
ಪಂಡಿತ್ ವಿಷ್ಣು ದಿಗಂಬರ ಪಲುಸ್ಕರ್!
ಈ ಹೆಸರು ಯಾರಿಗೆ ತಾನೇ ಗೊತ್ತಿಲ್ಲ? ಹತ್ತೊಂ ಬತ್ತನೇ ಶತಮಾನದ ಅಂತ್ಯ ಹಾಗೂ ಇಪ್ಪತ್ತನೇ ಶತಮಾನದ ಆದಿಯಲ್ಲಿ ಅವರದ್ದು ದೊಡ್ಡ ಹೆಸರು. 1872ರಲ್ಲಿ ಜನಿಸಿದ ಪಲುಸ್ಕರ್ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಭೀಷ್ಮಪಿತಾಮಹನಂತಿದ್ದರು. ಮಹಾತ್ಮ ಗಾಂಧೀಜಿಯವರ ಪ್ರೀತಿಯ ‘ರಘುಪತಿ ರಾಘವ ರಾಜಾರಾಂ’ ಹಾಡಿಗೆ ರಾಗ ಸಂಯೋಜಿಸಿದ ಮಹಾನ್ ಸಂಗೀತಗಾರ ಅವರು. ನಮ್ಮ ಶಾಸ್ತ್ರೀಯ ಸಂಗೀತವನ್ನು ಕಲಿಸಲೆಂದು 1901ರಲ್ಲಿ ಲಾಹೋರ್ ನಲ್ಲಿ ‘ಗಂಧರ್ವ ಮಹಾವಿದ್ಯಾಲಯ’ ಸ್ಥಾಪಿಸಿದ್ದರು. ಸಾರ್ವ ಜನಿಕರು ನೀಡಿದ ದೇಣಿಗೆ ಮೇಲೆ ನಡೆಯುತ್ತಿದ್ದ ಮೊದಲ ಸಂಗೀತ ಶಾಲೆಯದು. ಆನಂತರ ಮುಂಬೈನಲ್ಲೂ ಅದರ ಒಂದು ಶಾಖೆಯನ್ನು ತೆರೆದಿದ್ದರು. ಪಂಡಿತ್ ಡಿ.ವಿ. ಪಲುಸ್ಕರ್, ಪಂಡಿತ್ ನಾರಾಯಣರಾವ್ ವ್ಯಾಸ್ ಮತ್ತು ಪಂಡಿತ್ ಓಂಕಾರ್ನಾಥ್ ಠಾಕೂರ್ ಮುಂತಾದ ಸಂಗೀತ ಕ್ಷೇತ್ರದ ದಿಗ್ಗಜರಿಗೆ ಪಲುಸ್ಕರ್ ಅವರೇ ಗುರುಗಳಾಗಿದ್ದರು. ಸ್ವಾತಂತ್ರ್ಯ ಆಂದೋಲನದ ನೇರ ಸಂಪರ್ಕವಿದ್ದ ಅವರಿಗೆ ಲೋಕಮಾನ್ಯ ತಿಲಕ್, ಲಾಲಾ ಲಜಪತ್ ರಾಯ್, ಮಹಾತ್ಮ ಗಾಂಧೀಜಿ ಮುಂತಾದವರು ಚಿರಪರಿಚಿತ ರಾಗಿದ್ದರು.
೧೯೨೩ರಲ್ಲಿ ಆಂಧ್ರಪ್ರದೇಶದ ಕಾಕಿನಾಡದಲ್ಲಿ ಕಾಂಗ್ರೆಸ್ ಅಧಿವೇಶನ ಆಯೋಜನೆಯಾಗಿತ್ತು.
‘ವಂದೇ ಮಾತರಂ’ ಹಾಡಲೆಂದು ಪಂಡಿತ್ ವಿಷ್ಣು ದಿಗಂಬರ ಪಲುಸ್ಕರ್ ಆಗಮಿಸಿದ್ದರು. ಕಾಂಗ್ರೆಸ್ ಅಧಿವೇಶನಗಳಲ್ಲೆಲ್ಲ ವಂದೇ ಮಾತರಂ ಹಾಡುವ ಪರಂಪರೆಯನ್ನು 1915ರಿಂದ ಪಲುಸ್ಕರರೇ ಹುಟ್ಟುಹಾಕಿದ್ದರು. ತಾವೇ ರಾಗ ಹಾಕಿದ್ದ ಧಾಟಿಯಲ್ಲಿ ವಂದೇ ಮಾತರಂ ಹಾಡುವುದು ಅವರ ರೂಢಿ. ಅದನ್ನು ತಿಲಕ್, ಗಾಂಧೀಜಿ ಸೇರಿದಂತೆ ನಾಡೇ ಒಪ್ಪಿಕೊಂಡಿತ್ತು. ಅಂದು ಕಾಕಿನಾಡದಲ್ಲಿ ಪಲುಸ್ಕರರು ‘ವಂದೇ ಮಾತರಂ’ ಹಾಡಲು ನಿಂತಾಗ ಕಾಂಗ್ರೆಸ್ ಅಧ್ಯಕ್ಷರಾಗಿದ್ದ(ಮುಸ್ಲಿಂ ಲೀಗ್ ಸ್ಥಾಪಕರಲ್ಲಿಯೂ ಒಬ್ಬರಾಗಿದ್ದ) ಮೌಲಾನಾ ಅಹಮದ್ ಅಲಿ ಮಧ್ಯದಲ್ಲೇ ತಡೆದರು. ಅವರ ಸೋದರ ಶೌಕತ್ ಅಲಿ ಕೂಡ ವಂದೇ ಮಾತರಂ ಹಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದರು.
ಇಸ್ಲಾಂನ ಕಾನೂನಿನಂತೆ ಸಂಗೀತ ನಿಷಿದ್ಧ ಎಂದರು!
ಆ ಮಾತನ್ನು ಕೇಳಿದ್ದೇ ತಡ, ಪಂಡಿತ ಪಲುಸ್ಕರರು ಕೆರಳಿ ಕೆಂಡವಾದರು. ಸ್ವಾಮಿ ಇದು ಕಾಂಗ್ರೆಸ್ನ ರಾಷ್ಟ್ರೀಯ ಮಹಾಸಭೆ. ಇದು ಯಾವುದೇ ಒಂದು ಕೋಮಿನ ಗುತ್ತಿಗೆ ಅಲ್ಲ. ಮುಸ್ಲಿಮರ ಮಸೀದಿಯೂ ಅಲ್ಲ. ಹೀಗಿರುವಾಗ ಈ ರಾಷ್ಟ್ರೀಯ ವೇದಿಕೆಯ ಮೇಲೆ ‘ವಂದೇ ಮಾತರಂ’ ಹಾಡಲು ಅಡ್ಡಿಪಡಿಸಲು ನಿಮಗ್ಯಾವ ಅಧಿಕಾರವಿದೆ? ಸಂಗೀತ ನಿಮ್ಮ ಮತಕ್ಕೆ ನಿಷಿದ್ಧ ಎಂಬುದಾದರೆ ನಿಮ್ಮ ಅಧ್ಯಕ್ಷ ಮೆರವಣಿಗೆಯಲ್ಲಿ ವಿಜೃಂಭಣೆಯಿಂದ ಬಾಜಾ ಭಜಂತ್ರಿ ನಡೆದಾಗ ಅದು ಮಾತ್ರ ಮೌಲಾನಾ ಸಾಹೇಬರಿಗೆ ಹೇಗೆ ಹಿಡಿಸಿತು?” ಎಂದು ಪಲುಸ್ಕರ್ ಸವಾಲು ಹಾಕಿದರು. ವಂದೇ ಮಾತರಂಗೆ ವಿರೋಧ ಹೊಂದಿರುವವರು ಧಾರಾಳವಾಗಿ ಅಧಿವೇಶನದಿಂದ ಹೊರಹೋಗಬಹುದು ಎಂದು ಜಾಡಿಸಿದರು! ಇಂತಹ ಪ್ರತಿಕ್ರಿಯೆಯಿಂದ ಕಕ್ಕಾಬಿಕ್ಕಿಯಾದ ಮೌಲಾನಾ ಮಹಮದ್ ಅಲಿ ನಿರುತ್ತರರಾಗಿ ನಿಂತಿದ್ದರು. ಪಲುಸ್ಕರ್ ವಂದೇ ಮಾತರಂ ಅನ್ನು ಸಂಪೂರ್ಣವಾಗಿ ಹಾಡಿ, ಭಾರತಾಂಬೆಗೆ ವಂದಿಸಿ ಕೆಳಗಿಳಿದರು. ಅವತ್ತು ಯಾವ ವಿದ್ರೋಹಿ ಮನಸ್ಸುಗಳು ವಿಭಜನೆಯ ವಿಷಬೀಜ ಬಿತ್ತಿ, 1947ರಲ್ಲಿ ದೇಶವನ್ನು ಒಡೆದವೋ ಆ ಮನಸುಗಳು ಇಂದಿಗೂ ಭಾರತದಲ್ಲಿವೆ!
“ನಾವು ದೇಶವನ್ನು ಪ್ರೀತಿಸುತ್ತೇವೆ. ಆದರೆ ಪೂಜಿಸುವುದಕ್ಕಾಗುವುದಿಲ್ಲ. ವಂದೇ ಮಾತರಂ ಮಾತೃಭೂಮಿಯನ್ನು ಆರಾಧಿಸುತ್ತದೆ, ನಾವು ಅಲ್ಲಾಹುನನ್ನು ಬಿಟ್ಟರೆ ಬೇರಾರನ್ನೂ ಆರಾಧಿಸುವಂತಿಲ್ಲ”.
“ಮುಸ್ಲಿಮರಾರೂ ವಂದೇ ಮಾತರಂ ಹಾಡಕೂಡದು”
“ಒಂದು ವೇಳೆ ಈ ಹಾಡನ್ನು ಕಡ್ಡಾಯ ಮಾಡಿದರೆ ಅಂತಹ ಶಾಲೆಗಳಿಂದ ಮುಸ್ಲಿಮರು ತಮ್ಮ ಮಕ್ಕಳನ್ನು ಹಿಂತೆಗೆದುಕೊಳ್ಳ ಬೇಕು”.
ಹಾಗೆಂದು ಉತ್ತರ ಪ್ರದೇಶದ ಮುಸ್ಲಿಂ ಸಂಘಟನೆ ‘ಜಮಾತೆ ಉಲೆಮಾ ಇ ಹಿಂದ್’ ನವೆಂಬರ್ ೩ರಂದು ನಿರ್ಣಯವೊಂದನ್ನು ಮಂಡಿಸಿ, ಅಂಗೀಕರಿಸಿದೆ! ಆ ಮೂಲಕ ತನ್ನ ವಿದ್ರೋಹಿ ಮನಸ್ಥಿತಿಯನ್ನು ಮತ್ತೆ ಹೊರಹಾಕಿದೆ. ಇದಕ್ಕೆ ಎಸ್.ಕ್ಯು.ಆರ್. ಇಲ್ಯಾಸಿ, ಝಫರ್ಯಾಬ್ ಜಿಲಾನಿ ಮುಂತಾದ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸದಸ್ಯರೂ ಕೂಡ ಸಹಮತ ವ್ಯಕ್ತಪಡಿಸಿರುವುದನ್ನು ನೋಡಿದರಂತೂ ಮನಸಿಗೆ ಕಸಿವಿಸಿಯಾಗುತ್ತದೆ. ಈ ದೇಶದಲ್ಲಿ ಜೈನರಿದ್ದಾರೆ, ಬೌದ್ಧರಿದ್ದಾರೆ, ಕ್ರೈಸ್ತರಿದ್ದಾರೆ. ಇವರ್ಯಾರಿಗೂ ಚುಚ್ಚದ ವಂದೇ ಮಾತರಂ ಮುಸ್ಲಿಮರಿಗೇ ಏಕೆ ನೋವು ತರುತ್ತದೆ? ತಾಯಿ ಭಾರತಿಯನ್ನು ಭಜಿಸುವ ಗೀತೆಯನ್ನೇ ಹಾಡದವರು ದೇಶಕ್ಕಾಗಿ ಪ್ರಾಣ ತೆತ್ತಾರೆ? ಇದೆಂತಹ ಕೃತಘ್ನ ಮನಃಸ್ಥಿತಿ? ಮಾತೃಭೂಮಿಗೆ ನಮಿಸುವುದಿಲ್ಲ ಎಂದರೆ ಇನ್ನಾರಿಗೆ ನಮಸ್ಕರಿಸುತ್ತಾರೆ? ಭಾರತ ಮಾತೆಗೆ ನಮಿಸಲು ಧರ್ಮವೇಕೆ ಅಡ್ಡ ಬರಬೇಕು? ಅನ್ನ, ನೆಲೆ ನೀಡಿದ ಭೂಮಿಗೇ ನಮಸ್ಕರಿಸದವರು ಒಂದು ವೇಳೆ ಪಾಕಿಸ್ತಾನ ಅಥವಾ ಬಾಂಗ್ಲಾದೇಶವೇನಾದರೂ ನಮ್ಮ ಮೇಲೆ ದಾಳಿ ಮಾಡಿದರೆ ದೇಶರಕ್ಷಣೆಗೆ ಮುಂದಾಗುತ್ತಾರೆ ಎಂದು ಹೇಗೆತಾನೇ ನಿರೀಕ್ಷಿಸುವುದು? ದೇಶಕ್ಕಿಂತ ಧರ್ಮವೇ ಮೇಲು ಎಂದಾದರೆ ಸ್ವಧರ್ಮೀಯರಾದ ಪಾಕಿಸ್ತಾನಿಯರ ಜತೆ ಕೈಜೋಡಿಸುವುದಿಲ್ಲ ಎಂಬುದಕ್ಕೆ ಯಾವ ಗ್ಯಾರಂಟಿ? ಎಲ್ಲ ಮುಸ್ಲಿಮರೂ ಜಮಾತೆ ಉಲೇಮಾ ಮಾತು ಕೇಳುತ್ತಾರೆ, ದೇಶಕ್ಕೆ ವಂದಿಸಲು ನಕಾರ ವ್ಯಕ್ತಪಡಿಸುತ್ತಾರೆ ಅಂತ ಹೇಳುತ್ತಿಲ್ಲ. ಮುಸ್ಲಿಂ ಸಮುದಾಯದಲ್ಲಿ ಸಾಕಷ್ಟು ದೇಶಪ್ರೇಮಿಗಳಿದ್ದಾರೆ, ಈ ದೇಶದ ಅಭಿವೃದ್ಧಿಯಲ್ಲಿ ಮುಸ್ಲಿಮರ ಕೊಡುಗೆಯೂ ಸಾಕಷ್ಟಿದೆ. ಆದರೆ ವಂದೇ ಮಾತರಂ ಅನ್ನೇ ವಿವಾದದ ವಸ್ತುವನ್ನಾಗಿಸಿಕೊಂಡು, ಆ ಮೂಲಕ ಧರ್ಮದ ಆಧಾರದ ಮೇಲೆ ದೇಶ ಒಡೆದು ಪ್ರತ್ಯೇಕ ರಾಷ್ಟ್ರವನ್ನು ಪಡೆದುಕೊಂಡ ನಂತರವೂ ಜಮಾತೆ ಉಲೇಮಾದಂತಹ ಸಂಘಟನೆಗಳು ಸ್ವಾತಂತ್ರ್ಯ ಪೂರ್ವದಲ್ಲಿದ್ದ ವಿದ್ರೋಹಿ ಮನಸ್ಥಿತಿಯನ್ನು ಏಕೆ ಇಂದಿಗೂ ಮುಂದುವರಿಸಿಕೊಂಡು ಬರುತ್ತಿವೆ? ಏಕೆ ಧರ್ಮವನ್ನು ಬದಿಗಿಟ್ಟು ನಾವೆಲ್ಲರೂ ಒಂದೇ ಎಂಬಂತೆ ವರ್ತಿಸುವುದಿಲ್ಲ? ಏಕೆ ರಾಷ್ಟ್ರೀಯ ಮುಖ್ಯವಾಹಿನಿಯಿಂದ ದೂರ ಹಾಗೂ ಪ್ರತ್ಯೇಕವಾಗಿರಲು ಪ್ರಯತ್ನಿಸುತ್ತಿವೆ? ಮುಸ್ಲಿಮರೇ ಆದ ಖ್ಯಾತ ಸಂಗೀತಗಾರ ಎ.ಆರ್. ರೆಹಮಾನ್ಗೆ, ಖ್ಯಾತ ಸಿನಿಮಾ ಸಾಹಿತ್ಯ ರಚನೆಕಾರ ಜಾವೆದ್ ಅಖ್ತರ್ಗೆ ಹಾಡಲು ಅವಮಾನವೆನಿಸದ ವಂದೇ ಮಾತರಂ ಉಳಿದ ಮುಸ್ಲಿಮರಿಗೇಕೆ ಅದೇ ದೊಡ್ಡ ಅಡಚಣೆಯಾಗುತ್ತದೆ? ಅಷ್ಟಕ್ಕೂ ವಂದೇ ಮಾತರಂನಲ್ಲಿ ಮುಸ್ಲಿಮರಿಗೆ ನೋವುಂಟಾಗುವಂಥದ್ದೇನಿದೆ?
ವಂದೇ ಮಾತರಂ
ಸುಜಲಾಂ ಸುಫಲಾಂ ಮಲಯಜ ಶೀತಲಾಂ
ಸಸ್ಯಶ್ಯಾಮಲಾಂ ಮಾತರಂ
ಈ ಹಾಡನ್ನು ಹಾಡಲು ಏಕೆ ಧರ್ಮ ಅಡ್ಡಬರಬೇಕು? ಅನ್ನ, ನೆಲೆ ನೀಡಿದ ಭಾರತಾಂಬೆಗೆ, ‘ತಾಯೆ ನಿನಗೆ ವಂದಿಸುವೆ’(ವಂದೇ ಮಾತರಂ) ಎಂದು ಹಾಡಲು ಏನು ತ್ರಾಸ? ಬಂಕಿಮ ಚಂದ್ರರು ಇಂಥದ್ದೊಂದು ದೇಶಪ್ರೇಮ ಉಕ್ಕಿಸುವ ಗೀತೆಯನ್ನು ಬರೆದಿ ದ್ದಾದರೂ ಏಕೆ?
ಈಗಿನ ಪಶ್ಚಿಮ ಬಂಗಾಳದ, 24 ಪರಗಣ ಜಿಲ್ಲೆಯ, ಕಾಂತಲ ಪದದಲ್ಲಿ ಬಂಕಿಮ ಚಂದ್ರರು ಜನಿಸುವ ವೇಳೆಗೆ (1828, ಜೂನ್ 27ರಂದು) ದೇಶಕ್ಕೆ ನಿಧಾನವಾಗಿ ಸ್ವಾತಂತ್ರ್ಯದ ಜ್ವರವೇರ ತೊಡಗಿತ್ತು. ಅಂತಹ ಕಾಲದ ಶಿಶುವಾದ ಬಂಕಿಮಚಂದ್ರರಲ್ಲೂ ದೇಶಪ್ರೇಮ ಮಿಳಿತಗೊಂಡಿತ್ತು. 1875ರಲ್ಲಿ ಅವರು ರಜೆಗೆಂದು ರೈಲನ್ನೇರಿ ಮನೆಗೆ ಹೊರಟಿದ್ದರು. ಹಾಗೆ ಹಾದುಹೋಗುವಾಗ ನಗರವನ್ನು ದಾಟಿ ರೈಲು ಪ್ರಕೃತಿಯ ಮಡಿಲಲ್ಲಿ ಪ್ರಯಾಣಿಸ ತೊಡಗಿತು. ಆ ಬೆಟ್ಟ-ಗುಡ್ಡ, ಹಸಿರಿನಿಂದ ಮೈದುಂಬಿದ್ದ ಬಯಲು, ಚಳಿಗಾಲದಲ್ಲಿ ಅರಳಿನಿಂತಿದ್ದ ಬಣ್ಣಬಣ್ಣದ ಹೂವುಗಳು, ಅವುಗಳ ಅಂದವನ್ನು ಮತ್ತಷ್ಟು ಹೆಚ್ಚಿಸಿದ್ದ ನದಿ, ಸರೋವರಗಳು, ಒಟ್ಟಾರೆ ಪ್ರಕೃತಿ ಸೌಂದರ್ಯ. ಹೀಗೆ ಭಾರತಮಾತೆಯ ಸಿರಿ ಬಂಕಿಮಚಂದ್ರರ ಮನಸೂರೆಗೊಳಿಸಿತು. ಕವಿಹೃದಯ ತುಂಬಿತು, ಭಾವನೆಗಳು ಉಕ್ಕಿಹರಿಯಲಾರಂಭಿಸಿದವು.
ಆಗ ಹುಟ್ಟಿದ್ದೇ ‘ವಂದೇ ಮಾತರಂ’!
‘ತಾಯೆ ನಿನಗೆ ವಂದಿಸುವೆ’ ಎಂಬ ಕವಿಯ ಒಂದೊಂದು ಸಾಲುಗಳಲ್ಲೂ ಭರತಖಂಡ ಸೌಂದರ್ಯವನ್ನು ಹಿಡಿದಿಟ್ಟರು, ತನಗೆ ಜನ್ಮ ನೀಡಿದ್ದಕ್ಕಾಗಿ ಈ ಭೂಮಿಗೆ ಧನ್ಯತೆಯನ್ನು ಸೂಚಿಸಿದರು. ಇದರಲ್ಲಿ ಖಂಡಿತ ಪೂಜ್ಯಭಾವನೆಯಿದೆ, ತಾಯಿಯ ಆರಾಧನೆ ಇದೆ. ಅದರಲ್ಲಿ ತಪ್ಪೇನಿದೆ? ಒಬ್ಬ ಹೆಣ್ಣಲ್ಲಿ ಹೆಂಡತಿ, ಮಗಳು, ಜನ್ಮದಾತೆ ಎಲ್ಲವನ್ನೂ ಕಂಡುಕೊಳ್ಳುವ ಸಂಸ್ಕೃತಿ ನಮ್ಮದು. ದುರ್ಗೆ, ಲಕ್ಷ್ಮೀ ಎಲ್ಲರನ್ನೂ ಭಾರತಮಾತೆಯಲ್ಲೇ ಕಂಡುಕೊಳ್ಳಲು ಬಂಕಿಮಚಂದ್ರರು ಪ್ರಯತ್ನಿಸಿದ್ದಾರೆ ಅಷ್ಟೇ. ವಂದೇ ಮಾತರಂನ ಹೀರೋ ಭಾರತಮಾತೆಯೇ ಹೊರತು ಯಾವ ದೇವ-ದೇವತೆಗಳೂ ಅಲ್ಲ. ಹಾಗಾಗಿಯೇ ಅದು ಸ್ವಾತಂತ್ರ್ಯ ಹೋರಾಟಗಾರರಿಗೂ ಪ್ರೇರಣೆಯಾಯಿತು.
ಬಾರಿಸಾಲ್ ಕೂಡ ಪಶ್ಚಿಮ ಬಂಗಾಳದಲ್ಲಿದೆ. 1906, ಏಪ್ರಿಲ್ 14ರಂದು ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನ ಬಾರಿಸಾಲ್ನಲ್ಲಿ ಆಯೋಜನೆಯಾಗಿತ್ತು. ಭಾರತಮಾತೆಯನ್ನು ದಾಸ್ಯಮುಕ್ತಳನ್ನಾಗಿ ಮಾಡುವ ಶಪಥ ತೆಗೆದುಕೊಳ್ಳುವ ಇರಾದೆ ಅಲ್ಲಿತ್ತು. ಭಾರೀ ಜನಸ್ತೋಮವೇ ನೆರೆದಿತ್ತು. ಸುರೇಂದ್ರನಾಥ್ ಬ್ಯಾನರ್ಜಿ, ಬಿಪಿನ್ ಚಂದ್ರಪಾಲ್, ಶ್ರೀ ಅರವಿಂದರ ನೇತೃತ್ವದಲ್ಲಿ ಜನ ಬಾರಿಸಾಲ್ನ ಬೀದಿ ಬೀದಿಗಳಲ್ಲಿ ಸಾಗುತ್ತಾ ಅಧಿವೇಶನ ನಡೆಯುವ ಸ್ಥಳಕ್ಕೆ ಹೊರಟಿದ್ದರು. ಲಾರ್ಡ್ ಕರ್ಝನ್ನನ ಪ್ರತಿಕೃತಿ ದಹನ ಮಾಡಿದ ಜನಸ್ತೋಮ ಇದ್ದಕ್ಕಿದ್ದಂತೆಯೇ ‘ವಂದೇ ಮಾತರಂ’ ಹಾಡತೊಡಗಿತು. ಆ ಹಾಡಿನ ಧ್ವನಿಗೆ ಇಡೀ ನಗರವೇ ರೋಮಾಂಚನಗೊಂಡಿತು, ರೋಮಗಳು ಸೆಟೆದುನಿಂತವು, ರಕ್ತನಾಡಿಗಳಲ್ಲಿ ದೇಶಪ್ರೇಮ ಉಕ್ಕಿಹರಿಯೊಡಗಿತು. ಸ್ವಾಮಿ ವಿವೇಕಾನಂದರು ಯಾವುದನ್ನು ‘ಅಧಾತ್ಮಿಕ, ಸಾಂಸ್ಕೃತಿಕ ರಾಷ್ಟ್ರೀಯ ವಾದ’ ಎಂದು ಕರೆದಿದ್ದರೋ ಅದು ಹೊರಹೊಮ್ಮಿದ್ದೇ ವಂದೇ ಮಾತರಂ ಗೀತೆಯಿಂದ! ಆ ಕಾರಣಕ್ಕಾಗಿಯೇ ಅದು ಸಕಲರಿಗೂ ಸ್ಫೂರ್ತಿಯಾಯಿತು.
ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಎಲ್ಲರೂ ಹೊರಟ ರಾದರೂ ಎಲ್ಲರ ಹಾದಿಯೂ ಒಂದೇ ಆಗಿರಲಿಲ್ಲ, ಎಲ್ಲರೂ ಒಂದೇ ಸಂಘಟನೆಯ ಅಡಿಯೂ ಒಂದಾಗಿರಲಿಲ್ಲ. ಆದರೆ ಸೌಮ್ಯವಾದಿಗಳು, ಉಗ್ರವಾದಿಗಳು, ಅಹಿಂಸಾವಾದಿಗಳು, ಕ್ರಾಂತಿಕಾರಿಗಳು, ಅದು ಯಾರೇ ಆಗಿರಲಿ ಎಲ್ಲರಿಗೂ ಪ್ರೇರಣೆಯಾಗಿದ್ದ ಸಮಾನ ಅಂಶ ಮಾತ್ರ ‘ವಂದೇ ಮಾತರಂ’. ಈ ನೆಲ, ಜಲ, ಪ್ರಕೃತಿ ಸಿರಿಯನ್ನು ಹಾಡಿಹೊಗಳುವ ಹಾಡು ಯಾರಿಗೆ ತಾನೇ ಪ್ರೇರಣೆ ನೀಡುವುದಿಲ್ಲ? ವಿದೇಶಿ ನೆಲದಲ್ಲಿ ಭಾರತದ ಧ್ವಜವನ್ನು ಹಾರಿಸಿದ ಮೊದಲ ಮಹಿಳೆ ಮೇಡಮ್ ಕಾಮಾ, ಪ್ಯಾರಿಸ್ ಹಾಗೂ ಬರ್ಲಿನ್ನಲ್ಲಿ ಹಾರಿಸಿದ ಬಾವುಟದಲ್ಲಿ ‘ವಂದೇ ಮಾತರಂ’ ಗೀತೆಯನ್ನು ದೇವನಾಗರಿ ಲಿಪಿಯಲ್ಲಿ ಬರೆಯಲಾಗಿತ್ತು. ವಂದೇ ಮಾತರಂ ಎಂದು ಹೇಳಿಯೇ ಮದನ್ಲಾಲ್ ಧಿಂಗ್ರಾ ನೇಣಿಗೆ ತಲೆಕೊಟ್ಟ. ಬನಾರಸ್ ಕಾಂಗ್ರೆಸ್ ಅಧಿವೇಶನದಲ್ಲಿ ಕವಿಯತ್ರಿ ಸರಳಾದೇವಿ ವಂದೇ ಮಾತರಂ ಹಾಡಿದರು. ‘ವಂದೇ ಮಾತರಂ’ನಿಂದ ಪ್ರೇರಣೆಗೊಂಡು ಬ್ರಿಟಿಷ್ ಸೇನೆಯ ಮದ್ರಾಸ್ ರೆಜಿಮೆಂಟ್ನಲ್ಲಿ ದಂಗೆ ಎಬ್ಬಿಸಲು ಪ್ರಯತ್ನಿಸಿ ದರೆಂಬ ಕಾರಣಕ್ಕೆ 14 ಸೈನಿಕರನ್ನು ಬ್ರಿಟಿಷರು ಗಲ್ಲಿಗೇರಿಸಿದರು. ಮಲೇಷಿಯಾದಲ್ಲಿ ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ಎಂಬ ಸಂಘಟನೆ ಕಟ್ಟಿಕೊಂಡಿದ್ದ ಕ್ರಾಂತಿಕಾರಿಗಳಾದ ಆನಂದನ್, ಸತ್ಯೇಂದ್ರ ಬರ್ಧನ್, ಅಬ್ದುಲ್ ಕಾದಿರ್ ಮತ್ತು ಫೈಝ ಬಾಯಲ್ಲಿ ವಂದೇ ಮಾತರಂ ಪಠಿಸುತ್ತಲೇ ನೇಣಿಗೇರಿದರು. ಅದರಲ್ಲೂ ನೇತಾಜಿ ಸುಭಾಷ್ಚಂದ್ರಬೋಸರಂತೂ ವಂದೇ ಮಾತರಂ ಅನ್ನು ‘ಆಝಾದ್ ಹಿಂದ್ ಫೌಜ್ನ(ಭಾರತ ರಾಷ್ಟ್ರೀಯ ಸೇನೆ) ರಾಷ್ಟ್ರಗೀತೆಯೆಂದು ಘೋಷಿಸಿದರು. ಖುದಿರಾಮನಿಂದ ಭಗತ್ಸಿಂಗ್, ರಾಜಗುರು, ಸುಖದೇವ್ನವರೆಗೂ ಎಲ್ಲ ಕ್ರಾಂತಿಕಾರಿಗಳೂ ತುಟಿಯಲ್ಲಿ ‘ವಂದೇ ಮಾತರಂ’ ಎನ್ನುತ್ತಲೇ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದರು.
ಅಂದು ಇಡೀ ದೇಶಕ್ಕೇ ಪ್ರೇರಣೆ ನೀಡಿದ ಗೀತೆಯ ಬಗ್ಗೆ ಮುಸ್ಲಿಮರು ಇಂದಿಗೂ ತಕರಾರು ಎತ್ತುತ್ತಿರುವುದೇಕೆ?
ವಂದೇ ಮಾತರಂ ಹಾಡುವುದಕ್ಕೆ ವಿರೋಧ ವ್ಯಕ್ತಪಡಿಸಿ, ಪ್ರತ್ಯೇಕ ರಾಷ್ಟ್ರ ಪಡೆದುಕೊಂಡು ಧರ್ಮಾಂಧ ಜಿನ್ನಾ ಅವರೇನೋ ಭಾರತದಿಂದ ಕಾಲ್ತೆಗೆದರು. ಆದರೆ ಅವರು ನೆಟ್ಟ ಪ್ರತ್ಯೇಕತೆಯ ಮರದ ಬೇರುಗಳು ಇಲ್ಲಿಯೇ ಉಳಿದವು. ಜಮಾತೆ ಉಲೇಮಾ, ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸದಸ್ಯರ ರೂಪದಲ್ಲಿ ಆ ಬೇರುಗಳು ಈಗ ಚಿಗುರೊಡೆದಿವೆ. ಆದರೆ ನಮ್ಮನ್ನು ಕಾಡುವ ಪ್ರಶ್ನೆಯಿಷ್ಟೇ, ಇವರಿಗೆ ಧರ್ಮವೇ ಅಂತಿಮ, ಈ ದೇಶಕ್ಕಿಂತ ಧರ್ಮವೇ ಮೇಲು ಎನ್ನುವುದಾರೆ 1947ರಲ್ಲೇ ಭಾರತ ಬಿಟ್ಟು ತೊಲಗಬಹುದಿತ್ತಲ್ಲವೆ? ಯಾರು ಬೇಡವೆಂದಿದ್ದರು? ಪ್ರತ್ಯೇಕ ಮುಸ್ಲಿಂ ರಾಷ್ಟ್ರ ಪಡೆದುಕೊಂಡ ಮೇಲೂ ಇಲ್ಲಿಯೇ ಉಳಿದುಕೊಂಡಿದ್ದೇಕೆ? ಸಂಗೀತಕ್ಕೆ ಜಾತಿ, ಧರ್ಮ, ಗಡಿಗಳ ಭೇದವಿಲ್ಲ ಎನ್ನುತ್ತೇವೆ. ಅಂತಹ ಸಂಗೀತವನ್ನು ಒಲಿಸಿಕೊಂಡಿದ್ದ ವ್ಯಕ್ತಿ ಪಂಡಿತ್ ವಿಷ್ಣು ದಿಗಂಬರ ಪಲುಸ್ಕರ್. ಅವತ್ತು ಮೌಲಾನಾ ಅಹಮದ್ ಅಲಿ ವಂದೇ ಮಾತರಂ ಹಾಡಲು ಅಡ್ಡಿಪಡಿಸಿದಾಗ ಪಂಡಿತ ಪಲುಸ್ಕರರಂತಹ ಸಂಗೀತದ ರಸದೌತಣ ಉಣಿಸುವ ಕವಿ ಮನಸ್ಸೇ ರೊಚ್ಚಿಗೆದ್ದು, “ವಂದೇ ಮಾತರಂ ಹಾಡಬೇಡಿ ಎನ್ನಲು ಇದು ಮಸೀದಿಯಲ್ಲ. ಹಿಡಿಸದವರು ಧಾರಾಳವಾಗಿ ಅಧಿವೇಶನದಿಂದ ಹೊರಹೋಗಬಹುದು” ಎಂದು ಅಧ್ಯಕ್ಷನಿಗೇ ಹೇಳಿದಂತೆ, ಭಾರತದಲ್ಲಿರುವ ಮೌಲಾನಾ ಅಹಮದ್ ಅಲಿಯ ವಂಶಸ್ಥರಿಗೆ ಈಗ ಹೇಳುವವರಾರು?!
November 10th, 2009 at 454630
ಧರ್ಮವೇ ಮೇಲು ಎನ್ನುವವರು 47ರಲ್ಲೇ ತೊಲಗಬಹುದಿತ್ತಲ್ಲ? | Pratap Simha…
ಪಂಡಿತ್ ವಿಷ್ಣು ದಿಗಂಬರ ಪಲುಸ್ಕರ್!
ಈ ಹೆಸರು ಯಾರಿಗೆ ತಾನೇ ಗೊತ್ತಿಲ್ಲ? ಹತ್ತೊಂ ಬತ್ತನೇ ಶತಮಾನದ ಅಂತ್ಯ ಹಾಗೂ ಇಪ್ಪತ್ತನೇ ಶತಮಾನದ ಆದಿಯಲ್ಲಿ ಅವರದ್ದು ದೊಡ್ಡ ಹೆಸರು. 1872ರಲ್ಲಿ ಜನಿಸಿದ ಪಲುಸ್ಕರ್ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಭೀಷ್ಮಪಿತಾಮಹನಂತಿದ್ದರು. ಮಹಾತ್ಮ ಗಾಂಧೀಜಿಯವರ ಪ್ರೀತಿಯ ‘ರಘ…
November 10th, 2009 at 291530
ಭಾರತ ಸ್ವತಂತ್ರವಾದಾಗಲೇ ವಂದೇ ಮಾತರಮ್ ನಮ್ಮ ಾಷ್ಟ್ರಗೀತೆಯಾಗಬೇಕಿತ್ತು.
ಈದಿನದ ಪತ್ರಿಕಾಸಮಾಚಾರದ ಪ್ರಕಾರ ಕೆಲವರಾದರೂ ಮುಸ್ಲಿಮ್ ನಾಗರಿಕರು ಈ ಗೀತೆಯನ್ನು ಹಾಡಬೇಕೆನ್ನೆತ್ತಿರುವದು ಶುಭಲಕ್ಷಣ.
November 10th, 2009 at 370530
Hi Pratap, Very good Article, Keep it Up…………..,
ವ೦ದೇಮಾತರ೦ ಸುಜಲಾ೦ ಸುಫಲಾ೦ ಮಲಯಜ ಶೀತಲಾ೦ ಸಸ್ಯ ಶಾಮಲಾ೦ ಮಾತರಾ೦
1. ಶುಬ್ರಜ್ಯೋತ್ಸ್ನಾ ಪುಲಕಿತ ಯಾಮೀನೀ೦
ಪುಲ್ಲಕುಸುಮಿತ ದ್ರುಮದಲ ಶೋಭಿನೀ೦
ಸುಹಾಸಿನೀ೦ ಸುಮಧುರ ಭಾಷಿಣೀ೦
ಸುಖದಾ೦ ವರದಾ೦ ಮಾತರ೦ !!
2. ಕೋಟಿ ಕೋಟಿ ಕ೦ಠ ಕಲಕಲನಿನಾದ ಕರಾಲೇ
ಕೋಟಿ ಕೋಟಿ ಭಜೈಧರ್ತಖರ ಕರವಾಲೇ
ಅಬಲಾ ಕೆನೊ ಮಾ ಎತೊ ಬಲೇ ಬಹುಬಲಧಾರೀಣಿ೦
ನಮಾಮಿ ತಾರಿಣೀ೦ ಮಾತರ೦!!
3. ತುಮಿ ವಿದ್ಯ ತುಮಿ ಧರ್ಮ
ತುಮಿ ಹ್ರದಿ ತುಮಿ ಮರ್ಮ ತ್ವ೦ ಹಿ ಪ್ರಾಣಾ:
ಶರೀರೇ, ಬಾಹುತೇ ತುಮಿ ಮಾ ಭಕ್ತಿ
ತೋಮಾರ ಇ ಪ್ರತಿಮಾ ಗಡಿ ಮ೦ದಿರೇ ಮ೦ದಿರೇ!!
4.ತ್ವ೦ ಹಿ ದುರ್ಗಾ ದಶಪ್ರಹರಣ ಧಾರೀಣೀ೦
ಕಮಲಾ ಕಮಮಲದಲ ವಿಹಾರಿಣೀ ವಾಣೀವಿದ್ಯಾಯಿನಿ
ನಮಾಮಿ ತ್ಯಾ೦ ನಮಾಮಿ ಕಮಲಾ೦ ಅಮಲಾ೦
ಆತುಲಾ೦ ಸುಜಲಾ೦ ಸುಫಲಾ೦ ಮಾತರ೦!!
ಶ್ಯಾಮಲಾ೦ ಸರಲಾ೦ ಸುಸ್ಮಿತಾ೦ ಭೂಷಿತಾ೦ ಧರಣೀ೦ ಮಾತರ೦
ವ೦ದೇಮಾತರ೦ ಸುಜಲಾ೦ ಸುಫಲಾ೦ ಮಲಯಜ ಶೀತಲಾ೦ ಸಸ್ಯ ಶಾಮಲಾ೦ ಮಾತರಾ೦
ವಂದೇ ಮಾತರಂನ ಕನ್ನಡ ಭಾವಾನುವಾದ
ಒಳ್ಳೆ ನೀರುಳ್ಳವಳೇ,
ಒಳ್ಳೇ ಹಣ್ಣುಳ್ಳವಳೇ,
ಮಲಯ ಮಾರುತದಿಂದ ತುಂಬ ತಂಪುಗೊಂಡವಳೇ,
ಬಳ್ಳಿ ಗಿಡಮರಗಳಿಂ ಕಪ್ಪು ಕಪ್ಪಾದವಳೇ-
ಓ ತಾಯಿ, ಭಾರತಿಯೆ, ನಿನಗೆ ನಮನ!
ಅಚ್ಚ ಬೆಳದಿಂಗಳು ಬಿದ್ದು
ನೀ ಪುಲಕಗೊಂಡಿರುವೆ ಇರುಳಿನಲ್ಲಿ ;
ಶೋಭಿಸುತ್ತಿಹೆ ನೀನು
ಮರಗಿಡದ ಎದೆಯಿಂದ ಹೂವುಗಳು ಅರಳಿ;
ಒಳ್ಳೆ ನಗೆಯುಳ್ಳವಳೇ,
ಸವಿ ಮಾತನಾಡುವಳೇ,
ಎಲ್ಲಾ ಸುಖ ನೀಡುತ್ತ,
ಕೇಳಿದ್ದ ಕೊಡುವವಳೇ-
ಓ ತಾಯೆ, ಭಾರತಿಯೇ, ನಿನಗೆ ನಮನ!
ಅಂದು ಇಡೀ ದೇಶಕ್ಕೇ ಪ್ರೇರಣೆ ನೀಡಿದ ಗೀತೆಯ ಬಗ್ಗೆ ಮುಸ್ಲಿಮರು ಇಂದಿಗೂ ತಕರಾರು ಎತ್ತುತ್ತಿರುವುದೇಕೆ?
ವಂದೇಮಾತರಂ ಹೇಳಲಾಗದವರು ದೇಶ ಬಿಟ್ಟು ತೊಲಗಲಿ, JAI HIND, VANDE MATARAM………….,
November 10th, 2009 at 065830
First ever ‘Responsible-Journalist’ of India doing his duty beyond circumscribes. I always pray let your Tribe grow and multiply.
November 10th, 2009 at 172730
While reading this article, my eyes were filled with tears… You are awaking patriotism in people. You are doing a great job. Thumbs up…
”Change is the rule of nature.” A day will come, and then these muslims will realize their mistakes… Just i want to say ”India will conqueor its conquerors.”
November 11th, 2009 at 182630
ಧರ್ಮವೇ ಮೇಲು ಎನ್ನುವವರು 47ರಲ್ಲೇ ತೊಲಗಬಹುದಿತ್ತಲ್ಲ? | Pratap Simha…
ಪಂಡಿತ್ ವಿಷ್ಣು ದಿಗಂಬರ ಪಲುಸ್ಕರ್!
ಈ ಹೆಸರು ಯಾರಿಗೆ ತಾನೇ ಗೊತ್ತಿಲ್ಲ? ಹತ್ತೊಂ ಬತ್ತನೇ ಶತಮಾನದ ಅಂತ್ಯ ಹಾಗೂ ಇಪ್ಪತ್ತನೇ ಶತಮಾನದ ಆದಿಯಲ್ಲಿ ಅವರದ್ದು ದೊಡ್ಡ ಹೆಸರು. 1872ರಲ್ಲಿ ಜನಿಸಿದ ಪಲುಸ್ಕರ್ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಭೀಷ್ಮಪಿತಾಮಹನಂತಿದ್ದರು. ಮಹಾತ್ಮ ಗಾಂಧೀಜಿಯವರ ಪ್ರೀತಿಯ ‘ರಘ…
November 11th, 2009 at 055330
after reading the article i felt that ‘Vande Mataram’ should be our National Anthem instead of ‘Jana Gana…….’
November 12th, 2009 at 084930
very good article…
November 18th, 2009 at 211930
ಇದ ಒ್ఠ ್್ ಈ ಮ್ಮఠ ಇ್ఠ ಆರ ೀರ ಎಲ್ ಬೀಕ ಆದೆ
ನಮ್ ೀಶೆ್ ಒ್ದ ಡವ ಬವఠತ ಇಲ್ ಇಲ್ ಮ್ ಆ ್ನದ ಉಗ್ఠ
ಸఠ ಡ್ ನಮ್ ೀಶದ ఠ ಧೆ್ ತರఠ್್ೆ ನಮ್ ಸರರ ಮತ್
ಜರಗ ಈ ఠ ೂఠ್ದ್ ಓನ ಆఠ ಸಮ್ ಕತ ನಮ್ ೀಶವನ್
ಇನ್್ ಮಟ್ೆ್ ಒఠ್ఠ್್ೆ ಈಗ ಅವರ ಆ ಟ್ ೀ ಎಲ್ರ ನಮ್ ೀಶದ
ಸఠ್ఠ ಣೂಡಬೀ ನಮ್ ಮ ನಮ್ ಸರ ಎದ ಕತೆ ಅವ ನ್ದ
ೂರಗವ ಧ್ ಗ ೆಚ್ ಅವದ್ತ ಮ ಸ್ಲ್ದರ ನಮ್ ೀಶದ ಬ್
ೂೀ ನಮ್ ೆೈಲದ್ ಆಸೆ ೂಣ್ ಈ ನಮ್ ಮ್ ೀಶೆ್
ವೀ ತರಮ್ ಬఠ ಅಕ್ಷರ ಗ್ ಉఠ ನಮ್ ನರ ఠಗ್ ಹఠಡ ಜೈ ಬರಬ
November 22nd, 2009 at 101430
very good article…
Regards
Gurudatta
November 30th, 2009 at 561130
It is a Very good article, those knows the meaning of “Bharath Matha” will cry by reading this.
December 25th, 2009 at 464631
Wow! Pratap Good Article, Keep it up.
December 30th, 2009 at 160431
great pratap…
good article, keep it up….
constitution itself told every citizen has to give respect to national athem flag, then why these people doing mistakes…
first of all we have fight against discrimination..
why law is not applicable to all person.. why now also in india there is separate law for muslims.i think just because of vote bank……..
please write some article regarding different law to different people