*/
Date : 26-01-2009 | 34 Comments. | Read More
ದೋಷವಿದ್ದಿದ್ದು ಅವರ ಇಂಗ್ಲಿಷ್ನಲ್ಲಿ, ಗುಂಡಿಗೆಯಲ್ಲಲ್ಲ! ನವೆಂಬರ್ 26 ರಂದು ನಮ್ಮ ಮುಂಬೈ ಮೇಲೆ ನಡೆದ ದಾಳಿಯ ನಂತರ ಪಾಕಿಸ್ತಾನ ಯಾವ ನಖರಾ ತೋರುತ್ತಿದೆಯೋ ಅದೇ ಸೊಕ್ಕನ್ನು 2001ರಲ್ಲಿ ತಾಲಿಬಾನ್ ಕೂಡ ಪ್ರದರ್ಶಿಸಿತ್ತು. ‘ಸಾಕ್ಷ್ಯ ಕೊಡಿ, ನಮ್ಮ ನೆಲದಲ್ಲೇ ವಿಚಾರಣೆ ನಡೆಸುತ್ತೇವೆ’ಎಂದಿತ್ತು.
Date : 19-01-2009 | 7 Comments. | Read More
ಮೊನ್ನೆ ಜನವರಿ ೧೨ರಂದು ಅಮೆರಿಕದ ಅಧ್ಯಕ್ಷ ಜಾರ್ಜ್ ವಾಕರ್ ಬುಷ್ ತಮ್ಮ ಕೊನೆಯ ಪತ್ರಿಕಾಗೋಷ್ಠಿ ಕರೆದಿದ್ದರು. ಸಹಜವಾಗಿಯೇ ಎಲ್ಲ ತೆರನಾದ ಟೀಕೆ, ವಾಗ್ಬಾಣಗಳನ್ನು ಬುಷ್ ಎದುರಿಸಬೇಕಾಯಿತು. “ನೂತನ ಅಧ್ಯಕ್ಷರು ಜಾಗತಿಕ ಮಟ್ಟದಲ್ಲಿ ಅಮೆರಿಕದ ನೈತಿಕ ಸ್ಥಾನಮಾನವನ್ನು ಮರು ಸ್ಥಾಪಿಸಬೇಕಾದ ಅಗತ್ಯವಿದೆ” ಎಂದ ಪತ್ರಕರ್ತರೊಬ್ಬರು, ಜಾರ್ಜ್ ಬುಷ್ ಆಡಳಿತದಡಿ ಅಮೆರಿಕದ ಪ್ರತಿಷ್ಠೆಗೆ ಭಾರೀ ಧಕ್ಕೆಯಾಗಿದೆ ಎಂದು ಪರೋಕ್ಷವಾಗಿ ಚುಚ್ಚಿದರು.
Date : 11-01-2009 | 50 Comments. | Read More
ನಾಲ್ಕೂವರೆ ವರ್ಷಗಳ ಹಿಂದಿನ ಮಾತು. ೨೦೦೪, ಆಗಸ್ಟ್ನಲ್ಲಿ ಖ್ಯಾತ ‘ಔಟ್ಲುಕ್’ ವಾರಪತ್ರಿಕೆ ಒಂದು ವಿಶೇಷ ಸಂಚಿಕೆಯನ್ನು ಹೊರ ತಂದಿತು. “What if” ಎಂಬ ಅದರ ಶೀರ್ಷಿಕೆಯೇ ಸಾಕಿತ್ತು ಓದುಗರ ಗಮನ ಸೆಳೆಯಲು, ಆಸಕ್ತಿ ಹುಟ್ಟಿಸಲು. ಇಂತಹ ಒಂದು ಸಂಚಿಕೆಯನ್ನು ಹೊರತರುವ ಕಲ್ಪನೆ ಹೊಳೆ ದಿದ್ದು ಕರ್ನಾಟಕ ರಾಜ್ಯ ಇತ್ತೀಚಿನ ವರ್ಷಗಳಲ್ಲಿ ಇಂಗ್ಲಿಷ್ ಪತ್ರಿಕೋದ್ಯಮಕ್ಕೆ ನೀಡಿದ ಅತಿದೊಡ್ಡ ಕೊಡುಗೆಯಾದ ಮೈಸೂರಿನ ಕೃಷ್ಣ ಪ್ರಸಾದ್ ತಲೆಯಲ್ಲಿ. ಆ ಸಂಚಿಕೆಗೆ ಕೃಷ್ಣ ಪ್ರಸಾದ್ ಅವರೇ ಸಂಪಾದಕರು. ಒಂದು ವೇಳೆ ಭಾರತ ಇಬ್ಭಾಗವಾಗದೇ […]
Date : 04-01-2009 | 30 Comments. | Read More
ಮಂಗಳೂರಿನವರು ಸಾಮಾನ್ಯವಾಗಿ ಮೂಗುಮುರಿ ಯುವ ದೂರದ ಧಾರವಾಡದಲ್ಲಿ ವಿಶ್ವದರ್ಜೆಯ ಡೆಂಟಲ್ ಕಾಲೇಜು, ಜತೆಗೊಂದು ಎಂಜಿನಿಯ ರಿಂಗ್ ಕಾಲೇಜು, ಮೈಸೂರಿನಲ್ಲೊಂದು ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಹಾಗೂ ಮಹಿಳಾ ಪಿಯು ಕಾಲೇಜು, ಅಲೋಪತಿ ಬಿಟ್ಟರೆ ಬೇರೆ ವೈದ್ಯರೇ ಇಲ್ಲವೆಂಬಂತಿರುವ ಹಾಸನದಲ್ಲಿ ಆಯುರ್ವೇದ ಕಾಲೇಜು, ಉಡುಪಿಯಲ್ಲಿ ಮತ್ತೊಂದು, ಮಂಗಳೂರಿನಲ್ಲಿ ಕಾನೂನು ಕಾಲೇಜು… ಹೀಗೆ ಒಂದೊಂದು ದಿಕ್ಕುಗಳಲ್ಲಿ ಒಂದೊಂದು ಕಾಲೇಜುಗಳನ್ನು ‘ಖಾವಂದ’ರೇಕೆ ಕಟ್ಟಿದರು?