Archive for October, 2010

ಇಷ್ಟಕ್ಕೂ ಅರುಂಧತಿ ಯಾವಾಗ ಭಾರತದ ಭಾಗವಾಗಿದ್ದರು?

Sunday, October 31st, 2010
ಇಷ್ಟಕ್ಕೂ ಅರುಂಧತಿ ಯಾವಾಗ ಭಾರತದ ಭಾಗವಾಗಿದ್ದರು?

ನೂರೈವತ್ತು ವರ್ಷಗಳ ಕಾಲ ಬ್ರಿಟಿಷರ ನಿಯಂತ್ರಣ ದಲ್ಲಿದ್ದ ಹಾಂಕಾಂಗ್ 1997ರಲ್ಲಿ ಚೀನಾದ ಪಾಲಾಯಿತು. 442 ವರ್ಷಗಳ ಕಾಲ ಮಕಾವು ಅನ್ನು ಆಳಿದ ಪೋರ್ಚುಗೀಸರು 1999ರಲ್ಲಿ ತುಟಿಪಿಟಿಕ್ ಅನ್ನದೆ ಚೀನಾದ ವಶಕ್ಕೆ ನೀಡಿ ಕಾಲ್ಕಿತ್ತರು. ಇನ್ನು ರಾಜಕೀಯವಾಗಿ ಪ್ರತ್ಯೇಕಗೊಂಡಿದ್ದರೂ ತೈವಾನ್‌ನಲ್ಲಿ ಇಂದಿಗೂ ನಡೆಯುವುದು ಚೀನಾದ್ದೇ ದರ್ಬಾರು. ಕಳೆದ 2 ಸಾವಿರ ವರ್ಷಗಳಲ್ಲಿ ಚೀನಾವನ್ನು ಆಳಿದ ಹಾನ್, ತಾಂಗ್, ಸಾಂಗ್, ಮಿಂಗ್, ಯಾನ್ ಮತ್ತು ಕಿಂಗ್ ಈ ಎಲ್ಲ ವಂಶಾಡಳಿತಗಳೂ ಪಕ್ಕದ ವಿಯೆಟ್ನಾಂ ಅನ್ನು ಕಬಳಿಸಲು ಯತ್ನಿಸಿವೆ. 1974ರಲ್ಲಿ ನಡೆದ [...]

ವಾತ್ಸಲ್ಯದಲ್ಲೇ ಮೈಮರೆತರೆ ‘ವತ್ಸಲೆ’ಯೂ ಕ್ಷಮಿಸಳು!

Sunday, October 24th, 2010
ವಾತ್ಸಲ್ಯದಲ್ಲೇ ಮೈಮರೆತರೆ ‘ವತ್ಸಲೆ’ಯೂ ಕ್ಷಮಿಸಳು!

ಆ ದಿನವನ್ನು ಬಿಜೆಪಿಗೆ ಮತ ಹಾಕದವರೂ ಮರೆಯಲು ಸಾಧ್ಯವಿಲ್ಲ. 2008, ಮೇ 30 ರಂದು ವಿಧಾನಸೌಧದ ಮುಂದೆ ಸೇರಿದ್ದ ಜನಸಾಗರ ಇಂದಿಗೂ ಕಣ್ಣಮುಂದೆ ಬರುತ್ತದೆ. ಅದುವರೆಗೂ ಈ ರಾಜ್ಯ 18 ಮುಖ್ಯಮಂತ್ರಿಗಳನ್ನು ಕಂಡಿದ್ದರೂ ಬಿ.ಎಸ್. ಯಡಿಯೂರಪ್ಪನವರಿಗೆ ಕೊಟ್ಟಷ್ಟು ಪ್ರೀತಿ-ಆದರದಿಂದ ಬಹುಶಃ ಯಾರನ್ನೂ ಗದ್ದುಗೆ ಮೇಲೆ ಕೂರಿಸಿರಲಿಲ್ಲ. 1993ರಲ್ಲಿ ಡಾ. ರಾಜ್‌ಕುಮಾರ್ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಮಾಡುವ ಸಂದರ್ಭದಲ್ಲಿ ವಿಧಾನಸೌಧದ ಮುಂಭಾಗ ಎಷ್ಟು ಕಳೆಗಟ್ಟಿತ್ತೋ ಅದನ್ನೂ ಮೀರಿಸುವಂತಿತ್ತು ಅಂದಿನ ಸಂಭ್ರಮ. ನಾನು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ…. [...]

ಲಾರಾನನ್ನು ನೆನಪಿಸಿದ ಲಕ್ಷ್ಮಣ!

Tuesday, October 19th, 2010
ಲಾರಾನನ್ನು ನೆನಪಿಸಿದ ಲಕ್ಷ್ಮಣ!

ಆ ಪಂದ್ಯವನ್ನು ಯಾವ ಕ್ರಿಕೆಟ್ ಪ್ರೇಮಿಯೂ ಮರೆಯಲು ಸಾಧ್ಯವಿಲ್ಲ. ಅದು 1999 ಮಾರ್ಚ್ 26-30, ಬಾರ್ಬಡಾಸ್. ಅಂದು ನಡೆದಿದ್ದ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟೆಸ್ಟ್‌ನ ಮೊದಲ ಮೂರು ದಿನಗಳಲ್ಲೂ ಆಸ್ಟ್ರೇಲಿಯಾದ್ದೇ ಪ್ರಾಬಲ್ಯ. ನಾಯಕ ಸ್ಟೀವ್ ವಾ ಬಾರಿಸಿದ ಅಮೋಘ 199 ರನ್‌ಗಳ  ನೆರವಿನೊಂದಿಗೆ ಆಸ್ಟ್ರೇಲಿಯಾ 490 ರನ್‌ಗಳನ್ನು ಹೊಡೆಯಿತು. ವೆಸ್ಟ್ ಇಂಡೀಸ್ 98 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡು ಹೀನಾಯ ಸ್ಥಿತಿಯಲ್ಲಿತ್ತು. ಅಂತಹ ಸ್ಥಿತಿಯಲ್ಲಿ ಶೆರ್ವಿನ್ ಕ್ಯಾಂಬೆಲ್ ಮತ್ತು ರಿಡ್ಲಿ ಜೇಕಬ್ಸ್ ನೀಡಿದ 153 ರನ್‌ಗಳ [...]

ಅಲ್ಲಿ ಮೋದಿ ದಶಕದ ಹಾದಿ, ಇಲ್ಲಿ ಬಿಜೆಪಿಗೆ ಅಂಟಿದೆ ವ್ಯಾಧಿ!

Sunday, October 10th, 2010
ಅಲ್ಲಿ ಮೋದಿ ದಶಕದ ಹಾದಿ, ಇಲ್ಲಿ ಬಿಜೆಪಿಗೆ ಅಂಟಿದೆ ವ್ಯಾಧಿ!

ನಾವಿಲ್ಲಿ ಕಾಣುತ್ತಿರುವುದು ಏನೇನೂ ಅಲ್ಲ ಬಿಡಿ! ಅವತ್ತು ಶಂಕರ್ ಸಿನ್ಹ್ ವಾಫೇಲಾ ಇದಕ್ಕಿಂತ ದೊಡ್ಡ ಬಂಡಾಯವೆಬ್ಬಿಸಿದ್ದರು. 1995, ಮಾರ್ಚ್ 14ರಂದು ಕೇಶುಭಾಯಿ ಪಟೇಲ್ ಗುಜರಾತ್‌ನ ಮೊಟ್ಟಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಅದರ ಬೆನ್ನಲ್ಲೇ ಮುಖ್ಯಮಂತ್ರಿಯವರ ತವರಾದ ಸೌರಾಷ್ಟ್ರಕ್ಕೆ ಹೆಚ್ಚಿನ ಪ್ರಾತಿನಿಧಿತ್ವ ಕೊಡಲಾಗಿದೆ, ಯೋಗ್ಯ ವ್ಯಕ್ತಿಗಳಿಗೆ ಮಂತ್ರಿಗಿರಿ ಕೊಟ್ಟಿಲ್ಲ ಎಂದು ಅಧಿಕಾರಕ್ಕೆ ಬಂದ ಮೊದಲ ದಿನವೇ ಸಂಘರ್ಷ ಆರಂಭವಾಯಿತು. ರಾಜ್ಯ ಸರಕಾರದ 42 ನಿಗಮ ಮಂಡಳಿಗಳು ಹಾಗೂ ಪಾಲಿಕೆಗಳಿಗೆ ಅಧ್ಯಕ್ಷರನ್ನು ನೇಮಕ ಮಾಡುವಾಗಲಾದರೂ ನನ್ನನ್ನು ಕೇಳಬೇಕು ಎಂದು [...]

ಇತಿಹಾಸದ ವಾಮನ, ಆ ವ್ಯಕ್ತಿತ್ವದೆತ್ತರಕ್ಕೆ ನಮ್ಮ ನಮನ!

Sunday, October 3rd, 2010
ಇತಿಹಾಸದ ವಾಮನ, ಆ ವ್ಯಕ್ತಿತ್ವದೆತ್ತರಕ್ಕೆ ನಮ್ಮ ನಮನ!

After Nehru, Who? 1964ರ ಮೇ 27ರಂದು ಇಂಥದ್ದೊಂದು ಪ್ರಶ್ನೆ ಕಾಶ್ಮೀರ ದಿಂದ ಕನ್ಯಾಕುಮಾರಿಯವರೆಗೂ ಕಾಡಿದ್ದು ಖಂಡಿತ ನಿಜ. ಸ್ವತಂತ್ರ ಭಾರತದ ಮೊಟ್ಟ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಹೃದಯಾಘಾತದಿಂದ ನಿಧನರಾಗಿದ್ದರು. ಹಾಗಂತ ಆಳುವ ಕಾಂಗ್ರೆಸ್ ಪಕ್ಷದಲ್ಲಿ ಈ ದೇಶವನ್ನು ಮುನ್ನಡೆಸು ವಂಥ ನಾಯಕರೇ ಇಲ್ಲ ಎಂಬ ಕಾರಣಕ್ಕೆ ಆ ಪ್ರಶ್ನೆ ಮೂಡಿರಲಿಲ್ಲ. ಭಾರತಕ್ಕೆ ಸಮರ್ಥ ನಾಯಕತ್ವ ನೀಡುತ್ತಾರೆ, ಪ್ರಗತಿಯ ಪಥ ದಲ್ಲಿ ಕೊಂಡೊಯ್ಯುತ್ತಾರೆ, ಇನ್ನು ಮುಂದಾದರೂ ನಮ್ಮೆಲ್ಲರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಾರೆ, ಹಿತಾಸಕ್ತಿಯನ್ನು ಕಾಪಾಡುತ್ತಾರೆ ಎಂಬ [...]

download movies
buy soma
buy imitrex buy amoxicillin
buy lumigan online >
buy retin a >
buy ultram online >
buy imitrex online >