Archive for August, 2011

ರಾಜಕೀಯ ಬಗ್ಗಡವಾಗಿರುವಾಗ ಹೆಗಡೆ ನೆನಪಾದರು!

Monday, August 29th, 2011
ರಾಜಕೀಯ ಬಗ್ಗಡವಾಗಿರುವಾಗ ಹೆಗಡೆ ನೆನಪಾದರು!

ಆ ಕುರುಚಲು ಗಡ್ಡ, ಹೆಗಲ ಮೇಲೊಂದು ಶಾಲು. ಅವರನ್ನು ನೋಡುವುದಕ್ಕೇ ಒಂಥರಾ ಖುಷಿ. ಮಾತು ನಿಧಾನ, ಆದರೆ ಬಲು ತೂಕ. ಕನ್ನಡವೂ ಸ್ಫುಟ, ಇಂಗ್ಲಿಷ್ ಮೇಲೂ ಪ್ರಭುತ್ವ. ಒಂದು ಸಣ್ಣ ಟೀಕೆಗೂ ಸ್ಪಂದಿಸುವ ಸಂವೇದನೆ. ಆರೋಪ ಎದುರಾದಾಗ ಎರಡು ಬಾರಿ ರಾಜೀನಾಮೆ ನೀಡಿದ ಅವರ ಸನ್ನಡತೆ. ಸಾಕಷ್ಟು ಗ್ಝ್ಛಜಡ ಇದ್ದರೂ ಗ್ಝ್ಠಡ್ಡಿಜಡ ಎದ್ದು ಕಾಣುವ ವ್ಯಕ್ತಿತ್ವ. ನಾವು ಶಾಲೆಗೆ ಹೋಗುವಾಗ ತೊಟ್ಟಿದ್ದು ಅವರು ಕೊಟ್ಟ ಉಚಿತ ಸಮವಸ್ತ್ರಗಳನ್ನೇ. ನಾವು ಓದಿದ್ದೂ ಅವರು ನೀಡಿದ ಪುಕ್ಕಟೆ ಪಠ್ಯಪುಸ್ತಕಗಳನ್ನೇ. ಅವರ [...]

ಅಣ್ಣಾ ಹಜಾರೆ ಅಮೆರಿಕದ ಕೈಗೊಂಬೆಯೇ?

Friday, August 26th, 2011
ಅಣ್ಣಾ ಹಜಾರೆ ಅಮೆರಿಕದ ಕೈಗೊಂಬೆಯೇ?

1. ನಿಮಗೊಂದು ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ, ಜನನ ಪ್ರಮಾಣ ಪತ್ರ, ಮರಣ ಪ್ರಮಾಣ ಪತ್ರ ಅಥವಾ ಯಾವುದೇ ಸರ್ಕಾರಿ ಪ್ರಮಾಣ ಪತ್ರಗಳ, ದಾಖಲೆಗಳ ಅಗತ್ಯ ಬಿದ್ದಾಗ ನೀವು ಅರ್ಜಿ ಹಾಕಿದ 15 ದಿನದೊಳಗೆ ಸಂಬಂಧಪಟ್ಟ ಅಧಿಕಾರಿ ಅದನ್ನು ನೀಡಬೇಕು. ಒಂದು ವೇಳೆ ಆತ ವಿಳಂಬ ಮಾಡಿದರೆ ಆತನ ಮೇಲಧಿಕಾರಿ ಹೊಣೆಗಾರನಾಗಬೇಕಾಗುತ್ತದೆ. ಆತನಿಗೂ ಇಂತಿಷ್ಟು ಕಾಲಾವಧಿಯನ್ನು ನಿಗದಿ ಮಾಡಲಾಗಿರುತ್ತದೆ. ಅಷ್ಟರೊಳಗಾಗಿ ಆತನೂ ಸೂಕ್ತ ದಾಖಲೆ ಅಥವಾ ಪ್ರಮಾಣ ಪತ್ರವನ್ನು ಒದಗಿಸದಿದ್ದರೆ ಲೋಕಾಯುಕ್ತ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು, [...]

ಚಾರಿತ್ರ್ಯವಧೆ, ಇದು ಅವರ ಮಾಮೂಲಿ ದಂಧೆ!

Sunday, August 21st, 2011
ಚಾರಿತ್ರ್ಯವಧೆ, ಇದು ಅವರ ಮಾಮೂಲಿ ದಂಧೆ!

ಅಣ್ಣಾ ಹಜಾರೆ ನಿಜಕ್ಕೂ ಭ್ರಷ್ಟ ವ್ಯಕ್ತಿಯೇ? ಅವರು ಸದಸ್ಯರಾಗಿರುವ ಹಿಂದ್ ಸಮಾಜ್ ಸ್ವಯಂ ಸೇವಾ ಸಂಸ್ಥೆ ನಿಜಕ್ಕೂ ನಿಧಿ ದುರ್ಬಳಕೆ ಮಾಡಿಕೊಂಡಿದೆಯೇ? 2003ರಲ್ಲಿ ನೀಡಲಾದ ನ್ಯಾಯಮೂರ್ತಿ ಸಾವಂತ್ ಸಮಿತಿ ವರದಿಯಲ್ಲಿ ಅಣ್ಣಾ ಹಜಾರೆ ಮೇಲೆ ದೋಷಾರೋಪಣೆ ಮಾಡಿರುವುದು ನಿಜವೇ? ಅಣ್ಣಾನನ್ನೇ ಕಟಕಟೆಗೆ ತಂದು ನಿಲ್ಲಿಸಲಾಗಿದೆಯೇ? ಅಥವಾ ಕಾಂಗ್ರೆಸ್ ನಡೆಸುತ್ತಿರುವ ಹುನ್ನಾರ ಇದಾಗಿದೆಯೇ? ಅಣ್ಣಾನ ವಿರುದ್ಧ ಕಾಂಗ್ರೆಸ್ ಪಿತೂರಿ ಮಾಡುತ್ತಿದೆಯೇ? ಅಣ್ಣಾನ ಪ್ರತಿಭಟನೆ ಹಿಂದೆ ಅಮೆರಿಕವಿದೆ ಎಂಬ ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರಶೀದ್ ಆಳ್ವಿ ಮಾತು ಅಣ್ಣಾನ ಮೇಲೆ [...]

ಸತ್ಯವನ್ನು ಬಟ್ ಆಫ್ ಎ ಜೋಕ್ ಮಾಡುತ್ತಿದ್ದಾರೆ ಈ ಸಂಜೀವ್ ಭಟ್!

Saturday, August 13th, 2011
ಸತ್ಯವನ್ನು ಬಟ್ ಆಫ್ ಎ ಜೋಕ್ ಮಾಡುತ್ತಿದ್ದಾರೆ ಈ ಸಂಜೀವ್ ಭಟ್!

ಸಂಜೀವ್ ಭಟ್, ಐಪಿಎಸ್, ಗುಜರಾತ್! ಒಬ್ಬ ಐಪಿಎಸ್ ಅಧಿಕಾರಿಯಾಗಿರಲು ನಾಲಾಯಕ್ಕು ಎಂದು ಗುಜರಾತ್ ಸರ್ಕಾರ ಈತನನ್ನು ಮೊನ್ನೆ ಮಂಗಳವಾರ ಅಮಾನತು ಮಾಡಿದೆ. ಅಖಿಲ ಭಾರತ ಸೇವಾ ನಿಯಮದ 3(1) ಕಲಂ ಅನ್ನು ಮುಂದಿಟ್ಟುಕೊಂಡು ಅಂತಹ ನಿರ್ಧಾರ ಕೈಗೊಳ್ಳಲಾಗಿದೆ. ಅದರ ಬೆನ್ನಲ್ಲೇ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ದೂಷಣೆ ಆರಂಭವಾಗಿದೆ. ಹೀಗೆ ಸಂಜೀವ್ ಭಟ್ ಮತ್ತೆ ಸುದ್ದಿಯಾಗುತ್ತಿದ್ದಾರೆ. ಅವರನ್ನು ಹುತಾತ್ಮರನ್ನಾಗಿ ಮಾಡುವ ಕೆಲಸ ಬಹಳ ಭರದಿಂದ ಸಾಗಿದೆ. ಅಂದಹಾಗೆ ಸಂಜೀವ್ ಭಟ್ ಯಾರೆಂದು ಗೊತ್ತಾಯಿತಲ್ಲವೆ? ನಮ್ಮ ಸೆಕ್ಯುಲರ್ ಬ್ರಿಗೇಡ್್ನ [...]

ಆರೆಸ್ಸೆಸ್ ಬಾಂಬ್ ತಯಾರಿಸುವ ಕಾರ್ಖಾನೆಯೇ?

Sunday, August 7th, 2011
ಆರೆಸ್ಸೆಸ್ ಬಾಂಬ್ ತಯಾರಿಸುವ ಕಾರ್ಖಾನೆಯೇ?

ನಾನು ಕ್ರೈಸ್ತ. ಜನ್ಮತಃ ಕ್ರೈಸ್ತ. ನಾನು ಪಾಲಿಸುವುದು, ಅನುಸರಿಸುವುದು, ವಿಶ್ವಾಸಿಸುವುದೂ ಕ್ರೈಸ್ತ ಧರ್ಮವನ್ನೇ. ಪ್ರತಿ ಭಾನುವಾರ ಚರ್ಚ್ ಗೆ ಹೋಗುತ್ತೇನೆ. ಆದರೆ… ನಾನು ಆರೆಸ್ಸೆಸ್ ನಿಂದಲೂ ಬಹಳಷ್ಟು ವಿಚಾರಗಳನ್ನು ಕಲಿತಿದ್ದೇನೆ. ನಾನು ಆರೆಸ್ಸೆಸ್ ನ ಅಭಿಮಾನಿಯಾಗಿದ್ದು 1979ರಲ್ಲಿ. ಆಗ ಕೋಯಿಕ್ಕೋಡ್ ನ ಜಿಲ್ಲಾ ನ್ಯಾಯಾಧೀಶನಾಗಿದ್ದೆ. ಸರಳ ಜೀವನ, ಉದಾತ್ತ ಚಿಂತನೆ ಆರೆಸ್ಸೆಸ್ ನ ಹೆಗ್ಗುರುತು. ಮಹಾತ್ಮ ಗಾಂಧೀಜಿ ಹತ್ಯೆಗೆ ಆರೆಸ್ಸೆಸ್ ಕಾರಣ ಎನ್ನುವ ಕೆಟ್ಟ ಪ್ರಚಾರಾಂದೋಲನ ಮೊದಲು ನಿಲ್ಲಬೇಕು. ಯಾವುದೋ ಒಂದು ಕಾಲದಲ್ಲಿ ಆರೆಸ್ಸೆಸ್ ಕಾರ್ಯಕರ್ತನಾಗಿದ್ದ ವ್ಯಕ್ತಿ [...]

download movies
buy soma
buy imitrex buy amoxicillin
buy lumigan online >
buy retin a >
buy ultram online >
buy imitrex online >