ನಾವು ತಮಿಳರಿಗೆ ‘ಕೊಂಗಾ’, ತೆಲುಗು ಭಾಷಿಕರಿಗೆ ‘ವಾಳ್ಳು’, ಮಲೆಯಾಳಿಗಳಿಗೆ ‘ಕುಟ್ಟಿ’ ಎಂದು ಹೇಗೆ ಕಿಚಾಯಿಸುತ್ತೇವೋ ಹಾಗೆಯೇ ಹಾಲಿವುಡ್ನಲ್ಲಿ ಯಾರನ್ನಾದರೂ, ಯಾವ ದೇಶದವರನ್ನಾದರೂ ಕಾಲೆಳೆಯಬೇಕಾದರೆ ಕೆಲವು ‘ಅಡ್ಡ’ ಹೆಸರುಗಳಿಂದ ಕರೆಯುತ್ತಾರೆ. ಅವು ಕೆಲವೊಮ್ಮೆ ಅವಮಾನಕಾರಿಯಾಗಿಯೂ, ಜನಾಂಗೀಯ ನಿಂದನೆ ಎನಿಸಿಕೊಳ್ಳುವಂತಹ ಪದಗಳಾಗಿರುತ್ತವೆ. ಕಪ್ಪುವರ್ಣೀಯರಿಗೆ ‘ನಿಗ್ಗರ್’, ಇಟಾಲಿಯನ್ಸ್ಗೆ ‘ಡ್ಯಾಗೋಸ್’, ಏಷ್ಯನ್ನರಿಗೆ ಅದರಲ್ಲೂ ವಿಯೆಟ್ನಾಮಿಯರಿಗೆ ‘ಗೂಕ್ಸ್’, ಜಪಾನಿಯರಿಗೆ ‘ಸ್ಲಿಟ್ ಐಯ್ಡ್ ಜಾಪ್ಸ್’ ಅಥವಾ ‘ನಿಪ್, ಪಿಲಿಪ್ಪೀನ್ಸ್ನವರಿಗೆ ‘ಪಿಲಿಪ್ಪೀನೋ’, ಚೀನಿಯರಿಗೆ ‘ಚಿನ್ಕ್ ’, ಇರಾಕಿಯರಿಗೆ ‘ಹಾಜಿ’-ಇಂತಹ ‘ಪದ’ಪ್ರಯೋಗಗಳನ್ನು ಹಾಲಿವುಡ್ ಚಿತ್ರ ಗಳಲ್ಲಿ ಸಾಮಾನ್ಯವಾಗಿ ಕಾಣಬಹುದು.
ಹಾಗಾದರೆ ಈ ಯಹೂದಿ(ಜೀವ್ಸ್)ಗಳಿಗೆ ಏನನ್ನುತ್ತಾರೆ?
ಖ್ಯಾತ ಹಾಲಿವುಡ್ ನಟ ಮರ್ಲಾನ್ ಬ್ರಾಂಡೋ ಒಮ್ಮೆ ಸಿಟ್ಟಿಗೆದ್ದು “ಯಹೂದಿಗಳಿಗೇಕೆ ‘ಕೈಕ್’ ಎಂದು ಕರೆ ಯುವುದಿಲ್ಲ?” ಎಂದು ಬಹಿರಂಗವಾಗಿ ಪ್ರಶ್ನಿಸಿದ್ದರು! ‘ಕೈಕ್’ ಎಂಬ ಪದ ಯಹೂದಿಗಳನ್ನು ಕಾಲೆಳೆಯಲು ಬಳಸುವ ಹಾಗೂ ಜನಾಂಗೀಯ ನಿಂದನೆಗೆ (Racial Slur) ದಾರಿಮಾಡಿಕೊಡುವ ಶಬ್ದ. ಆದರೂ ಯಾವ ಹಾಲಿವುಡ್ ಚಿತ್ರಗಳಲ್ಲೂ ‘ಕೈಕ್’ ಎಂಬ ಪದವನ್ನು ನೀವು ಕಾಣಲು ಸಾಧ್ಯವಿಲ್ಲ. ಏಕೆಂದರೆ ‘ಚಲನಚಿತ್ರ’(Motion picture)ವನ್ನು ಕಂಡುಹಿಡಿದಿದ್ದು ಥಾಮಸ್ ಆಲ್ವಾ ಎಡಿಸನ್ ಆಗಿದ್ದರೂ ‘ಹಾಲಿವುಡ್’ ಆರಂಭಿಸಿದ್ದು ಸ್ಯಾಮ್ ಗೋಲ್ಡ್ವಿನ್, ಜಾಕ್ ಮತ್ತು ಹ್ಯಾರಿ ವಾರ್ನರ್, ಲೂಯಿಸ್ ಬಿ. ಮೇಯರ್ ಎಂಬ ಯಹೂದಿಗಳು! ಅಮೆರಿಕದ ಅತ್ಯಂತ ದೊಡ್ಡ ಹಾಗೂ ಪ್ರಭಾವಿ ಟಿವಿ ಜಾಲಗಳಾದ ‘ಸಿಬಿಎಸ್’(ವಿಲಿಯಂ ಪಾಲೆ) ‘ಎನ್ಬಿಸಿ’ (ಡೆವಿಡ್ ಸಾರ್ನೋಫ್) ಮತ್ತು ‘ಎಬಿಸಿ’ಗಳೂ (ಲಿಯೋನಾರ್ಡ್ ಗೋಲ್ಡನ್ಸನ್) ಯಹೂದಿಗಳ ಕೈಯಲ್ಲೇ ಇವೆ!! ಅಮೆರಿಕದ ಮೂರನೇ ಎರಡರಷ್ಟು ಟಿವಿ ಕಾರ್ಯ ಕ್ರಮ ಹಾಗೂ ಹಾಲಿವುಡ್ ಚಿತ್ರಗಳ ನಿರ್ಮಾಪಕರು ಯಹೂದಿ ಗಳಾಗಿದ್ದಾರೆ.
ಇನ್ನು ‘ಜುರಾಸಿಕ್ ಪಾರ್ಕ್’, ‘ಶಿಂಡ್ಲರ್ಸ್ ಲಿಸ್ಟ್’, ‘ಸೇವಿಂಗ್ ಪ್ರೈವೇಟ್ ರಯಾನ್’, ‘ಮ್ಯೂನಿಚ್’, ‘ಇಟಿ’, ‘ಇಂಡಿಯಾನಾ ಜೋನ್ಸ್’ನಂತಹ ಖ್ಯಾತ ಚಿತ್ರಗಳನ್ನು ನೋಡಿ ಯಾರು ತಾನೇ ಮನಸೋತಿಲ್ಲ?! ಈ ಎಲ್ಲ ಚಿತ್ರಗಳ ನಿರ್ದೇಶಕ ಸ್ಟೀವನ್ ಸ್ಪಿಲ್ಬರ್ಗ್, ‘ಒಶನ್ಸ್ ೧೧, ೧೨, ೧೩’, ‘ಟ್ರಾಫಿಕ್’, ‘ಸೆಕ್ಸ್ ಲೈಸ್ ಆಂಡ್ ವೀಡಿಯೋ ಟೇಪ್’ಗಳ ನಿರ್ದೇಶಕ ಸ್ಟೀವನ್ ಸೋಡರ್ ಬರ್ಗ್, ಆಸ್ಕರ್ ಗೆದ್ದ ‘ದಿ ಪಿಯಾನಿಸ್ಟ್’, ‘ದಿ ಚೈನಾ ಟೌನ್’ ನಿರ್ದೇಶಕ ರೋಮನ್ ಪೊಲಾನ್ಸ್ಕಿಯಂತಹ ಖ್ಯಾತನಾಮ ಹಾಲಿವುಡ್ ನಿರ್ದೇಶಕರೂ ಯಹೂದಿಗಳೇ. ‘ವಾಲ್ಟ್ ಡಿಸ್ನಿ’ಯ ಮೈಕೆಲ್ ಐಸ್ನೆರ್ ಕೂಡ ಯಹೂದಿ. ಅಷ್ಟೇಕೆ ಫಾಕ್ಸ್, ಸ್ಟಾರ್, ಸ್ಕೈಗಳಲ್ಲದೆ ಖ್ಯಾತ ‘ವಾಲ್ಸ್ಟ್ರೀಟ್ ಜರ್ನಲ್’ ಸೇರಿದಂತೆ ಜಗತ್ತಿನ ೧೫೦ಕ್ಕೂ ಹೆಚ್ಚು ಪ್ರಭಾವಿ ಪತ್ರಿಕೆಗಳ ಮಾಲೀಕನಾದ ಆಸ್ಟ್ರೇಲಿಯಾ ಮೂಲದ ಅಮೆರಿಕ ನಾಗರಿಕ ರುಪರ್ಟ್ ಮುರ್ಡೋಕ್ ಕೂಡ ಯಹೂದಿ!
ಉಸ್ಸಪ್ಪಾ ಅಂತ ನಾವೇ ಸುಸ್ತಾಗಬೇಕೇ ಹೊರತು ಯೂರೋಪ್ನಿಂದ ಓಡಿಹೋಗಿ ಅಮೆರಿಕ ನೆಲದಲ್ಲಿ ಸಾಧಕರೆನಿಸಿಕೊಂಡಿರುವ ಯಹೂದಿಗಳ ಪಟ್ಟಿ ಮಾತ್ರ ಕೊನೆಗೊಳ್ಳುವುದಿಲ್ಲ!
ಹೀಗೆ ಅಮೆರಿಕದ ಪತ್ರಿಕೆಗಳು, ಟಿವಿ ಚಾನೆಲ್ಗಳು, ಚಲನಚಿತ್ರಗಳು, ಕಿರುತೆರೆ ಎಲ್ಲೆಡೆಯೂ ಯಹೂದಿಗಳೇ ತುಂಬಿರುವಾಗ ‘ಕೈಕ್’ ಎನ್ನುವ ನಿಂದನಾತ್ಮಕ ಪದ ಹಾಲಿವುಡ್ ಚಿತ್ರಗಳಲ್ಲಾಗಲಿ, ಮಾಧ್ಯಮಗಳಲ್ಲಾಗಲಿ ತೂರಿ ಬರಲು ಹೇಗೆತಾನೇ ಸಾಧ್ಯ? ವಿಲಿಯಂ ಷೇಕ್ಸ್ಪಿಯರ್ನ ಮಟ್ಟಕ್ಕೆ ನಿಲ್ಲಿಸಿ ಹೊಗಳಲಾಗುವ ಖ್ಯಾತ ಬರಹಗಾರ ಫ್ರಾನ್ಝ್ ಕಾಫ್ಕಾ, ‘ಜೀನಿಯಸ್’ಗೆ ಸಮಾನಾಂತರ ಹೆಸರೆಂಬಂತಿರುವ ಆಲ್ಬರ್ಟ್ ಐನ್ಸ್ಟೀನ್, ಜಗದ್ವಿಖ್ಯಾತ ಮನಃಶಾಸ್ತ್ರಜ್ಞ ಡಾ. ಅಬ್ರಹಾಂ ಮಾಸ್ಲೋ, ಸಂಗೀತದ ದಂತಕಥೆ ಬಾಬ್ ಡೈಲಾನ್ ಅವರಂತಹ ಖ್ಯಾತನಾಮರನ್ನು ನೀಡಿರುವ ಯಹೂದಿ ಸಮುದಾಯದ ಬಗ್ಗೆ ವೈರಿಗಳೂ ಹೊಗಳಬೇಕು. ಇತ್ತ ಯಹೂದಿಗಳ ಮೂಲ ಸ್ಥಾನವಾದ ಇಸ್ರೇಲ್ನ ಸುತ್ತ ಸಿರಿಯಾ, ಜೋರ್ಡಾನ್, ಪ್ಯಾಲೆಸ್ತೀನ್, ಲೆಬನಾನ್, ಈಜಿಪ್ಟ್, ಇರಾನ್ನಂತಹ ಕಿತ್ತುತಿನ್ನಲು ಹಾತೊರೆಯುತ್ತಿರುವ ಇಸ್ಲಾಮಿಕ್ ರಾಷ್ಟ್ರಗಳೇ ತುಂಬಿಕೊಂಡಿವೆ. ಆದರೆ ೧೯೪೮ರಲ್ಲಿ ಇಸ್ರೇಲನ್ನು ಮರುಸ್ಥಾಪಿಸಿದ ನಂತರ ಇದುವರೆಗೂ ಎಷ್ಟೇ ಪ್ರಯತ್ನ ಮಾಡಿದರೂ ಹಿಡಿ ಗಾತ್ರದ ಇಸ್ರೇಲಿನ ಕೂದಲು ಕೊಂಕಿಸುವುದಕ್ಕೂ ಈ ರಾಷ್ಟ್ರಗಳಿಂದಾಗಿಲ್ಲ. ಏಕೆಂದರೆ ಅಮೆರಿಕದ ಅಭಯ ಇಸ್ರೇಲ್ ಮೇಲಿದೆ, ಅಮೆರಿಕದಲ್ಲಿ ಯಾವ ಸರಕಾರ ಬಂದರೂ ಇಸ್ರೇಲನ್ನು ಮಾತ್ರ ಬಿಟ್ಟುಕೊಡುವುದಿಲ್ಲ, ಕಾರಣ ಅಮೆರಿಕವನ್ನು ಹೆಚ್ಚೂಕಡಿಮೆ ನಿಯಂತ್ರಣ ಮಾಡುವುದೇ ಯಹೂದಿಗಳು!
ಮೊನ್ನೆ ನವೆಂಬರ್ ೪ರಂದು ಬರಾಕ್ ‘ಹುಸೇನ್’ ಒಬಾಮ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಇಸ್ರೇಲ್ಗೆ ಕಡಿವಾಣ ಹಾಕುತ್ತಾರೆ ಎಂಬ ಬಲವಾದ ನಂಬಿಕೆ ಇತ್ತು. ಅಷ್ಟಕ್ಕೂ ಮುಸ್ಲಿಮ್ ಅಪ್ಪನಿಗೆ ಹುಟ್ಟಿರುವ ಒಬಾಮ, ಮುಸ್ಲಿಮರಿಗೆ ಕಂಟಕವಾಗಿರುವ ಇಸ್ರೇಲನ್ನು ಬಗ್ಗುಬಡಿಯುವುದು ಸಹಜ ಎಂದೇ ಭಾವಿಸಲಾಗಿತ್ತು. ಆದರೆ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ನಡೆಸಿದ ತಮ್ಮ ಮೊದಲು ಪತ್ರಿಕಾ ಗೋಷ್ಠಿಯಲ್ಲಿ “ಇರಾನ್ನ ಅಣ್ವಸ್ತ್ರ ಅಭಿವೃದ್ಧಿ ಯೋಜನೆಯನ್ನು ಸಹಿಸಲು ಸಾಧ್ಯವಿಲ್ಲ” ಎಂದ ಒಬಾಮ ಹೇಳಿಕೆ ಮುಸ್ಲಿಮ್ ರಾಷ್ಟ್ರಗಳು ಬೆಚ್ಚಿಬೀಳುವಂತೆ ಮಾಡಿತು. ಅಷ್ಟೇ ಅಲ್ಲ, ಮುಂದಿನ ‘ಶ್ವೇತ ಭವನದ(ಆಡಳಿತ) ಉದ್ಯೋಗಿಗಳ ಮುಖ್ಯಸ್ಥ’ರನ್ನಾಗಿ ರಹಮ್ ಇಮ್ಯಾನ್ಯುಯೆಲ್ ಎಂಬ ಯಹೂದಿಯನ್ನು ನೇಮಕ ಮಾಡಿದ ಒಬಾಮ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದರು. ‘ಜೀಸಸ್’ನನ್ನು ಕೊಂದವರು ಯಹೂದಿಗಳು ಎಂಬ ಬಲವಾದ ನಂಬಿಕೆ ಇದ್ದರೂ ಕ್ರೈಸ್ತ ರಾಷ್ಟ್ರವಾದ ಅಮೆರಿಕವನ್ನು ತನ್ನ ಪರವಾಗಿ ವಾಲಿಸಿಕೊಳ್ಳುವಷ್ಟರ ಮಟ್ಟಿಗೆ ಯಹೂದಿಗಳು ಬೆಳೆದಿದ್ದಾರೆ. ಹೆನ್ರಿ ಕಿಸಿಂಜರ್, ಮೆಡಲಿನ್ ಆಲ್ಬ್ರೈಟ್ಗಳಂತಹ ಯಹೂ ದಿಗಳು ಅಮೆರಿಕದ ವಿದೇಶಾಂಗ ಸಚಿವರಾಗುವ ಮಟ್ಟಿಗೆ ಬೆಳೆ ದರು. ಜೋ ಲಿಬರ್ಮನ್ ಎಂಬಾತ ೧೯೯೮ರಲ್ಲಿ ಅಮೆರಿಕದ ಅಧ್ಯಕ್ಷಗಾದಿಗೆ ಡೆಮೊಕ್ರಾಟಿಕ್ ಪಕ್ಷದ ಅಭ್ಯರ್ಥಿಯಾಗಿದ್ದ ಅಲ್ ಗೋರ್ ಅವರ ಉಪಾಧ್ಯಕ್ಷ ಅಭ್ಯರ್ಥಿಯಾಗಿದ್ದರು. ಇಂದು ಅಮೆರಿಕದ ಸೆನೆಟ್ನಲ್ಲಿ ೧೨ ಜನ ಹಾಗೂ ಕಾಂಗ್ರೆಸ್(ಸಂಸತ್)ನಲ್ಲಿ ೩೦ ಜನ ಯಹೂದಿ ಗಳಿದ್ದಾರೆ.
ಏಕೆ ಇಷ್ಟುದ್ದದ ಕಥೆ ಹೇಳಬೇಕಾಯಿತೆಂದರೆ ಅಂದು ಎರಡನೇ ಮಹಾಯುದ್ಧದ ವೇಳೆ ಯುರೋಪ್ನಾದ್ಯಂತ ೬೦ ಲಕ್ಷ ಯಹೂದಿಗಳನ್ನು ಕಗ್ಗೊಲೆಗೈದಾಗ, ಕ್ರೈಸ್ತರಾಗಿ ಇಲ್ಲವೆ ದೇಶದಿಂದ ದಾಟಿ ಎಂದು ಯುರೋಪ್ ರಾಷ್ಟ್ರಗಳು ತಾಕೀತು ಹಾಕಿದಾಗ ಅಮೆರಿಕವನ್ನರಸಿಕೊಂಡು ಬಂದ ಯಹೂದಿಗಳು ಬೆಳೆದ ಪರಿ ಜಗತ್ತಿನ ಯಾವುದೇ ಸಮುದಾಯಕ್ಕಾದರೂ ಮಾದರಿ. ಪ್ರಾಣವನ್ನೇ ಕೇಳುವ ಅಪಾಯದೆದುರು ಬದುಕುಳಿ ಯುವುದು, ಅಪಾಯವನ್ನೇ ಮೆಟ್ಟಿ ನಿಲ್ಲುವುದು ಹೇಗೆ ಎಂದು ತೋರಿಸಿಕೊಟ್ಟವರು ಅವರು ಮಾತ್ರ. ನಾವೂ ಒಂದು ಕಾಲದಲ್ಲಿ ನಮಗೆ ನಾವೇ ಒಂದು ಜೋಕು ಹೇಳಿಕೊಳ್ಳುತ್ತಿದ್ದೆವು. ಎಡ್ಮಂಡ್ ಹಿಲರಿ ಮತ್ತು ತೆನ್ಝಿಂಗ್ ನೋರ್ಗೆ ಮೌಂಟ್ ಎವರೆಸ್ಟ್ ಏರಿ ತಾವೇ ಮೊದಲಿಗರು ಎಂದು ಹಿರಿಹಿರಿ ಹಿಗ್ಗುತ್ತಿರುವಾಗಲೇ ‘ಚಾಯ್..ಚಾಯ್’ ಎಂದು ಮಲೆಯಾಳಿಯೊಬ್ಬ ಅಲ್ಲೂ ಟೀ ಮಾರುತ್ತಿದ್ದ ಅಂತ! ‘ನಾವು ಟೀ ಮಾರೋದಕ್ಕೆ ಫಿಟ್’ ಅಂತ ಅದನ್ನು ಸ್ವಲ್ಪ ತಿರುಚಿಕೊಂಡು ನಮ್ಮನ್ನು ನಾವೇ ಹೀಗಳೆದುಕೊಳ್ಳಬೇಕಾದ ಪರಿಸ್ಥಿತಿಯೂ ನಮ್ಮಲ್ಲಿತ್ತು. ‘ಬುದ್ಧಿಸಂ, ಜೈನಿಸಂಗಳಂತಹ ಮತಗಳು ನಮ್ಮಲ್ಲೇ ಹೊರಹೊಮ್ಮಲು ಅವಕಾಶ ಮಾಡಿಕೊಟ್ಟ ಸಹೃದಯರು ನಾವು. ಇಸ್ಲಾಮ್, ಕ್ರೈಸ್ತರಿಗೂ ಮಣೆಹಾಕಿದವರು ನಾವು, ಪಾರ್ಸಿಗಳೂ, ಯಹೂದಿಗಳಿಗೂ ನೆಲೆ ಕೊಟ್ಟವರು ನಾವು’ ಎಂದು ಅಂದು ಹಾಗೂ ಇಂದಿಗೂ ಹೇಳಿಕೊಳ್ಳುವುದನ್ನು ನೀವು ಗಮನಿಸಿರಬಹುದು. ಬೇರೆಯವರಿಗೆ ಮಣೆಹಾಕಿದ್ದೇನೂ ಸರಿ, ಆದರೆ ನಾವು ಭಾರತವನ್ನು ಬಿಟ್ಟು ಯಾವ ದೇಶಕ್ಕೆ ಹೋಗಿದ್ದೇವೆ? ಶ್ರೀಲಂಕಾ, ಫಿಜಿ, ಮಲೇಷಿಯಾ, ಕೆರಿಬಿಯನ್ ದ್ವೀಪಗಳಲ್ಲಿ ಒಂದಿಷ್ಟು ಭಾರತೀಯರಿದ್ದರೂ ಅವರ್ಯಾರೂ ಸ್ವಯಿಚ್ಚೆಯಿಂದ ಹೋದವರಲ್ಲ. ಕಬ್ಬಿನ ಗದ್ದೆ ಕೆಲಸಕ್ಕೆಂದು ಬ್ರಿಟಿಷರು ಕರೆದುಕೊಂಡು ಹೋದವರು. ಅಲ್ಲೆಲ್ಲ ಭಾರತೀಯರ ಸಂಖ್ಯೆ ಗಣನೀಯವಾಗಿ ಬೆಳೆದಿದ್ದರೂ ಇಂದಿಗೂ ಎರಡನೇ ದರ್ಜೆ ನಾಗರಿಕರಾಗಿಯೇ ಇದ್ದಾರೆ. ಇತ್ತ ನಾವೂ ಕೂಡ ಅಪ್ಪ ನೆಟ್ಟ ಆಲದ ಮರಕ್ಕೆ ನೇಣು ಹಾಕಿಕೊಳ್ಳುವ ಮನಸ್ಥಿತಿಯಿಂದ ಎಂದೂ ಹೊರಬಂದವರಲ್ಲ.
ಇಷ್ಟಾಗಿಯೂ ಭಾರತೀಯರಾದ ನಾವೆಲ್ಲ ಹೆಮ್ಮೆಪಟ್ಟುಕೊಳ್ಳುವಂತಹ ಬೆಳವಣಿಗೆಯೊಂದು ಅಮೆರಿಕದ ನೆಲದಲ್ಲಿ ಕಂಡು ಬರುತ್ತಿದೆ.
ಅಮೆರಿಕದ ನೂತನ ಅಧ್ಯಕ್ಷರಾಗಿ ಚುನಾಯಿತರಾಗಿರುವ ಬರಾಕ್ ಒಬಾಮ ನವೆಂಬರ್ ೭ರಂದು ಘೋಷಣೆ ಮಾಡಿದ ೧೫ ಜನರ “ಪರಿವರ್ತನೆಯ ಕಾರ್ಯಪಡೆ”ಯಲ್ಲಿ (Transition Team) ಪ್ರಸ್ತುತ ಅಮೆರಿಕದ ನಾಗರಿಕಳಾ ಗಿರುವ ಗುಜರಾತ್ ಮೂಲದ ಸೋನಾಲ್ ಶಾ ಹೆಸರೂ ಇತ್ತು! ಅದರ ಬೆನ್ನಲ್ಲೇ ಪ್ರೀತಾ ಬನ್ಸಾಲ್, ನಿಕ್ ರಾಥೋಡ್ ಮತ್ತು ಅಂಜಾನ್ ಮುಖರ್ಜಿ ಎಂಬ ಇನ್ನೂ ಮೂವರು ಭಾರತೀಯ ಮೂಲದವರನ್ನು ಒಬಾಮ ತಮ್ಮ ಟೀಮ್ಗೆ ಸೇರಿಸಿಕೊಂಡಿದ್ದಾರೆ. ಹೀಗೆ ಒಬಾಮ ಅವರ ತಂಡದೊಳಗೇ ಒಂದು ‘ಟೀಮ್ ಇಂಡಿಯಾ’ ಸೃಷ್ಟಿಯಾಗಿದೆ! ಒಬಾಮ ಟೀಮ್ನಲ್ಲಿ ರಹಮ್ ಇಮ್ಯಾನ್ಯುಯೆಲ್, ಜಾನ್ ಪೊಡೆಸ್ಟಾ ಮತ್ತು ವಾರೆನ್ ಕ್ರಿಸ್ಟೋಫರ್ ಎಂಬ ಮೂವರು ಯಹೂದಿಗಳಿದ್ದರೆ ಭಾರತೀಯರು ನಾಲ್ವರಿದ್ದಾರೆ! ಎರಡು ದಶಕಗಳ ಹಿಂದೆ ಅಮೆರಿಕವೆಂದರೆ ನಮ್ಮಲ್ಲಿ ತುಳಿತಕ್ಕೊಳಗಾಗಿ ಭವಿಷ್ಯ ಅರಸಿಕೊಂಡು ಅಮೆರಿಕದ ಪಾಲಾಗಿದ್ದ ವಿeನಿಗಳು, ಡಾಕ್ಟರ್ಗಳು ಮಾತ್ರ ನಮಗೆ ನೆನಪಾಗುತ್ತಿದ್ದರು. ಅತ್ತ ಭಾರತವೆಂದರೆ ಅಮೆರಿಕನ್ನರಿಗೆ ಪಾಕಿಸ್ತಾನದ ಕಟ್ಟಾವೈರಿ, ರಷ್ಯಾದ ಸ್ನೇಹಿತ ಎಂದು ನೆನಪಾಗುತ್ತಿತ್ತು, ಕಾಶ್ಮೀರದ ವಿಷಯವನ್ನೆತ್ತಿಕೊಂಡು ಚುಚ್ಚುತ್ತಿದ್ದರು. ಆದರೆ ೧೯೯೧ರ ಜಾಗತೀಕರಣ, ಆರ್ಥಿಕ ಉದಾರೀಕರಣದ ನಂತರ ನಮ್ಮ ಸಾಫ್ಟ್ವೇರ್ ಎಂಜಿಯರ್ಗಳು ಅದರಲ್ಲೂ ಇನ್ಫೋಸಿಸ್ ಅನ್ನು ‘ನಾಸ್ಡ್ಯಾಕ್’ನಲ್ಲಿ ಷೇರುವ್ಯವಹಾರ ಆರಂಭಿಸಿದ ಹೆಗ್ಗಳಿಕೆ ಪಡೆದ ಮೊದಲ ಭಾರತೀಯ ಕಂಪನಿಯನ್ನಾಗಿ ಮಾಡಿದ ನಾರಾಯಣಮೂರ್ತಿ, ಭಾರತ ಅನ್ನುವ ರಾಷ್ಟ್ರವೊಂದಿದೆ, ಅಲ್ಲೂ ಪ್ರತಿಭಾನ್ವಿತರಿದ್ದಾರೆ, ದೂರದೃಷ್ಟಿ ಹೊಂದಿರುವ ಉದ್ಯಮಿಗಳಿದ್ದಾರೆ ಎಂಬುದನ್ನು ಅಮೆರಿಕಕ್ಕೆ ಅರಿವು ಮಾಡಿಕೊಟ್ಟರು. ಇಂದು ಭಾರತೀಯರು ಅಮೆರಿಕದ ‘ಸಿಲಿಕಾನ್ ವ್ಯಾಲಿ’ಯಾಚೆಗೂ ತಮ್ಮ ಕಬಂಧಬಾಹುಗಳನ್ನು ಚಾಚಿದ್ದಾರೆ. ಬರಾಕ್ ಒಬಾಮ ಹಾಗೂ ಜಾನ್ ಮೆಕೇನ್ ಇಬ್ಬರ ಬಣದಲ್ಲೂ ಚುನಾವಣಾ ಪ್ರಚಾರಾಂದೋಲನದ ಕಾರ್ಯತಂತ್ರ, ರೂಪುರೇಷೆ ನಿರ್ಮಾಣ ಕಾರ್ಯದಲ್ಲಿ ಸಾಕಷ್ಟು ಭಾರತೀಯರು ತಮ್ಮನ್ನು ತೊಡಗಿಸಿಕೊಂಡಿದ್ದರು. ಇಂತಹ ಸಕ್ರಿಯ ಪಾಲ್ಗೊಳ್ಳುವಿಕೆ ಒಬಾಮ ಅವರ ‘ಟ್ರಾನ್ಸಿಶನ್ ಟೀಮ್’ನಲ್ಲೂ ಭಾರತೀಯರಿಗೆ ಸ್ಥಾನ ಗಳಿಸಿಕೊಟ್ಟಿದೆ.
ಇಲ್ಲಿ ಗಮನಿಸಬೇಕಾದ ಒಂದು ಬಹುಮುಖ್ಯ ಅಂಶವೆಂದರೆ ಅಮೆರಿಕದಲ್ಲಿ ಕೇವಲ ೨೭ ಲಕ್ಷದಷ್ಟಿರುವ ಭಾರತೀಯರು ಹಿಸ್ಪ್ಯಾನಿಕ್ಸ್ (ಸ್ಪೇನ್ ಮೂಲದವರು), ಮೆಕ್ಸಿಕನ್ನರು ಹಾಗೂ ಆಫ್ರಿಕದ ಕರಿಯರಂತೆ ಒಂದು Strong Voting Group ಆಗಿ ಹೊರಹೊಮ್ಮಿಲ್ಲದಿದ್ದರೂ ತಮ್ಮ ಅಕಾಡೆಮಿಕ್ ಪರ್ಫಾರ್ಮೆನ್ಸ್, ಮೆರಿಟ್ ಹಾಗೂ ವೃತ್ತಿಪರ ಸಾಧನೆಯಿಂದಾಗಿ ಜಗತ್ತಿನ ಗಮನ ಸೆಳೆಯುತ್ತಿದ್ದಾರೆ. ರಾಜಕೀಯವಾಗಿಯೂ ಮೇಲೆ ಬರುತ್ತಿದ್ದಾರೆ, ಪ್ರಭಾವವನ್ನೂ ಬೆಳೆಸಿಕೊಳ್ಳುತ್ತಿದ್ದಾರೆ. ಒಬಾಮ ಟೀಮ್ನಲ್ಲಿ ಸೋನಾಲ್, ರಾಥೋಡ್, ಮುಖರ್ಜಿ, ಬನ್ಸಾಲ್ ಇವರ್ಯಾರೂ ರಾಜ ಕೀಯವನ್ನು ಆಯ್ಕೆ ಮಾಡಿಕೊಂಡು ಬಂದವರಲ್ಲ. ಆದರೆ ಮೆರಿಟ್ ಮತ್ತು ವೃತ್ತಿಪರ ಸಾಧನೆಯಿಂದ ರಾಜಕೀಯ ಸ್ಥಾನಗಳನ್ನು ಗಳಿಸಿಕೊಂಡಿದ್ದಾರೆ. ಸಾಧನೆಯನ್ನು ಗುರುತಿಸಿ ಕರೆದು ಮಣೆಹಾಕಿದ್ದಾರೆ. ಮುಂದೊಂದು ದಿನ ಯಹೂದಿಗಳಂತೆ ಭಾರತೀಯರೂ ಅಮೆರಿಕದ ಸರಕಾರದಲ್ಲಿ ಮಂತ್ರಿಗಳಾಗಬಹುದು. ಅಂತಹ ಸುದಿನ ಆದಷ್ಟು ಬೇಗ ಬರಲಿ. ಇತ್ತ ಸೋನಾಲ್, ಬನ್ಸಾಲ್, ರಾಥೋಡ್, ಮುಖರ್ಜಿಯವರ ಸಾಧನೆಯ ಬಗ್ಗೆ ನಾವೇಕೆ ಹೆಮ್ಮೆಪಟ್ಟು ಕೊಳ್ಳಬೇಕೆಂದರೆ ಬರಾಕ್ ಒಬಾಮ ಅವರ ಸುತ್ತ ನಾಲ್ವರು ಭಾರತೀಯರಿದ್ದಾರೆ ಎಂಬ ಸುದ್ದಿಯೇ ಪಾಕಿಸ್ತಾನಕ್ಕೆ ನಡುಕ ಹುಟ್ಟಿಸಲು ಸಾಕು! ಅಮೆರಿಕದ ಮಾಧ್ಯಮಗಳೆಲ್ಲ ಯಹೂದಿಗಳ ಹಿಡಿತದಲ್ಲಿರುವುದರಿಂದ ಇಸ್ರೇಲ್ ಬಗ್ಗೆ ಒಂದು ಸಣ್ಣ ನಕಾರಾತ್ಮಕ ಸುದ್ದಿಯೂ ಬಿತ್ತರವಾಗದಂತೆ ನೋಡಿಕೊಳ್ಳುತ್ತಾರೆ, ರಾಜಕೀಯ ಸೇರಿರುವ ಯಹೂದಿಗಳು ಅಮೆರಿಕ ಇಸ್ರೇಲ್ಗೆ ವಿರುದ್ಧವಾಗದಂತೆ ನೋಡಿಕೊಳ್ಳುತ್ತಾರೆ. ನಮ್ಮವರೂ ಆ ಕೆಲಸ ಮಾಡಬೇಕು. ವಿಶ್ವದ ಅತ್ಯಂತ ಬಲಿಷ್ಠ ರಾಷ್ಟ್ರವಾದ ಅಮೆರಿಕದ ‘ಪಾಲಿಸಿ ಮೇಕಿಂಗ್’ನಲ್ಲಿ ನಮ್ಮವರು ಪ್ರಮುಖ ಪಾತ್ರವಹಿಸುವಂತಾಗುವುದೇನು ಸಾಮಾನ್ಯ ಸಾಧನೆಯೇ! ಒಂದೆಡೆ ಒಬಾಮ ಟೀಮಿನಲ್ಲಿ ನಾಲ್ವರು ಭಾರತೀಯರಿದ್ದರೆ, ರಿಪಬ್ಲಿಕನ್ ಪಕ್ಷದಲ್ಲಿ ನಮ್ಮವರೇ ಆದ ಪಿಯುಶ್ ಬಾಬಿ ಜಿಂದಾಲ್ ಇದ್ದಾರೆ. ಬರಾಕ್ ಒಬಾಮಗೆ ರಿಪಬ್ಲಿಕನ್ ಪಕ್ಷದ ಮುಂದಿನ ಉತ್ತರ(ಎದುರಾಳಿ) ಬಾಬಿ ಎಂಬ ಮಾತುಗಳು ಚುನಾವಣೆ ಮುಗಿದ ಮರುಕ್ಷಣದಿಂದಲೇ ಕೇಳಿ ಬರುತ್ತಿವೆ! ಲೂಯೀಸಿಯಾನಾದ ಗವರ್ನರ್(ನಮ್ಮ ರಾಜ್ಯ ಮುಖ್ಯಮಂತ್ರಿ ಸ್ಥಾನಕ್ಕೆ ಸಮ) ಆಗಿರುವ ಬಾಬಿ ಭಾರತೀಯ ರೆಲ್ಲರೂ ಹೆಮ್ಮೆಪಟ್ಟುಕೊಳ್ಳುವ ಸಾಧನೆಯನ್ನು ಈಗಾಗಲೇ ಮಾಡಿದ್ದಾರೆ. ಮುಸ್ಲಿಮರು, ಮೊಘಲರು, ಬ್ರಿಟಿಷರು ಎಲ್ಲ ರಿಂದಲೂ ಆಳಿಸಿಕೊಂಡು ಅಭ್ಯಾಸವಿರುವ ನಮಗೆ ಆಳ್ವಿಕೆ ನಡೆಸುವ ಗುಣವೂ ಮೈಗೂಡಿಕೊಳ್ಳಬೇಕು.
ಈ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ಕಂಡುಬರುತ್ತಿರುವ ಭಾರ ತೀಯರ ಸಾಧನೆ ನಾವೆಲ್ಲ ಹೆಮ್ಮೆಪಟ್ಟುಕೊಳ್ಳುವಂಥದ್ದಾಗಿದೆ.
ಅಲ್ಲದೆ ಅಮೆರಿಕದಲ್ಲಿಯೇ ಅತ್ಯಂತ ಪ್ರತಿಷ್ಠಿತ ಸ್ಪರ್ಧೆಗಳಾ ಗಿರುವ ‘ನ್ಯಾಷನಲ್ ಸ್ಪೆಲ್ಲಿಂಗ್ ಬೀ’ ಮತ್ತು ‘ನ್ಯಾಷನಲ್ ಜಿಯೋಗ್ರಾಫಿಕ್ ಸ್ಪೆಲ್ಲಿಂಗ್’ಗಳಲ್ಲಿ ಕಳೆದ ಏಳೆಂಟು ವರ್ಷ ಗಳಿಂದ ಭಾರತೀಯ ಮೂಲದ ಮಕ್ಕಳದ್ದೇ ದರ್ಬಾರು ನಡೆ ಯುತ್ತಿದೆ. ನುಪುರ್ ಲಾಲಾ, ಅನುರಾಗ್ ಕಶ್ಯಪ್, ಜಾರ್ಜ್ ಅಬ್ರಹಾಂ ಥಂಪಿ, ಸಮೀರ್ ಪಟೇಲ್, ಪ್ರತ್ಯುಷ್ ಬುದ್ಧಿಗಾ, ಸಾಯಿ ಗುಂಟೂರಿ ಮುಂತಾದ ಮಕ್ಕಳು ಅಮೆರಿಕವನ್ನೇ ಅಚ್ಚರಿಗೊಳಿಸುತ್ತಿದ್ದಾರೆ. ಯಹೂದಿಗಳು ಅಮೆರಿಕ ಅತ್ಯಂತ ಶ್ರೀಮಂತ ವಲಸೆ ಸಮುದಾಯ ಎಂಬ ಖ್ಯಾತಿಯನ್ನು ಪಡೆದಿದ್ದರೆ ಭಾರತೀಯರು ಎರಡನೇ ಅತ್ಯಂತ ಶ್ರೀಮಂತ ವಲಸಿಗರು ಎಂದು ಹೆಗ್ಗಳಿಕೆಗೆ ಭಾಜನರಾಗಿದ್ದಾರೆ. ಈ ವರ್ಷ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳಿದ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ೯೪ ಸಾವಿರ ದಾಟಿದೆ! ಅಮೆರಿಕಕ್ಕೆ ಆಗಮಿಸುವ ವಿದೇಶಿ ವಿದ್ಯಾರ್ಥಿಗಳ ಪೈಕಿ ಭಾರತೀಯರೇ ಅತಿ ಹೆಚ್ಚು. ಕಳೆದ ಏಳು ವರ್ಷಗಳಿಂದ ಸತತವಾಗಿ ಮೊದ ಲನೇ ಸ್ಥಾನದಲ್ಲಿದೆ!
ಕೊನೆಗೂ ಅಪ್ಪ ನೆಟ್ಟ ಆಲದ ಮರಕ್ಕೆ ನೇಣುಹಾಕಿಕೊಳ್ಳುವ ಮನಃಸ್ಥಿತಿ ನಮ್ಮಿಂದ ದೂರವಾಗುತ್ತಿದೆ ಎಂದನಿಸುತ್ತಿದೆ ಅಲ್ಲವೆ?
‘A nation which forgets its past, has no future” ಎಂದಿದ್ದರು ವಿನ್ಸ್ಟನ್ ಚರ್ಚಿಲ್. ನಾವೂ ಕೂಡ ಮೂಲವನ್ನು ಮರೆಯಬಾರದು. ಇಂದು ಯಹೂದಿಗಳು ಜಗತ್ತಿನ ಮೂಲೆ ಮೂಲೆಗೂ ಹೋಗಿ ನೆಲೆಯೂರಿದ್ದಾರೆ. ಕೈ ತುಂಬಾ ಹಣ, ಮೈತುಂಬಾ ಖ್ಯಾತಿ ಗಳಿಸಿಕೊಂಡಿದ್ದಾರೆ. ಆದರೆ ತಮ್ಮ ಮೂಲ ಸ್ಥಾನವಾದ ಇಸ್ರೇಲನ್ನು ಮರೆತಿಲ್ಲ. ದುಡಿದ ಸಂಪತ್ತಿನಲ್ಲಿ ಒಂದು ಭಾಗವನ್ನು ತಾಯ್ನಾಡನ್ನು ಉಳಿಸಿಕೊಳ್ಳುವುದಕೋಸ್ಕರ ಧಾರಾಳವಾಗಿ ಕೊಡುತ್ತಿದ್ದಾರೆ. ಹಾಗಾಗಿಯೇ ಇಸ್ಲಾಮಿಕ್ ರಾಷ್ಟ್ರಗಳಿಂದ ಸುತ್ತುವರೆದಿದ್ದರೂ, ಇಸ್ರೇಲನ್ನು ಜಗತ್ತಿನ ಭೂಪಟದಿಂದ ಅಳಿಸಿ ಹಾಕುವುದೇ ತನ್ನ ಏಕಮಾತ್ರ ಗುರಿ ಎಂದು ಬಹಿರಂಗ ಹೇಳಿಕೆ ನೀಡಿರುವ ಇರಾನ್ ಅಧ್ಯಕ್ಷ ಅಹ್ಮದಿನೆಜಾದ್ ಅವರ ಬೆದರಿಕೆಯ ಹೊರತಾಗಿಯೂ ಇಸ್ರೇಲ್ ನಿರುಮ್ಮಳವಾಗಿ ದಿನ ಕಳೆಯುತ್ತಿದೆ.
ನಾವೂ ಕೂಡ ಸಾಗರ ದಾಟಿ ಹೋಗೋಣ, ನೆಲೆ ಕಂಡು ಕೊಳ್ಳೋಣ, ನೆಲೆಯೂರೋಣ. ಆದರೆ ‘ಭಾರತ’ವೆಂಬ ಭಾವನಾತ್ಮಕ ಮೂಲವನ್ನು ಮಾತ್ರ ಮರೆಯುವುದು ಬೇಡ.
November 24th, 2008 at 205830
Hi
Jesus, Karl Marx, Sigmund Freud were also jews.
regards
Girish
November 24th, 2008 at 360830
My article throws light only on Jewish Americans, please understand…
November 24th, 2008 at 231330
Read this article in the newspaper. Liked it. Was reading your Column after a long time. It was a nice experience going back to those old days of reading your columns.
November 24th, 2008 at 043730
ಹಾಯ್ ಪ್ರತಾಪ್, ಸಮಯೋಚಿತವಾದ ಮತ್ತು ‘ನಾವೆಲ್ಲಿದ್ದೇವೆ’ ಎಂದು ತೋರಿಸುವ ಲೇಖನ ಕೊಟ್ಟಿದ್ದೀರ, ಅನಂತ ಧನ್ಯವಾದಗಳು.
ನೀವು ಹೇಳಿದಂತೆ ಯಹೂದಿಗಳು ಅಮೆರಿಕವನ್ನು ನಿಯಂತ್ರಿಸುತ್ತಿದ್ದಾರೆ, ನಿಜ. ಇನ್ನೊಂದು ಮುಖ್ಯ ಅಂಶ, ಈ ಯಹೂದಿಗಳು ಅಮೆರಿಕದ ಅರ್ಥ ವ್ಯವಸ್ಥೆಯ ೩೦ ಭಾಗವನ್ನು ಆವರಿಸಿಕೊಂಡಿದ್ದಾರೆ ಮತ್ತು ಅವರು ಹೇಳಿದ ಹಾಗೇ ನಡೆಯುತ್ತದೆ.
ಅಂತೆಯೇ ಇಸ್ರೆಲಿನವರು ನಮಗೆ ನಿಜಕ್ಕೂ ಮಾದರಿ.
ಅವರಿಗಿರುವ ಧೈರ್ಯ, ಸಾಹಸ ಪ್ರಜ್ನ್ಯೆ ಮತ್ತು ಸ್ವಾಭಿಮಾನ ನಮಗಿದ್ದಿದ್ದರೆ, ಒಂದು’ ಕಾಲದಲ್ಲಿ ಪ್ರಪಂಚದ ಕಾಲುಭಾಗವನ್ನು ಆವರಿಸಿಕೊಂಡಿದ್ದ ನಾವು ಇಂದು ಈ ಸ್ಥಿತಿಯಲ್ಲಿ ಇರಬೇಕಾಗುತ್ತಿರಲಿಲ್ಲ.
ಆದರೆ ಕೆಲವು ಭಾಗಗಳಲ್ಲಿ ನಮ್ಮವರ ಸಾಧನೆ ನಿಜಕ್ಕೂ ಹೆಮ್ಮೆ ಪಡುವಂಥಾದ್ದು. ಅಮೆರಿಕದ ೬೦%ಗಿಂತ ಹೆಚ್ಚಿನ ‘ಬಡ್ಜೆಟ್’ ಹೋಟೆಲ್ ಗಳೆಲ್ಲ ಭಾರತೀಯ ಮೂಲದವರದ್ದೆ. ಇಲ್ಲಿ ಗುಜರಾತಿಗಳ ವ್ಯಾಪಾರ ಕೌಶಲ್ಯ ಎಂಥವರೂ ಮೆಚ್ಚುವಂಥಾದ್ದು. ಅಮೆರಿಕದಾದ್ಯಂತ ಇರುವ ದೇವಸ್ಥಾನ, ಹಿಂದೂ ಮ೦ದಿರಗಳ೦ತೂ ಹಲವರ ಹುಬ್ಬೇರಿಸುವಂತಿದೆ. ಅದರಲ್ಲೂ ಗುಜರಾತಿಗಳು ಕಟ್ಟಿರುವ ಸ್ವಾಮಿನಾರಾಯಣ್ ಮಂದಿರಗಳನ್ನು ನೋಡಲು ಬಹಳ ದೂರದಿಂದ ಬರುತ್ತಾರೆ. ಪ್ರತಿಷ್ಠಿತ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನ್ಯಾಸ’ ದಲ್ಲಿಮೂರನೇ ಒಂದು ವಿಜ್ಞ್ಯಾನಿಗಳು ಭಾರತ ಮೂಲದವರು. ಮೈಕ್ರೋಸಾಫ್ಟ್ ಸಂಸ್ಥೆಯಲ್ಲೂ ಅಷ್ಟೆ ನಲವತ್ತು ಭಾಗ ತಂತ್ರಾಂಶ ಇಂಜಿನೀಯರ್ ಗಳು ಭಾರತ ಮೂಲದವರು. ಮುಕ್ತ ಅವಕಾಶಗಳಿಗೆ ಹೆಸರಾಗಿರುವ ಅಮೆರಿಕದಲ್ಲಿ ಭಾರತದಲ್ಲಿ ‘ತುಳಿತಕ್ಕೊಳಗಾದ’ ಪ್ರತಿಭೆಗಳು ನೆಲೆ ಕಂಡುಕೊಳ್ಳುತ್ತಿರುವುದು ಸತ್ಯವಾದ ಮಾತು. ಇತ್ತೀಚಿನ ವರ್ಷಗಳಲ್ಲಿ ಭಾರತಿಯ-ಅಮೆರಿಕನ್ನರ ಸಂಖ್ಯೆ ಗಣನೀಯವಾಗಿ ಏರುತ್ತಿದೆ.
ಇಲ್ಲಿಯ ವಲಸಿಗರಲ್ಲಿ ಭಾರತೀಯರೇ ಅತ್ಯಂತ ಶ್ರೀಮಂತರು ಎಂದರೆ ತಪ್ಪಾಗಲಾರದು. ಇತ್ತೀಚಿಗೆ ಪ್ರಕಟಣೆಗೊಂಡ ವರದಿಯೊಂದರಲ್ಲಿ ‘ಭಾರತೀಯ ಮೂಲದವರು ‘ಹಣ ಉಳಿಸಿಲ್ಲದಿದ್ದರೆ’ ಅಮೆರಿಕದ ಆರ್ಥಿಕ ಸ್ಥಿತಿ ಇನ್ನೂ ಹದಗೆಡುತ್ತಿತ್ತು’ ಎಂದಿದೆ. ಕಾರಣ ಭಾರತೀಯರು ಎಷ್ಟೇ ಕಡಿಮೆ/ಹೆಚ್ಚು ಗಳಿಸಲಿ ನಾಳೆಗಾಗಿ ಕೂಡಿ ಹಾಕಿಡುವುದು ಅವರ ಹುಟ್ಟುಗುಣ!
ಹಾಗೆಯೇ ಇಲ್ಲಿ ಭಾರತೀಯರು ತಮ್ಮ ‘ನಯ-ವಿನಯ-ಕೌಶಲ್ಯ’ ದಿಂದಾಗಿ ಒಳ್ಳೆಯ ಹೆಸರು ಹೊಂದಿದ್ದಾರೆ.
ಅಂತೆಯೇ ವಿಕ್ರಮ್ ಪಂಡಿತ್, ಅಮರ್ ಬೋಸ್, ಇಂದ್ರಾ ನೂಯಿ, ಮನೋಜ್ ಶ್ಯಾಮಲನ್, ವಿನೋದ್ ಖೊಸ್ಲಾ, ಮುಂತಾದ ನೂರಾರು ‘ಭರತ ಬೇರುಗಳ’ ಸಾಧನೆ ಯಾರಿಗೂ ಕಡಿಮೆಯೇನಿಲ್ಲ. ಅಮೆರಿಕಾದಂತೆ ಪ್ರಪಂಚದ ಇತರ ದೇಶಗಳಲ್ಲೂ ನಮ್ಮವರು ಮೇಲೆ ಬರುತ್ತಿದ್ದಾರೆ ಎನ್ನುವುದು ಸಂತಸದ ವಿಚಾರ.
ಇವರೆಲ್ಲ ಭಾರತದಲ್ಲಿದ್ದರೆ ಬಹುಶ ನಾವಿವತ್ತು ಜಗತ್ತಿನ ಮಟ್ಟದಲ್ಲಿ ಗುರುತಿಸಲಿಕ್ಕೆ ಆಗುತ್ತಿರಲಿಲ್ಲ.
ಭಾರತದಲ್ಲಿ ‘ರಿಸರ್ವೇಶನ್’ ಗಳಿಗಾಗಿ ಹೊಡೆದಾಡಿಕೊಂಡು, ಇರುವ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿಕೊಳ್ಳದೆ ಹೊರದೇಶಗಳಿಗೆ ಹೋಗಿ ಪ್ರತಿಭೆಗೆ ನೆಲೆ ಕಂಡುಕೊಳ್ಳುವುದು ಅತ್ಯುತ್ತಮದಾರಿ. ಅದರಿಂದ ಭಾರತಕ್ಕೂ ಒಳ್ಳೆಯದು ಮತ್ತು ಎಲ್ಲಾ ನಿಜವಾದ ಪ್ರತಿಭೆ ಗಳಿಗೂ ಒಳ್ಳೆಯದು.
ಭಾವನೆಗಳಿಗೆ ಹೆಚ್ಚು ಬೆಳೆ ಕೊಡುವ ಭಾರತೀಯರು ತಮ್ಮ ಮೂಲ ನೆಲೆಯನ್ನ ಮರೆಯಲಾರರು ಎಂಬುದು ನನ್ನ ಆಶಾ ಭಾವನೆ.
-ವೆಂಕಟೇಶ್, ಟೆಕ್ಸಾಸ್, ಅಮೇರಿಕಾ.
(ಪ್ರತಾಪ್ ಜಿ, ನಿಮ್ಮ ಕನ್ನಡ ತ೦ತ್ರಾ೦ಶದಲ್ಲಿ ಕೆಲವು ಅಕ್ಷರಗಳು ಸರಿಯಾಗಿ ಅಚ್ಚಾಗುವುದಿಲ್ಲ. ಉದಾಹರಣೆಗೆ: ‘ವಿಜ್ಞ್ಯಾನಿ’ ಎಂದು ಬರೆಯುವಲ್ಲಿ ‘ವಿeನಿ’ ಎಂದಿದೆ, ದಯಮಾಡಿ ಗಮನಿಸಿ.)
November 24th, 2008 at 160830
Thanks for the ‘call’ for Indians living outside.
November 25th, 2008 at 334330
ಮುಸ್ಲಿಮರು, ಮೊಘಲರು, ಬ್ರಿಟಿಷರು ಎಲ್ಲ ರಿಂದಲೂ ಆಳಿಸಿಕೊಂಡು ಅಭ್ಯಾಸವಿರುವ ನಮಗೆ ಆಳ್ವಿಕೆ ನಡೆಸುವ ಗುಣವೂ ಮೈಗೂಡಿಕೊಳ್ಳಬೇಕು. This line conveys the gist.
Pratap, I seriously await your article on Prajna singh thakoor. Hindu Terrorists found? That’s fine. Why can’t you hang Afzal?
November 25th, 2008 at 165830
ಸೋನಾಲ್ ಶಾ ಳ ವಿ ಎಚ್. ಪಿ ಮೂಲದ ಬಗ್ಗೆ ಎಲ್ಲಿಯೂ ಬರೆಯಲಿಲ್ಲ ಜಾಣ ಕುರುಡ!!! ಹೇಗೆ ಇಸ್ರಲಿರಿಂದ ಜಿಯೊನಿಸ್ಟರಿಗೆ ಉಪಯೋಗವಾಗುತ್ತದೋ ಹಾಗೆ ಇವಳಿಂದ ಫ್ಯಾಸಿಸ್ಟರಿಗೆ ಉಪಾಕಾರವಾಗಬಹುದೇ ಹೊರತು ಭಾರತಕಲ್ಲ
November 25th, 2008 at 361830
@ #7 Suma.
ನೀನು ಹೇಳುವ ಭಾರತವೆಂದರೆ ಯಾವುದು?
ನಾನ೦ದು ಕೊಂಡಿದ್ದೇನೆ, ‘ಭಾರತೀಯ’ ಭಾವನೆ ಇರುವ ಜನರಿಂದ ಕೂಡಿದ ಭಾರತ ವೆಂಬ ಭೂಪ್ರದೇಶ.
ಅಂದರೆ ಇಲ್ಲಿ ಭಾರತವನ್ನು ಬಿಟ್ಟು ವ್ಯಾಟಿಕನ್, ಮೆಕ್ಕಾ ಮದೀನ, ಪಾಕಿಸ್ತಾನ, ಇಟಲಿ ಪ್ರೀತಿಸುವರೆಲ್ಲ ಭಾರತೀಯರಾಗುವುದಿಲ್ಲ.
ಭಾರತ ಮೂಲವಾಗಿ ಹಿಂದೂ ದೇಶ, ಆದರೂ ಇಲ್ಲಿ ಹಿಂದೂಗಳನ್ನು ಮತ್ತು ಬೇರೆ ಧರ್ಮದವರನ್ನು ಸಮಾನವಾಗಿ ನೋಡುತ್ತೇವೆ, ಅದು ಹಿಂದೂಗಳ ಉತ್ತಮ ಗುಣ. ಎಷ್ಟೋ ಬಾರಿ ಹಿಂದೂಗಳಿಗಿಂತ ಹೆಚ್ಚಾಗೇ (ಅತಿಥಿ ಗಳಂತೆ) ಪರಕೀಯರನ್ನು ಗೌರವಿಸಿದ್ದೇವೆ.
ಎಲ್ಲಾ (ಹಿಂದೂ ಭಾವನೆಯಿರುವ) ಹಿಂದೂ ಗಳೂ ಭಾರತೀಯರೇ, ಭಾರತ ದೇಶ ಭಕ್ತರೇ.
ಸೋನಾಲ್ ಶಾ, ಅಕಸ್ಮಾತ್ ವಿ.ಹೆಚ್.ಪಿ ಯ ಕಾರ್ಯಕರ್ತೆ ಆಗಿದ್ದರೆ, ಅದರಲ್ಲಿ ತಪ್ಪೇನು? ಅವರಬಗ್ಗೆ ನಾವು ಹೆಮ್ಮೆಪಡ ಬೇಕು. ಅವರ ‘ತವರಿನ-ಹಿಂದೂ’ ಭಾವನೆಯಿಂದಾಗಿ ಅವರಿಗೆ ಭಾರತದ ಬಗ್ಗೆ ಒಲವು ಇದ್ದೇ ಇರುತ್ತದೆ. ಅವರಿಂದ ನಮ್ಮದೇಶಕ್ಕೆ ಉಪಯೋಗವೇ ಹೊರತು ಯಾವುದೇ ಹಾನಿಯಿಲ್ಲ.
ಅಷ್ಟಕ್ಕೂ ಪ್ರತಾಪರ ಪ್ರತಿಯೊಂದು ಲೇಖನಕ್ಕೂ ಕೊಕ್ಕೆ ಹಾಕುವ ಅಗತ್ಯ ಏನಿದೆ?
ಇರಲಿ, ಹ೦ದಿಗಳಿಲ್ಲದಿದ್ದರೆ ಕೇರಿ ಶುದ್ದವಾಗುವುದಿಲ್ಲವಂತೆ.
Suma, ನಿನ್ನ ಸರಿಯಾದ ಜಾಗ ‘ಅರುಂಧತಿ ರಾಯ್, ಮೇಧಾ ಪಾಟ್ಕರ್, ಕಾರಟ್, ಪ್ರಣವ್ ರಾಯ್, ಅಂಬಿಕ ಸೋನಿ’ ಇವರ ಗ್ಯಾಂಗ್. ಹೇಗೂ ಅವರು ಕನ್ನಡದ ‘representation’ ಹುಡುಕುತ್ತಿದ್ದಾರೆ, ನೀನು ಒಳ್ಳೆಯ ಅಭ್ಯರ್ಥಿ, ದೇಶ ದ್ರೋಹದ ಕೆಲಸ ಮಾಡಲಿಕ್ಕೆ ಅದು ಒಳ್ಳೆಯ ಜಾಗ.
ಹಾಂ, ಒಂದಂತೂ ನಿಜ, ಒಬಾಮ ಆಡಳಿತ ಶುರುವಾದ ಮೇಲೆ, ಕ್ರಿಶ್ಚಿಯನ್ ಮತಾಂತರಕ್ಕೆ ಕಡಿವಾಣವಂತೂ ಬಿದ್ದೇ ಬೀಳುತ್ತದೆ, ನೆನಪಿರಲಿ.
-ರಾಮ್ ಶರ್ಮ
November 25th, 2008 at 525630
I agree with comments, but fail to understand the intention of bringing Ms. Shah’s VHP connection. I don’t think it’s wrong to be associated with that organization, except for the congress (only for political gains).
It’s unfortunate that even yougesters are also falling pray to these goondas.
November 26th, 2008 at 543630
Hi Pratap,
ಮುಸ್ಲಿಮರು, ಮೊಘಲರು, ಬ್ರಿಟಿಷರು ಎಲ್ಲ ರಿಂದಲೂ ಆಳಿಸಿಕೊಂಡು ಅಭ್ಯಾಸವಿರುವ ನಮಗೆ ಆಳ್ವಿಕೆ ನಡೆಸುವ ಗುಣವೂ ಮೈಗೂಡಿಕೊಳ್ಳಬೇಕು
Nice Article. Keep it Up…………………….
Suma, ನಿನ್ನ ಸರಿಯಾದ ಜಾಗ ‘ಅರುಂಧತಿ ರಾಯ್, ಮೇಧಾ ಪಾಟ್ಕರ್, ಕಾರಟ್, ಪ್ರಣವ್ ರಾಯ್, ಅಂಬಿಕ ಸೋನಿ’ ಇವರ ಗ್ಯಾಂಗ್. ಹೇಗೂ ಅವರು ಕನ್ನಡದ ‘representation’ ಹುಡುಕುತ್ತಿದ್ದಾರೆ, ನೀನು ಒಳ್ಳೆಯ ಅಭ್ಯರ್ಥಿ, ದೇಶ ದ್ರೋಹದ ಕೆಲಸ ಮಾಡಲಿಕ್ಕೆ ಅದು ಒಳ್ಳೆಯ ಜಾಗ.
Keshav
November 26th, 2008 at 413730
ಪ್ರತಾಪ್ ಸಿಂಹ ಅವರಿಗೆ ನಮಸ್ಕಾರಗಳು.
ನಿಮ್ಮ ಅಂಕಣಗಳನ್ನು ಪ್ರತಿ ವಾರ ತಪ್ಪದೆ ಓದುತ್ತಾ ಬಂದಿದ್ದೇನೆ. ಎಲ್ಲ ಅಂಕಣಗಳು ಚನ್ನಾಗಿ ಮೂಡಿ ಬರುತ್ತಿವೆ.
ನಿಮ್ಮ ಈ ಅಂಕಣದಲ್ಲಿ ಈ ಕೆಳಕಂಡಂತೆ ಬರೆದಿದ್ದೀರಿ:
ಜೋ ಲಿಬರ್ಮನ್ ಎಂಬಾತ ೧೯೯೮ರಲ್ಲಿ ಅಮೆರಿಕದ ಅಧ್ಯಕ್ಷಗಾದಿಗೆ ಡೆಮೊಕ್ರಾಟಿಕ್ ಪಕ್ಷದ ಅಭ್ಯರ್ಥಿಯಾಗಿದ್ದ ಅಲ್ ಗೋರ್ ಅವರ ಉಪಾಧ್ಯಕ್ಷ ಅಭ್ಯರ್ಥಿಯಾಗಿದ್ದರು.
ಆದರೆ ೧೯೯೮ ರಲ್ಲಿ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದೇ ಇಲ್ಲ. ಅದು ೨೦೦೦ ದಲ್ಲಿ ನೆಡೆದ ಚುನಾವಣೆ ವಿಷಯ ಹಾಗು ಜೋ ಲಿಬರ್ಮನ್ ಉಪಾಧ್ಯಕ್ಷ ಅಭ್ಯರ್ಥಿಯಾಗಿದ್ದರು ನೀವು ಬರೆದ ಹಾಗೆ ಅಧ್ಯಕ್ಷ ಅಭ್ಯರ್ಥಿಯಾಗಿರಲಿಲ್ಲ. ಅಲ್ ಗೋರ್ ಅಧ್ಯಕ್ಷ ಅಭ್ಯರ್ಥಿಯಾಗಿದ್ದರು.
ಬರೆಯುವ ವಿಚಾರವನ್ನು ಇನ್ನೊಮೆ ಕಚಿತ ಮಾಡಿಕೊಳ್ಳುವುದು ಒಳ್ಳೆಯದು. ನಿಮ್ಮಂಥ ಯುವ ಜನರ ಸೇವೆ ನಮ್ಮ ನಾಡಿಗೆ ಹಿಂದೆಂದು ಇಲ್ಲದಷ್ಟು ಈಗ ಬೇಕು. ಹೀಗೆ ನಿಮ್ಮ ಅಂಕಣವನ್ನು ಮುಂದುವರೆಸಿ.
Siddu.
NY,USA.
November 26th, 2008 at 570030
ಪ್ರತಾಪ್ ಸಿಂಹ ಅವರಿಗೆ ನಮಸ್ಕಾರಗಳು,
ಜೋ ಲಿಬರ್ಮನ್ ಎಂಬಾತ ೧೯೯೮ರಲ್ಲಿ ಅಮೆರಿಕದ ಅಧ್ಯಕ್ಷಗಾದಿಗೆ ಡೆಮೊಕ್ರಾಟಿಕ್ ಪಕ್ಷದ ಅಭ್ಯರ್ಥಿಯಾಗಿದ್ದ ಅಲ್ ಗೋರ್ ಅವರ ಉಪಾಧ್ಯಕ್ಷ ಅಭ್ಯರ್ಥಿಯಾಗಿದ್ದರು.
ಇದು ಸರಿ. ನೀವು ಹೇಗೆ ಓದುತ್ತಿರಿ ಅನ್ನುವುದರ ಮೇಲೆ ಜೋ ಲಿಬೇರ್ಮನ್ ಅಧ್ಯಕ್ಷ ಸ್ಥಾನ ಅಭ್ಯರ್ಥಿ ಎಂದೋ ಅರ್ಥೈಸಿಕೊಳ್ಳಬಹುದು.
ಆದರೆ ೧೯೯೮ ರಲ್ಲಿ ಚುನಾವಣೆ ನಡೆದಿಲ್ಲ.
Siddu
NY,USA
November 27th, 2008 at 470330
@suma #7
Can you please tell us more about yourself? Please explain the meaning of terms like secular, fascist, racist, communist etc. Our knowledge is very poor on these.
November 27th, 2008 at 132530
Dear Siddu,
Please read it again-”ಹೆನ್ರಿ ಕಿಸಿಂಜರ್, ಮೆಡಲಿನ್ ಆಲ್ಬ್ರೈಟ್ಗಳಂತಹ ಯಹೂದಿಗಳು ಅಮೆರಿಕದ ವಿದೇಶಾಂಗ ಸಚಿವರಾಗುವ ಮಟ್ಟಿಗೆ ಬೆಳೆದರು. ಜೋ ಲಿಬರ್ಮನ್ ಎಂಬಾತ ೧೯೯೮ರಲ್ಲಿ ಅಮೆರಿಕದ ಅಧ್ಯಕ್ಷಗಾದಿಗೆ ಡೆಮೊಕ್ರಾಟಿಕ್ ಪಕ್ಷದ ಅಭ್ಯರ್ಥಿಯಾಗಿದ್ದ ಅಲ್ ಗೋರ್ ಅವರ ಉಪಾಧ್ಯಕ್ಷ ಅಭ್ಯರ್ಥಿಯಾಗಿದ್ದರು.”, Ofcourse, i got the year wrong. But the running mate is selected by the presidential candidate n he automatically gets into the office if his presidential nominee is voted to power. My readers are good enough to understand whatever I write, u better don’t get confused.
More over, have some courtesy to appreciate the good things n the spirit of my article. After all, erring is quite human….
November 27th, 2008 at 515430
@pratap sir…………Many indians have achieved great things in U S A………….My question is what tey have contributed to INDIA back…………….They r rich and tey r not at all following INDIAN culture anymore……………..People like Indira NOOYI n other people r making money only………Zero percent contribution to development of India………………they will get education from IITS n IIMS and go to u s………………..they r not real indians./
November 27th, 2008 at 115730
Hello Pratap,
True I got confused and mixed-up with Joe Liberman being VP candidate of Al Gore in 2000. It was too late before I realized.
My apologies if my comments sounded a bit non-courteous. I have all my appreciation for your good work and the article that was well written.
Keep up the good work.
Siddu
NY,USA.
November 27th, 2008 at 150330
Nice article. This gives a holistic idea of where do we stand in global stage.
December 5th, 2008 at 172731
“ನಾವೂ ಕೂಡ ಸಾಗರ ದಾಟಿ ಹೋಗೋಣ, ನೆಲೆ ಕಂಡು ಕೊಳ್ಳೋಣ, ನೆಲೆಯೂರೋಣ”
As usual Very good article by you. But I didn’t liked Last One line since… if every body thinks same way means who will be the next generation great persons like Naraya Murthy , Dhiru bai ambani and JRD TATA and also scientist like Sathish Dhavan Abdul Kalaam Who are all gave so many Good Job opportunity to so many people and made the overcome unemployment . Indina namma shikshan paddathi kudaa sudarside namma makkalu bere deshdavara tharah ella vishayadalli munde bandiddare , illi kalithu alli hogi nele uridere hege?
I resepect Sonal sha and others and also Kalapana Chawala , But people follw the famous persons Sayings na… means samannya janaru shrestranna follow madthara alwa sir …