2010, ಅಕ್ಟೋಬರ್ 19, ಮೋತಿಹಾರಿ, ಮುಜಫ್ಫರ್ಪುರ, ಬಿಹಾರ. ಅಂದು ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಬಿಜೆಪಿಯ ಮೇರು ನೇತಾರ ಲಾಲ್ ಕೃಷ್ಣ ಆಡ್ವಾಣಿಯವರು, ಗುಜರಾತ್ನ ವಿಕಾಸ ಪುರುಷ ನರೇಂದ್ರ ದಾಮೋದರದಾಸ್ ಮೋದಿಯವರ ಹೆಸರು ಪ್ರಸ್ತಾಪಿಸಿದರು. “ಗುಜರಾತ್ನಲ್ಲಿ ಮುಸ್ಲಿಮರು ಅತ್ಯುತ್ತಮ ಸೌಲಭ್ಯಗಳನ್ನು ಹೊಂದಿದ್ದಾರೆ ಹಾಗೂ ಗುಜರಾತ್ ಮುಸ್ಲಿಮರ ತಲಾ ಆದಾಯ ಇತರ ರಾಜ್ಯಗಳಿಗಿಂತ ಹೆಚ್ಚಿದೆ. ಮೋದಿಯವರನ್ನು ಮಾಧ್ಯಮಗಳು ನಕಾರಾತ್ಮಕವಾಗಿ ಚಿತ್ರಿಸುತ್ತವೆ ಎಂಬುದು ಬೇರೆ ಮಾತು, ಆದರೆ ಸಮಾಜದ ಎಲ್ಲ ಸ್ತರ, ಸಮುದಾಯಗಳಿಗೆ ಸೇರಿದ ಜನರೂ ಗುಜರಾತ್ನಲ್ಲಿ ಬಹಳ ಖುಷಿಯಿಂದಿದ್ದಾರೆ” ಎಂದರು. [...]