ಸಂಘಪರಿವಾರದಿಂದ ಬಂದು ‘ಸ್ವಂತ ಪರಿವಾರ’ ಕಟ್ಟಿಕೊಂಡರಲ್ಲ ಈ ವ್ಯಕ್ತಿ!
Saturday, July 30th, 2011
ಅವರೊಬ್ಬ ಹುಟ್ಟು ಹೋರಾಟಗಾರ, ಅವರ ಸಿಡುಕು ಮುಖದ ಹಿಂದಿದ್ದಿದ್ದು ಸಾತ್ವಿಕ ಸಿಟ್ಟು, ಮೂವತ್ತು ವರ್ಷ ಪರಿಶ್ರಮಪಟ್ಟು ಪಕ್ಷ ಕಟ್ಟಿದ್ದೇ ಅವರು. ಇಂತಹ ಹೊಗಳಿಕೆ ಗುಣವಾಚಕಗಳನ್ನು ನಾವು ಇದುವರೆಗೂ ಓದುತ್ತಾ ಕೇಳುತ್ತಾ ಬಂದಿದ್ದೆವು. ಹಾಗೆಂದೇ ನಂಬಿದ್ದೆವು. ಆದರೆ… ನಮ್ಮ ನಂಬಿಕೆ ನಿಜವಾಗಿತ್ತಾ? ನಾವು ಭಾವಿಸಿದಂತೆಯೇ ಇದ್ದರಾ ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪ? ಅವರ ಸಿಡುಕು ಮುಖದ ಹಿಂದೆ ಇದ್ದಿದ್ದು ನಿಜಕ್ಕೂ ಸಾತ್ವಿಕ ಸಿಟ್ಟಾ? ಇಷ್ಟಕ್ಕೂ ನಿಜವಾದ ಯಡಿಯೂರಪ್ಪ ಯಾರು? ನಾವು ನಂಬಿಕೊಂಡು, ಕಲ್ಪಿಸಿಕೊಂಡು, ಗೌರವಿಸಿಕೊಂಡು ಬಂದಿದ್ದ ವ್ಯಕ್ತಿಯಾ ಅಥವಾ ಈಗ [...]















