಡೆಯ ಕೊಕ್ಕೆಯನ್ನು ಗವರ್ನರ್ ಜನರಲ್್ನ ಕುತ್ತಿಗೆ ಸುತ್ತಾ ಹಾಕಿದ ಸುಭಾಷ್ ಹೇಳುತ್ತಾರೆ- &#8220;ನಡತೆ ಬಗ್ಗೆ ಮಾತನಾಡುವ ನೀನು ಮೊದಲು ಸರಿಯಾಗಿ ನಡೆದುಕೋ. ನಾನು ಒಳಬಂದಾಗ ನೀನು ಮೊದಲು ಎದ್ದು ನಿಲ್ಲಬೇಕಿತ್ತು. ಇಷ್ಟಕ್ಕೂ ಅತಿಥಿ ನಾನೋ ನೀನೋ? ಹ್ಯಾಟು ತೆಗೆದು ಅತಿಥಿಗೆ ಮೊದಲು ನೀನು ಗೌರವ ಸೂಚಿಸಬೇಕಿತ್ತು. ಆದರೆ, ನೀನು ಆ ಕೆಲಸ ಮಾಡಿದೆಯಾ? ಹಾಗಿರುವಾಗ ನಾನೇಕೆ ಹ್ಯಾಟು ತೆಗೆದು ಗೌರವ ಸೂಚಿಸಲಿ? ಇನ್ನು ನಾನು ಒಳಬಂದಾಗ ಕುಳಿತುಕೊಂಡೇ ಇದ್ದೆಯಲ್ಲ ಅದಕ್ಕೆ ನನ್ನ ಅನುಮತಿ ಪಡೆದಿದ್ದೆಯಾ? ಅಂದಮೇಲೆ ನಾನೇಕೆ ನಿನ್ನ ಅನುಮತಿ ಪಡೆಯಬೇಕು? ನೀನು ಹೆಚ್ಚೆಂದರೆ ನನ್ನನ್ನು ICS&#8221; ನಿಂದ ತಿರಸ್ಕರಿಸಬಹುದು. ಆದರೆ, ಆ ಅವಕಾಶ ನಿನಗೆ ಕೊಡುವುದಿಲ್ಲ. ನಿನ್ನ ICS ಅನ್ನು ನಾನೇ ತಿರಸ್ಕರಿಸುತ್ತಿದ್ದೇನೆ&#8221;. ಹಾಗೆಂದು ಹೊರಬಂದರು.</p>
<p>ಅದು ಸುಭಾಷ್ ವ್ಯಕ್ತಿತ್ವ! </p>
<p>1930ರಲ್ಲಿ ನಡೆದ ಅಸಹಕಾರ ಚಳವಳಿಯಲ್ಲಿ ಬಂಧಿತರಾದ ಸುಭಾಷ್ ಅದೇ ವರ್ಷ ನಡೆದ ಚುನಾವಣೆಯಲ್ಲಿ ಕಲ್ಕತ್ತಾದ ಮೇಯರ್ ಆಗಿ ಆಯ್ಕೆಯಾದರು. ನಂತರವೂ ಬಂಧನ ತಪ್ಪಲಿಲ್ಲ. ಈ ಮಧ್ಯೆ ತೀವ್ರ ಅನಾರೋಗ್ಯಕ್ಕೊಳಗಾದ ಬೋಸರಿಗೆ ಟಿಬಿ ಕಾಯಿಲೆ ಬಂದಿದೆ ಎಂದು ತಿಳಿಯಿತು. ಹೆಚ್ಚಿನ ಚಿಕಿತ್ಸೆಗಾಗಿ ಸ್ವಿಜರ್್ಲ್ಯಾಂಡ್್ಗೆ ಕಳುಹಿಸಬೇಕೆಂದು ಶಿಫಾರಸ್ಸು ಮಾಡಲಾಯಿತು. ಒಂದು ಕಡೆ ಚಿಕಿತ್ಸೆ ನೆಪದಲ್ಲಿ ದೇಶದಿಂದ ಹೊರದಬ್ಬಿದರೆ ದೊಡ್ಡ ತಲೆನೋವು ಕಡಿಮೆಯಾಗುತ್ತದೆ ಎಂದು ಬ್ರಿಟಿಷರು ಭಾವಿಸಿದರೆ ಇನ್ನೊಂದೆಡೆ ದೇಶದಿಂದ ಹೊರಹೋದರೆ ಬ್ರಿಟಿಷರ ಅಡ್ಡಿ ಆತಂಕಗಳಿಲ್ಲದೆ ತಮ್ಮ ಚಟುವಟಿಕೆಗಳನ್ನು ಇನ್ನೂ ತೀವ್ರಗೊಳಿಸಬಹುದೆಂದು ಬೋಸ್ ಭಾವಿಸಿದರು. 1933, ಫೆಬ್ರವರಿ 23ರಂದು ಯುರೋಪ್್ನತ್ತ ಪಯಣ ಆರಂಭಿಸಿದ ಬೋಸ್, 36ರವರೆಗೂ ವಿದೇಶಗಳಲ್ಲಿದ್ದ್ದು ಭಾರತೀಯ ಕ್ರಾಂತಿಕಾರಿಗಳನ್ನು ಭೇಟಿಯಾಗಿ ಸಂಪರ್ಕ ಸಾಧಿಸಿದರು. ಜತೆಗೆ ಯುರೋಪ್್ನ ಸಮಾಜವಾದಿಗಳನ್ನೂ ಭೇಟಿಯಾಗಿ ಭಾರತದ ಸ್ವಾತಂತ್ರ್ಯ ಚಳವಳಿಗೆ ಬೆಂಬಲ ಕೋರಿದರು. ಇಟಲಿಯ ಸರ್ವಾಧಿಕಾರಿ ಬೆನೆಟ್ ಮುಸೋಲಿನಿಯನ್ನು ಭೇಟಿ ಮಾಡಿದ ನಂತರ ವಿಯೆನ್ನಾವನ್ನೇ ತಮ್ಮ ಚಟುವಟಿಕೆಯ ಕೇಂದ್ರವಾಗಿಸಿಕೊಂಡರು. 1936, ಮಾರ್ಚ್ 27ರಂದು ಭಾರತಕ್ಕೆ ಆಗಮಿಸಿದ ಕೂಡಲೇ ಬೋಸರನ್ನು ನೇರವಾಗಿ ಸೆರೆಮನೆಗೆ ಕಳುಹಿಸಲಾಯಿತು. ಒಂದು ವರ್ಷ ಸುಮ್ಮನಿದ್ದು ಬಿಡುಗಡೆಯಾಗಿ ಹೊರಬಂದ ಕೂಡಲೇ ಕಲ್ಕತ್ತಾದಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದಲ್ಲಿ ಪಾಲ್ಗೊಂಡರು. ಆ ವೇಳೆಗಾಗಲೇ ಸುಭಾಷ್ ಹಾಗೂ ಗಾಂಧಿ ನಡುವಿನ ಸಂಘರ್ಷ ತಣ್ಣಗಾಗಿತ್ತು. ಜತೆಗೆ ಸುಭಾಷ್ ಹೆಸರು ದೇಶಕ್ಕೇ ಪರಿಚಿತವಾಗಿತ್ತು. 1938ರಲ್ಲಿ ಹರಿಪುರದಲ್ಲಿ ನಡೆಯಲಿದ್ದ ಕಾಂಗ್ರೆಸ್ ಅಧಿವೇಶನದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಬೋಸ್ ಮುಂದಾದರು. ಆ ಕಾರಣಕ್ಕಾಗಿ ಒಂದು ತಿಂಗಳ ಇಂಗ್ಲೆಂಡ್ ಪ್ರವಾಸ ಕೈಗೊಂಡರು. ಸದಾ ಬ್ರಿಟಿಷರ ಕಣ್ಗಾವಲಿನಲ್ಲಿದ್ದ ಬೋಸರದ್ದು ದಿಟ್ಟ ನಿರ್ಧಾರವಾಗಿತ್ತು. ಇಂಗ್ಲೆಂಡ್ ಪ್ರವಾಸದ ವೇಳೆ ಭಾರತೀಯ ವಿದ್ಯಾರ್ಥಿಗಳನ್ನು ಮಾತ್ರವಲ್ಲ ಭಾರತದ ಬಗ್ಗೆ ಮೃದು ನಿಲುವು ಹೊಂದಿದ್ದ ಲೇಬರ್ ಪಕ್ಷದ ನಾಯಕರು ಹಾಗೂ ರಾಜಕೀಯ ಚಿಂತಕರನ್ನು ಭೇಟಿಯಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲ ಯಾಚಿಸಿದರು. ಭಾರತಕ್ಕೆ ಮರಳಿದ ಬೋಸ್ 1938ರಲ್ಲಿ ಕಾಂಗ್ರೆಸ್ ಅಧ್ಯಕ್ಷರೂ ಆದರು. </p>
<p>ಎಲ್ಲರ ಬಾಯಲ್ಲೂ ಬೋಸ್ ಬೋಸ್, ಗಾಂಧೀಜಿ ಎದೆ ಡುಸ್! </p>
<p>1939ರಲ್ಲಿ ಪುನರಾಯ್ಕೆ ಬಯಸಿದ ಬೋಸರನ್ನು ಸೋಲಿಸಲು ಗಾಂಧೀಜಿ ಮುಂದಾದರು. ಆದರೆ, ಬೋಸರನ್ನು ಎದುರಿಸುವ ತಾಕತ್ತು ಯಾರಿಗೂ ಇರಲಿಲ್ಲ. ಸ್ವತಃ ಸ್ಪರ್ಧಿಸಿದರೆ ತನ್ನ ಸಣ್ಣ ಬುದ್ಧಿ ಎಲ್ಲರಿಗೂ ಗೊತ್ತಾಗುತ್ತದೆ ಎಂಬ ಭಯ ಗಾಂಧೀಜಿಗೆ. ಆ ಕಾರಣಕ್ಕೆ ಡಾ. ಪಟ್ಟಾಭಿ ಸೀತಾರಾಮಯ್ಯ ಎಂಬ ತಮ್ಮ ಚೇಲಾರನ್ನು ಉಮೇದುದಾರರನ್ನಾಗಿ ಮಾಡಿ, &#8220;ಪಟ್ಟಾಭಿ ಸೋಲು ನನ್ನ ಸೋಲು&#8217; ಎಂದರು. ಆದರೆ, ಸ್ವಾತಂತ್ರ್ಯಕ್ಕಾಗಿ ತವಕಿಸುತ್ತಿದ್ದ ಯುವ ಮನಸ್ಸುಗಳು ಬೋಸ್್ರ ಬೆಂಬಲಕ್ಕೆ ನಿಂತ ಕಾರಣ ಪಟ್ಟಾಭಿ ಸೀತಾರಾಮಯ್ಯನವರು ಸೋತು ಬೋಸ್ ವಿಜಯಿಯಾದರು. ಅವತ್ತು I am beyond love and hate. I am beyond anger, violence&#8217; ಎನ್ನುತ್ತಿದ್ದ ಗಾಂಧೀಜಿಯವರ ನಿಜರೂಪ ಬೆಳಕಿಗೆ ಬಂತು. ಸುಭಾಶ್ಚಂದ್ರ ಬೋಸರನ್ನು ಅಧ್ಯಕ್ಷರೆಂದು ಘೋಷಿಸುವ ಸಮಾರಂಭಕ್ಕೇ ಗಾಂಧೀಜಿ ಹೋಗಲಿಲ್ಲ. ಆದರೇನಂತೆ ಸುಭಾಷ್ ಗಾಂಧೀಜಿ ಮಟ್ಟಕ್ಕಿಳಿಯಲಿಲ್ಲ. ಗಾಂಧೀಜಿ ಕಾಂಗ್ರೆಸ್ ಅನ್ನೇ ಬಣಗಳನ್ನಾಗಿ ಒಡೆಯಲು ಮುಂದಾಗುತ್ತಿದ್ದಾರೆ ಎಂದು ತಿಳಿದ ಕೂಡಲೇ ಸ್ವಾತಂತ್ರ್ಯ ಗಳಿಸುವುದಷ್ಟೇ ನಮ್ಮೆಲ್ಲರ ಏಕಮಾತ್ರ ಗುರಿಯಾಗಬೇಕು, ವೈಯಕ್ತಿಕ ಪ್ರತಿಷ್ಠೆ ಹಾಗೂ ಮಹತ್ವಾಕಾಂಕ್ಷೆಗೆ ಪಕ್ಷ-ಚಳವಳಿ ಒಡೆಯಬಾರದು ಎಂಬ ಕಾರಣಕ್ಕೆ ಅಧ್ಯಕ್ಷ ಸ್ಥಾನಕ್ಕೇ ಬೋಸ್ ರಾಜಿನಾಮೆ ನೀಡಿದರು. ಅಷ್ಟೇ ಅಲ್ಲ,  1941, ಜನವರಿ 19ರಂದು ಬ್ರಿಟಿಷರ ಕಣ್ತಪ್ಪಿಸಿ ಜರ್ಮನಿ ಹಾಗೂ ಜಪಾನ್್ಗೆ ತೆರಳುವ ಮೂಲಕ ದೇಶದಿಂದಲೇ ಹೊರನಡೆದರು. Just imagine, ಮುಸೊಲಿನಿ, ಹಿಟ್ಲರ್್ರನ್ನು ಭೇಟಿಯಾಗುವುದೆಂದರೆ ಸಾಮಾನ್ಯ ಮಾತೇ? ಅದೂ ಯಾವ ರಾಷ್ಟ್ರದ ಪ್ರಧಾನಿ, ಅಧ್ಯಕ್ಷ, ಪ್ರಭುವಲ್ಲದೆ ಕೇವಲ ಒಬ್ಬ ಕ್ರಾಂತಿಕಾರಿಗಳ ನೇತಾರನಾಗಿ?! </p>
<p>ಆ ಮೂಲಕ ವಿದೇಶದಲ್ಲೇ ಆಝಾದ್ ಹಿಂದ್ ಫೌಜ್ ಕಟ್ಟಿದ್ದ ಅವರು ಬಂದೂಕಿನಿಂದ ಸ್ವಾತಂತ್ರ್ಯ ಪಡೆಯಲು ಮುಂದಾದರು. ನಿಮಗೆ ಗೊತ್ತಿರಲಿ, 1943ರಲ್ಲಿ ಬ್ರಿಟಿಷರಿಂದ ಮುಕ್ತಿ ಪಡೆದ ನಮ್ಮ ದೇಶದ ಮೊಟ್ಟಮೊದಲ ಭಾಗಗಳೆಂದರೆ ಅಂಡಮಾನ್ ಹಾಗೂ ನಿಕೋಬಾರ್ ದ್ವೀಪಗಳು. ಅವುಗಳನ್ನು ಗೆದ್ದುಕೊಂಡ ಸುಭಾಷ್ ಸ್ವರಾಜ್ ಹಾಗೂ ಶಹೀದ್ ಎಂದು ಹೆಸರಿಟ್ಟು ಅಲ್ಲಿ ದಾಸ್ಯಮುಕ್ತ ಆಡಳಿತ ಆರಂಭಿಸಿದರು. Give me blood, I Promise you Fredom ಎಂದು ರೇಡಿಯೋ ಮೂಲಕ ದೇಶವಾಸಿಗಳಿಗೆ ಕರೆಕೊಟ್ಟಿದ್ದೂ ಅದೇ ಸಂದರ್ಭದಲ್ಲಿ. ಎಷ್ಟೇ ಆಗಲಿ ಇತಿಹಾಸ ಸೃಷ್ಟಿಯಾಗುವುದು ಹೇಡಿಗಳಿಂದಲ್ಲ, ಸುಭಾಷ್್ರಂಥ ವೀರಕಲಿಗಳಿಂದ. ನಿಮಗೆ ಇನ್ನೂ ಒಂದು ಅಂಶ ಗೊತ್ತಿರಲಿ, ಭಾರತಕ್ಕೆ ಸ್ವಾತಂತ್ರ್ಯ ದೊರೆಕಿದ ಸಂದರ್ಭದಲ್ಲಿ (1945ರಿಂದ 51) ಬ್ರಿಟನ್್ನಲ್ಲಿ ಆಡಳಿತ ನಡೆಸುತ್ತಿದ್ದುದು ಲೇಬರ್ ಪಕ್ಷ ಹಾಗೂ ಪ್ರಧಾನಿಯಾಗಿದ್ದಿದ್ದು ಕ್ಲಿಮೆಂಟ್ ಅಟ್ಲಿ. ಅವತ್ತು ಭಾರತಕ್ಕೆ ಸ್ವಾತಂತ್ರ್ಯ ಕೊಡುವ ವಿಧೇಯಕವನ್ನು ಅಟ್ಲಿ ಬ್ರಿಟನ್ ಸಂಸತ್ತಿನ ಮುಂದಿಟ್ಟಾಗ ವಿನ್್ಸ್ಟನ್ ಚರ್ಚಿಲ್ ಖಡಾಖಂಡಿತವಾಗಿ ವಿರೋಧಿಸಿದರು. ಒಂದು ವೇಳೆ, ಅಟ್ಲಿ ಪ್ರಧಾನಿಯಾಗಿಲ್ಲದೆ ಇದ್ದಿದ್ದರೆ ಭಾರತಕ್ಕೆ ಸ್ವಾತಂತ್ರ್ಯ ದೊರಕುವುದು ಇನ್ನೂ ವಿಳಂಬವಾಗುತ್ತಿತ್ತು. ಅಂದು ಅಟ್ಲಿ ಭಾರತಕ್ಕೆ ಸ್ವಾತಂತ್ರ್ಯ ಕೊಡುವುದಕ್ಕೆ ಒಲವು ತೋರಿಸಿದ್ದರ ಹಿಂದೆಯೂ ಒಂದು ಕಾರಣವಿದೆ. 1938ರಲ್ಲಿ ಬ್ರಿಟನ್ ಪ್ರವಾಸ ಕೈಗೊಂಡಿದ್ದಾಗ ಲೇಬರ್ ಪಕ್ಷದ ನೇತಾರರಾದ ಕ್ಲಿಮೆಂಟ್ ಅಟ್ಲಿ, ಅರ್ಥರ್ ಗ್ರೀನ್್ವುಡ್, ಹೆರಾಲ್ಡ್ ಲಾಸ್ಕಿ, ಜಿಡಿಎಸ್ ಕೋಲ್ ಮತ್ತು ಸರ್ ಸ್ಟಾಫೋರ್ಡ್ ಕ್ರಿಪ್ಸ್ ಮುಂತಾದವರಿಗೆ ಭಾರತಕ್ಕೆ ಏಕೆ ಸ್ವಾತಂತ್ರ್ಯ ನೀಡಬೇಕೆಂದು ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದೇ ಸುಭಾಶ್ಚಂದ್ರ ಬೋಸ್! ಅದು 1947ರಲ್ಲಿ ನಮ್ಮ ನೆರವಿಗೆ ಬಂತು.</p>
<p>ಅಂತಹ ಗಂಡುಮಗನ ಜನ್ಮದಿನವಿದು. </p>
<p>1897, ಜನವರಿ 23ರಂದು ಜನಿಸಿದ ಸುಭಾಶ್ಚಂದ್ರ ಬೋಸ್ ಇವತ್ತು 115ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಅವರು ಇಂದು ನಮ್ಮೊಂದಿಗೆ ಇಲ್ಲದಿದ್ದರೂ ನಮ್ಮೊಳಗೆ ಸ್ವಾಭಿಮಾನ, ಹೋರಾಟ ಮನೋಭಾವನೆ ತುಂಬಿದ ಅವರನ್ನು ಮರೆಯಲಾದೀತೆ? ಈ ದೇಶ ಎಷ್ಟೋ &#8220;ನೇತಾ&#8217;ಗಳನ್ನು (ನೇತಾರರು) ಕಂಡಿದೆ. ಆದರೆ, &#8220;ನೇತಾಜಿ&#8217; (ನಮ್ಮ ಪ್ರೀತಿ, ಗೌರವಕ್ಕೆ ಭಾಜನರಾದ ನೇತಾರ) ಮಾತ್ರ ಅವರೊಬ್ಬರೇ ಅಲ್ಲವೇ?</p>
]]></content:encoded>
			<wfw:commentRss>http://pratapsimha.com/2012/01/23/netaji/feed/</wfw:commentRss>
		<slash:comments>41</slash:comments>
		</item>
		<item>
		<title>ಇರಾನ್ ಮೇಲೆ ಇಸ್ರೇಲ್ ದಾಳಿ ಮಾಡೀತೆ?</title>
		<link>http://pratapsimha.com/2012/01/22/iran-israel/</link>
		<comments>http://pratapsimha.com/2012/01/22/iran-israel/#comments</comments>
		<pubDate>Sun, 22 Jan 2012 06:34:26 +0000</pubDate>
		<dc:creator>Pratap Simha</dc:creator>
				<category><![CDATA[Bettale-Jagattu]]></category>

		<guid isPermaLink="false">http://pratapsimha.com/?p=1234</guid>
		<description><![CDATA[ಅಂಥದ್ದೊಂದು ಸಾಧ್ಯತೆ ದಿನಕಳೆದಂತೆ ದಟ್ಟವಾಗುತ್ತಲೇ ಇದೆ. ಇಷ್ಟಕ್ಕೂ ಇಸ್ರೇಲ್ ಮುಂದೆ ಇರುವ ಮಾರ್ಗಗಳಾದರೂ ಯಾವುವು? ಲೆಬೆನಾನ್, ಜೋರ್ಡಾನ್, ಪ್ಯಾಲೆಸ್ತೀನ್, ಸಿರಿಯಾ, ಈಜಿಪ್ಟ್ ಮುಂತಾದ ಮುಸ್ಲಿಂ ರಾಷ್ಟ್ರಗಳೇ ಅದನ್ನು ಸುತ್ತುವರಿದಿರುವುದು ಮಾತ್ರವಲ್ಲ, ತುಸು ದೂರವಿರುವ ಇರಾನ್್ನ ಅಧ್ಯಕ್ಷ ಮೊಹಮದ್ ಅಹ್ಮದಿನೆಜಾದ್ ಅವರಂತೂ ಇಸ್ರೇಲನ್ನು ಜಗತ್ತಿನ ಭೂಪಟದಿಂದ ಅಳಿಸಿ ಹಾಕುವುದೇ ನಮ್ಮ ಗುರಿ ಎನ್ನುತ್ತಿದ್ದಾರೆ! ಆ ಉದ್ದೇಶಕ್ಕಾಗಿ ಅಣ್ವಸ್ತ್ರ ತಯಾರಿಕೆಯಲ್ಲೂ ತೊಡಗಿದ್ದಾರೆ. ವಿಶ್ವಸಂಸ್ಥೆ ಕೆಲ ದಿಗ್ಬಂಧನೆಗಳನ್ನು ಹೇರಿದ್ದರೂ, ಇನ್ನೂ ಹೆಚ್ಚಿನ ದಿಗ್ಬಂಧನೆಗಳನ್ನು ಹೇರುವುದಾಗಿ ಎಚ್ಚರಿಕೆ ಕೊಟ್ಟಿದ್ದರೂ ಇರಾನ್ ಕ್ಯಾರೇ ಎನ್ನುತ್ತಿಲ್ಲ. [...]]]></description>
			<content:encoded><![CDATA[<p><a href="http://pratapsimha.com/wp-content/uploads/2012/01/iran.jpg"><img src="http://pratapsimha.com/wp-content/uploads/2012/01/iran-300x199.jpg" alt="" title="iran" width="300" height="199" class="aligncenter size-medium wp-image-1235" /></a><br />
ಅಂಥದ್ದೊಂದು ಸಾಧ್ಯತೆ ದಿನಕಳೆದಂತೆ ದಟ್ಟವಾಗುತ್ತಲೇ ಇದೆ. ಇಷ್ಟಕ್ಕೂ ಇಸ್ರೇಲ್ ಮುಂದೆ ಇರುವ ಮಾರ್ಗಗಳಾದರೂ ಯಾವುವು? ಲೆಬೆನಾನ್, ಜೋರ್ಡಾನ್, ಪ್ಯಾಲೆಸ್ತೀನ್, ಸಿರಿಯಾ, ಈಜಿಪ್ಟ್ ಮುಂತಾದ ಮುಸ್ಲಿಂ ರಾಷ್ಟ್ರಗಳೇ ಅದನ್ನು ಸುತ್ತುವರಿದಿರುವುದು ಮಾತ್ರವಲ್ಲ, ತುಸು ದೂರವಿರುವ ಇರಾನ್್ನ ಅಧ್ಯಕ್ಷ ಮೊಹಮದ್ ಅಹ್ಮದಿನೆಜಾದ್ ಅವರಂತೂ ಇಸ್ರೇಲನ್ನು ಜಗತ್ತಿನ ಭೂಪಟದಿಂದ ಅಳಿಸಿ ಹಾಕುವುದೇ ನಮ್ಮ ಗುರಿ ಎನ್ನುತ್ತಿದ್ದಾರೆ! ಆ ಉದ್ದೇಶಕ್ಕಾಗಿ ಅಣ್ವಸ್ತ್ರ ತಯಾರಿಕೆಯಲ್ಲೂ ತೊಡಗಿದ್ದಾರೆ. ವಿಶ್ವಸಂಸ್ಥೆ ಕೆಲ ದಿಗ್ಬಂಧನೆಗಳನ್ನು ಹೇರಿದ್ದರೂ, ಇನ್ನೂ ಹೆಚ್ಚಿನ ದಿಗ್ಬಂಧನೆಗಳನ್ನು ಹೇರುವುದಾಗಿ ಎಚ್ಚರಿಕೆ ಕೊಟ್ಟಿದ್ದರೂ ಇರಾನ್ ಕ್ಯಾರೇ ಎನ್ನುತ್ತಿಲ್ಲ. ಇರಾನ್ ಅಣ್ವಸ್ತ್ರ ತಯಾರಿಸಿದ ಮರುದಿನವೇ ಯಾರ ಉಳಿವಿಗಾದರೂ ಕುತ್ತು ಎದುರಾಗುವುದಾದರೆ ಅದು ಇಸ್ರೇಲ್್ಗೆ ಹಾಗಿರುವಾಗ ಇಸ್ರೇಲ್ ಕೈಕಟ್ಟಿಕುಳಿತುಕೊಳ್ಳಲು ಸಾಧ್ಯವೆ? ನೀವೇ ಹೇಳಿ, ತನ್ನ 52 ಲಕ್ಷ ಜನರ ಪ್ರಾಣ ಉಳಿಸಿಕೊಳ್ಳಲು ಇಸ್ರೇಲ್ ಏನು ಮಾಡಬೇಕು? ಈ ಹಿನ್ನೆಲೆಯಲ್ಲಿ, ಇರಾನ್ ಅಣ್ವಸ್ತ್ರ ತಯಾರಿಕಾ ಸ್ಥಾವರದ ಮೇಲೆ ದಾಳಿ ಮಾಡಿ ನಾಶಪಡಿಸಬೇಕೇ ಬೇಡವೇ?</p>
<p>Operation Babylon!!</p>
<p>1981ರಲ್ಲಿ ಇರಾಕ್ ಇದೇ ರೀತಿಯೇ ಉದ್ಧಟತನ ತೋರಿತ್ತು. ಅದರ ಅಣ್ವಸ್ತ್ರ ಅಭಿವೃದ್ಧಿ ಹಿಂದೆ ಇದ್ದಿದ್ದೂ ಇಸ್ರೇಲನ್ನು ನಾಶಪಡಿಸುವ ಗುರಿಯೇ. ಆ ಕಾರಣಕ್ಕಾಗಿ 1976ರಲ್ಲಿ ಫ್ರಾನ್ಸ್್ನಿಂದ &#8220;Kายั้&#8217; (Osiris) ದರ್ಜೆಯ ಅಣು ರಿಯಾಕ್ಟರ್್ಗಳನ್ನು ಖರೀದಿಸಿತ್ತು. ಅದಕ್ಕೆ ಇರಾಕ್, &#8220;ಓಸಿರಾಕ್್&#8217; (Osirak) ಎಂಬ ಹೆಸರಿಟ್ಟಿತು. ಇರಾಕ್ ಅಣು ಯೋಜನೆಗೆ ಇಟಲಿಯೂ ಸಹಕಾರ ನೀಡಿತ್ತು. ಶಾಂತಿಯುತ ಉದ್ದೇಶಕ್ಕಾಗಿನ ವೈಜ್ಞಾನಿಕ ಸಂಶೋಧನೆಗೆ ತಾನು ರಿಯಾಕ್ಟರ್್ಗಳನ್ನು ಖರೀದಿ ಮಾಡಿರುವುದಾಗಿ ಇರಾಕ್ ಹೇಳಿಕೊಂಡರೂ ಅದಕ್ಕೆ ಉದ್ದೇಶ ಶುದ್ಧಿಯಿಲ್ಲ ಎಂಬುದು ಇಸ್ರೇಲ್್ಗೆ ತಿಳಿದಿತ್ತು. 1967ರಲ್ಲಿ ಲೆಬೆನಾನ್, ಜೋರ್ಡಾನ್, ಪ್ಯಾಲೆಸ್ತೀನ್, ಸಿರಿಯಾ, ಈಜಿಪ್ಟ್ ಈ ಐದೂ ರಾಷ್ಟ್ರಗಳು ಏಕಕಾಲಕ್ಕೆ ಮುಗಿಬಿದ್ದ ನಂತರವಂತೂ ಯಾವುದೇ ಕಾರಣಕ್ಕೂ ಮುಸ್ಲಿಂ ರಾಷ್ಟ್ರಗಳನ್ನು ನಂಬುವಂತಿಲ್ಲ ಎಂಬುದು ಇಸ್ರೇಲ್್ಗೆ ಮನವರಿಕೆಯಾಗಿತ್ತು. ಹಾಗಾಗಿ ಅಣು ಉಪಕರಣಗಳನ್ನು ನೀಡಿದ ಫ್ರಾನ್ಸ್ ಹಾಗೂ ಇಟಲಿಗಳನ್ನು ಬಹಿರಂಗವಾಗಿ ಟೀಕೆ ಮಾಡಿದ ಇಸ್ರೇಲ್, ಯಾವ ಬೆಲೆ ತೆತ್ತಾದರೂ ಸರಿ ತನ್ನ ಭೂಭಾಗವನ್ನು ರಕ್ಷಿಸಿಕೊಳ್ಳುವುದಾಗಿ ಘೋಷಿಸಿತು. 1974ರಿಂದ 1977ರವರೆಗೂ ಇಸ್ರೇಲ್ ಪ್ರಧಾನಿಯಾಗಿದ್ದ (ಮೊದಲ ಅವಧಿಗೆ) ಇಝಾಕ್ ರಬಿನ್ ಕಾಲದಲ್ಲೇ ಇರಾಕ್್ನ  ಅಣು ಯೋಜನೆಗೆ ಯಾವ ರೀತಿ ಪ್ರತಿಕ್ರಿಯಿಸಬೇಕು, ಯಾವ ಕಾರ್ಯತಂತ್ರ ರೂಪಿಸಬೇಕು ಎಂಬ ಬಗ್ಗೆ ಚರ್ಚೆ ನಡೆದಿತ್ತು. ಅದೇ ವೇಳೆಯಲ್ಲೇ ಯೋಜನೆ ಹಾಗೂ ಕಾರ್ಯಾಚರಣೆಯ ತಯಾರಿ ಕೂಡ ಆರಂಭವಾಯಿತು. 1977ರಲ್ಲಿ ಮೆನಚೆಮ್ ಬೆಗಿನ್ ಪ್ರಧಾನಿಯಾದ ನಂತರ ಅದೂ ಇನ್ನೂ ತೀವ್ರಗೊಂಡಿತು. ಇರಾಕ್ ಅಣುಸ್ಥಾವರದ ತದ್ರೂಪಿಯನ್ನು ನಿರ್ಮಾಣ ಮಾಡಿ, ಅದನ್ನು ನಾಶಪಡಿಸುವ ಬಗೆಯ ಬಗ್ಗೆ ಇಸ್ರೇಲಿ ಯೋಧರು ಪ್ರಾಕ್ಟಿಸ್ ಮಾಡಲಾರಂಭಿಸಿದರು. ಈ ಮಧ್ಯೆ ಇಸ್ರೇಲಿ ವಿದೇಶಾಂಗ ಸಚಿವ ಮೋಷೆ ದಯಾನ್, ಫ್ರಾನ್ಸ್ ಮತ್ತು ಇಟಲಿಗಳ ಜತೆ ಸಂಧಾನ ಮಾತುಕತೆ ಆರಂಭಿಸಿದರು. ಆದರೆ ಅಣುಸ್ಥಾವರ ನಿರ್ಮಾಣಕ್ಕೆ ಸಹಕಾರ ನೀಡುತ್ತಿರುವುದನ್ನು ಸ್ಥಗಿತಗೊಳಿಸಲು ಫ್ರಾನ್ಸ್-ಇಟಲಿಗಳೆರಡೂ ನಿರಾಕರಿಸಿದವು. ಇನ್ನು ರಾಜತಾಂತ್ರಿಕ ಸಂಧಾನದಿಂದ ಯಾವ ಫಲವೂ ದೊರೆಯುವುದಿಲ್ಲ, ಜತೆಗೆ ದಾಳಿಯನ್ನು ವಿಳಂಬ ಮಾಡುವುದರಿಂದ ಬಹುದೊಡ್ಡ ಅಪಾಯವಿದೆ ಎಂದು ಬೆಗಿನ್ ಭಾವಿಸಿದರು. 1980ರಲ್ಲಿ ಇಸ್ರೇಲಿ ಗುಪ್ತಚರ ದಳದ ಸೈನಿಕರು ಇರಾಕಿ ಅಣುಸ್ಥಾವರ ನಿರ್ಮಾಣದಲ್ಲಿ ತೊಡಗಿದ್ದ ಈಜಿಪ್ಟ್ ವಿಜ್ಞಾನಿ ಯೆಹಿಯಾ ಅಲ್ ಮಸಾದ್್ರನ್ನು ಹತ್ಯೆಗೈದರು. ಆ ಮೂಲಕ ತಾನು ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ ಎಂಬ ಸೂಚನೆಯನ್ನು ಇಸ್ರೇಲ್ ನೀಡಿತು, ಅದೊಂದು ರೀತಿಯಲ್ಲಿ ಇರಾಕ್ ಹಾಗೂ ಫ್ರಾನ್ಸ್-ಇಟಲಿಗಳಿಗೆ ನೀಡಿದ ಪಂಥಾಹ್ವಾನವೂ ಆಗಿತ್ತು. ಈ ಮಧ್ಯೆ ಇರಾಕ್-ಇರಾನ್ ಸಂಘರ್ಷವೂ ಆರಂಭವಾಯಿತು. ಅದನ್ನೇ ನೆಪವಾಗಿಟ್ಟುಕೊಂಡ ಇಸ್ರೇಲ್, ಇರಾಕ್್ನ ಅಣುಸ್ಥಾವರದ ಮೇಲೆ ದಾಳಿ ಮಾಡುವಂತೆ ಇರಾನ್್ಗೆ ಬಹಿರಂಗ ಕರೆಕೊಟ್ಟಿತು. 1980, ಸೆಪ್ಟೆಂಬರ್ 30ರಂದು ಇರಾನ್ ದಾಳಿ ಮಾಡಿ ಸ್ಥಾವರಕ್ಕೆ ಭಾಗಶಃ ಹಾನಿಯುಂಟು ಮಾಡಿತು. ಅದರ ಬೆನ್ನಲ್ಲೇ ಇರಾನ್-ಇಸ್ರೇಲ್-ಅಮೆರಿಕದ ನಡುವೆ ರಹಸ್ಯ ಮಾತುಕತೆ ನಡೆದು ಸಂಧಾನವೇರ್ಪಟ್ಟಿತು. ತುರ್ತು ಅಗತ್ಯ ಬಿದ್ದರೆ ತನ್ನ ತಬ್ರಿಝ್ ವಾಯುನೆಲೆಯಲ್ಲಿ ಇಸ್ರೇಲಿ ವಿಮಾನಗಳು ಇಳಿಯಲು ಅವಕಾಶ ನೀಡುವುದಾಗಿ ಇರಾನ್ ವಾಗ್ದಾನ ಮಾಡಿತು. ಜತೆಗೆ ಇರಾಕಿ ಅಣುಸ್ಥಾವರದ ವಿವರಗಳನ್ನೂ ನೀಡಿತು. ಆದರೆ ಇಸ್ರೇಲಿ ಮಿಲಿಟರಿ ನೆಲೆ ಹಾಗೂ ಇರಾಕಿ ಅಣುಸ್ಥಾವರದ ನಡುವೆ 1600 ಕಿ.ಮೀ. ಅಂತರವಿತ್ತು. ಇಷ್ಟೊಂದು ದೂರವನ್ನು ಇಂಧನ ಮರುತುಂಬಿಸಿಕೊಳ್ಳದೆ ಕ್ರಮಿಸಲು ಸಾಧ್ಯವೇ ಇರಲಿಲ್ಲ. ಅಲ್ಲದೆ ಜೋರ್ಡಾನ್ ಹಾಗೂ ಸೌದಿ ಆಗಸವನ್ನು ದಾಟಿ ಹೋಗಬೇಕಾದ್ದರಿಂದ ಆ ದೇಶಗಳ ವಾಯು ವ್ಯಾಪ್ತಿಯನ್ನೂ ಉಲ್ಲಂಘಿಸಬೇಕಿತ್ತು. ಹಾಗಾಗಿ ಮಾರ್ಗಮಧ್ಯದಲ್ಲೇ ಇಂಧನ ಮರುತುಂಬಿಸಿಕೊಳ್ಳುವುದಕ್ಕೂ ಸಾಧ್ಯವಿರಲಿಲ್ಲ. ಆ ಸಂದರ್ಭದಲ್ಲೂ ಇಸ್ರೇಲಿಗಳು ಕೈಚೆಲ್ಲಿ ಕೂರಲಿಲ್ಲ. ಅಪಾರ ಇಂಧನ ತುಂಬಿಕೊಂಡಿರುವ ಹಾಗೂ ಶಸ್ತ್ರಸಜ್ಜಿತ ಎಫ್-16 ಯುದ್ಧವಿಮಾನಗಳ ದಂಡನ್ನೇ ಕಳುಹಿಸಲು ನಿರ್ಧರಿಸಿತು. ಅವುಗಳಿಗೆ ಎಫ್-15 ಯುದ್ಧವಿಮಾನಗಳು ನೆರೆ ರಾಷ್ಟ್ರಗಳನ್ನು ಹಾದುಹೋಗುವಾಗ ರಕ್ಷಣೆ ನೀಡುವಂತೆ ಸೂಚಿಸಲಾಯಿತು. </p>
<p>ಅದೇ Operation Babylon!!</p>
<p>ಈ ಮಧ್ಯೆ ಇರಾಕಿ ಅಣುಸ್ಥಾವರಕ್ಕೆ ಅಣು ಇಂಧನ ತುಂಬಿಸುವ ಮೊದಲೇ ನಾಶಪಡಿಸುವುದೊಂದೇ ವಿಕಿರಣ ಪ್ರಸರಣವನ್ನು ತಡೆಯಲು ಇರುವ ಮಾರ್ಗ ಎಂದು ತಿಳಿಯಿತು. 1980, ಜೂನ್್ನೊಳಗೆ ಓಸಿರಾಕ್ ರಿಯಾಕ್ಟರ್್ಗೆ ಅಣು ಇಂಧನ ತುಂಬಿಸಿ ಕಾರ್ಯಾರಂಭಗೊಳಿಸುವುದು ಖಚಿತ ಎಂದು ಇಸ್ರೇಲ್ ಗುಪ್ತಚರ ಸಂಸ್ಥೆ ಮೊಸಾದ್ ಮಾಹಿತಿ ನೀಡಿತು. ಎಂಟು ಎಫ್-16ಗಳು ಅಣಿಯಾದವು, ಅಗಣಿತ ಎಫ್-15ಗಳೂ ಸಿದ್ಧಗೊಂಡವು. ಝೀವ್ ರಾಝ್, ಆಮೋಸ್ ಯದ್ಲಿನ್, ದೊಬ್ಬಿ ಯಾಫೆ, ಅಮಿರ್ ನಾಚುಮಿ, ಇಫ್ತಾ ಸ್ಪೆಕ್ಟರ್, ರೆಲಿಕ್ ಶಫಿರ್ ಹಾಗೂ ಇಲಾನ್ ರಾಮೋನ್ ಹೀಗೆ 8 ಪೈಲಟ್್ಗಳು ಎಫ್-16 ವಿಮಾನಗಳನ್ನೇರಿದರು.</p>
<p>1981, ಜೂನ್ 7!</p>
<p>ಆಪರೇಶನ್ ಬ್ಯಾಬಿಲೋನ್ ಆರಂಭವಾಯಿತು. 2 ಸಾವಿರ ಪೌಂಡ್ ತೂಕದ ಬಾಂಬ್್ಗಳನ್ನು ಹೊತ್ತ ಯುದ್ಧವಿಮಾನಗಳು ಜೋರ್ಡಾನ್, ಸೌದಿಯನ್ನು ಮೂರ್ಖರನ್ನಾಗಿಸಿ ಇರಾಕ್ ಗಡಿಯೊಳಕ್ಕೆ ನುಸುಳಿದವು. ಹದಿನಾರರಲ್ಲಿ 8 ಬಾಂಬುಗಳು ರಿಯಾಕ್ಟರ್್ನ ಸ್ಥಾವರದ ಮೇಲೆ ಬಿದ್ದು ಸಂಪೂರ್ಣವಾಗಿ ನಾಶಪಡಿಸಿದವು. ಅಷ್ಟೇ ಅಲ್ಲ, ಅಷ್ಟೂ ಯುದ್ಧವಿಮಾನಗಳು ಸುರಕ್ಷಿತವಾಗಿ ಇಸ್ರೇಲ್್ಗೆ ಮರಳಿದವು! ಅದು ಅಣುಸ್ಥಾವರವೊಂದರ ಮೇಲೆ ನಡೆದ ವಿಶ್ವದ ಮೊದಲ ವಾಯುದಾಳಿಯಾಗಿತ್ತು! ಆ ದಾಳಿಯಿಂದ ಇರಾಕ್ ಮತ್ತೆಂದೂ ಚೇತರಿಸಿಕೊಳ್ಳಲಿಲ್ಲ. ಅಣಕವೆಂದರೆ 1981ರಲ್ಲಿ ಇರಾಕ್ ಅಣಸ್ಥಾವರವನ್ನು ನಾಶಪಡಿಸಲು ಯಾವ ದೇಶ ಸಹಕರಿಸಿತ್ತೋ ಅದೇ ಇರಾನ್ ಇಂದು ಅಣ್ವಸ್ತ್ರ ತಯಾರಿಸಲು, ಇಸ್ರೇಲನ್ನು ವಿಶ್ವಭೂಪಟದಿಂದಲೇ ನಾಶಪಡಿಸಲು ಮುಂದಾಗಿದೆ!!</p>
<p>&#8220;Peace will come when the Arabs will love their children more than they hate us&#8221;- ಹಾಗೆಂದಿದ್ದರು ಇಸ್ರೇಲಿನ ಲೆಜೆಂಡರಿ ಪ್ರಧಾನಿ ಗೋಲ್ಡಾ ಮೈರ್. ದುರದೃಷ್ಟವಶಾತ್, ಅರಬ್ಬರು ತಮ್ಮ ಮಕ್ಕಳನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ಯಹೂದಿಗಳನ್ನು ದ್ವೇಷಿಸುತ್ತಾರೆ. ಹಾಗಾಗಿ ಉದ್ಧಾರವಾಗಬೇಕು ಎನ್ನುವುದಕ್ಕಿಂತ ಅನ್ಯಧರ್ಮೀಯರನ್ನು ನಾಶಪಡಿಸಬೇಕೆಂಬ ಇಚ್ಛೆಯೇ ಅವರಲ್ಲಿ ಉತ್ಕಟವಾಗಿದೆ. ಇಂತಹ ವಾಸ್ತವದ ಬೆನ್ನಲ್ಲೇ ಅಂತಾರಾಷ್ಟ್ರೀಯ ಅಣುಶಕ್ತಿ ಏಜೆನ್ಸಿ(IAEA) ನೀಡಿರುವ ವರದಿಯಂತೂ ಇಸ್ರೇಲ್್ನ ಆತಂಕವನ್ನು ಇನ್ನೂ ಹೆಚ್ಚು ಮಾಡಿದೆ. ಅಣ್ವಸ್ತ್ರ ಅಭಿವೃದ್ಧಿ, ಯುದ್ಧತಲೆಗಳ ನಿರ್ಮಾಣ, ಅದನ್ನು ್ನಕೊಂಡೊಯ್ಯುವ ಯುದ್ಧವಿಮಾನಗಳ ಹೊಂದುವಿಕೆ ಎಲ್ಲ ವಿಭಾಗಗಳಲ್ಲೂ ಇರಾನ್ ಭಾರೀ ಪ್ರಗತಿ ತೋರುತ್ತಿದೆ. ಇನ್ನು 12ರಿಂದ 24 ತಿಂಗಳೊಳಗಾಗಿ ಇರಾನ್ ಒಂದು ಅಣ್ವಸ್ತ್ರ ರಾಷ್ಟ್ರವಾಗುವ ಎಲ್ಲ ಸಾಧ್ಯತೆಯೂ ಇದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮೂಲಕ ಇರಾನ್ ಮೇಲೆ ಕಟ್ಟುನಿಟ್ಟಾದ ಆರ್ಥಿಕ ದಿಗ್ಬಂಧನೆಗಳನ್ನು ಹೇರಲು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಹಾಗೂ ಯುರೋಪಿಯನ್ ದೇಶಗಳು ಸಿದ್ಧವಿದ್ದರೂ ವಿಟೋ ಅಧಿಕಾರ ಹೊಂದಿರುವ ಚೀನಾ ಹಾಗೂ ರಷ್ಯಾಗಳು ಉಲ್ಟಾ ಹೊಡೆದಿವೆ. ಅವು ಇರಾನ್್ಗೆ ತಮ್ಮ ಬೆಂಬಲ ವ್ಯಕ್ತಪಡಿಸುತ್ತಿವೆ. ಈ ಅಪಾಯ ದಶಕದ ಹಿಂದೆಯೇ ಇಸ್ರೇಲ್್ನ ಗಮನಕ್ಕೆ ಬಂದಿತ್ತು. ಆಗ ಪ್ರಧಾನಿಯಾಗಿದ್ದ ಅರಿಯಾಲ್ ಶರಾನ್ &#8220;ಮೊಸಾದ್್&#8217;ನ ಹೊಸ ಮುಖ್ಯಸ್ಥ ಮೈರ್ ದಾಗನ್್ರನ್ನು ಕರೆದು ವಿಚಾರ ತಿಳಿಸಿದಾಗ, &#8220;ತಾನು ಇರಾನ್್ನ ಅಣು ಯೋಜನೆಯನ್ನು ತಡೆಯುವುದಾಗಿ ಅವರು ವಾಗ್ದಾನ ಮಾಡಿದ್ದರು. ಅಮೆರಿಕದ ಸಹಾಯ ಪಡೆದು ವೈರಸ್್ಗಳನ್ನು ಬಿಟ್ಟು ಕಂಪ್ಯೂಟರ್್ಗಳೇ ಸ್ಥಬ್ತವಾಗುವಂತೆ ಮಾಡಲಾರಂಭಿಸಿದರು. ಆಪರೇಶನ್ ಬ್ಯಾಬಿಲಾನ್ ತೆರನಾದ ದಾಳಿ ಬೇಡವೆಂದು ವಿಜ್ಞಾನಿಗಳನ್ನು ಕೊಲ್ಲುವ ಕಾರ್ಯಕ್ಕೆ ಇಸ್ರೇಲ್ ಕೈಹಾಕಿತು. 2010ರಿಂದ ಇದುವರೆಗೂ 6 ಇರಾನಿ ಅಣು ವಿಜ್ಞಾನಿಗಳನ್ನು ಇಸ್ರೇಲ್ ಹತ್ಯೆ ಮಾಡಿದೆ. ಮೊನ್ನೆ ಜನವರಿ 11ರಂದು ಮುಸ್ತಾಫಾ ಅಹ್ಮದಿ ರೋಶನ್ ಎಂಬ ಮತ್ತೊಬ್ಬ ವಿಜ್ಞಾನಿಯನ್ನು ಮ್ಯಾಗ್ನೆಟಿಕ್ ಬಾಂಬಿಟ್ಟು ಕೊಲೆಗೈದಿದೆ. ಇಂತಹ ಕ್ರಮಗಳು ಇರಾನ್ ಅಣ್ವಸ್ತ್ರ ಅಭಿವೃದ್ಧಿ ಮಾಡುವುದನ್ನು ಕೆಲ ವರ್ಷಗಳ ಕಾಲ ವಿಳಂಬ ಮಾಡಿದವೇ ಹೊರತು ಇನ್ನು 24 ತಿಂಗಳಲ್ಲಿ ಇರಾನ್ ಅಣುರಾಷ್ಟ್ರವಾಗುವುದನ್ನು ತಡೆಯಲು ಸಾಧ್ಯವಿಲ್ಲ. ಹಾಗಿರುವಾಗ ಇಸ್ರೇಲ್ ಏನು ಮಾಡಬೇಕು? ಇಸ್ರೇಲನ್ನು ನಾಶ ಮಾಡುವುದೇ ತನ್ನ ಉದ್ದೇಶ ಎನ್ನುತ್ತಿರುವ ವ್ಯಕ್ತಿ(ಅಹ್ಮದಿಜೆನಾದ್) ಹಾಗೂ ರಾಷ್ಟ್ರ ಅಣ್ವಸ್ತ್ರ ಹೊಂದುವುದನ್ನು ನೋಡುತ್ತಾ ಕುಳಿತುಕೊಳ್ಳುವುದಾದರೂ ಹೇಗೆ? ಇಸ್ರೇಲ್ ಮುಂದೆ ಇರುವುದು ಎರಡೇ ಮಾರ್ಗಗಳು-ಒಂದು ಇರಾನ್ ಅಣ್ವಸ್ತ್ರ ಹೊಂದಲು ಬಿಟ್ಟು, ತನ್ನ ಬಳಿಯೂ ಅಣ್ವಸ್ತ್ರವಿರುವುದರಿಂದ ಯುದ್ಧಕ್ಕೆ ಕೈಹಾಕಿದರೆ ಇಬ್ಬರೂ ನಾಶವಾಗಬೇಕಾಗುತ್ತದೆ ಎಂಬ ಅಂಶವೇ ಇರಾನಿನ ಕೈಕಟ್ಟುತ್ತದೆ ಎಂದು ಭಾವಿಸುವುದು, ಇಲ್ಲವೇ ಆಪರೇಶನ್ ಬ್ಯಾಬಿಲೋನ್ ಥರದ ದಾಳಿಗೆ ಕೈಹಾಕುವುದು. </p>
<p>ಇರಾನ್-ಇಸ್ರೇಲ್ ಕಿತ್ತಾಡಿದರೆ ನಮಗೇನಂತೆ?</p>
<p>ಹಾಗೆಂದು ಕುಳಿತುಕೊಳ್ಳಲು ಸಾಧ್ಯವಿಲ್ಲ. 2007ರಲ್ಲಿ ಇದೇ ಪ್ರಶ್ನೆ ಎದುರಾಗಿತ್ತು. ಅಂತಾರಾಷ್ಟ್ರೀಯ ಅಣುಶಕ್ತಿ ಏಜೆನ್ಸಿಯು ಇರಾನ್ ವಿರುದ್ಧ ದಿಗ್ಬಂಧನೆ ಹೇರಲು ಮುಂದಾಗ ಮತದಾನದ ವೇಳೆ ಭಾರತ ತೆಗೆದುಕೊಳ್ಳುವ ನಿರ್ಧಾರ ನಿರ್ಣಾಯಕವಾಗಿತ್ತು. ನಮ್ಮ ಕಮ್ಯುನಿಸ್ಟರು, &#8220;ಸಿಕ್ಯು&#8217;ಲರ್್ವಾದಿಗಳು, ತಥಾಕಥಿತ ವಿರೋಧಿಗಳು ಭಾರತ ಇರಾನ್ ಪರವಾಗಿ ಮತಹಾಕುವಂತೆ ಒತ್ತಡ ಹೇರಿದ್ದರು. ಅದೇ ವೇಳೆಗೆ ಭಾರತ-ಅಮೆರಿಕ ನಾಗರಿಕ ಅಣು ಸಹಕಾರ ಒಪ್ಪಂದವೂ ನಿರ್ಣಾಯಕ ಹಂತದಲ್ಲಿತ್ತು. ಆ ಒತ್ತಡ ಹಾಗೂ ಕೆಲ ಪರಿಗಣನೆಗಳಿಂದಾಗಿ ಯುಪಿಎ ಸರ್ಕಾರ IAEAಯಲ್ಲಿ ಇರಾನ್ ವಿರುದ್ಧ ಮತಹಾಕಿತು. ಅಷ್ಟೇ ಅಲ್ಲ, &#8220;We don&#8217;t want one more nuclear neighbour&#8217; ಎಂದು ಸಾರ್ವಜನಿಕವಾಗಿ ಹೇಳಿದ ನಮ್ಮ ಪ್ರಧಾನಿ ಮನಮೋಹನ್ ಸಿಂಗ್ ಇರಾನ್ ಅಣ್ವಸ್ತ್ರ ಹೊಂದುವುದನ್ನು ದಿಟ್ಟವಾಗಿ ವಿರೋಧಿಸಿದ್ದರು. ಹೌದು, ಇರಾನ್ ಅಣ್ವಸ್ತ್ರ ಹೊಂದುವುದು ನಮಗೂ ಒಳ್ಳೆಯದೇನಲ್ಲ. ನೀವೇ ಹೇಳಿ, ಒಂದು ವೇಳೆ ಭಾರತ ಮತ್ತು ಪಾಕ್ ನಡುವೆ ಯುದ್ಧವೇರ್ಪಟ್ಟರೆ ಇರಾನ್ ಯಾರನ್ನು ಬೆಂಬಲಿಸುತ್ತದೆ? ಮುಸ್ಲಿಂ ರಾಷ್ಟ್ರಗಳಿಂದಲೇ ಕೂಡಿರುವ ಆರ್ಗನೈಜೇಶನ್ ಆಫ್ ಇಸ್ಲಾಮಿಕ್ ಕಾನ್ಫೆರೆನ್ಸ್ (OIC) ಅನ್ನು ಇಂದು ಲೆಕ್ಕಿಸಬೇಕಿಲ್ಲ. ಆದರೆ 21ನೇ ಶತಮಾನಕ್ಕೂ ಮೊದಲು ಈ OIC ಭಾರತಕ್ಕೆ ದೊಡ್ಡ ತಲೆನೋವಾಗಿತ್ತು. ಪ್ರತಿ ವರ್ಷವೂ ನಡೆಯುತ್ತಿದ್ದ  OIC ಶೃಂಗದಲ್ಲಿ ಕಾಶ್ಮೀರದ ಬಗ್ಗೆ ಪಾಕಿಸ್ತಾನ ಗೊತ್ತುವಳಿಯೊಂದನ್ನು ಹೊರಡಿಸುತ್ತಿತ್ತು. ಅದಕ್ಕೆ ಸರ್ವಾನುಮತದ ಅಂಗಿಕಾರ ದೊರೆಯುತ್ತಿತ್ತು. ಇರಾನ್ ಸೇರಿದಂತೆ ಎಲ್ಲ ರಾಷ್ಟ್ರಗಳೂ ಅದನ್ನು ಬೆಂಬಲಿಸುತ್ತಿದ್ದವು. ಅವರಲ್ಲಿರುವ ಇಸ್ಲಾಮಿಕ್ ಬ್ರದರ್್ಹುಡ್ ದೇಶಗಳ ಎಲ್ಲೆಮೀರಿ ಎಲ್ಲರನ್ನೂ ಒಂದು ಮಾಡಿಬಿಡುತ್ತದೆ. 1991ರಲ್ಲಿ ಮೊದಲ ಕೊಲ್ಲಿ ಯುದ್ಧ(ಇರಾಕ್) ನಡೆದಾಗ ಅಮೆರಿಕದ ವಿಮಾನಗಳಿಗೆ ಅಂತಾರಾಷ್ಟ್ರೀಯ ನಿಯಮದಂತೆ ಬಾಂಬೆಯಲ್ಲಿ ರೀಫ್ಯುಯೆಲಿಂಗ್ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ನಮ್ಮ ಮುಸ್ಲಿಮರೇ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ನಾಳೆ ಇಸ್ರೇಲ್ ಏನಾದರೂ ಇರಾನ್ ಮೇಲೆ ದಾಳಿ ಮಾಡಿದರೆ ಕಟ್ಟರ್್ವಾದಿ ಮುಸ್ಲಿಮರು ಭಾರತದಲ್ಲಿ ಬೀದಿಗಿಳಿದು ಪ್ರತಿಭಟಿಸುತ್ತಾರೆ. ಇವತ್ತು ಅಮೆರಿಕ, ಅದರಲ್ಲೂ ಜಾರ್ಜ್್ಬುಷ್ ಹಾಗೂ ಇಸ್ರೇಲನ್ನು ಯಾರೆಷ್ಟೇ ಟೀಕಿಸಿದರೂ ಅವರಿಂದ ನಮಗಾದ ಲಾಭವನ್ನು ಮರೆಯುವಂತಿಲ್ಲ. ಒಂದು ವೇಳೆ 2001ರಲ್ಲಿ ಅಮೆರಿಕವೇನಾದರೂ ಅಫ್ಘಾನಿಸ್ತಾನದ ಮೇಲೆ ದಾಳಿ ಮಾಡಿ ತಾನಿಬಾನನ್ನು ನಾಶಪಡಿಸದೇ ಹೋಗಿದ್ದರೆ ಅಲ್ಲಿನ ಭಯೋತ್ಪಾದಕರು ನಮ್ಮ ಕಾಶ್ಮೀರವನ್ನು ಕಿತ್ತುಕೊಳ್ಳಲು ಜಿಹಾದ್ ನಡೆಸುತ್ತಾ ಇರುತ್ತಿದ್ದರು. ಇಸ್ರೇಲಂತೂ ಇತ್ತೀಚಿನ ವರ್ಷಗಳಲ್ಲಿ ಭಾರತಕ್ಕೆ ಅತ್ಯಾಧುನಿಕ ಯುದ್ಧಸಾಮಗ್ರಿಗಳನ್ನು ನೀಡಿದ ರಾಷ್ಟ್ರಗಳ ಸಾಲಿನಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ದಿನವೊಂದಕ್ಕೆ ಕನಿಷ್ಠ 30 ಭಯೋತ್ಪಾದಕ ದಾಳಿಯನ್ನು ಎದುರಿಸುತ್ತಿದ್ದ ಇಸ್ರೇಲ್್ನ ನೋವನ್ನು ನಾವು ಮಾತ್ರ ಅರ್ಥಮಾಡಿಕೊಳ್ಳಲು ಸಾಧ್ಯ. ಮುಸ್ಲಿಂ ಭಯೋತ್ಪಾದಕರಿಗೆ ಅರ್ಥವಾಗುವುದು ಬುಲೆಟ್್ನ ಭಾಷೆಯೊಂದೇ. ಆ ಕಾರಣಕ್ಕಾಗಿಯಾದರೂ ನಾವು ಇಸ್ರೇಲನ್ನು ಬೆಂಬಲಿಸಬೇಕು. </p>
<p>&#8220;If the Arabs (Muslims) put down their weaponstoday there would be no more violence. If the Israelis put down their weapons today there would be no more Israel!!&#8221;-</p>
<p>ಒಂದು ವೇಳೆ ಅರಬ್ಬರು ಬಂದೂಕು ಕೆಳಗಿಟ್ಟರೆ ಹಿಂಸೆ ಎನ್ನುವುದೇ ಇಲ್ಲವಾಗುತ್ತದೆ, ಆದರೆ ಇಸ್ರೇಲಿಗಳು ಶಸ್ತ್ರಾಸ್ತ್ರ ಕೆಳಗಿಟ್ಟರೆ ಇಸ್ರೇಲ್ ರಾಷ್ಟ್ರವೇ ಇಲ್ಲದಾಗುತ್ತದೆ ಎಂದು 2004ರಲ್ಲಿ ಇಸ್ರೇಲಿ ಪತ್ರಿಕೆಯೊಂದು ಬರೆದಿತ್ತು. ಅದರಲ್ಲಿ ನಮಗೂ ಒಂದು ಸಂದೇಶವಿದೆಯೆನಿಸುವುದಿಲ್ಲವೆ?</p>
]]></content:encoded>
			<wfw:commentRss>http://pratapsimha.com/2012/01/22/iran-israel/feed/</wfw:commentRss>
		<slash:comments>18</slash:comments>
		</item>
		<item>
		<title>ಪ್ರತಿ ಭಾರತೀಯ ಹೆಮ್ಮೆಪಡುವಂತೆ ಮಾಡಿದ ಭುಟಿಯಾ!</title>
		<link>http://pratapsimha.com/2012/01/16/bhutia/</link>
		<comments>http://pratapsimha.com/2012/01/16/bhutia/#comments</comments>
		<pubDate>Mon, 16 Jan 2012 11:12:54 +0000</pubDate>
		<dc:creator>Pratap Simha</dc:creator>
				<category><![CDATA[Bettale-Jagattu]]></category>

		<guid isPermaLink="false">http://pratapsimha.com/?p=1230</guid>
		<description><![CDATA[God&#8217;s gift to Indian football!! ಹಾಗಂತ ಮೂರು ಬಾರಿ ವರ್ಷದ ಭಾರತೀಯ ಫುಟ್ಬಾಲ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಐ.ಎಂ. ವಿಜಯನ್ ಅವರೇ ಹೇಳಿದ್ದರು. ಭಾರತೀಯ ಫುಟ್ಬಾಲ್ ಕ್ಷೇತ್ರದಲ್ಲಿ ಬೈಚುಂಗ್ ಭುಟಿಯಾ ಸ್ಥಾನವೆಂಥದ್ದು ಎಂಬುದನ್ನು ವಿಜಯನ್ ಮಾತುಗಳಿಂತ ಚೆನ್ನಾಗಿ ಹಿಡಿದಿಡಲು ಸಾಧ್ಯವೇ ಇಲ್ಲ. ಇವತ್ತಿಗೂ ಫುಟ್ಬಾಲ್ ಬಗ್ಗೆ ನಮ್ಮಲ್ಲಿ ಕೆಲವೊಂದು ಮಿಥ್ಯೆಗಳಿವೆ. ಬಹಳ ದೈತ್ಯ, ದೃಢಕಾಯದವರು ಮಾತ್ರ ಆಡಬಹುದಾದ ಆಟವದು, ನಮ್ಮ ಭಾರತೀಯರ ಕೈಯಿಂದಾಗದು, ನಮ್ಮವರು ಬಹುಬೇಗ ಬಳಲುತ್ತಾರೆ, ಕಾಲಿಗೆ ಫೆವಿಕಾಲ್ ಅಂಟಿಸಿಕೊಂಡೂ (ಫುಟ್್ವರ್ಕ್ ಇಲ್ಲದೆಯೂ) [...]]]></description>
			<content:encoded><![CDATA[<p><a href="http://pratapsimha.com/wp-content/uploads/2012/01/Bhutia-with-the-tricolour.jpg"><img src="http://pratapsimha.com/wp-content/uploads/2012/01/Bhutia-with-the-tricolour-300x238.jpg" alt="" title="Bhutia with the tricolour" width="300" height="238" class="aligncenter size-medium wp-image-1231" /></a><br />
God&#8217;s gift to Indian football!!</p>
<p>ಹಾಗಂತ ಮೂರು ಬಾರಿ ವರ್ಷದ ಭಾರತೀಯ ಫುಟ್ಬಾಲ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಐ.ಎಂ. ವಿಜಯನ್ ಅವರೇ ಹೇಳಿದ್ದರು. ಭಾರತೀಯ ಫುಟ್ಬಾಲ್ ಕ್ಷೇತ್ರದಲ್ಲಿ ಬೈಚುಂಗ್ ಭುಟಿಯಾ ಸ್ಥಾನವೆಂಥದ್ದು ಎಂಬುದನ್ನು ವಿಜಯನ್ ಮಾತುಗಳಿಂತ ಚೆನ್ನಾಗಿ ಹಿಡಿದಿಡಲು ಸಾಧ್ಯವೇ ಇಲ್ಲ. ಇವತ್ತಿಗೂ ಫುಟ್ಬಾಲ್ ಬಗ್ಗೆ ನಮ್ಮಲ್ಲಿ ಕೆಲವೊಂದು ಮಿಥ್ಯೆಗಳಿವೆ. ಬಹಳ ದೈತ್ಯ, ದೃಢಕಾಯದವರು ಮಾತ್ರ ಆಡಬಹುದಾದ ಆಟವದು, ನಮ್ಮ ಭಾರತೀಯರ ಕೈಯಿಂದಾಗದು, ನಮ್ಮವರು ಬಹುಬೇಗ ಬಳಲುತ್ತಾರೆ, ಕಾಲಿಗೆ ಫೆವಿಕಾಲ್ ಅಂಟಿಸಿಕೊಂಡೂ (ಫುಟ್್ವರ್ಕ್ ಇಲ್ಲದೆಯೂ) ಕ್ರಿಕೆಟ್ ಆಡಬಹುದು, ಆದರೆ ಫುಟ್ಬಾಲ್್ನಲ್ಲಿ ಕಾಲು ನಿಂತಲ್ಲಿ ನಿಲ್ಲುವಂತಿಲ್ಲ, ಸೋಮಾರಿಗಳಾದ ನಮ್ಮವರಿಂದ ಅದೆಲ್ಲಾ ಆಗದು. ಈ ರೀತಿಯ ಮಾತುಗಳನ್ನು ನೀವೂ ಕೇಳಿರಬಹುದು. ಇವತ್ತು ನಮಗಿಂತ ದುರ್ಬಲಕಾಯದವರಾದ, ಕುಳ್ಳರಾದ ಜಪಾನಿಯರು, ಕೊರಿಯನ್ನರು, ಚೀನಿಯರು ವಿಶ್ವಮಟ್ಟದಲ್ಲಿ ಫುಟ್ಬಾಲ್್ನಲ್ಲಿ ಹೆಸರು ಗಳಿಸುವ ಮೂಲಕ ಕಾಯಕ್ಕೂ ಕಾಲ್ಚಳಕಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ನಿರೂಪಿಸಿದ್ದಾರೆ. ಅಂದಮಾತ್ರಕ್ಕೆ ಈ ಸತ್ಯವನ್ನು ನಮ್ಮವರ್ಯಾರೂ ಇದುವರೆಗೂ ಅರ್ಥಮಾಡಿಕೊಂಡಿರಲೇ ಇಲ್ಲ ಎಂದು ಭಾವಿಸಬೇಡಿ. ಸ್ವಾಮಿ ವಿವೇಕಾನಂದರು 110 ವರ್ಷಗಳ ಹಿಂದೆಯೇ ಹೇಳಿದ್ದರು ಎಂದರೆ ನಂಬುತ್ತೀರಾ?</p>
<p>&#8220;You will be nearer to heaven through football than through the study of the Gita&#8217;!</p>
<p>ಪರಾಕ್ರಮದ ಸಂಕೇತವೇ ಶಕ್ತಿ</p>
<p>ಜೀವನದ ಧ್ಯೋತಕವೇ ಶಕ್ತಿ</p>
<p>ಭರವಸೆಯ ಕುರುಹೇ ಶಕ್ತಿ</p>
<p>ಆರೋಗ್ಯದ ಲಕ್ಷಣವೇ ಶಕ್ತಿ</p>
<p>ಆದ್ದರಿಂದ ಶಕ್ತಿವಂತರಾಗಿ ನನ್ನ ಯುವಮಿತ್ರರೇ ಎನ್ನುತ್ತಿದ್ದ ವಿವೇಕಾನಂದರು, &#8220;First of all, our young men must be strong. Religion will come afterwards. Be strong, my young friends; that is my advice to you. You will be nearer to heaven through football than through the study of the Gita. These are bold words; but I have to say them, for I love you. I know where the shoe pinches. I have gained a little experience. You will understand the Gita better with your biceps, your muscles, a little stronger. You will understand the mighty genius and the mighty strenght of Krishna better with a little of strong blood in you&#8217;. ಅಂದರೆ ಪ್ರಪ್ರಥಮವಾಗಿ ನಮ್ಮ ಯುವಜನರು ಬಲಾಢ್ಯರಾಗಬೇಕು, ಧರ್ಮವೆಲ್ಲ ಆಮೇಲೆ ಬರುವುದು. ಓ ನನ್ನ ಯುವಮಿತ್ರರೇ ಬಲಾಢ್ಯರಾಗಿ. ಇದೇ ನಿಮಗೆ ನನ್ನ ಬುದ್ಧಿವಾದ. ನೀವು ಭಗವದ್ಗೀತೆಯನ್ನು ಓದುವುದಕ್ಕಿಂತಲೂ ಫುಟ್ಬಾಲ್ ಆಡುವುದರ ಮೂಲಕ ದೇವರಿಗೆ ಹೆಚ್ಚು ಹತ್ತಿರವಾಗುತ್ತೀರಿ. ಇವೆಲ್ಲ ಸ್ವಲ್ಪ ಜೋರಿನ ಶಬ್ದಗಳು. ಆದರೆ ಅವನ್ನೇ ನಾನು ನಿಮಗೆ ಹೇಳಬೇಕಾಗಿದೆ. ಏಕೆಂದರೆ ನಿಮ್ಮನ್ನು ನಾನು ಪ್ರೀತಿಸುತ್ತೇನೆ. ನಿಮ್ಮ ಮಾಂಸಖಂಡಗಳನ್ನು, ನಿಮ್ಮ ರಟ್ಟೆಗಳನ್ನು ಒಂದಿಷ್ಟು ಗಟ್ಟಿಮಾಡಿಕೊಳ್ಳುವುದರ ಮೂಲಕ ನೀವು ಭಗವದ್ಗೀತೆಯನ್ನು ಇನ್ನೂ ಚೆನ್ನಾಗಿ ಆರ್ಥೈಸಿಕೊಳ್ಳಬಲ್ಲಿರಿ. ನಿಮ್ಮ ಧಮನಿ ಧಮನಿಗಳಲ್ಲಿ ಸ್ವಲ್ಪ ಗಟ್ಟಿ ರಕ್ತ ಹರಿದಾಡುತ್ತಿದ್ದರೆ ಮಾತ್ರ ಕೃಷ್ಣನ ಪ್ರತಿಭೆಯನ್ನು, ಬಲವನ್ನು ಅರಿತುಕೊಳ್ಳಬಲ್ಲಿರಿ. ನಿಮ್ಮ ಕಾಲಮೇಲೆ ನೀವು ನಿಲ್ಲಲು ಸಮರ್ಥರಾದಾಗ ನಿಮ್ಮಲ್ಲಿ ಪೌರುಷವಿದೆ ಎಂದು ನಿಮಗೆ ಅನ್ನಿಸಿದಾಗ ಮಾತ್ರವೇ ನೀವು ಉಪನಿಷತ್ತನ್ನು, ಆತ್ಮದ ವೈಭವವನ್ನು ಅರ್ಥಮಾಡಿಕೊಳ್ಳಬಲ್ಲಿರಿ. ಫುಟ್ಬಾಲ್ ವಿಷಯದಲ್ಲಿ ವಿವೇಕಾನಂದರ ಮಾತುಗಳನ್ನು ಐದಡಿ ಎಂಟು ಅಂಗುಲ ಎತ್ತರದ ಬೈಚುಂಗ್ ಭುಟಿಯಾನಷ್ಟು ಚೆನ್ನಾಗಿ ಯಾರೂ ಅರ್ಥಮಾಡಿಕೊಳ್ಳಲಿಲ್ಲ. ಕ್ರಿಕೆಟ್ ಬಿಟ್ಟರೆ ಬೇರೆ ಕ್ರೀಡೆಗಳೇ ಇಲ್ಲ ಎಂಬಂತೆ ವರ್ತಿಸುವ ರಾಷ್ಟ್ರದಲ್ಲಿ ಜನಿಸಿದರೂ ಭುಟಿಯಾನೆಂದೂ ಫುಟ್ಬಾಲ್ ಮೇಲಿನ ತನ್ನ ಆಸಕ್ತಿ, ಪ್ರೀತಿಯನ್ನು ಕಳೆದುಕೊಂಡವನಲ್ಲ. ಭಾರತೀಯ ಕ್ರಿಕೆಟ್್ಗೆ ಸಚಿನ್ ತೆಂಡೂಲ್ಕರ್ ಹೇಗೋ ಭಾರತೀಯ ಫುಟ್ಬಾಲ್್ಗೆ ಭುಟಿಯಾನೂ ಹಾಗೆಯೇ.</p>
<p>ನೆವಿಲ್ಲೆ ಡಿ ಡಿಸೋಝಾ</p>
<p>ಛುನಿ ಗೋಸ್ವಾಮಿ</p>
<p>ಐ.ಎಂ. ವಿಜಯನ್</p>
<p>ಪೀಟರ್ ತ್ಯಾಗರಾಜ್</p>
<p>ಮುಂತಾದವರು ಭಾರತೀಯ ಫುಟ್ಬಾಲ್ ಕ್ಷೇತ್ರದಲ್ಲಿ ಅಚ್ಚಳಿಯದ ಛಾಪು ಮೂಡಿಸಿದರೂ ಭುಟಿಯಾನಂತೆ&#8221;ಫ್ಯಾನ್ ಫಾಲೋಯಿಂಗ್್&#8217; ಗಳಿಸಲು ಇವರಿಂದಾಗಲಿಲ್ಲ. ಏಕಾಂಗಿಯಾಗಿ ಆತ ಭಾರತೀಯ ಫುಟ್ಬಾಲ್್ಗೆ ಗೌರವ ತಂದುಕೊಡಲು ಪ್ರಯತ್ನಿಸಿದ ರೀತಿಯಿದೆಯಲ್ಲಾ ಅದನ್ನು ಯಾರೂ ಮರೆಯಲು ಸಾಧ್ಯವಿಲ್ಲ. ನಿಮಗೆ ಗೊತ್ತಾ ಎಫ್್ಎ ಕಪ್, ಸ್ಕಾಟಿಶ್ ಕಪ್ ನಂತರ ವಿಶ್ವದ ಮೂರನೇ ಅತ್ಯಂತ ಹಳೆಯ ಫುಟ್ಬಾಲ್ ಪಂದ್ಯಾವಳಿ ನಮ್ಮ ಡ್ಯುರಾಂಡ್ ಕಪ್! 1890ರ ಸುಮಾರಿಗೆ ಕಲ್ಕತ್ತಾ ಎಫ್್ಸಿ, ಸೋವಾಬಝಾರ್, ಮೋಹನ್ ಬಗಾನ್ ಹಾಗೂ ಆರ್ಯನ್ ಕ್ಲಬ್ ಮುಂತಾದುವುಗಳು ಸ್ಥಾಪನೆಯಾದವು. ಈಸ್ಟ್ ಇಂಡಿಯಾ ಕಂಪನಿಯ ರಾಜಧಾನಿಯಾಗಿದ್ದ ಕಲ್ಕತ್ತಾ ಭಾರತೀಯ ಫುಟ್ಬಾಲ್್ನ ಮುಖ್ಯ ಕೇಂದ್ರವಾಗತೊಡಗಿತು. ಗ್ಲಾಡ್್ಸ್ಟೋನ್ ಕಪ್, ಟ್ರೇಡರ್ಸ್ ಕಪ್, ಕೂಚ್್ಬಿಹಾರ್ ಕಪ್್ಗಳೂ ಅದೇ ವೇಳೆಗೆ ಪ್ರಾರಂಭವಾದವು. ಮೊದಮೊದಲು ಸೇನೆಯ ವಿವಿಧ ತಂಡಗಳ ನಡುವೆ ಪಂದ್ಯಗಳು ನಡೆಯುತ್ತಿದ್ದವು. ಕೊನೆಗೆ ಬ್ರಿಟಿಷರು ಹಾಗೂ ಸ್ಥಳೀಯ ಭಾರತೀಯರ ನಡುವೆ ಪಂದ್ಯಗಳು ಆರಂಭವಾದವು. 1889ರಲ್ಲಿ ಮೋಹನ್ ಬಗಾನ್ ಸ್ಪೋರ್ಟ್ಸ್ ಕ್ಲಬ್ ಆರಂಭವಾಯಿತು. 1911ರಲ್ಲಿ ಐಎಫ್್ಎ ಶೀಲ್ಡ್ ಗೆದ್ದ ಅದು ಮೊಟ್ಟಮೊದಲು ಭಾರತೀಯ ತಂಡವೆನಿಸಿತು. ಇಂದು ಈಸ್ಟ್ ಬೆಂಗಾಲ್ ಎಂದು ಯಾವ ಕ್ಲಬ್ಬನ್ನು ಕರೆಯುತ್ತೇವೋ ಅದು ಮತ್ತಾವುದೂ ಅಲ್ಲ&#8221;ಮೋಹನ್ ಬಗಾನ್ ಸ್ಪೋರ್ಟ್ಸ್ ಕ್ಲಬ್್&#8217;. 1976, ಡಿಸೆಂಬರ್ 15ರಂದು ಸಿಕ್ಕಿಂನಲ್ಲಿ ಜನಿಸಿದ ಭುಟಿಯಾನ ಪ್ರತಿಭೆಯನ್ನು ಗುರುತಿಸಿ 16ನೇ ವರ್ಷಕ್ಕೇ ತನ್ನ ತೆಕ್ಕೆಗೆ ಸೆಳೆದುಕೊಂಡಿದ್ದೂ ಕೂಡ ಇದೇ ಈಸ್ಟ್ ಬೆಂಗಾಲ್. 1995ರಲ್ಲಿ ಉಜ್ಬೇಕಿಸ್ತಾನದ ವಿರುದ್ಧ ಅಂತಾರಾಷ್ಟ್ರೀಯ ಪುಟ್ಬಾಲ್್ಗೆ ಪದಾರ್ಪಣೆ ಮಾಡಿದ ಭುಟಿಯಾ ಆ ಪಂದ್ಯದಲ್ಲಿ ದಾಖಲಾದ ಏಕೈಕ ಗೋಲನ್ನು ಗಳಿಸುವ ಮೂಲಕ ಹಾಗೆ ಗೋಲು ಗಳಿಸಿದ ಅತ್ಯಂತ ಕಿರಿಯ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರನಾದ. ಹದಿನಾರು ವರ್ಷಗಳ ಆತನ ಫುಟ್ಬಾಲ್ ಪರ್ವ ಹೀಗೆ ಅಮೋಘವಾಗಿ ಆರಂಭವಾಯಿತು. 1999ರಲ್ಲಿ ಇಂಗ್ಲೆಂಡ್್ನ ಎರಡನೇ ಡಿವಿಜನ್ ಕ್ಲಬ್&#8221;ಬರಿ ಎಫ್್ಸಿ&#8217; ಜತೆ 3 ವರ್ಷಗಳ ಒಪ್ಪಂದಕ್ಕೆ ಸಹಿಹಾಕುವ ಮೂಲಕ ಯುರೋಪ್್ನಲ್ಲಿ ವೃತ್ತಿಪರ ಅಂತಾರಾಷ್ಟ್ರೀಯ ಫುಟ್ಬಾಲ್ ಆಡಿದ ಮೊದಲ ಭಾರತೀಯನೆನಿಸಿದ. 2000, ಏಪ್ರಿಲ್ 15ರಂದು ಇಂಗ್ಲಿಷ್ ಲೀಗ್್ನ ಚೆಸ್ಟರ್್ಫೀಲ್ಡ್ ವಿರುದ್ಧ ಮೊದಲ ಗೋಲು ದಾಖಲಿಸಿದರೂ ಮಂಡಿನೋವಿನಿಂದ ಯುರೋಪ್್ನಿಂದಲೇ ವಾಪಸ್ಸಾಗಬೇಕಾಯಿತು.</p>
<p>19ನೇ ಶತಮಾನದ ಉತ್ತರಾರ್ಧದಲ್ಲಿ ನಮ್ಮ ದೇಶಕ್ಕೆ ಮೊದಲು ಫುಟ್ಬಾಲನ್ನು ಪರಿಚಯಿಸಿದವರು ಬ್ರಿಟಿಷ್ ಸೈನಿಕರು. ಐಟಿಜಿಛ್ಛಡಿ, ಹಾಕಿಯನ್ನು ನಮಗೆ ಪರಿಚಯಿಸಿದವರೂ ಬ್ರಿಟಿಷರೇ! ಹಾಕಿಯಲ್ಲಿ ಬಹುಬೇಗ ಪರಿಣತಿ ಸಾಧಿಸಿದ ಭಾರತ ಜಗದೇಕವೀರನೆನಿಸಿದರೂ ಫುಟ್ಬಾಲ್ ಮಾತ್ರ&#8221;ಕುಂಟು&#8217;ತ್ತಲೇ ಸಾಗಿತು. 1970ರ ಏಷ್ಯನ್್ನಲ್ಲಿ ಕಂಚಿನ ಪದಕ ಪಡೆದಿದ್ದೇ ನಮ್ಮ ದೊಡ್ಡ ಸಾಧನೆಯಾಗಿತ್ತು. ಇತ್ತ ಯುರೋಪ್್ನಿಂದ ವಾಪಸ್ಸಾದ ಭುಟಿಯಾ ಭಾರತೀಯ ತಂಡದ ನಾಯಕನಾದ. 2002ರಲ್ಲಿ ವಿಯೆಟ್ನಾಂನಲ್ಲಿ ನಡೆದ ಎಲ್್ಜಿ ಕಪ್ ಫೈನಲ್್ನಲ್ಲಿ ವಿಯೆಟ್ನಾಂ ವಿರುದ್ಧ ಮುಖಾಮುಖಿಯಾಗಿದ್ದು ಭಾರತ. ಅಂತಾರಾಷ್ಟ್ರೀಯ ಫುಟ್ಬಾಲ್್ನಲ್ಲಿ ಸಾಕಷ್ಟು ಮುಂದಿದ್ದ ಹಾಗೂ ತವರಿನ ಅನುಕೂಲ ಹೊಂದಿದ್ದ ವಿಯೆಟ್ನಾಂ ಗೆಲ್ಲುವುದು ಪೂರ್ವನಿರ್ಧರಿತ ಎನ್ನುವಂತಾಗಿತ್ತು.</p>
<p>ಆದರೆ&#8230;</p>
<p>ಪಂದ್ಯದ ಮೊದಲಾರ್ಧ ಹಾಗೂ ದ್ವಿತಿಯಾರ್ಥ ಎರಡಲ್ಲೂ ತಲಾ ಒಂದೊಂದು ಗೋಲು ದಾಖಲಿಸಿದ ನಾಯಕ ಬೈಚುಂಗ್ ಭುಟಿಯಾ ಅನಿರೀಕ್ಷಿತವೆನಿಸಿದರೂ ಅರ್ಹ ಗೆಲುವು ತಂದುಕೊಟ್ಟ. ಭಾರತ ಒಂದು ಪ್ರಮುಖ ಕಪ್ಪನ್ನು ಗೆದ್ದಿದ್ದು ಅದೇ ಮೊದಲು. ಭುಟಿಯಾನ ಹೆಸರು ಪ್ರಜ್ವಲಿಸತೊಡಗಿತು. ಭಾರತೀಯ ಫುಟ್ಬಾಲ್್ಗೂ ಭವಿಷ್ಯವಿದೆ ಎಂಬ ಭಾವನೆಯನ್ನು ಜನರಲ್ಲಿ ಮೂಡಿಸಿತು. ಅವನ ಏಜ್ಠ್ಟ್ಝಡಟನಲ್ಲಿ ನಾವೂ ಹೊಸ ಕನಸು ಕಾಣತೊಡಗಿದೆವು. 1990ರ ದಶಕದಲ್ಲಿ ಸಚಿನ್ ತೆಂಡೂಲ್ಕರ್, ಪಿಟಿ ಉಷಾ ಹೇಗೆ ಹೊಸ ಹೀರೋಗಳಾಗಿ ಹೊರಹೊಮ್ಮಿದರೋ, ಹೇಗೆ ನಮಗೆ ಹೊಸ ಭರವಸೆಯಾಗಿ ಕಂಡರೋ 2000ನೇ ದಶಕದಲ್ಲಿ ಭಾರತೀಯ ಫುಟ್ಬಾಲ್ ಬಗ್ಗೆ ಹೊರಹೊಮ್ಮಲಾರಂಭಿಸಿದ ಭರವಸೆಗೆ ಮೂಲ ಕಾರಣ ಭುಟಿಯಾನಾಗಿದ್ದ. ಜಿಂಬಾಬ್ವೆ, ಮಲೇಷಿಯಾ, ಇರಾನ್್ಗಳಂಥ ಬಲಿಷ್ಠ ತಂಡಗಳಿದ್ದ ಆಫ್ರೋ-ಏಷ್ಯನ್ ಗೇಮ್ಸ್್ನಲ್ಲಿ ಭಾರತಕ್ಕೆ 2ನೇ ಸ್ಥಾನ ದಕ್ಕಿದ್ದೂ ಭುಟಿಯಾ ಬಾರಿಸಿದ ಎರಡು ಗೋಲುಗಳಿಂದಾಗಿ. 2008ರ ಎಎಫ್್ಸಿ ಚಾಲೆಂಜ್ ಕಪ್್ನ ಸೆಮಿಫೈನಲ್್ನಲ್ಲಿ 2-1ರಿಂದ ತುರ್ಕಿಮೆನಿಸ್ತಾನ್ ವಿರುದ್ಧ ಜಯಗಳಿಸಿದಾಗಲೂ ಎರಡೂ ಗೋಲು ಹೊಡೆದಿದ್ದು ಭುಟಿಯಾನೇ. 2009ರಲ್ಲಿ ಭಾರತ ನೆಹರು ಕಪ್ ಗೆದ್ದಾಗಲೂ ಸರಣಿಯ ಅತ್ಯುತ್ತಮ ಆಟಗಾರನೆನಿಸಿದ್ದು ಭುಟಿಯಾ. ಇಂಗ್ಲಿಷ್ ಪ್ರೀಮಿಯರ್ ಲೀಗ್, ಡಚ್ ಲೀಗ್, ಲಾ ಲಿಗಾ ಅಥವಾ ಉಳಿದೆಲ್ಲ ಯುರೋಪಿಯನ್ ಲೀಗ್್ಗಳು ಇವುಗಳನ್ನೆಲ್ಲ ಇಂದು ಟೀವಿ ಪರದೆ ಮೇಲೆ ಲೈವ್ ಆಗಿ ನೋಡುತ್ತಿರುವ, ಸ್ಟಾರ್ ಸ್ಪೋರ್ಟ್ಸ್ ಟೆನ್್ಸ್ಪೋರ್ಟ್ಸ್ ನೋಡುತ್ತಾ ಬೆಳೆದ ಈಗಿನ ನಮ್ಮ ತಲೆಮಾರಿಗೆ ಭುಟಿಯಾ ಒಬ್ಬ ಸಾಮಾನ್ಯ ಆಟಗಾರನಂತೆ ಭಾಸವಾದರೂ ಆಶ್ಚರ್ಯವಿಲ್ಲ. ಆದರೆ ಭಾರತೀಯರು ವಿಶ್ವದರ್ಜೆಯ ಫುಟ್ಬಾಲ್ ಆಡಬಹುದು ಎಂದು ತೋರಿಸಿದ ಮೊದಲ ವ್ಯಕ್ತಿ ಬೈಚುಂಗ್ ಭುಟಿಯಾ! ಇವತ್ತು ವೀಕ್ಷಕರ ಸಂಖ್ಯೆಯನ್ನು ದೃಷ್ಟಿಯಲ್ಲಿಟ್ಟುಕೊಂಡರೆ ಕ್ರಿಕೆಟ್್ಗೆ  ಫುಟ್ಬಾಲ್ ತೀವ್ರ ಪೈಪೋಟಿ ನೀಡುತ್ತಿದೆ. ಇದರ ಹೆಚ್ಚಿನ ಶ್ರೇಯಸ್ಸು ಸಲ್ಲಬೇಕಾಗಿದ್ದೂ ಭುಟಿಯಾನಿಗೇ.</p>
<p>2012, ಜನವರಿ 10.</p>
<p>ನಮ್ಮ ರಾಜಧಾನಿ ದೆಹಲಿಯ ನೆಹರು ಕ್ರೀಡಾಂಗಣದಲ್ಲಿ ರೆಫರಿ ಅಂತಿಮ ಸೀಟಿ ಊದಿದಾಗ ಜರ್ಮನಿಯ ಬಾಯರ್ನ್ ಮ್ಯೂನಿಚ್ ತಂಡಕ್ಕೆ ಅದು ಮತ್ತೊಂದು ಪ್ರದರ್ಶನ ಪಂದ್ಯವಾಗಿತ್ತಷ್ಟೇ. ಆದರೆ ಭಾರತೀಯ ಫುಟ್ಬಾಲ್ ಪ್ರೇಮಿಗಳ ಪಾಲಿಗೆ ಅದೊಂದು ಭಾವನಾತ್ಮಕ ಕ್ಷಣ, ತನ್ನ ಹೀರೋ ಕ್ರೀಡಾ ಬದುಕಿಗೆ ಕೊನೆ ಹೇಳುತ್ತಿದ್ದ ಅಂತಿಮ ಘಳಿಗೆ, ತನ್ನ ಹೀರೋಗೆ ಕೊನೆಯ ಭಾರಿ ಎದ್ದು ನಿಂತು ಚಪ್ಪಾಳೆ ಹೊಡೆಯುವ ಅವಕಾಶವಾಗಿತ್ತು. ಭಾರತೀಯ ಪುಟ್ಬಾಲನ್ನು ಗೌರವಯುತ ಸ್ಥಾನಕ್ಕೆ ತೆಗೆದುಕೊಂಡು ಹೋಗಲು ಹದಿನಾರು ವರ್ಷ ಶ್ರಮಿಸಿದ ಬೈಚುಂಗ್ ಭುಟಿಯಾ ಕಳೆದ ಮಂಗಳವಾರ ಕ್ರೀಡಾ ಬದುಕಿಗೆ ವಿದಾಯ ಹೇಳಿದ ಕ್ಷಣದಲ್ಲಿ ಅವರ ಸಾಧನೆ ನೆನಪಾಯಿತು.</p>
]]></content:encoded>
			<wfw:commentRss>http://pratapsimha.com/2012/01/16/bhutia/feed/</wfw:commentRss>
		<slash:comments>11</slash:comments>
		</item>
		<item>
		<title>ಅವರು ರಾಷ್ಟ್ರಪಿತನಾದರೆ, ಇವರು ಗ್ರಾಂಡ್್ಫಾದರ್ ಆಫ್ ದಿ ನೇಶನ್!</title>
		<link>http://pratapsimha.com/2012/01/06/vivekananda/</link>
		<comments>http://pratapsimha.com/2012/01/06/vivekananda/#comments</comments>
		<pubDate>Sat, 07 Jan 2012 02:59:21 +0000</pubDate>
		<dc:creator>Pratap Simha</dc:creator>
				<category><![CDATA[Bettale-Jagattu]]></category>

		<guid isPermaLink="false">http://pratapsimha.com/?p=1227</guid>
		<description><![CDATA[ಅವರನ್ನು ನೆನಪಿಸಿಕೊಂಡರೆ ಸಾಕು ಮನಸು ಪುಳಕಿತಗೊಳ್ಳುತ್ತದೆ, ಅವರ ಮಾತುಗಳನ್ನು ಕೇಳಿದರೆ ನರನಾಡಿಗಳಲ್ಲಿ ವಿದ್ಯುತ್ ಸಂಚಾರವಾಗುತ್ತದೆ, ಬದುಕಿಗೆ ಹೊಸ ಪ್ರೇರಣೆ ದೊರೆಯುತ್ತದೆ. ಇಷ್ಟಕ್ಕೂ ಆ ಶಕ್ತಿ ಯಾವುದು? Look down at your feet! The road that is under your feet is the road you have passed over and is the same road that you see before. It will be soon under your feet, March [...]]]></description>
			<content:encoded><![CDATA[<p><a href="http://pratapsimha.com/wp-content/uploads/2012/01/vive.jpg"><img src="http://pratapsimha.com/wp-content/uploads/2012/01/vive.jpg" alt="" title="vive" width="200" height="252" class="aligncenter size-full wp-image-1228" /></a><br />
ಅವರನ್ನು ನೆನಪಿಸಿಕೊಂಡರೆ ಸಾಕು ಮನಸು ಪುಳಕಿತಗೊಳ್ಳುತ್ತದೆ, ಅವರ ಮಾತುಗಳನ್ನು ಕೇಳಿದರೆ ನರನಾಡಿಗಳಲ್ಲಿ ವಿದ್ಯುತ್ ಸಂಚಾರವಾಗುತ್ತದೆ, ಬದುಕಿಗೆ ಹೊಸ ಪ್ರೇರಣೆ ದೊರೆಯುತ್ತದೆ. ಇಷ್ಟಕ್ಕೂ ಆ ಶಕ್ತಿ ಯಾವುದು?</p>
<p>Look down at your feet! The road that is under your feet is the road you have passed over and is the same road that you see before. It will be soon under your feet, March on!!</p>
<p>ಒಬ್ಬ ಪರಿವ್ರಾಜಕ ಸನ್ಯಾಸಿಯಾಗಿ ಸ್ವಾಮಿ ವಿವೇಕಾನಂದರು ಹಿಮಾಲಯವನ್ನು ಏರುತ್ತಿರುತ್ತಾರೆ. ಅವರ ಜತೆಗಿದ್ದ ಸನ್ಯಾಸಿಯೊಬ್ಬ ಇನ್ನು ನನ್ನಿಂದ ನಡೆಯಲಾಗುವುದಿಲ್ಲ ಎಂದು ಅಲ್ಲಿಯೇ ಕುಳಿತು ಬಿಡುತ್ತಾನೆ. ಆಗ ವಿವೇಕಾನಂದರು ಈ ಪ್ರೇರಕ ನುಡಿಗಳನ್ನಾಡುತ್ತಾರೆ-&#8217;ಒಮ್ಮೆ ತಿರುಗಿ ನೋಡು. ನೀನು ಹಿಂದೆ ಯಾವ ರಸ್ತೆಯನ್ನು ಕ್ರಮಿಸಿ ಬಂದಿದ್ದಿಯೋ, ಮುಂದೆ ಇರುವುದೂ ಅದೇ ರಸ್ತೆ. ಹೆಜ್ಜೆ ಹಾಕು, ಅದೂ ಕ್ಷಣಮಾತ್ರದಲ್ಲಿ ಸಾಗಿಬಿಡುತ್ತದೆ.</p>
<p>Conquer</p>
<p>ಮುನ್ನುಗ್ಗು</p>
<p>ಡೋಂಟ್ ಲುಕ್್ಬ್ಯಾಕ್</p>
<p>ಗೋ ಅಹೆಡ್</p>
<p>ಸ್ವಾಮಿ ವಿವೇಕಾನಂದರ ಸಮಗ್ರ ಸಾಹಿತ್ಯವನ್ನು ಓದಿದರೆ ಇಂತಹ ಮಾತುಗಳೇ ಹೆಚ್ಚಾಗಿ ಕಾಣುತ್ತವೆ. ಅವರು ನಿಜವಾದ &#8220;Youth Icon&#8217; ಪ್ರತಿವರ್ಷ ಜನವರಿ 12ರಂದು ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವದಿನವಾಗಿ ಆಚರಿಸುತ್ತಿರುವುದು ನಿಜಕ್ಕೂ ಅರ್ಥಗರ್ಭಿತವೆನಿಸುತ್ತದೆ. ಅವರೊಬ್ಬ ಸನ್ಯಾಸಿ, ಹಿಂದು ಧರ್ಮೋದ್ಧಾರಕ ಮಾತ್ರವಾಗಿರಲಿಲ್ಲ, ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಯಾವ ಗುಣನೀತಿಗಳನ್ನು ಅಳವಡಿಸಿಕೊಳ್ಳಬೇಕೋ ಅವುಗಳ ಸಾಕಾರಮೂರ್ತಿಯೂ ಆಗಿದ್ದರು. ವಿಶ್ವಧರ್ಮ ಸಮ್ಮೇಳನದ ನಂತರ ಯೂರೋಪ್ ಪ್ರವಾಸದಲ್ಲಿದ್ದ ವಿವೇಕಾನಂದರ ವೇಷಭೂಷಣಗಳನ್ನು ಕಂಡ ಬ್ರಿಟಿಷನೊಬ್ಬ, &#8216;ಒಬ್ಬ ಜಂಟಲ್್ಮನ್ ಥರ ಡ್ರೆಸ್ ಮಾಡಿಕೊಳ್ಳುವುದಕ್ಕಾಗುವುದಿಲ್ಲವೇ?&#8217; ಎಂದು ಕಿಚಾಯಿಸುತ್ತಾನೆ. &#8216;ನಿಮ್ಮ ಸಂಸ್ಕೃತಿಯಲ್ಲಿ ಬಟ್ಟೆಯಿಂದ ಒಬ್ಬ ವ್ಯಕ್ತಿ ಜಂಟಲ್್ಮನ್ ಹೌದೋ ಅಲ್ಲವೋ ಎಂಬುದನ್ನು ಅಳೆಯುತ್ತೀರಿ. ಆದರೆ ನಮ್ಮ ಸಂಸ್ಕೃತಿಯಲ್ಲಿ ಒಬ್ಬನ ಚಾರಿತ್ರ್ಯದ ಮೇಲೆ ಅದು ನಿರ್ಧಾರಿತವಾಗುತ್ತದೆ&#8217; ಎಂದು ವಿವೇಕಾನಂದರು ಹೇಳಿದಾಗ ಬ್ರಿಟಿಷನು ತಲೆತಗ್ಗಿಸಿ ನಿಲ್ಲುವಂತಾಗುತ್ತದೆ. ವಿವೇಕಾನಂದರ ಮಾತುಗಳೇ ಹಾಗೆ, ಗುಂಡಿಗಿಂತ ಬಲಿಷ್ಠ.</p>
<p>ಅವರ ಮೂಲ ಹೆಸರು ನರೇಂದ್ರ. ಒಮ್ಮೆ ತರಗತಿಯ ಜಿಯೋಗ್ರಫಿ ಮೇಷ್ಟ್ರು ತಪ್ಪು ಉತ್ತರ ಕೊಟ್ಟನೆಂಬ ಕಾರಣಕ್ಕೆ ನರೇಂದ್ರನನ್ನು ದಂಡಿಸುತ್ತಾರೆ. ಆದರೆ ತಾನು ಕೊಟ್ಟಿದ್ದು ಸರಿಯಾದ ಉತ್ತರವನ್ನೇ ಎಂದು ನರೇಂದ್ರನಿಗೆ ಗೊತ್ತಿತ್ತು. ಹಾಗಾಗಿ ನರೇಂದ್ರ ವಾದಕ್ಕಿಳಿಯುತ್ತಾನೆ. ಕುಪಿತರಾದ ಮೇಷ್ಟ್ರು, &#8216;ತಪ್ಪು ಉತ್ತರ ಹೇಳಿದ್ದಲ್ಲದೆ, ವಾದ ಮಾಡುತ್ತೀಯಾ?&#8217; ಎಂದು ಮತ್ತೆರಡು ಭಾರಿಸುತ್ತಾರೆ. ಈ ಘಟನೆಯಿಂದ ನೊಂದ ನರೇಂದ್ರ ಅಳುತ್ತಲೇ ಮನೆಗೆ ಬರುತ್ತಾನೆ. ಏನಾಯಿತೆಂದು ಅಮ್ಮ ಕೇಳುತ್ತಾಳೆ. ಆಗ ನಡೆದ ಘಟನೆಯನ್ನು ಹೇಳುತ್ತಾನೆ. ನಾನು ಸರಿಯಾದ ಉತ್ತರ ಹೇಳಿದರೂ ಮೇಷ್ಟ್ರು ದಂಡಿಸಿದರು ಎಂದಾಗ, ಅಮ್ಮ ಹೇಳುತ್ತಾಳೆ- Follow the truth always no matter what happens!!  ಇದು ನರೇಂದ್ರನ ಮೇಲೆ ಬಹಳ ದೊಡ್ಡ ಪ್ರಭಾವ ಬೀರುತ್ತದೆ. ಆತ ಬೆಳೆದು ದೊಡ್ಡವನಾಗಿ ಸ್ವಾಮಿ ವಿವೇಕಾನಂದರಾದ ಮೇಲೆ ಹೇಳುತ್ತಾರೆ-&#8221;Everything can be sacrificed for truth, but truth cannot be sacrificed for anything!&#8221; ಸ್ವಾಮಿ ವಿವೇಕಾನಂದರ ಅಮೆರಿಕದ ಶಿಷ್ಯೆ ಮಿಸ್ ಮ್ಯಾಕ್್ಲಾರ್ಡ್ ಹೀಗೆ ಹೇಳುತ್ತಾಳೆ-&#8217;ನಾನು ಈ ಆಧುನಿಕ ಪ್ರಪಂಚದಲ್ಲಿ ಇಬ್ಬರು ಮಹಾನ್ ವ್ಯಕ್ತಿಗಳನ್ನು ಕಂಡಿದ್ದೇನೆ. ಮೊದಲನೆಯವರು ಜರ್ಮನಿಯ ಚಕ್ರವರ್ತಿ  ಕೈಸರ್ ಹಾಗೂ ಎರಡನೆಯವರು ಸ್ವಾಮಿ ವಿವೇಕಾನಂದ&#8217;. ಆಕೆಯೇ ಮುಂದುವರಿದು &#8216;ಈ ಇಬ್ಬರ ನಡುವೆ ಇರುವ ವ್ಯತ್ಯಾಸವೇನು?&#8217; ಎಂದು ತನಗೆ ತಾನೇ ಪ್ರಶ್ನೆ ಹಾಕಿಕೊಳ್ಳುತ್ತಾಳೆ ಹಾಗೂ ಅವಳೇ ಉತ್ತರಿಸುತ್ತಾಳೆ. &#8216;ಒಂದು ವೇಳೆ ನೀವೇನಾದರೂ ಕೈಸರ್ ಎದುರು ನಿಂತರೆ ತೀರಾ ಕುಬ್ಜರಾಗಿ ಕಾಣುತ್ತೀರಿ, ಸಣ್ಣ ಧೂಳಿನ ಕಣದಂತೆ ಭಾಸವಾಗುತ್ತೀರಿ. ಆದರೆ ಸ್ವಾಮಿ ವಿವೇಕಾನಂದರಂಥ ಆಧ್ಯಾತ್ಮ ಶಕ್ತಿಯ ಎದುರು ನಿಂತಾಗ ನಿಮಗೆ ನೀವೇ ಬೃಹದಾಕಾರವಾಗಿ ಕಾಣುತ್ತೀರಿ, ಉಬ್ಬಿಹೋಗುತ್ತೀರಿ, ನಿಮ್ಮೊಳಗೂ ಒಬ್ಬ ದೊಡ್ಡ ವ್ಯಕ್ತಿ ಇದ್ದಾನೆ ಎಂದನಿಸುತ್ತದೆ. ಏಕೆಂದರೆ ಅವರ ಪ್ರೇರಕ ಮಾತುಗಳು ಹಾಗಿರುತ್ತವೆ&#8217;!  &#8220;Before any wordly greatness you feel very small, Before any spiritual greatness like Swami Vivekananda you feel very strong! ಎಂದು ಆಕೆ ವಿವರಿಸುತ್ತಾಳೆ. 1893ರಲ್ಲಿ ವಿಶ್ವಧರ್ಮ ಸಮ್ಮೇಳವನ್ನುದ್ದೇಶಿ ಸ್ವಾಮಿ ವಿವೇಕಾನಂದರು ಆಡಿದ ಮಾತುಗಳನ್ನು ಕೇಳಿ ಮೂಕವಿಸ್ಮಿತನಾದ ಅಮೆರಿಕದ ಪತ್ರಕರ್ತನೊಬColumbus discovered the soil of America, Vivekananda discovered the Soul of America!&#8221;ಎಂದು ಮರುದಿನ ಪತ್ರಿಕೆಯಲ್ಲಿ ಬರೆಯುತ್ತಾನೆ.</p>
<p>ಹೌದು, ಅವರು ಹಿಂದು ಧರ್ಮದ ನಿಜವಾದ ರಾಯಭಾರಿ!</p>
<p>ವಿಶ್ವಧರ್ಮ ಸಮ್ಮೇಳನಕ್ಕಾಗಿ ಅಮೆರಿಕಕ್ಕೆ ಆಗಮಿಸಿದಾಗ, &#8216;ಬುದ್ಧ ಏಷ್ಯಾಗೆ ಸಂದೇಶವನ್ನು ತಂದಂತೆ, ನಾನು ಪಾಶ್ಚಿಮಾತ್ಯ ಜಗತ್ತಿಗೆ ಭಾರತದ ಸಂದೇಶವನ್ನು ತಂದಿದ್ದೇನೆ&#8217; ಎಂದು ವಿವೇಕಾನಂದರು ಹೇಳುತ್ತಾರೆ. ಅವರನ್ನು &#8216;ಹಿಂದೂ ಧರ್ಮದ ರಾಯಭಾರಿ&#8217; ಎಂದು ಸುಖಾಸುಮ್ಮನೆ ಹೇಳಿದ್ದಲ್ಲ. ಶಂಕರಾಚಾರ್ಯ, ರಾಜಾರಾಮ್ ಮೋಹನ್ ರಾಯ್ ಮುಂತಾದವರೂ ದೇಶ ಸುತ್ತಿ, ಸಾಮಾಜಿಕ ಬದಲಾವಣೆಯನ್ನು ತರಲು ಯತ್ನಿಸಿದರಾದರೂ ಹಿಂದೂ ಧರ್ಮದ ಹಿರಿಮೆಯನ್ನು ಜಗತ್ತಿಗೆ ಮನವರಿಕೆ ಮಾಡಿಕೊಟ್ಟ ಮೊದಲ ವ್ಯಕ್ತಿ ವಿವೇಕಾನಂದ. ಯಾವ ಧರ್ಮಗಳನ್ನೂ ತೆಗಳದೆ ಆ ಕೆಲಸ ಮಾಡಿದ್ದು ಇನ್ನೂ ದೊಡ್ಡ ಸಾಧನೆ. ವಿವೇಕಾನಂದರಿಗಿಂತ ಮೊದಲು ಯಾರೂ ಕೂಡ ವಿದೇಶಗಳಿಗೆ ಹೋಗಿ ಧರ್ಮಪ್ರಚಾರ, ಪ್ರಸಾರ ಮಾಡಿರಲಿಲ್ಲ. ಅವನ ಶಿಷ್ಯಂದಿರು ಹೋಗಿದ್ದರೇ ಹೊರತು ಬುದ್ಧನೂ ಕೂಡ ಹೊರದೇಶಗಳಲ್ಲಿ ಧರ್ಮಪ್ರಚಾರ ಮಾಡಿರಲಿಲ್ಲ. ಶಂಕರಾಚಾರ್ಯರು ದೇಶ ಸುತ್ತಿದರೇ ಹೊರತು ವಿದೇಶಕ್ಕೆ ಹೋದವರಲ್ಲ. ಈ ಹಿನ್ನೆಲೆಯಲ್ಲಿ,  He was the globalface of India. He was the first Ambassador of 衫odern 背ndia to the world  ಎಂದು ಅನುಮಾನವೇ ಇಲ್ಲದೆ ಹೇಳಬಹುದು. ಅವರೊಬ್ಬ ಸಾಂಸ್ಕೃತಿಕ ರಾಯಭಾರಿಯೂ ಹೌದು. ಸಾಂಸ್ಕೃತಿಕ ರಾಷ್ಟ್ರೀಯತೆ(ಕಲ್ಚರಲ್ ನ್ಯಾಶನಲಿಸಂ) ಎಂಬ ಹೊಸ ಕಲ್ಪನೆಯನ್ನು ಕೊಟ್ಟಿದ್ದೂ ಅವರೇ. ಬುದ್ಧನ ನಂತರ ಐಟಿಜ್ಝಛಟಿ ಜಝ್ಟಿಡ, ಭಾರತೀಯ ಮೌಲ್ಯಗಳನ್ನು ಜಗತ್ತಿಗೆ ಕೊಂಡೊಯ್ದ ಹಾಗೂ ಅರಿವು ಮೂಡಿಸಿದ ಮೊದಲ ವ್ಯಕ್ತಿಯೂ ವಿವೇಕಾನಂದ. ನಾವು ಆಗಾಗ ಉದಾಹರಿಸುವ Indianness, ಭಾರತೀಯತೆ ಎಂಬ ಕಾನ್ಸೆಪ್ಟ್ ಕೊಟ್ಟಿದ್ದೇ ವಿವೇಕಾನಂದ. ತುಂಬ articulate AW, extemporeಆಗಿ ಮಾತನಾಡುತ್ತಿದ್ದ ವಿವೇಕಾನಂದರ ನುಡಿಗಳು ನಮ್ಮ ಸುಪ್ರೀಂಕೋರ್ಟ್್ನ ಐತಿಹಾಸಿಕ ತೀರ್ಪಿಗೂ ದಿಗ್ಜೋತಿಯಾಗಿವೆ. ಹೌದು,  &#8220;Hinduism is not just a religion, it&#8217;s a way of life&#8221;&#8216; (ಹಿಂದುತ್ವವೆಂಬುದು ಒಂದು ಧರ್ಮ ಮಾತ್ರವಲ್ಲ, ಜೀವನ ವಿಧಾನವೂ ಹೌದು) ಎಂದು ಜಗತ್ತಿಗೆ ಹೇಳಿದ್ದು, ಮನವರಿಕೆ ಮಾಡಿಕೊಟ್ಟಿದ್ದೂ ವಿವೇಕಾನಂದ ಅವರೇ. ಭಾರತದಲ್ಲಿ ಇಷ್ಟೆಲ್ಲಾ ಅಲ್ಪಸಂಖ್ಯಾತರನ್ನು ಕಾಣಲು ಹಿಂದೂಗಳು ಬಹುಸಂಖ್ಯಾತರಾಗಿರುವುದೇ ಕಾರಣ. ಹಿಂದೂಯಿಸಂ ಎಂಬುದು ಧರ್ಮಮಾತ್ರವಲ್ಲ, ಅದೊಂದು ಸ್ಪಿರಿಚ್ಯುಯಾಲಿಟಿ ಎಂದವರು ಅವರು. ಸ್ಪಿರಿಚ್ಯುಯೆಲ್ ಅಂದರೆ ತನ್ನ ಹಿತವೇ ಮುಖ್ಯ ಎಂಬ ಆಲೋಚನೆ ಬಿಟ್ಟು ಇತರರ ಶ್ರೇಯೋಭಿವೃದ್ಧಿಯ ಬಗ್ಗೆಯೂ ಯೋಚಿಸಬೇಕು ಎಂಬುದು. ಅವತ್ತು ವಿಶ್ವಧರ್ಮ ಸಮ್ಮೇಳನದಲ್ಲಿ ಭಾರತೀಯತೆ, ಹಿಂದೂ ಧರ್ಮದ ಹಿರಿಮೆ, ಸಹಿಷ್ಣುತೆ ಬಗ್ಗೆ ವಿವೇಕಾನಂದರು ಆಡಿದ ಮಾತುಗಳನ್ನು ಕೇಳಿದ ಅಮೆರಿಕದ ಪ್ರತಿಷ್ಠಿತ &#8216;ನ್ಯೂಯಾರ್ಕ್ ಟೈಮ್ಸ್್&#8217; ಪತ್ರಿಕೆ ತನ್ನ ಮರುದಿನದ ಆವೃತ್ತಿಯಲ್ಲಿ &#8220;Church should be ashamed for sending its preachers to India&#8230;&#8221; ಎಂದು ಬರೆದಿತ್ತು!!</p>
<p>ಹಾಗಾದರೆ ಸ್ವಾತಂತ್ರ್ಯ ಚಳವಳಿಗೆ ವಿವೇಕಾನಂದರ ಕೊಡುಗೆಯೇನು? ಹಾಗೆಂದು ಕೇಳಿದರೆ ನೇರವಾಗಿ ಅವರು ಭಾಗಿಯಾಗದಿದ್ದರೂ ಸ್ವಾತಂತ್ರ್ಯ ಹೋರಾಟಗಾರರಾದ ಸುಭಾಷ್್ಚಂದ್ರ ಬೋಸ್, ಚಂದ್ರಶೇಖರ್ ಆಜಾದ್, ಭಗತ್್ಸಿಂಗ್ ವಿವೇಕಾನಂದರಿಂದ ಪ್ರಭಾವಿತರಾಗಿದ್ದರು. ಈ ದೇಶದ ಮೇರು ನಾಯಕ ಮಹಾತ್ಮ ಗಾಂಧೀಜಿಯವರು, &#8216;ನಾನು ವಿವೇಕಾನಂದರ ಚಿಂತನೆ ಹಾಗೂ ವಿಚಾರಧಾರೆಯನ್ನು ಆಮೂಲಾಗ್ರವಾಗಿ ಓದಿದ್ದೇನೆ. ಹಾಗೆ ಓದಿದ ಮೇಲೆ ನನ್ನಲ್ಲಿದ್ದ ರಾಷ್ಟ್ರಪ್ರೇಮ ಸಹಸ್ರ ಪಟ್ಟು ಹೆಚ್ಚಾಯಿತು&#8217; ಎಂದು ಸ್ವತಃ ಹೇಳಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ, If Gandhiji is the father of the nation, then Vivekananda is the grandfather of the nationಿ ಎಂದು ಹೇಳಬಹುದಲ್ಲವೇ?!</p>
<p>ಒಂದು ಸಲ ಸ್ವಾಮಿ ವಿವೇಕಾನಂದರು ರೈಲಿನಲ್ಲಿ ಪ್ರಯಾಣಿಸುತ್ತಿರುತ್ತಾರೆ. ಎದುರಲ್ಲೇ ಇಬ್ಬರು ಫಿರಂಗಿಗಳು ಕುಳಿತಿರುತ್ತಾರೆ. ಅವರು ಸನ್ಯಾಸಿ ವಿವೇಕಾನಂದರನ್ನು ಕಂಡು ಗೇಲಿ ಮಾಡಲಾರಂಭಿಸುತ್ತಾರೆ, ಆವರಿಗೆ ಇಂಗ್ಲಿಷ್ ಬರುವುದಿಲ್ಲ ಎಂಬುದು ಅವರ ಊಹೆಯಾಗಿರುತ್ತದೆ. ಹಾಗಾಗಿ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಮುಂದಿನ ನಿಲ್ದಾಣದಲ್ಲಿ ವಿವೇಕಾನಂದರನ್ನು ಬಲ್ಲವರೊಬ್ಬರು ರೈಲು ಹತ್ತುತ್ತಾರೆ, ಅವರೊಂದಿಗೆ ವಿವೇಕಾನಂದರು ಬಹಳ ಸೊಗಸಾಗಿ ಇಂಗ್ಲಿಷ್್ನಲ್ಲಿ ಮಾತನಾಡುವುದನ್ನು ಕಂಡು ದಂಗುಬಡಿದಂತಾದ ಫಿರಂಗಿಗಳಲ್ಲಿ ಒಬ್ಬ ವಿವೇಕಾನಂದರ ಬಳಿಗೆ ಬಂದು, &#8216;ನಿಮಗೆ ಇಂಗ್ಲಿಷ್ ಬರುವುದಿಲ್ಲವೆಂಬ ಕಾರಣಕ್ಕೆ ಏನೆಲ್ಲ ಮಾತನಾಡಿದೆವು. ಆದರೆ ನೀವೇಕೆ ಪ್ರತಿಕ್ರಿಯಿಸಲೂ ಇಲ್ಲ, ಕೋಪಿಸಿಕೊಳ್ಳಲೂ ಇಲ್ಲ&#8217; ಎಂದು ಪ್ರಶ್ನಿಸುತ್ತಾನೆ. ಅಗ ವಿವೇಕಾನಂದರು ಹೇಳುತ್ತಾರೆ-&#8217;ನಾನು ಮೂರ್ಖರನ್ನು ನೋಡುತ್ತಿರುವುದು ಇದೇ ಮೊದಲಲ್ಲ&#8217;!</p>
<p>ಹಾಗಂತ ವಿವೇಕಾನಂದರು ಎಲ್ಲ ಸಂದರ್ಭಗಳಲ್ಲೂ ಸುಮ್ಮನಿರುತ್ತಿದ್ದರು ಎಂದು ಭಾವಿಸಬೇಡಿ!</p>
<p>ವಿಶ್ವಧರ್ಮ ಸಮ್ಮೇಳನ ಮುಗಿಸಿ ಸ್ವಾಮಿ ವಿವೇಕಾನಂದರು ಹಡಗಿನಲ್ಲಿ ವಾಪಸ್ಸಾಗುತ್ತಿರುತ್ತಾರೆ. ಅದೇ ಹಡಗಿನಲ್ಲಿ ಇಬ್ಬರು ಪಾದ್ರಿಗಳು ಮತಾಂತರ ಮಾಡಲು ಭಾರತಕ್ಕೆ ಆಗಮಿಸುತ್ತಿರುತ್ತಾರೆ. ವಿವೇಕಾನಂದರನ್ನು ಕಂಡ ಅವರು ಬಹಳ ಕೀಳಾಗಿ ಮಾತನಾಡಲು, ನಿಂದಿಸಲು ಆರಂಭಿಸುತ್ತಾರೆ. ವಿವೇಕಾನಂದರು ಏನೂ ಮಾತನಾಡುವುದಿಲ್ಲ. ಕೊನೆಗೆ ಪಾದ್ರಿಗಳು ಹಿಂದು ಧರ್ಮವನ್ನು, ಭಾರತವನ್ನು, ಭಾರತೀಯರನ್ನು ನಿಂದಿಸಲು ಆರಂಭಿಸುತ್ತಾರೆ. ಅದುವರೆಗೂ ಸುಮ್ಮನಿದ್ದ ದೃಢಕಾಯರಾದ ವಿವೇಕಾನಂದರು ಕುಪಿತಗೊಂಡು ಪಾದ್ರಿಗಳಿಬ್ಬರ ಕುತ್ತಿಗೆ ಪಟ್ಟಿ ಹಿಡಿದೆಳೆದು, &#8216;ಭಾರತ ಹಾಗೂ ಭಾರತೀಯರ ಬಗ್ಗೆ ಇನ್ನೊಂದು ಕೆಟ್ಟ ಮಾತನಾಡಿದರೆ ಸಮುದ್ರಕ್ಕೆಸೆಯುತ್ತೇನೆ&#8217; ಎನ್ನುತ್ತಾರೆ. ಅವಕ್ಕಾದ ಪಾದ್ರಿಗಳು ಬಾಯಿಮುಚ್ಚಿಕೊಳ್ಳುತ್ತಾರೆ. ಆದರೆ ಇದನ್ನು ಕಂಡು ವಿವೇಕಾನಂದರ ಶಿಷ್ಯಂದಿರಿಗೇ ಆಶ್ಚರ್ಯವಾಗುತ್ತದೆ &#8216;ನೀವೊಬ್ಬ ಸ್ವಾಮಿಯಾಗಿ ಈ ರೀತಿ ಕೋಪಿಸಿಕೊಳ್ಳುವುದು, ಹಿಂಸಿಸಲು ಹೋಗುವುದು ಸರಿಯೇ?&#8217; ಎಂದು ಪ್ರಶ್ನಿಸುತ್ತಾರೆ. ಆಗ ವಿವೇಕಾನಂದರು ಉತ್ತರಿಸುವ ಬದಲು ಶಿಷ್ಯಂದಿರನ್ನೇ ಪ್ರಶ್ನಿಸುತ್ತಾರೆ- &#8216;ನಿಮ್ಮ ತಾಯಿಯನ್ನು ಯಾರಾದರೂ ಕೆಣಕಿದರೆ, ಅವಮಾನಿಸಿದರೆ ಸುಮ್ಮನಿರುತ್ತೀರಾ? ಹಾಗೆ ಭಾರತ ಮಾತೆ ಕೂಡ ನನ್ನ ತಾಯಿ, ಭಾರತೀಯರು ನನ್ನ ಬಂಧುಗಳು. ಅವರನ್ನ ನಿಂದಿಸಿದರೆ, ಅಪಮಾನಿಸಿದರೆ ಸುಮ್ಮನಿರುವುದಕ್ಕಾಗುತ್ತದಾ?&#8217; ಎನ್ನುತ್ತಾರೆ. ಮತಾಂತರದ ಬಗ್ಗೆ ಅವರು ಹೇಳಿದ್ದೇನು ಗೊತ್ತೆ?-&#8221;ಹಿಂದುವೊಬ್ಬ ಮತಾಂತರಗೊಂಡರೆ ನಮ್ಮ ಸಂಖ್ಯೆಯಲ್ಲಿ ಒಂದು ಕಡಿಮೆಯಾಗುವುದು ಮಾತ್ರವಲ್ಲ, ಒಬ್ಬ ಶತ್ರುವು ಸೃಷ್ಟಿಯಾದಂತೆ&#8221;.  ಇಂತಹ ಸ್ವಾಮಿ ವಿವೇಕಾನಂದರು ಜನಿಸಿದ್ದು 1863, ಜನವರಿ 12ರಂದು. ಇದೇ ತಿಂಗಳ 12ಕ್ಕೆ ಅವರ 150ನೇ ಜನ್ಮದಿನ. ಈ ದೇಶ ಹಾಗೂ ಸನಾತನ ಧರ್ಮವನ್ನು ತಾಯಿಯಂತೆ ಪ್ರೀತಿಸುವುದು, ಪೂಜಿಸುವುದು, ರಕ್ಷಿಸುವುದೇ ಅವರಿಗೆ ನಾವು ತೋರುವ ನಿಜವಾದ ಗೌರವ. </p>
]]></content:encoded>
			<wfw:commentRss>http://pratapsimha.com/2012/01/06/vivekananda/feed/</wfw:commentRss>
		<slash:comments>87</slash:comments>
		</item>
		<item>
		<title>ಚೀನಾದ ವಿರುದ್ಧ ಇವರ ಪೌರುಷ ಸತ್ತು ಬಿದ್ದಿದೆ ಏಕೆ?</title>
		<link>http://pratapsimha.com/2011/12/31/china-2/</link>
		<comments>http://pratapsimha.com/2011/12/31/china-2/#comments</comments>
		<pubDate>Sat, 31 Dec 2011 06:20:26 +0000</pubDate>
		<dc:creator>Pratap Simha</dc:creator>
				<category><![CDATA[Bettale-Jagattu]]></category>

		<guid isPermaLink="false">http://pratapsimha.com/?p=1223</guid>
		<description><![CDATA[ಅವರು ಏಕಾಗಿ ಅಂಥದ್ದೊಂದು ಕರೆಕೊಟ್ಟಿದ್ದಾರೆ ಅಂದುಕೊಂಡಿರಿ?! &#8216;ನಮ್ಮ ಜಮ್ಮು-ಕಾಶ್ಮೀರವನ್ನು &#8220;ವಿವಾದಿತ ಪ್ರದೇಶ&#8217; ಎಂದು ಕರೆಯಲು ಈ ಚೀನಾಕ್ಕೇನು ಅಂಜಿಕೆ ಇಲ್ಲ. ಆದರೆ ನಾವು ಮಾತ್ರ ತೈವಾನ್ ಬಗ್ಗೆಯಾಗಲಿ, ಟಿಬೆಟ್್ನ ಅಕ್ರಮ ವಶವನ್ನಾಗಲಿ ಪ್ರಶ್ನಿಸದೇ &#8220;ಮಹಾ ಚೀನಾ&#8217; ನೀತಿಯನ್ನು ಒಪ್ಪಿಕೊಳ್ಳಬೇಕಂತೆ. ಕಾಶ್ಮೀರ, ಅರುಣಾಚಲಪ್ರದೇಶ ಭಾರತದ ಭಾಗಗಳೆಂದು ಒಪ್ಪಿಕೊಳ್ಳಲು ಒಪ್ಪದ ಚೀನಾ ನಮ್ಮಿಂದ ಮಾತ್ರ ಸಮಗ್ರ ಚೀನಾ ನೀತಿಯನ್ನು ಒಪ್ಪಿಕೊಳ್ಳುವಂತೆ ನಿರೀಕ್ಷಿಸುತ್ತಿರುವುದೇಕೆ? ಅವರು ನಮ್ಮ ದೇಶದ ಸಾರ್ವಭೌಮತೆಯನ್ನು ಪ್ರಶ್ನಿಸುವುದೇ ಆದರೆ, ನಾವೂ ಕೂಡ ಟಿಬೆಟ್ಟನ್ನು ನುಂಗಿರುವ, ತೈವಾನನ್ನು ನುಂಗಲು ಪ್ರಯತ್ನಿಸುತ್ತಿರುವ [...]]]></description>
			<content:encoded><![CDATA[<p><a href="http://pratapsimha.com/wp-content/uploads/2011/12/Army.jpg"><img src="http://pratapsimha.com/wp-content/uploads/2011/12/Army-300x216.jpg" alt="" title="Army" width="300" height="216" class="aligncenter size-medium wp-image-1224" /></a><br />
ಅವರು ಏಕಾಗಿ ಅಂಥದ್ದೊಂದು ಕರೆಕೊಟ್ಟಿದ್ದಾರೆ ಅಂದುಕೊಂಡಿರಿ?!</p>
<p>&#8216;ನಮ್ಮ ಜಮ್ಮು-ಕಾಶ್ಮೀರವನ್ನು &#8220;ವಿವಾದಿತ ಪ್ರದೇಶ&#8217; ಎಂದು ಕರೆಯಲು ಈ ಚೀನಾಕ್ಕೇನು ಅಂಜಿಕೆ ಇಲ್ಲ. ಆದರೆ ನಾವು ಮಾತ್ರ ತೈವಾನ್ ಬಗ್ಗೆಯಾಗಲಿ, ಟಿಬೆಟ್್ನ ಅಕ್ರಮ ವಶವನ್ನಾಗಲಿ ಪ್ರಶ್ನಿಸದೇ &#8220;ಮಹಾ ಚೀನಾ&#8217; ನೀತಿಯನ್ನು ಒಪ್ಪಿಕೊಳ್ಳಬೇಕಂತೆ. ಕಾಶ್ಮೀರ, ಅರುಣಾಚಲಪ್ರದೇಶ ಭಾರತದ ಭಾಗಗಳೆಂದು ಒಪ್ಪಿಕೊಳ್ಳಲು ಒಪ್ಪದ ಚೀನಾ ನಮ್ಮಿಂದ ಮಾತ್ರ ಸಮಗ್ರ ಚೀನಾ ನೀತಿಯನ್ನು ಒಪ್ಪಿಕೊಳ್ಳುವಂತೆ ನಿರೀಕ್ಷಿಸುತ್ತಿರುವುದೇಕೆ? ಅವರು ನಮ್ಮ ದೇಶದ ಸಾರ್ವಭೌಮತೆಯನ್ನು ಪ್ರಶ್ನಿಸುವುದೇ ಆದರೆ, ನಾವೂ ಕೂಡ ಟಿಬೆಟ್ಟನ್ನು ನುಂಗಿರುವ, ತೈವಾನನ್ನು ನುಂಗಲು ಪ್ರಯತ್ನಿಸುತ್ತಿರುವ ಚೀನಾದ ಸಾರ್ವಭೌಮತೆಯನ್ನೂ ಪ್ರಶ್ನಿಸಬೇಕು. ಚೀನಾದ ವಿಷಯದಲ್ಲಿ ಬಾಗಿ ಶರಣಾಗುವ ಬದಲು ಭಾರತ ಇನ್ನಾದರೂ ಬೆನ್ನುಹುರಿ ತೋರಬೇಕು&#8217;.</p>
<p>ಹಾಗಂತ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಡಿಸೆಂಬರ್ 5ರಂದು ಕೇಂದ್ರ ಸರ್ಕಾರಕ್ಕೆ ಕರೆಕೊಟ್ಟಿದ್ದಾರೆ!</p>
<p>ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ 1998ರಲ್ಲೇ ಚೀನಾವೇ ನಮ್ಮ &#8220;Enemy No.1&#8242; ಎನ್ನುವ ಮೂಲಕ ದೊಡ್ಡ ಸಂಚಲನವನ್ನೇ ಮೂಡಿಸಿದ್ದರು. 1962ರ ಯುದ್ಧದ ನಂತರ ಯಾವ ಭಾರತೀಯನೂ ಚೀನಾದ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನಾಗಲಿ, ವಿಶ್ವಾಸವನ್ನಾಗಲಿ ಹೊಂದಿಲ್ಲ. ಇಷ್ಟಕ್ಕೂ ಚೀನಾದ ಬಗ್ಗೆ ಈ ಪರಿ ಸಂಶಯ, ಶಂಕೆ, ಅನುಮಾನ ಮನೆಮಾಡಲು ಕಾರಣವಾದ ಘಟನೆಗಳಾದರೂ ಯಾವುವು? ನಾವೇಕೆ ಚೀನಾವನ್ನು ನಂಬಿಕೂರುವ ಸ್ಥಿತಿಯಲ್ಲಿಲ್ಲ? ಉಮರ್ ಅಬ್ದುಲ್ಲಾ ಇಂಥದ್ದೊಂದು ಹೇಳಿಕೆ ನೀಡಲು ಕಾರಣವಾದರೂ ಏನು?</p>
<p>1. ಕಳೆದ 2 ವರ್ಷಗಳಿಂದ ಭಾರತ ಪ್ರತಿಭಟನೆ ಮಾಡುತ್ತಾ ಬಂದಿದ್ದರೂ ಚೀನಾ ಇಂದಿಗೂ ನಮ್ಮ ಜಮ್ಮು-ಕಾಶ್ಮೀರದವರ ಪಾಸ್್ಪೋರ್ಟ್್ಗೆ ಶಿಕ್ಕಾ ಹಾಕುವ ಬದಲು ಪ್ರತ್ಯೇಕ ಹಾಳೆಯಲ್ಲಿ ವೀಸಾ (Stapled Visa) ನೀಡುತ್ತದೆ.</p>
<p>2. ಅರುಣಾಚಲ ಪ್ರದೇಶದವರಿಗಂತೂ ವೀಸಾವನ್ನೇ ಕೊಡುವುದಿಲ್ಲ. ಏಕೆಂದರೆ ಅರುಣಾಚಲ ಪ್ರದೇಶ ತನ್ನದು, ಅಲ್ಲಿನ ಜನ ಚೀನಾಕ್ಕೆ ಆಗಮಿಸಲು ವೀಸಾ ಅಗತ್ಯವಿಲ್ಲ ಎನ್ನುತ್ತಿದೆ.</p>
<p>3. 2007ರಲ್ಲಿ ಬೀಜಿಂಗ್್ಗೆ ಹೊರಟಿದ್ದ ನಮ್ಮ 100 ಐಎಎಸ್ ಅಧಿಕಾರಿಗಳ ಅಧ್ಯಯನ ಪ್ರವಾಸವನ್ನೇ ರದ್ದು ಮಾಡಬೇಕಾಯಿತು. ಏಕೆಂದರೆ ಅದರಲ್ಲಿದ್ದ ಒಬ್ಬ ವ್ಯಕ್ತಿ ಅರುಣಾಚಲ ಪ್ರದೇಶದವರಾಗಿದ್ದರು, ಅವರಿಗೆ ಚೀನಾ ವೀಸಾ ನೀಡಲಿಲ್ಲ. ಅದಕ್ಕೆ ಪ್ರತಿಭಟನೆ ರೂಪದಲ್ಲಿ ಭಾರತ ಪ್ರವಾಸವನ್ನೇ ರದ್ದು ಮಾಡಿತು. ಅರುಣಾಚಲ ಪ್ರದೇಶದ ಆಗಿನ ಮುಖ್ಯಮಂತ್ರಿ ಗೇಗಾಂಗ್ ಅಪಾಂಗ್್ಗೂ ಚೀನಾ ವೀಸಾ ನಿರಾಕರಿಸಿತ್ತು.</p>
<p>4. ಅರುಣಾಚಲ ಪ್ರದೇಶದ ಅಭಿವೃದ್ಧಿಗೆ ಏಷ್ಯನ್ ಡೆವೆಲಪ್್ಮೆಂಟ್ ಬ್ಯಾಂಕಿನಿಂದ ಬರಬೇಕಿದ್ದ ಸಹಾಯನಿಧಿಗೆ ಚೀನಾದ ಅಡ್ಡಗಾಲು.</p>
<p>5. 2010, ಅಗಸ್ಟ್್ನಲ್ಲಿ ನಮ್ಮ ಪ್ರಧಾನಿ ಮನಮೋಹನ್ ಸಿಂಗ್ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದಾಗ ಅದಕ್ಕೂ ಚೀನಾ ವಿರೋಧ ವ್ಯಕ್ತಪಡಿಸಿತ್ತು!</p>
<p>ಇದು ನಿಮಗೆ ಚೀನಾದ ಉದ್ಧಟತನವೆನಿಸುವುದಿಲ್ಲವೆ? ಇಂತಹ ದಾರ್ಷ್ಟ್ಯಕ್ಕೆ ಕಾರಣವಾದರೂ ಏನು? ಅಥವಾ ಚೀನಾದ ನೈಜ ಉದ್ದೇಶವನ್ನು, ನೈಜ ಮುಖವನ್ನು ಅರ್ಥಮಾಡಿಕೊಳ್ಳುವಲ್ಲಿ ಭಾರತ ವಿಫಲವಾಯಿತೇ? ಅಥವಾ ಅರ್ಥಮಾಡಿಕೊಂಡರೂ ನಮ್ಮ ಆಳುವ ನಾಯಕರಲ್ಲಿದ್ದ ಕ್ಷಾತ್ರ ಗುಣದ ಕೊರತೆಯೇ ಚೀನಾವೆಂಬ ಬಹುದೊಡ್ಡ ಅಪಾಯದ ಸೃಷ್ಟಿಗೆ ಕಾರಣವಾಯಿತೆ?</p>
<p>ಈ ಸಂಶಯ ಖಂಡಿತ ಕಾಡುತ್ತಿದೆ!</p>
<p>&#8216;ಟಿಬೆಟ್ ಹಸ್ತವಿದ್ದಂತೆ. ಲಡಾಕ್, ಸಿಕ್ಕಿಂ, ನೇಪಾಳ್, ಭೂತಾನ್ ಹಾಗೂ North East Frontier Agency (ಅರುಣಾಚಲ ಪ್ರದೇಶ) ಅದರ 5 ಬೆರಳುಗಳಿದ್ದಂತೆ. ಅವುಗಳನ್ನು ಸ್ವತಂತ್ರಗೊಳಿಸಬೇಕು&#8217; ಎಂದು ಚೀನಿ ನಾಯಕ ಮಾವೋ ಝೆಡಾಂಗ್ 6 ದಶಕಗಳ ಹಿಂದೆಯೇ ಸಾರ್ವಜನಿಕವಾಗಿ ಹೇಳಿದ್ದರು! ಅವರ ಧೂರ್ತ ಯೋಚನೆ ಹಾಗೂ ಯೋಜನೆ 1946ರಲ್ಲಿಯೇ ಬಹಿರಂಗವಾಗಿತ್ತು. 1950ರ ನಂತರವಂತೂ, &#8220;ತೈವಾನ್ ಟಿಬೆಟ್ ಹಾಗೂ ಹೈನನ್ ದ್ವೀಪಗಳನ್ನು ಮರುವಶಪಡಿಸಿಕೊಳ್ಳಲಾಗುವುದು&#8217; ಎಂದು ಪದೇ ಪದೆ ಹೇಳಲಾರಂಭಿಸಿದ್ದರು. 1949ರಲ್ಲಿ ಕಮ್ಯೂನಿಸ್ಟರು ಚೀನಾದ ಚುಕ್ಕಾಣಿ ಹಿಡಿದ ನಂತರ ಹೊರಬಂದ ಚೀನಾದ ಭೂಪಟ ಕೊರಿಯಾ, ಮಂಗೋಲಿಯಾ, ಬರ್ಮಾ, ಮಲೇಷಿಯಾ, ಟಿಬೆಟ್, ನೇಪಾಳ, ಸಿಕ್ಕಿಂ, ಭೂತಾನ್್ಗಳನ್ನೂ ಒಳಗೊಂಡಿತ್ತು. ಇಷ್ಟಾಗಿಯೂ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಮಹಾಶಯರು ಎಚ್ಚೆತ್ತುಕೊಳ್ಳಲೇ ಇಲ್ಲ. 1959ರಲ್ಲಿ ಚೀನಾ ಟಿಬೆಟ್ಟನ್ನು ಕಬಳಿಸಿದಾಗಲೂ ನೆಹರು ನಿದ್ರೆಯಿಂದೇಳಲೇ ಇಲ್ಲ. ಅದರ ಫಲವೇ 1962ರ ಯುದ್ಧ. ಅದರಲ್ಲಿ ನಮ್ಮ ಲಡಾಕ್್ನ 37 ಸಾವಿರ ಚದುರ ಕಿ.ಮೀ. ಭೂಭಾಗವನ್ನು ಚೀನಾ ಆಕ್ರಮಿಸಿತು. ಒಂದು ಕಾಲದಲ್ಲಿ ಅರುಣಾಚಲ ಪ್ರದೇಶ ಕೂಡ ಟಿಬೆಟ್್ನ ಒಂದು ಭಾಗವಾಗಿತ್ತು. ಬ್ರಿಟಿಷರು ಮ್ಯಾಕ್್ಮಹೋನ್ ರೇಖೆ ಎಳೆದ ಮೇಲೆ ಅರುಣಾಚಲ ಪ್ರದೇಶ ಪ್ರತ್ಯೇಕಗೊಂಡು ಭಾರತಕ್ಕೆ ಸೇರಿತು. ಹಾಗಾಗಿ ಅದನ್ನೂ ಸ್ವತಂತ್ರಗೊಳಿಸಬೇಕು, ಅಂದರೆ ತನ್ನದಾಗಿಸಿಕೊಳ್ಳಬೇಕೆಂದು ಚೀನಾ ಹೊರಟಿದೆ. ಅದರ ಫಲವೇ ವೀಸಾ ನಿರಾಕರಣೆ! ಲಡಾಕ್ ಸಂಪೂರ್ಣವಾಗಿ ದೊರೆತಿಲ್ಲವೆಂಬ ಕಾರಣಕ್ಕೆ ನೀಡುತ್ತಿರುವುದೇ Stapled Visa! ನಮ್ಮಲ್ಲಿ &#8220;ಬೆರಳು ತೋರಿದರೆ ಹಸ್ತ ನುಂಗುತ್ತಾರೆ&#8217; ಎಂಬ ಮಾತು ಜನಜನಿತವಾಗಿದೆ. ಆದರೆ ಹಸ್ತವನ್ನೇ ಮೊದಲು ನುಂಗಿರುವ ಚೀನಾ ಇನ್ನು ಬೆರಳುಗಳನ್ನು (ಲಡಾಕ್, ಸಿಕ್ಕಿಂ, ನೇಪಾಳ್, ಭೂತಾನ್ ಹಾಗೂ ಅರುಣಾಚಲ ಪ್ರದೇಶ) ಬಿಟ್ಟೀತೆ?</p>
<p>ಅದರ ಸೂಚನೆಗಳು ಈಗಾಗಲೇ ಸಿಕ್ಕಿವೆ!</p>
<p>ಕಳೆದ ಒಂದು ವರ್ಷದಲ್ಲಿ ಚೀನಾ ಸುಮಾರು 300ಕ್ಕೂ ಹೆಚ್ಚು ಭಾರಿ ಗಡಿ ನಿಯಮ ಉಲ್ಲಂಘನೆ ಮಾಡಿದೆ. ಮತಾಂಧ ಪಾಕಿಸ್ತಾನದ ನಿಯಂತ್ರಣದಲ್ಲಿರುವ ಆಕ್ರಮಿತ ಕಾಶ್ಮೀರದ ಗಿಲ್ಗಿಟ್್ನಲ್ಲಿ ಅಭಿವೃದ್ಧಿ ಕಾರ್ಯಗಳ ನೆಪದಲ್ಲಿ ಚೀನಾ ತನ್ನ 11 ಸಾವಿರ ಸೈನಿಕರನ್ನು ನಿಯೋಜನೆ ಮಾಡಿದೆ. ತುರ್ತು ಪರಿಸ್ಥಿತಿ ಎದುರಾದರೆ, ಅಂದರೆ ತುರ್ತಾಗಿ ಯುದ್ಧ ಮಾಡಬೇಕಾದ ಸಂದರ್ಭ ಬಂದರೆ ಕೇವಲ 21 ದಿನಗಳಲ್ಲಿ 5 ಲಕ್ಷ ಸೈನಿಕರನ್ನು ಭಾರತದ ಗಡಿಗೆ ತಂದು ನಿಲ್ಲಿಸುವ ತಾಕತ್ತು ಚೀನಾಕ್ಕಿದೆ ಎಂದು 2010 ಏಪ್ರಿಲ್್ನಲ್ಲಿ ನಮ್ಮ ಸೇನಾಪಡೆಯನ್ನುದ್ದೇಶಿಸಿ ಮಾತನಾಡುತ್ತಾ ಪ್ರಧಾನಿ ಮನಮೋಹನ್ ಸಿಂಗ್ ಅವರೇ ಹೇಳಿದ್ದಾರೆ! ಟಿಬೆಟ್ ಭಾರತ ಗಡಿಯುದ್ದಕ್ಕೂ ಚಾಚಿದಂತೆ 1142 ಕಿ. ಮೀ. ರೈಲು ಹಳಿ ಹಾಕಿರುವ ಚೀನಾ, ಅದನ್ನು ಕಠ್ಮಂಡು, ಮ್ಯಾನ್ಮಾರ್, ಭೂತಾನ್, ಪಾಕಿಸ್ತಾನ ಹಾಗೂ ಮಧ್ಯ ಏಷ್ಯಾಕ್ಕೂ ವಿಸ್ತರಿಸುವ ಯೋಜನೆ ಹಾಕಿಕೊಂಡಿದೆ. ಅಲ್ಲದೆ ಟಿಬೆಟ್್ನಲ್ಲಿ 8 ಹಾಗೂ ನೆರೆಯ ಕ್ಷಿನ್್ಜಿಯಾಂಗ್್ನಲ್ಲಿ 10 ವಾಯುನೆಲೆಗಳನ್ನು ಸ್ಥಾಪಿಸಿರುವ ಅದು, 2020ರೊಳಗೆ ಇನ್ನೂ 22 ಹೊಸ ವಾಯುನೆಲೆಗಳನ್ನು ನಿರ್ಮಾಣ ಮಾಡಲಿದೆ. ಇವೆಲ್ಲ ಏನನ್ನು ಸೂಚಿಸುತ್ತವೆ? ಇವ್ಯಾವುವೂ ನಾಗರಿಕರ ಉಪಯೋಗಕ್ಕಾಗಿ ಹಾಕುತ್ತಿರುವ ಹಳಿಗಳಲ್ಲ. ಯುದ್ಧ ಸಂದರ್ಭದಲ್ಲಿ ಸೈನಿಕರು ಹಾಗೂ ಶಸ್ತ್ರಾಸ್ತ್ರಗಳನ್ನು ತ್ವರಿತ ಹಾಗೂ ನಿರಂತರವಾಗಿ ಸಾಗಣೆ ಮಾಡುವ ಉದ್ದೇಶ ಹೊಂದಿವೆ. ಇವತ್ತು ಚೀನಿ ನೌಕಾಪಡೆ ಯೆಲ್ಲೋ ಸಮುದ್ರ, ಕೊರಿಯನ್ ಕೊಲ್ಲಿ, ಮಲೇಷಿಯಾ ಜಲಸಂಧಿ ನಂತರ ನಮ್ಮ ಹಿಂದೂಮಹಾಸಾಗರದ ಮೇಲೂ ನಿಯಂತ್ರಣ ಹೊಂದಲು ಮುಂದಾಗಿದೆ. ಅದರ ಭಾಗವಾಗಿಯೇ ಶ್ರೀಲಂಕಾದ ಜತೆ ರಕ್ಷಣಾ ಒಪ್ಪಂದ ಮಾಡಿಕೊಂಡಿದೆ. ನಮ್ಮ ಭಾಷಾಂಧ ತಮಿಳರಿಗೆ ಹೆದರಿ ಭಾರತ ಕೈಕಟ್ಟಿ ಕುಳಿತ ಕಾರಣ ಎಲ್್ಟಿಟಿಇ ವಿರುದ್ಧದ ಕಾರ್ಯಾಚರಣೆಗೆ ಮದ್ದುಗುಂಡು ಪೂರೈಕೆ ಮಾಡಿದ ಚೀನಾ, ಶ್ರೀಲಂಕಾದ ಮೇಲೆ ನಿಯಂತ್ರಣ ಸಾಧಿಸುವುದಕ್ಕೂ ಪ್ರಯತ್ನಿಸುತ್ತಿದೆ. 2010ರಲ್ಲಿ ಶ್ರೀಲಂಕಾಕ್ಕೆ ಹರಿದು ಬಂದು ವಿದೇಶಿ ಬಂಡವಾಳದಲ್ಲಿ ಶೇ. 90 ಭಾಗ ಚೀನಾದ್ದಾಗಿದೆ. ಇವತ್ತು ಅಮೆರಿಕದ ಶೇ.40ರಷ್ಟು ಸೆಕ್ಯುರಿಟಿ ಬಾಂಡ್್ಗಳನ್ನು ಖರೀದಿ ಮಾಡಿಟ್ಟುಕೊಳ್ಳುವ ಮೂಲಕ ವಿಶ್ವದ ಹಿರಿಯಣ್ಣನನ್ನೇ ಆಟವಾಡಿಸುತ್ತಿರುವ ಚೀನಾ, ಶ್ರೀಲಂಕಾವನ್ನೂ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಕಾಲ ದೂರವಿಲ್ಲ. ಇನ್ನು ಮ್ಯಾನ್ಮಾರ್(ಬರ್ಮಾ) ವಿಷಯಕ್ಕೆ ಬಂದರೂ ಈಗಾಗಲೇ ಅಲ್ಲಿನ ಬಂದರುಗಳ ಅಭಿವೃದ್ಧಿ, ರಸ್ತೆ ನಿರ್ಮಾಣದ ನೆಪದಲ್ಲಿ ಬೇರುಬಿಟ್ಟಿರುವ ಚೀನಾ, ಅಲ್ಲಿ ಯಥೇಚ್ಛವಾಗಿರುವ ನೈಸರ್ಗಿಕ ಅನಿಲದ ಎಲ್ಲ ಗುತ್ತಿಗೆಗಳನ್ನೂ ತನ್ನದಾಗಿಸಿಕೊಂಡಿದೆ. ಬಾಂಗ್ಲಾದಲ್ಲೂ ಬಂದರು ನವೀಕರಣದ ನೆಪದಲ್ಲಿ ಚೀನಾ ಕಾಲಿಟ್ಟಿದೆ. ಇತ್ತ ವಿಶ್ವದ ಏಕೈಕ ಹಿಂದೂ ರಾಷ್ಟ್ರವಾಗಿದ್ದ ನೇಪಾಳ ಈಗಾಗಲೇ ಚೀನಾದ ಗಾಳಕ್ಕೆ ಸಿಕ್ಕಿದೆ. ಸಾಮಾನ್ಯವಾಗಿ ನೇಪಾಳದಲ್ಲಿ ಯಾರೇ ಪ್ರಧಾನಿಯಾದರೂ ಅವರ ಮೊದಲ ಭೇಟಿ ಭಾರತವಾಗಿರುತ್ತದೆ. ಆದರೆ 2008ರಲ್ಲಿ ಮಾವೋವಾದಿ ನಾಯಕ ಪ್ರಚಂಡ ಪ್ರಧಾನಿಯಾದಾಗ ಅವರು ಮೊದಲು ಭೇಟಿ ಕೊಟ್ಟಿದ್ದು ಮಾತ್ರ ಚೀನಾಕ್ಕೆ!</p>
<p>ಇದರ ಸಂದೇಶವೇನು? ಇದಕ್ಕೆಲ್ಲ ಯಾರನ್ನು ದೂರಬೇಕು? ಯಾರನ್ನು ಹೊಣೆಗಾರರನ್ನಾಗಿ ಮಾಡಬೇಕು?</p>
<p>1962ರಲ್ಲಿ ಅಕ್ಸಾಯ್್ಚಿನ್ ಭೂಭಾಗವನ್ನು ಚೀನಾ ವಶಪಡಿಸಿಕೊಂಡಾಗ ಪ್ರಧಾನಿ ನೆಹರು ಸಂಸತ್ತಿನಲ್ಲಿ ನೀಡಿದ ಸಮರ್ಥನೆ ಏನು ಗೊತ್ತೆ? &#8220;ಅಲ್ಲಿ ಒಂದು ಹುಲ್ಲುಕಡ್ಡಿಯೂ ಹುಟ್ಟುವುದಿಲ್ಲ. ಅದನ್ನು ಚೀನಾಕ್ಕೆ ಆಕ್ರಮಿಸಿದ್ದರಿಂದ ಭಾರತ ಕಳೆದುಕೊಂಡಿದ್ದೇನೂ ಇಲ್ಲ&#8217;! ಇದರಿಂದ ಕುಪಿತರಾದ ಖ್ಯಾತ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಸಂಸದ ಮಹಾವೀರ್ ತ್ಯಾಗಿಯವರು ತಮ್ಮ ಬೋಳುದಲೆಯನ್ನು ತೋರುತ್ತಾ, &#8220;ಇಲ್ಲೂ ಕೂಡ ಏನೂ ಬೆಳೆಯುವುದಿಲ್ಲ. ಹಾಗಂತ ಇದನ್ನೂ ತುಂಡು ಮಾಡಬೇಕೇ ಅಥವಾ ಅನ್ಯರಿಗೆ ಕೊಟ್ಟುಬಿಡಲಾದೀತೆ?&#8217; ಎಂದು ನೆಹರು ಮೇಲೆ ಟೀಕಾಪ್ರಹಾರ ಮಾಡುತ್ತಾರೆ. ವಾಸ್ತವದಲ್ಲಿ ಟೋಪಿಯೊಳಗಿದ್ದ ನೆಹರು ಮಂಡೆ ಕೂಡ ಬೊಳುದಲೆಯೇ ಆಗಿತ್ತು, ಜೊತೆಗೆ ಅವರ ಬುದ್ಧಿಯೂ ಬೋಳಾಗಿತ್ತು! ಅದರ ದುಷ್ಪರಿಣಾಮವನ್ನು ನಾವಿಂದು ಅನುಭವಿಸುತ್ತಿದ್ದೇವೆ. ನೆಹರು ಮಾಡಿದ ಮೂರ್ಖ ಕೆಲಸ ಇಷ್ಟಕ್ಕೇ ನಿಲ್ಲುವುದಿಲ್ಲ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಅಮೆರಿಕ, ಬ್ರಿಟನ್, ಫ್ರಾನ್ಸ್, ರಷ್ಯಾ ಹಾಗೂ ರಿಪಬ್ಲಿಕ್ ಆಫ್ ಚೀನಾ ಈ 5 ರಾಷ್ಟ್ರಗಳು ಮಾತ್ರ ವಿಟೋ ಅಧಿಕಾರ ಹೊಂದಿವೆ. ಚೀನಾ ಹೊಂದಿರುವ ವಿಟೋ ಅಧಿಕಾರ 1949ರ ನಂತರ ತೈವಾನ್ ಬಳಿಯಿತ್ತು. ಅದನ್ನು ಅಮೆರಿಕ ಭಾರತಕ್ಕೆ ನೀಡುವ ಸೂಚನೆ ನೀಡಿದರೂ ಅಂತಿಮವಾಗಿ ಚೀನಾಕ್ಕೆ ಸಲ್ಲುವಂತೆ ಮಾಡಿದ್ದು ನಮ್ಮ ಮಹಾನ್ ನೆಹರು. ಇದನ್ನು ರಾಘವ ಬೆಹಲ್ ಬರೆದಿರುವ &#8220;ಸೂಪರ್ ಪವರ್್&#8217; ಪುಸ್ತಕದಲ್ಲೂ ದಾಖಲಿಸಲಾಗಿದೆ,</p>
<p>ಕಾಂಗ್ರೆಸ್ ಸಂಸದ ಶಶಿ ತರೂರ್ ಅವರೇ ನೆಹರು ಮೂರ್ಖತನವನ್ನು ಅದರಲ್ಲಿ ಒಪ್ಪಿಕೊಂಡಿದ್ದಾರೆ!</p>
<p>ದುರದೃಷ್ಟವಶಾತ್, ಅಂತಹ ನೆಹರು ಅವರ ಕುಟುಂಬವೇ ಹಿಂಬಾಗಿಲಿನಿಂದ ಇಂದು ದೇಶವನ್ನಾಳುತ್ತಿದೆ. ಇತ್ತ ತನಗೆ ಸೇರಬೇಕೆಂದು ಪ್ರತಿಪಾದಿಸುತ್ತಿರುವ ಭಾಗವನ್ನೊಳಗೊಂಡ ಜಮ್ಮು-ಕಾಶ್ಮೀರದ ಉಸ್ತುವಾರಿ ಹೊಂದಿರುವ ಲೆಫ್ಟಿನೆಂಟ್ ಜನರಲ್ ಬಿ.ಎಸ್. ಜಸ್ವಾಲ್ ಅವರಿಗೆ ಚೀನಾ ವೀಸಾ ನಿರಾಕರಣೆ ಮಾಡಿದೆ, ದಲೈಲಾಮ ಸಭೆಯನ್ನು ರದ್ದುಪಡಿಸುವಂತೆ ಬಹಿರಂಗವಾಗಿ ಒತ್ತಡ ಹೇರುತ್ತಿದೆ, ಡಿಸೆಂಬರ್ 1ರಂದು ನಡೆದ ದಲೈಲಾಮ ಜತೆಗಿನ ಕಾರ್ಯಕ್ರಮಕ್ಕೆ ಹೋಗದಂತೆ ಪಶ್ಚಿಮ ಬಂಗಾಳದ ರಾಜ್ಯಪಾಲ ಎಂ.ಕೆ. ನಾರಾಯಣನ್್ಗೆ  ಸಲಹೆ ನೀಡುವಷ್ಟರ ಮಟ್ಟಿಗೆ ಚೀನಾ ದಾರ್ಷ್ಟ್ಯ ಪ್ರದರ್ಶಿಸುತ್ತಿದೆ. ಈ ಘಟನೆಯ ನಂತರವೇ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಕೇಂದ್ರ ಸರ್ಕಾರಕ್ಕೆ ಗಂಡೆದೆ ತೋರುವಂತೆ ಕರೆ ನೀಡಿರುವುದು. ಇಷ್ಟಾಗಿಯೂ ಪ್ರಧಾನಿ ಮನಮೋಹನ್ ಸಿಂಗ್ ಅವರಾಗಲಿ, ಅವರಿಗೆ ಮೂಗುದಾರ ಹಾಕಿ ಹಿಡಿದುಕೊಂಡಿರುವ ಸೋನಿಯಾ ಗಾಂಧಿಯವರಾಗಲಿ ಬಾಯಿಬಿಟ್ಟಿಲ್ಲ. ಈ ಕಾಂಗ್ರೆಸ್ಸಿಗರ ತಾಕತ್ತು ಪ್ರದರ್ಶನವಾಗುವುದೇನಿದ್ದರೂ ಅಣ್ಣಾ ಹಜಾರೆಯಂತಹ ವಯೋವೃದ್ಧರ ಮುಂದಷ್ಟೇ. ಛೇ!</p>
]]></content:encoded>
			<wfw:commentRss>http://pratapsimha.com/2011/12/31/china-2/feed/</wfw:commentRss>
		<slash:comments>37</slash:comments>
		</item>
		<item>
		<title>ಈ ಅನರ್ಘ್ಯರತ್ನಕ್ಕೇಕೆ ನೀಡಿಲ್ಲ ಭಾರತರತ್ನ?</title>
		<link>http://pratapsimha.com/2011/12/24/homi/</link>
		<comments>http://pratapsimha.com/2011/12/24/homi/#comments</comments>
		<pubDate>Sat, 24 Dec 2011 08:40:43 +0000</pubDate>
		<dc:creator>Pratap Simha</dc:creator>
				<category><![CDATA[Bettale-Jagattu]]></category>

		<guid isPermaLink="false">http://pratapsimha.com/?p=1220</guid>
		<description><![CDATA[ಈ ಅನರ್ಘ್ಯರತ್ನಕ್ಕೇಕೆ ನೀಡಿಲ್ಲ ಭಾರತರತ್ನ? ಮೊನ್ನೆ ಡಿಸೆಂಬರ್ 19ರಂದು ಭಾರತೀಯ ವಿಜ್ಞಾನ ಮಂದಿರದಲ್ಲಿ (ಐಐಎಸ್್ಸಿ) ನಡೆದ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿಯವರ ವೈಜ್ಞಾನಿಕ ಸಲಹಾ ಮಂಡಳಿಯ ಮುಖ್ಯಸ್ಥ ಹಾಗೂ ಖ್ಯಾತ ವಿಜ್ಞಾನಿ ಸಿ.ಎನ್.ಆರ್. ರಾವ್, &#8220;ಭಾರತರತ್ನ ಕೊಡುವುದಾದರೆ ಹೋಮಿ ಜಹಾಂಗೀರ್ ಭಾಭಾ ಅವರಿಗೆ ಮೊದಲು ಕೊಡಬೇಕು. ನಮ್ಮ ದೇಶದಲ್ಲಿ ವಿಜ್ಞಾನಕ್ಕಿಂತ ಕ್ರಿಕೆಟ್್ಗೇ ಹೆಚ್ಚು ಪ್ರಾಮುಖ್ಯತೆ ದೊರೆಯುತ್ತಿದೆ. ಸಚಿನ್ ತೆಂಡೂಲ್ಕರ್್ಗೆ ಈಗಾಗಲೇ ಪದ್ಮಶ್ರೀ, ಪದ್ಮವಿಭೂಷಣ ನೀಡುವ ಮೂಲಕ ಆತನ ಸಾಧನೆಗೆ ಮನ್ನಣೆ ನೀಡಲಾಗಿದೆ. ಹಾಗಂತ ಅವರಿಗೆ ಭಾರತರತ್ನ ಕೊಡುವುದು ಬೇಡವೆಂದಲ್ಲ. [...]]]></description>
			<content:encoded><![CDATA[<p><a href="http://pratapsimha.com/wp-content/uploads/2011/12/homi.jpg"><img src="http://pratapsimha.com/wp-content/uploads/2011/12/homi-300x213.jpg" alt="" title="homi" width="300" height="213" class="aligncenter size-medium wp-image-1221" /></a><br />
ಈ ಅನರ್ಘ್ಯರತ್ನಕ್ಕೇಕೆ ನೀಡಿಲ್ಲ ಭಾರತರತ್ನ?</p>
<p>ಮೊನ್ನೆ ಡಿಸೆಂಬರ್ 19ರಂದು ಭಾರತೀಯ ವಿಜ್ಞಾನ ಮಂದಿರದಲ್ಲಿ (ಐಐಎಸ್್ಸಿ) ನಡೆದ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿಯವರ ವೈಜ್ಞಾನಿಕ ಸಲಹಾ ಮಂಡಳಿಯ ಮುಖ್ಯಸ್ಥ ಹಾಗೂ ಖ್ಯಾತ ವಿಜ್ಞಾನಿ ಸಿ.ಎನ್.ಆರ್. ರಾವ್, &#8220;ಭಾರತರತ್ನ ಕೊಡುವುದಾದರೆ ಹೋಮಿ ಜಹಾಂಗೀರ್ ಭಾಭಾ ಅವರಿಗೆ ಮೊದಲು ಕೊಡಬೇಕು. ನಮ್ಮ ದೇಶದಲ್ಲಿ ವಿಜ್ಞಾನಕ್ಕಿಂತ ಕ್ರಿಕೆಟ್್ಗೇ ಹೆಚ್ಚು ಪ್ರಾಮುಖ್ಯತೆ ದೊರೆಯುತ್ತಿದೆ. ಸಚಿನ್ ತೆಂಡೂಲ್ಕರ್್ಗೆ ಈಗಾಗಲೇ ಪದ್ಮಶ್ರೀ, ಪದ್ಮವಿಭೂಷಣ ನೀಡುವ ಮೂಲಕ ಆತನ ಸಾಧನೆಗೆ ಮನ್ನಣೆ ನೀಡಲಾಗಿದೆ. ಹಾಗಂತ ಅವರಿಗೆ ಭಾರತರತ್ನ ಕೊಡುವುದು ಬೇಡವೆಂದಲ್ಲ. ಹೋಮಿ ಭಾಭಾ ಕೂಡಾ ಅರ್ಹ ವ್ಯಕ್ತಿ&#8221; ಎಂದರು. ಇಷ್ಟಕ್ಕೂ ಈ ಹೋಮಿ ಭಾಭಾ ಯಾರೆಂದುಕೊಂಡಿರಿ? ಅವರ ಸಾಧನೆಯಾದರೂ ಏನು? ಸಿ.ಎನ್.ಆರ್. ರಾವ್ ಹೇಳಿದಂತೆ ಅವರು ನಿಜಕ್ಕೂ ಭಾರತರತ್ನಕ್ಕೆ ಅರ್ಹರಾ?</p>
<p>ನೀವೇಕೆ ಮದುವೆ ಆಗಲೇ ಇಲ್ಲ?</p>
<p>ಅಂತ ಕೇಳಿದರೆ I am married to creativity ಎನ್ನುತ್ತಿದ್ದರು. ಸುಖದ ಸುಪ್ಪತ್ತಿಗೆಯಲ್ಲಿ ಜನಿಸಿದ ವ್ಯಕ್ತಿಯ ಬಾಯಿಂದ ಬರುವ, ಬರಬೇಕಾದ ಮಾತುಗಳು ಅವಾಗಿರಲಿಲ್ಲ. ಅಪ್ಪ ಜಹಾಂಗೀರ್ ಹರ್ಮ್್ಜಿ ಭಾಭಾ ಬ್ರಿಟನ್್ನ ಆಕ್ಸ್್ಫರ್ಡ್್ನಲ್ಲಿ ಕಲಿತ ಖ್ಯಾತ ವಕೀಲ. ಅಜ್ಜ ಹರ್ಮುಸ್್ಜಿ ಭಾಭಾ ಮೈಸೂರು ರಾಜ್ಯದ ಶಿಕ್ಷಣ ಇಲಾಖೆಯ ಮುಖ್ಯಸ್ಥ. ಅಮ್ಮ ಮೆಹರ್್ಬಾಯಿ ಜಗದ್ವಿಖ್ಯಾತ ಟಾಟಾ ಕುಟುಂಬದ ಸಂಬಂಧಿ. ಜತೆಗೆ ಪಾರ್ಸಿಗಳು ಆ ಕಾಲಕ್ಕೆ ತೀರಾ ಗಿಜಡಡಿಜ್ಠಟ್ಝಿಡಜಜ ಆಗಿದ್ದರು. ಇಂತಹ ಹಿನ್ನೆಲೆಯೊಂದಿಗೆ 1909, ಅಕ್ಟೋಬರ್ 30ರಂದು ಜನಿಸಿದವರೇ ಹೋಮಿ ಜಹಾಂಗೀರ್ ಭಾಭಾ. ಬಾಲ್ಯಾವಸ್ಥೆಯಲ್ಲಿ ಸರಿಯಾಗಿ ನಿದ್ರೆ ಮಾಡುತ್ತಿರಲಿಲ್ಲ. ಚಿಂತಿತರಾದ ಅಪ್ಪ-ಅಮ್ಮ ಬಹಳ ಜನ ಹೆಸರಾಂತ ವೈದ್ಯರ ಬಳಿಗೆ ಕರೆದುಕೊಂಡು ಹೋಗಿ ತಪಾಸಣೆ ಮಾಡಿಸಿದರು. ಆದರೆ ಹೋಮಿ ಭಾಭಾಗೇಕೆ ನಿದ್ರೆ ಬರುತ್ತಿಲ್ಲ ಅಥವಾ ಹೋಮಿ ಭಾಭಾ ಏಕೆ ಸರಿಯಾಗಿ ನಿದ್ರೆ ಮಾಡುತ್ತಿಲ್ಲ ಎಂಬುದು ಮಾತ್ರ ತಿಳಿಯಲಿಲ್ಲ. ಎಲ್ಲ ವಿಧದ ಪರೀಕ್ಷೆಗಳಿಗೂ ಒಳಪಡಿಸಿದ ವೈದ್ಯರು, ಈತ ಆರೋಗ್ಯದಿಂದಿದ್ದಾನೆ, ಭಯಪಡಬೇಕಾದ ಅಗತ್ಯವಿಲ್ಲ ಎಂದು ಧೈರ್ಯ ಹೇಳಿ ಕಳುಹಿಸಿದರು. ನಿಜ ಸಂಗತಿಯೇನೆಂದರೆ ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಗಾಢ ಚಿಂತನೆಯಲ್ಲಿ ತೊಡಗಿದ್ದುದು ನಿದ್ರಾಹೀನತೆಗೆ ಕಾರಣವಾಗಿತ್ತು. 1916ರಲ್ಲಿ ಬಾಂಬೆಯ ಹೆಸರಾಂತ ಕೆಥೆಡ್ರಲ್ ಸ್ಕೂಲ್ ಸೇರಿದ ಭಾಭಾ ವ್ಯಾಸಂಗ ಆರಂಭಿಸಿದರು. ಆನಂತರ 1922ರಲ್ಲಿ ಜಾನ್ ಕ್ಯಾನನ್ ಸ್ಕೂಲ್ ಸೇರಿದ ಅವರು, 15ನೇ ವಯಸ್ಸಿಗೆ ಎಲ್ಫಿನ್್ಸ್ಟನ್ ಕಾಲೇಜು ಮೆಟ್ಟಿಲೇರಿದರು. ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ನಡೆಸುವ ಪ್ರತಿಭಾ ಪರೀಕ್ಷೆಯಲ್ಲಿ ಪಾಸಾದ ಭಾಭಾಗೆ ವಿದ್ಯಾರ್ಥಿ ವೇತನ ದೊರೆಯಲಾರಂಭಿಸಿತು. ವಿಜ್ಞಾನಿಯಾಗುವ ಕನಸು ಕಾಣಲಾರಂಭಿಸಿದರು. ಆದರೆ ಅಪ್ಪ ಹಾಗೂ ಅಂಕಲ್ ಸರ್ ದೊರಾಬ್ಜಿ ಜೆ. ಟಾಟಾ ಅವರ ಯೋಚನೆ ಇನ್ನೇನೋ ಆಗಿತ್ತು. ಮಗನನ್ನು ಎಂಜಿನಿಯರಿಂಗ್ ಓದಿಸಿ ಜೆಮ್್ಷೆಡ್್ಪುರದಲ್ಲಿರುವ ಟಾಟಾ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಕೆಲಸಕ್ಕೆ ಸೇರಿಸುವ ತವಕ ಅವರದ್ದು. ಕುಪಿತರಾದ ಹೋಮಿ ಭಾಭಾ ಅಪ್ಪನಿಗೆ ಪತ್ರವೊಂದನ್ನು ಬರೆಯುತ್ತಾರೆ.</p>
<p>&#8220;ನಾನು ಬಹಳ ಗಂಭೀರವಾಗಿ ನಿಮಗೆ ಹೇಳುತ್ತಿದ್ದೇನೆ. ಈ ಉದ್ಯಮ ಅಥವಾ ಎಂಜಿನಿಯರಿಂಗ್ ನನಗೆ ಹಿಡಿಸುವ ವಿಚಾರವಲ್ಲ. ನನ್ನ ಮನಸ್ಥಿತಿಗೂ ಈ ವಿಚಾರಗಳಿಗೂ ಹೋಲಿಕೆಯೇ ಆಗುವುದಿಲ್ಲ. ಭೌತಶಾಸ್ತ್ರವೇ ನನ್ನ ಕ್ಷೇತ್ರ. ಈ ಕ್ಷೇತ್ರದಲ್ಲಿ ಮಹತ್ತರವಾದುದನ್ನು ಸಾಧಿಸಬಲ್ಲೆ ಎಂದು ನನಗೆ ಗೊತ್ತು. ಪ್ರತಿಯೊಬ್ಬ ಮನುಷ್ಯನೂ ಆತ ಇಷ್ಟಪಡುವ ಕ್ಷೇತ್ರದಲ್ಲಿ ಮಾತ್ರ ಅಮೋಘ ಸಾಧನೆ ಮಾಡಲು ಸಾಧ್ಯ. ಆತ ಹುಟ್ಟಿದ್ದು ಆ ಕಾರಣಕ್ಕಾಗಿಯೇ ಹಾಗೂ ವಿಧಿ ಬರೆದಿರುವುದೂ ಅದನ್ನೇ. ಅವನು, ಇವನು, ಯಾವನೋ ಹೇಳಿದ್ದರ ಮೇಲೆ ನನ್ನ ಭವಿಷ್ಯ ಅವಲಂಬಿತವಾಗುವುದಿಲ್ಲ. ನನ್ನ ಕ್ಷೇತ್ರದಲ್ಲಿ ಪರಿಶ್ರಮದ ಮೇಲೆ ಯಶಸ್ಸು ಅವಲಂಬಿತವಾಗಿರುತ್ತದೆ. ಅದೂ ಅಲ್ಲದೆ ವಿಜ್ಞಾನಕ್ಕೆ ಒಲ್ಲದ ಜಾಗ ಭಾರತವೆಂದೇನೂ ಅಲ್ಲ. ಭೌತಶಾಸ್ತ್ರದ ಬಗ್ಗೆ ನನ್ನಲ್ಲಿ ಉತ್ಕಟ ತುಡಿತವಿದೆ. ನಾನು ಅದನ್ನೇ ಓದುತ್ತೇನೆ, ಅದೇ ನನ್ನ ಮಹತ್ವಾಕಾಂಕ್ಷೆ. ಒಂದು ದೊಡ್ಡ ಕಂಪನಿಯ ಯಶಸ್ವಿ ಮುಖ್ಯಸ್ಥನಾಗುವ ಯಾವ ಆಸೆಗಳೂ ನನ್ನಲ್ಲಿಲ್ಲ. ನೀನು ವಿಜ್ಞಾನಿಯಾಗಬೇಕೆಂದು ಬೀಥೋವನ್್ಗೆ, ನೀನು ಎಂಜಿನಿಯರ್ ಆಗು ಅದು ಬುದ್ಧಿವಂತರು ಮಾಡುವ ಕೆಲಸ ಎಂದು ಸಾಕ್ರೆಟಿಸ್್ಗೆ ಹೇಳಿದ್ದರೆ ಹೇಗೆ ಯಾವ ಉಪಯೋಗವೂ ಆಗುತ್ತಿರಲಿಲ್ಲವೋ, ಕೆಲವು ಬುದ್ಧಿವಂತರೂ ಹಾಗೆಯೇ ಇರುತ್ತಾರೆ, ಅವರನ್ನು ಹಾಗೆಯೇ ಬಿಡಿ ಎಂದು ನಿಮ್ಮನ್ನು ವಿನೀತನಾಗಿ ಕೇಳಿಕೊಳ್ಳುತ್ತೇನೆ, ಭೌತಶಾಸ್ತ್ರವನ್ನು ಅಧ್ಯಯನ ಮಾಡಲು ಅವಕಾಶ ಮಾಡಿಕೊಡಿ&#8221;.</p>
<p>ಇಂತಹ ಪತ್ರವನ್ನು ಓದಿದ ಹರ್ಮ್್ಜಿಗೆ ಮಗನ ತುಡಿತ ಅರ್ಥವಾಯಿತು.ಹಾಗಂತ ಪಟ್ಟು ಸಡಿಸಲಿಲ್ಲ. ಒಂದು ವೇಳೆ ನೀನು ಮೆಕ್ಯಾನಿಕಲ್ ಎಂಜಿನಿಯರಿಂಗ್್ನಲ್ಲಿ ಪದವಿ ಪೂರ್ಣಗೊಳಿಸಿದರೆ ಥಿಯರಿಟಿಕಲ್ ಫಿಸಿಕ್ಸ್್ನಲ್ಲಿ ಉನ್ನತ ವ್ಯಾಸಂಗ ಮಾಡಲು ಅವಕಾಶ ಮಾಡಿಕೊಡುವುದಾಗಿ ಪೂರ್ವ ಷರತ್ತು ಹಾಕಿದರು. ಅಪ್ಪನ ಆಸೆಯಂತೆ ಮೆಕ್ಯಾನಿಕಲ್ ಎಂಜಿನಿಯರಿಂಗ್್ಗೆ ಸೇರಿದ ಹೋಮಿ ಭಾಭಾ, 1930ರಲ್ಲಿ ಪ್ರಥಮ ಶ್ರೇಣಿಯಲ್ಲಿ ಪದವಿಯನ್ನು ಪೂರೈಸಿದರು. ಆದರೆ ಭೌತಶಾಸ್ತ್ರದ ವ್ಯಾಮೋಹ ಹೊರಟು ಹೋಗಿರಲಿಲ್ಲ. ಅಪ್ಪ ಮಾತಿನಂತೆ ನಡೆದುಕೊಂಡರು, ಭಾಭಾಗೆ ತನಿಗಿಷ್ಟಬಂದ ವಿಷಯವನ್ನು ಅಧ್ಯಯನ ಮಾಡುವ ಅವಕಾಶ ಸಿಕ್ಕಿತು. ಮೊದಲಿಗೆ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲೇ ಗಣಿತಶಾಸ್ತ್ರದ ಅಧ್ಯಯನವನ್ನು ಆರಂಭಿಸಿದರು. ರಾಸ್ ಬಾಲ್ ಪ್ರವಾಸಿ ವಿದ್ಯಾರ್ಥಿ ವೇತನ ದೊರೆಯಿತು. ಯುರೋಪ್ ಪ್ರವಾಸ ಮಾಡಿ, ವುಲ್ಫ್್ಗ್ಯಾಂಗ್ ಪೌಲಿ, ಎನ್ರಿಕೋ ಫೆರ್ಮಿ ಮುಂತಾದವರ ಜತೆ ಅಧ್ಯಯನ ನಡೆಸುವ ಅವಕಾಶ ಸಿಕ್ಕಿತು. ಮುಂದೆ ನೊಬೆಲ್ ಪುರಸ್ಕಾರ ಪಡೆದ ಪಾಲ್ ಆಡ್ರಿಯನ್ ಮಾರಿಸ್ ಡಿರಾಕ್ ಅವರ ಕೈಕೆಳಗೆ 1932ರಿಂದ 34ರವರೆಗೂ ಎರಡು ವರ್ಷ ಗಣಿತವನ್ನು ಅಧ್ಯಯನ ಮಾಡಿದ ಭಾಭಾ ಅಲ್ಲೂ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದರು. ಈ ಮಧ್ಯೆ, 1933ರಲ್ಲಿ ಪ್ರಕಟವಾದ ಭಾಭಾ ಅವರ ಮೊಟ್ಟಮೊದಲ ಸಂಶೋಧನಾ ಪ್ರಬಂಧಕ್ಕೆ ಐಸಾಕ್ ನ್ಯೂಟನ್ ಸ್ಟೂಡೆಂಟ್್ಷಿಪ್ ಸಿಕ್ಕಿತು. ಕೂಪನ್್ಹೇಗನ್್ನಲ್ಲಿ ನೀಲ್ ಬೋರ್ ಜೊತೆ ಸಂಶೋಧನೆ ಮಾಡುವ ಅವಕಾಶವೂ ಲಭ್ಯವಾಯಿತು. ಪ್ರಖ್ಯಾತ ಕ್ಯಾವೆಂಡಿಶ್ ಪ್ರಯೋಗಾಲಯ ಸೇರಿದ ಭಾಭಾ, ಅಣು ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದುಕೊಂಡರು. 1937ರಲ್ಲಿ ಹೀತ್ಲರ್ ಜತೆ ಸೇರಿ ಮಂಡಿಸಿದ Cascade Theory of Electron ಮಹಾಪ್ರಬಂಧ, ಆಂತಿಮವಾಗಿ Bhabha-Heitler Cascade Theory ಎಂದೇ ಪ್ರಸಿದ್ಧಿ ಪಡೆಯಿತು. ಹೀಗೆ ರುದರ್್ಫೋರ್ಡ್, ಹೀತ್ಲರ್, ನೀಲ್ ಬೋರ್, ಡಿರಾಕ್ ಜೊತೆ ಕಳೆದ ಸಮಯ, ನಡೆಸಿದ ಸಂಶೋಧನೆ ಭಾಭಾ ಅವರ ಜೀವನ ಹಾಗೂ ಯೋಚನೆಯ ದಿಕ್ಕನ್ನೇ ಬದಲಾಯಿಸಿ ಬಿಟ್ಟವು. ಮದುವೆಯ ಆಸೆಯನ್ನೇ ಬಿಟ್ಟು, ಸಂಶೋಧನೆಯನ್ನೇ ಕೈಹಿಡಿದರು!</p>
<p>ಮನುಕುಲ ಕಂಡ ಮಹಾಪಾಪಿ ಅಡಾಲ್ಫ್ ಹಿಟ್ಲರ್್ಗೂ ಕೆಲವೊಮ್ಮೆ ಥ್ಯಾಂಕ್ಸ್ ಹೇಳಬೇಕೆನಿಸಿಬಿಡುತ್ತದೆ, ಏಕೆ ಗೊತ್ತಾ?!</p>
<p>ಒಂದೆಡೆ ಬ್ರಿಟನ್್ನಲ್ಲಿ ಸಂಶೋಧನೆ ಮಾಡಿಕೊಂಡಿದ್ದ ಭಾಭಾ ಒಂದಿಷ್ಟು ದಿನಗಳಿಗಾಗಿ ರಜೆ ಕಳೆಯಲು 1939ರಲ್ಲಿ ಭಾರತಕ್ಕೆ ಬಂದಿದ್ದರು. ಇನ್ನೊಂದೆಡೆ ಭೌತಶಾಸ್ತ್ರದಲ್ಲಿಯೇ ಪದವಿ ಪೂರೈಸಿ, ಕ್ಲೌಡ್ ಚೇಂಬರ್ ಸಂಶೋಧಕ ಸಿ.ಟಿ.ಆರ್. ವಿಲ್ಸನ್ ಕೈಕೆಳಗೆ ಕ್ಯಾವೆಂಡಿಶ್ ಪ್ರಯೋಗಾಲಯದಲ್ಲಿಯೇ ಸಂಶೋಧನೆ ನಡೆಸಲು ತಯಾರಿ ಮಾಡಿಕೊಂಡಿದ್ದ ಪ್ರಶಾಂತ್್ಚಂದ್ರ ಮಹಲನೋಬಿಸ್ ಕೂಡ ರಜೆ ಕಳೆಯಲು ಅದೇ ಸಮಯಕ್ಕೆ ಭಾರತಕ್ಕೆ ಆಗಮಿಸಿದ್ದರು. ಎರಡನೇ ಮಹಾಯುದ್ಧ ಆರಂಭವಾಯಿತು! ಬ್ರಿಟನ್್ನಲ್ಲಿದ್ದ ವಿಜ್ಞಾನಿಗಳೂ ಕೂಡ ಯುದ್ಧ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಕೇಂಬ್ರಿಡ್ಜ್್ನಲ್ಲಿ ಸಂಶೋಧನೆಯನ್ನು ಮುಂದುವರಿಸಬೇಕೆಂದುಕೊಂಡಿದ್ದ ಭಾಭಾ ತಮ್ಮ ಉದ್ದೇಶವನ್ನೇ ಕೈಬಿಡಬೇಕಾಗಿ ಬಂತು. ಅಂದು ಹಿಟ್ಲರ್ ಆರಂಭಿಸಿದ ಯುದ್ಧ ತಂದಿಟ್ಟ ಅನಿವಾರ್ಯತೆಯಿಂದಾಗಿ ಭಾಭಾ ಹಾಗೂ ಮಹಲನೋಬಿಸ್ ಭಾರತದಲ್ಲೇ ಉಳಿದುಕೊಳ್ಳುವ ನಿರ್ಧಾರ ಕೈಗೊಂಡರು. ಅದರಿಂದ ನಮ್ಮ ದೇಶದ ಭವಿಷ್ಯವೇ ಬದಲಾಗುವಂತಾಯಿತು. 1940ರಲ್ಲಿ ಹೋಮಿ ಭಾಭಾ ಅವರ ಸಲುವಾಗಿಯೇ ಬೆಂಗಳೂರಿನಲ್ಲಿರುವ ಇಂಡಿಯನ್ ಇನ್್ಸ್ಟಿಟ್ಯೂಟ್ ಆಫ್ ಸೈನ್ಸ್ (ಭಾರತೀಯ ವಿಜ್ಞಾನ ಮಂದಿರ-ಐಐಎಸ್್ಸಿ)ನಲ್ಲಿ ಥಿಯೋರಿಟಿಕಲ್ ಸೈನ್ಸ್ ಎಂಬ ವಿಭಾಗ ತೆರೆದು, ರೀಡರ್ ಹುದ್ದೆಯನ್ನು ಸೃಷ್ಟಿಸಿಕೊಟ್ಟರು. ಆಗ ಭಾರತೀಯ ವಿಜ್ಞಾನ ಮಂದಿರದ ನಿರ್ದೇಶಕರಾಗಿದ್ದವರು ಮತ್ತಾರೂ ಅಲ್ಲ ಸಿ.ವಿ. ರಾಮನ್! ಭಾರತೀಯ ಬಾಹ್ಯಾಕಾಶ ವಿಜ್ಞಾನದ ಪಿತಾಮಹರೆನಿಸಿಕೊಂಡ ವಿಕ್ರಂ ಸಾರಾಭಾಯಿ ಕೂಡ ಅಲ್ಲೇ ಅಧ್ಯಯನ ನಡೆಸುತ್ತಿದ್ದರು. ಅತಿರಥಮಹಾರಥ ವಿಜ್ಞಾನಿಗಳ ಆಗಮನದಿಂದಾಗಿ ಐಐಎಸ್್ಸಿ ರಂಗೇರಿತು. ಭಾಭಾ ಮಾರ್ಗದರ್ಶನದಲ್ಲಿ ಕಾಸ್ಮಿಕ್ ರೇ(ವಿಶ್ವಕಿರಣ) ಸಂಶೋಧನೆ ಆರಂಭವಾಯಿತು. ಐಐಎಸ್್ಸಿಯಲ್ಲಿ ಕೆಲವು ವರ್ಷಗಳನ್ನು ಕಳೆದ ಭಾಭಾ, ಯುದ್ಧದ ನಂತರ ಇಂಗ್ಲೆಂಡ್್ಗೆ ತೆರಳುವ ಆಲೋಚನೆಯನ್ನೇ ಕೈಬಿಟ್ಟರು. ನಾವು, ನಮ್ಮ ದೇಶ ಎಂಬ ಭಾವನೆ ಅವರೊಳಗೆ ಆಳವಾಗಿ ಬೇರೂರಲು ಆರಂಭವಾಯಿತು. ತಾಯ್ನಾಡಿನ ಶ್ರೇಯೋಭಿವೃದ್ಧಿ ಮಾಡಬೇಕಾದ ಜವಾಬ್ದಾರಿಯ ಅರಿವಾಗತೊಡಗಿತು. ಭಾರತದ ಬಡತನ ಹಾಗೂ ಪ್ರಗತಿಗೆ ವಿಜ್ಞಾನವೇ ಮದ್ದು ಎನಿಸತೊಡಗಿತು.</p>
<p>1944, ಮಾರ್ಚ್ 12ರಂದು ಭಾಭಾ ಮತ್ತೆ ಪತ್ರ ಬರೆದರು. ಆದರೆ ಈ ಬಾರಿ ಅಪ್ಪನ ಬದಲು ಅಂಕಲ್ ಸರ್ ದೊರಾಬ್ಜಿ ಜೆ. ಟಾಟಾ ಟ್ರಸ್ಟ್್ಗೆ ಪತ್ರ ಬರೆದಿದ್ದರು. ಅಂದು ವೈಯಕ್ತಿಕ ಇಚ್ಛೆಯನ್ನು ಹೊತ್ತ ಪತ್ರ ಕಳುಹಿಸಿದ್ದ ಭಾಭಾ, ಈ ಬಾರಿ ಬರೆದ ಪತ್ರದಲ್ಲಿ ದೇಶದ ಉಜ್ವಲ ಭವಿಷ್ಯದ ಬಗೆಗಿನ ಕನಸುಗಳೇ ತುಂಬಿದ್ದವು- &#8220;ಈ ಕ್ಷಣದಲ್ಲಿ ಭೌತಶಾಸ್ತ್ರದ ಮೂಲ ಸಮಸ್ಯೆಗಳ ಬಗ್ಗೆ ಸಂಶೋಧನೆ ನಡೆಸುವಂತಹ ಪ್ರಯೋಗಾಲಯಗಳೇ ನಮ್ಮ ದೇಶದಲ್ಲಿಲ್ಲ. ನಮ್ಮಲ್ಲಿ ಸಣ್ಣ ಪುಟ್ಟ ಸಂಶೋಧನೆಗಳು ನಡೆಯುತ್ತಿದ್ದರೂ ಅವು ದೇಶಾದ್ಯಂತ ಹಂಚಿಹೋಗಿವೆ. ಆದರೆ ಎಲ್ಲ ವಿಜ್ಞಾನಿಗಳನ್ನೂ ಒಂದೇ ಸೂರಿನಡಿ ತಂದು ಸಂಶೋಧನೆ ನಡೆಸಬೇಕಾದ ಅಗತ್ಯವಿದೆ. ಇನ್ನು ಒಂದೆರಡು ದಶಕಗಳಲ್ಲಿ ಅಣುಶಕ್ತಿಯನ್ನು ವಿದ್ಯುತ್ ಉತ್ಪಾದನೆಗೆ ವಿನಿಯೋಗಿಸುವಂತಹ ತಂತ್ರಜ್ಞಾನವನ್ನು ರೂಪಿಸುವಲ್ಲಿ ಜಗತ್ತಿನ ವಿಜ್ಞಾನಿಗಳು ಯಶಸ್ವಿಯಾಗಬಹುದು. ಒಂದು ವೇಳೆ, ನಾವು ಉನ್ನತ ಸಂಶೋಧನಾ ಸಂಸ್ಥೆಯೊಂದನ್ನು ತೆರೆದು, ಇಂದಿನಿಂದಲೇ ಕಾರ್ಯಪ್ರವೃತ್ತರಾದರೆ ಮುಂದೆ ಭಾರತ ಪರಿಣತರಿಗಾಗಿ ವಿದೇಶಗಳತ್ತ ಮುಖ ಮಾಡಬೇಕಾದ ಅಗತ್ಯ ಎದುರಾಗುವುದಿಲ್ಲ. ಇತರ ದೇಶಗಳಲ್ಲಿ ಕಂಡುಬರುತ್ತಿರುವ ವೈಜ್ಞಾನಿಕ ಅಭಿವೃದ್ಧಿಯ ಬಗ್ಗೆ ಅರಿವಿರುವ ಯಾರೂ ನಾನು ಪ್ರಸ್ತಾಪಿಸುತ್ತಿರುವ ಸಂಶೋಧನಾ ಸಂಸ್ಥೆಯ ಅಗತ್ಯ ಭಾರತಕ್ಕಿದೆ ಎಂಬುದನ್ನು ತಳ್ಳಿಹಾಕಲು ಸಾಧ್ಯವಿಲ್ಲ&#8221;.</p>
<p>1942ರಲ್ಲಿ ಅಮೆರಿಕ ವಿಶ್ವದ ಮೊದಲ ಅಣುಪರೀಕ್ಷೆಯನ್ನು ನಡೆಸಿತ್ತು. ಹಿರೋಷಿಮಾ ಮತ್ತು ನಾಗಸಾಕಿ ಮೇಲೆ ಅಣು ಬಾಂಬ್್ಗಳಿನ್ನೂ ಬಿದ್ದಿರಲಿಲ್ಲ. ಇತ್ತ ಭಾರತಕ್ಕಂತೂ ಸ್ವಾತಂತ್ರ್ಯವೇ ಬಂದಿರಲಿಲ್ಲ. ಅಂತಹ ಸಂದರ್ಭದಲ್ಲೂ ಭಾಭಾ ನಮ್ಮ ದೇಶದ ಭವಿಷ್ಯದ ವೈಜ್ಞಾನಿಕ ಪ್ರಗತಿ ಬಗ್ಗೆ ಯೋಚಿಸುತ್ತಿದ್ದರು. ಈ ದೇಶ ಕಟ್ಟಿದ ಟಾಟಾ ಕಂಪನಿ, ಭಾಭಾ ಅವರ ಆಸೆಗೆ ಕಲ್ಲು ಹಾಕಲಿಲ್ಲ. 1945ರಲ್ಲಿ ಬಾಂಬೆಯಲ್ಲಿ (ಟ್ರಾಂಬೆ) ಟಾಟಾ ಇನ್್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಸ್ಥಾಪನೆಯಾಯಿತು. ಅದರ ಅಧ್ಯಕ್ಷರಾಗಿ ನೇಮಕಗೊಂಡ ಹೋಮಿ ಭಾಭಾ, &#8216;&#8221;Return to Trombay return to the motherland&#8217;ಎಂದು ಕರೆಕೊಟ್ಟರು. ತಾಯ್ನಾಡಿಗೆ ಮರಳಿ ಅಥವಾ ತಾಯ್ನಾಡಲ್ಲೇ ಉಳಿದುಕೊಂಡು, ಯುರೇನಿಯಂ ಸಂಸ್ಕರಣೆ ನಡೆಸುತ್ತಿರುವ ಇತರ ದೇಶಗಳಲ್ಲಿರುವ ಸಂಶೋಧನಾ ಸಂಸ್ಥೆಗಳಿಗೆ ಸಮನಾದ ಸಂಸ್ಥೆಗಳನ್ನು ನಿರ್ಮಾಣ ಮಾಡಬೇಕಾದುದು ನಮ್ಮೆಲ್ಲರ ಕರ್ತವ್ಯ ಎಂಬ ಅವರ ಕರೆಗೆ ಓಗೊಟ್ಟು ದೇಶ, ವಿದೇಶಗಳಿಂದೆಲ್ಲ ಯುವ ಭಾರತೀಯ ವಿಜ್ಞಾನಿಗಳು ಆಗಮಿಸಿದರು. ಪಿ.ಕೆ. ಅಯ್ಯಂಗಾರ್, ಬಿ.ವಿ. ಶ್ರೀಕಂಠನ್ ಮುಂತಾದ ಖ್ಯಾತ ವಿಜ್ಞಾನಿಗಳಿಗೆ ಭಾಭಾ ಕರೆಯೇ ಪ್ರೇರಣೆಯಾಗಿತ್ತು. ಭಾಭಾ ಸ್ವತಃ ವಿಜ್ಞಾನಿಗಳ ಯೋಗಕ್ಷೇವುದ ವ್ಯವಸ್ಥೆ ಮಾಡಿಸಿದರು. 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದ ಕೂಡಲೇ ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಇಲಾಖೆ(DSIR) ಸ್ಥಾಪನೆ ಮಾಡಬೇಕೆಂದು ಪ್ರಧಾನಿ ನೆಹರು ಮುಂದೆ ಪ್ರಸ್ತಾಪವನ್ನಿಟ್ಟರು, ಭಾರತೀಯ ಅಣುಶಕ್ತಿ ಕಾಯಿದೆಯನ್ನು ಜಾರಿಗೆ ತರಬೇಕೆಂದು ಸಲಹೆ ನೀಡಿದರು. ಎಲ್ಲವೂ ಅವರು ಹೇಳಿದಂತೆಯೇ ಆಯಿತು. 1947ರಲ್ಲಿ ಕಾಯಿದೆ ಬಂತು, 1948ರಲ್ಲಿ ಅಣುಶಕ್ತಿ ಆಯೋಗ ರಚನೆಯಾಯಿತು.</p>
<p>ಇವೇನು ಸಾಮಾನ್ಯ ಸಾಧನೆಗಳಲ್ಲ.</p>
<p>ಅವತ್ತು ಭಾರತ ವಿಶ್ವಸಂಸ್ಥೆಯಿಂದ ಗೋಧಿ ಪಡೆದು ಊಟ ಮಾಡುತ್ತಿತ್ತು. ಅಂತಹ ಸಂದರ್ಭದಲ್ಲಿ ಶೀಘ್ರ ಫಲಿತಾಂಶವನ್ನೇ ನೀಡದ ಅಣುವಿಜ್ಞಾನದಂತಹ ತಂತ್ರಜ್ಞಾನ ಅಭಿವೃದ್ಧಿ ಬಗ್ಗೆ ಭಾಭಾ ಅವರು ಸಂಸತ್ತಿನ ಮನವೊಲಿಸಿದ್ದು ಅದೆಂತಹ ಸಾಧನೆ ಇರಬಹುದೆಂಬುದನ್ನು ಊಹಿಸಿಕೊಳ್ಳಿ? ಅದರಲ್ಲೂ ಅನ್ನ, ಬಟ್ಟೆ, ವಸತಿ, ಶಿಕ್ಷಣವೇ ಪರಮ ಧ್ಯೇಯವೆಂದುಕೊಂಡಿದ್ದ ಸೋಷಿಯಲಿಸ್ಟ್ ಸರಕಾರದ ಮನವೊಲಿಸುವುದು ಸಾಮಾನ್ಯ ಮಾತೇ? ಎಲ್ಲರನ್ನೂ ಎಸ್ಸೆಸ್ಸೆಲ್ಸಿವರೆಗೂ ಓದಿಸಿ ಅಕ್ಷರಸ್ಥರನ್ನಾಗಿ ಮಾಡುತ್ತೇವೆ ಎಂದಂದುಕೊಂಡಿದ್ದರೆ ಭಾರತ ಲೇಬರ್ ಫ್ಯಾಕ್ಟರಿ ಆಗುತ್ತಿತ್ತು. ಆದರೆ ಭಾಭಾ ಅವರು, ತಾಂತ್ರಿಕ ಹಾಗೂ ವೈಜ್ಞಾನಿಕ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳ ಅಗತ್ಯವನ್ನು ಮನಗಂಡು, ಟಾಟಾ ಕಂಪನಿಯ ಸಹಾಯ ಪಡೆದು ಅವುಗಳನ್ನು ಸ್ಥಾಪನೆ ಮಾಡಿದರು, ಸರ್ಕಾರದ ಮನವೊಲಿಸುವ ಮೂಲಕ ಅಂತಹ ಹೆಚ್ಚಿನ ಸಂಸ್ಥೆಗಳು ಹೊರಹೊಮ್ಮಲು ಕಾರಣರಾದರು. ಅದರ ಫಲವನ್ನು ನಾವಿಂದು ಅನುಭವಿಸುತ್ತಿದ್ದೇವೆ, 1974ರಲ್ಲಿ ನಡೆಸಿದ ಅಣುಪರೀಕ್ಷೆಯ ಹಿಂದಿರುವ ದೂರದೃಷ್ಟಿ, ಪರಿಶ್ರಮವೂ ಭಾಭಾ ಅವರದ್ದೇ. ಅವರೇ ನಮ್ಮ ದೇಶದ ಅಣುವಿಜ್ಞಾನದ ಪಿತಾಮಹ. ನಮ್ಮ ದೇಶವನ್ನು ಸುರಕ್ಷಿತವಾಗಿಟ್ಟಿರುವ ಅಣುಬಾಂಬ್ ಭಾಭಾ ಪರಿಶ್ರಮದ ಫಲಶ್ರುತಿ. 1955ರಲ್ಲಿ ಜಿನೀವಾದಲ್ಲಿ ನಡೆದ ಅಣುಶಕ್ತಿಯ ಶಾಂತಿಯುತ ಬಳಕೆ ಮೇಲಿನ ವಿಶ್ವಶೃಂಗದ ಅಧ್ಯಕ್ಷರಾಗಿದ್ದ ಹೋಮಿ ಭಾಭಾ, ಭಾರತದಲ್ಲೊಂದು ರಿಯಾಕ್ಟರ್ ನಿರ್ಮಿಸಿಕೊಡುವಂತೆ ಕೆನಡಾಕ್ಕೆ ಮನವಿ ಮಾಡಿಕೊಂಡಿದ್ದರು. ಸ್ಥಳದಲ್ಲಿಯೇ ಕೆನಡಾ ಒಪ್ಪಿಕೊಂಡ ಕಾರಣ, ಕೂಡಲೇ ನೆಹರು ಅವರಿಗೆ ಟೆಲಿಗ್ರಾಂ ಮಾಡಿದ ಭಾಭಾ ಮೂರೇ ದಿನಗಳಲ್ಲಿ ಪ್ರಧಾನಿಯವರ ಒಪ್ಪಿಗೆ ಪಡೆದುಕೊಂಡಿದ್ದರು. ಅವರ ಮಾತಿಗೆ ಅಂತಹ ಬೆಲೆಯಿತ್ತು. ಅದರ ಫಲವೇ ಭಾರತದ ಮೊಟ್ಟಮೊದಲ ಅಣುರಿಯಾಕ್ಟರ್ &#8216;ಅಪ್ಸರಾ&#8217; ನಿರ್ಮಾಣ.</p>
<p>1974, ಮೇ 18ರಂದು ಮೊದಲ ಅಣು ಪರೀಕ್ಷೆ ನಡೆಸಿದ ಭಾರತ ಅಣ್ವಸ್ತ್ರ ಹೊಂದಿರುವ ಐದು ರಾಷ್ಟ್ರಗಳ ಪ್ರತಿಷ್ಠಿತ ಸಾಲಿಗೆ ಸೇರಿಕೊಂಡಿತು. ಆದರೆ ವೈಜ್ಞಾನಿಕ ಕ್ಷೇತ್ರದಲ್ಲಿ ಅಮೋಘ ವೈಯಕ್ತಿಕ ಸಾಧನೆಯ ಅವಕಾಶವನ್ನು ಬದಿಗಿಟ್ಟು 1939ರಿಂದ 65ರವರೆಗೂ ಭಾರತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿಯ ಪರ್ವವನ್ನು ಸೃಷ್ಟಿಸಿದ ಅಣುಶಕ್ತಿಯ ಜನಕ ಭಾಭಾ ಮಾತ್ರ ತಮ್ಮ ಕನಸು ಸಾಕಾರಗೊಳ್ಳುತ್ತಿರುವುದನ್ನು ನೋಡಲು ಇರಲಿಲ್ಲ. ಅಂತಾರಾಷ್ಟ್ರೀಯ ಅಣುಶಕ್ತಿ ಏಜೆನ್ಸಿಯ ಸಭೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಭಾಭಾ 1966, ಜನವರಿ 24ರಂದು ಸ್ವಿಜರ್್ಲೆಂಡ್್ನ ಮೌಂಟ್ ಬ್ಲಾಂಕ್ ಎಂಬಲ್ಲಿ ನಡೆದ ವಿಮಾನ ದುರ್ಘಟನೆಯಲ್ಲಿ ತೀರಿಕೊಂಡಿದ್ದರು. You can give a new direction to everything in life, except death ಿ ಎನ್ನುತ್ತಿದ್ದ ಭಾಭಾ ಅವರನ್ನು ಐವತ್ತಾರು ವರ್ಷಕ್ಕೇ ಸಾವು ಕಿತ್ತುಕೊಂಡಿತು.</p>
<p>1954ರಲ್ಲಿ ಆರಂಭವಾದ ಭಾರತರತ್ನ ಪುರಸ್ಕಾರವನ್ನು ಕಲೆ, ಸಾಹಿತ್ಯ, ವಿಜ್ಞಾನ ಹಾಗೂ ಸಾರ್ವಜನಿಕ ಸೇವೆ ಈ ನಾಲ್ಕು ಕ್ಷೇತ್ರಗಳಲ್ಲಿನ ಸಾಧಕರಿಗೆ ಮಾತ್ರ ನೀಡಲಾಗುತ್ತಿತ್ತು. ಆದರೆ ಈ ನಿಯಮಕ್ಕೆ ಈಗ್ಗೆ ಕೆಲ ದಿನಗಳ ಹಿಂದಷ್ಟೇ ತಿದ್ದುಪಡಿ ತಂದಿರುವ ಸರ್ಕಾರ ಇತರ ಕ್ಷೇತ್ರಗಳ ಸಾಧಕರಿಗೂ, ಅದರಲ್ಲೂ ಸಚಿನ್ ತೆಂಡೂಲ್ಕರ್್ಗೆ ಭಾರತರತ್ನ ನೀಡಲು ತಯಾರಿ ನಡೆಸುತ್ತಿದೆ. ಖಂಡಿತ ಸಚಿನ್್ಗೆ ಆ ಅರ್ಹತೆ ಇದೆ. ಹಾಗಂತ ಭಾರತ ಒಂದು ಅಣ್ವಸ್ತ್ರ ರಾಷ್ಟ್ರವಾಗಲು ಮೂಲಕಾರಣಕರ್ತರಾಗಿರುವ ಹೋಮಿ ಜಹಾಂಗೀರ್ ಭಾಭಾ ಅವರ ಕೊಡುಗೆಯನ್ನು ಮರೆಯಲು ಸಾಧ್ಯವೇ? ಅವರಿಗೆ ಭಾರತರತ್ನ ಕೊಡಲು ಈ ಸರ್ಕಾರವೇಕೆ ಮೀನ-ಮೇಷ ಎಣಿಸುತ್ತಿದೆ?</p>
]]></content:encoded>
			<wfw:commentRss>http://pratapsimha.com/2011/12/24/homi/feed/</wfw:commentRss>
		<slash:comments>27</slash:comments>
		</item>
		<item>
		<title>ಎಂಥಾ ನಿರ್ವೀರ್ಯರ ಕೈಲಿ ವೀರ, ಪರಮವೀರಚಕ್ರ ಪಡೆಯಬೇಕಾಗಿದೆ ನೋಡಿ?!</title>
		<link>http://pratapsimha.com/2011/12/18/afzal/</link>
		<comments>http://pratapsimha.com/2011/12/18/afzal/#comments</comments>
		<pubDate>Sun, 18 Dec 2011 11:51:28 +0000</pubDate>
		<dc:creator>Pratap Simha</dc:creator>
				<category><![CDATA[Bettale-Jagattu]]></category>

		<guid isPermaLink="false">http://pratapsimha.com/?p=1216</guid>
		<description><![CDATA[ಈ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ನಿಜಕ್ಕೂ ನಾಚಿಕೆಯೇನಾದರೂ ಇದೆಯೇ? ಇನ್ನೆಷ್ಟು ವರ್ಷ ಇದೇ ರೀತಿ ಸುಳ್ಳು ಹೇಳಿಕೊಂಡು, ಜನರನ್ನು ದಾರಿ ತಪ್ಪಿಸಿಕೊಂಡು ದೇಶವಾಳುತ್ತಾರೆ? ಹೇಗೆ ಬೇಕಾದರೂ ಹೊರಳುವ ಇವರ ನಾಲಗೆಯನ್ನು ನೆಚ್ಚಿಕೊಂಡು ಎಷ್ಟು ದಿನ ಅಂತ ಜನರೂ ಕುಳಿತುಕೊಳ್ಳಬೇಕು? ಮೊನ್ನೆ ಡಿಸೆಂಬರ್ 13ರಂದು ಸಂಸತ್ ಭವನದ ಮೇಲೆ ನಡೆದ ದಾಳಿಗೆ 10 ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ ನಡೆದ ಹುತಾತ್ಮರ ಸ್ಮರಣೆ ಸಮಾರಂಭದಲ್ಲಿ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ಆಡಿರುವ ಮಾತುಗಳಾದರೂ ಎಂಥವು?&#8221;ಅಫ್ಜಲ್ ಗುರುವಿನದ್ದೂ ಸೇರಿದಂತೆ 20 [...]]]></description>
			<content:encoded><![CDATA[<p><a href="http://pratapsimha.com/wp-content/uploads/2011/12/afzal.jpg"><img src="http://pratapsimha.com/wp-content/uploads/2011/12/afzal.jpg" alt="" title="afzal" width="239" height="207" class="aligncenter size-full wp-image-1217" /></a><br />
ಈ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ನಿಜಕ್ಕೂ ನಾಚಿಕೆಯೇನಾದರೂ ಇದೆಯೇ? ಇನ್ನೆಷ್ಟು ವರ್ಷ ಇದೇ ರೀತಿ ಸುಳ್ಳು ಹೇಳಿಕೊಂಡು, ಜನರನ್ನು ದಾರಿ ತಪ್ಪಿಸಿಕೊಂಡು ದೇಶವಾಳುತ್ತಾರೆ? ಹೇಗೆ ಬೇಕಾದರೂ ಹೊರಳುವ ಇವರ ನಾಲಗೆಯನ್ನು ನೆಚ್ಚಿಕೊಂಡು ಎಷ್ಟು ದಿನ ಅಂತ ಜನರೂ ಕುಳಿತುಕೊಳ್ಳಬೇಕು? ಮೊನ್ನೆ ಡಿಸೆಂಬರ್ 13ರಂದು ಸಂಸತ್ ಭವನದ ಮೇಲೆ ನಡೆದ ದಾಳಿಗೆ 10 ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ ನಡೆದ ಹುತಾತ್ಮರ ಸ್ಮರಣೆ ಸಮಾರಂಭದಲ್ಲಿ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ಆಡಿರುವ ಮಾತುಗಳಾದರೂ ಎಂಥವು?&#8221;ಅಫ್ಜಲ್ ಗುರುವಿನದ್ದೂ ಸೇರಿದಂತೆ 20 ಕ್ಷಮಾದಾನ ಅರ್ಜಿಗಳು ರಾಷ್ಟ್ರಪತಿ ಮುಂದಿವೆ. ಅವರಿಗೆ ನಾವು ಗಡುವನ್ನು ಹಾಕಲು ಸಾಧ್ಯವಿಲ್ಲ. ಅಲ್ಲದೆ ಸಂವಿಧಾನದ 72ನೇ ವಿಧಿ ಕಾಲಮಿತಿಯನ್ನು ಹಾಕಿಲ್ಲ&#8217; ಎಂದು ಗೃಹ ಖಾತೆ ರಾಜ್ಯ ಸಚಿವ ಮುಲ್ಲಪಲ್ಲಿ ರಾಮಚಂದ್ರನ್ ಹೇಳಿದ್ದಾರೆ. ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಅವರದ್ದೂ ಇದೇ ವರಾತ. ಇವರುಗಳ ಮಾತಿನ ಅರ್ಥವೇನು? ಅಫ್ಜಲ್ ಗುರುವೇನು ಸಾಮಾನ್ಯ ಕ್ರಿಮಿನಲ್ಲಾ? ಅವನು ಎಸಗಿದ್ದೇನು ಕಡಿಮೆ ದ್ರೋಹವೇ? ಆತನಿಗೂ ಹಾಗೂ ಇತರ ಅಪರಾಧಗಳನ್ನೆಸಗಿ ಕ್ಷಮಾದಾನಕ್ಕೆ ಅರ್ಜಿ ಹಾಕಿದವರಿಗೂ ವ್ಯತ್ಯಾಸವಿಲ್ಲವೆ? ಅದಿರಲಿ, ಒಂದು ಕ್ಷಮಾದಾನ ಅರ್ಜಿಯನ್ನು ಪರಾಮರ್ಶಿಸಿ ನಿರ್ಧಾರ ತೆಗೆದುಕೊಳ್ಳಲು ಎಷ್ಟು ಸಮಯ ಬೇಕು? ರಾಷ್ಟ್ರಪತಿ ಯಾರನ್ನು ಬೇಕಾದರೂ ಸಮನ್ ಮಾಡಿ ಕಾನೂನು ಸಲಹೆ ಪಡೆದುಕೊಳ್ಳಬಹುದು, ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಯನ್ನೇ ಕರೆದು ಸಲಹೆ ಕೇಳಬಹುದಾದ ವಿಶೇಷಾಧಿಕಾರ ಹೊಂದಿದ್ದಾರೆ. ಇಷ್ಟಾಗಿಯೂ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಏಕೆ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ? ಇಷ್ಟಕ್ಕೂ ರಾಷ್ಟ್ರಪತಿ ಭವನದೊಳಗೆ ಕುಳಿತು ಪ್ರತಿಭಾ ಪಾಟೀಲ್ ಮಾಡುತ್ತಿರುವ ಘನ ಕಾರ್ಯವಾದರೂ ಏನು? ಅಂತಹ ಕಾರ್ಯದೊತ್ತಡವಾದರೂ ಏನಿದೆ? ಅಫ್ಜಲ್ ಗುರುವಿನ ಅರ್ಜಿಯನ್ನು ಪರಾಮರ್ಶಿಸಲೂ ಸಮಯವಿಲ್ಲದ ಯಾವ ಮಹತ್ಕಾರ್ಯದಲ್ಲಿ ಅವರು ತೊಡಗಿದ್ದಾರೆ? 2006ರಿಂದಲೂ ಕೊಳೆಯುತ್ತಾ ಕುಳಿತಿರುವ ಕ್ಷಮಾದಾನ ಮನವಿಯನ್ನು ತಿರಸ್ಕರಿಸಲು ಇನ್ನೆಷ್ಟು ವರ್ಷಗಳು ಬೇಕು? ಕಾಂಗ್ರೆಸ್ಸೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯ ಸರ್ಕಾರಗಳನ್ನು ಕಿತ್ತೊಗೆಯುವಂತೆ ಕೋರಿದಾಗ ಸಂವಿಧಾನದ 356ನೇ ವಿಧಿಯಂತೆ ರಾಷ್ಟ್ರಪತಿ ಆಡಳಿತ ಹೇರುವಾಗ ತೋರುವ ಆತುರ ದೇಶದ್ರೋಹಿಯನ್ನು ಗಲ್ಲಿಗೆ ಹಾಕುವಾಗ ಏಕೆ ಕಾಣುವುದಿಲ್ಲ? ಇಂತಿಷ್ಟೇ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕೆಂದು ಯಾವ ಗಡುವೂ ಇಲ್ಲ ಎನ್ನುವುದಾದರೆ ವಿಳಂಬಕ್ಕೆ ಹೆಸರಾದ ನಮ್ಮ ನ್ಯಾಯಾಲಯಗಳೂ ಇದೇ ಧೋರಣೆ ತೋರಬಹುದಿತ್ತಲ್ಲವೆ?</p>
<p>ಇಷ್ಟಾಗಿಯೂ ನಮ್ಮ ನ್ಯಾಯಾಲಯಗಳು ಯಾವ ರೀತಿ ನಡೆದುಕೊಂಡವು?</p>
<p>ನಮ್ಮ ಸಂಸತ್ತಿನ ಮೇಲೆ ದಾಳಿ ನಡೆದಿದ್ದು 2001, ಡಿಸೆಂಬರ್ 13ರಂದು. 2002, ಅಕ್ಟೋಬರ್ 26ರಂದು ರಾಷ್ಟ್ರಪತಿ ಅಬ್ದುಲ್ ಕಲಾಂ ಸಂಸತ್ ದಾಳಿಯಲ್ಲಿ ಮಡಿದ ಐವರು ಸೈನಿಕರಿಗೆ ಕೀರ್ತಿ ಚಕ್ರ ಹಾಗೂ ಇಬ್ಬರಿಗೆ ಅಶೋಕ ಚಕ್ರ ನೀಡಿ ಗೌರವಿಸಿದರು. ಅದೇ ವರ್ಷ ದಿಲ್ಲಿಯ ನ್ಯಾಯಾಲಯ ಮುಖ್ಯ ಪಿತೂರಿದಾರ ಹಾಗೂ ಕಾಶ್ಮೀರಿ ಭಯೋತ್ಪಾದಕ ಅಫ್ಜಲ್ ಗುರುವಿಗೆ ಗಲ್ಲು ಶಿಕ್ಷೆ ವಿಧಿಸಿತು. ಅದರ ವಿರುದ್ಧ ಸಲ್ಲಿಸಿದ ಮೇಲ್ಮನವಿಯನ್ನು 2003ರಲ್ಲಿ ದಿಲ್ಲಿ ಹೈಕೋರ್ಟ್ ತಿರಸ್ಕರಿಸಿ ಗಲ್ಲು ಶಿಕ್ಷೆಯನ್ನು ಎತ್ತಿ ಹಿಡಿಯಿತು. ಆನಂತರ ಸುಪ್ರೀಂ ಕೋರ್ಟ್ ಮೊರೆಹೋಗಲಾಯಿತು. ಆದರೆ 2004ರಲ್ಲಿ ಅಫ್ಜಲ್್ನ ಮೇಲ್ಮನವಿಯನ್ನು ತಿರಸ್ಕಾರ ಮಾಡಿದ ಸುಪ್ರೀಂಕೋರ್ಟ್ ಆತನನ್ನು ಗಲ್ಲಿಗೇರಿಸುವ ದಿನಾಂಕವನ್ನು 2006, ಅಕ್ಟೋಬರ್ 20 ಎಂದು ನಿಗದಿ ಮಾಡಿತು. ತನ್ನ ತೀರ್ಪನ್ನು ಮರುಪಶೀಲಿಸುವಂತೆ, ಕ್ಷಮಾದಾನ ಕೊಡುವಂತೆ ಸಲ್ಲಿಸಿದ ಅರ್ಜಿಯನ್ನೂ ತಿರಸ್ಕಾರ ಮಾಡಿತು. ಪ್ರತಿಸಾರಿಯೂ ನಾವು ನ್ಯಾಯಾಲಯಗಳನ್ನು ದೂರುತ್ತೇವೆ. ಆದರೆ ಅಫ್ಜಲ್ ಗುರುವಿನ ವಿಚಾರದಲ್ಲಿ ನಮ್ಮ ನ್ಯಾಯಾಲಯಗಳು ತೋರಿದ ಸಂವೇದನೆ ಆಳುವ ಪ್ರಭುಗಳಲ್ಲಿ ಏಕೆ ಕಾಣುತ್ತಿಲ್ಲ? ಅಫ್ಜಲ್ ಹಾಗೂ ಕಸಬ್ ವಿಚಾರಗಳಲ್ಲಿ ಜನರ ಭಾವನೆಗಳನ್ನು ಅರ್ಥಮಾಡಿಕೊಂಡ ನ್ಯಾಯಾಲಯಗಳು ತ್ವರಿತವಾಗಿ ಪರಾಮರ್ಶಿಸಿ ತೀರ್ಪು ಕೊಟ್ಟರೂ ಸರ್ಕಾರವೇಕೆ ನಿದ್ರಿಸುತ್ತಿದೆ? ಇಂತಹ ದೂರ್ತ ಉದ್ದೇಶವನ್ನರಿತ ಹುತಾತ್ಮರ ಕುಟುಂಬವರ್ಗದವರು,&#8221;2006, ಡಿಸೆಂಬರ್ 13ರೊಳಗೆ ಅಫ್ಜಲ್್ನನ್ನು ಗಲ್ಲಿಗೇರಿಸದಿದ್ದರೆ ಶೌರ್ಯ ಪದಕಗಳನ್ನು ಹಿಂದಿರುಗಿಸುತ್ತೇವೆ&#8217; ಎಂದು ಬೆದರಿಕೆ ಹಾಕಿದರು. ಅವರ ಬೆದರಿಕೆಗಾಗಲಿ, ನೋವಿಗಾಗಲಿ ಸರ್ಕಾರ ಸೊಪ್ಪುಹಾಕಲಿಲ್ಲ. ಸರ್ಕಾರಕ್ಕೆ ನಾಚಿಕೆಯಿಲ್ಲದಿದ್ದರೇನಂತೆ, ಹುತಾತ್ಮರ ಕುಟುಂಬದವರು 2006 ಡಿಸೆಂಬರ್ 13ರಂದು ರಾಷ್ಟ್ರಪತಿಯನ್ನು ಭೇಟಿಯಾಗಿ ಮಾತಿನಂತೆ ಪದಕಗಳನ್ನು ಹಿಂದಿರುಗಿಸಿದರು.&#8221;ಈ ಪದಕಗಳನ್ನು ರಾಷ್ಟ್ರೀಯ ಮ್ಯೂಸಿಯಂನಲ್ಲಿಡಿ, ಅಫ್ಜಲ್್ನನ್ನು ಗಲ್ಲಿಗೇರಿಸದ ಹೊರತು ಅವುಗಳಿಗೆ ಯಾವ ಬೆಲೆಯೂ ಇಲ್ಲ&#8217; ಎಂದು ನೋವಿನಿಂದ ಹೇಳಿದರು. ಆ ನೋವು ನಾಚಿಕೆಗೇಡಿ ಕಾಂಗ್ರೆಸ್್ಗೇಕೆ ಅರ್ಥವಾಗುವುದಿಲ್ಲ?</p>
<p>2009ರಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಪ್ರಧಾನಿ ಕನಸು ಹೊತ್ತ ರಾಹುಲ್ ಕೊಟ್ಟ ಹೇಳಿಕೆಯಾದರೂ ಎಂಥದ್ದು? ಪಂಜಾಬ್್ನ ಹೋಶಿಯಾರ್್ಪುರದಲ್ಲಿ ಸಾರ್ವಜನಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ,&#8221;ಅಫ್ಜಲ್ ಗುರುವನ್ನು ಆತನ ಸರದಿ ಬಂದಾಗ ಗಲ್ಲಿಗೇರಿಸಲಾಗುತ್ತದೆ. ಸರದಿಯಲ್ಲಿ ಆತನ ಹೆಸರು 24ನೆಯದ್ದು. ಅದನ್ನು ಮೀರಿ ಆತನನ್ನು ಕೂಡಲೇ ಗಲ್ಲಿಗೆ ಹಾಕಲು ಸಾಧ್ಯವಿಲ್ಲ&#8217; ಎಂದರು! ಅಂದರೇನು? 2004ರಲ್ಲಿ ಧನಂಜಯ್ ಚಟರ್ಜಿಯನ್ನು ಗಲ್ಲಿಗೆ ಹಾಕಿದ ನಂತರ ಇದುವರೆಗೂ ಯಾರನ್ನಾದರೂ ಗಲ್ಲಿಗೆ ಕಳುಹಿಸಿದ್ದಾರಾ? ಕಳೆದ 7 ವರ್ಷಗಳಲ್ಲಿ ಒಬ್ಬನೇ ಒಬ್ಬ ಕೈದಿಯನ್ನೂ ಗಲ್ಲಿಗೆ ಹಾಕಿಲ್ಲವೇಕೆ? ಹಾಗಿರುವಾಗ 24ನೇ ನಂಬರ್ ಬರುವುದು ಯಾವಾಗ? ಅಫ್ಜಲ್ ಗುರುವನ್ನು ಫಾಸಿಗೆ ಕಳುಹಿಸುವುದಾದರೂ ಎಂದು? ಅಲ್ಲಾ, ಸರದಿಯ ಆಧಾರದ ಮೇಲಷ್ಟೇ ಗಲ್ಲಿಗೇರಿಸಲು ಸಾಧ್ಯ ಎನ್ನುತ್ತಿದ್ದರಲ್ಲಾ ಇವರಿಗೆ 1978ರ ರಂಗ-ಬಿಲ್ಲ ಪ್ರಕರಣ ನೆನಪಿದೆಯೇ? ಗೀತಾ ಹಾಗೂ ಸಂಜಯ್ ಚೋಪ್ರಾ ಎಂಬ ಇಬ್ಬರು ಅಪ್ರಾಪ್ತ ಅಕ್ಕ-ತಮ್ಮನನ್ನು ಕಗ್ಗೊಲೆಗೈದ ರಂಗ-ಬಿಲ್ಲ ಎಂಬ ಕುಖ್ಯಾತ ಕ್ರಿಮಿನಲ್್ಗಳನ್ನು ಕೂಡಲೇ ಗಲ್ಲಿಗೆ ಹಾಕಬೇಕೆಂದು ರಾಜಧಾನಿ ದಿಲ್ಲಿಯ ವಿದ್ಯಾರ್ಥಿಗಳು ಬೀದಿಗಿಳಿದರು. ಸಾರ್ವಜನಿಕ ಒತ್ತಡಕ್ಕೆ ಬೆದರಿದ ಸರ್ಕಾರ ಸಾಕ್ಷ್ಯವನ್ನು ಕಲೆಹಾಕಿ ಶೀಘ್ರ ಶಿಕ್ಷೆ ನಿಗದಿಯಾಗುವಂತೆ ಮಾಡಿದ್ದಲ್ಲದೆ 1982ರಲ್ಲಿ ಗಲ್ಲು ಶಿಕ್ಷೆಯನ್ನು ಜಾರಿಗೊಳಿಸಿತು! ಅವತ್ತು ಸರದಿಯ ಮಾತೇಕೆ ಕೇಳಿಬಂದಿರಲಿಲ್ಲ? ಕೇವಲ 4 ವರ್ಷಗಳಲ್ಲಿ ತೀರ್ಪು ಹೊರಬಿದ್ದು ಶಿಕ್ಷೆ ಜಾರಿ ಮಾಡಬಹುದಾದರೆ ಅಫ್ಜಲ್್ನಂಥ ದೇಶದ್ರೋಹಿಯನ್ನು ಫಾಸಿಗೆ ಕಳುಹಿಸಲು ಸರ್ಕಾರಕ್ಕೇನು ದಾಡಿ? ಕಳೆದ 7 ವರ್ಷಗಳಿಂದ ಅವನನ್ನು ಪೋಷಣೆ ಮಾಡುತ್ತಿರುವುದಾದರೂ ಯಾವ ಉದ್ದೇಶ ಸಾಧನೆಗಾಗಿ?</p>
<p>ಇಷ್ಟಕ್ಕೂ ಅಫ್ಜಲ್್ನನ್ನು ಗಲ್ಲಿಗೇರಿಸುವ ಉದ್ದೇಶವಾದರೂ ಸರ್ಕಾರಕ್ಕಿದೆ ಎಂದುಕೊಂಡಿದ್ದೀರಾ?</p>
<p>ಹುತಾತ್ಮರ ಕುಟುಂಬದವರು ಶೌರ್ಯ ಪದಕಗಳನ್ನು ಹಿಂದಿರುಗಿಸಿದಾಗ ಕಾಂಗ್ರೆಸ್ ನಾಯಕರು ಹೇಳಿದ್ದೇನು ಗೊತ್ತೆ?&#8221;ಆತನ ಕ್ಷಮಾದಾನದ ಅರ್ಜಿ ರಾಷ್ಟ್ರಪತಿ ಮುಂದಿದೆ. ರಾಷ್ಟ್ರಪತಿ ನಿರ್ಧಾರ ತೆಗೆದುಕೊಳ್ಳದೇ ನಾವೇನು ಮಾಡುವುದಕ್ಕಾಗುವುದಿಲ್ಲ&#8217; ಎಂದಿತು ಯುಪಿಎ ಸರ್ಕಾರ. ರಾಷ್ಟ್ರಪತಿ ಅಬ್ದುಲ್ ಕಲಾಂ ಜನರ ಕಣ್ಣೆದುರು ತಪ್ಪಿತಸ್ಥರ ಸ್ಥಾನದಲ್ಲಿ ನಿಲ್ಲಬೇಕಾಯಿತು. ಒಬ್ಬ ರಾಷ್ಟ್ರಪತಿಯಾದವರು ರಾಜಕೀಯಕ್ಕೆ ಸಂಬಂಧಿಸಿದ ಮಾತು, ವಿವಾದಗಳಿಗೆ ಪ್ರತಿಕ್ರಿಯಿಸದೇ ಇರುವುದು ನಮ್ಮಲ್ಲಿ ಒಂದು ರೀತಿಯ ಸಂಪ್ರದಾಯ. ಹಾಗಾಗಿ 2007ರಲ್ಲಿ ತಮ್ಮ ಕಾರ್ಯಾವಧಿ ಮುಗಿಯುವವರೆಗೂ ಕಲಾಂ ಕಾಯಬೇಕಾಯಿತು. ಅವಧಿ ಮುಗಿದ ನಂತರ ಕಲಾಂ ನೀಡಿದ ಹೇಳಿಕೆ ಕಾಂಗ್ರೆಸ್್ನ ನಿಜಬಣ್ಣವನ್ನು ಬಯಲು ಮಾಡಿತು.&#8221;ಅಫ್ಜಲ್್ನ ಕ್ಷಮಾದಾನ ಅರ್ಜಿ ಗೃಹಖಾತೆಯನ್ನು ದಾಟಿ ರಾಷ್ಟ್ರಪತಿ ಭವನಕ್ಕೆ ಬರಲೇ ಇಲ್ಲ, ಹಾಗಿರುವಾಗ ನಿರ್ಧಾರ ತೆಗೆದುಕೊಳ್ಳುವುದಾದರೂ ಹೇಗೆ?&#8217; ಎಂದರು ಕಲಾಂ! ಇದು ಕಾಂಗ್ರೆಸ್್ನ ನಿಜವಾದ ರೂಪ. ಇಂತಹ ಕಾಂಗ್ರೆಸ್ ಈಗ ಹೊಸರಾಗ ಹಾಡುತ್ತಿದೆ. ಅಂದು ಗಲ್ಲಿಗೇರುವವರ ಸರದಿಯಲ್ಲಿ ಅಫ್ಜಲ್ 24ನೇ ಸ್ಥಾನದಲ್ಲಿದ್ದಾನೆ ಎಂದು ರಾಹುಲ್ ಗಾಂಧಿ ಹೇಳಿದರೆ, ಇಂದು ಕ್ಷಮಾದಾನದ 20 ಅರ್ಜಿಗಳು ರಾಷ್ಟ್ರಪತಿ ಮುಂದಿವೆ, ಹಾಗಂತ ರಾಷ್ಟ್ರಪತಿಗೆ ನಾವು ಗಡುವು ಹಾಕುವುದಕ್ಕಾಗುವುದಿಲ್ಲ ಎಂದು ಹೇಳಿಕೆ ಕೊಟ್ಟಿದೆ! ಇದು ಏನನ್ನು ಸೂಚಿಸುತ್ತದೆ? ಬಹುಶಃ ಕಂದಾಹಾರ್, ರುಬಿಯಾ ಭಾನು ಅಪಹರಣದಂಥ ಪ್ರಕರಣಗಳು ಸಂಭವಿಸಲಿ, ಅಫ್ಜಲ್, ಕಸಬ್್ನನ್ನು ಬಿಡುಗಡೆ ಮಾಡೋಣ, ಅಲ್ಪಸಂಖ್ಯಾತರನ್ನು ಖುಷಿಪಡಿಸೋಣ ಎಂದು ಸರ್ಕಾರ ಭಾವಿಸಿದಂತಿಲ್ಲವೆ? ಅಫ್ಜಲ್ ಗುರು ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿದ್ದು ಅಕ್ಟೋಬರ್ 3, 2006ರಂದು. 2011 ಫೆಬ್ರವರಿಯಲ್ಲಿ ನಡೆಯುತ್ತಿದ್ದ ಅಧಿವೇಶನದ ವೇಳೆ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿಗೆ ಇನ್ನೂ ಕಳುಹಿಸಿಲ್ಲ ಎಂದು ಗೃಹಸಚಿವ ಪಿ.ಚಿದಂಬರಂ ಸಂಸತ್ತಿನಲ್ಲಿ ಹೇಳಿಕೆ ನೀಡುತ್ತಾರೆ!</p>
<p>ಇದು ಏನನ್ನು ಸೂಚಿಸುತ್ತದೆ?</p>
<p>ಅಫ್ಜಲ್್ಗುರುವನ್ನು ಜೈಲಲ್ಲೇ ಇಟ್ಟುಕೊಂಡು ಇನ್ನೆಷ್ಟು ವರ್ಷ ಹುತಾತ್ಮರಿಗೆ ಅಗೌರವ ತೋರಲು ಕಾಂಗ್ರೆಸ್ ಹವಣಿಸುತ್ತಿದೆ? ಇದನ್ನೆಲ್ಲಾ ನೋಡಿದಾಗ ಅಂದು ಪೋಲಿಸರು ಭಯೋತ್ಪಾದಕರ ಗುಂಡಿಗೆ ತಮ್ಮ ಎದೆಕೊಡುವ ಬದಲು ಸಂಸತ್ತಿನೊಳಕ್ಕೆ ಬಿಟ್ಟಿದ್ದರೇ ಚೆನ್ನಾಗಿರುತ್ತಿತ್ತೇನೋ? ಕನಿಷ್ಠ ಆ ಮಟ್ಟಿಗಾದರೂ ನಮ್ಮ ಸಂಸತ್ತಿನಲ್ಲಿರುವ ಹೇಡಿಗಳು, ದೇಶದ್ರೋಹಿಗಳು, ದೇಶವಾಸಿಗಳ ಬಗ್ಗೆ ಸಂವೇದನೆ ಇಲ್ಲದವರು ಸತ್ತಿರುತ್ತಿದ್ದರು ಎಂದನಿಸುವುದಿಲ್ಲವೆ? ಗನ್ನರ್ ಮಿರ್ದಾಲ್ ಅದ್ಯಾವ ಕ್ಷಣದಲ್ಲಿ ತನ್ನ&#8221;ಏಷ್ಯನ್ ಡ್ರಾಮಾ&#8217;ದಲ್ಲಿ ಭಾರತವನ್ನು&#8221;ಸಾಫ್ಟ್ ಸ್ಟೇಟ್್&#8217; ಎಂದು ಬರೆದರೋ ಗೊತ್ತಿಲ್ಲ, ನಮ್ಮನ್ನಾಳುವವರು ಈ ದೇಶವನ್ನು ನಿರ್ವೀರ್ಯರ ನಾಡಾಗಿ ಮಾಡಲು ಹೊರಟಿರುವುದಂತೂ ನಿಜ. 2008, ನವೆಂಬರ್ 26ರಂದು ಮುಂಬೈ ಮೇಲೆ ದಾಳಿ ನಡೆದ ನಂತರ, ದಾವೂದ್ ಸೇರಿದಂತೆ 50 ಭಯೋತ್ಪಾದಕರನ್ನು ಹಸ್ತಾಂತರ ಮಾಡಿ ಪಾಕಿಸ್ತಾನದ ಮೇಲೆ ಯುಪಿಎ ಸರ್ಕಾರ ಒತ್ತಡ ಹೇರಿದ ಸಂದರ್ಭದಲ್ಲಿ ಒಂದು ಎಸ್ಸೆಮ್ಮೆಸ್ ಬಹಳ ಹರಿದಾಡುತ್ತಿತ್ತು-&#8221;ದಾವೂದ್ ಇಬ್ರಾಹಿಂನನ್ನು ಭಾರತಕ್ಕೆ ಕಳುಹಿಸಿದರೆ ಜೈಲಿನಲ್ಲಿ ಸುರಕ್ಷಿತವಾಗಿಡುತ್ತಾರೆ, ಕೈಗೊಂದು ಮೊಬೈಲ್ ಕೊಟ್ಟು ತನ್ನ ದಂಧೆಯನ್ನು ನಿರಾತಂಕವಾಗಿ ಮುಂದುವರಿಸಲು ಅವಕಾಶ ಮಾಡಿಕೊಡುತ್ತಾರೆ. ಆದರೆ ನಮ್ಮ ಪಾಕಿಸ್ತಾನದಲ್ಲಿ ಯಾವ ಕ್ಷಣದಲ್ಲಿ ಬಾಂಬ್ ಸಿಡಿಯುತ್ತದೆಯೋ ಎಂಬ ಭಯದಲ್ಲೇ ಬದುಕು ನಡೆಸಬೇಕಾಗುತ್ತದೆ, ಯಾವ ಕ್ಷಣದಲ್ಲೂ ಸತ್ತುಬಿಡಬಹುದು. ಅವನನ್ನು ಭಾರತಕ್ಕೆ ಕಳುಹಿಸಿದರೇ ಅಪಾಯ ಎಂಬ ಕಾರಣ ಪಾಕಿಸ್ತಾನ ದಾವೂದ್್ನನ್ನು ಹಸ್ತಾಂತರ ಮಾಡುತ್ತಿಲ್ಲ&#8217;! ಇದೊಂದು ಜೋಕಾದರೂ ಬಹಳ ಮಾರ್ಮಿಕವಾಗಿದೆ, ಭಾರತದ ಮನಸ್ಥಿತಿಗೆ ಕನ್ನಡಿ ಹಿಡಿದಂತಿದೆ ಎನಿಸುತ್ತಿಲ್ಲವೆ? ಒಸಾಮನನ್ನು ಹಿಡಿದು ಅಮೆರಿಕ ಏನು ಮಾಡಿತು? ಸಾಯಿಸಿ ಸಮುದ್ರಕ್ಕೆಸೆದು ಬಂತು. ಅದೂ ಜಗತ್ತಿನ ಕಟ್ಟರ್್ಪಂಥೀಯ ಮುಸ್ಲಿಮರೆಲ್ಲರ ಆರಾಧ್ಯ ದೈವ ಒಸಾಮಾನ ಹೆಣವನ್ನು. ಅಂತಹ ತಾಕತ್ತು ನಮ್ಮ ನಾಯಕರಲ್ಲಿ ಕಾಣುವುದು ಯಾವಾಗ? ಇಷ್ಟಕ್ಕೂ ಪೋರ್ಚುಗಲ್್ನಿಂದ ಹಿಡಿದು ತರಲಾದ ಅಬು ಸಲೇಂ ಏನಾಗಿದ್ದಾನೆ? ತಿಂದುಂಡುಕೊಂಡು ಆರಾಮವಾಗಿಲ್ಲವೆ? ಕಸಬ್್ಗೆ ಗಲ್ಲು ಶಿಕ್ಷೆ ವಿಧಿಸಿದ ನಂತರವೂ ಮಹಾರಾಷ್ಟ್ರ ಸರ್ಕಾರ 45 ಕೋಟಿ ರೂ ಖರ್ಚು ಮಾಡಿ ಅವನ ಯೋಗಕ್ಷೇವು ನೋಡಿಕೊಳ್ಳುತ್ತಿದೆಯೆಂದರೆ ಭಯೋತ್ಪಾದಕರಿಗೆ ಭಾರತಕ್ಕಿಂತ ಸುರಕ್ಷಿತ ರಾಷ್ಟ್ರ ಯಾವುದಿದೆ? ಪಾಕಿಸ್ತಾನಕ್ಕೆ 50 ಜನ&#8221;ಮೋಸ್ಟ್ ವಾಂಟೆಡ್್&#8217; ಭಯೋತ್ಪಾದಕರ ಪಟ್ಟಿಕೊಟ್ಟು ಹಸ್ತಾಂತರ ಮಾಡಿ ಎಂದು ಗೋಗರೆಯುತ್ತಿರುವುದು ಯಾವ ಪುರುಷಾರ್ಥಕ್ಕೆ? ಕೈಯಲ್ಲಿರುವ ಕಸಬ್, ಅಫ್ಜಲ್್ನನ್ನೇ ಗಲ್ಲಿಗೆ ಹಾಕುವ ತಾಕತ್ತಿಲ್ಲದಿರುವಾಗ, ಇನ್ನೂ 50 ಭಯೋತ್ಪಾದಕರನ್ನು ಹಸ್ತಾಂತರ ಮಾಡಿ ಎನ್ನುತ್ತಿರುವುದೇಕೆ? ನಮ್ಮ ಹಸುಗಳನ್ನು ಕಡಿದು ಬೀಫ್ ಬಿರ್ಯಾನಿ ಮಾಡಿ ತಿನ್ನಿಸುವುದಕ್ಕಾ?</p>
<p>ಇವತ್ತು ಅಫ್ಜಲ್ ಗುರುನಂಥ ಒಬ್ಬ ದೇಶದ್ರೋಹಿಗೆ ಶಿಕ್ಷೆ ನೀಡುವಾಗಲೂ ಮುಸ್ಲಿಮರು ಎಲ್ಲಿ ಮುನಿಸಿಕೊಳ್ಳುತ್ತಾರೋ, ಅವರ ಮತಗಳು ಕೈತಪ್ಪಿ ಹೋಗುತ್ತವೋ ಎಂಬ ಅಳುಕು, ಆತಂಕ ಇಟ್ಟುಕೊಳ್ಳಬೇಕಾಗಿ ಬಂದಿದೆಯೆಂದರೆ ಈ ದೇಶಕ್ಕೆ ಯಾವ ಭವಿಷ್ಯವಿದೆ? ಎಂಥವರು ನಮ್ಮನ್ನಾಳುತ್ತಿದ್ದಾರೆ ಹೇಳಿ? ಎಂತಹ ನಿರ್ವೀರ್ಯರ ಕೈಲಿ ನಮ್ಮ ಸೈನಿಕರು ವೀರ, ಪರಮವೀರ, ಅಶೋಕಚಕ್ರ, ಕೀರ್ತಿಚಕ್ರ ಪಡೆಯಬೇಕಾಗಿದೆ ಯೋಚಿಸಿ? ಮುಂದಿನ ವರ್ಷ ಡಿಸೆಂಬರ್ 13 ಬಂದಾಗಲೂ ಅಫ್ಜಲ್ ಆರಾಮವಾಗಿ ಇರುತ್ತಾನೆ, ಇದೇ ಚರ್ಚೆ ನಡೆಯುತ್ತಿರುತ್ತದೆ ನೋಡಿ!</p>
]]></content:encoded>
			<wfw:commentRss>http://pratapsimha.com/2011/12/18/afzal/feed/</wfw:commentRss>
		<slash:comments>59</slash:comments>
		</item>
		<item>
		<title>ಸೋನಿಯಾರನ್ನು ಟೀಕಿಸಿದರೆ ಮಾತ್ರ ಚಾರಿತ್ರ್ಯವಧೆಯಾಗುತ್ತದೆಯೇ?</title>
		<link>http://pratapsimha.com/2011/12/10/socialmedia/</link>
		<comments>http://pratapsimha.com/2011/12/10/socialmedia/#comments</comments>
		<pubDate>Sat, 10 Dec 2011 12:48:48 +0000</pubDate>
		<dc:creator>Pratap Simha</dc:creator>
				<category><![CDATA[Bettale-Jagattu]]></category>

		<guid isPermaLink="false">http://pratapsimha.com/?p=1212</guid>
		<description><![CDATA[ಇದು ಸ್ವೀಕಾರಾರ್ಹವಲ್ಲ, ಸಲ್ಲ!! ಆರು ವಾರಗಳ ಹಿಂದೆ ಫೇಸ್್ಬುಕ್, ಗೂಗಲ್, ಯಾಹೂ ಮತ್ತು ಮೈಕ್ರೋಸಾಫ್ಟ್ ಮುಂತಾದ ಪ್ರಮುಖ ಇಂಟರ್್ನೆಟ್ ಸೇವಾ ಪೂರೈಕೆದಾರ ಆರು ವಾರಗಳ ಹಿಂದೆ ಫೇಸ್್ಬುಕ್, ಗೂಗಲ್, ಯಾಹೂ ಮತ್ತು ಮೈಕ್ರೋಸಾಫ್ಟ್ ಮುಂತಾದ ಪ್ರಮುಖ ಇಂಟರ್್ನೆಟ್ ಸೇವಾ ಪೂರೈಕೆದಾರ ಕಂಪನಿಗಳ ಕಾನೂನು ಸಲಹೆಗಾರರನ್ನು ಹೊಸದಿಲ್ಲಿಯಲ್ಲಿರುವ ತಮ್ಮ ಕಚೇರಿಗೆ ಕರೆಸಿಕೊಂಡಿದ್ದ ಕೇಂದ್ರ ಸಂಪರ್ಕ ಖಾತೆ ಸಚಿವ ಕಪಿಲ್ ಸಿಬಲ್, ಫೇಸ್್ಬುಕ್ ಪ್ರತಿನಿಧಿಯನ್ನು ಬಳಿಗೆ ಕರೆದು ಚಿತ್ರವೊಂದನ್ನು ಮುಂದೆ ಹಿಡಿದು &#8220;This is unacceptable&#8217; ಎಂದು ಗುಡುಗಿದ್ದರು. ಕಳೆದ [...]]]></description>
			<content:encoded><![CDATA[<p><a href="http://pratapsimha.com/wp-content/uploads/2011/12/SONIA.jpg"><img src="http://pratapsimha.com/wp-content/uploads/2011/12/SONIA-249x300.jpg" alt="" title="SONIA" width="249" height="300" class="aligncenter size-medium wp-image-1213" /></a><br />
ಇದು ಸ್ವೀಕಾರಾರ್ಹವಲ್ಲ, ಸಲ್ಲ!! ಆರು ವಾರಗಳ ಹಿಂದೆ ಫೇಸ್್ಬುಕ್, ಗೂಗಲ್, ಯಾಹೂ ಮತ್ತು ಮೈಕ್ರೋಸಾಫ್ಟ್ ಮುಂತಾದ ಪ್ರಮುಖ ಇಂಟರ್್ನೆಟ್ ಸೇವಾ ಪೂರೈಕೆದಾರ</p>
<p>ಆರು ವಾರಗಳ ಹಿಂದೆ ಫೇಸ್್ಬುಕ್, ಗೂಗಲ್, ಯಾಹೂ ಮತ್ತು ಮೈಕ್ರೋಸಾಫ್ಟ್ ಮುಂತಾದ ಪ್ರಮುಖ ಇಂಟರ್್ನೆಟ್ ಸೇವಾ ಪೂರೈಕೆದಾರ ಕಂಪನಿಗಳ ಕಾನೂನು ಸಲಹೆಗಾರರನ್ನು ಹೊಸದಿಲ್ಲಿಯಲ್ಲಿರುವ ತಮ್ಮ ಕಚೇರಿಗೆ ಕರೆಸಿಕೊಂಡಿದ್ದ ಕೇಂದ್ರ ಸಂಪರ್ಕ ಖಾತೆ ಸಚಿವ ಕಪಿಲ್ ಸಿಬಲ್, ಫೇಸ್್ಬುಕ್ ಪ್ರತಿನಿಧಿಯನ್ನು ಬಳಿಗೆ ಕರೆದು ಚಿತ್ರವೊಂದನ್ನು ಮುಂದೆ ಹಿಡಿದು &#8220;This is unacceptable&#8217; ಎಂದು ಗುಡುಗಿದ್ದರು. ಕಳೆದ ಸೋಮವಾರ ಎರಡನೇ ಬಾರಿಗೆ ಮತ್ತೆ ಸಭೆ ಕರೆದಾಗಲೂ ಆಕ್ಷೇಪಾರ್ಹ, ಪ್ರಚೋದನಾತ್ಮಕ ಚಿತ್ರ ಅಥವಾ ವಿಷಯಗಳ ಬಳಕೆ ಹಾಗೂ ಪ್ರಸಾರವನ್ನು ತಡೆಗಟ್ಟಬೇಕು ಎಂದು ಫೇಸ್್ಬುಕ್, ಗೂಗಲ್ ಹಾಗೂ ಮೈಕ್ರೋಸಾಫ್ಟ್ ಕಂಪನಿಗಳಿಗೆ ತಾಕೀತು ಹಾಕಿದರು. ನಮ್ಮ ಗಮನಕ್ಕೆ ತಂದರೆ ಡಿಲೀಟ್ ಮಾಡುತ್ತೇವೆ ಎಂದು ಫೇಸ್್ಬುಕ್ ಹೇಳಿದರೆ ಗೂಗಲ್ ಹಾಗೂ ಮೈಕ್ರೋಸಾಫ್ಟ್ ಸರ್ಕಾರದ ಎಚ್ಚರಿಕೆಗೆ ಅಷ್ಟಾಗಿ ಸೊಪ್ಪುಹಾಕಲಿಲ್ಲ. ಒಂದು ವೇಳೆ ಈ ಸಂಬಂಧ ಕಾನೂನು ಅಥವಾ ನ್ಯಾಯಾಲಯದ ಆದೇಶವೇನಾದರೂ ಇದ್ದರೆ ನಾವು ಅದರಂತೆ ನಡೆದುಕೊಳ್ಳುತ್ತೇವೆ. ಜತೆಗೆ ಇಂಟರ್್ನೆಟ್್ನಲ್ಲಿ ಯಾವುದನ್ನು ಹಾಕಬೇಕು, ಹಾಕಬಾರದು ಎಂದು ನಿರ್ಧರಿಸುವುದಾಗಲಿ, ಯಾವುದು ಮಾನನಷ್ಟವುಂಟು ಮಾಡುತ್ತದೆ, ಯಾವುದು ಮಾಡುವುದಿಲ್ಲ ಎಂಬುದನ್ನು ನಿರ್ಧರಿಸುವುದಾಗಲಿ ಕಂಪನಿಗಳ ಕೆಲಸವಲ್ಲ ಎಂದು ಬಿಟ್ಟರು. ಇದರಿಂದ ಕುಪಿತಗೊಂಡ ಕಪಿಲ್ ಸಿಬಲ್ ಮಂಗಳವಾರ ಸಂಜೆ ಪತ್ರಿಕಾಗೋಷ್ಠಿ ಕರೆದು ಕಂಪನಿಗಳಿಗೆ ಬಹಿರಂಗ ಬೆದರಿಕೆ ಹಾಕಿದ್ದಾರೆ. </p>
<p>ಅಂದಹಾಗೆ, ಕಪಿಲ್ ಸಿಬಲ್ ಅವರನ್ನು ಕೆಂಡಾಮಂಡಲರಾಗಿಸಿದ ಫೇಸ್್ಬುಕ್ ಚಿತ್ರವಾದರೂ ಯಾವುದು ಅಂದುಕೊಂಡಿರಿ?</p>
<p>ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಅವರ ಕೈಗೊಂಬೆ ಪ್ರಧಾನಿ ಮನಮೋಹನ್ ಸಿಂಗ್ ರೋಮ್ಯಾನ್ಸ್ ಮಾಡುತ್ತಿರುವಂಥ ಚಿತ್ರ! ಇದೊಂದೇ ಅಲ್ಲ, ದಿಗ್ವಿಜಯ್ ಸಿಂಗ್, ಮನೀಶ್ ತಿವಾರಿ, ರಶೀದ್ ಆಲ್ವಿಗಳನ್ನು ಸೋನಿಯಾ ಗಾಂಧಿಯವರ ನಾಯಿಗಳೆಂಬಂತೆ ರೂಪಿಸಿರುವ ಚಿತ್ರಗಳೂ ಸಾಕಷ್ಟಿವೆ!! ಛೇ..ಛೇ.. ಇದೆಲ್ಲ ಸಲ್ಲ, ಇಂತಹ ಚಿತ್ರಗಳನ್ನು ಫೇಸ್್ಬುಕ್, ಆರ್ಕುಟ್, ಗೂಗಲ್ ಪ್ಲಸ್ ಅಥವಾ ಬ್ಲಾಗ್್ಗಳಲ್ಲಿ ಹಾಕುವುದು ಸರಿಯೇ ತಪ್ಪೇ ಎಂದು ನ್ಯಾಯ ಪಂಚಾಯಿತಿ ಮಾಡುವ, ತೀರ್ಪು ಕೊಡುವ ಮೊದಲು ಜನರಲ್ಲಿ ಏಕಿಂಥಾ ಹತಾಶೆ ಮನೆಮಾಡುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದೀರಾ? ಇರಾಕ್ ಸಂಬಂಧಿ ಆಹಾರಕ್ಕಾಗಿ ಇಂಧನ ಹಗರಣದಿಂದ ಆರಂಭವಾಗಿ ಕಾಮನ್ವೆಲ್ತ್ ಹಗರಣ, 2ಜಿ ಹಗರಣ, ಲವಾಸಾ ಹಗರಣ, ಅದರ್ಶ್ ಹೌಸಿಂಗ್ ಸೊಸೈಟಿ ಹಗರಣ ಹೀಗೆ ಹಗರಣಗಳ ಸರಮಾಲೆಯೇ ಸೃಷ್ಟಿಯಾದರೂ ಯಾವ ಪತ್ರಿಕೆ ಅಥವಾ ಟಿವಿ ಚಾನೆಲ್ ಕೇಂದ್ರ ಸರ್ಕಾರದ ನಿಜವಾದ ಚಕ್ರಾಧಿಪತಿ ಸೋನಿಯಾ ಗಾಂಧಿಯವರನ್ನು ಪ್ರಶ್ನಿಸಿದವು ಹೇಳಿ ನೋಡೋಣ? ಯುಪಿಎ ಹಾಗೂ ರಾಷ್ಟ್ರೀಯ ಸಲಹಾ ಮಂಡಳಿಯ(ಎನ್್ಎಸಿ) ಅಧ್ಯಕ್ಷೆಯಾದ ಸೋನಿಯಾ ಗಾಂಧಿಯವರೂ ಈ ಹಗರಣಗಳಿಗೆ ಹೊಣೆಗಾರರಲ್ಲವೆ? ಅಷ್ಟಾಗಿಯೂ ಯಾವ ಮಾಧ್ಯಮಗಳು ಆಕೆಯನ್ನು ಕಟಕಟೆಗೆ ತಂದು ನಿಲ್ಲಿಸಿದವು? ಪ್ರತಿಯೊಬ್ಬರನ್ನೂ ಲೆಕ್ಕ ಕೇಳುವ ಅಥವಾ ಆದಾಯ-ಖರ್ಚನ್ನು ಲೆಕ್ಕಹಾಕಿ ಸಂಪತ್ತಿನ ಮೂಲದ ಬಗ್ಗೆ ಪ್ರಶ್ನಿಸುವ ಮಾಧ್ಯಮಗಳು, ಸೋನಿಯಾ ಗಾಂಧಿಯವರು ಇದುವರೆಗೂ ಎಷ್ಟು ಭಾರಿ ವಿದೇಶ ಪ್ರಯಾಣ ಮಾಡಿದ್ದಾರೆ, ಅವರ ಆದಾಯವೆಷ್ಟು, ಐಶಾರಾಮಿ ಜೀವನ ನಡೆಸಲು ಹೇಗೆ ಸಾಧ್ಯವಾಗಿದೆ, ಅವರಿಗೆ ಹಗರಣಗಳ ಪಾಲು ಸಿಗುತ್ತಿಲ್ಲವೆ ಇಂತಹ ಪ್ರಶ್ನೆ, ಅನುಮಾನಗಳ ಬಗ್ಗೆ ಎಂದಾದರೂ ಬೆಳಕು ಚೆಲ್ಲಿವೆಯೇ? ಮಾಯಾವತಿ, ಕಾನ್ಶಿರಾಮ್, ಅಂಬೇಡ್ಕರ್ ಹಾಗೂ ಆನೆಗಳ ಪ್ರತಿಮೆಗಳಿಗೆ ಇಷ್ಟು ಕೋಟಿ ವ್ಯಯವಾಯಿತು ಎಂದು ಬೊಬ್ಬೆಹಾಕುವವರು ನೆಹರು, ಇಂದಿರಾ, ರಾಜೀವ್ ಗಾಂಧಿ ಹೆಸರಿನಲ್ಲಿ ಎಷ್ಟು ಸಂಘ, ಸಂಸ್ಥೆ, ಟ್ರಸ್ಟ್್ಗಳು ನಾಯಿಕೊಡೆಗಳಂತೆ ತಲೆಯೆತ್ತಿವೆ ಹಾಗೂ ಎಷ್ಟೆಷ್ಟು ಅನುದಾನವನ್ನು ನುಂಗುತ್ತಿವೆ ಎಂಬುದನ್ನು ಹೊರತೆಗೆದಿದ್ದಾರಾ? ಇಂತಹ ವಿಷಯಗಳ ಬಗ್ಗೆ ಜನಮಾನಸದಲ್ಲಿ ಅನುಮಾನ, ಶಂಕೆಗಳಿವೆ. ಅವುಗಳನ್ನು ವ್ಯಕ್ತಪಡಿಸಲು, ತಮ್ಮ ಸಾತ್ವಿಕ ಸಿಟ್ಟನ್ನು ತೋಡಿಕೊಳ್ಳಲು, ಹೊರಹಾಕಲು ವೇದಿಕೆಗಳಾದರೂ ಯಾವುದಿವೆ? ಇಂತಹ ವಿಷಯಗಳ ಬಗ್ಗೆ ಬರೆದು ಕಳುಹಿಸಿದರೆ ಪತ್ರಿಕೆಗಳು ಪ್ರಕಟಿಸುತ್ತವೆಯೇ? ಜನರು ತಮ್ಮ ಭಾವನೆಗಳನ್ನು, ಹತಾಶೆಯನ್ನು ವ್ಯಕ್ತಪಡಿಸಲು ಚಾನೆಲ್್ಗಳು ವೇದಿಕೆ ಕೊಡುತ್ತವೆಯೇ? ಹಾಗಾದರೆ ತಮ್ಮಲ್ಲಿರುವ ನೋವು, ಹತಾಶೆ, ಸಿಟ್ಟನ್ನು ಹೊರಹಾಕಲು, ಪರಸ್ಪರ ಹಂಚಿಕೊಳ್ಳಲು ಇಂಟರ್್ನೆಟ್ ಬಿಟ್ಟರೆ ಬೇರಾವ ಮಾಧ್ಯಮವಿದೆ?</p>
<p>1. I hate Sonia Gandhi<br />
2. We hate Sonia Gandhi<br />
3. Manamohan singh is a puppet of Sonia Gandhi!</p>
<p>ಆರ್ಕುಟ್, ಫೇಸ್್ಬುಕ್್ಗಳಲ್ಲಿ ಇಂತಹ ಥ್ರೆಡ್ ಅಥವಾ ಕಮ್ಯುನಿಟಿಗಳು ಸೃಷ್ಟಿಯಾಗಿರುವುದು ಜನರಲ್ಲಿರುವ ಸಾತ್ವಿಕ ಸಿಟ್ಟಿನ ಫಲ. ಹಾಗಿದ್ದರೂ &#8216;ಅವಹೇಳನಕಾರಿ, ಕಿರುಕುಳ, ಧರ್ಮನಿಂದನೆ, ಮಾನನಷ್ಟವುಂಟು ಮಾಡುವಂಥ ಹಾಗೂ ಯಾವುದೇ ಕಾನೂನುಬಾಹಿರ ಚಿತ್ರ ಅಥವಾ ವಿಷಯವನ್ನು ನಿಷೇಧಿಸಬೇಕು&#8217; ಎಂದು ಕಪಿಲ್ ಸಿಬಲ್ ತಾಕೀತು ಹಾಕಿದ್ದಾರಲ್ಲಾ, ಈ ಮಾನ, ಚಾರಿತ್ರ್ಯಗಳಿರುವುದು ಸೋನಿಯಾ ಗಾಂಧಿಯವರಿಗೆ ಮಾತ್ರವೆ? ಅನ್ಯರ ಬಗ್ಗೆ ಕಾಂಗ್ರೆಸ್ಸಿಗರು ಹುಸಿ ಆರೋಪ ಮಾಡಿದಾಗ, ಭ್ರಷ್ಟರೆಂದು ಕರೆದಾಗ ಮಾನ ಹೋಗುವುದಿಲ್ಲವೆ? ಬಾಬಾ ರಾಮ್್ದೇವ್ ಬಗ್ಗೆ ದಿಗ್ವಿಜಯ್ ಸಿಂಗ್ ಬಾಯಿಗೆ ಬಂದಂತೆ ಮಾತನಾಡಿದಾಗ ಚಾರಿತ್ರ್ಯ ಹರಣವಾಗುವುದಿಲ್ಲವೆ? ಸಾರ್ವಜನಿಕರ ಮನದಲ್ಲಿ ಅನುಮಾನಗಳು ಸೃಷ್ಟಿಯಾಗುವುದಿಲ್ಲವೆ? ಈ ಮನೀಶ್ ತಿವಾರಿ, ದಿಗ್ವಿಜಯ್ ಸಿಂಗ್ ಕೊಡುವ ಹೇಳಿಕೆಗಳು ಕೋಮು ಹಿಂಸಾಚಾರಕ್ಕೆ ಪ್ರಚೋದಿಸುವುದಿಲ್ಲವೆ? 2008, ನವೆಂಬರ್ 26ರ ಮುಂಬೈ ಭಯೋತ್ಪಾದಕ ದಾಳಿಗೆ ಆರೆಸ್ಸೆಸ್ ಕಾರಣ ಎಂದು ಕಾಂಗ್ರೆಸ್ಸಿನ ಅಬ್ದುಲ್ ರೆಹಮಾನ್ ಅಂಟುಳೆ ಹೇಳಿಕೆ ನೀಡಿದ್ದು ಆರೆಸ್ಸೆಸ್ ವಿರುದ್ಧದ &#8216;ಹೇಟ್್ಸ್ಪೀಚ್್&#8217; ಅಲ್ಲವೆ? ಹೇಮಂತ್ ಕರ್ಕರೆ ಸಾವಿಗೆ ಹಿಂದೂ ಕಟ್ಟರ್್ಪಂಥೀಯರೇ ಕಾರಣ, ಮುಂಬೈ ಬಾಂಬ್ ದಾಳಿಯಲ್ಲಿ ಆರೆಸ್ಸೆಸ್ ಭಾಗಿಯಾಗಿದೆ ಎಂಬುದಕ್ಕೆ ನನ್ನ ಬಳಿ ಪುರಾವೆ ಇದೆ ಎಂದು ಹುಚ್ಚಾಪಟ್ಟೆ ಮಾತನಾಡುವ ದಿಗ್ವಿಜಯ್ ಸಿಂಗ್ ಅವರದ್ದು ಹೇಟ್್ಸ್ಪೀಚ್ ಎನಿಸುವುದಿಲ್ಲವೆ? ಸೋನಿಯಾ ಗಾಂಧಿಯವರ ಚಿತ್ರವನ್ನು ಫೇಸ್್ಬುಕ್್ನಲ್ಲಿ ತಿರುಚುವ ಕಾರ್ಯಕ್ಕೆ ಬಳಸಿಕೊಂಡರೆ ಚಾರಿತ್ರ್ಯವಧೆ ಎನಿಸುವುದಾದರೆ ಸುಖಾಸುಮ್ಮನೆ ಅಣ್ಣಾ ಹಜಾರೆಯವರನ್ನು ಮನೀಶ್ ತಿವಾರಿ ಹಾಗೂ ಹರಿಪ್ರಸಾದ್ ಅವರು ಭ್ರಷ್ಟ ಎಂದು ಕರೆದಿದ್ದು ಚಾರಿತ್ರ್ಯವಧೆಯಾಗಿರಲಿಲ್ಲವೆ? 1999ರಲ್ಲಿ ನಡೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅಟಲ್ ಬಿಹಾರಿ ವಾಜಪೇಯಿಯವರನ್ನು ಸೋನಿಯಾ ಗಾಂಧಿಯವರು &#8216;ಗದ್ದರ್್&#8217;(ದೇಶದ್ರೋಹಿ) ಎಂದಿದ್ದು ಚಾರಿತ್ರ್ಯಹರಣವಲ್ಲದೆ ಮತ್ತೇನಾಗಿತ್ತು? ನ್ಯಾಯಾಲಯದ ತೀರ್ಪು ಬರುವ ಮುನ್ನವೆ, ಕೋರ್ಟ್್ನಲ್ಲಿ ಏನೂ ಸಾಬೀತಾಗುವ ಮೊದಲೇ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು &#8216;ಸಾವಿನ ವ್ಯಾಪಾರಿ&#8217; ಎಂದು ಸೋನಿಯಾ ಗಾಂಧಿ ಕರೆದಿದ್ದು ಮೋದಿ ವಿರುದ್ಧ ಮುಸ್ಲಿಮರನ್ನು ಎತ್ತಿಕಟ್ಟುವ ದೂರ್ತ, ವೈಷಮ್ಯಯುತ ಉದ್ದೇಶ ಹೊಂದಿರಲಿಲ್ಲವೆ? ಕಾಂಗ್ರೆಸ್ ವಕ್ತಾರ ರಶೀದ್ ಆಲ್ವಿ ನೀಡುವ ಮೋದಿ ವಿರೋಧಿ ಹೇಳಿಕೆಗಳು ಸಮಾಜ ಒಡೆಯುವ ಹೇಟ್ ಕ್ಯಾಂಪೇನ್್ಗಳೆನಿಸುವುದಿಲ್ಲವೆ?</p>
<p>ಅಲ್ಲ, ಧರ್ಮನಿಂದನೆಯ ಮಾತನಾಡುತ್ತಿದ್ದಾರಲ್ಲಾ ಇವರು 2007ರಲ್ಲಿ ರಾಮಸೇತುವನ್ನು ಒಡೆಯಲು ಹೊರಟಿದ್ದು ಯಾವ ಕಾರ್ಯ? ಶ್ರೀರಾಮ ಯಾವ ಕಾಲೇಜಿನಿಂದ ಇಂಜಿನಿಯರಿಂಗ್ ಪದವಿ ಪಡೆದಿದ್ದ ಎಂದು ವಿವೇಕರಹಿತವಾಗಿ ಪ್ರಶ್ನಿಸುವ ಮೂಲಕ ಕರುಣಾನಿಧಿ ಕೋಟ್ಯಂತರ ರಾಮಭಕ್ತರ ಮನಸ್ಸಿಗೆ ನೋವುಂಟು ಮಾಡಿದಾಗ ಅದು ಧರ್ಮನಿಂದನೆ ಎನಿಸಿರಲಿಲ್ಲವೆ? &#8216;ಜೀಸಸ್ ಕ್ರೈಸ್ಟ್ ಸೂಪರ್ ಸ್ಟಾರ್್&#8217;, &#8216;ಡಾ ವಿನ್ಸಿ ಕೋಡ್್&#8217; ಚಿತ್ರಗಳು ಕ್ರೈಸ್ತರ ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡುತ್ತದೆ ಎಂಬ ಕಾರಣಕೊಟ್ಟು ನಿಷೇಧಿಸಿದ ಈ ಸರ್ಕಾರಕ್ಕೆ &#8216;ಎ ಸ್ಲಮ್ ಡಾಗ್ ಮಿಲಿಯನೇರ್್&#8217; ಚಿತ್ರದಲ್ಲಿ ಹಿಂದುಗಳನ್ನು ಕಟುಕರಂತೆ ಚಿತ್ರಿಸಿರುವುದು ಬಹುಸಂಖ್ಯಾತರ ಭಾವನೆಗೆ ನೋವುಂಟು ಮಾಡುತ್ತಿದೆ ಎನಿಸಿರಲಿಲ್ಲವೆ? ಇವತ್ತು ಮಡೆಸ್ನಾನದ ಬಗ್ಗೆ ಮಾಧ್ಯಮಗಳಲ್ಲಿ ದೊಡ್ಡ ಚರ್ಚೆಯೇ ಅಗುತ್ತಿದೆ. ನಮ್ಮ ಹಿಂದು ಧರ್ಮದ ಹಲವಾರು ಅನಿಷ್ಟ ಪದ್ಧತಿಗಳ ಬಗ್ಗೆ ಸಾರ್ವಜನಿಕ ಚರ್ಚೆಯೂ ನಡೆದಿದೆ, ಮೌಢ್ಯಾಚರಣೆಗಳ ಮೇಲೆ ಸರ್ಕಾರ ನಿಷೇಧ ಹಾಕಿದ್ದನ್ನೂ ನಾವು ಕಂಡಿದ್ದೇವೆ. ಆದರೆ ಇತರ ಧರ್ಮ ಹಾಗೂ ಧರ್ಮೀಯರ ಮೌಢ್ಯ ಹಾಗೂ ಆಚರಣೆಗಳ ಬಗ್ಗೆ ಇಂಥದ್ದೊಂದು ಮುಕ್ತ ಹಾಗೂ ಅಹಿಂಸಾ ಚರ್ಚೆಯನ್ನು ಟಿವಿ, ಪತ್ರಿಕೆಗಳಲ್ಲಿ ಎಂದಾದರೂ ಕಂಡಿದ್ದೇವಾ? ಅತ್ಯಾಚಾರ ಮಾಡಿದ ಮಾವನನ್ನೇ ಗಂಡನೆಂದು, ಗಂಡನನ್ನು ಮಗನೆಂದು ಭಾವಿಸಬೇಕೆಂದ ಇಮ್ರಾನಾ ಪ್ರಕರಣ ನಡೆದಾಗ ಮಾಧ್ಯಮಗಳ ವರದಿ ಮಾಡಿದವೆ ಹೊರತು, ಏಕೆ ಅಂಥ ತೀರ್ಪು ನೀಡಲಾಯಿತು ಎಂಬುದನ್ನು ವಿಶ್ಲೇಷಿಸಿ ಟೀಕಿಸುವ ಕೆಲಸವನ್ನು ಯಾರಾದರೂ ಮಾಡಿದರೇ? ಇಸಾಯಿಗಳ ಬೀಟಿಫಿಕೇಷನ್, ಕ್ಯಾನೋನೈಜೇಷನ್ ಹಾಗೂ ಅದಕ್ಕೆ ಮೊದಲು ಜರುಗುವ &#8216;ಪವಾಡ&#8217;ಗಳು ಮೌಢ್ಯವೆನಿಸುವುದಿಲ್ಲವೆ? ಈ ವಿಚಾರಗಳ ಬಗ್ಗೆ ಯಾವ ಪತ್ರಿಕೆ ಅಥವಾ ಚಾನೆಲ್್ಗಳಲ್ಲಿ ಮುಕ್ತ ಚರ್ಚೆ ನಡೆದಿದೆ ಹೇಳಿ?</p>
<p>ಆದರೆ&#8230; ಇಂಟರ್್ನೆಟ್್ನಿಂದ ಸಾಧ್ಯವಾಗಿರುವ &#8216;ಇಂಡಿಪೆಂಡೆಂಟ್ ಮೀಡಿಯಾ&#8217;ದಲ್ಲಿ, ಫೇಸ್್ಬುಕ್, ಆರ್ಕುಟ್್ನಂಥ ಸಾಮಾಜಿಕ ತಾಣಗಳಲ್ಲಿ ಮುಕ್ತ ಚರ್ಚೆ ನಡೆಯುತ್ತದೆ. ಜನ ಯಾರ ಭಯ, ಅಂಜಿಕೆಯೂ ಇಲ್ಲದೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಅದಿರಲಿ, ಸೋನಿಯಾ ಬಿಟ್ಟು ಉಳಿದವರ ಬಗ್ಗೆಯೇಕೆ ಸಾಮಾಜಿಕ ತಾಣಗಳಲ್ಲಿ ಇಂತಹ ಕೋಪವೇಕೆ ವ್ಯಕ್ತವಾಗುತ್ತಿಲ್ಲ? ಅಂಕುಶ ಹಾಕುವ ಮೊದಲು ಕಾಂಗ್ರೆಸ್ ತನ್ನ ಆತ್ಮಾವಲೋಕನ ಮಾಡಿಕೊಳ್ಳಬಾರದೇಕೆ? ಸೋನಿಯಾ ಗಾಂಧಿಯವರ ಅಳಿಯ ರಾಬರ್ಟ್ ವಾದ್ರಾ ಎಂಬ ಸಣ್ಣ ವ್ಯಾಪಾರಿ ಹೇಗೆ ಏಕಾಏಕಿ ಕೋಟ್ಯಧಿಪತಿಯಾದರು? ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಅವರ ಅಳಿಯ(ದತ್ತು ಪುತ್ರಿ ನಿಹಾರಿಕಾ ಅವರ ಪತಿ) ರಂಜನ್ ಭಟ್ಟಾಚಾರ್ಯ ಅವರ ಬಗ್ಗೆ ಪುಟಗಟ್ಟಲೆ &#8216;ಕಾನ್್ಸ್ಪಿರೆಸಿ ಥಿಯರಿ&#8217;ಗಳನ್ನು ಬರೆಯುತ್ತಿದ್ದ ಮಾಧ್ಯಮಗಳು ರಾಬರ್ಟ್ ವಾದ್ರಾ ಬಗ್ಗೆ ಏಕೆ ಒಂದಕ್ಷರವನ್ನೂ ಬರೆಯುವುದಿಲ್ಲ? ಸೋನಿಯಾ ಗಾಂಧಿಯವರ ಅಪ್ತಕಾರ್ಯದರ್ಶಿಯಾಗಿದ್ದ ವಿನ್ಸೆಂಟ್ ಜಾರ್ಜ್ ಸೃಷ್ಟಿಸಿದ್ದ ಹಗರಣಗಳನ್ನು ಏಕೆ ಯಾವ ಮಾಧ್ಯಮಗಳೂ ಹೊರತೆಗೆಯುವುದಿಲ್ಲ? ಇವುಗಳ ಬಗ್ಗೆ ಜನ ಎಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಬೇಕು? ಸಾಮಾಜಿಕ ತಾಣಗಳು ಹಾಗೂ ಇಂಟರ್್ನೆಟ್್ನಿಂದ ಲಭ್ಯವಾಗಿರುವ ಸ್ವತಂತ್ರ ಮಾಧ್ಯಮ ಬಿಟ್ಟರೆ ಅವರಿಗೆ ಯಾವ ವೇದಿಕೆ ಇದೆ? &#8216;ಪಟ್ಟಭದ್ರ ಹಿತಾಸಕ್ತಿಗಳು, ಮಾಧ್ಯಮ ಮಾಲೀಕರು ಹಾಗೂ ಕಾಸಿಗಾಗಿ ಗೀಚುವ ಪತ್ರಕರ್ತರಿಂದ ಮುಕ್ತವಾಗಿರುವ ಹಾಗೂ ಏಕೈಕ ಪ್ರಜಾತಾಂತ್ರಿಕ ಮಾಧ್ಯಮವೆಂದರೆ ಇಂಟರ್್ನೆಟ್. ಕಪಿಲ್ ಸಿಬಲ್ ಅಂಕುಶ ಹಾಕಲು ಹೊರಟಿರುವುದೇ ಆ ಕಾರಣಕ್ಕೆ&#8217; ಎಂಬ ವರುಣ್್ಗಾಂಧಿಯವರ ಹೇಳಿಕೆ ಹಾಲಿ ಪರಿಸ್ಥಿತಿಗೆ ಕನ್ನಡಿಯಾಗಿದೆಯಲ್ಲವೆ?</p>
<p>ಇಷ್ಟಕ್ಕೂ ಕಾಂಗ್ರೆಸ್್ಗೆ ದಿಗಿಲು ಹುಟ್ಟಿಸುತ್ತಿರುವ ಸಂಗತಿಯಾದರೂ ಯಾವುದೆಂದುಕೊಂಡಿರಿ?</p>
<p>ಭಾರತದಲ್ಲಿ ಫೇಸ್್ಬುಕ್ ಬಳಕೆದಾರರ ಸಂಖ್ಯೆ 2.5 ಕೋಟಿ ಇದೆ. ಸುಮಾರು 10 ಕೋಟಿಗೂ ಹೆಚ್ಚು ಇಂಟರ್್ನೆಟ್ ಬಳಕೆದಾರರು ಗೂಗಲ್ ಉಪಯೋಗಿಸುತ್ತಾರೆ. ಇಷ್ಟೊಂದು ಸಂಖ್ಯೆಯ ಬಳಕೆದಾರರಿರುವಾಗ ರೋಗಿಷ್ಠ ಮನಸ್ಥಿತಿಗಳಿರುವುದನ್ನು ತಳ್ಳಿಹಾಕಲು ಯಾರಿಗೂ ಸಾಧ್ಯವಿಲ್ಲ. ಬಹಳಷ್ಟು ಜನರು ಸಾಮಾಜಿಕ ತಾಣಗಳ ಸ್ವಾಸ್ಥ್ಯವನ್ನು ಕೆಡಿಸುತ್ತಿರುವುದು, ವೈಯಕ್ತಿಕ ನಿಂದನೆ ಹಾಗೂ ಚಾರಿತ್ರ್ಯವಧೆಗೆ ಬಳಸಿಕೊಳ್ಳುತ್ತಿರುವುದೂ ನಿಜ. ಅಂಥವರ ಮೇಲೆ ನಿಗಾ ಇಡಬೇಕು, ಅಂಕುಶ ಹಾಕಬೇಕು, ಶಿಕ್ಷಿಸಬೇಕು ಎಂಬುದೂ ಸರಿ. ಆದರೆ ಕಾಂಗ್ರೆಸ್ ಕುಪಿತಗೊಂಡಿರುವುದು ಈ ಕಾರಣಕ್ಕೆ ಖಂಡಿತ ಅಲ್ಲ. ಇತ್ತೀಚೆಗೆ ಈಜಿಪ್ಟ್್ನಲ್ಲಿ ನಡೆದ ಕ್ರಾಂತಿಗೆ ಕಾರಣವಾಗಿರುವುದು ಸೋಷಿಯಲ್ ಮೀಡಿಯಾ. ಫಾಲುನ್ ಗಾಂಗ್ ಚೀನಾವನ್ನು ನಿದ್ದೆಗೆಡಿಸಿದ್ದೂ ಆನ್್ಲೈನ್ ಮೂಲಕವೇ. ವಿಕಿಲೀಕ್ಸ್ ಅಂತೂ ಜಗತ್ತಿನ ಬಲಿಷ್ಠ ರಾಷ್ಟ್ರಗಳು ಹಾಗೂ ಸರ್ಕಾರದ ಚುಕ್ಕಾಣಿ ಹಿಡಿದವರ ನಿಜ ಹಾಗೂ ಭ್ರಷ್ಟರೂಪವನ್ನು ಬಯಲು ಮಾಡಿದೆ. ಅದು ಹೊರಹಾಕಿದ ಹಗರಣಗಳ ಬಗ್ಗೆ ಫೇಸ್್ಬುಕ್, ಆರ್ಕುಟ್, ಟ್ವಿಟ್ಟರ್ ಮುಂತಾದ ಸಾಮಾಜಿಕ ಮಾಧ್ಯಮ ತಾಣಗಳು ಹಾಗೂ ಇಂಟರ್್ನೆಟ್್ನಲ್ಲಿ ವ್ಯಾಪಕ ಚರ್ಚೆ ನಡೆದಿದೆ. ಪ್ರಸ್ತುತ ರಷ್ಯಾದಲ್ಲಿ ವ್ಲಾದಿಮಿರ್ ಪುಟಿನ್ ವಿರುದ್ಧ ಜನಾಭಿಪ್ರಾಯ ರೂಪುಗೊಳ್ಳುತ್ತಿರುವುದೂ ಸೋಷಿಯಲ್ ಮೀಡಿಯಾ ಮೂಲಕವೇ. ಇತ್ತ ಕಾಂಗ್ರೆಸ್ ಮುಖಕ್ಕೆ ರಾಡಿ ಎರಚಿದ &#8216;ರಾಡಿಯಾ ಟೇಪ್ಸ್್&#8217; ಮೊದಲು ಚರ್ಚೆಗೆ ಗ್ರಾಸವಾಗಿದ್ದೇ, ಆ ಮೂಲಕ ಜನಾಭಿಪ್ರಾಯ ಹಾಗೂ ಒತ್ತಡ ಸೃಷ್ಟಿಯಾಗಿದ್ದೇ ಟ್ವಿಟ್ಟರ್ ಮೂಲಕ. ಇವತ್ತು ಕಾಂಗ್ರೆಸ್ಸಿನ ಹೊಣೆಗೇಡಿತನವನ್ನು ಚೆನ್ನಾಗಿ ತೊಳೆಯುತ್ತಿರುವುದೇ ಫೇಸ್್ಬುಕ್ ಹಾಗೂ ಟ್ವಿಟ್ಟರ್್ಗಳಲ್ಲಿ. ಇಂತಹ ಸಾಮಾಜಿಕ ತಾಣಗಳು ಹಾಗೂ ್ನಇಂಟರ್್ನೆಟ್್ನಿಂದ ಬಹುವಾಗಿ ದೂಷಣೆಗೆ ಒಳಗಾಗುತ್ತಿರುವುದು ಹಾಗೂ ಬಣ್ಣಬಯಲು ಮಾಡಿಸಿಕೊಳ್ಳುತ್ತಿರುವುದು ಹಗರಣಗಳ ಮೂಲ ಜನಕ ಕಾಂಗ್ರೆಸ್ ಹಾಗೂ ಅದರ ಮುಖ್ಯಸ್ಥೆ ಸೋನಿಯಾ ಗಾಂಧಿ. ಹಾಗಾಗಿ ಮುಂದಿನ ಚುನಾವಣೆಯಲ್ಲಿ ಮೂಲೆಗುಂಪಾಗುವ ಭಯಕ್ಕೊಳಗಾಗಿರುವ ಕಾಂಗ್ರೆಸ್ ಇಂಥದ್ದೊಂದು ಅಂಕುಶ ಹಾಕಲು ಮುಂದಾಗಿದೆಯಷ್ಟೇ. ಈ ದೇಶದ ಮೇಲೆ ತುರ್ತು ಪರಿಸ್ಥಿತಿಯನ್ನು ಹೇರಿದವರಿಂದ ಇದಕ್ಕಿಂತ ಬೇರೇನನ್ನು ನಿರೀಕ್ಷಿಸಲು ಸಾಧ್ಯ? </p>
<p>ಹಾಗಾಗಿ ಕಪಿಲ್ ಸಿಬಲ್ ತರಲು ಹೊರಟಿರುವ ವಿಧೇಯಕವನ್ನು &#8216;&#8221;Social Networking Inspection Act (SONIA)&#8217; ಎಂದು ಟ್ವಿಟ್ಟರ್್ನಲ್ಲಿ   ಟೀಕಿಸಿರುವುದು ಸರಿಯಾಗಿಯೇ ಇದೆಯಲ್ಲವೇ?</p>
]]></content:encoded>
			<wfw:commentRss>http://pratapsimha.com/2011/12/10/socialmedia/feed/</wfw:commentRss>
		<slash:comments>69</slash:comments>
		</item>
	</channel>
</rss>

