*/
Date : 26-11-2011 | 32 Comments. | Read More
ಇದೇನಿದು ಸ್ವಾಮಿ? ಇದೆಂಥಾ ಜಾಡ್ಯ? ಅಲ್ಲಾ, ಪುರಸ್ಕಾರ ಬಂದ ಕೂಡಲೇ ಒಬ್ಬ ವ್ಯಕ್ತಿ ಆ್ಯಕ್ಟಿವಿಸ್ಟ್ ಅಥವಾ ಚಳವಳಿಕಾರನಾಗಿ ಪರಿವರ್ತನೆಯಾಗಬೇಕು ಎಂಬ ನಿಯಮವೇನಾದರೂ ಇದೆಯೇ? ಅಥವಾ ಪುರಸ್ಕಾರವೆಂಬುದು ತಮಗೆ ಸಂಬಂಧಪಡಲಿ, ಬಿಡಲಿ ಎಲ್ಲ ವಿಷಯಗಳ ಬಗ್ಗೆಯೂ ಮಾತನಾಡುವ ಅರ್ಹತೆ ತಂದುಕೊಡುವ ಸ್ಥಾನಮಾನವೇ? ಅಥವಾ ಬಾಯಿಗೆ ಬಂದಂತೆ ಮಾತನಾಡುವ, ಅನ್ಯರ ಬಗ್ಗೆ ಹಗುರವಾಗಿ ಹೇಳಿಕೆ ಕೊಡುವ ಅಧಿಕಾರವೇ? ನೃಪತುಂಗ ಸಾಹಿತ್ಯ ಪ್ರಶಸ್ತಿ ವಿಜೇತರಾದ ಡಾ. ಎಂ.ಎಂ. ಕಲಬುರ್ಗಿಯವರನ್ನು ನೋಡಿದರೆ ಹಾಗನಿಸುತ್ತಿಲ್ಲವೇ? “ನೃಪತುಂಗ ಸಾಹಿತ್ಯ ಪ್ರಶಸ್ತಿ’ಗೆ ಆಯ್ಕೆಯಾದ ನಂತರ ನೀಡಿದ ಸಂದರ್ಶನದಲ್ಲಿ […]
Date : 21-11-2011 | 26 Comments. | Read More
ಮಹಾದೇವ ಗೋವಿಂದ ರಾನಡೆ! ಒಮ್ಮೆ ಅವರು ರೈಲಿನಲ್ಲಿ ಹೊರಟಿದ್ದರು. ಮೊದಲ ದರ್ಜೆ ಬೋಗಿಯಲ್ಲಿ ಪ್ರಯಾಣ ಮಾಡುತ್ತಿದ್ದರು. ಅದೇ ಬೋಗಿಯಲ್ಲಿ ಆಸೀನನಾಗಿದ್ದ ಬಿಳಿತೊಗಲಿನ ಬ್ರಿಟಿಷ್ ಅಧಿಕಾರಿಗೆ ರಾನಡೆಯವರನ್ನು ಕಂಡು ಕಸಿವಿಸಿಯಾಯಿತು. ಭಾರತೀಯರನ್ನು ಗುಲಾಮರಂತೆ ಕಾಣುತ್ತಿದ್ದ, ನಡೆಸಿಕೊಳ್ಳುತ್ತಿದ್ದ ಕಾಲವದು. ಹಾಗಾಗಿಯೇ ಭಾರತೀಯನೊಬ್ಬ ತನ್ನಂತೆಯೇ ಮೊದಲ ದರ್ಜೆ ಬೋಗಿಯಲ್ಲಿ ಪ್ರಯಾಣ ಮಾಡುತ್ತಿರುವುದನ್ನು ಕಂಡು ಆತನ ಕೋಪ ನೆತ್ತಿಗೇರಿತು. ‘ಏ ಗುಲಾಮ, ನಿನ್ನನ್ನು ಒಳಕ್ಕೆ ಬಿಟ್ಟವರ್ಯಾರು?’ ಎಂದು ಅಬ್ಬರಿಸಿದ. ಆದರೆ ರಾನಡೆಯವರು ಮರುಮಾತನಾಡಲಿಲ್ಲ. ಕೊನೆಗೂ ಇಳಿಯುವ ಸ್ಥಳ ಬಂತು. ಹೊರಗೆ ಜನಸಾಗರವೇ ನೆರೆದಿದೆ. […]
Date : 13-11-2011 | 13 Comments. | Read More
The Fight of the Century! ಇಲ್ಲಾ ಇಲ್ಲಾ, ಇದಕ್ಕಿಂತ Thrilla in Manila’ವೇ ಅತ್ಯಂತ ಸಂಘರ್ಷದಿಂದ ಕೂಡಿತ್ತು, ಅದೇ ಅತ್ಯುತ್ತಮ ಸೆಣಸಾಟ ಎನ್ನುವವರು ಸಾಕಷ್ಟಿದ್ದಾರೆ, ಪರಿಣತರಲ್ಲೂ ಏಕಮತವಿಲ್ಲ, ಇಂದಿಗೂ ಆ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಸರಿಸುಮಾರು ನಾಲ್ಕು ದಶಕಗಳ ಹಿಂದೆ ನಡೆದ ಆ ಎರಡು ಸಂಘರ್ಷಗಳನ್ನು ಇವತ್ತು ನೀವು ನೋಡಿದರೂ ಮನಿಲಾದಲ್ಲಿ ನಡೆದ ಜಿದ್ದಾಜಿದ್ದಿಯೇ ವಿಶ್ವ ಹೆವಿವೆಯ್ಟ್ ಬಾಕ್ಸಿಂಗ್ ಇತಿಹಾಸದಲ್ಲಿ ದಾಖಲಾದ ಅತ್ಯಂತ ರೋಚಕ ಹೋರಾಟವೆಂದು ನಿಮ್ಮ ಮನಸ್ಸಿಗನಿಸುತ್ತದೆ. ಅಂದು ಬಾಕ್ಸಿಂಗ್ ರಿಂಗ್್ನೊಳಗೆ ಪರಸ್ಪರರ ರಕ್ತಹೀರುವಂತೆ ಕಾದಾಡಿದ […]
Date : 07-11-2011 | 46 Comments. | Read More
1. ಜನಸೇವಾ ವಿದ್ಯಾಕೇಂದ್ರ 10 ಎಕರೆ 2. ರಾಷ್ಟ್ರೋತ್ಥಾನ ಪರಿಷತ್ 906 ಚದುರ ಮೀಟರ್ 3. ಸಂಸ್ಕಾರ ಭಾರತಿ 2000 ಚದರಡಿ 4. ಹಿಂದು ಜಾಗರಣ ವೇದಿಕೆ 2000 ಚದರಡಿ 5. ಮಹಿಳಾ ದಕ್ಷತಾ ಸಮಿತಿ 396 ಚದರ ಮೀಟರ್ 6. ಅನಂತ ಶಿಶು ನಿವಾಸ 3585 ಚದರ ಮೀಟರ್ ಇಂಡಿಯಾ ಟುಡೆ ಸಮೂಹಕ್ಕೆ ಸೇರಿದ ‘ಮೇಯ್ಲ್ ಟುಡೆ’ ಎಂಬ ದೈನಿಕ ನವೆಂಬರ್ 1ರಂದು “How Sangh Parivar benefitted from Yeddyurappa’s land largesse’ ಎಂಬ […]