Archive for April, 2011

ಕಾಂಗ್ರೆಸ್-ಶಾಂತಿಭೂಷಣ್ ಮಧ್ಯೆ ಹಳೆ ವೈಷಮ್ಯವೇನಾದರೂ ಇದೆಯೇ?

Saturday, April 30th, 2011
ಕಾಂಗ್ರೆಸ್-ಶಾಂತಿಭೂಷಣ್ ಮಧ್ಯೆ ಹಳೆ ವೈಷಮ್ಯವೇನಾದರೂ ಇದೆಯೇ?

 ”ಇದು ಒಬ್ಬ ವ್ಯಕ್ತಿಯ ಪಿತೂರಿಯಲ್ಲ. ಸರಕಾರ ಹಾಗೂ ಕಾಂಗ್ರೆಸ್ ಪಕ್ಷದ ಒಳಗಿರುವ ಅನೇಕರು ಭಾಗಿಯಾಗಿದ್ದಾರೆ’ ಎಂದಿದ್ದಾರೆ ಮಾಜಿ ಕಾನೂನು ಸಚಿವ ಶಾಂತಿ ಭೂಷಣ್. ತಮ್ಮ ವಿರುದ್ಧ ಹೊರಬಿದ್ದಿರುವ ಸಿ.ಡಿ.ಯ ಹಿಂದಿರುವ ಕಾಣದ  “ಕೈ’ಗಳ ಬಗ್ಗೆ ಹಾಗೆ ಹೇಳಿದ್ದಾರೆ. 2008ರಲ್ಲಿ ನಾಗರೀಕ ಅಣು ಸಹಕಾರ ಒಪ್ಪಂದ ಸಲುವಾಗಿ ಕಮ್ಯುನಿಸ್ಟರು ಬೆಂಬಲ ವಾಪಸ್ ತೆಗೆದುಕೊಂಡಾಗ ಕಾಂಗ್ರೆಸ್ ಸರಕಾರವನ್ನು ಉಳಿಸಿದ್ದೇ ಅಮರ್ ಸಿಂಗ್. ಅಂತಹ ವ್ಯಕ್ತಿ ಪ್ರಸ್ತುತ ಹೊರಹಾಕಿರುವ ಸಿ.ಡಿ.ಯ ಹಿಂದೆ ಕಾಂಗ್ರೆಸ್ ಕೈವಾಡ ಇರುವುದನ್ನ ಯಾರೂ ತಳ್ಳಿಹಾಕಲು ಸಾಧ್ಯವಿಲ್ಲ. ಇಷ್ಟಕ್ಕೂ [...]

ಭಾರತ್ ಮಾತಾ ಕೀ ಜೈ ಅಂದರೆ ಜೋಕೆ!

Saturday, April 30th, 2011
ಭಾರತ್ ಮಾತಾ ಕೀ ಜೈ ಅಂದರೆ ಜೋಕೆ!

1923ರಲ್ಲಿ ಆಂಧ್ರದ ಕಾಕಿನಾಡದಲ್ಲಿ ಕಾಂಗ್ರೆಸ್್ನ ವಾರ್ಷಿಕ ಅಧಿವೇಶನಆಯೋಜನೆಯಾಗಿತ್ತು. ಅವು ‘ವಂದೇ ಮಾತರಂ’ನೊಂದಿಗೆ ಆರಂಭವಾಗುವುದು ಅದಾಗಲೇ ಸಂಪ್ರದಾಯವಾಗಿತ್ತು. ಸ್ವಾತಂತ್ರ್ಯ ಹೋರಾಟಗಾರರ ಪ್ರೇರಕ ಶಕ್ತಿಯಾಗಿದ್ದ ಆ ಗೀತೆಯನ್ನು ಹಾಡಬೇಕೆಂದು ಪಂಡಿತ್ ವಿಷ್ಣು ದಿಗಂಬರ ಪಲುಸ್ಕರ್್ಗೆ ಆಹ್ವಾನ ಕಳುಹಿಸಿಕೊಡಲಾಗಿತ್ತು. ಭಾರತೀಯ ಶಾಸ್ತ್ರೀಯ ಸಂಗೀತ ಕಲಿಸಲೆಂದೇ ಗಂಧರ್ವ ಮಹಾವಿದ್ಯಾಲಯ ರಚಿಸಿದ ಮಹಾನುಭಾವ ಅವರು. ಮಹಾತ್ಮ ಗಾಂಧೀಜಿಯವರ ಅಚ್ಚುಮೆಚ್ಚಿನ ‘ರಘುಪತಿ ರಾಘವ ರಾಜಾರಾಂ, ಪತೀತ ಪಾವನ ಸೀತಾರಾಂ’ ಭಜನೆಗೂ ಸಂಗೀತ ಸಂಯೋಜನೆ ಮಾಡಿದ್ದವರು ಅವರೇ. ಸ್ವಾತಂತ್ರ್ಯ ಚಳವಳಿಯ ನೇರ ಸಂಪರ್ಕ ಹೊಂದಿದ್ದ ಅವರು ಲೋಕಮಾನ್ಯ [...]

ಪಟೇಲ್, ಶಾಸ್ತ್ರಿಯನ್ನೇ ಬಿಡದವರು ಅಣ್ಣಾನನ್ನು ಉಳಿಸಿಯಾರೇ?

Saturday, April 23rd, 2011
ಪಟೇಲ್, ಶಾಸ್ತ್ರಿಯನ್ನೇ ಬಿಡದವರು ಅಣ್ಣಾನನ್ನು ಉಳಿಸಿಯಾರೇ?

ಖಂಡಿತ ಆ ಬಗ್ಗೆ ಅನುಮಾನಗಳು ಕಾಡುತ್ತಿವೆ. ಇತರರ ಯಶಸ್ಸನ್ನು ಸಹಿಸುವ ಗುಣ ನೆಹರು ಕುಟುಂಬದ ರಕ್ತದಲ್ಲೇ ಇಲ್ಲ. ಭಾರತ ರಾಷ್ಟ್ರೀಯ ಸೇನೆಯನ್ನು (INA) ಕಟ್ಟಿದ್ದ ಸುಭಾಷ್್ಚಂದ್ರ ಬೋಸ್, ಬರ್ಮಾ ಮೂಲಕ ಬ್ರಿಟಿಷರ ಮೇಲೆ ದಾಳಿ ಮಾಡುವುದಾಗಿ 1944ರಲ್ಲಿ ರೇಡಿಯೋ ಭಾಷಣ ಮಾಡಿದಾಗ  “ಸುಭಾಷ್ ವಿರುದ್ಧ ನಾನೇ ಖಡ್ಗ ಹಿಡಿದು ಹೋರಾಡುತ್ತೇನೆ’ ಎಂದು ಸಾರ್ವಜನಿಕವಾಗಿ ಹೇಳಿದ್ದ ವ್ಯಕ್ತಿ ಜವಾಹರಲಾಲ್ ನೆಹರು. ಅಧಿಕಾರಕ್ಕಾಗಿ ಯಾವ ಮಟ್ಟಕ್ಕೂ ಇಳಿಯುವ ಸೂಚನೆಯನ್ನು ಸ್ವಾತಂತ್ರ್ಯ ಪೂರ್ವದಲ್ಲೇ ನೀಡಿದ್ದರು. ಅಂತಹ ನೆಹರು ಕುಟುಂಬ ಇಡೀ ದೇಶವಾಸಿಗಳ [...]

ಅಣ್ಣಾಗೆ ಆ ಪರಿ ಬೆಂಬಲ ವ್ಯಕ್ತವಾಗಲು ಕಾರಣವೇನಣ್ಣಾ?

Saturday, April 16th, 2011
ಅಣ್ಣಾಗೆ ಆ ಪರಿ ಬೆಂಬಲ ವ್ಯಕ್ತವಾಗಲು ಕಾರಣವೇನಣ್ಣಾ?

ಇಂಥದ್ದೊಂದು ಪ್ರಶ್ನೆ ನಿಮ್ಮನ್ನೂ ಕಾಡಿರಬಹುದು! ಒಬ್ಬ ಅಣ್ಣಾ ಹಜಾರೆ ಲೋಕಪಾಲ್ ಮಸೂದೆಯನ್ನು ಜಾರಿಗೆ ತರಲೇಬೇಕೆಂದು ಉಪವಾಸಕ್ಕೆ ಕುಳಿತ ಮಾತ್ರಕ್ಕೆ ಇಡೀ ದೇಶವೇ ಅವರ ಹಿಂದೆ ಟೊಂಕ ಕಟ್ಟಿ ನಿಂತಿದ್ದೇಕೆ? ಸ್ವತಃ ಅಣ್ಣಾ ಅವರಿಗೇ ಅಶ್ಚರ್ಯವಾಗುವಂಥ ರೀತಿಯಲ್ಲಿ ದೇಶವಾಸಿಗಳಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಲು ಕಾರಣವಾದ ಅಂಶಗಳಾದರೂ ಯಾವುವು? ಅವರ ಉಪವಾಸಕ್ಕೆ ಇಡೀ ದೇಶದ ಸಾಕ್ಷಿಪ್ರಜ್ಞೆಯನ್ನು ಬಡಿದೆಬ್ಬಿಸುವ ಶಕ್ತಿ ಬಂದಿದ್ದಾದರೂ ಹೇಗೆ? ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರಂತಹ ಮೇರು ನಾಯಕ ಕರೆಕೊಟ್ಟ ಕಾರಣಕ್ಕೆ ವಿದ್ಯಾರ್ಥಿಗಳು ಶಾಲೆ-ಕಾಲೇಜು ತೊರೆದು ಹೋರಾಟಕ್ಕೆ [...]

New name!

Friday, April 15th, 2011
New name!

My beloved readers, I have no option but to change my column name coz of legal problem!! YNK used the same name, “Wonder Kannu” while writing for Udayavani and Kannada Prabha later. BUT…. I never thought Times Management will stoop to this level and claim my tittle as their’s since I had a job contract [...]

ಒಳ್ಳೆಯ ಚಿತ್ರವಾಗುವುದು ಸ್ವಲ್ಪದರಲ್ಲೇ ತಪ್ಪಿತಲ್ಲಾ ಎಂಬ ಬೇಸರ!

Sunday, April 10th, 2011
ಒಳ್ಳೆಯ ಚಿತ್ರವಾಗುವುದು ಸ್ವಲ್ಪದರಲ್ಲೇ ತಪ್ಪಿತಲ್ಲಾ ಎಂಬ ಬೇಸರ!

ಗಗನವೇ ಬಾಗಿ ಭುವಿಯನು ಕೇಳಿದಾ ಹಾಗೆ ಕಡಲು ಕರೆದಂತೆ ನದಿಯನು ಭೇಟಿಗೇ ಯಾರು ಬಂದಿರದ ಮನಸಲಿ… ನಿನ್ನ ಆಗಮನ ಈ ದಿನ… ನೀಡುವ ಮುನ್ನ ನಾನೆ ಆಮಂತ್ರಣಾ.                  ಹಾಗೂ ಸಂಜು ಮತ್ತು ಗೀತಾ ಸೇರಬೇಕು ಅಂತ ಬರೆದಾಗಿದೆ ಇಂದು ಬ್ರಹ್ಮನು ನನ್ನ ಜೀವನಕ್ಕಿಂತ… ನೀನೆ ನನ್ನ ಸ್ವಂತ..

Permanent stay!

Friday, April 8th, 2011

My beloved readers, I am happy to inform you that the City Civil Court has restricted Mr. Ravi Belagere from writing or publishing anything against me till the case is settled. After hearing arguments from both the parties, the honourable court issued permanent stay. Now I have to file a Civil suit to claim the [...]

ಜ್ಞಾನಪೀಠವೇಕೆ, ಸರಸ್ವತಿ ಸಮ್ಮಾನಕ್ಕೂ ಅಡ್ಡಗಾಲು ಹಾಕಿದ್ದರು!

Wednesday, April 6th, 2011
ಜ್ಞಾನಪೀಠವೇಕೆ, ಸರಸ್ವತಿ ಸಮ್ಮಾನಕ್ಕೂ ಅಡ್ಡಗಾಲು ಹಾಕಿದ್ದರು!

Interview by- ಪ್ರತಾಪ್ ಸಿಂಹ 1. ಪ್ರಶಸ್ತಿ, ಪುರಸ್ಕಾರ, ಸನ್ಮಾನಗಳಿಂದ ನೀವು ತುಂಬಾ ಮುಜುಗರಕ್ಕೊಳಗಾಗುತ್ತೀರಿ ಎಂಬುದು ನಿಮ್ಮೆಲ್ಲ ಓದುಗರಿಗೂ ಗೊತ್ತಿದೆ. ಆದರೆ, ಜ್ಞಾನಪೀಠಕ್ಕೂ ಮಿಗಿಲಾದ ‘ಸರಸ್ವತಿ ಸಮ್ಮಾನ್್’ ಹುಡುಕಿಕೊಂಡು ಬಂದಿರುವುದು ನಿಮಗಿಂತ ನಿಮ್ಮ ಓದುಗರಿಗೆ ಹೆಚ್ಚು ಸಂತಸ ತಂದಿದೆ. ಈ ಬಗ್ಗೆ ಏನನ್ನುತ್ತೀರಿ? ನನ್ನ ಓದುಗರಿಗೆ ಸಂತಸ ತಂದಿದೆ ಎಂಬುದು ನಿಜ.ಆದರೆ, ನಾನು ನಿರ್ಲಿಪ್ತನಾಗಿದ್ದೇನೆ. ಇಷ್ಟಕ್ಕೂ ಪ್ರಶಸ್ತಿಯಿಂದ ಒಂದು ಕೃತಿಯ ತೂಕ ಹೆಚ್ಚುವುದೂ ಇಲ್ಲ, ಕಡಿಮೆಯಾಗುವುದೂ ಇಲ್ಲ. ಒಂದು ಸಾಹಿತ್ಯ ಕೃತಿಯು ಎಷ್ಟು ಮುಂಬರುವ ತಲೆಮಾರುಗಳ ಹೃದಯವನ್ನು [...]

ಜಗದಚ್ಚರಿಗಳನ್ನು ಬೆರಳ ತುದಿಗೆ ನಿಲುಕಿಸಿದಾತ ನೇಪಥ್ಯದಲ್ಲೇ ನಿಂತ!

Tuesday, April 5th, 2011
ಜಗದಚ್ಚರಿಗಳನ್ನು ಬೆರಳ ತುದಿಗೆ ನಿಲುಕಿಸಿದಾತ ನೇಪಥ್ಯದಲ್ಲೇ ನಿಂತ!

  World Wide Web! ನೀವೊಬ್ಬ ಉದ್ಯೋಗಾಕಾಂಕ್ಷಿಯಾಗಿರಬಹುದು, ಯಾವುದೋ ಒಂದು ಸಂಶೋಧನೆಗೆ ಮಾಹಿತಿ ಹುಡುಕುತ್ತಿರಬಹುದು, ಯಾವುದಾದರೊಂದು ವಿಷಯ-ವಿಚಾರದ ಬಗ್ಗೆ ತಿಳಿದುಕೊಳ್ಳಬೇಕಾಗಿರಬಹುದು, ಮನರಂಜನೆ ಬೇಕಾಗಿರಬಹುದು, ಹೊಸ ಸ್ನೇಹಿತರನ್ನು ಮಾಡಿಕೊಳ್ಳಬೇಕೆನಿಸಿದರೂ, ಸಮಯ ಹರಣ ಮಾಡಬೇಕೆಂದಾದರೂ ಸರಿ, ಈ ವರ್ಲ್ಡ್ ವೈಡ್ ವೆಬ್ ಇದೆಯಲ್ಲಾ ಅದು ನೈಜ ಅರ್ಥದಲ್ಲಿ paradise of  opportunities! ಬಹುಶಃ ಯಾವೊಂದು ಸಂಶೋಧನೆಯೂ wwwನಷ್ಟು ಶೀಘ್ರವಾಗಿ, ಈ ಪರಿಯಾಗಿ ಆವರಿಸಿದ್ದಿಲ್ಲ. ಯಾವೊಂದು ಕ್ರಾಂತಿಯಿಂದಲೂ ಮನುಷ್ಯನಿಗೆ ಈ ರೀತಿಯ ಅಗತ್ಯತೆ, ಅನಿವಾರ್ಯತೆಯನ್ನು ಸೃಷ್ಟಿಸಲು ಸಾಧ್ಯವಾಗಿರಲಿಲ್ಲ. ಇಲ್ಲಿ ಎಲ್ಲರಿಗೂ ಪ್ರವೇಶವಿದೆ, [...]

BREAKING NEWS: SL BHYRAPPA chosen “SARASWATHI SAMMAN”!!

Tuesday, April 5th, 2011
BREAKING NEWS: SL BHYRAPPA chosen “SARASWATHI SAMMAN”!!

K.K. BIRLA FOUNDATION, Caxton House, Mezzanine Floor, 2-E, Jhandewalan Extension, New Delhi-55. (Ph. 011/23516483-84, Fax No. 23516480). 2/Pur(2009)11/ 5.4.2011 Dear Sir, As you know, the Saraswati Samman instituted by the K.K. Birla Foundation in 1991 is recognized as the most prestigious and the highest literary honour in the country. It is given every year on [...]

download movies
buy soma
buy imitrex buy amoxicillin
buy lumigan online >
buy retin a >
buy ultram online >
buy imitrex online >